Thursday, August 15, 2013

ಪ್ರಶ್ನೆಗಳ ಸುಳಿಯಲಿ್ಲ…

ನಾನು ಹುಟ್ಟಿದ ಮೇಲೆ ಮೂವತ್ತು ಸ್ವಾತಂತ್ರ್ಯ ದಿನಾಚರಣೆಗಳು ಕಳೆದವು. ಹಿಂದೆ ಶಾಲೆಯಲ್ಲಿ ತುಂತುರು ಮಳೆಗೆ ಧ್ವಜದ ಎದುರು ನಿಂತು ಸೆಲ್ಯೂಟ್ ಹೊಡೆದುದು, ಐವತ್ತು ಪೈಸೆ ಚಾಕಲೇಟು ಪಡೆದು, ಮುಖೋ್ಯಪಾಧ್ಯಾಯರ ಭಾಷಣ ಕೇಳಿ ಮರಳುತ್ತಿದ್ದುದು ಈಗ ಮಾಸಿ ಹೋದ ನೆನಪು. ಅದರ ನಂತರ ಅನೇಕ ಸ್ವಾತಂತ್ರ್ಯ ಸಂಗ್ರಾಮ ಸಂಬಂಧಿ ಪುಸ್ತಕಗಳನ್ನು ಓದಿ, ದೇಶಕ್ಕಾಗಿ ಹೋರಾಡಿ ಮಡಿದವರ ಕಥೆಗಳನ್ನು, ಘಟನೆಗಳನ್ನು ಕಲ್ಪಿಸುತ್ತಾ ಬೆಳೆದು ದೊಡ್ಡವರಾದೆವು. ಮುಂದೆ ಬದುಕು ಕಟ್ಟಿಕೊಳ್ಳಬೇಕಾದ ಓಟ(?)ದಲ್ಲಿ ಸ್ವಾತಂತ್ರ್ಯದ ಬಗೆಗಿನ ಪುಸ್ತಕಗಳು ಎಲೋ್ಲ ಹಿಂದೆ ಬಿದ್ದವು. ಈಗ ನಾನು ಒಂದು ವರುಷದ ಮಗುವಿನ ಅಮ್ಮ. ಕೆಲ ವರ್ಷಗಳಲ್ಲಿ ನನ್ನ ಮಗು ನನ್ನಂತೆಯೇ ಧ್ವಜಾರೋಹಣದಲ್ಲಿ ಪಾಲ್ಗೊಳ್ಳಲು ಹೋಗುವಳೆಂಬ ಕಲ್ಪನೆಯೇ ನನ್ನನ್ನು ಒಂದು ಗೊಂದಲದಲ್ಲಿ ಬೀಳಿಸಿದೆ.

"ಅಮ್ಮ ಸ್ವಾತಂತ್ರ್ಯ ಅಂದರೆ ಏನು?" ಎನ್ನುವ ಪ್ರಶ್ನೆಗೆ ನಾನು ಈ ಸಂದರ್ಭದಲ್ಲಿ ಹೇಗೆ ಉತ್ತರಿಸಬಲ್ಲೆ? ನನಗೆ ಸ್ವಾತಂತ್ರ್ಯ ಎಂದರೆ ಏನೆಂದು ತಿಳಿದಿದೆಯೇ? ನಾನು ಸ್ವಾತಂತೋ್ರ್ಯತ್ತರ ಭಾರತದಲ್ಲಿ ಹುಟ್ಟಿದವಳು. ದಾಸ್ಯದಲ್ಲಿ ಬದುಕು ಹೇಗಿರುತ್ತದೆ ಎಂಬುದು ಕಲ್ಪನೆಗೆ ನಿಲುಕದ್ದು. ಸ್ವತಂತ್ರ ಬದುಕನ್ನು ಹಂಬಲಿಸುವ ಮನಸ್ಥಿತಿ ಹೇಗಿರುವುದೆಂದು ಊಹಿಸುವುದೂ ನನ್ನಿಂದ ಆಗಲಾರದು. ಇದು ನನ್ನ ತಪೇ್ಪ? ನಾನು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಿತೇ್ತ? ಅಥವಾ ನನ್ನ ಹೆತ್ತವರು ಹೇಳಬೇಕಿತೇ್ತ? ನನ್ನ ಹೆತ್ತವರು ಸ್ವಾತಂತೋ್ರ್ಯತ್ತರ ಭಾರತದಲ್ಲಿ ಹುಟ್ಟಿರುವಾಗ ಅವರಿಂದಲೂ ಇದನ್ನು ಪ್ರಭಾವಶಾಲಿಯಾಗಿ ಹೇಳಲು ಸಾಧ್ಯವೇ? ಹೇಗೆ ಕಲ್ಪಿಸಲಿ? ಅಂಡಮಾನಿನ ಹವಳದ ದಂಡೆಗಳನೋ್ನ, ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ ಖಲೀಫಾವನೋ್ನ ನನ್ನೆದುರು ವರ್ಣಿಸಿದರೆ  ನನಗೆ ಎಷ್ಟು ಅರ್ಥವಾದೀತೋ, ಸ್ವಾತಂತ್ರ್ಯ ಸಂಗ್ರಾಮವೂ ಅಷೇ್ಡ ಎಂದು ಹೇಳಲು ನನಗೆ ದುಃಖವೂ ನಾಚಿಕೆಯೂ ಆಗುತ್ತದೆ. ಚಿತ್ರ ನೋಡಿದರೆ ನನಗೆ ಬುರ್ಜ ಖಲೀಫಾದ ಎತ್ತರ, ಅದರ ತುದಿಯಿಂದ ಕಾಣುವ ಜಗತ್ತಿನ ರೂಪ ಹೇಗೆ ಊಹೆಗೆ ನಿಲುಕಲಾರದೋ, ಸಾಗರದ ದಂಡೆಯಲ್ಲಿ ನಿಂತು ದಿಟ್ಟಿಸಿದರೆ ಅದರ ನಿಜ ವೈಶಾಲ್ಯ, ಅಗಾಧತೆ ಹೇಗೆ ಕಲ್ಪನೆಗೆ ನಿಲುಕದಾಗುತ್ತದೋ,  ಸ್ವಾತಂತ್ರ್ಯ ಸಂಗ್ರಾಮದ, ಸಹಸ್ರಾರು ದೇಶಭಕ್ತರ ಬಲಿದಾನದ ಕತೆಗಳು ಅವುಗಳ ನಿಜ ಸ್ವರೂಪವನ್ನು ನನಗೆ ಬಿತ್ತರಿಸಲಾರವು. ಇನ್ನು ನಾನು ಇದನ್ನು ನನ್ನ ಮುಂದಿನ ಪೀಳಿಗೆಗೆ ಹೇಗೆ ತಲುಪಿಸಿಯೇನು?

ಸ್ವಾತಂತ್ರ್ಯವೆಂದರೆ "ಬೇಕಾದ್ದು ಮಾಡುವುದು" ಎಂದು ಯೋಚಿಸುವವರು ಬಹಳ ಮಂದಿ. ಅನೇಕರ ಮನದಲ್ಲಿ ಸ್ವಾತಂತ್ರ್ಯಕ್ಕೂ ಸೇ್ವಚಾ್ಛಚಾರಕ್ಕೂ ವ್ಯತ್ಯಾಸವೇ ಇಲ್ಲದಾಗಿದೆ. "ಬೇಕಾದ್ದು ಮಾಡುವುದು" ಎಂದರೆ ಸೇ್ವಚೆ್ಛ. ಸ್ವಾತಂತ್ರ್ಯ ಎಂದರೆ ಅದರ ಜೊತೆ ಜವಾಬ್ದಾರಿಯೂ ಇರುತ್ತದೆ. ಅದನ್ನು ಅನುಭವಿಸಲು ಕೆಲವು ಕರ್ತವ್ಯಗಳೂ ಇರುತ್ತವೆ. ರಸ್ತೆಯಲ್ಲಿ ಬೇಕೆಂದಾಗ ಓಡಾಡುವ ಸ್ವಾತಂತ್ರ್ಯ ನಮಗಿದೆ. ಆದರೆ ಖುಷಿ ಬಂದಂತೆ ಕಸ ಎಸೆಯುವ ಅಧಿಕಾರ ಇಲ್ಲ. ಅದು ಸೇ್ವಚೆ್ಛ. ಸಂಪನ್ಮೂಲಗಳನ್ನು ಉಪಯೋಗಿಸುವ ಸ್ವಾತಂತ್ರ್ಯದೊಂದಿಗೆ ಅದನ್ನು ಕಾಪಾಡುವ ಜವಾಬ್ದಾರಿ ಹಾಗೂ ಕರ್ತವ್ಯ ನಮಗಿದೆ. ಇದನ್ನು ನಾನು ನನ್ನ ಮಗಳಿಗೆ ತಿಳಿಸಿ ಹೇಳಲು ಶಕ್ತನಾದೇನೇ? ಅಥವಾ ಇದನ್ನು ನಮಗೆ ಕಲಿಸಿದ ಮೇಷ್ಡರಂತಹಾ ಗುರುಗಳು ನನ್ನ ಮಗಳಿಗೆ ಸಿಗುವರೆಂದು ಭಾವಿಸಲೇ?

ಸಿನೆಮಾದಂತಹ ದೃಶ್ಯ ಮಾಧ್ಯಮ ಸ್ವಲ್ಲ ಮಟ್ಟಿಗೆ ನಮಗೆ ಸ್ವಾತಂತ್ರ್ಯದ ಅರಿವು, ಕಲ್ಪನೆ ಮೂಡಿಸೀತೇನೋ. ಆದರೆ ಅವು ಸಾಕಷ್ಟು ಪ್ರಮಾಣದಲ್ಲಿ ಲಭ್ಯವೇ? ಲಭ್ಯವಿದ್ದರೂ ಪ್ರಭಾವ ಬೀರುವ ಮಟ್ಟಿಗೆ ಅವುಗಳ ಗುಣಮಟ್ಟವಿದೆಯೇ? ನಾನು ಸಂಪೂರ್ಣ ಗೊಂದಲದಲ್ಲಿದೇ್ದನೆ. ನಾನು ಇದನ್ನು ಅರಿಯಲು ಹೆಚ್ಚಿನ ಪ್ರಯತ್ನ ಮಾಡಬೇಕಿತೇ್ತ? ಅಥವಾ ಇದರಲ್ಲಿ ನನ್ನ ತಪ್ಪು ಇಲ್ಲವೇ? ಉದ್ದದ ವಾಕ್ಯವನ್ನು ಅನೇಕರು ಒಬ್ಬರಿಂದ ಒಬ್ಬರಿಗೆ ಪಿಸುಗುಟ್ಟುತ್ತಾ ಹೋಗುವ ಆಟವೊಂದಿದೆ. ಕೊನೆಯವನು ತಾನು ಕೇಳಿದ್ದನ್ನು ಜೋರಾಗಿ ಹೇಳುವಾಗ ವಾಕ್ಯ ಅರ್ಧರ್ಧವಾಗಿ, ಅರ್ಥ ಅನರ್ಥವಾಗಿ ನಗು ತರಿಸುತ್ತದೆ. ಹಾಗೆಯೇ ನಮ್ಮ ದೇಶದ ನೆತ್ತರ ಕಥೆಗಳು ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಾ ತೂಕ ಕಳೆದುಕೊಂಡು, ಕೊನೆಗೆ ಹಲವರು ಹಲವು ರೀತಿ ಅರ್ಥ ಮಾಡಿಕೊಂಡು tea time ನ argument ಗಳಿಗೆ ಸೀಮಿತವಾಗುತ್ತಿರುವುದು ವಿಪರ್ಯಾಸ. ಇದಕ್ಕೆ ಹಳಿಯಬೇಕಾದ್ದು ಯಾರನ್ನು?

ಗೊಂದಲ ಸಿಕ್ಕಾಪಟ್ಟೆ ಆಗಿ, ತಲೆ ಕೆಟ್ಟು, ನೋಯತೊಡಗಿ ನಿದ್ರೆ ಹೋಗುತೇ್ತನೆ.

Thursday, July 11, 2013

ಕನ್ನಡ - ಅಳಿವು, ಉಳಿವು

ನಮ್ಮ ಜೀವನದಲ್ಲಿ ಲಹರಿ(ಮಗಳು)ಯ ಆಗಮನವಾಗಿ ಒಂದು ವರ್ಷವಾಗುತ್ತಾ ಬಂತು. ಬರೆಯಬೇಕೆಂದು ಹೊರಟ ಅನೇಕ ವಿಷಯಗಳು ಮನದ ಮೂಲೆಯಿಂದ ಆಗೊಮ್ಮೆ ಈಗೊಮ್ಮೆ ಎದು್ದ "ನೀನು ಇದನ್ನು ಯೋಚಿಸಿ ಒಂದೂವರೆ ವರ್ಷವಾಯಿತು" ಎಂದು ಅಣಕಿಸಿ, "ನಾಳೆ ಬರೆದೇ ತೀರುತೇ್ತನೆ" ಎಂದು ಘೋಷಿಸಿ ಹೊದ್ದು ಮಲಗುವಂತೆ ಮಾಡುತ್ತಿವೆ ಅಷ್ಟೆ.
ಈಗ ಹೇಳುತ್ತಿರುವುದು ಹಳೆಯ ವಿಚಾರ. ನಾನು ಉದೋ್ಯಗಸ್ಥಳಾಗಿದ್ದಾಗಿನದ್ದು. (ಉದೋ್ಯಗ ಬಿಟ್ಟು ಒಂದು ವರ್ಷ ಮೇಲಾಯಿತು).
ಆಫೀಸಿನಲ್ಲೊಮ್ಮೆ ಭಾಷೆಗಳ ವಿಚಾರವೇನೋ ಮಾತಾಡುತ್ತಿದ್ದಾಗ ಮಲಯಾಳದಲ್ಲಿ ವಿವಿಧ ರೀತಿಯ "ಲ" ಉಚ್ಛಾರಗಳಿವೆ ಎಂದರು. ತಮಿಳಿನಲ್ಲೂ ಇದೆ ಎಂದು ತಿಳಿಯಿತು. (ಇಂಗೀ್ಲಷ್ ನಲ್ಲಿ ಬರೆಯುವಾಗ ತಮಿಳಿನ ಒಂದು "ಲ" ಮಾದರಿಯ ಪದವನ್ನು "zh" ಎಂದು ಬರೆಯುತ್ತಾರೆ.) ನಾನು ನನ್ನ ತಮಿಳ ಸಹೋದೋ್ಯಗಿಯ ಬಳಿ ಕೇಳಿದೆ. "ಹಾಗಾದರೆ ತಮಿಳು ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?". ಆತ ಕಕ್ಕಾಬಿಕ್ಕಿಯಾಗಿ "ಹ್ಹಿ ಹ್ಹಿ ಹ್ಹಿ" ಎಂದ!
"ಅರೆ! ಗೊತ್ತಿಲ್ಲವೇನು?" ಎಂದೆ. (ತಮಿಳರು ಅತಿ ದೊಡ್ಡ ಭಾಷಾಭಿಮಾನಿಗಳೆಂದು ಕೇಳಿದೇ್ದನೆ.)
ಆತ ಕೆಲ ಕ್ಷಣಗಳ ನಂತರ google search ಮಾಡುತ್ತಿದ್ದುದು ಕಂಡಿತು. ಸಮಾಧಾನವಾಗಲಿಲ್ಲವೆಂದು ತೋರುತ್ತದೆ. ಇನೋ್ನರ್ವನನು್ನ ಕರೆತಂದನು.
ಅದೇ ಪ್ರಶ್ನೆ ಕೇಳಿದೆ. ಉತ್ತರ ಗೊತ್ತಿಲ್ಲವೆಂದಾಯಿತು. "ಲೆಕ್ಕ ಹಾಕೋಣ. ಕ, ಚ, ಟ, ತ, ಪ ಹೇಳಿರಿ" ಎಂದೆ.
ಪರಮಾಶ್ಚರ್ಯ! "ಗ, ಜ, ಡ, ದ, ಬ ಇಲ್ಲ" ಎಂದರು.
"ಇಲ್ಲದೆ ಎಲ್ಲಿ ಹೋಗುತ್ತದೆ? 'ಸಿಂಗಂ' ಎಂದು ಸಿನೆಮಾ ಇಲ್ಲವೇ? ಅದನ್ನು ಹೇಗೆ ಬರೆಯುತೀ್ತರಿ?" ಎಂದು ಕೇಳಿದೆ.
"ಸಿಂಕಂ ಎಂದು ಬರೆಯುತೇ್ತವೆ. ಸಿಂಗಂ ಎಂದು ಓದುತೇ್ತವೆ" ಎಂದರು.
"ಅದು ಹೇಗೆ ಗೊತಾ್ತಗುತ್ತದೆ? 'ಕ' ಬೇಕೋ, 'ಗ" ಬೇಕೋ?" ಎಂದರೆ, "ಸಂದರ್ಭಾನುಸಾರ, ಅರ್ಥಾನುಸಾರ" ಎಂಬ ಉತ್ತರ ಬಂತು.
ಹೊಸದಾಗಿ ಭಾಷೆ ಕಲಿಯುವವರ ಗತಿ ಗೋ…ವಿಂದ ಎಂದುಕೊಂಡೆ. ಪದಗಳು ಗೊತ್ತಿದ್ದರೆ ತಾನೇ 'ಕ', 'ಗ' ಎಲ್ಲಿ ಬೇಕೆಂದು ತಿಳಿಯುವುದು. ಪದ ಕಲಿತ ನಂತರ ಅಕ್ಷರ ಕಲಿಯಬೇಕೇ? ಗೊಂದಲಕ್ಕಿಟ್ಟುಕೊಂಡು ಮಾತು ಅಲ್ಲಿಗೇ ನಿಂತಿತು.
(ಹೀಗಾದರೆ ಬೆಂಗಳೂರಿನ "ಕೋಣನ ಕುಂಟೆ", "ಕೋಣನ ಕುಂಡೆ" ಆದೀತೆಂದು ಮನದಲೇ್ಲ ನಗು ಬಂತು).

ಎಷೋ್ಟ ಸಮಯ ನಂತರ ಪತ್ರಿಕೆಯಲ್ಲಿ ಭಾಷಾ ಸರಳೀಕರಣದ ಬಗ್ಗೆ ಲೇಖನ ನೋಡಿದಾಗ ತಮಿಳಿನ "ಗ, ಜ, ಡ, ದ, ಬ" (ಮಹಾಪಾ್ರಣ ಕೂಡಾ) ಅಕ್ಷರಗಳು ಸರಳೀಕರಣಕ್ಕೆ ಬಲಿಯಾದವು ಎಂಬ ಅಸ್ಟಷ್ಟ ಚಿತ್ರಣ ಸಿಕ್ಕಿತು. (ಇದು ತಪ್ಪಿದ್ದರೆ ತಿದ್ದಿ).

ಆದರೆ ಈ ಘಟನೆ ನನ್ನ ಯೋಚನೆಯನ್ನೇ ಬದಲಿಸಿತು. ಭಾಷಾಭಿಮಾನಕ್ಕೆ ಹೆಸರುವಾಸಿಯಾದ ತಮಿಳರು ವರ್ಣಮಾಲೆಯ ಅಕ್ಷರಗಳೆಷ್ಟಿವೆ ಎಂದು ತಿಳಿದಿರದಿದ್ದರೆ, ತಮಿಳಿನ ಸ್ಥಿತಿ ಕನ್ನಡಕ್ಕಿಂತ ಹೆಚ್ಚು ಭಿನ್ನವಾಗಿ ಏನೂ ಇಲ್ಲ ಎನಿಸಿತು. ಹಾಗೆ ನೋಡಿದರೆ ಕನ್ನಡ ಭಾಷೆಗೆ ಅಳಿವಿನ risk ಎಷ್ಟು ಇದೆಯೋ, ಉಳಿದ ಭಾಷೆಗಳಿಗೂ ಅಷೇ್ಟ ಇದೆ ಅನಿಸಿತು.
ಬರಿಯ ಆಡುಮಾತಿನಲ್ಲಿ ಭಾಷೆ ಎಷ್ಟು ಶುದ್ಧವಾಗಿ ಉಳಿದೀತು? ಆಂಗ್ಲ ಪದಗಳೊಂದಿಗೆ ಬೆರೆತು ಅನೇಕ ಪದಗಳೇ ಅಳಿದು ಹೋದಾವು. ಭಾಷೆ ಉಳಿಯಬೇಕಾದರೆ ಆಡು ಮಾತಿಗಿಂತ ಹೆಚ್ಚಾಗಿ ಸಾಹಿತ್ಯದಲ್ಲಿ ಕಾಣಬೇಕು. ಬರಹ, ಓದುಗಳ ಮೂಲಕ ಪದಗಳು ಜನರನ್ನು ತಲುಪಬೇಕು. ಸಾಹಿತ್ಯ ಸೃಷ್ಡಿಯ ಜೊತೆ ಓದುಗರೂ ಹೆಚ್ಚಾಗಬೇಕು. ಇಲ್ಲವಾದಲ್ಲಿ "evening walking ಬರುತೀ್ತಯಾ?" ಎನ್ನುವುದೇ ಕನ್ನಡ ಎಂದು ತೃಪ್ತಿ ಪಡಬೇಕಾದೀತು.




Monday, July 16, 2012

"ನನ್ನ ತೇಜಸ್ವಿ" ಪುಸ್ತಕ ಪರಿಚಯ


ತೇಜಸ್ವಿ ಅಭಿಮಾನಿಯಾದ ನಾನು ಕೆಲ ಸಮಯದ ಹಿಂದೆ ಇಂಟರ್ನೆಟ್ ನಲ್ಲಿ ಏನೋ ಹುಡುಕುತ್ತಿದ್ದಾಗ "ನನ್ನ ತೇಜಸ್ವಿ" ಪುಸ್ತಕದ ವಿಮರ್ಷೆ ಕಾಣಸಿಕ್ಕಿತು. ಎರಡು ಕಡೆ ನಾನು ಈ ಪುಸ್ತಕದ ಬಗ್ಗೆ ಒಳ್ಳೆ ಅಭಿಪ್ರಾಯ ಬರೆಯಲ್ಪಟ್ಟದ್ದನ್ನು ನೋಡಿ ಓದುವ ಆಸಕ್ತಿಯಿಂದ ಕೊಂಡು ತಂದೆ. ಅದನ್ನು ಓದಿ ಮುಗಿಸಿ ಕೆಲವು ತಿಂಗಳುಗಳಾದವು. ಆದರೂ ಅದರ ಬಗ್ಗೆ ಒಂದೆರಡು ಅಭಿಪ್ರಾಯ ಬರೆಯಬೇಕು ಎಂದು ಅನ್ನಿಸಿ ಇಲ್ಲಿ ಬರೆಯುತ್ತಿದೇ್ದನೆ. 
(ಇದು ಕೇವಲ ನನ್ನ ಅಭಿಪ್ರಾಯ ಎಲ್ಲರಿಗೆ ಅನ್ವಯಿಸಬೇಕೆಂದಿಲ್ಲ)

ಈ ಪುಸ್ತಕ ಸುಮಾರು 600 ಪುಟ ಹೊಂದಿದ್ದು (ಬೆಲೆ ರೂ: 369) ಬಹು ನಿರೀಕ್ಷೆಯಿಟ್ಟು ಓದಲಾರಂಭಿಸಿದಾಗ ಆರಂಭದಲ್ಲಿ ನನಗೆ ನಿರಾಸೆಯುಂಟುಮಾಡಿತು.  ಆರಂಭದಲ್ಲಿಯೇ ಲೇಖಕಿ ರಾಜೇಶ್ವರಿಯವರು ಇದು ಬರಹದ ತಮ್ಮ ಪ್ರಥಮ ಪ್ರಯತ್ನವೆಂದೂ, ತಮಗೆ ಆ ಬಗ್ಗೆ ಹೆಚ್ಚಿನ ಅನುಭವವಿಲ್ಲವೆಂದೂ ಹೇಳಿದ್ದರಿಂದ ಓದನ್ನು ಮುಂದುವರಿಸಿದೆ. ಪ್ರಾರಂಭದ ಕೆಲವು ಆಧ್ಯಾಯಗಳ ನಂತರ ಬರಹದ ಕ್ರಮ ಸ್ವಲ್ಪ ಅಭ್ಯಾಸವಾಯಿತು. ತೇಜಸ್ವಿಯವರ ದಿನ ನಿತ್ಯದ ಬದುಕು, ಅವರ ಆಸಕ್ತಿಗಳು, ಅಭಿಪ್ರಾಯಗಳು ಇತ್ಯಾದಿಗಳನೇ್ನ ಹೆಚಾ್ಚಗಿ ಬರೆದಿರುವ ಲೇಖಕಿ ತೇಜಸ್ವಿಯವರ ತಂದೆ, ತಾಯಿ, ಸಹೋದರ, ಸಹೋದರಿಯರ ವಿವರಗಳನ್ನೂ ಸೇರಿಸಿದ್ದಾರೆ. 

ಆದರೆ ಹಲವು ಹಲವು ಕಡೆ ಬರಹದ ಶೈಲಿ ಅರ್ಥವಾಗದಂತಿದೆ. ಉದಾಹರಣೆಗೆ ತೇಜಸ್ವಿಯವರು ಮನೆಗೆ ನೀರು ಬರಿಸಲು ಅಳವಡಿಸಿದ ಪಂಪ್ ನ ಕಾರ್ಯವಿಧಾನದ ವಿವರಣೆ ಇದ್ದರೂ ಅದು ಏನೆಂದು ಸರಿ ಅರ್ಥವೇ ಆಗುವುದಿಲ್ಲ. ಅನೇಕ ಕಡೆ ಒಂದು ವಿಷಯದ ನಡುವೆ ಇನ್ನೊಂದು ವಿಷಯ ಹೊಕ್ಕು ನಮ್ಮನ್ನು ಎತ್ತಲೋ ಕೊಂಡೊಯು್ಯತ್ತದೆ. ಪುನಃ ಹಿಂದಿನ ವಿಷಯಕ್ಕೆ ಬಂದಾಗ ದಾರಿ ತಪ್ಪಿದಂತಾಗುತ್ತದೆ. ಇದು ಆರಂಭಿಕ ಅಧ್ಯಾಯಗಳಲ್ಲಿ ಅವರ ಕಾಲೇಜು ದಿನಗಳ ವಿವರಣೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 

ಇದರ ನಂತರ ಅನೇಕ ಪುಟಗಳು ರಾಜೇಶ್ವರಿ ಮತ್ತು ತೇಜಸ್ವಿಯವರ ಪತ್ರ ವ್ಯವಹಾರಕ್ಕೆ ಮೀಸಲಿದೆ. ಆದರೆ ರಾಜೇಶ್ವರಿಯವರು ತೇಜಸ್ವಿಯವರ ಪತ್ರಗಳನ್ನು ಮಾತ್ರ ಸಂರಕ್ಷಿಸಿದ್ದು ತಮ್ಮ ಪತ್ರಗಳನ್ನು ಸುಟ್ಟು ಹಾಕಿದುದಾಗಿ ಹೇಳಿದ್ದು, ಪುಸ್ತಕದಲ್ಲಿ ಕೇವಲ ತೇಜಸ್ವಿಯವರ ಪತ್ರಗಳನ್ನು ಮಾತ್ರ ಪ್ರಕಟಿಸಲಾಗಿದೆ. ಬೆರಳೆಣಿಕೆಯಷ್ಟು ಮಾತ್ರ ತಮ್ಮ ಪತ್ರಗಳನ್ನು ಪ್ರಕಟಿಸಿದ್ದಾರೆ. ಇದರಿಂದ ನಮಗೆ ಕೆಲವು ಕಡೆ ಸಂದರ್ಭವೇ ಅರ್ಥವಾಗದಂತಿದೆ. ಪತ್ರಗಳನ್ನು ಹೊಂದಿದ ಅಧ್ಯಾಯ ಬಹು ನೀರಸವೆನಿಸುತ್ತದೆ.

ಲೇಖಕಿಯವರು ತೇಜಸ್ವಿಯವರ ಬಗ್ಗೆ ತಮ್ಮ ಅಭಿಪ್ರಾಯ ಹೇಳದೆ nutral ಆಗಿ ಬರೆಯಬೇಕಿತ್ತು ಎಂದು ನನಗೆ ಪುಸ್ತಕದ ಮೊದಲಿಂದ ಕೊನೆವರೆಗೂ ಅನ್ನಿಸಿತು. ಪುಸ್ತಕದ ತುಂಬಾ ಅನೇಕ ಕಡೆ ತೇಜಸ್ವಿಯವರನ್ನು ಸ್ವಲ್ಪ ಉನ್ನತ ಮಟ್ಟಕ್ಕೆ ಏರಿಸಿ ಬರೆದಂತೆ ನನಗೆ ಕಾಣಿಸಿತು. (ಉದಾ: ಅವರಿಂದ ಅವರ ಆಪ್ತರು ಹೇಗೆ ಪ್ರಭಾವಿತರಾಗಿದ್ದರು, ಚಿಕ್ಕ ಪ್ರಾಯದಲ್ಲಿ ಅವರ ಯೋಚನೆಗಳು ಯಾವ ರೀತಿ ಇದ್ದವು, ಅವರು ಕಂಪ್ಯೂಟರ ಕಲಿಕೆಯಲ್ಲಿ ಪಳಗಿದ್ದು ಇತ್ಯಾದಿ) ಈ ಅಭಿಪ್ರಾಯವನ್ನು ಪತ್ನಿಯಾಗಿ ಅವರು ಬರೆಯದೆ ಇದ್ದರೆ ಒಳ್ಳೆಯದಿತ್ತು ಎನಿಸಿತು. ತೇಜಸ್ವಿಯವರ ಬಗ್ಗೆ ಎಂತಹ ಅಭಿಪ್ರಾಯ ಹೊಂದಬೇಕೆನ್ನುವುದನ್ನು ಓದುಗರಿಗೇ ಬಿಡಬೇಕಿತ್ತು. 

ಉಳಿದಂತೆ ಕೆಲವು ಉತ್ತಮ ಮಾಹಿತಿಗಳು (ಪ್ರಕೃತಿಯ ಬಗ್ಗೆ, ಕಾಫಿ ಬೆಳೆಯ ಬಗ್ಗೆ, ತೇಜಸ್ವಿವಯರ ಚಳುವಳಿಗಳ ಬಗ್ಗೆ, ಕುವೆಂಪು ಅವರ ಜೀವನದ ಬಗ್ಗೆ), ಸ್ವಾರಸ್ಯಕರ ಘಟನೆಗಳು ಉಲೇ್ಲಖಿಸಲ್ಪಟ್ಟಿವೆ.
ಒಟ್ಟಿನಲ್ಲಿ ಈ ಪುಸ್ತಕವನ್ನು ಓದಿದರೆ ನಮಗೆ ತೇಜಸ್ವಿಯವರ ಜೀವನದ ಇನ್ನೊಂದು ಆಯಾಮ ಕಾಣಸಿಗುತ್ತದೆ. ಆದರೆ ತೇಜಸ್ವಿ ಅಭಿಮಾನಿಗಳಲ್ಲದವರಿಗೆ ಈ ಪುಸ್ತಕ ಇಷ್ಟವಾಗುವುದು ಅನುಮಾನ. ನನ್ನ ದೃಷ್ಟಿಯಲ್ಲಿ ಇದು ಹೆಚ್ಚಿನ ನಿರೀಕ್ಷೆಯಿಲ್ಲದೆ ಸಮಯ ಕಳೆಯಲು ಓದಬಹುದಾದ ಪುಸ್ತಕ. ಓದದೆ ಹೋದರೆ ದೊಡ್ಡ ನಷ್ಟವೇನೂ ಆಗಲಾರದು ಎಂದು ನನ್ನ ಅನಿಸಿಕೆ.


Thursday, July 5, 2012

ಗಮ್ಮತ್ತು

ಮಂಗಳೂರಿನ ಪ್ಯಾಂಟಲೂನ್ಸ್ ಹೊಕ್ಕ ಕೆಲ ಕನ್ನಡಿಗರು ಬಟ್ಟೆಗಳನ್ನು ಹುಡುಕಿದರು. ಕೆಲಸಗಾರರು ಇಂಗ್ಲೀಷ್ ನಲ್ಲಿ ಸ್ವಾಗತಿಸಿದರು.
ಆ ಕನ್ನಡಿಗ ಗಿರಾಕಿಗಳು ಪಕ್ಕದಲ್ಲಿ ಸುಂದರವಾದ ದಿರಿಸಿನಲ್ಲಿದ್ದ ಒಬ್ಬ ಕೆಲಸಗಾರನನ್ನು ಕರೆದು "Do you have large one in this?" ಎಂದು ಕೇಳಿದರು.
ಆತ ಇನ್ನೊಬ್ಬನ್ನು ಕರೆದು "ಐಟ್ large size ದ ಕೊರ್ಲಯಾ" (ತುಳು: ಅದರಲ್ಲಿ large size ನದನ್ನು ಕೊಡು) ಎಂದನು. ನೋಡುತ್ತಿದ್ದ ನನಗೆ ನಗು!

ಹೀಗೊಬ್ಬಳು ಗೆಳತಿ


ಒಂದು ವರ್ಷದಿಂದ ಸತ್ತಂತಿದ್ದ ಬ್ಲಾಗ್ ಅನ್ನು ಈಗ ಎಬ್ಬಿಸುತ್ತಿದೇ್ದನೆ. ಬರೆಯದಿದ್ದುದಕ್ಕೆ ಕಾರಣಗಳು ಹಲವಿವೆ. ಅದನ್ನು ಹೇಳುವ ಅಗತ್ಯ ಕಾಣುತ್ತಿಲ್ಲ. ಅದರ ಮೇಲೆ ನನ್ನ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಡಂ ಬದಲಾಯಿಸಲಾಗಿ ಕನ್ನಡ ಬರಹ ಏನೇನೋ ಆಗುತ್ತಿದೆ.

ನಿನ್ನೆ ಬಿದ್ದ ಕನಸೊಂದು ನನ್ನ ಬಹು ವರ್ಷಗಳ ನೆನಪೊಂದನ್ನು ಮರಳಿ ತಂದಿತು. ಕನಸಲ್ಲಿ ಬಂದವಳು ನನ್ನ ಒಬ್ಬಳು ಗೆಳತಿ. ಶಾಲೆಯ ಒಂದನೇ ತರಗತಿಯಿಂದ ಏಳು ವರ್ಷ ಜೊತೆಗಿದ್ದವಳು. ಅವಳ ಹೆಸರು ಇಲ್ಲಿ ಅನಗತ್ಯ. ನಮ್ಮ ಮನೆಯ ಸಮೀಪದಲೇ್ಲ ಅವಳ ಮನೆ ಇತ್ತು. ಆದರೂ ಮನೆಗೆ ಹೋಗಿ ಬರುವ ರೂಢಿ ಇರಲಿಲ್ಲ. ಅವಳ ಅತಿ ದೊಡ್ಡ ಸಮಸ್ಯೆ ಎಂದರೆ ಅವಳಿಗೆ ಓದು ತಲೆಗೆ ಹತ್ತುತ್ತಲೇ ಇರಲಿಲ್ಲ. ಬರೆಯುವಾಗ ವಿಚಿತ್ರವಾಗಿ ಪನ್ನು ಹಿಡಿಯುತ್ತಿದ್ದು ಅಕ್ಷರಗಳು ಗೆರೆಯ ಮೇಲೆ ಮೂಡದೆ ಓರೆ ಓರೆಯಾಗಿ ಮೂಡುತ್ತಿದ್ದವು. 

ಚಿಕ್ಕ ತರಗತಿಗಳಲ್ಲಿ ಹೇಗಿದ್ದಳೋ ನೆನಪಿಲ್ಲ. ಆದರೆ ಮೂರನೇ ತರಗತಿ ಮತ್ತು ಐದನೇ ತರಗತಿಯಿಂದ ಬಾಲ್ ಪೆನ್ ಉಪಯೋಗಿಸಿ ಬರೆಯುತ್ತಿದ್ದ ಕಾಲದಲ್ಲಿ (ನಮ್ಮ ಶಾಲೆಯಲ್ಲಿ ಎಂದೂ ಇಂಕ್ ಪೆನ್ ಉಪಯೋಗಿಸಲು ಹೇಳಲಿಲ್ಲ) ನನ್ನ ಪಕ್ಕವೇ ಆಕೆ ಕುಳಿತಿರುತ್ತಿದ್ದುದು ನೆನಪಿದೆ. ಟೀಚರು ಹೇಳುತ್ತಿದ್ದ ಪ್ರತಿ ನೋಟ್ಸೂ ಅವಳಿಗೆ ಕಬ್ಬಿಣದ ಕಡಲೆಯಾಗಿ ಪ್ರತಿ ಅಕ್ಷರವನ್ನೂ ನನ್ನ ಪುಸ್ತಕ ನೋಡಿ ನಕಲು ಮಾಡುತ್ತಿದ್ದಳು. ಟೀಚರು ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆಗೂ ಉತ್ತರಿಸುತ್ತಿರಲಿಲ್ಲ. ಸದಾ ಏಟು, ಬೈಗಳು ತಿನ್ನುವುದು ನಡೆದಿತ್ತು. ಅವಳು ಒಳ್ಳೆ ಗುಣದವಳೂ, ಪ್ರಾಮಾಣಿಕಳೂ ಆಗಿದ್ದಳು. ಶಾಲೆಯಲ್ಲಿ ಯಾರೋ ಕಳೆದುಕೊಂಡಿದ್ದ ಚಿನ್ನದ ಸರವು ಅವಳಿಗೆ ಸಿಕ್ಕಾಗ ಅದನ್ನು ಮರಳಿಸಿ ಪ್ರಾಮಾಣಿಕತೆಗೆ ಬಹುಮಾನ ಪಡೆದಿದ್ದಳು.
ಆಗ ನನಗೆ ಬೇರೆ ಗೆಳತಿಯರಿದ್ದರು. ಹಾಗಾಗಿ ಅವಳು ತುಂಬ ಹತ್ತಿರದ ಗೆಳತಿಯೇನು ಆಗಿರಲಿಲ್ಲ. ಆದರೆ ನನಗೆ ತಿಳಿದಂತೆ ಆಕೆ ನನ್ನನ್ನು ತುಂಬಾ ಹಚ್ಚಿಕೊಂಡಿದ್ದಳು. ನಾನು ಟೀಚರಿಂದ ಭೇಷ್ ಅನ್ನಿಸಿಕೊಂಡಾಗಲೆಲ್ಲ ಅವಳು ಅತೀವ ಸಂತೋಷ ಪಡುತ್ತಿದ್ದಳು. ನಾನೂ ಅವಳ ಓದು ಬರಹಗಳಿಗೆ ತಕ್ಕ ಮಟ್ಟಿಗೆ ನೆರವಾಗುತ್ತಿದ್ದೆ. 

ಆಗ ನಾವು ಚಿಕ್ಕ ಪ್ರಾಯದವರಾಗಿ ಜಗತ್ತಿನ ಪರಿವೆಯೇ ಇರದಿದ್ದ ಕಾಲ. ನನಗೆ ಅವಳ ಕೆಲವು ಸಂಗತಿಗಳು ವಿಚಿತ್ರವೆನಿಸುತ್ತಿದ್ದವು. ಅವಳು ಮನೆಯಲ್ಲಿ ಆಗಾಗ ತಂದೆಯಿಂದ ಬಹಳವಾಗಿ ಏಟು ತಿನ್ನುತ್ತಿದ್ದಳು. ಒಮ್ಮೆ ತುಟಿ ಹರಿದುಕೊಂಡು ಅದಕ್ಕೆ ಕಾರಣವೇ ಹೇಳಿರಲಿಲ್ಲ. ಇನ್ನೊಮ್ಮೆ ಮುಖದಲ್ಲಿ ಮೂಗಿನ ಬಳಿ ಸುಟ್ಟ ಗಾಯ ಮಾಡಿಕೊಂಡು ಬಂದಿದ್ದಳು. ಹಲವು ಬಾರಿ ನಾನು ಪ್ರಶ್ನಿಸಿದ ನಂತರ, ಅವಳ ಅಣ್ಣ(ಚಿಕ್ಕಪ್ಪನ ಮಗ)ನಿಗೆ ದೇವರ ಪ್ರಸಾದ ಕೊಡಲು ಮರೆತಳು ಎಂಬ ಕ್ಷುಲ್ಲಕ ಕಾರಣವೊಂದಕ್ಕೆ ಅವಳ ತಂದೆ ದೀಪದ ಬೆಂಕಿಗೆ ಮುಖವೊಡ್ಡಿಸಿದರು ಎಂದಳು. ನನಗೆ ಇದು ಅರಗಿಸಿಕೊಳ್ಳಲಾರದ ವಿಷಯವಾಗಿತ್ತು. ನೌಕರಿಯಲ್ಲಿದ್ದು ಗೌರವಸ್ಥರಂತೆ ಕಾಣುತ್ತಿದ್ದ ಅವಳ ತಂದೆ ಕೋಪಿಷ್ಟರೆಂದು ಕೇಳಿದ್ದರೂ ಈರೀತಿ ಮಾಡಬಹುದೆಂಬ ಕಲ್ಪನೆಯೇ ಇರಲಿಲ್ಲ. ಅವಳ ಹಲ್ಲುಗಳಿಗೆ ಹುಳ ಹಿಡಿದಿದ್ದರೂ ಅವಳನ್ನು ಮನೆಯವರು ಒಮ್ಮೆಯೂ ವೈದ್ಯರಲ್ಲಿಗೆ ಕರೆದೊಯ್ಯಲಿಲ್ಲ. ಅವಳ ತಾಯಿಯು ತವರು ಮನೆಗೆ ಹೋಗದೆ ಅವಳಷೇ್ಟ ವರ್ಷಗಳಾಗಿದ್ದವಂತೆ. ಹಾಗಾಗಿ ಅವಳಿಗೆ ಅಜ್ಜನ ಮನೆಯ ಸಂಪರ್ಕವೇ ಇರಲಿಲ್ಲ. ಅವರನ್ನು ತವರಿನೊಂದಿಗೆ ಯಾವ ಸಂಪರ್ಕವೂ ಇಡದಂತೆ ಮಾಡಲಾಗಿತ್ತಂತೆ. ನಾನು ಆಗ ಇಂಥ ಕೌಟುಂಬಿಕ ಕೌ್ರರ್ಯಗಳು ಅರ್ಥವಾಗುವಷ್ಟು ದೊಡ್ಡವಳಿರಲಿಲ್ಲ.

ನಾವು ಏಳನೇ ತರಗತಿಯಲ್ಲಿರುವಾಗ ಪಬ್ಲಿಕ್ ಪರೀಕ್ಷೆ ಇತ್ತು. ಫಲಿತಾಂಶದ ದಿನ ಅವಳಷ್ಟು ಖುಷಿ ಪಟ್ಟವರನ್ನು ನಾನು ಕಾಣಲೇ ಇಲ್ಲ. ಅವಳು ಅತಿ ಕಡಿಮೆ ಅಂಕದಲ್ಲೂ ಪಾಸ್ ಆಗಿದ್ದಳೂ. ಅವಳು "ನಾನು ಪಾಸ್, ನಾನು ಪಾಸ್" ಎಂದು ದೆವ್ವ ಹಿಡಿದಂತೆ ಓಡಿಬಂದು ನನ್ನನ್ನು ಗಟ್ಡಿಯಾಗಿ ಕುಲುಕಿದ್ದು ಈಗಲೂ ಕಣ್ಣಿಗೆ ಕಟ್ಟುತ್ತದೆ. ನಾನು ಆಗ ಅವಳ ಮನಸ್ಥಿತಿ ಗೊತ್ತಾಗದೆ "ಹಾಂ" ಎಂದಷೇ್ಟ ಹೇಳಿದ್ದು ಈಗ ಬೇಸರ ತರಿಸುತ್ತದೆ. 

ಪೌ್ರಢ ಶಿಕ್ಷಣದಲ್ಲಿ ನಮ್ಮ ತರಗತಿಗಳು ಬೇರೆಯಾದವು. ನಮ್ಮ ಮನೆಯೂ ಬೇರೆ ಕಡೆಗೆ ಬದಲಾಯಿತು. ನನಗೆ ಬೇರೆ ಗೆಳತಿಯರು ಸಿಕ್ಕಿದರು. ಅವಳು ಆಗೀಗ ಕಂಡರೂ ನನಗೆ ವಿಶೇಷವಾಗಿ ಮಾತಿಗೇನು ಸಿಗುತ್ತಿರಲಿಲ್ಲ. ನನಗೆ ತಿಳಿದಂತೆ ಅವಳು ಎಂಟನೇ, ಒಂಭತ್ತನೇ ತರಗತಿಗಳಲ್ಲಿ ಒಮ್ಮೊಮ್ಮೆ ಫೇಲ್ ಆಗಿರಬೇಕು. ಆಗೆಲ್ಲ ಮನೆಯಲ್ಲಿ ಎಷ್ಟು ಹೊಡೆತ ತಿಂದಳೋ ದೇವರಿಗೇ ಗೊತ್ತು. ಹತ್ತನೆಯಲ್ಲಿ ಫೇಲ್ ಆದ ಕೆಲ ಸಮಯ ನಂತರ ಓದನೇ್ನ ಬಿಟ್ಟಿರಬೇಕು. ಆಮೇಲೆ ಅವಳಿಗೆ ಮದುವೆಯಾಯಿತು. ಅಲ್ಲಿಗೆ ಅವಳ ಸಂಪರ್ಕವೇ ಮುಗಿಯಿತು.

ಮುಂದೊಂದು ದಿನ (ಐದಾರು ವರ್ಷ ನಂತರ) ಅನಿರೀಕ್ಷಿತವಾಗಿ ಅವಳು ಕಂಡಳು. ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು ಹೋಗುತ್ತಿದ್ದು, ದಾರಿಯಲ್ಲಿ ನನ್ನನ್ನು ಕಂಡಾಕ್ಷಣ ನಿಲ್ಲಿಸಿದರು. ಹಿಂದೆ ಕುಳಿತಿದ್ದ ಅವಳು ಬಂದು ನನ್ನನ್ನು ಮಾತಾಡಿಸಿದಾಗ ನನಗೆ ಅಚ್ಚರಿಯೂ ಸಂತೋಷವೂ ಆಯಿತು. ಬೈಕ್ ಚಲಾಯಿಸುತ್ತಿದ್ದಾತನನ್ನು ತನ್ನ ಪತಿ ಎಂದು ಪರಿಚಯಿಸಿದಳು. ಅವಳ ಮುಖ ಸಂತಸದಿಂದ ಕೂಡಿತ್ತು. ನಕ್ಕಾಗ ಹುಳುಕು ಹಲ್ಲುಗಳ ಬದಲು ಹೊಸದಾಗಿ ಮಾಡಿಸಿದ ಹಲ್ಲುಗಳು ಕಂಡವು. ಐದು ನಿಮಿಷವಷೇ್ಟ ಮಾತನಾಡಿ ತಮ್ಮ ದಾರಿ ಹಿಡಿದರು. ನನಗೆ ಅಷೇ್ಟ ಸಾಕಿತ್ತು. ಅವಳು ನನ್ನನ್ನು ಕಂಡಾಗ ನಿಲ್ಲಿಸಿ ಮಾತನಾಡುವಷ್ಟು ಪ್ರೀತಿ ಇಟ್ಟುಕೊಂಡದ್ದು ಮನಸಿಗೆ ತಟ್ಟಿತು. ಅವಳ ಅರಳಿದ ಮುಖ ಈಗ ಅವಳ ಜೀವನ ಸುಂದರವಾಗಿದೆ ಎಂದು ಹೇಳಿದಂತಿತ್ತು. ಇಷ್ಟು ವರ್ಷಗಳ ನಂತರವಾದರೂ ಒಳ್ಳೆ ಬದುಕು ಸಿಕ್ಕಿತಲ್ಲಾ ಎಂದು ನಾನು ಸಮಾಧಾನ ಪಟ್ಟೆ. ಆಮೇಲೆ ಅವಳು ನನಗೆ ಸಿಕ್ಕಿಲ್ಲ. ಅವಳು ಈಗಲೂ ಸಂತೋಷದ ಜೀವನ ನಡೆಸುತ್ತಿರಲಿ ಎಂದು ಸದಾ ಬಯಸುತೇ್ತನೆ.

Friday, July 8, 2011

ಇಂಗ್ಲೀಷ್ ಭಾಷೆ… ಒಂದು "ಭಾಷೆ".

ಎಷ್ಟೋ ದಿನಗಳ ನಂತರ ಬರೆಯಲು ಹೊರಟದ್ದೇನೆ.
ಬೇರೆ ಬೇರೆ ಕಾರಣಗಳಿಂದ (ಮದುವೆ ಸಮಾರಂಭಗಳ ತಿರುಗಾಟ, ಅನಾರೋಗ್ಯ, ಕೆಲಸ ಮಾಡದ ಕಂಪ್ಯೂಟರ್ ಇತ್ಯಾದಿ) ಬ್ಲಾಗ್ ಬರಹಕ್ಕೆ ಸಮಯ ಹೊಂದಿಸಿಕೊಳ್ಳಲಾಗದೆ ಇಂದು ಹೇಗೋ ಹೊಂದಿಸಿಕೊಂಡಿದ್ದೇನೆ.
ಬರೆಯಲು ಅನೇಕ ವಿಷಯಗಳು ತಲೆಯಲ್ಲಿ ಮೂಡಿ ಮರೆತೂ ಹೋಗಿವೆ. ಕಂಪ್ಯೂಟರಿನೊಳಗಿದ್ದ ಬರೆಯಲರ್ಹ ವಿಷಯಗಳ ಪಟ್ಟಿ ಕಾಣೆಯಾಗಿದೆ. ಸಧ್ಯದಲ್ಲಿ ನೆನಪಿರುವುದು ಇಂಗ್ಲೀಷ್ ಭಾಷೆಯ ಬಗ್ಗೆ ಮಾತನಾಡಬೇಕೆನಿಸಿದ ವಿಷಯಗಳು.

ನಾನು ಏಳನೆ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವಳು. ಎಂಟನೇ ತರಗತಿಯಲ್ಲಿ ಆಂಗ್ಲ ಮಾಧ್ಯಮಕ್ಕೆ ಸೇರಿದರೂ, ನಮ್ಮ ಆ ಸಣ್ಣ ಊರಲ್ಲಿ ಹೀಗೆ ಕನ್ನಡದಿಂದ ಇಂಗ್ಲೀಷ್ ಗೆ ಬದಲಿಸುವವರು ಹಲವರಿದ್ದುದರಿಂದ ಅಧ್ಯಾಪಕರು ಇಂಗ್ಲೀಷ್, ಕನ್ನಡ ಎರಡೂ ಭಾಷೆಯಲ್ಲಿ ವಿವರಿಸುತ್ತಿದ್ದರು. ಆಗ ನನ್ನ ಇಂಗ್ಲೀಷ್ ಜ್ಞಾನ ಪರೀಕ್ಷೆಗೆ ಓದಲು ಹಾಗೂ ಬರೆಯಲು ಬೇಕಾಗುವಷ್ಟೇ ಇತ್ತು. ಮಾತನಾಡಲು ಬರುತ್ತಿರಲಿಲ್ಲ.

ಪಿ.ಯು.ಸಿ.ಯಲ್ಲೂ ಕನ್ನಡದಲ್ಲೇ ಮಾತು. ಪಾಠ ಮಾತ್ರವೇ ಇಂಗ್ಲೀಷ್ ನಲ್ಲಿ ಇದ್ದುದು! ಇಂಥ ನಮೂನೆ ಬೆಳೆದವಳಿಗೆ ಎಂಜಿನೀರಿಂಗ್ ಸೇರಿದಾಗ ಪೇಚಾಟಕ್ಕಿಟ್ಟುಕೊಂಡಿತು. ಕಾಲೇಜು ದಕ್ಷಿಣ ಕನ್ನಡದ್ದೇ ಆಗಿದ್ದರೂ ಅನೇಕರು ಕನ್ನಡ ಬರದವರೂ, ಕನ್ನಡ ಬರದಂತೆ ನಟಿಸುವವರೂ ಅಲ್ಲಿದ್ದರು. ಅದಲ್ಲದೆ ಮಲಯಾಳ ಮಾತನಾಡುತ್ತಿದ್ದ ನನ್ನ ರೂಂ ಮೇಟ್ ಜೊತೆ ಇಂಗ್ಲೀಷ್ ಅಲ್ಲದೆ ಬೇರೇನೂ ಭಾಷೆ ಮಾತನಾಡುವುದು ಸಾಧ್ಯವಿರಲಿಲ್ಲ. ಅವಳೊಡನೆ ಹೇಗೋ ಕಷ್ಟಪಟ್ಟು ಮಾತನಾಡುತ್ತಾ ನಿಧಾನಕ್ಕೆ ಭಾಷೆಯ ಮೇಲೆ ಹಿಡಿತ ಸಿಗಲ;ಾರಂಭಿಸಿತು. ಆದರೆ ಇತರೆ ಓದುವಿಕೆಯು ಕನ್ನಡದಲ್ಲೇ ಇದ್ದಕಾರಣ ಶಬ್ಧಗಳು ನಾಲಿಗೆ ಮೇಲೆ ಬೇಕಾದಂತೆ ಕುಣಿಯುತ್ತಿರಲಿಲ್ಲ. ಆದರೂ ಮಾತನಾಡಲು ಏನೂ ತೊಂದರೆಯಾಗಲಿಲ್ಲ.

ವರುಷಗಳ ನಂತರ ಮದುವೆಯಾಯಿತು. ನನ್ನ ಯಜಮಾನರು ಮರಾಠಿ ಮಾಧ್ಯಮದಲ್ಲಿ ಕಲಿತವರು! ಅವರಿಗೆ ಓದುವ ಹವ್ಯಾಸವೂ ಇಲ್ಲ. ಅವರ ಇಂಗ್ಲೀಷ್ ಕೂಡಾ ಒಮ್ಮೊಮ್ಮೆ ತಡವರಿಸುತ್ತಿತ್ತು. ಕೆಲವು ಕಡೆ ವ್ಯಾಕರಣ ತಪ್ಪುತ್ತಿತ್ತು. ನನಗೆ ಅದನ್ನು ಸರಿಪಡಿಸಬೇಕೆಂದು ಬಲವಾಗಿ ಅನಿಸಿತು. ಮನೆಗೆ ಇಂಗ್ಲೀಷ್ ಪೇಪರ್ ತರಿಸಿ ಓದಲು ಹೇಳಿದೆ. ಓದುವ ಹವ್ಯಾಸ ಇಲ್ಲದಿದ್ದರೂ ಅದು ಓದು, ಇದು ಓದು ಎಂದು ಕೊಡತೊಡಗಿದೆ. ಅದು ಅವರಿಗೆ ಅಷ್ಟೊಂದು ಇಷ್ಟವಾಗುತ್ತಿದ್ದಂದೆ ಕಾಣಲಿಲ್ಲ.

ಮತ್ತೊಂದು ದಿನ ಆಫೀಸಿನಲ್ಲಿ ಹೊರ ರಾಜ್ಯದವರೊಡನೆ ಮಾತನಾಡುವಾಗ ನನ್ನ ದೃಷ್ಟಿಕೋನವೇ ಬದಲಾಗುವಂಥ ಸಂದರ್ಭ ಬಂತು. ಆಫೀಸಿನಲ್ಲಿ ಕನ್ನಡಿಗರಲ್ಲದವರೊಬ್ಬರು ಕನ್ನಡದ ಒಂದೆರಡು ಶಬ್ದಗಳನ್ನು ವಾಕ್ಯಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರು. ನನಗೆ ಇದನ್ನು ಕಂಡು ಬಹಳ ಖುಷಿಯಾಗಿ ಅವರಿಗೆ ವಾಕ್ಯ ಪೂರ್ಣ ಮಾಡಲು ಹೇಳಿಕೊಟ್ಟೆ. ತಪ್ಪಿದ್ದರೆ ತೊಂದರೆಯಿಲ್ಲ, ನಮ್ಮ ಭಾಷೆ ಕಲಿಯಲು ಯತ್ನಿಸಿದ್ದಾರೆ ಎಂದು ಸಂತೋಷಗೊಂಡು ಇನ್ನಷ್ಟು ಪ್ರೋತ್ಸಾಹಿಸಿದೆ. ಆಗ "ನಮ್ಮ ಭಾಷೆ ಅರಿಯದವರು ಅದನ್ನು ಕಲಿತು ತೊದಲಿದರೂ ನಮಗೆ ಇಷ್ಟವಾಗುತ್ತದೆ, ಹೆಮ್ಮೆಯೆನಿಸುತ್ತದೆ, ಆದರೆ ಇಂಗ್ಲೀಷ್ ಭಾಷೆಯಲ್ಲಿ ತಡವರಿಸುವವರನ್ನು ಕಂಡರೆ ಹಾಗೇಕೆ ಅನ್ನಿಸುವುದಿಲ್ಲ" ಎಂದು ಆಶ್ಚರ್ಯ ಪಟ್ಟೆ.

ನಾನು ಅನೇಕರನ್ನು ನೋಡಿದ್ದೇನೆ. ಇಂಗ್ಲೀಷ್ ಮಾತನಾಡಲು ಬರುವವರು ಇಂಗ್ಲೀಷ್ ಬಾರದವರನ್ನು ಗೇಲಿ ಮಾಡುವುದನ್ನು ಕಂಡಿದ್ದೇನೆ. ಅಲ್ಲದೆ ನನ್ನ ಸಹಪಾಠಿಗಳಲ್ಲಿ ಹಲವರು ಕನ್ನಡ ಬರುತ್ತಿದ್ದರೂ "I don't know Kannada" ಎಂದು ಹೆಮ್ಮೆಯಿಂದ ಹೇಳುವುದನ್ನು ಕೇಳಿದ್ದೇನೆ. ಅಪರಿಚಿತರಲ್ಲಿ ಕನ್ನಡದಲ್ಲಿ ದಾರಿಕೇಳಿದಾಗ, ಅಂಗಡಿಗಳಲ್ಲಿ ಸಾಮಾನು ವಿಚಾರಿಸಿದಾಗ ಇಂಗ್ಲೀಷ್ ಮಾತನಾಡಲು ಬರದಿದ್ದರೂ ಕಷ್ಟ ಪಟ್ಟು ಏನೇನೋ ಉತ್ತರ ಕೊಡುವುದನ್ನು ನೋಡಿದ್ದೇನೆ. ನಾನೇ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿದಾಗ ಹಲವು ಮಕ್ಕಳು ಇಂಗ್ಲೀಷ್ ಮಾತನಾಡುವುದನ್ನು ನೋಡಿ ಕೀಳರಿಮೆಗೊಳಗಾಗಿದ್ದೇನೆ. ಈಗ ನೆನಪಿಸಿಕೊಂಡರೆ ಅಂದು ಹೆಚ್ಚಿನ ಮಕ್ಕಳು ಕನ್ನಡವನ್ನು ನೇರ ಇಂಗ್ಲೀಷ್ ಗೆ ತರ್ಜುಮೆ ಮಾಡಿ ಮಾತನಾಡಿಕೊಳ್ಳುತ್ತಿದ್ದುದು ಎಂದು ಗೊತ್ತಾಗಿ ನಗು ಬರುತ್ತದೆ. ಕೇವಲ ಇಂಗ್ಲೀಷ್ ಗೆ ಹೀಗೇಕೆ ಎಂದು ಬಹಳ ವಿಚಿತ್ರವೆನಿಸುತ್ತದೆ.

ಬಹುಶಃ ನಾವು ಇಂಗ್ಲೀಷ್ ಅನ್ನು ಒಂದು ಭಾಷೆಯ ರೂಪದಲ್ಲಿ ನೋಡುತ್ತಲೇ ಇಲ್ಲ. ಅದರ ಜೊತೆ ನಮ್ಮ prestige, pride ಅನ್ನು ಅಂಟಿಸಿಕೊಳ್ಳುತ್ತೇವೆ. ಯಾವುದೇ ರಾಜ್ಯದವರಾಗಲೀ ನಾವು ಅವರ ಭಾಷೆ ಮಾತನಾಡಲು ಯತ್ನಿಸಿದರೆ ಸಂತೋಷ ಪಡುತ್ತಾರೆ. ಇದನು್ನ ಭಾಷಾಭಿಮಾನ ಎನ್ನೋಣವೇ? ಹಾಗಾದರೆ ಇಂಗ್ಲೀಷ್ ಬಗ್ಗೆ ಯಾರಿಗೂ ಅಭಿಮಾನವೇ ಇಲ್ಲ ಎಂದಹಾಗಾಯಿತಲ್ಲ! ಇಂಗ್ಲೀಷ್ ಅನ್ನು ಇತರ ಭಾಷೆಗಳಂತೆ ಒಂದು communication ನ ಮಾಧ್ಯಮವಾಗಿ ನೋಡಿದರೆ ಏನೂ ಸಮಸ್ಯೆಯೇ ಇರಲಿಕ್ಕಿಲ್ಲ ಅಲ್ಲವೇ?

ನನ್ನ ಸಹೋದ್ಯೋಗಿಯ ಆ ಸಣ್ಣ ಪ್ರಯತ್ನ ಇಂಗ್ಲೀಷ್ ಭಾಷೆಯನ್ನು ನೋಡುವ ದೃಷ್ಟಿಯನ್ನೇ ಬದಲಿಸಿತು. ಈಗ ನಾನು ಯಜಮಾನರ ಇಂಗ್ಲೀಷ್ ಭಾಷಾಜ್ಞಾನದ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ದಿನವೂ ಪೇಪರ್ ಓದುವ ಅಭ್ಯಾಸ ಅವರಿಗೆ ಹಿಡಿದಿರುವುದರಿಂದ ಶಬ್ದ ಭಂಡಾರವೂ ನಿಧಾನಕ್ಕೆ ಉತ್ತಮಗೊಳ್ಳುತ್ತದೆ. ನಾವು ಹೇಳಿದ್ದು ಎದುರಿನ ವ್ಯಕ್ತಿಗೆ ಸರಿಯಾಗಿ ಅರ್ಥವಾಗುತ್ತಿದ್ದರೆ ಅದರಲ್ಲಿ ಇನ್ನೇನು ತೊಂದರೆಯಿದೆ? ಈಗ ಇಂಗ್ಲೀಷ್ ನನಗೆ ಕೇವಲ ಒಂದು ಭಾಷೆ. ಹೊಸ ಶಬ್ದಗಳನ್ನು ಕಲಿಯುತ್ತೇನೆ, ವ್ಯಾಕರಣ ಸರಿಪಡಿಸಿಕೊಳ್ಳುತ್ತೇನೆ, ಇತರ ಭಾಷೆಗಳಂತೆ ಪ್ರೀತಿಸುತ್ತೇನೆ (ಕನ್ನಡದಷ್ಟು ಅಲ್ಲ) ಮತ್ತು ಯಾವತ್ತಾದರೂ ತಪ್ಪುಗಳಾದರೆ ಕೀಳರಿಮೆ ಹಚ್ಚಿಕೊಳ್ಳುವುದಿಲ್ಲ :-)
-

Monday, April 11, 2011

ನನಸಾಗದ ಚಾರಣದ ಕನಸು (ಅಂತರಗಂಗೆ)

ಬೆಟ್ಟ ಹತ್ತುವ ಹುಚ್ಚು ಒಮ್ಮೆ ಹಿಡಿದರೆ ಮತ್ತೆ ಬಿಡುವುದು ಕಷ್ಟ ಎಂದು ನನ್ನ ಅನಿಸಿಕೆ. ಚಿಕ್ಕಂದಿನಲ್ಲಿ ಅಜ್ಜನ ಮನೆಯ ಬಳಿ ಇದ್ದ ಗುಡ್ಡಕ್ಕೆ ಏರಿ ಎತ್ತರದಿಂದ ಪುಟಾಣಿ ಬಸ್ ಗಳನ್ನು, ಪುಟಾಣಿ ಮನೆಗಳನ್ನು ಮತ್ತು ನೂರು ಕಿಲೋಮೀಟರು ದೂರದ ಸಮುದ್ರವನ್ನು ನೋಡುತ್ತಿದ್ದಾಗಲೇ ಗುಡ್ಡ ಹತ್ತುವ ಹುಚ್ಚು ಹಿಡಿದಿತ್ತು. ಅಜ್ಜನ ಮನೆಯಲ್ಲಿ ಚಿಕ್ಕಮ್ಮ-ದೊಡ್ಡಮ್ಮನ ಮಕ್ಕಳು ಸೇರಿದಾಗೆಲ್ಲ ಒಟ್ಟಾಗಿ ಹರಳುಕಲ್ಲುಗಳ ಗುಡ್ಡಕ್ಕೆ ಕಾಲು-ಕೈ ಉಪಯೋಗಿಸಿ ಜಾರುತ್ತಾ ಏರುತ್ತಿದ್ದ ನೆನಪು ಇನ್ನೂ ಹಸಿರು. ಬೆಳೆಯುತ್ತಾ ಹೋದಂತೆ ಅಜ್ಜನ ಮನೆಯಲ್ಲಿ cousins ಜೊತೆ ಸೇರುವುದು ಕಮ್ಮಿಯಾಯಿತು. ಬೆಟ್ಟ ಹತ್ತುವ ಅವಕಾಶಗಳೂ ಕಡಿಮೆಯಾದುವು. ಅಲ್ಲದೆ ಸಮಾನ ಆಸಕ್ತಿ ಹೊಂದಿದವರೂ ಸಿಗದಾದರು.

ವರುಷಗಳ ನಂತರ ಚಿತ್ರದುರ್ಗದ ಕಲ್ಲುಗಳಲ್ಲಿ ಅಲೆದಾಗ ಬೆಟ್ಟ ಹತ್ತುವ ಹುಚ್ಚು ಪುನಃ ಹತ್ತಲಾರಂಭಿಸಿತು. ಹಾಸನದ ಬಳಿ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಪುಟ್ಟ ಬಂಡೆಯನ್ನು ಹತ್ತಿ ಮೇಲಿಂದ ಕೆಳ ನೋಡಿದಾಗ ಹುಚ್ಚು ಇನ್ನಷ್ಟು ಹೆಚ್ಚಿತು. ಶಿವಗಂಗೆಯ ಚಾರಣವಂತೂ ಮರೆಯಲಾಗದ ಅನುಭವ ಎನಿಸಿತು. ಅದೇ ಗುಂಗಿನಲ್ಲಿ browsing ಮಾಡುತ್ತಾ ಅಂತರಗಂಗೆಗೆ ಹೋಗಿ ಬೆಟ್ಟ ಹತ್ತುವ ಯೋಜನೆ ಹಾಕಿಯೇ ಬಿಟ್ಟೆ.

ಕೋಲಾರದತ್ತ...


ಶನಿವಾರ 26 ಫೆಬ್ರವರಿಯಂದು ನಾವಿಬ್ಬರು ಕೋಲಾರಕ್ಕೆ ಹೊರಟೆವು. ಶುಕ್ರವಾರ ರಾತ್ರಿವರೆಗೆ ಎಲ್ಲಿಗೆ ಹೋಗುವುದು ಎಂಬ ನಿರ್ಧಾರವೇ ಆಗಿರಲಿಲ್ಲ. ಕೊನೆಗೆ ಅಂತರಗಂಗೆ ಎಂದು ನಿರ್ಧರಿಸಿ ಹೊರಟಿದ್ದೆವು. ಸುಮಾರು ಎಂಭತ್ತು ಕಿಲೋಮೀಟರು ಇದ್ದ ಅಂತರಗಂಗೆಗೆ ನಾವು ತಡವಾಗಿ ಹೊರಟಕಾರಣ ತಲುಪಿದಾಗ ಮಧ್ಯಾಹ್ನವಾಗಿತ್ತು. ದ್ವಾರದ ಬಳಿ ಒಂದೆರಡು ಗೂಡಂಗಡಿಗಳನ್ನು ಬಿಟ್ಟರೆ ಬೇರೆ ಯಾವುದೇ ಜನಸಂಚಾರ ಇದ್ದಂತೆ ಕಾಣಲಿಲ್ಲ. ದ್ವಾರದಿಂದ ಸುಮಾರು 200 ಮೀಟರ್ ನಡೆದಾಗ ಅಂತರಗಂಗೆಯ ಶಿವ ದೇವಸ್ಥಾನ ಕಂಡಿತು. ದಾರಿಯುದ್ದಕ್ಕೂ ಮಂಗಗಳ ಹಿಂಡು ನಮ್ಮ ಕೈಯಲ್ಲಿ ತಿನಿಸುಗಳಿವೆಯೇ ಎಂದು ನೋಡುವುದರಲ್ಲಿ ಮಗ್ನವಾಗಿತ್ತು. ಶಿವ ದೇವಸ್ಥಾನದ ಪಕ್ಕ ಬಂಡೆಯೊಳಗಿಂದ ಸಿಹಿನೀರಿನ ತೊರೆ ಚಿಮ್ಮಿ ಬರುತ್ತಿತ್ತು. ಅದರ ಕೆಳಗೆ ಕೆಲವರು ಸ್ನಾನ ಮಾಡುತ್ತಿದ್ದರು. ಹಲವು ಮಕ್ಕಳು ಅದರಿಂದ ಕ್ಯಾನುಗಳಲ್ಲಿ ನೀರುತುಂಬಿಕೊಳ್ಳುತ್ತಿದ್ದರು. ಆ ನೀರು ಹರಿದು ಬೀಳುತ್ತಿದ್ದ ಕೊಳವು ಕಸಕಡ್ಡಿ, ಹೂ, ಪಾಚಿಗಳಿಂದ ತುಂಬಿ ನೋಡಲು ಕೆಟ್ಟದಾಗಿ ಕಾಣುತ್ತಿತ್ತು. ಅಲ್ಲದೆ ಅದರ ಅಡಿಯಲ್ಲಿ ಜನರು ಸ್ನಾನ ಮಾಡುತ್ತಿದ್ದು, ನಾವು ನೀರು ಹಿಡಿಯಲು ಹೋದರೆ ಅವರ ತಲೆಗಿಂತ ಅರ್ಧ ಅಡಿ ಮೇಲೆಯಷ್ಟೇ ಕೈಯಿಡಬೇಕಿತ್ತು. ಹಾಗಾಗಿ ನನಗೇಕೋ ನೀರು ಹಿಡಿದುಕೊಳ್ಳುವುದರಲ್ಲಿ ಅಷ್ಟಾಗಿ ಆಸಕ್ತಿ ಉಂಟಾಗಲಿಲ್ಲ.

ಅಂತರಗಂಗೆ:


ಐದು ವರ್ಷ ಹಿಂದೆ ನಮ್ಮ ಮನೆ ಮಾಲೀಕರು ಬೆಟ್ಟ ಹತ್ತಿದ್ದರೆಂದೂ, ಆಗ ಅನೇಕರು ಹತ್ತುತ್ತಿದ್ದುದಲ್ಲದೆ, ಹಲವು ಮಕ್ಕಳು ಬೆಟ್ಟದ ಮೇಲೆ ಹತ್ತಿ ಅಲ್ಲಿಂದ can ಗಳಲ್ಲಿ ನೀರು ತುಂಬಿ ಕೆಳ ತಂದು, ತೀರ್ಥವೆಂದು ಮಾರುತ್ತಿದ್ದರೆಂದೂ, ಆಮೇಲೆ ತಿಳಿಯಿತು.

ನಾವು ಬೆಟ್ಟ ಹತ್ತುವ ಉತ್ಸಾಹದಿಂದ ಎರಡು ಲೀಟರ್ ನೀರು, ಟೊಪ್ಪಿ, ಕ್ಯಾಮರಾ ಹೊತ್ತು ತಂದಿದ್ದೆವು. ಬೆಟ್ಟ ಹತ್ತುವ ಕಡೆ ಜನಸಂಚಾರವೇ ಕಾಣುತ್ತಿರಲಿಲ್ಲ. ಅಲ್ಲದೆ ಇಂಟರ್ನೆಟ್ ನಲ್ಲಿ ಒಬ್ಬರು ಅಲ್ಲಿ ಕಳ್ಳಕಾಕರು ಇರಬಹುದೆಂಬ ಎಚ್ಚರಿಕೆ ಕೊಟ್ಟಿದ್ದರಿಂದ ನನಗೆ ಸ್ವಲ್ಪ ಇರುಸು-ಮುರುಸಾಗತೊಡಗಿತು. ಅಲ್ಲಿ ಚಿಕ್ಕ ಬಾಲಕನೊಬ್ಬ ಅತಿ ಉತ್ಸಾಹದಿಂದ ಮೇಲೆ ಕರೆದೊಯ್ಯುವೆನೆಂದು ಬಂದ. ಇನ್ನೂ ಏನು ಮಾಡುವುದೆಂದು ಯೋಚಿಸುತ್ತಿರಬೇಕಾದರೆ "ಚಿರತೆಗಳಿವೆ. ಯಾತ್ರಿಕರು ಬೆಟ್ಟ ಹತ್ತುವುದನ್ನು ನಿಷೇಧಿಸಲಾಗಿದೆ - ಪೋಲೀಸ್ ಇಲಾಖೆ" ಎಂಬ ಬೋರ್ಡು ದೃಷ್ಟಿಗಪ್ಪಳಿಸಿತು. ಇನ್ನು ಇಬ್ಬರಾಗಿ ಬೆಟ್ಟ ಹತ್ತುವ ಮಾತೇ ಇರಲಿಲ್ಲ. ಅದಲ್ಲದೆ ಬೇರೆ ಯಾರೂ ಹತ್ತುತ್ತಿರುವುದು ನಮಗೆ ಕಾಣಿಸಲಿಲ್ಲ. ನನಗೆ ನಿರಾಸೆಯಾಯಿತು. ಕೃಷ್ಣನಿಗೆ mood ಹೋಗಲಾರಂಭಿಸಿ, ಸಿಟ್ಟು ಬರತೊಡಗಿತು. "ಇನ್ನೇನು ಮಾಡುವುದು ಇಲ್ಲಿ ಕೂತು? ವಾಪಸ್ ಹೋಗೋಣ" ಎಂದು ತಿರುಗಿ ನಡೆದೇ ಬಿಟ್ಟರು.

ನಾನೂ ಇನ್ನೇನೆಂದು ಯೋಚಿಸುತ್ತಾ ಹಿಂಬಾಲಿಸಿದೆ. ಅಂತರಗಂಗೆಯ ದ್ವಾರದ ಸ್ವಲ್ಪ ದೂರದಲ್ಲಿ ಒಂದು ಬೋರ್ಡು ಹಾಕಿದ್ದು, ಅದರಲ್ಲಿ ನೋಡಲರ್ಹ ತಾಣಗಳ ಹಾಗೂ ಅಂತರಗಂಗೆಯಿಂದ ಅಲ್ಲಿಗೆ ಇರುವ ದೂರದ ಪಟ್ಟಿ ಇತ್ತು. ಅದರಲ್ಲಿ ಸುಮಾರು ನಲ್ವತ್ತು ಕಿಲೋಮೀಟರು ದೂರದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನವೂ, ಅಲ್ಲಿಂದ ಮತ್ತೆ ಹತ್ತು ಕಿಲೋಮೀಟರು ದೂರದಲ್ಲಿ ಬಂಗಾರು ತಿರುಪತಿ ಇರುವುದೂ ತಿಳಿಯಿತು. ಎಪ್ಪತ್ತು-ಎಂಭತ್ತು ಕಿಲೋಮೀಟರು ಮೇಲೆ ಪ್ರಯಾಣಿಸಿ ಬಂದು ಸುಮ್ಮನೆ ತಿರುಗಿ ಹೋಗಲು ಮನಸಿರದ ಕಾರಣ ಈ ದೇವಸ್ಥಾನಗಳನ್ನು ನೋಡುವುದೆಂದು ನಿರ್ಧರಿಸಿದೆವು.

ಯೋಜನೆಗಳು ತಲೆಕೆಳಗಾದ ಕಾರಣ ಊಟ ಮಾಡಲು ವಿಷೇಶ ಉತ್ಸಾಹವೇನೂ ಇರಲಿಲ್ಲ. ಸುಮಾರು ಮೂರು ಗಂಟೆಯ ಹೊತ್ತಿಗೆ ಕೋಟಿಲಿಂಗೇಶ್ವರ ದೇವಸ್ಥಾನ ತಲುಪಿದೆವು. ಒಳ ಹೋಗಲು ತಲಾ ಇಪ್ಪತ್ತು ರೂಪಾಯಿಯ ಟಿಕೇಟು. ಕ್ಯಾಮೆರಾಗೆ ನೂರು. ಆ ಜಾಗದಲ್ಲಿ ಹೆಚ್ಚಿನ ನಿರೀಕ್ಷೆಗಳೇನೂ ಇದ್ದಿರದ ಕಾರಣ, ಕ್ಯಾಮೆರಾಗೆ ನೂರು ರೂಪಾಯಿ ಕೊಡಲಿಚ್ಛಿಸದೆ ಕಾರೊಳಗೆ ಇಟ್ಟು ಬಂದೆ. ಅನೇಕ ಲಿಂಗಗಳನ್ನು ಸಾಲು ಸಾಲಾಗಿ ಇಟ್ಟಿರುವ ದೇವಸ್ಥಾನದ ಹೊರಭಾಗ, ನೋಡಲು ಚೆನ್ನಾಗಿದ್ದರೂ ವಿಶೇಷವಾಗಿ ಏನೂ ಇರಲಿಲ್ಲ. ನೂರು ಅಡಿ ಮೀರಿದ ಎತ್ತರದ ಲಿಂಗ ಯಾವುದೇ ಕೆತ್ತನೆ, ತಿರುವುಗಳಿಲ್ಲದೆ ತೀರಾ ಸಾಮಾನ್ಯವೆನಿಸಿತು. ನಂದಿ ವಿಗ್ರಹವೂ ಬಹಳ ಸರಳವಾಗಿದ್ದು ನಂದಿಯ ತಲೆ ಅದರ ದೇಹಕ್ಕೆ ತುಂಬಾ ಚಿಕ್ಕದಾಗಿ (disproportionate) ಆಗಿತ್ತು. ಅಲ್ಲಿ ಕ್ಯಾಮೆರಾಗೆ ನೂರು ರೂಪಾಯಿ ತೆತ್ತು ಫೋಟೋ ತೆಗೆಯುವಂಥದ್ದೇನೂ ಕಾಣಿಸಲಿಲ್ಲ. ನನಗೆ ಮೊದಲಿಂದಲೂ ಬಣ್ಣ ಬಳಿದ, ಮಾರ್ಬಲ್, ಅಥವಾ ಟೈಲ್ಸ್ ಅಂಟಿಸಿದ ದೇವಸ್ಥಾನಗಳು ಅಷ್ಟೊಂದು ಇಷ್ಟವಾಗದ ಕಾರಣ, ಕೋಟಿಲಿಂಗೇಶ್ವರ ಮೂಲ ದೇವಸ್ಥಾನ ಬಿಟ್ಟರೆ ಬೇರೇನು ಭಕ್ತಿ ತರಿಸುವಂತೆ ಅನ್ನಿಸಲಿಲ್ಲ.

ಕೋಟಿಲಿಂಗೇಶ್ವರ:


ಬಂಗಾರು ತಿರುಪತಿ:


ಅಲ್ಲಿಂದ ಹೊರಟು ಬಂಗಾರು ತಿರುಪತಿ ತಲುಪಿದಾಗ ನಾಲ್ಕು ಗಂಟೆ ಮೀರಿತ್ತು. ಅಲ್ಲಿ ವಿಷ್ಣು ಮತ್ತು ಲಕ್ಷ್ಮೀ ದೇವಸ್ಥಾನ ನೋಡಿ ಮರಳಿ ಹೊರಟೆವು. ಅಂತರಗಂಗೆ, ಕೋಟಿಲಿಂಗೇಶ್ವರ, ಬಂಗಾರು ತಿರುಪತಿ ಬಗ್ಗೆ ಬರೆದು ನಮ್ಮನ್ನು ಹೋಗಲು ಹುರಿದುಂಬಿಸಿದ ಬ್ಲಾಗುಗಳ ಬಗ್ಗೆ ಮನಸ್ಸಿನೊಳಗೇ ಅಸಮಾಧಾನವೂ ಆಶ್ಚರ್ಯವೂ ಆಗುತ್ತಿತ್ತು. ಎಂಭತ್ತು ಕಿಲೋಮೀಟರು ಪ್ರಯಾಣ ಮಾಡಿ ಹೋಗಿ ನೋಡುವಂಥದ್ದೇನೂ ಅಲ್ಲಿ ಇರಲಿಲ್ಲ. ಅಂತರಗಂಗೆಯ ಬೆಟ್ಟ ಹತ್ತುತ್ತಿದ್ದರೆ ಬೇರೆ ಮಾತು. ಅಲ್ಲಿಂದ ಬರುತ್ತಾ ಸಿಕ್ಕಿದ ಬಹಳ ಒಳ್ಳೆಯ ವಿಷಯವೆಂದರೆ ದಾರಿ ಬದಿಯ ಮೂಲಂಗಿ, ಕ್ಯಾರೇಟ್ ಹೊಲಗಳು, ಮತ್ತು ಅವುಗಳ ಬಳಿ ರಾಶಿ ಹಾಕಿ ಮಾರಲ್ಲದುತ್ತಿದ್ದ ತಾಜಾ ತರಕಾರಿಗಳು. ಅನೇಕ ವಾಹನಗಳು ದಾರಿಬದಿಯಲ್ಲಿ ನಿಲ್ಲಿಸಿ ತರಕಾರಿ ತುಂಬಿಕೊಳ್ಳುತ್ತಿದ್ದವು. ನಾನು ಕೆಲವು ಸೊಪ್ಪು, ಮೆಣಸು ಮತ್ತು ಮುಳ್ಳುಸೌತೆ ಕೊಂಡೆ. ಒಂದು ಕಿಲೋ ಮುಳ್ಳುಸೌತೆಗೆ ಹತ್ತೇ ರುಪಾಯಿ! ಮನೆಯಲ್ಲಿ ತಂದು ತಿಂದಾಗ ಇನ್ನೊಂದೆರಡು ಕಿಲೋ ತರಬಹುದಿತ್ತು ಎನಿಸಿತು. ಅಷ್ಟು ರಸಭರಿತವಾಗಿತ್ತು. ಅದೇ ಜಾಗದಲ್ಲಿ ನಾನು ಕ್ಯಾರೇಟ್ ಹಾಗೂ ಮೂಲಂಗಿಯ ಹೊಲಗಳನ್ನು ಹತ್ತಿರದಿಂದ ನೋಡಿದೆ. ಹೊಲದ ತುಂಬ ಬೆಳೆದು ನಿಂತಿದ್ದ (ಅಲ್ಲ... ಹೂತಿದ್ದ) ಕ್ಯಾರೇಟ್ ಹಾಗೂ ಮೋಲಂಗಿಗಳು ಮನಸಿಗೆ ಬಹಳ ಉಲ್ಲಾಸ ನೀಡಿದವು.

ಕ್ಯಾರೇಟ್ ಹೊಲ:


ಮೂಲಂಗಿ ಹೊಲ:


ಆನಂತರ ಅಲ್ಲಿಂದ ಹೊರಟು ಮನೆಗೆ ಮರಳಿದೆವು. ಬರುತ್ತಾ ದಾರಿಯಲ್ಲೇ ಕಾಮತ್ ಹೋಟೆಲಿನಲ್ಲಿ ತಿಂಡಿತಿಂದೆವು. ನಮ್ಮ ಈ ಪ್ರಯಾಣ ನೆನಪಿಡುವಂತಹದ್ದೇನೂ ಆಗಿರಲಿಲ್ಲ. ಫೋಟೋ ತೆಗೆಯಲು ಹೆಚ್ಚಿನ ಅವಕಾಶಗಳೂ ಇರಲಿಲ್ಲ. ಅಲ್ಲದೆ ಇದರ ಬಗ್ಗೆ ಬರೆಯುವ ಉತ್ಸಾಹವೂ ಅಷ್ಟಾಗಿ ಇರಲಿಲ್ಲ. ಆದರೂ ಯಾರಾದರೂ ಬ್ಲಾಗು ಓದುಗರು ಇಷ್ಟು ದೂರದ ಪ್ರಯಾಣದ ಯೋಜನೆ ಹಾಕಿದ್ದರೆ ಅವರಿಗೆ ಮೊದಲೇ ಸ್ವಲ್ಪ ಎಚ್ಚರಿಕೆ ಕೊಡಬೇಕೆಂದು ಅನ್ನಿಸಿ ಇದನ್ನು ಬರೆದೆ. ನಮ್ಮ ಪ್ರಯಾಣವು ಆಸಕ್ತಿದಾಯಕವಾಗುವಂತೆ ಇನ್ನೇನಾದರೂ ನೋಡಬೇಕಿತ್ತೇ ಎಂದು ನಿಮಗೆ ತಿಳಿದಿದ್ದರೆ ತಿಳಿಸಿ.

ಸಂಜೆ...


(ಇದನ್ನು ಬರೆಯಲಾರಂಭಿಸಿದ್ದು ಫೆಬ್ರವರಿ 28ರಂದು. ಇಂದು ಮುಗಿಯಿತು!)
-

Monday, February 7, 2011

"Sorry" ಮತ್ತು "Thank you"? ನಾನು ಹೇಳಲ್ಲ ಬಿಡಿ.

ಶುಕ್ರವಾರವೆಂದರೆ ಮೆಜೆಸ್ಟಿಕ್ ಹೋಗುವ ಬಸ್ ಗಳೆಲ್ಲ ಊರಿಗೆ ಹೊರಟ ಜನರು ಹಾಗೂ ಅವರ ಬ್ಯಾಗುಗಳಿಂದ ತುಂಬಿರುತ್ತವೆ. ಸೀಟು ಬಿಡಿ, ನಿಲ್ಲಲು ಜಾಗ ಸಿಕ್ಕಿದರೆ ಸಾಕು ಎಂಬ ಪರಿಸ್ಥಿತಿ ಇರುತ್ತದೆ. ಕಳೆದ ಶುಕ್ರವಾರ ತಡವಾಗಿ ಆಫೀಸ್ ಬಿಟ್ಟ ನಾನು ಇಂಥದ್ದೇ ಒಂದು ಕಿಕ್ಕಿರಿದ ವಜ್ರದಲ್ಲಿ (ವೋಲ್ವೋ ಬಸ್) ಆಫೀಸ್ ನ ಭಾರದ ಬ್ಯಾಗ್ ಹೊತ್ತು ನಿಂತು ಸಾಗಿದ್ದೆ. ಹಸಿವೆಯಿಂದ ಹೊಟ್ಟೆ ಖಾಲಿಯಾಗಿ ತೊಳಸಿದಂತಾಗುತ್ತಿತ್ತು. ಅಂತೂ ಅರ್ಧ ಗಂಟೆಯ ಒದ್ದಾಟದ ನಂತರ ಇಳಿಯುವ ಜಾಗ ಬಂತು. ಅಲ್ಲಿಂದ ಬೇರೆ ಬಸ್. ಹತ್ತು ನಿಮಿಷ ಕಾದಾಗ ಕಿಕ್ಕಿರಿದ ಬಸ್ ಬಂತು. ಮೆಜೆಸ್ಟಿಕ್ ನಿಂದ ಹೊರಬರುವ ಬಸ್ಸೂ ಹೀಗೆ ಜನರಿಂದ ತುಂಬಿರುವುದೇಕೆ ಎಂದು ಒಂದೆಡೆ ಆಶ್ಚರ್ಯವಾದರೆ, ಇನ್ನೊಂದೆಡೆ ಪುನಃ ನಿಂತೇ ಪ್ರಯಾಣಿಸಬೇಕಾದ ಕಷ್ಟವನ್ನು ಯೋಚಿಸಿ ಬೇಸರದಿಂದ ಬಸ್ ಹತ್ತಿದೆ.

ಹತ್ತು ನಿಮಿಷ ಕಳೆದಾಗ ಸೀಟು ಸಿಕ್ಕಿತು. ಪಕ್ಕದಲ್ಲಿ ಮುದುಕರೊಬ್ಬರು ಕುಳಿತಿದ್ದರು. ನಾನು ಆದಿನ ಕಷ್ಟಪಡಬೇಕೆಂಬುದು ಹಣೆಬರಹವಾಗಿತ್ತೋ ಎಂಬಂತೆ ಸ್ವಲ್ಪ ಹೊತ್ತಿನಲ್ಲೇ ಪುಟ್ಟ ಮಗುವೊಂದನ್ನು ಎತ್ತಿಕೊಂಡು ಸಭ್ಯರಂತೆ ಕಾಣುತ್ತಿದ್ದ ಹೆಂಗಸರಿಬ್ಬರು ಹತ್ತಿದರು. ಅಷ್ಟಲ್ಲದೆ "ಸೀಟು ಕೊಡ್ರೀ, ಸೀಟು ಕೊಡ್ರೀ" ಎಂದು ಆಚೆ ಈಚೆ ಬೊಬ್ಬಿಡತೊಡಗಿದರು. ಮುದುಕರನ್ನು ಏಕೆ ಏಳಿಸಬೇಕು ಎಂದು ನಾನೇ ಸೀಟು ಕೊಟ್ಟೆ. "Thanks" ಹೇಳದಿದ್ದರೆ ಪರವಾಗಿಲ್ಲ, ಆದರೆ ಆ ಹೆಂಗಸು ನನ್ನನ್ನು, ತನ್ನ ಹಕ್ಕಿನ ಸೀಟು ಕಸಿದಿರುವವಳಂತೆ ದುರುಗುಟ್ಟಿ ನೋಡಿ ಕುಳಿತಳು. ಬಸ್ ಆಮೆಯಂತೆ ಸಾಗುತ್ತಿತ್ತು. ನನಗೆ ಹಸಿವು ಜೋರಾಗಿ ತಲೆನೋಯುತ್ತಿತ್ತು. ಕಾಲು ಗಂಟೆ ಕಳೆದಿರಬೇಕು. ನನ್ನ ಪಕ್ಕದಲ್ಲಿ ಕುಳಿತಿದ್ದ ಮುದುಕರು ಎದ್ದು ಹೋದರು. ನಾನು ಆ ಸೀಟಿನಲ್ಲಿ ಕೂರಬೇಕೆನ್ನುವಷ್ಟರಲ್ಲಿ ಆ ಹೆಂಗಸು ತನ್ನೊಂದಿಗಿದ್ದ ಇನ್ನೊಬ್ಬ ಹೆಂಗಸನ್ನು ಕರೆದು ಅಲ್ಲಿ ಕೂರಿಸಿದರು! ನನಗೆ ದಿಗಿಲಾಯಿತು. ಇವರಿಗೆ ಯಾಕೆ ಸೀಟು ಕೊಡಬೇಕಿತ್ತೋ ಎಂದು ಬೇಸರವಾಯಿತು.

ಡಿಸೆಂಬರಿನಲ್ಲಿ ನಾನು ನೆಂಟರ ಮನೆಗೆ ಉಪನಯನವೊಂದಕ್ಕೆ ಹೋಗಿದ್ದೆ. ಅಲ್ಲಿ ನನ್ನ cousin ನ ನಾಲ್ಕು ವರ್ಷದ ಮಗಳು ಬಂದಿದ್ದಳು. ದಕ್ಷಿಣ ಅಮೇರಿಕಾದಲ್ಲಿ ಇರುವ ಅವಳಿಗೆ ಹಸು ಎಂದರೆ ಪಂಚಪ್ರಾಣ. ಇಡೀ ದಿನ ಹಟ್ಟಿಯಲ್ಲಿ ಹಸುಗಳನ್ನು ನೋಡುತ್ತಾ, ಅವಕ್ಕೆ ಹುಲ್ಲು ಹಾಕುತ್ತಾ ನಿಂತಿರುತ್ತಿದ್ದಳು. ನಾನು ಅವಳತ್ತ ಹೋದಾಗೆಲ್ಲ ಸ್ವಲ್ಪ ಹುಲ್ಲು ತಂದು ಕೊಡಲು ಹೇಳುತ್ತಿದ್ದಳು. ನಾನು ಪ್ರತಿ ಬಾರಿ ಹುಲ್ಲು ತೆಗೆದು ಕೊಟ್ಟಾಗಲೂ "Thank you" ಎನ್ನುತ್ತಿದ್ದಳು. ಸಂಜೆ ಆಟವಾಡುತ್ತಾ ನನ್ನ ಕೈಗೆ ಏನೋ ಕೊಟ್ಟಳು. ನಾನು ಅದನ್ನು ನೋಡುತ್ತಿರಬೇಕಾದರೆ "Say thank you" ಎಂದಳು. ಅವಳು ಕಲಿಯುತ್ತಿರುವ ಶಾಲೆಯಲ್ಲಿ ಎಷ್ಟು ಚಿಕ್ಕಂದಿನಲ್ಲೇ "Thanks" ಮತ್ತು "Sorry" ಗಳನ್ನು ಕಲಿಸುತ್ತಾರೆ ಎಂದು ತಿಳಿದು ಆಶ್ಚರ್ಯವೂ, ಸಂತೋಷವೂ ಆಯಿತು.

ಒಮ್ಮೆ ಬಸ್ ನಲ್ಲಿ conductor ಭರ್ತಿ ಮೂರು ಬಾರಿ ಕಾಲು ತುಳಿದು "ರಶ್ ಇದೆ ಅಡ್ಜಸ್ಟ ಮಾಡಿಕೊಳ್ಳಿ" ಎಂದು ನನಗೇ ಬೈದುದಿದೆ. ಬೆಂಗಳೂರಿನ ಪ್ರತಿಷ್ಠಿತ ಎನಿಸಿರುವ ಬಿಷಪ್ ಕಾಟನ್ ಶಾಲೆಯ ಮಕ್ಕಳೂ ಬಸ್ ನಲ್ಲಿ ಕಾಲು ತುಳಿದಾಗ "Sorry" ಎನ್ನುವ ಸೌಜನ್ಯ ತೋರಿಸದಿರುವುದನ್ನು ಕಂಡು ನಾನು ಬೆರಗಾಗಿದ್ದೇನೆ. ನನ್ನ ಸಹೋದ್ಯೋಗಿಯೊಬ್ಬಳು "ನಾವು ತಪ್ಪು ಮಾಡಿದ್ದರೂ ಬೇರೆಯವರಿಗೆ ತಪ್ಪಿತಸ್ಥರು ಯಾರೆಂದು ಗೊತ್ತಾಗದಿದ್ದರೆ "Sorry" ಹೇಳಿ ಸಣ್ಣವರೇಕೆ ಆಗಬೇಕು?" ಎಂದು ವಾಗ್ವಾದಕ್ಕಿಳಿದದ್ದು ನೋಡಿದ್ದೇನೆ. ಹಲವು ದೇಶಗಳಲ್ಲಿ ವಾಹನ over take ಮಾಡುವಾಗ ಬದಿಗೆ ಸರಿದ ಚಾಲಕನಿಗೆ "Thank you" ಹೇಳುವ ಕ್ರಮವಿದೆಯಂತೆ. ನಮ್ಮ ಸಂಸ್ಕೃತಿಯ ಶ್ರೇಷ್ಠತೆಯನ್ನು ಕೊಂಡಾಡುತ್ತಾ ಇತರ ಸಂಸ್ಕೃತಿಗಳನ್ನು ತುಚ್ಛವೆಂದು ಭಾವಿಸುವವರಿಗೆ ಕ್ಷಮೆ ಹಾಗೂ ಧನ್ಯವಾದಕ್ಕೆ ಹಿಂಜರಿಯುವ ಮನಸ್ಥಿತಿಯ ಬಗ್ಗೆ ಹೇಗೆ ಅನ್ನಿಸುತ್ತದೆ ಎಂದು ಕೇಳಬೇಕೆನಿಸುತ್ತದೆ. ನಾವೆಷ್ಟೇ ಸಂಸ್ಕಾರವಂತರೆಂದರೂ ಕಲಿಯಲೇ ಬೇಕಾದ ಚಿಕ್ಕ ಪುಟ್ಟ ವಿಚಾರಗಳು ಅನೇಕವಿವೆ. ಬೇರೆ ಸಂಸ್ಕೃತಿಗಳನ್ನು ನೋಡುವಾಗ ಬರೇ "ಮಕ್ಕಳು ಅಪ್ಪ ಅಮ್ಮನನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾರೆ. ಮದುವೆಯಾದ ಕೆಲ ವರ್ಷಗಳಲ್ಲಿ ಬೇರೆೆಯಾಗುತ್ತಾರೆ" ಎಂದಷ್ಟೇ ನೋಡದೆ ಒಳ್ಳೆಯ ಅಂಶಗಳನ್ನೂ ನೋಡಬೇಕಿದೆ. ಹುಡುಕಿದರೆ ನಮ್ಮ ಸಂಸ್ಕೃತಿಯಲ್ಲೂ ಹುಳುಕು ಸಿಗದೆ ಇದ್ದೀತೇ?
-

Thursday, January 27, 2011

ಸರ್ವವೂ ಎಣ್ಣೆಮಯ

ಭಾನುವಾರವೆಂದರೆ ಅನೇಕರಿಗೆ ತಲೆಗೆ ಎಣ್ಣೆ ಹಚ್ಚಿ ಸ್ನಾನಮಾಡುವ ದಿನ. ನಾನೂ ಇದಕ್ಕೆ ಹೊರತಲ್ಲ. ಅದೇನೋ ಮಿಶ್ರ ಸೊಪ್ಪುಗಳ ಒಣಗಿಸಿ ಹುರಿದು ಕಾಯಿಸಿ ಮಾಡಿದ ಎಣ್ಣೆಯಿರಬಹುದು, ಅದೇ ಸತ್ವಗಳ ಮಾರುಕಟ್ಟೆಯಿಂದ ತಂದ ಎಣ್ಣೆಯಿರಬಹುದು ಅಥವಾ ಕೊಬ್ಬರಿ ಎಣ್ಣೆಯಿರಬಹುದು, ಲೀಟರಿನಷ್ಟು ತಲೆಗೆ ಸುರಿದು "ಫಿಂಗರ್ ಟಿಪ್ಸ್"ನಿಂದ ತಿಕ್ಕಿ, ಬಾಚಿ ಎಳೆದು ಕಟ್ಟಿ ತಣ್ಣಗಿನ ಅನುಭವ ಪಡೆಯುವುದೆಂದರೆ ಏನೋ ಖುಷಿ. ಆರೇಳು ವರ್ಷ ಹಿಂದೆ ನಾವು ಹಾಸ್ಟೆಲ್ಲಿನಲ್ಲಿದ್ದಾಗ ಶನಿವಾರ ಬಂದರೆ ಏನೋ ಸಂಭ್ರಮ. ಹೆಚ್ಚಿನವರು ಬೇರೆ ಬೇರೆ (ಸು)ವಾಸನೆಯ ಎಣ್ಣೆಗಳನ್ನು ತಲೆಗೆ ತಿಕ್ಕಿ, ದಿಂಬಿನ ಮೇಲೆ ದಿನ ಪತ್ರಿಕೆ ಹಾಸಿ, ರಾತ್ರಿ ಪೂರ್ತಿ ತಲೆ ತಂಪಾಗಿಸುತ್ತಿದ್ದರು. ಎಷ್ಟೋ ಮಂದಿ ಮಾತನಾಡುತ್ತಾ ಎಣ್ಣೆ ಸುರಿದುಕೊಂಡು ಅದು ಕಿವಿಯ ಹಿಂದೆ ತಣ್ಣನೆ ಇಳಿದಾಗ ಏನೋ ಹುಳ ಹರಿದಾಡುತ್ತಿದ್ದಂತೆ ಬೆಚ್ಚಿ ಬೊಬ್ಬಿಡುತ್ತಿದ್ದರು. ತಮ್ಮ ಎಣ್ಣೆಗಳು ಮುಗಿದಿದ್ದರೆ ಬೇರೆಯವರ ರೂಂ ಬಾಗಿಲು ತಟ್ಟಿ ಎಣ್ಣೆ ಸಾಲಕ್ಕೆ ಪಡೆಯುತ್ತಿದ್ದರು. (ಮತ್ತೆ ಆ ಪ್ರಮಾಣದಲ್ಲಿ ಎಣ್ಣೆ ಉಚಿತ ಕೊಡಲು ಸಾಧ್ಯವೇ?). ಭಾನುವಾರ ಬೆಳಗಾದರೆ ಬಚ್ಚಲಿನ ಮುಂದೆ ಬಕೇಟುಗಳ ಸಾಲು. ಬಕೇಟಿನ ಮಾಲೀಕರ ಪತ್ತೆ ಇಲ್ಲದೆ ಬೇರೊಬ್ಬರು ಒಳ ನುಗ್ಗಿದರೆ ಅಲ್ಲೊಂದು ಸಣ್ಣ ಜಗಳ ಖಾತರಿಯಾಗಿತ್ತು. ಸೌರ ಶಕ್ತಿ ನೀರಿನ ಒಲೆಯಲ್ಲಿ ಬಿಸಿನೀರು ಮುಗಿದು ವಿದ್ಯುತ್ ಹೀಟರು ಆನ್ ಮಾಡುವಂತೆ ವಾಚ್ ಮಾ್ಯನ್ ಬಳಿ ದಂಬಾಲು ಬೀಳಬೇಕಾಗುತ್ತಿತ್ತು. ಆದರೆ ಅದಕ್ಕಿಂತ ಕಷ್ಟ ಕೊನೆಯಲ್ಲಿ ಸ್ನಾನಕ್ಕೆ ಹೋಗುವುದು. ಬಚ್ಚಲೆಲ್ಲ ಎಣ್ಣೆಮಯವಾಗಿ ಕಾಲಿಟ್ಟಲ್ಲಿ ಜಾರಿಬೀಳುವ ಸಂಭವವಿತ್ತು. ಎಷ್ಟೋ ಬಾರಿ ನೆಲಕ್ಕೆ ಸೋಪಿನ ಪುಡಿ ಸಿಂಪಡಿಸಿ ಎಣ್ಣೆಯನ್ನು ಹೊರ ಸಾಗಿಸಿ ಸ್ನಾನ ಮಾಡುವ ಪರಿಸ್ಥಿತಿ ಬಂದಿತ್ತು. ಬಚ್ಚಲಿನ ನೀರಿಂದ ಎಣ್ಣೆ ಹೊರತೆಗೆಯುವ ವಿಧಾನವಿದ್ದರೆ ನೂರಾರು ಬಾಟಲಿ ತುಂಬುತ್ತಿತ್ತೇನೋ.

ಹಾಸ್ಟೆಲ್ಲಿನಲ್ಲಿದ್ದಾಗ ನನ್ನ ಪ್ರಯೋಗ ಪ್ರಿಯ ಗೆಳತಿಯೊಬ್ಬಳು ಹರಳೆಣ್ಣೆ ತಲೆಗೆ ಸುರಿದು ಗಾಢ ನಿದ್ದೆ ಮಾಡಿದ್ದು ಇಲ್ಲಿ ನೆನಪಾಗುತ್ತದೆ. ಮರುದಿನ ಹರಳೆಣ್ಣೆಯ ಅಂಟಿನಿಂದ ಕೂದಲನ್ನು ಬಿಡಿಸು ಹೋಗಿ ಒಂದು ಗಂಟೆಗೂ ಮೀರಿದ ಸುದೀರ್ಘ ಸ್ನಾನ ಮಾಡಿದ್ದು ಬೇರೆ ವಿಚಾರ.

ಎಣ್ಣೆ ತಿಕ್ಕುವುದರಲ್ಲಿ ಬ್ಯೂಟಿ ಪಾರ್ಲರುಗಳೂ ಕಮ್ಮಿ ಇಲ್ಲ. ಪುರುಷರ ಕೂದಲು ಕತ್ತರಿಸುವ ಸಲೂನುಗಳಲ್ಲಿ ಹೆಚ್ಚಾಗಿ ಕಂಡುಬರುವುದು ನವರತ್ನ ತೈಲ. ಪ್ರತಿ ಬಾರಿ ಕೂದಲು ಕತ್ತರಿಸಲು ಹೋದಾಗಲೂ ನನ್ನ ಯಜಮಾನರು ನೂರು ರೂಪಾಯಿಗೆ (ಬೆಂಗಳೂರಿನಲ್ಲಿ) ಆಯಿಲ್ ಮಸಾಜ್ ಎಂದು ತಲೆಗೆ ನವರತ್ನ ಸುರಿಸಿ ಪಟಪಟ ಹೊಡೆಸಿ, ಕುತ್ತಿಗೆ ತಿರುವಿ ಟಕ್ ಎನಿಸಿಕೊಂಡು ಎಣ್ಣೆಮಯ ಮುಖ ಹೊತ್ತು ಮನೆಗೆ ಬರುತ್ತಾರೆ. ಹೀಗೇ ಒಮ್ಮೆ ನನ್ನ ತಂದೆ ಆಯಿಲ್ ಮಸಾಜ್ ಮಾಡಿಸಿ ಕುತ್ತಿಗೆ ಟಕ್ ಎನಿಸಿದಾಗ ಅಲ್ಪಕಾಲದಿಂದ ಬಾಧಿಸಿದ ಹೆಗಲು ನೋವು ಮಾಯವಾಯಿತಂತೆ!

ಸರ್ವ ವ್ಯಾಪಿ ಎಣ್ಣೆಯ ಇನ್ನೊಂದು ರೂಪ ಬಸ್ ಗಳಲ್ಲಿ ಕಾಣಸಿಗುತ್ತದೆ. ಅದು ಬಸ್ ಗಳ ಕಿಟಕಿ ಗಾಜುಗಳ ಮೇಲೆ ಯಾವತ್ತೂ ಮೂಡಿರುವ ಎಣ್ಣೆ ವೃತ್ತಗಳು. ಕಿಟಕಿ ಗಾಜಿಗೆ ಆತು ತೂಕಡಿಸಿದವರ ತಲೆಯ ಪರಿಧಿಯ ಮೇಲೆ ಈ ಎಣ್ಣೆಯ ವೃತ್ತಗಳ ಆಕಾರ ವ್ಯತ್ಯಾಸವಾಗುತ್ತದೆ. ಆ ಸೀಟಿನಲ್ಲಿ ಕುಳಿತ ಬೇರೆ ಬೇರೆ ಜನರೂ ಅದೇ ವೃತ್ತಗಳ ಮೇಲೆ ತಮ್ಮ ತಲೆಯಿಂದ ಇನ್ನಷ್ಟು ಎಣ್ಣೆ ತುಂಬಿಸಿ ಹೋಗುತ್ತಾರೆ. ದಿನದ ಮೊದಲ ಟ್ರಿಪ್ ನಲ್ಲಿ ಹೋದರೂ ಎಣ್ಣೆ ವೃತ್ತ ಇದ್ದೇ ಇರುತ್ತದೆ. ಇವು ಹಿಂದಿನ ದಿನಗಳವು ಇರಬೇಕು ಎಂದುಕೊಂಡಿದ್ದೇನೆ. ಎಷ್ಟೋ ಬಾರಿ ಕಿಕ್ಕಿರಿದ ಬಸ್ ಗಳಲ್ಲಿ ಎಣ್ಣೆ ಹಚ್ಚಿ, ಹೂವು ಮುಡಿದ ಹೆಂಗಸರು ನಿಂತಿರುತ್ತಾರೆ. ಅವರು ನಮಗಿಂತ ಕುಳ್ಳಗಿದ್ದು ನಮ್ಮ ಪಕ್ಕವೇನಾದರೂ ನಿಂತಿದ್ದರೆ ನಮಗೂ ಎಣ್ಣೆ ಲೇಪ ಗ್ಯಾರಂಟಿ. ಅವರು ಅತ್ತಿತ್ತ ಅಲುಗುತ್ತಾ ತಲೆಯ ಎಣ್ಣೆಯನ್ನು ನಮ್ಮ ಮುಖ ಮೂತಿಗೆ, ಕಂಬಿ ಹಿಡಿದುಕೊಂಡ ಕೈಗೆ ಲೇಪಿಸುತ್ತಿದ್ದರೆ ಏನೋ ಸಂಕಟ. ಎಣ್ಣೆ, ಹೂವು (ಬೇಕಿದ್ದರೆ ಬೆವರು) ಸೇರಿ ಮಿಶ್ರ ವಾಸನೆಯೊಂದನ್ನು ಬೀರುತ್ತಿದ್ದರೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ.

ಇದೇ ಸಂದರ್ಭ ನನಗೊಂದು ಮೋಜಿನ ಸಂಗತಿ ನೆನಪಾಗುತ್ತದೆ. ಕೆಲವು ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ತಮ್ಮ ಮಗನನ್ನು ಅಂಗನವಾಡಿಗೆ ಸೇರಿಸಿದರು. ಅದು ಹಳ್ಳಿ ಪ್ರದೇಶ. ಅಲ್ಲಿಗೆ ಬರುತ್ತಿದ್ದ ಮಕ್ಕಳೆಲ್ಲಾ ತಲೆಗೆ ರಾಶಿ ಎಣ್ಣೆ ಸುರಿದುಕೊಂಡಿರುತ್ತಿದ್ದರು. ಆ ಮಕ್ಕಳು ಒಂದು ಹೊಸದಾದ ಆಟ ಕಂಡುಕೊಂಡಿದ್ದರಂತೆ. ಅಂಗಾತ ಮಲಗಿ ಕಾಲುಗಳಿಂದ ನೆಲವನ್ನು ದೂಡುತ್ತಾ ತಲೆಯ ಹಿಂಭಾಗದ ಎಣ್ಣೆಯ ಜಿಡ್ಡಿನಲ್ಲಿ ಸುಲಭವಾಗಿ ಜಾರುತ್ತಾ ಇಡೀ ತರಗತಿ ಸುತ್ತುತ್ತಿದ್ದರಂತೆ. ನಮ್ಮ ಸಂಬಂಧಿ ಅಲ್ಲಿ ಹೋದಾಗ ಈ "ಹಿಂದಲೆಯಲ್ಲಿ ಜಾರುವ" ಮಕ್ಕಳ ಹಿಂದೆ ಶಿಕ್ಷಕಿ ಬೆತ್ತ ತೋರಿಸಿ ಗದರಿಸುತ್ತಾ ಓಡಾಡುತ್ತಿದ್ದರಂತೆ. ನನಗಂತೂ ಈ ಅಂಗನವಾಡಿ ಚಪ್ಪಟೆ ತಲೆಯ ಮಕ್ಕಳನ್ನು ಸೃಷ್ಟಿಸುವ ಕೇಂದ್ರದಂತೆ ಭಾಸವಾಯಿತು.

ಎಣ್ಣೆ ಹಚ್ಚುವಿಕೆ ಬರಿಯ ತಲೆಗಷ್ಟೇ ಸೀಮಿತವಾಗಿಲ್ಲ. ಚರ್ಮದ ಕಾಂತಿಗೆ, ಯೌವನಕ್ಕೆ, ಚಳಿಗಾಲದ ಬಿರುಕಿಗೆ ಎಂದು ಮೈಗೆಲ್ಲ ಎಣ್ಣೆ ಹಚ್ಚಿಕೊಳ್ಳಬಹುದು. ದೀಪಾವಳಿ ಬಂತೆಂದರೆ ಮೈಗೆ ಎಣ್ಣೆ ತಿಕ್ಕಿಸಿಕೊಳ್ಳಲು ನೆಪ ಸಿಕ್ಕಂತಾಗುತ್ತದೆ. ಕೆಲವರು ಇಡೀ ಮೈಗೆ ಹಚ್ಚಿಕೊಳ್ಳದಿದ್ದರೂ "ಶಾಸ್ತ್ರ" ಎಂದು ಕೈ-ಕಾಲಿಗೆ ಮಾತ್ರ ಹಚ್ಚಿ ಸ್ನಾನಮಾಡುವುದಿದೆ. ನರಕಾಸುರ ಹತನಾದರೆ ನಾವೇಕೆ ಎಣ್ಣೆ ತಿಕ್ಕಿಕೊಳ್ಳಬೇಕೋ ಗೊತ್ತಿಲ್ಲ. ಇನ್ನು ಹಸುಳೆಗಳನ್ನಂತೂ ಕೇಳಲೇ ಬೇಡಿ. ದಿನವೂ ಸ್ನಾನಕ್ಕೆ ಮೊದಲು ಪರಿಣತರಿಂದ ಎಣ್ಣೆ ತಿಕ್ಕಿಸಿ ವ್ಯಾಯಾಮ ಮಾಡಿಸಿಕೊಳ್ಳುತ್ತವೆ. ಕೆಲವು ಹಸುಳೆಗಳಿಗೆ ತುಪ್ಪ, ಇನ್ನು ಕೆಲವಕ್ಕೆ ಕೊಬ್ಬರಿ ಎಣ್ಣೆ, ಶೀತ ಪ್ರಕೃತಿಗಳವರಿಗೆ ಆಲೀವ್ ಎಣ್ಣೆೆ, ಜಾನ್ಸನ್ನನ ಮಕ್ಕಳಿಗೆ ಇನ್ನೇನೋ ಎಣ್ಣೆ! (ಕೆಲವರಲ್ಲಿ ಮಗುವಿಗೆ ಯಾವ ಎಣ್ಣೆ ಹಚ್ಚುವುದೆಂದು ಎಂದು ಪ್ರಶ್ನಿಸಿದಾಗ "ನಮ್ಮದು ಜಾನ್ಸನ್ಸ್ ಬೇಬಿ" ಎಂದಿದ್ದಾರೆ).

ಕಳ್ಳರಿಗೂ ಮೈ ಪೂರ್ತಿ ಎಣ್ಣೆ ಹಚ್ಚಿಕೊಳ್ಳುವ ಅಭ್ಯಾಸವಿದೆ ಎಂದು ಇತ್ತೀಚೆಗಷ್ಟೇ ತಿಳಿಯಿತು. ಕದಿಯುತ್ತಿರುವಾಗ ಯಾರಾದರೂ ಹಿಡಿಯಲು ಬಂದರೆ ಅಕ್ಷರಶಃ "ಜಾರಿಕೊಳ್ಳಲು" ಎಣ್ಣೆಗಿಂತ ಇನ್ನೇನು ಸಹಕಾರಿಯಾದೀತು? ಹಿಂದೊಮ್ಮೆ ರೈಲಿನಲ್ಲಿದ್ದ ನನ್ನತ್ತೆಯವರ ಕೊರಳ ಸರವನ್ನು ಕಿಟಕಿ ಹೊರಗಿನಿಂದ ಎಳೆಯ ಹೊರಟಿದ್ದ ಕಳ್ಳನನ್ನು ಹಿಡಿಯಲು ಹೋದಾಗ ಎಣ್ಣೆ ಮೆತ್ತಿದ ಕೈಯಿಂದಾಗಿ ಜಾರಿಕೊಂಡನಂತೆ.

ಎಣ್ಣೆಯ ಕಾರುಭಾರು ಇಷ್ಟಕ್ಕೇ ನಿಂತಿಲ್ಲ. ಬಹಳಷ್ಟು ಜನರಿಗೆ ಎಣ್ಣೆಯಲ್ಲಿ ಕರಿದ ತಿಂಡಿಗಳೆಂದರೆ ಅದ್ಭುತ ರುಚಿಯ ತಿಂಡಿಗಳು ಎಂದರ್ಥ. ನನಗೆ ಎಣ್ಣೆ ತಿಂಡಿ ಎಂದರೆ ಅಷ್ಟಕ್ಕಷ್ಟೆ. ನಾನು ಎಣ್ಣೆ ತಿಂಡಿ ಮಾಡುವುದರಲ್ಲಿ ಬಲು ಹಿಂದೆ. ಎಷ್ಟೋ ಬಾರಿ ಎಣ್ಣೆಯಲ್ಲಿ ಕರಿಯಲು ಹೊರಟು ಏನೇನೋ ಅವಾಂತರಗಳಾಗಿ "ಇದು ನನ್ನ ಡಿಪಾರ್ಟಮೆಂಟ್ ಅಲ್ಲ" ಎಂದು ಬಿಟ್ಟು ಬಿಟ್ಟಿದ್ದೇನೆ. ಇದನ್ನು ಅರಿತ ನನ್ನ ಮಿತ್ರರು "ನೀನು ಎಷ್ಟೇ ಒಳ್ಳೆಯ ಅಡುಗೆ ಮಾಡು, ಎಣ್ಣೆಯಲ್ಲಿ ಕಾಯಿಸಲು ಬರಲಿಲ್ಲ ಎಂದರೆ ನೀನು ಉತ್ತಮ ಅಡುಗೆಯವಳೆಂದು ಕರೆಸಿಕೊಳ್ಳಲು ಯೋಗ್ಯಳೇ ಅಲ್ಲ" ಎಂದಿದ್ದರು. ಆ ಮಟ್ಟಿಗಿದೆ ಎಣ್ಣೆಯ ಶ್ರೇಷ್ಠತೆ. ಎಣ್ಣೆಯಲ್ಲಿ ಕರಿಯುವುದು ಬಿಡಿ ಎಣ್ಣೆಯನ್ನು ಹಾಗೇ ಕುಡಿದ ಉದಾಹರಣೆಗಳಿವೆ. "ಹರಳೆಣ್ಣೆ ಕುಡಿದವನಂತೆ ಮುಖಮಾಡಿಕೊಂಡು..." ಎಂಬ ಮಾತಿನಿಂದ ಎಣ್ಣೆಯನ್ನು ಯಾರೋ ಕುಡಿದಿರುವುದು ಸಾಬೀತಾಗುತ್ತದೆ. ಅದೇಕೆ ಹರಳೆಣ್ಣೆ ಕುಡಿದರೋ, ಕುಡಿದ ನಂತರ ಮುಖ ಹೇಗೆ ಆಯಿತೋ? ನನಗಂತೂ ಗೊತ್ತಿಲ್ಲ. ಸಧ್ಯಕ್ಕೆ ಹರಳೆಣ್ಣೆ ಕುಡಿದವರಾರೂ ಗೊತ್ತಿಲ್ಲದಿದ್ದರೂ ಆ ಮಾತು ಇನ್ನೂ ಚಾಲ್ತಿಯಲ್ಲಿರುವುದರಿಂದ ಆ ಮುಖಭಾವ ಏನೋ ವಿಶೇಷ ಸ್ಟಾ್ಯಂಡರ್ಡ್ ಇರಬೇಕೆಂದು ಭಾವಿಸಿದ್ದೇನೆ. ಕೆಲವು ಎಣ್ಣೆಗಳು ಕುಡಿಯಲು ಇಷ್ಟವಾಗುತ್ತಲೂ ಇರಬಹುದು. ಇಲ್ಲದಿದ್ದರೆ ಮದ್ಯ ಕುಡಿಯುವಿಕೆಗೆ "ಎಣ್ಣೆ ಹಾಕಿಕೊಳ್ಳುವುದು" ಎನ್ನಬಹುದೆಂದು ನನಗನ್ನಿಸುವುದಿಲ್ಲ. ನಿದ್ದೆ ಓಡಿಸಲೂ ಎಣ್ಣೆ ಉಪಯೋಗವಾಗುತ್ತದೆ. "ಕಣ್ಣಿಗೆ ಎಣ್ಣೆ ಬಿಟ್ಟು" ರಾತ್ರಿಯಿಡೀ ಕಾಯುವುದೋ, ಓದುವುದೋ ಮಾಡುತ್ತಾರೆಂದರೆ ಎಣ್ಣೆ ಏನೆಲ್ಲ ಮಾಡಲು ಶಕ್ತವಾಗಿದೆ ಎಂದು ಗೊತ್ತಾಗುತ್ತದೆ.

ಎಣ್ಣೆ ಬಳಕೆಯಾಗದ ಜಾಗವೆಲ್ಲಿದೆ ಹೇಳಿ. ಅಡುಗೆಯಿಂದ ಹಿಡಿದು ನೋವು ನಿವಾರಕದವರೆಗೆ, ಕಿರ್ರೆನ್ನುವ ಲೋಹದ ಕೀಲುಗಳಿಂದ ಹಿಡಿದು ಎಣ್ಣೆಕಂಬದಂತಹ ಸಾಂಪ್ರದಾಯಿಕ ಆಟಗಳವರೆಗೆ, ಕೇಶ ಚರ್ಮಗಳ ಸೌಂದರ್ಯವರ್ಧನೆಯಿಂದ ಹಿಡಿದು ಜಾರಿಕೊಳ್ಳುವ ಕಳ್ಳರವರೆಗೆ ಎಲ್ಲವೂ ಎಣ್ಣೆಮಯ. ಇದೂ ಸಾಕಾಗಲಿಲ್ಲವೆಂದು ನಮ್ಮೂರ ಕಡೆ ಒಂದು ಹೊಳೆಗೂ "ಎಣ್ಣೆ ಹೊಳೆ" ಎಂದು ಹೆಸರಿಟ್ಟಿದ್ದಾರೆ. ಕಾರಣ ಕೇಳಿದರೆ "ನೀರು ಎಣ್ಣೆಯಂತಿದೆ" ಎನ್ನುತ್ತಾರೆ! ಹೀಗೇ ಕಳೆದ ಭಾನುವಾರ ಯಜಮಾನರ ತಲೆಗೆ ಎಣ್ಣೆ ಮಾಲೀಶು ಮಾಡುತ್ತಾ ಒಂದು ತರಲೆ ಪ್ರಶ್ನೆ ಎಸೆದೆ. "ಅದೇಕೆ ಜನರು ಸೆಲೂನುಗಳಲ್ಲಿ ಆಯಿಲ್ ಮಸಾಜ್ ಮಾಡಿಸಿಕೊಳ್ಳುತ್ತಾರೆ?". ತೂಕಡಿಸುತ್ತಾ ಕೂತ ಅವರಿಗೆ ನನ್ನ ಪ್ರಶ್ನೆ ನಿದ್ರಾಭಂಗ ಮಾಡಿರಬೇಕು. "ಮದುವೆಯಾದ ಮೇಲೆ ನೂರೆಂಟು ಯೋಚನೆಗಳು, ತಲೆಬಿಸಿಗಳು ಇರುತ್ತವೆ. ಸಲೂನಿಗೆ ಹೋಗಿ ಎಣ್ಣೆ ಮಾಲೀಶು ಮಾಡಿಸಿಕೊಂಡರೆ ತಲೆ ತಣ್ಣಗಾಗುತ್ತದೆ. ಅಲ್ಲಿ ಹೆಂಡತಿಯ ಕಿರಿಕಿರಿಯೂ ಇರುವುದಿಲ್ಲ" ಎಂದು ಆರಾಮವಾಗಿ ಅವರು ಹೇಳಿದಾಗ ಪೆಚ್ಚಾಗುವ ಸರದಿ ನನ್ನದಾಗಿತ್ತು.
-

Thursday, January 6, 2011

ಶಿವಗಂಗಾ ಚಾರಣ

ಎಷ್ಟೋ ತಿಂಗಳು ಎಲ್ಲೂ ತಿರುಗಾಡಲು ಹೋಗಲು ಅವಕಾಶ ಸಿಕ್ಕಿರಲಿಲ್ಲ. ಹೆಚ್ಚಿನ ಸಮಯ ಮಳೆ, ಇನ್ನು ಕೆಲವೊಮ್ಮೆ ಅಗತ್ಯ ಕೆಲಸಗಳು, ಊರಿಗೆ ಪ್ರಯಾಣ ಇತ್ಯಾದಿ ಕಾರಣಗಳಿಂದ ಜೀವನವೇ ನೀರಸವಾದಂತಿತ್ತು. ಕೊನೆಗೆ ನವಂಬರದ ಕೊನೆಯ ಶುಕ್ರವಾರ "ನಾಳೆ ಶಿವಗಂಗೆಗೆ ಹೋಗೋಣ" ಎಂದು ಧತ್ತನೆ ನಿರ್ಧಾರ ಮಾಡಿದೆವು. ಶಿವಗಂಗೆ ನಮ್ಮ ನೋಡಬೇಕಾದ ಜಾಗಗಳ ಪಟ್ಟಿಯಲ್ಲಿ ಮೊದಲೇ ಇತ್ತು. ಕಳೆದ ಬಾರಿ ದೇವರಾಯನ ದುರ್ಗಕ್ಕೆ ಹೋಗಿದ್ದಾಗ ಇನ್ನೊಮ್ಮೆ ಶಿವಗಂಗಾಗೆ ಬರಬೇಕು ಎಂದು ನಿರ್ಧರಿಸಿ ಹೋಗುವ ಯೋಜನೆಯನ್ನೂ ಹಾಕಿಯಾಗಿತ್ತು. ಶನಿವಾರ ಬೆಳಗ್ಗೆ 7 ಗಂಟೆ ಹೊರಡೋಣ ಎಂದು ಯೋಚಿಸಿ ನಿದ್ರಿಸಿದರೆ ಎದ್ದಾಗ ಗಂಟೆ ಎಂಟೂ ವರೆ ಆಗಿತ್ತು! ಏನು ಮಾಡುವುದು? ಶುಕ್ರವಾರದವರೆಗೆ ಕೆಲಸಮಾಡಿ ಶನಿವಾರ ಬೇಗ ಏಳು ಎಂದರೆ ದೇಹ ಕೇಳುತ್ತದೆಯೇ? ಬೇಗ ಬೇಗನೆ ಹಲ್ಲುಜ್ಜಿ, ಸ್ನಾನ ಮಾಡಿ, corn flakes ಮುಕ್ಕಿ ಹೊರಟಾಗ ಗಂಟೆ ಹತ್ತಾಗಿರಬೇಕು. ಬೇಗನೆ ತಲುಪುವ ಸಲುವಾಗಿ 82 ರೂಪಾಯಿ ತೆತ್ತು NICE ರಸ್ತೆ ಹಿಡಿದೆವು. ಖಾಲಿ ರಸ್ತೆಯಲ್ಲಿ ಕಾರು ವೇಗವಾಗಿ ಸಾಗಿತು. ಅರ್ಧಗಂಟೆಯೊಳಗೆ ನೆಲಮಂಗಲ ಬಂದಿತ್ತು. 12:15 ಗೆ ನಾವು ಶಿವಗಂಗೆ ತಲುಪಿದ್ದೆವು.



ಶಿವಗಂಗೆಯ ಬೆಟ್ಟದ ತಪ್ಪಲಲ್ಲಿ ಬಂಡೆಯೊಳಗೆ ಕೊರೆದಂತಿರುವ ಸ್ವರ್ಣಾಂಬಾ ದೇವಿ ದೇವಸ್ಥಾನ ಮತ್ತು ಗಂಗಾಧರೇಶ್ವರ ದೇವಸ್ಥಾನ ನೋಡಿ ನಾವು ಮೇಲಕ್ಕೆ ಹತ್ತಲನುವಾದೆವು. ಆರಂಭದಲ್ಲಿ ಅತ್ಯಂತ ಉತ್ಸಾಹದಲ್ಲಿ ಏರುತ್ತಿದ್ದ ನನಗೆ ಇದು ಸಾಮಾನ್ಯಕ್ಕೆ ತಲುಪುವ ತುದಿಯಲ್ಲ ಎಂದು ಅರಿವಾಗಲು ಬಹಳ ಹೊತ್ತು ಬೇಕಾಗಲಿಲ್ಲ. ಏರುತ್ತಿರುವಾಗ ಮೊದಲಿಗೆ ಬಂಡೆಯಲ್ಲೇ ಮೆಟ್ಟಿಲ ಆಕಾರ ಕೊರೆದು ಕಬ್ಬಿಣದ ಸ್ತಂಭ ಊರಿ ಸರಳು ಬಿಗಿದಿರುವುದರಿಂದ ಹತ್ತುವಿಕೆ ಸುಲಭವೆನಿಸುತ್ತಿತ್ತು. ಹಾಗೇ ಮುಂದುವರಿದಾಗ ಒಳಕಲ್ಲು ತೀರ್ಥ ಎಂಬ ಜಾಗ ಎದುರಾಯಿತು. ಇಲ್ಲಿ ಬಂಡೆಯಲ್ಲಿ ಸುಮಾರು 20ಅಡಿ ಒಳಗೆ ಗಣಪತಿ ಮತ್ತು ಈಶ್ವರನ ದೇವಸ್ಥಾನವಿದೆ. ವಿದ್ಯುತ್ ಇಲ್ಲದ ಕಾರಣ ಕತ್ತಲೆ ಇರುವುದರಿಂದ ಆಗ ಯಾರನ್ನೂ ಒಳಗಡೆ ಬಿಡುತ್ತಿರಲಿಲ್ಲ. ಬರುತ್ತಾ ನೋಡೋಣ ಎಂದು ನಾವು ಮುಂದುವರಿದೆವು.

ಇಲ್ಲಿಂದ ನಂತರ ಸುಮಾರು ಎತ್ತರದ ವರೆಗೆ ಕಬ್ಬಿಣದ railಗಳಿಲ್ಲ. ಇಲ್ಲಿ ಮೆಟ್ಟಿಲುಗಳಂತೆ ದೊಡ್ಡ ದೊಡ್ಡ ಕಲ್ಲುಗಳಿದ್ದು ಹತ್ತಲು railಗಳ ಅಗತ್ಯವೂ ಇಲ್ಲ. ಆದರೆ ಇಲ್ಲಿ ಹತ್ತುತ್ತಾ ನಮಗೆ ಕಾಲು ನೋವು ಬರಲಾರಂಭಿಸಿತು. ಏದುಸಿರು ತಗ್ಗಿಸಲು ಅಲ್ಲಲ್ಲಿ ನಿಲ್ಲಬೇಕಾಯಿತು. ಈ ಹಾದಿಯ ಕೊನೆಯಲ್ಲಿ ಶಿವ ಪಾರ್ವತಿಯರ 8-10 ಅಡಿ ಎತ್ತರದ ವಿಗ್ರಹ ರಚನೆಯಾಗುತ್ತಿತ್ತು. ಅದಕ್ಕಾಗಿ ಕೆಲಸಗಾರರು ಸಿಮೆಂಟು ಗೋಣಿಚೀಲಗಳನ್ನು ಕೆಳಗಿಂದ ಹೊತ್ತು ತರುತ್ತಿದ್ದರು! ನನಗೆ ಅವರನ್ನು ಕಂಡು ಬೇಸರವಾಯಿತು. ಆದರೇನು ಮಾಡುವುದು? ಹೊಟ್ಟೆಗೆ ಹಸಿವೆಯೆಂಬುದೊಂದು ಇದೆಯಲ್ಲವೇ ಎಂದುಕೊಂಡು ಸುಮ್ಮನಾದೆ. ಶಿವಪಾರ್ವತಿ ವಿಗ್ರಹದವರೆಗೆ ಅನೇಕ ಚಿಕ್ಕ ಅಂಗಡಿಗಳು ಚರುಮುರಿ, ಮಜ್ಜಿಗೆ, ಮುಳ್ಳು ಸೌತೆ, ಅನಾನಸು, ನೀರು ಮಾರಾಟ ಮಾಡುತ್ತಿದ್ದವು. ಇಲ್ಲಿಯವರೆಗೆ ನಮಗೆ ಯಾವುದೇ ಮಂಗಗಳೂ ಎದುರಾಗಲಿಲ್ಲ.



ಶಿವಗಂಗೆಗೆ ಹೊರಡುವ ಮೊದಲು ನಾನು ಅಲ್ಲಿಯ ಮಂಗಗಳ ಬಗ್ಗೆ ಸಾಕಷ್ಟು ಕೇಳಿದ್ದೆ. collegeಗೆ ಹಾಕುವಂತಹಾ ಬೆನ್ನಿನ ಚೀಲ ಕೊಂಡೊಯ್ಯುವುದು ಒಳಿತೆಂದು ತಿಳಿದಿದ್ದೆ. ಆದರೂ ಅನೇಕರು ತಮ್ಮ ಅನುಭವ ವಿವರಿಸಿ ಮಂಗಗಳ ಬಗ್ಗೆ ನನ್ನಲ್ಲಿ ಹೆದರಿಕೆ ಹುಟ್ಟಿಸಿದ್ದರು. ಕೆಲವರು ಮಂಗಗಳು ಬೆನ್ನಿನ ಚೀಲವನ್ನು ಹಿಂದಿಂದ ಎಳೆಯುತ್ತವೆ, ಕೊಡದಿದ್ದರೆ ಪರಚುತ್ತವೆ ಎಂದೂ, ಇನ್ನು ಕೆಲವರು, ಜಿಪ್ ತೆರೆದು ಹುಡುಕಾಡುತ್ತವೆ ಎಂದೂ ಹೇಳಿದ್ದರಿಂದ ನಾವು ನೀರು ಬಿಟ್ಟರೆ ಬೇರೇನೂ ತೆಗೆದುಕೊಂಡು ಹೋಗಿರಲಿಲ್ಲ. ಮಂಗಗಳು ಹೆಂಗಸರಿಗೆ ಜಾಸ್ತಿ ಉಪಟಳ ಕೊಡುತ್ತವೆ ಎಂದು ಕೇಳಿದ್ದ ನಾನು ಬ್ಯಾಗನ್ನು ಕೃಷ್ಣನಿಗೆ ತೊಡಿಸಿದ್ದೆ.
ಸದ್ಯಕ್ಕೆ ಮಂಗಗಳು ಎದುರಾಗದ್ದು ನೋಡಿ ನನಗೆ ಧೈರ್ಯ ಬಂತು. ಕೃಷ್ಣನಿಗೆ ಆಯಾಸ ಕಡಿಮೆ ಮಾಡಿಕೋ ಎಂದು ಬ್ಯಾಗನ್ನು ನಾನೇ ಎತ್ತಿಕೊಂಡೆ. ಹತ್ತು ಹೆಜ್ಜೆ ನಡೆಯುವುದರೊಳಗಾಗಿ ಮಂಗಗಳ ಹಿಂಡು ಕಂಡಿತು. "ಇಕೋ ಬ್ಯಾಗ್" ಎಂದು ಕೃಷ್ಣನತ್ತ ಬ್ಯಾಗ್ ಎಸೆದು ಕೋಲಿಗಾಗಿ ತಡಕಾಡಿದೆ. ಒಂದು ಧೈರ್ಯಕ್ಕೆ ಸಾಕಾಗುವಷ್ಟು ದೊಡ್ಡ ಕೋಲು ಸಿಕ್ಕಿತು. ಆದರೆ ಸ್ವಲ್ಪದರಲ್ಲೇ ಅದನ್ನು ಹಿಡಿದು ಹತ್ತುವುದು ಕಷ್ಟವಾಗಿ ಕೋಲೂ ಕೃಷ್ಣನ ಕೈ ಸೇರಿತು.

ಶಿವಪಾರ್ವತಿ ವಿಗ್ರಹದ ನಂತರ ಸಿಗುವುದು ಬಂಡೆಯ ತುದಿಗೆ ಹತ್ತುವ ಹಾದಿ. ಇದು ಬಹಳ ಇಳಿಜಾರಾಗಿದ್ದು ಹತ್ತಲು ಕಷ್ಟವಾಗುತ್ತದೆ. ಇಲ್ಲಿ ಬಂಡೆಯನ್ನು ಸುಮಾರಾಗಿ ಮೆಟ್ಟಿಲ ಆಕಾರಕ್ಕೆ ಕೊರೆದು ಎರಡೂ ಪಕ್ಕದಲ್ಲಿ railಗಳನ್ನು ಊರಿದ್ದಾರೆ. ಈ ಸರಳುಗಳಿಲ್ಲದಿದ್ದರೆ ಹತ್ತುವುದು ಬಹು ಕಷ್ಟವೇ ಸರಿ. ಅದಲ್ಲದೆ ಈ ಹಾದಿಯುದ್ದಕ್ಕೂ ಮಂಗಗಳು ಕುಳಿತಿರುತ್ತವೆ. ನಮ್ಮ ಅದೃಷ್ಟಕ್ಕೆ ಹಲವಾರು ಜನರಿಗೆ ಉಪದ್ರ ಕೊಡುತ್ತಿದ್ದ ಮಂಗಗಳು ನಮ್ಮ ಹತ್ತಿರವೂ ಸುಳಿಯಲಿಲ್ಲ. ಹೇಗೋ ಕಷ್ಟಪಡುತ್ತಾ ಮೇಲಕ್ಕೆ ಏರುತ್ತಾ ಹೋದೆವು. ಅಷ್ಟೆತ್ತರದಲ್ಲೂ ಮೇಕೆಗಳು ಬಂಡೆ ಮೇಲೆ ನಿಂತು ಮೇಯುತ್ತಿದ್ದುದನ್ನು ನೋಡಿ ಆಶ್ಚರ್ಯವಾಯಿತು. ತುದಿತಲುಪುತ್ತಾ ಮೊದಲಿಗೆ ಸಿಕ್ಕಿದ್ದು ನಂದಿ. ನಂದಿಯು ಸುಮಾರು ಹನ್ನೆರಡು ಅಡಿ ಎತ್ತರದ ಬಂಡೆಯ ಮೇಲೆ ಇದೆ. ಅಲ್ಲಿಗೆ ಹತ್ತಲೂ, ನಂದಿಯ ಸುತ್ತಲೂ ಕಬ್ಬಿಣದ ಸರಳು ಹಾಕಿದ್ದು, ಎಲ್ಲರಿಗೂ ಹತ್ತಲು ಅನುಕೂಲವಾಗುವಂತಿದೆ. ಆ ಸರಳುಗಳಿಲ್ಲದಿದ್ದರೆ ನನಗಂತೂ ಹತ್ತುವುದು ಅಸಾಧ್ಯವಾಗಿತ್ತು. ಅಲ್ಲಿಂದ ಅನತಿ ದೂರದಲ್ಲಿ ಬಂಡೆಯ ತುದಿಯೂ, ಅಲ್ಲಿ ಗಿರಿಗಂಗಾಧರೇಶ್ವರ ದೇವಸ್ಥಾನವೂ ಕಂಡಿತು.



ಅದರ ಎದುರಲ್ಲಿ ಒಬ್ಬ ಚರುಮುರಿ, ಮುಳ್ಳು ಸೌತೆ, ಮಜ್ಜಿಗೆ ನೀರು ಇತ್ಯಾದಿ ಮಾರುತ್ತಿದ್ದ. ಆತ ದಿನವೂ ಇಷ್ಟೆತ್ತರ ಹತ್ತಿ ಇವನ್ನೆಲ್ಲ ತರುತ್ತಿರಬಹುದೇ ಎಂದು ಯೋಚಿಸಿ ಅಚ್ಚರಿಯಾಯಿತು. ಇಲ್ಲೂ ಮಂಗಗಳಿಗೆ ಕೊರತೆಯಿರಲಿಲ್ಲ. ದೇವಸ್ಥಾನದ ಬಳಿ ಬಂದು ಉಪಟಳ ಕೊಡುವ ಮಂಗಗಳನ್ನು ಓಡಿಸಲು ಒಂದು ವಿಶಿಷ್ಟ ವಿಧಾನ ಉಪಯೋಗಿಸುತ್ತಿದ್ದುದನ್ನು ಇಲ್ಲಿ ನೋಡಿದೆ. ಒಂದು ಚಿರತೆಯ ಬೊಂಬೆಯನ್ನು ಒಬ್ಬ ಆಗಾಗ ದೇವಸ್ಥಾನದೊಳಗೊಂದ ತಂದು ಹೊರ ಭಾಗದಲ್ಲಿ ಇಡುತ್ತಿದ್ದ. ಅದನ್ನು ಕಂಡಾಕ್ಷಣ ಮಂಗಗಳು ಬಹು ದೂರ ಓಡಿ ಹೋಗುತ್ತಿದ್ದವು. ಮತ್ತೆ ಆತ ಅದನ್ನು ಒಳಗಿಟ್ಟು ಮಂಗಗಳು ಪುನಃ ಗುಂಪುಗೂಡಿದಾಗ ಹೊರತರುತ್ತಿದ್ದ. ಮಂಗಗಳನ್ನು ಓಡಿಸುವ ಮನುಷ್ಯನ ಮಂಗಬುದ್ಧಿ ನನಗೆ ತಮಾಷೆಯೆನಿಸಿತು.


(ಚಿರತೆ ಬೊಂಬೆಯನ್ನು ಒಳಗೆ ಒಯ್ಯುತ್ತಿರುವುದು)

ಬಂಡೆಯ ಮೇಲೆ ನಾವು ತಲುಪಿದಾಗ ಗಂಟೆ ಎರಡಕ್ಕೆ ಹತ್ತಿರವಾಗಿತ್ತು. ಆ ದಿನ ನಮ್ಮ ಅದೃಷ್ಟಕ್ಕೆ ಮೋಡ ಕವಿದಿದ್ದು ಬಿಸಿಲೇ ಇರಲಿಲ್ಲ. ಬಂಡೆಯ ಮೇಲೆ ice-cold ಗಾಳಿ ಜೋರಾಗಿ ಬೀಸುತ್ತಿತ್ತು. ಅಲ್ಲೇ ಕುಳಿತು ನಾವು ಹಲವಾರು ಫೋಟೋ ತೆಗೆದೆವು. ಮಂಗಗಳಿಗೆ ಹೆದರಿ ಆಹಾರ ತಾರದ ಕಾರಣ ಅಲ್ಲೇ ಚರುಮುರಿ ಕೊಂಡು ತಿನ್ನಬೇಕಾಯಿತು. ಎರಡು ಮೂರು ಲೋಟ ಮಜ್ಜಿಗೆ ನೀರೂ ಕುಡಿದೆವು. ಸಮಯ ಹೋಗಬೇಕೆಂದು ಸೂಚನೆ ಕೊಡುತ್ತಿದ್ದರೂ ಮನಸು ಕೇಳುತ್ತಲೇ ಇರಲಿಲ್ಲ. ಇನ್ನೊಂದು ಸ್ವಲ್ಪ ಹೊತ್ತು ಕೂತಿರಬೇಕು ಎನಿಸುತ್ತಿತ್ತು. ಬಂಡೆಯ ಮೇಲಿಂದ ಸುಮ್ಮನೇ ಕೆಳಗೆ ನೋಡುತ್ತ ಕುಳಿತುಕೊಳ್ಳುವುದು ಬಹಳ ಆನಂದ ನೀಡುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಮನಸನ್ನು ಇನ್ನು ಮರಳುವುದು ಒಳಿತು ಎಂದು ಸಮಾಧಾನಪಡಿಸಿ ಇಳಿಯಲು ಆರಂಭಿಸಿದೆವು.

ಇಳಿಯುವಿಕೆ ನಾವು ಯೋಚಿಸಿದಷ್ಟು ಸುಲಭವಾಗಿರಲಿಲ್ಲ. ನಾನು ಹಾಕಿದ ಸಾದಾ ಚಪ್ಪಲಿ ಹತ್ತುವಾಗ ಏನೂ ತೊಂದರೆ ಕೊಡದಿದ್ದರೂ ಇಳಿಯುವಾಗ ಬಹುವಾಗಿ ಕಾಡಿತು. ಇಳಿಜಾರಿನಲ್ಲಿ ಇಳಿಯುವಾಗ ಕಾಲು ಜಾರುವುದರಿಂದ ಚಪ್ಪಲಿಯ ಎದುರಿನ ಪಟ್ಟಿ ಮೊದಲ ಎರಡು ಬೆರಳುಗಳ ನಡುವೆ ನೋಯುವಷ್ಟು ಒತ್ತಡ ಹಾಕುತ್ತಿತ್ತು. ಅದಲ್ಲದೆ ಇಳಿಯುವಾಗ ಪಾದಗಳು ನಡುಗುತ್ತಿದ್ದವು. ನಡುಗುತ್ತಿರುವ ಪದಗಳಲ್ಲಿ ಹಿಡಿತವಿಲ್ಲದ ಚಪ್ಪಲಿ ಹಿಡಿಯುವುದು ಬಹಳ ತ್ರಾಸದಾಯಕವಾಗಿತ್ತು. ಇಳಿಯುತ್ತಾ ಪುನಃ ಒಳಕಲ್ಲು ತೀರ್ಥಎದುರಾಯಿತು. ಅಲ್ಲಿ ಈಗ ಲೈಟ್ ಹಾಕಿದ್ದರು. ತಲೆಗೆ ನಾಲ್ಕು ರೂಪಾಯಿಯಂತೆ ಕೊಟ್ಟು ಗುಹೆಯಂತಿದ್ದ ಬಂಡೆಯ ಒಳ ಹೊಕ್ಕೆವು. ಸುಮಾರು ಹತ್ತು ಅಡಿ ದೂರದ ವರೆಗೆ ಒಂದಡಿ ನೀರು ತುಂಬಿದ್ದ ಹಾದಿಯಲ್ಲಿ ನಡೆದಾಗ ದೇವರ ಎರಡು ಮೂರ್ತಿಗಳು ಕಂಡವು. ಮೂರ್ತಿಗಳ ಹಿಂದೆ ಎಡಕ್ಕೆ ಬಂಡೆಯಲ್ಲಿ ಒಂದು ಕೊಳವೆಯಂತಹ ಆಳದ ತೂತು ಇದ್ದು ಅದರೊಳಗೆ ಅನೇಕರು ಕೈ ಹಾಕುತ್ತಿದ್ದರು. ನಾನು ಅದರತ್ತ ಗಮನ ಕೊಡದೆ ಮುಂದುವರಿದೆ. ಕೃಷ್ಣನಿಗೆ ಅದರೊಳಗೆ ಕೈ ಹಾಕಿದಾಗ ನೀರು ಸಿಕ್ಕಿತಂತೆ. ಅಲ್ಲಿಂದ ಬಂದ ಮೇಲೆ ಬಂಡೆಯೊಳಗೆ ತೀರ್ಥ ಸಿಗುವುದು ಶುಭವೆಂದೂ, ನೀರನ್ನು ಮುಟ್ಟಿದವರು ಅದೃಷ್ಟವಂತರೆಂದೂ ನಂಬಿಕೆಗಳಿವೆ ಎಂದು ಒಬ್ಬರು ಹೇಳಿದರು. ನಾನೂ ಪ್ರಯತ್ನಿಸಬಹುದಿತ್ತು ಎಂದು ಆಗ ಬಹುವಾಗಿ ಅನಿಸಿತು.

ಗುಡ್ಡದ ಮೇಲಿಂದ ತಳ ತಲುಪಲು ನಮಗೆ ಒಂದು ಗಂಟೆ ಹಿಡಿಯಿತು. ಬಂಡೆಯನ್ನು ಹತ್ತುತ್ತಾ ಇಳಿಯುತ್ತಾ ಅನೇಕ ಸ್ಥಳೀಯರು ಸಿಗುತ್ತಿದ್ದರು. ಇವರು ಏನೂ ಮುಜುಗರವಿಲ್ಲದೆ ದುಡ್ಡು ಕೇಳುತ್ತಿದ್ದರು. ನಾವು ಹೀಗೇ ಅಲ್ಲಲ್ಲಿ ದುಡ್ಡು ಕೇಳಿದವರಿಗೆ ಒಂದೈದು ರುಪಾಯಿ ಕೊಡುತ್ತಾ ಕೆಳ ಬಂದಾಗ ಮೂವತ್ತೈದು ರೂಪಾಯಿ ಖಾಲಿಯಾಗಿತ್ತು!

ಅಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿ ಕೊಳವೊಂದಿತ್ತು. ಅದರ ಹತ್ತಿರ ಹೋಗಿ ನೋಡಿದರೆ ದೂರದಿಂದ ಕಂಡ ಸೌಂದರ್ಯವೇ ಇರಲಿಲ್ಲ. ಕೊಳದ ಮೂಲೆಗಳಲ್ಲಿ ಪ್ಲಾಸ್ಟಿಕ್ ಮತ್ತು ಕಸ ಜಮೆಯಾಗಿತ್ತು. ಬೆಟ್ಟ ಹತ್ತುವಾಗಲೂ ಕಸಕ್ಕೆ, ಪ್ಲಾಸ್ಟಿಕ್ ಬಾಟಲಿಗಳಿಗೆ ಕೊರತೆಯಿರಲಿಲ್ಲ. ಎಲ್ಲೆಲ್ಲಿ ಕಸ ಎಸೆಯಬಾರದೆಂಬ ಬೋರ್ಡ ಇತ್ತೋ ಅವನ್ನು ಅಣಕಿಸುವಂತೆ ಅಲ್ಲೇ ಕಸ ರಾಶಿ ಬಿದ್ದಿತ್ತು. ಜನರಿಗೆ ಯಾವಾಗ ಬುದ್ಧಿ ಬರುವುದೋ ಎಂದು ಬೇಸರಿಸಿಕೊಂಡೆ. ನಾವು ಸ್ವಲ್ಪ ಹೊತ್ತು ಅಲ್ಲೇ ಅತ್ತಿತ್ತ ಅಡ್ಡಾಡಿದೆವು. ಹತ್ತಿರದಲ್ಲಿ ಕೆಲವು ಹೊಲಗಳಿದ್ದವು. ನಾನು ಮೊದಲ ಬಾರಿಗೆ ಕ್ಯಾಬೇಜಿನ ಹೊಲ ನೋಡಿದೆ. ಅನತಿ ದೂರದಲ್ಲಿ ಪ್ರವಾಸಿಗಳ ಉಪಯೋಗಕ್ಕೆ pay and use toilets ಇರುವುದು ಕಂಡಿತು. ನಮಗೆ ಹಸಿವೆಯಾಗಲಾರಂಭಿಸಿತ್ತು. ಚಿಕ್ಕ ಹಳ್ಳಿಯಂತಿದ್ದ ಆ ಜಾಗದಲ್ಲಿ ಊಟಕ್ಕೆ ಸರಿಯಾದ ವ್ಯವಸ್ಥೆಯೇನೂ ಕಾಣಿಸಲಿಲ್ಲ. ಡಾಬಸ್ ಪೇಟೆಯ ಕಾಮತ್ ಉಪಚಾರವೇ ಗತಿ ಎಂದು ಅನ್ನಿಸಿತು. ಹಾಗೇ ಗುಡ್ಡವನ್ನು ನೋಡುತ್ತಾ ಮರಳಿ ಹೊರಟೆವು.









ಡಾಬಸ್ ಪೇಟೆಯ ಕಾಮತ್ ಉಪಚಾರದ ಬಳಿ ಬಂದಾಗ ನಾಲ್ಕು ಗಂಟೆಯಾಗಿತ್ತು. ಅಲ್ಲಿ ದೋಸೆಗಳು ಮತ್ತು ಇಡ್ಲಿ-ವಡೆ ಮಾತ್ರ ಇತ್ತು. ಊರ ಹೊರಗಿನ ಹೋಟೆಲು, ಪ್ರವಾಸಿಗಳಿಂದ ಮಾತ್ರ ನಡೆಯ ಬೇಕಿದ್ದಂತೆ ಕಾಣುತ್ತಿದ್ದ ಕಾಮತ್ ಉಪಚಾರದಿಂದ ನಮಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಇಷ್ಟರವರೆಗೆ ರಾಗಿ ದೋಸೆ ತಿಂದಿರದ ನಮಗೆ ಅದರ ರುಚಿ ನೋಡೋಣ ಎನಿಸಿತು. ರವಾ ದೋಸೆಯಂತೆ ತಯಾರಿಸಿದ್ದ ರಾಗಿ ದೋಸೆ ನಿರೀಕ್ಷೆಯನ್ನು ಮೀರಿ ಚೆನ್ನಾಗಿತ್ತು. (ಆ ನಂತರ ನಾನು ಬೇರೆ ಕಡೆ ರಾಗಿ ದೋಸೆ ತಿಂದಿದ್ದರೂ ರುಚಿ ಅಂಥಾ ಅದ್ಭುತವಿರಲಿಲ್ಲ). ಅದರ ನಂತರ ಮಸಾಲೆ ದೋಸೆ ತರಹೇಳಿ, ಅದು ಬಲು ಉಪ್ಪಾಗಿದ್ದು, ಏಕೆ order ಮಾಡಿದೆನೋ ಎಂದುಕೊಂಡು ತಿಂದದ್ದು ಬೇರೆ ವಿಚಾರ.

ಅಲ್ಲಿಂದ ಮತ್ತೊಮ್ಮೆ NICE road ಹಿಡಿದು ವೇಗವಾಗಿ ಮನೆಯತ್ತ ಸಾಗಿದೆವು. ಸೂರ್ಯ ಕಂತಿ, ದೂರದಿಂದ ಕಾಣುತ್ತಿದ್ದ ಬೆಂಗಳೂರಿನ ಒಂದು ಪಾರ್ಶ್ವದಲ್ಲಿ ದೀಪಗಳು ಉರಿಯಲಾರಂಭಿಸಿದವು. ಒಂದು ಸುಂದರ ಪ್ರಯಾಣ ಕೊನೆಮುಟ್ಟುತ್ತಲಿತ್ತು. ಶಿವಗಂಗೆ ಹಾಗೂ ಅಂತಹಾ ಸ್ಥಳಗಳಿಗೆ ಆಗಾಗ ಹೋಗುತ್ತಾ ಇರಬೇಕು ಎನಿಸುತ್ತಿತ್ತು. ಹಾಗೇ ದಿನವನ್ನು ಮೆಲುಕು ಹಾಕುತ್ತಾ ಸೀಟಿಗೆ ಒರಗಿದೆ. ಮನೆಯಲ್ಲಿ ಮಾಡಲಿದ್ದ ಕೆಲಸಗಳು ನೆನಪಾಗತೊಡಗಿದವು. ಮರುದಿನ ಬರಲಿದ್ದ ನನ್ನ ಸಂಬಂಧಿಯೊಬ್ಬಳಿಗೆ ಏನು ಅಡುಗೆ ತಯಾರಿಸುವುದು ಎಂದು ಯೋಚಿಸುತ್ತಾ ಗಾಳಿಗೆ ಮುಖವೊಡ್ಡಿ ಕೂತೆ.
-

Monday, October 18, 2010

ಕಷ್ಟವಿಲ್ಲದಿದ್ದರೆ ಖುಷಿ ಪಡಿ

ಆಫೀಸಿನಲ್ಲಿ ಬಹು ದಿನಗಳ ನಂತರ ಇಷ್ಟದ ಕೆಲಸ ಮಾಡುತ್ತಿದ್ದೆ. ನಾನು ಬರೆಯುತ್ತಿದ್ದ program ಗೆ ನಾನು ಬಳಸುತ್ತಿದ್ದ programming language ಬೇಕಾದಷ್ಟು API ಗಳನ್ನು ಕೊಟ್ಟು ನನ್ನ ಕೆಲಸ ಸುಲಭ ಮಾಡಿತ್ತು. (API = ನಾವು computer ಜೊತೆ ವ್ಯವಹರಿಸಲು ಸುಲಭವಾಗಲು ಅದಕ್ಕೆ ಸಂಬಂಧ ಪಟ್ಟ ಕೆಲವು ಸೂಚನೆಗಳು ಮೊದಲೇ ಲಭ್ಯವಿರುತ್ತವೆ. ನಾವು ಅದನ್ನು ಬಳಸಿ ಆ ಯಂತ್ರದ ಬಗೆ್ಗೆ ಬೇಕಾದ ಮಾಹಿತಿ ಪಡೆದು ನಮ್ಮ program ರಚಿಸಬಹುದು). ಹಾಗೇ ಟೈಪ್ ಮಾಡುತ್ತಾ "ಆಹಾ... ಇದರಲ್ಲಿ program ಬರೆಯುವುದೆಂದರೆ ಆಟವಾಡಿದಂತಾಗುತ್ತದೆ" ಎಂದು ಖುಷಿಯಿಂದ ಉದ್ಗರಿಸಿದೆ. ನನ್ನ ಪಕ್ಕ ಕುಳಿತಿದ್ದಾತ ಅದನ್ನು ಕೇಳಿ "ಹೌದೌದು... ನಿನ್ನ ಕೆಲಸ ಕಷ್ಟವಿಲ್ಲದೆ ನಡೆಯುತ್ತಿದ್ದರೆ ಖುಷಿ ಆಗದೆ ಇನ್ನೇನು" ಎಂದ. ನನಗೆ ನನ್ನ ಕೆಲಸ ಸುಲಭವಾಗಿದೆ ಎಂದು ಕೇಳಿದ ತಕ್ಷಣ ಮನಸಲ್ಲಿ ಸಿಟ್ಟು ಮಿಂಚಿದಂತಾಯಿತು. "ಯಾರು ಹೇಳಿದ್ದು? ತಾವು ಮಾಡುವ ಕೆಲಸ ಕಷ್ಟವೆಂದು ಬೇರೆಯವರದ್ದನ್ನು ಸುಲಭವೆನ್ನಬೇಕಿಲ್ಲ. ಎಲ್ಲರೂ ಅವರವರ ರೀತಿಯಲ್ಲಿ ಕಷ್ಟಪಡುತ್ತಾರೆ" ಎಂದೇನೋ ಹೇಳಿ ಸುಮ್ಮನಾದೆ. ಸಂಜೆ ಬಸ್ ನಲ್ಲಿ ಮನೆಗೆ ಹೋಗುವಾಗ ಬೆಳಗ್ಗಿನ ವಿಚಾರ ನೆನಪಿಗೆ ಬಂತು. ನನ್ನ ಕೆಲಸ ಸುಲಭವಿದೆ ಎಂದ ತಕ್ಷಣ ನನಗೆ ಸಿಟ್ಟು ಬಂದದ್ದು ಏಕೆ? ಕೆಲಸ ಸುಲಭವಿದೆ ಎಂದಾಗ ನನಗೆ ಕೀಳರಿಮೆಯೇಕೆ ಅನಿಸಿದೆ? ಕಷ್ಟವು ನನಗೆ ಇಷ್ಟವಾಗಿದೆಯೇ? ಕೆಲಸ ಸುಲಭವಾದರೆ ಸಂತೋಷವಾಗಬೇಕು ತಾನೇ? ಯೋಚನೆಗಳು ಸುಳಿದಾಡಿದವು.

ಏಳೆಂಟು ವರ್ಷಗಳ ಹಿಂದೆ ನಾನು engineering ವಿದ್ಯಾರ್ಥಿಯಾಗಿದ್ದೆ. ಆಗ ಅನೇಕರು electronics engineering ಬಲು ಕಷ್ಟ, civil engineering ಅಂತೂ ಕಬ್ಬಿಣದ ಕಡಲೆ, computer engineering ಸುಲಭ ಎಂದೆಲ್ಲ ತೋಚಿದಂತೆ ಮಾತನಾಡುತ್ತಿದ್ದರು. ನನಗೆ ಆಗ ಸಿಟ್ಟು ಬರುತ್ತಿತ್ತು. ನನ್ನಂತೆ ಅನೇಕ ಸಹಪಾಠಿಗಳಿಗೂ ಸಿಟ್ಟುಬರುತ್ತಿತ್ತು. ನಾವೆಲ್ಲ "computer engineering ಸುಲಭವಿಲ್ಲವೇ ಇಲ್ಲ" ಎಂದು ವಾದಕ್ಕಿಳಿಯುತ್ತಿದ್ದೆವು. ಸುಲಭವೆಂದರೆ ತೊಂದರೆಯೇನಿತ್ತು ಎಂದು ನನಗೆ ಈಗ ಅನಿಸುತ್ತದೆ. ಕಬ್ಬಿಣದ ಕಡಲೆ ಜಗಿದು ಹಲ್ಲು ಮುರಿದುಕೊಳ್ಳುವುದಕ್ಕಿಂತ ಬೆಣ್ಣೆ ಮೆಲ್ಲುವುದರಲ್ಲಿ smartness ಇಲ್ಲವೇ? ಕಷ್ಟದ ವಿಷಯ ಆರಿಸಿ ಸೋಲುವುದರಿಂದ ನಾನು ಪಾರಾಗಿದ್ದೇನೆ ಎಂಬುದನ್ನು ನಾನು ಜಾಣ್ಮೆಎಂದು ಪರಿಗಣಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ಆಶ್ಚರ್ಯಪಡುತ್ತೇನೆ.

ಬಹುಶಃ ನಮಗೆ ಕಷ್ಟ ಅನುಭವಿಸಲು ಇಷ್ಟವಿದೆ. ಕಷ್ಟ ಪಟ್ಟರೆ ನಾನು great ಆಗುತ್ತೇನೆ ಎಂಬ ಭಾವನೆ ಮನಸಿನೊಳಗೆಲ್ಲೋ ಬೇರೂರಿಬಿಟ್ಟಿದೆ. ಯಾಕೆ? ಹೇಗೆ? ಗೊತ್ತಿಲ್ಲ. ಹೆಚ್ಚಿನ ವ್ಯಕ್ತಿಗಳ ಮನದೊಳಗೆ ಅರಿವೇ ಇರದಂತೆ ಈ ಭಾವನೆ ಅಡಗಿ ಕೂತಿದೆ. ಅದಕ್ಕೇ ನಮಗೆ ಸಂತೋಷ ಅನುಭವಿಸಲು ಹಿಂಜರಿಯುವ ಜನರು ಕಾಣುತ್ತಾರೆ. ಅಂಗಡಿಯಲ್ಲಿ ಕಿಕ್ಕಿರಿದು ಗಿರಾಕಿಗಳು ತುಂಬಿದ್ದರೂ "ವ್ಯಾಪಾರ ಏನೂ ಚೆನ್ನಾಗಿಲ್ಲ" ಎಂದು ಸದಾ ಗೋಳಾಡುವ ವ್ಯಾಪಾರಿಗಳನ್ನು ನಾನು ನೋಡಿದ್ದೇನೆ. "ಕಷ್ಟ ಪಟ್ಟು" ಜೀವನದಲ್ಲಿ ಮೇಲೆ ಬಂದವನನ್ನು ಜನರು ನೋಡುವ ಪರಿಗೂ "ಕಷ್ಟ ಪಡದೆ" ಮೇಲೆ ಬಂದವನನ್ನು ನೋಡುವ ಪರಿಗೂ ಬಹಳ ವ್ಯತ್ಯಾಸ ಕಾಣುತ್ತದೆ. "ಪಾಪ ಕಷ್ಟದಲ್ಲಿದ್ದಾರೆ" ಎನ್ನುವಾಗ ಕನಿಕರ ಪಡುವ ಹೃದಯ ಸುಖದಲ್ಲಿದ್ದವರನ್ನು ಕಂಡಾಗ ಸಂತಸಪಡುವುದಿಲ್ಲ. ಬೀದಿ ದೀಪದಡಿ ಓದಿ ಡಿಗ್ರಿ ಪಡೆದವ IIMನಲ್ಲಿ MBA ಮಾಡಿದವನ ಮುಂದೆ star ಆಗಿ ಕಾಣುತ್ತಾನೆ. ಯಾಕೆ?

ನಮ್ಮ ಮಕ್ಕಳು ಕಷ್ಟಪಡುವ ಪರಿಸ್ಥಿತಿ ಬರಬಾರದೆಂದು ನಾವೆಲ್ಲರೂ ಬಯಸುತ್ತೇವೆ. ಮುಂದೆ ಕೆಲ ಸಂದರ್ಭಗಳಲ್ಲಿ ಇತರನ್ನು "ಕಷ್ಟಗಳು ಏನೆಂದೇ ಗೊತ್ತಿಲ್ಲ" ಎಂದು ಮೂದಲಿಸುತ್ತೇವೆ. ಆದರೆ ಕಷ್ಟಗಳು ಗೊತ್ತಾಗಬಾರದೆನ್ನುವುದು ನಮ್ಮದೂ ಬಯಕೆಯಾಗಿರಲಿಲ್ಲವೇ? ನಮ್ಮ ನೆಂಟರೊಬ್ಬರು "ನಮ್ಮ ಬಳಿ ಬೇಕಾದಷ್ಟು ಅನುಕೂಲ (ಹಣ) ಇದೆ." ಎಂದು ಹೇಳುತ್ತಿರುತ್ತಾರೆ. ಅವರನ್ನು ನೋಡಿದವರು ಮೆರೆದಾಟ, ಜಂಭ ಕೊಚ್ಚಿಕೊಳ್ಳುವುದು ಎಂದು ಭಾವಿಸುತ್ತಾರೆ. ಅದೇ ಎಷ್ಟೋ ಜನ "ನಾವು ಬಹಳ ಕಷ್ಟದಲ್ಲಿದ್ದೇವೆ" ಎಂದಾಗ ಕಷ್ಟವನ್ನು "ಕೊಚ್ಚಿಕೊಳ್ಳುವುದು" ಎಂದು ಭಾವಿಸುವುದೇ ಇಲ್ಲ. ಏಕೆಂದರೆ ಕಷ್ಟ ನಮಗೆಲ್ಲ ಬಲು ಪ್ರಿಯ. ನಮ್ಮದಾಗಲೀ ಇತರರದ್ದಾಗಲೀ ಕಷ್ಟವೆಂದರೆ ಎಲ್ಲರಿಗೂ ಇಷ್ಟ. ಕಷ್ಟ ಪಟ್ಟು ಪಡೆದುದರ ಬಗ್ಗೆ ಯಾವತ್ತೂ ಹೆಮ್ಮೆ. ಹಾಗಾದರೆ ನಾವು ಸುಖಪಡುವುದು ಯಾವಾಗ?

ಯೋಚನೆ ಓಡುತ್ತಿದ್ದರೆ ಬಸ್ ನಿಲ್ದಾಣ ಬಂತು. ನೂಕು ನುಗ್ಗಲನಲ್ಲಿ ಇನ್ನೊಂದು ಬಸ್ ಹತ್ತಿ ಕಷ್ಟಪಟ್ಟು... ಅಲ್ಲಲ್ಲ ಖುಷಿಯಿಂದಲೇ ಸೀಟು ಹಿಡಿದೆ. ಮನೆ ತಲುಪುವವರೆಗೆ ಪುನಃ ಯೋಚನೆಯಲ್ಲಿ ಮುಳುಗಿದೆ. ಕಷ್ಟವಾದರೇನು ಸುಲಭವಾದರೇನು? ನಾವು ಮಾಡುವ ಕೆಲಸ ನಮಗೆ ಖುಷಿ ಕೊಡಬೇಕು ಅನಿಸಿತು. ಆಗ ಅಲ್ಲಿ ಕಷ್ಟವಿದ್ದರೂ ಹಾಗೆ ಅನಿ್ನಸುವುದಿಲ್ಲ. ಕಷ್ಟದ ವೈಭವೀಕರಣವಾಗಲೀ, ಸುಲಭದಿಂದ ಪಡೆದುದರ ಬಗ್ಗೆ ಕೀಳರಿಮೆಯಾಗಲೀ ಅಲ್ಲಿ ಉಂಟಾಗುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾದುದು ಖುಷಿಯಲ್ಲವೇ? ಖುಷಿ ಸಿಕ್ಕಾಗ ಅನುಭವಿಸಲೇನು ಕಷ್ಟ?
-

Thursday, October 7, 2010

ನಾನು

ಈ ಬ್ಲಾಗು ಆರಂಭಿಸಿದಾಗ ನಾನು ಅನಾಮಿಕಳಾಗಿರಬೇಕೆಂದು ಬಯಸಿದ್ದೆ. ನನ್ನ ಬರಹಗಳಿಗೆ ಪ್ರತಿಕ್ರಿಯೆ ಬರೆಯುವವರು ನನ್ನ ಪರಿಚಿತರಾಗಿದ್ದರೆ ಪ್ರತಿಕ್ರಿಯೆ ಬೇರೆ ರೀತಿ ಇದ್ದೀತು ಎಂದು ಯೋಚಿಸಿದ್ದೆ. ನನ್ನ ಸಂಬಂಧಿಗಳಿಗೆ ನನ್ನ ಬರಹಗಳನ್ನು ಓದುವ ಅವಕಾಶವಿದ್ದರೆ ನಾನು ಬರಹಗಳಲ್ಲಿ ಜಾಗರೂಕತೆಯಿಂದ ವರ್ತಿಸಬೇಕಾದೀತೆಂದು ಹೆದರಿದ್ದೆ.
ಬ್ಲಾಗಿಗೆ ಮೂರು ವರುಷ ತುಂಬುವುದಕ್ಕೆ ಬಂದಿದೆ. ಈಗ ಅನೇಕ ಸಂಬಂಧಿಕರು, ಮಿತ್ರರು, ಪರಿಚಿತರು ಇದನ್ನು ಓದುತ್ತಾರೆ. ಜೊತೆಗೆ ಪರಿಚಿತರಲ್ಲದವರೂ ಓದಿ ಪ್ರತಿಕ್ರಿಯೆ ಬರೆದು ಪರಿಚಿತರಾಗಿದ್ದಾರೆ. ಬ್ಲಾಗು ನನ್ನದೆಂದು ಗೊತ್ತಾದ ಮೇಲೂ ಓದಲು ಆಸಕ್ತಿ ತೋರಿಸದ ಕೆಲ ಬಂಧುಗಳು ಇದ್ದಾರೆ. ಇಷ್ಟು ಸಮಯದ ನಂತರ ನಾನು ಅನಾಮಿಕಳಾಗಿರುವ ಬಯಕೆ ಅರ್ಥಹೀನವೆನಿಸುತ್ತದೆ.
ಹಾಗಾಗಿ ನನ್ನ ನಿಜ ಹೆಸರು ಹಾಕುತ್ತಿದ್ದೇನೆ. ನನ್ನ ಹೆಸರು ಸಿಂಧೂ. ಇತಿಹಾಸದಲ್ಲಿ ಅತ್ಯಂತ ಆಸಕ್ತಿ ಇರುವ ನನ್ನ ತಂದೆಯವರು ಪ್ರೀತಿಯಿಂದ ಆರಿಸಿದ ಹೆಸರು. ಹಾಗಾದರೆ ಚೈತ್ರಿಕಾ ಎಂಬ ಹೆಸರು ಎಲ್ಲಿಂದ ಸಿಕ್ಕಿತೆಂದು ಆಶ್ಚರ್ಯವೇ? ಅದೂ ನನ್ನದೇ ಹೆಸರು. ನನಗೆ ಇಡದ ಹೆಸರು. ಪೂಜೆ, ದೇವರ ಸಮಾರಂಭಗಳನ್ನು ನಡೆಸಿಕೊಡುವ ಭಟ್ಟರು ಸೂಚಿಸಿದ ಹೆಸರು ಅದು. ನನಗೆ ಚೈತ್ರಿಕಾಳಾಗಿಯೇ ಬ್ಲಾಗಿನಲ್ಲಿರಬೇಕೆಂಬ ಆಸೆಯಾದರೂ ನಿಜ ಹೆಸರು ಕಳೆದುಹೋದರೆ ಎಂದು ಒಮ್ಮೊಮ್ಮೆ ಅನಿಸಿದ್ದಕ್ಕೆ ಇಲ್ಲಿ ಬರೆದಿದ್ದೇನೆ. ನನ್ನ ಹೆಸರು ಏನೇ ಆದರೂ ಓದುವವರಿಗೆ ಅದು ಮುಖ್ಯವಲ್ಲ ಎಂದೂ ಭಾವಿಸಿದ್ದೇನೆ.
-

Monday, September 27, 2010

ಭಾನುವಾರದ ಟೈಂಪಾಸ್

ನಿನ್ನೆ ಭಾನುವಾರ ನನ್ನ ಅತ್ತಿಗೆ(ನಾದಿನಿ)ಗೆ ಒಂದು ಪರೀಕ್ಷೆ ಬರೆಯಲಿದ್ದ ಕಾರಣ ಅವರು ಪತಿ ಸಮೇತರಾಗಿ ಶನಿವಾರ ಮನೆಗೆ ಬಂದಿದ್ದರು. ಎಂ. ಎಸ್. ರಾಮಯ್ಯ ಕಾಲೇಜಿನಲ್ಲಿ ಹನ್ನೊಂದು ಗಂಟೆಗೆ ನಡೆಯಲಿದ್ದ ಪರೀಕ್ಷೆಗೆ ನಾವು ಒಂಭತ್ತು ಗಂಟೆಯೊಳಗಾಗಿ ಮನೆ ಬಿಡಬೇಕಿತ್ತು. ಏನೂ ಎಡವಟ್ಟಾಗದಂತೆ ಆರೂವರೆಗೆ ಎದ್ದ ನಾನು ಇಡ್ಲಿ ಬೇಯಲು ಇಟ್ಟು, ಸಾಂಬಾರಿಗೆ ತರಕಾರಿ ಬೇಯಲು ಇಟ್ಟು ಸುಮ್ಮನೆ ಕೂತೆ. ನಿದ್ದೆಯ ಜೊಂಪು ಹತ್ತಿತು. 5... 10... 15... 20... 30 ನಿಮಿಷ ಕಳೆದಾಗ ಕೃಷ್ಣನನ್ನು(ನನ್ನ ಪತಿ) ಸುಟ್ಟ ವಾಸನೆ ಬಡಿದೆಬ್ಬಿಸಿರಬೇಕು. "ಏ ಒಲೆಮೇಲೆ ಎಂತದ್ದು?" ಎಂದರು. ನಾನು ದಡಬಡ ಎದ್ದು ಓಡಿ ನೋಡಿದರೆ ತರಕಾರಿ ಸೀದು ತಳಕ್ಕಂಟಿದ್ದಲ್ಲದೆ ಪಾತ್ರೆಯ ತಳದಲ್ಲಿ ನೇರಳೆ ಬಣ್ಣದ ಶಾಶ್ವತ ಉಂಗುರ ಮೂಡಿತ್ತು. ಅತ್ತಿಗೆ ಮಾಡಿದ ಪುಣ್ಯವಿರಬೇಕು. ಇಡ್ಲಿ ಸರಿ ಇತ್ತು. ಪುನಃ ಹೊಸದಾಗಿ ಸಾಂಬಾರು ಮಾಡಿ ತಿಂದು ಒಂಭತ್ತು ಗಂಟೆಗೆ ಮನೆ ಬಿಟ್ಟೆವು.

ಹತ್ತು ಗಂಟೆಗೆ ಎಂ. ಎಸ್. ರಾಮಯ್ಯ ಕಾಲೇಜು ತಲುಪಿಯಾಗಿತ್ತು. ಪರೀಕ್ಷಾ ಕೊಠಡಿ ಹುಡುಕಿ ಅದರ ಮುಂದೆ ಕುಳಿತಿರಬೇಕಾದರೆ ಅತ್ತಿಗೆ ಪುಸ್ತಕ ತೆರೆದರು. ನನಗೆ ಮಾಡಲು ಕೆಲಸವಿಲ್ಲ. ಜನರನ್ನು ನೋಡುತ್ತಾ ಕುಳಿತೆ. ಒಂದು ಮಹಿಳಾ ಗುಂಪು ತಮಗೆ ತೋಚಿದ ಪ್ರಶ್ನೋತ್ತರಗಳ ಕೊಡು-ಪಡೆಯುವಿಕೆ ನಡೆಸಿತ್ತು. ಇನ್ನೊಬ್ಬಳು ತಾನು ಉರುಹೊಡೆದುದನ್ನು ಪುನಃ ಹೇಳಿಕೊಳ್ಳುತ್ತಿರುವಂತಿತ್ತು. ಆಕೆ ಶೂನ್ಯ ದೃಷ್ಟಿಯಲ್ಲಿ ಮಾಡಿನ (ಛಾವಣಿ) ಮೂಲೆಯನ್ನು ನೋಡುತ್ತಾ ಉರುಹೊಡೆಯುತ್ತಿದ್ದರೆ ಅಲ್ಲೇ ಉತ್ತರಗಳು ಕಂಡಂತಿತ್ತು. ಮತ್ತೊಬ್ಬಳು ಲಿಪ್ ಸ್ಟಿಕ್ ಹಾಕಿ ಸಂಪೂರ್ಣ ಮೇಕಪ್ಪಿನೊಂದಿಗೆ ಪರೀಕ್ಷೆ ಬರೆಯಲು ಬಂದಿದ್ದಳು. ಒಬ್ಬರ ತಲೆಕೂದಲು ನೆಟ್ಟಗೆ ನಿಮಿರಿ ಕೆದರಿಕೊಂಡು ಚಾರ್ಜ್ ಆದ ಹಾಗೆ ಕಾಣುತ್ತಿದ್ದರು. ನನಗೆ ಪುನಃ ನಿದ್ದೆಯ ಜೊಂಪು ಹತ್ತುತ್ತಲಿತ್ತು. ಅಷ್ಟರಲ್ಲಿ ಪರೀಕ್ಷೆ ಆರಂಭವಾಗುವ ಗಂಟೆಯಾಯಿತು. ನಾವು ಮೂವರು ಅತ್ತಿಗೆಯನ್ನು ಬಿಟ್ಟು ಹೊರಬಂದೆವು.

ಎರಡು ಗಂಟೆ ಕಾಲಹರಣ ಮಾಡಬೇಕಿತ್ತು. ಎಲ್ಲಿ ಹೋಗುವುದು ಎಂದುಕೊಂಡಾಗ ಮಂತ್ರಿ ಸ್ಕ್ವೇರ್ ನೆನಪಾಯಿತು. ಅಲ್ಲಿಗೆ ಹೋದೆವು. ಏನೂ ಕಲ್ಪನೆ ಹೊತ್ತು ಮಂತ್ರಿ ಹೊಕ್ಕ ನನಗೆ ಅಷ್ಟೇನೂ ವಿಶೇಷತೆ ಗೋಚರಿಸಲಿಲ್ಲ. ದೊಡ್ಡ ಕಟ್ಟಡದಲ್ಲಿ ತುಂಬಿದ ಅನೇಕಾನೇಕ ಅಂಗಡಿಗಳಂತೆ ಕಂಡಿತು. ಮಾಲ್ ಹೊಕ್ಕರೆ ಬೇಡದ ವಸ್ತುಗಳೂ ಅಗತ್ಯವೆನಿಸುತ್ತವೆ. ಸಧ್ಯಕ್ಕೆ ಒಂದು ಪೆನ್ ಡ್ರೈವ್ ಅತ್ಯಗತ್ಯ ವಸ್ತುವೆನಿಸಿತು. ಅದನ್ನು ಕೊಂಡಾಗುವಾಗ ಹೊಟ್ಟೆಯೊಳಗೆ ಹಸಿವು ಕುಣಿತ ಆರಂಭಿಸಿತು. ಅಲ್ಲೇ ಪಾನೀಯದ ಅಂಗಡಿ ಕಂಡಿತು. ಬ್ಲೂ ಬೆರ್ರಿ, ಸ್ಟ್ರಾ ಬೆರ್ರಿ, ರಾಸ್ಪ್ ಬೆರ್ರಿ smoothie ಹೇಳಿದೆವು. ಲೋಟಗಳು ಬಂದಾಗ ಎಲ್ಲ ಒಂದೇ ಬಣ್ಣ. ಬರೀ contrast ವ್ಯತ್ಯಾಸ ಅಷ್ಟೇ. ರುಚಿ? ಹುಳಿ ವ್ಯತ್ಯಾಸ ಅಷ್ಟೇ. ಹಲ್ಲು ಮುರಿಯುವಷ್ಟು ತಂಪು. ಕಾಲು ಲೀಟರು ಇದ್ದಿರಬಹುದು. 280 ರೂಪಾಯಿ ತೆತ್ತ ಕರ್ಮಕ್ಕೆ ಮುಗಿಸಬೇಕಾಯಿತು. ಲೋಟ ಅರ್ಧ ತುಂಬಿದೆ ಎಂದರೆ ಧನಾತ್ಮಕ ಚಿಂತನೆಯಂತೆ. ನಮಗಂತೂ "ಇನ್ನೂ ಅರ್ಧ ಬಾಕಿ ಇದೆ" ಎಂಬುದು ಋಣಾತ್ಮಕವೇ ಆಗಿತ್ತು. ಈ ಪೇಯಗಳು ಕೆಲವರಿಗೆ ಇಷ್ಟವಾದೀತೇನೋ. ನಾನು ಈ ವಿಷಯದಲ್ಲಿ ಹಿಂದುಳಿದ ವರ್ಗಕ್ಕೆ (ಕಾಲಮಾನದ ಪ್ರಕಾರ) ಸೇರಿದ್ದೇನೆ.

ಸಮಯ ಮೀರಲಾರಂಭಿಸಿತ್ತು. ಪರೀಕ್ಷೆ ಮುಗಿಯುವ ಹೊತ್ತಿಗೆ ಎಂ. ಎಸ್. ರಾಮಯ್ಯ ತಲುಪಬೇಕಿತ್ತು. ಕೊನೆ ಮಹಡಿ ನೋಡಲಾಗಲಿಲ್ಲ. "ಮಂತ್ರಿ ಹೇಳುವಂಥಾ ವಿಶೇಷ ಕಾಣಲಿಲ್ಲ" ಎನ್ನುತ್ತಾ ನಾನು ಬರುತ್ತಿದ್ದರೆ parking area ದಲ್ಲಿ ಪೇಚಾಟಕ್ಕಿಟ್ಟುಕೊಂಡಿತು. parking ಚೀಟಿ ಕಾರಿನೊಳಗೇ ಉಳಿದಿತ್ತು. ನಿಲ್ಲಿಸಿದ ಜಾಗ ಎಷ್ಟು ಹುಡುಕಿದರೂ ಸಿಗದು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ನೋಡುತ್ತಿದ್ದರೆ ಕೃಷ್ಣ ನಾಪತ್ತೆ. ಅವನಿಗೆ ಫೋನ್ ಮಾಡಿದರೆ ನೆಟ್ ವರ್ಕ್ ಸಿಗದೆ call forward ಆಗಿ ನನ್ನ ಫೋನಿಗೇ ಬಂದು user busy ಎನ್ನುತ್ತಿತ್ತು. ಅಲ್ಲಿದ್ದ ಹಳದಿ ಸಮವಸ್ತ್ರಧಾರಿಯೊಬ್ಬನಲ್ಲಿ ಸಮಸ್ಯೆ ಹೇಳಿ ದಾರಿ ಕೇಳಿದೆವು. ಏನೋ ಒಂದು ಹೇಳಿ ಬೇರೆ ಕಡೆಗೆ ಹೋದ. ಅವನು ಹೇಳಿದ ಕಡೆ ಹೋದರೆ ಹೊರ ಹೋಗುವ ಮಾರ್ಗ ಕಂಡಿತು. ಸಿಟ್ಟು ಬಂದು ಬೈಯಬೇಕೆಸಿತು. ಆದರೆ ಅವನನ್ನೆಲ್ಲಿ ಹುಡುಕುವುದು? ಹತ್ತು ನಿಮಿಷ ಅಲೆದಾಡಿಯಾಗುವಾಗ ಕೃಷ್ಣ ನಡೆಯುತ್ತಿರುವುದು ಕಂಡಿತು. ಅತ್ತ ಓಡಿ ಇನ್ನೊಬ್ಬ ಹಳದಿ ಸಮವಸ್ತ್ರಧಾರಿಯನ್ನು ಸಹಾಯಮಾಡಲು ಕೇಳಿದೆವು. ಆತ ನಾವು ಬಂದ ಸಮಯ, ನಿಲ್ಲಿಸಿದ ಜಾಗದ ಅಕ್ಕ ಪಕ್ಕ ಏನಿತ್ತೆಂದು ಕೇಳಿ ಸರಿ ದಾರಿ ತೋರಿಸಿದ. ಸಧ್ಯ ಕಾರು ಸಿಕ್ಕಿತು. ಹೊರ ಬಂದಾಗ ಗಂಟೆ ಒಂದೂ ಕಾಲು ಆಗಿತ್ತು. ಎಂ. ಎಸ್. ರಾಮಯ್ಯ ತಲುಪಿದಾಗ ಅತ್ತಿಗೆ ಬಹಳ ಹೊತ್ತಿನಿಂದ ಕಾಯುತ್ತಿದ್ದರು. ಮಂತ್ರಿಯ parking areaದ ತಿರುಗಾಟದಲ್ಲಿ ಸಾಕು ಸಾಕಾಗಿತ್ತು. ಅತ್ತಿಗೆಯಲ್ಲಿ "ಮಂತ್ರಿ ಮಾಲ್ ಗೆ ಹೋಗಿದ್ದೆವು... parking lot ಸಿಕ್ಕಾಪಟ್ಟೆ ದೊಡ್ಡದಾಗಿದೆ" ಎಂದೆ.

ಅತ್ತಿಗೆ, ಅಣ್ಣ ಅಲ್ಲಿಂದಲೇ ತಮ್ಮ ಮನೆಗೆ ಹೊರಡಲನುವಾದರು. "ಸ್ವಲ್ಪ urgent ಇದೆ, ದಾರಿಯಲ್ಲಿ ಊಟ ಮಾಡಿಕೊಂಡು ಹೋಗುತ್ತೇವೆ" ಎಂದರು. ನಾನು ಪುನಃ ತರಕಾರಿ, ಪಾತ್ರೆ ಸುಟ್ಟು ಹಾಕುವುದು ಬೇಡವೆಂದೋ ಏನೋ; ಗೊತ್ತಾಗಲಿಲ್ಲ. ನಮಗೆ ನನ್ನ ದೊಡ್ಡಮ್ಮನ ಮನೆಗೆ ಸಾಮಾನೊಂದನ್ನು ತಲುಪಿಸುವ ಕೆಲಸವಿತ್ತು. ಅಲ್ಲೇ ಊಟಕ್ಕೆ ಆಹ್ವಾನವೂ ಇತ್ತು. ಗಡದ್ದಾಗಿ ಬರ್ಫಿ, ದೊಣ್ಣೆ ಮೆಣಸಿನ (capsicum) ಭಾತ್, ಚಪಾತಿ, ಅಲೂ ಮಟರ್, ಅನ್ನ, ಸಾರಿನ ಊಟ ಮಾಡಿ ಮನೆಗೆ ಮರಳಿದೆವು.
-

Thursday, September 16, 2010

"Ladies seat" ನಿಂದ ಚಿಂತನಾಲಹರಿ...

ದಿನವೂ ಬಸ್ಸಿನಲ್ಲಿ ಕನಿಷ್ಟ ಎರಡು ಗಂಟೆ ಪ್ರಯಾಣಿಸುವ ನನ್ನನ್ನು "ಮಹಿಳೆಯರಿಗೆ" ಎಂದು ಬರೆದ ಫಲಕ ಆಗಾಗ ಚಿಂತನೆಗೆ ಹಚ್ಚುತ್ತದೆ. ನಮ್ಮೂರ ಕಡೆ (ದಕ್ಷಿಣ ಕನ್ನಡ) ಖಾಸಗಿ ಬಸ್ಸುಗಳೇ ಹೆಚ್ಚಾಗಿದ್ದು ಅಲ್ಲಿ ಈ Ladies seat ಫಲಕ ಅಷ್ಟಾಗಿ ಪ್ರಾಮುಖ್ಯ ಪಡೆದಿಲ್ಲ. ಕತ್ತಲ ವೇಳೆ ಪ್ರಯಾಣಿಸುತ್ತಿದ್ದಲ್ಲಿ ಅಥವಾ ಬೆರಳೆಣಿಕೆಯಷ್ಟೇ ಮಹಿಳೆಯರಿದ್ದರೆ ಈ ಸೀಟನ್ನು "ಕೇಳಿ ಪಡೆಯುವ" ಪ್ರಯತ್ನ ನಡೆಯುತ್ತದೆ. ಬೆಂಗಳೂರಲ್ಲಿ ಇದಕ್ಕೆ ವಿರುದ್ಧವಾದ ಪದ್ಧತಿ ಇರುವುದರಿಂದ ಮೊದಮೊದಲು ನನಗೆ ವಿಚಿತ್ರವೆನಿಸಿದ್ದು ಸಹಜ.

ಬೆಂಗಳೂರಿನಲ್ಲಿ ನಾನು ನೋಡಿದಂತೆ ಈ ಮಹಿಳಾ ಸೀಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಇವನ್ನು ಅನೇಕ ಮಹಿಳೆಯರು "ಹಕ್ಕು" ಎಂದು ಭಾವಿಸುವುದು ವಿಚಿತ್ರವೆನಿಸುತ್ತದೆ. ಹಲವರು ಸ್ವಲ್ಪವೂ ಸೌಜನ್ಯವಿಲ್ಲದಂತೆ "ಎದ್ದೇಳ್ರೀ... ಲೇಡೀಸ್ ಸೀಟೂ" ಎಂದು ದೊಡ್ಡ ಸ್ವರದಲ್ಲಿ ಹೇಳುವುದನ್ನು ನಾನು ಕೇಳಿದ್ದೇನೆ. ಬೆಂಗಳೂರಿಗೆ ಹೊಸಬಳಾಗಿದ್ದಾಗ ಸೀಟು ಬಿಟ್ಟುಕೊಟ್ಟವರಿಗೆ thanks ಹೇಳಿ ಅಕ್ಕ ಪಕ್ಕದವರಿಂದ ವಿಚಿತ್ರವಾಗಿ ನೋಡಿಸಿಕೊಂಡಿದ್ದೇನೆ. ಎಷ್ಟೋ ಸಲ ವಯಸ್ಸಾದವರನ್ನು, ಮುದುಕರನ್ನು "ಎದ್ದೇಳಿ" ಎಂದು ಚಿಕ್ಕ ಪ್ರಾಯದ, ಕೈ-ಕಾಲು ಗಟ್ಟಿ ಇರುವ ಹೆಂಗಸರು ತಮ್ಮ ಆರಾಮಕ್ಕೋಸ್ಕರ ಎಬ್ಬಿಸುವುದನ್ನು ನೋಡಿ ಮುಜುಗರ ಪಟ್ಟಿದ್ದೇನೆ. ಮಗು ಎತ್ತಿಕೊಂಡವರಿಗೂ ಜಾಗ ಕೊಡದೆ, ಕೆಲವರು ಮಗುವನ್ನು ತಾವೇ ಕೂರಿಸಿಕೊಳ್ಳುವ ಧಾರಾಳತನ ತೋರಿದ್ದನ್ನು ನೋಡಿದ್ದೇನೆ. ಇಷ್ಟೆಲ್ಲ ಆದಮೇಲೆ ನಿಜವಾಗಿ Ladies seat ಮೀಸಲಿಟ್ಟ ಉದ್ದೇಶವೇನು ಎಂಬ ಪ್ರಶ್ನೆ ಆಗಾಗ ಕಾಡಿದೆ. ಇದೇ ಪ್ರಶ್ನೆ ಪುನಃ ಕೇಳಿಕೊಳ್ಳುವ ಪ್ರಸಂಗ ನಿನ್ನೆ ಒದಗಿತು.
ನಾನು ಕೂತಿದ್ದ ಮೀಸಲಾತಿ ಸೀಟಿನ ಹಿಂದೆ ಕುಳಿತ ಸುಮಾರು ಐವತ್ತು ವರ್ಷ ಪ್ರಾಯದ ವ್ಯಕ್ತಿ ನಮ್ಮ ಸೀಟಿನ ನಡುವೆ ಕೈ ತೂರಿಸುವಂತಹ ಕೀಳು ಮಟ್ಟದ ಚೇಷ್ಟೆ ಮಾಡುತ್ತಿದ್ದ. ಎರಡು ಬಾರಿ ಬೈಸಿಕೊಂಡರೂ ಹಲ್ಲು ಕಿರಿತವೇ ಅವನ ಉತ್ತರ! ಮರುಕಳಿಸುವ ಉಪಟಳ! conductor ಸೇರಿದಂತೆ ಒಂದು ನರಪಿಳ್ಳೆಯೂ ಆತನಿಗೆ ಏನೂ ಅನ್ನಲಿಲ್ಲ. Ladies seat ನಲ್ಲಿ ಕೂತರೆ ಹೆಚ್ಚಿನ safety ಅಂತಾರೆಯೇ?

"Ladies" ಬೋರ್ಡ್ ಕಂಡಾಗ ನನ್ನ ಹಳೆಯ ಸಹೋದ್ಯೋಗಿಯೊಡನೆ ನಡೆದ ವಾಗ್ವಾದ ನೆನಪಾಗುತ್ತದೆ. ನಾನು ಸ್ತ್ರೀ ಪುರುಷ ಸಮಾನತೆಯಂತಹ ವಿಷಯಗಳ ಬಗ್ಗೆ ಯಾವತ್ತೂ ಆಸಕ್ತಿ ತೋರಿದ್ದಿಲ್ಲ. ಎಲ್ಲರೂ ಮನುಷ್ಯರು. ಕೆಲವರು ಪ್ರತಿಭಾವಂತರು, ಕೆಲವರು ತೀಕ್ಷ್ಣಮತಿಗಳು. ಕೆಲವರು ಬೇಜವಾಬ್ದಾರರು. ಇನ್ನು ಕೆಲವರು ಬೇಕಾಬಿಟ್ಟಿ ಬದುಕುವವರು. ಈ ಗುಣವಿಶೇಷಣಗಳಿಗೆ ಸ್ತ್ರೀ ಪುರುಷ ಭೇದವಿಲ್ಲ. ಅವಕಾಶ ವಂಚಿತರು, ಶೋಷಿತರು, ಕೆಲಸದ ಹೊರೆ ಹೊತ್ತವರು ಎಲ್ಲರಲ್ಲಿ ಇದ್ದಾರೆ. ಭೇದ ಮಾಡಲು ಇವೇನು ಬೇರೆ ಬೇರೆ ಪಂಗಡಗಳಲ್ಲ. co-operation, co-ordination ನಿಂದ ಬದುಕಬೇಕಾದವರು. ಇದು ನನ್ನ ಅನಿಸಿಕೆ. ಸ್ತ್ರೀ ಪುರುಷರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಶ್ರೇಷ್ಠ ಎಂಬ ವಾದವನ್ನು ನನಗೆ ಕೇಳಿದರಾಗದು. ಇಂಥದ್ದರಲ್ಲಿ ನನ್ನ ಸಹೋದ್ಯೋಗಿಯೊಬ್ಬರು ವಾದಕ್ಕಿಳಿದರು.
"ಎಲ್ಲರೂ ಸಮಾನರೆಂದು ತಿಳಿಯುವುದಾದರೆ ಬಸ್ ಗಳಲ್ಲಿ Ladies seat ಇರುವುದಕ್ಕೆ ಯಾಕೆ ಪ್ರತಿಭಟಿಸುತ್ತಿಲ್ಲ?"
"ಇಲ್ಲಿ ಸಮಾನತೆಯ ಪ್ರಶ್ನೆಯಿಲ್ಲ. ಬಸ್ ಗಳಲ್ಲಿ ಅಸಭ್ಯವಾಗಿ ವರ್ತಿಸುವ ಕೆಲವು ಮಂದಿ ಇರುತ್ತಾರೆ. ಅದಲ್ಲದೆ ಹೆಚ್ಚಾಗಿ ಮಹಿಳೆಯರಿಗೂ ಪುರುಷರಿಗೂ ಗುಂಪಿನಲ್ಲಿ ನಿಲ್ಲಲು ಅನನುಕೂಲವೆನಿಸುತ್ತದೆ. ಇದು ಅವರವರ ಪ್ರಾಕೃತಿಕ ಸ್ವಭಾವವಿರಬಹುದು. ಅಂತಹ ಸಂದರ್ಭಗಳನ್ನು ಕಡಿಮೆ ಮಾಡಲು ಸೀಟುಗಳನ್ನು ಮೀಸಲಿಟ್ಟಿರಬೇಕು" ಎಂದೆ.
ಆತ ನನ್ನ ವಾದವನ್ನು ಒಪ್ಪಲೇ ಇಲ್ಲವೆನ್ನುವುದು ಬೇರೆ ವಿಚಾರ.
ಅದೇ ಸಹೋದ್ಯೋಗಿಗೆ ಬಸ್ ಗಳಲ್ಲಿ ನಡೆಯುವ ಅಸಭ್ಯ ವರ್ತನೆಗಳನ್ನು ಹೇಳಿದಾಗ "ಮೀಸಲಿಟ್ಟ ಸೀಟು ಬಿಟ್ಟು ಬೇರೆಡೆ ಕೂತರೆ ಇಂತಹವು ಅನಿವಾರ್ಯ" ಎಂಬ ಆಶ್ಚರ್ಯಕರ ಹೇಳಿಕೆಯನ್ನೂ ನೀಡಿದ್ದರು.

ಈ ರೀತಿಯ ಮೀಸಲಾತಿಗಳಿಗೂ ಸಮಾನತೆ ಯಾ ಏಳಿಗೆಗೂ ನನಗೆ ಯಾವ ಸಂಬಂಧವೂ ಕಂಡುಬರುತ್ತಿಲ್ಲ.
Ladies seat ಮೇಲೆ ಹಕ್ಕು ಚಲಾಯಿಸಿದಂತೆ ಇನ್ನೂ ಕೆಲವೆಡೆ ಕೆಲವು ಮಹಿಳೆಯರು advantage ತೆಗೆದುಕೊಳ್ಳುವುದನ್ನು ನಾನ ಕಂಡಿದ್ದೇನೆ. ಊಟಕ್ಕೆ ಕಾದು ನಿಂತ ದೊಡ್ಡ ಸಾಲಿನಲ್ಲಿ "Ladies first" ಎಂದು ನಗುತ್ತಾ ಮುಂದೆ ಸೇರಿಕೊಳ್ಳುವವರನ್ನು ನೋಡಿದ್ದೇನೆ. ಹಸಿವು ಎಲ್ಲರಿಗೂ ಒಂದೇ ಅಲ್ಲವೇ? ಇಂತಹ ಸಂದರ್ಭಗಳನ್ನು ನೋಡಿ ಅನೇಕರು ಈ ನಡತೆಗಳನ್ನು ಸಾರ್ವತ್ರಿಕ ಎಂದು ಪರಿಗಣಿಸುತ್ತಾರೆ. Generalise ಮಾಡುತ್ತಾರೆ. ರಾತ್ರಿ ತಡವಾಗಿ ಆಫೀಸು ಬಿಡಲು ಬಯಸದ ಮಹಿಳೆಯರನ್ನು, ಬಸ್ ಗಳಲ್ಲಿ ಕಿರುಕುಳ ಅನುಭವಿಸುವವರನ್ನು ಸಮಾನತೆ, ಮೀಸಲಾತಿಗಳ ನೆಲೆಯಲ್ಲಿ ಪ್ರಶ್ನಿಸುತ್ತಾರೆ. biological differences ಅನ್ನು, ಅದಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಸಮಾನತೆ ನಿರ್ಧರಿಸುವಲ್ಲಿ ಗಣನೆಗೆ ತೆಗೆದುಕೊಳ್ಳಬಾರದು. ಇಲ್ಲಿ ಬದಲಾಗಬೇಕಿರುವುದು ಜನರ (ಮಹಿಳೆಯರೂ ಸೇರಿದಂತೆ) ದೃಷ್ಟಿಕೋನ. ಅಲ್ಲಿವರೆಗೆ Ladies seat ಆಗಲೀ ಮೀಸಲಾತಿ ಇರುವ ಯಾವುದೇ ಕ್ಷೇತ್ರವಾಗಲೀ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ.
-

Wednesday, July 28, 2010

ಸಂಸ್ಕೃತಿಯ ತುಣುಕುಗಳನ್ನು ಅರಸುತ್ತಾ...

(ಇದೊಂದು ಸ್ವಗತ. ಬರಹ ರೂಪದಲ್ಲಿ ಹಾಕೋಣ ಎನಿಸಿತು. ಇಲ್ಲಿ ಹಾಕಿದ್ದೇನೆ)

"ಸಂಸ್ಕೃತಿ" ಎಂದರೇನು? ಈ ಪ್ರಶ್ನೆ ಯಾವತ್ತೂ ನನನ್ನು ಕಾಡಿರಲಿಲ್ಲ. ಆಗ ನಾನು ಪಿ.ಯು.ಸಿ ಓದುತ್ತಿದ್ದೆ. ನಾನು ಆರಿಸಿಕೊಂಡ ಭಾಷೆ ಕನ್ನಡವಾಗಿತ್ತು. ಒಂದು ದಿನ ನಮಗೆ ಕನ್ನಡ ಕಲಿಸುತ್ತಿದ್ದ ಮೀನಾಕ್ಷಿ ಮೇಡಮ್ ಕಾ್ಲಸ್ ನಲ್ಲಿ ಒಂದು ಪ್ರಶ್ನೆ ಕೇಳಿದರು. "ಸಂಸ್ಕೃತಿ ಎಂದರೇನು?". ಕೆಲ ಕ್ಷಣಗಳ ಮೌನದ ನಂತರ ಕೆಲವು ಧ್ವನಿಗಳು ಕೇಳಿದವು. "ಮೇಡಮ್ ಬಳೆ ಹಾಕಿಕೊಳ್ಲೂದೂ..., ಬೊಟ್ಟು ಹಾಕಿಕೊಳ್ಳೂದೂ..." ,
"ಮೇಡಮ್ ಹೂವು, ಸೀರೇ..."
"ಕುಂಕುಮಾ...."
ಮೇಡಮ್ ನಕ್ಕರು. "ಸಂಸ್ಕೃತಿ ಎಂದರೆ ಅಷ್ಟೇಯಾ?... ಬಳೆ, ಬೊಟ್ಟು, ಹೂವು, ಸೀರೆ... ಹೂಮ್?" ಎಂದರು.
ಯಾರೂ ಮಾತನಾಡಲಿಲ್ಲ. "ಏನು ಸಂಸ್ಕೃತಿ ಎಂದರೆ?" ಇನ್ನೊಮ್ಮೆ ಕೂಗಿದರು. ಎಲ್ಲರೂ ಮೌನ. ಒಮ್ಮೆ ಮುಗುಳ್ನಕ್ಕು ಪಾಠ ಮುಂದುವರಿಸಿದರು. ನಾವು ಉತ್ತರಕ್ಕಾಗು ಕಾದೆವು. ಮೇಡಮ್ ಮಾತ್ರ ಅಂದು ಉತ್ತರ ಹೇಳಲೇ ಇಲ್ಲ. ಆದರೆ ನನ್ನ ತಲೆಯೊಳಗೆ ಆ ದಿನ ಅವರು ಹುಳ ಬಿಟ್ಟರು.
ನಾನು ಅನೇಕ ಬಾರಿ ಈ ಸಂದರ್ಭ ನೆನಪಾದಾಗ ಉತ್ತರ ಹುಡುಕಲು ಪ್ರಯತ್ನಿಸಿದೆ. ಈಗಲೂ ಹುಡುಕುತ್ತಿದ್ದೇನೆ. ಸರಿಯಾದ ಉತ್ತರ ಸಿಕ್ಕಿರದಿದ್ದರೂ ಕೆಲವು ಸಂಸ್ಕೃತಿಯ ತುಣುಕುಗಳು ಕಾಣಸಿಕ್ಕಿವೆ. ಆಗೆಲ್ಲ ಇದೇ "ಸಂಸ್ಕೃತಿ" ಇರಬೇಕು ಎಂದುಕೊಂಡು ಆ ತುಣುಕುಗಳನ್ನು ಆಯ್ದಿಡುತ್ತಿದ್ದೇನೆ.

1. ನಾವು ಚಿತ್ರದುರ್ಗಕ್ಕೆ ಹೊರಟ ದಿನ.
ಮೈಸೂರಿಂದ ಚಿಕ್ಕನಾಯಕನ ಹಳ್ಳಿ ತಲುಪಿದಾಗ ಎಲ್ಲರ ಹೊಟ್ಟೆಯೂ ಚುರುಗುಟ್ಟುತ್ತಿತ್ತು. ಈ ದಾರಿಯಲ್ಲಿ ಎಲ್ಲೂ ಸರಿಯಾದ ಹೋಟೆಲ್ ಗಳಿಲ್ಲ. ಚೆನ್ನಾಗಿರುವ Toilet ಇರುವ ಹೋಟೆಲ್ ಹುಡುಕುತ್ತ ಸಾಗಿದ್ದ ನಮಗೆ ಒಂದೂ ಹೋಟೆಲ್ ಸಿಗದ ಪರಿಸ್ಥಿತಿ ಎದುರಾಗಿತ್ತು. ಕೊನೆಗೆ ಚಿಕ್ಕನಾಯಕನ ಹಳ್ಳಿಯಲ್ಲಿ ಸುಮುಖ ರಿಫ್ರೆಶ್ ಮೆಂಟ್ಸ್ ಎಂಬ ಚಿಕ್ಕ ಹೋಟೆಲ್ ನಲ್ಲಿ ತಿಂಡಿತಿನ್ನಲು ಹೋದೆವು. ಅಲ್ಲಿಯ ಮಾಲಕನಲ್ಲಿ "ಈ ಪಕ್ಕದ ಮನೆ ನಿಮ್ಮದೇ?" ಎಂದಾಗ Toilet ಹುಡುಕುತ್ತಿದ್ದ ನಮ್ಮ ಸಮಸ್ಯೆ ಅವರಿಗೆ ಅರಿವಾಯಿತು. ಅವರು ತಕ್ಷಣ ಮುಂದೆ ಇದ್ದ ತಮ್ಮ ಮನೆಗೆ ಕರೆದೊಯ್ದು ಅವರ ಹೆಂಡತಿಯಲ್ಲಿ ಏನೋ ಹೇಳಿ ಹೋದರು. ಅವರ ಹೆಂಡತಿ ನಮಗೆ ಮುಖ-ಕೈ-ಕಾಲು ತೊಳೆದು ಫ್ರೆಶ್ ಆಗಲು ಬಿಸಿಬಿಸಿ ನೀರು ಕೊಟ್ಟರು. ಅದಲ್ಲದೆ ಒರೆಸಿಕೊಳ್ಳಲು ಬಟ್ಟೆ ಬೇರೆ. ಯಾರೆಂದೇ ಅರಿಯದ ಮನುಷ್ಯರನ್ನು ನಂಬಿಕೆಯಲ್ಲಿ ಮನೆಯೊಳಗೆ ಬರಲು ಬಿಟ್ಟು, ಚೆನ್ನಾಗಿ ಮಾತನಾಡಿಸಿ, ಉಪಚರಿಸಿ ಕಳುಹಿಸಿದ ಅವರು ಎಷ್ಟು ಸಹೃದಯಿಗಳು ಎಂದುಕೊಳ್ಳುತ್ತಾ ಹೊರಟೆವು. ಅವರಲ್ಲಿ ಅಂದು ಕಂಡ ಸಂಸ್ಕೃತಿಯ ತುಣುಕನ್ನು ನಾನು ಆಯ್ದುಕೊಂಡೆ.

2. ನಮ್ಮ ಪರಿಚಯದವರೊಬ್ಬರು ತಮ್ಮ ಕುಟುಂಬದ ಜೊತೆ ನೆಂಟರಿಷ್ಟರ ಊರಿಗೆ ಹೋಗಿದ್ದರು. ಅಲ್ಲಿ ಒಂದೆರಡು ಮನೆಗಳಿಗೆ ಹೋಗಿ ಮಾತನಾಡಿ, ಊಟ ಮಾಡಿದ ನಂತರ ನಿದ್ದೆ ಮಾಡಲು ಇನ್ನೊಬ್ಬರ ಮನೆಗೆ ಹೊರಟರು. ಕೊನೆ ಗಳಿಗೆಯಲ್ಲಿ ಫೋನ್ ಮಾಡಿ ತಾವು ಬರುತ್ತಿರುವುದನ್ನು ಹೇಳಿದ ನಮ್ಮ ಈ ನೆಂಟರಿಗೆ ಆ ಕಡೆಯಿಂದ ಸಿಕ್ಕಿದ ಪ್ರತಿಕ್ರಿಯೆ ಏನೂ ಆಶಾದಾಯಕವಾಗಿರಲಿಲ್ಲ. ರಾತ್ರಿಯಾಗಿದ್ದಲ್ಲದೆ ಮಳೆ ಬರುತ್ತಿದ್ದ ಕಾರಣ ಬೇರೆ ಕಡೆತಂಗಲು ವ್ಯವಸ್ಥೆ ಸಿಗದಿದ್ದರೆ ಗೆಸ್ಟ್ ಹೌಸ್ ನೋಡಬೇಕಾದೀತೆಂದು ಯೋಚನೆ ಮಾಡತೊಡಗಿದರು. ಕೊನೆಯದಾಗಿ ಅವರ ಪತ್ನಿ ತಮ್ಮ ಅಣ್ಣನ ಮಗಳಿಗೆ ಹಿಂಜರಿಯುತ್ತಲೇ ಫೋನ್ ಮಾಡಿದರು. ಅವಳು ಸಂತಸದಿಂದ ಬರಹೇಳಿದ್ದಲ್ಲದೆ, ಅವಳು ಮತ್ತು ಅವಳ ಪತಿ ನಮ್ಮ ನೆಂಟರು ತಲುಪುವ ಮೊದಲೇ ಚಾಪೆ ಹಾಸಿ ಮಲಗಲು ವ್ಯವಸ್ಥೆಮಾಡಿದರಂತೆ. ಊಟಕ್ಕೇ ಬರಬೇಕಿತ್ತು ಎಂದರಂತೆ. ಅವಳ ನಡತೆಯಲ್ಲಿ ಅಂದು ಕಂಡ ಸಂಸ್ಕೃತಿಯ ತುಣುಕನ್ನು ನಾನು ಆಯ್ದುಕೊಂಡೆ.

3. ನಾನು ಬಾಳಸಂಗಾತಿಯನ್ನು ಆರಿಸ ಹೊರಟ ಸಂದರ್ಭ.
ಹುಡುಗನ ಮನೆ ಮೈಸೂರು. ಅದು ನನ್ನ ಆಪ್ತ ಬಂಧುಗಳೂ ಇರುವ ಊರು. ಏನೂ ನಿರ್ಧಾರವಾಗದೆ ಎಲ್ಲರಿಗೂ ಪ್ರಚಾರ ಮಾಡಲಿಚ್ಛಿಸದ ನನ್ನ ಅಪ್ಪ, ಅಮ್ಮ ಮೈಸೂರಿಗೆ ನಾವೇ ಹೋಗಿ ನನ್ನ ಸೋದರ ಮಾವನ ಮನೆಯಲ್ಲಿ ಹುಡುಗಿ-ಹುಡುಗ ನೋಡುವ ಕಾರ್ಯಕ್ರಮ ಇಟ್ಟುಕೊಳ್ಳುವುದು ಉತ್ತಮವೆಂದು ಮನಗಂಡರು. ನನ್ನ ಅಮ್ಮ ಸಿಹಿ ತಿಂಡಿ (ಹುಡುಗ ಮತ್ತು ಮನೆಯವರಿಗೆ ತಿನ್ನಲು ಕೊಡಬೇಕಲ್ಲವೇ?) ಮನೆಯಲ್ಲೇ ಮಾಡಿ ಕೊಂಡೊಯ್ಯುವುದೆಂದು ನಿರ್ಧರಿಸಿದರು. ಹಾಗೇ ಸಿಹಿ, ಖಾರ ಮನೆಯಲ್ಲೇ ಮಾಡಿ ತೆಗೆದುಕೊಂಡು ಹೋದೆವು. ಅಲ್ಲಿ ತಲುಪಿದಾಗ ನಮಗೆ ಆಶ್ಚರ್ಯ ಕಾದಿತ್ತು. ನನ್ನ ಅತ್ತೆ (ಸೋದರ ಮಾವನ ಮಡದಿ) ತಾವೇ ಉತ್ಸಾಹದಲ್ಲಿ ಸಿಹಿತಿಂಡಿ ತಯಾರಿಸಿದ್ದರು. ಅಲ್ಲದೇ ತಮ್ಮಿಂದ ಏನೂ ಕುಂದುಂಟಾಗದಂತೆ ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಕಿಟಕಿಯ ಪರದೆಗಳು, ಸೋಫಾದ ಹೊದಿಕೆಗಳು ಇತ್ಯಾದಿಗಳನ್ನು ಒಗೆದು ಹಾಕಿದ್ದರು. ತಮ್ಮದೇ ಮನೆಯ ಶುಭಕಾರ್ಯದಂತೆ ಸಹಕರಿಸಿದ್ದರು. ಅವರ ಈ ನಡತೆ ನಮಗೆ ಬಹಳ ಖುಷಿಕೊಟ್ಟಿತು. ನಮ್ಮೊಡನೆ ಬೆರೆತು, ಸಹಕರಿಸಿ, ಆನಂದಿಸಿದ ಅವರಲ್ಲಿ ನಾನು ಸಂಸ್ಕೃತಿಯ ತುಣುಕೊಂದನ್ನು ಆಯ್ದುಕೊಂಡೆ.

4. ನನ್ನ ಅತ್ತೆ, ಮಾವ ಇರುವಲ್ಲಿ ಬಿಲ್ವಪತ್ರೆ ಮಾರುವ ಅಜ್ಜಿಯೊಬ್ಬರು ಆಗಾಗ ಹಸಿವೆ ಎಂದುಕೊಂಡು ಬರುತ್ತಾರೆ. ನನ್ನ ಅತ್ತೆಯವರು ಏನಾದರೂ ತಿನಿಸು ಕೊಟ್ಟು ಕಳಿಸುತ್ತಾರೆ. (ನನಗೆ ಆ ಅಭ್ಯಾಸವಿಲ್ಲ!). ಒಂದು ದಿನ ನಾವು ಮಧ್ಯಾಹ್ನದ ಊಟಕ್ಕೆ ಬೇರೆಕಡೆ ಹೋಗುವುದಿತ್ತು. ಅಡುಗೆ ಮಾಡಿರಲಿಲ್ಲ. ಹಿಂದಿನ ದಿನ ಉಳಿದ ಎರಡು ಹಿಡಿ ಅನ್ನವನ್ನು ನನ್ನ ಅತ್ತೆಯವರು ರುಚಿಯಾದ ಮೊಸರನ್ನವಾಗಿ ಬದಲಿಸಿದ್ದರು. ನಾವು ಹೊರಡುವ ಹೊತ್ತಿಗೆ ಬಿಲ್ವಪತ್ರೆ ಅಜ್ಜಿ ಹಸಿವೆಂದು ಬಂದರು. ನನ್ನತ್ತೆ ಆಗಷ್ಟೇ ಮಾಡಿದ ಮೊಸರನ್ನವನ್ನು ಆಕೆಗೆ ಕೊಟ್ಟರು. ನನಗೆ ಬಹಳ ಆಶ್ಚರ್ಯವಾದರೂ ಇದೂ ಸಂಸ್ಕೃತಿಯ ಒಂದು ತುಣುಕೇ ಎಂದು ಆಯ್ದಿಟ್ಟೆ.

5. ನನ್ನ ಅತ್ತಿಗೆಯ (ಗಂಡನ ಅಕ್ಕ) ಹತ್ತು ವರ್ಷದ ಮಗ ನಾನು ಕೊಟ್ಟ ಬಹು ಸಣ್ಣದೊಂದು ಚಿಪ್ಸ್ ಪಾ್ಯಕೇಟ್ ಹಿಡಿದು ಗೆಳೆಯರೊಂದಿಗೆ ಹಂಚಿ ತಿನ್ನುತ್ತೇನೆ ಎಂದು ಹೊರಗೋಡಿದಾಗ ನನಗೆ ಸಿಕ್ಕಿದ್ದು ಸಂಸ್ಕೃತಿಯ ಇನ್ನೊಂದು ತುಣುಕು.

ಮನೆಗೆ ಯಾರಾದರೂ ಬಂದರೆ ಮನೆಯವರೆಲ್ಲರೂ ಒಮ್ಮೆ ಬಂದು ಕುಶಲ ವಿಚಾರಿಸುವುದು, ವಿಶೇಷ ಅಡಿಗೆಯೇನಾದರೂ ಮಾಡಿದರೆ ಆಪ್ತರೊಡನೆ (ಗೆಳೆಯರು, ಪಕ್ಕದ ಮನೆಯವರು) ಹಂಚಿಕೊಳ್ಳುವುದು, ಉಪ್ಪಿನಕಾಯಿ, ಹಪ್ಪಳಗಳನ್ನು ನೂರಾರು ಕಿಲೋ ಮೀಟರು ದೂರದ ನೆಂಟರಿಗೆ ಕಳಿಸುವುದು, ಸಂತಸದ ವಿಷಯಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು ಇವುಗಳಲ್ಲೆಲ್ಲ ನನಗೆ ಕಾಣುವುದು ಸಂಸ್ಕೃತಿಯ ತುಣುಕುಗಳು.
ಇಲ್ಲಿ ಒಳ್ಳೆಯದೋ ಕೆಟ್ಟದೋ ಎಂಬ ಯೋಚನೆ ನಾನು ಮಾಡುತ್ತಿಲ್ಲ. ತುಂಬಾ ಯೋಚಿಸುತ್ತಾ ಹೋದರೆ ಚಿಕ್ಕ ಪುಟ್ಟ ವಿಷಯಗಳನ್ನು ಹಿಡಿದು ಸಾರ್ವಜನಿಕವಾಗಿ ಜಗಳಾಡುವುದು, ಊರಿಗೆ ಹೊಸಬರು ಬಂದರೆ ಸುಳ್ಳು ಹೇಳಿ ವಂಚಿಸುವುದು ಕೂಡಾ ಸಂಸ್ಕೃತಿಯ ಭಾಗವಾದೀತೇನೋ. ಆಗ ಸುಸಂಸ್ಕೃತಿ, ಅಸಂಸ್ಕೃತಿ ಎಂದು ವಿಂಗಡನೆ ಮಾಡಬೇಕಾದೀತು.
ನಾನು ಆಯುತ್ತಿರುವ ಸಂಸ್ಕೃತಿಯ ತುಣುಕುಗಳು ಕಾಲಾಂತರದಲ್ಲಿ ಚೆಲ್ಲಿ ಚದುರಿ ಹೋದಾವು. ಹೊಸ ತುಣುಕುಗಳು ಸಿಕ್ಕಿಯಾವು. ಹರಿವ ನೀರಿನಂತೆ ಸಂಸ್ಕೃತಿ ಬದಲಾಗುತ್ತಿರುವುದು. ಬದಲಾಗಬೇಕೂ ಕೂಡಾ. ಇಲ್ಲದಿದ್ದರೆ ನಿಂತ ನೀರಿನಂತೆ ಕೊಳೆತೀತು. ಬಾಂಧವ್ಯಗಳು ಹಳಸಿಯಾವು. ಬದಲಾಗುತ್ತಿದ್ದರೂ (ಸು)ಸಂಸ್ಕೃತಿಯ ಮೂಲ ಮೌಲ್ಯಗಳು ಉಳಿದರೆ ಸಾಕು.
- - - -

Friday, July 23, 2010

ಬಿಸಿಲ ನೆನಪು

ಮುಂಜಾನೆ (ನನಗೆ ಮುಂಜಾನೆಯೆಂದರೆ ಬೆಳಗ್ಗಿನ ಏಳು ಗಂಟೆ) ಬಿಸಿಲು ನೋಡುವುದೆಂದರೆ ನನಗೆ ಒಂದು ರೀತಿಯ ಖುಷಿ. ಬೇರೆ ಬೇರೆ ಊರುಗಳಲ್ಲಿ ಬಿಸಿಲು ಬೇರೆ ಬೇರೆ ರೀತಿಯಲ್ಲಿರುತ್ತದೆ ಎಂದು ನನ್ನ ಅನಿಸಿಕೆ.
ನಾನು ಮೂಡುಬಿದಿರೆಯಲ್ಲಿದ್ದಾಗ (ದಕ್ಷಿಣ ಕನ್ನಡ) ಒಂದು ರೀತಿಯ ಬಿಸಿಲಿತ್ತು. ನಾನು ಆಗ ಒಂಭತ್ತು ಗಂಟೆ ನಂತರ ಏಳುತ್ತಿದ್ದ ಕಾರಣ ಈ characteristic ಬಿಸಿಲು ಕಾಣಸಿಗುತ್ತಿದ್ದುದು ಕಡಿಮೆ. ಆದರೂ ಮನೆಯ ಅಂಗಳದಲ್ಲಿ ಕೂತು ಅಮ್ಮ ಮಾಡಿದ ರುಚಿ ಚಹಾ ಕುಡಿಯುತ್ತಾ ಬಿಸಿಲನ್ನು ನೋಡುವುದು ಖುಷಿ ಕೊಡುತ್ತಿತ್ತು. ಮನೆಯ ಸುತ್ತುಮುತ್ತಲಿದ್ದ ತೆಂಗು, ಪೇರಳೆ(ಸೀಬೆ), ಚಿಕ್ಕಿನ ಮರ(ಸಪೋಟ)ಗಳ ನಡುವಿಂದ ಇಳಿದ ಉದ್ದುದ್ದನೆಯ ಬಿಸಿಲ ಕೋಲುಗಳು, ಅವುಗಳಲ್ಲಿ ಮಿಣಮಿಣ ಹೊಳೆಯುತ್ತ ತೇಲುವ ಧೂಳ ಕಣಗಳು.

ಉಡುಪಿಯಲ್ಲಿ ಬೇರೆ ರೀತಿಯ ಬಿಸಿಲು. ಎಳೆಬಿಸಿಲಲ್ಲಿ ನನ್ನ room mate (ನಾವು paying guest ಆಗಿ ಮನೆಯವರೊಂದಿಗೇ ಇರುತ್ತಿದ್ದುದು) ಮನೆಯ ದೇವರ ಕೋಣೆ ಅಲಂಕರಿಸಲು ಹೂವು ಕೊಯ್ಯುತ್ತಿದ್ದಳು. ಆ ಬಿಸಿಲು ಏರಲು ಶುರುವಾಗುವಾಗಲೇ ನಾವು ಆಫೀಸಿಗೆ ನಡೆದು ಹೋಗುತ್ತಿದ್ದುದು. ಮಳೆಗಾಲದಲ್ಲಿ ಆ ದಾರಿಯ ಬದಿಯಲ್ಲಿದ್ದ ಗದ್ದೆಯೊಂದರಲ್ಲಿ (ಅಲ್ಲಿ ಬೆಳೆ ಬೆಳೆದ ನೆನಪಿಲ್ಲ) ಪಕ್ಕದ ಹೊಳೆಯಿಂದ ಹರಿದ ನೀರು ತುಂಬಿರುತ್ತಿತ್ತು. ಅದರಲ್ಲಿ ತಾವರೆ, ನೈದಿಲೆ ಬೆಳೆದು ಬಿಸಿಲಿಗೆ ಅರಳುತ್ತಿದ್ದವು. ಮಳೆಗಾಲ ಮುಗಿದ ಮೇಲೂ ಕೆಲವು ತಿಂಗಳು ನೀರು ತುಂಬಿರುತ್ತಿತ್ತು. ಬೆಳಗ್ಗಿನ ನಸು ಬಿಸಿಲಲ್ಲಿ ಕೆಲವರು ತಾವರೆ ಕೊಯ್ಯುತ್ತಿದ್ದರು.

ಮೈಸೂರಿನಲ್ಲಿ ಬಹಳ ಎಳೆಯ ನಾಜೂಕಾದ ಬಿಸಿಲು. ಮೈಸೂರನ್ನು ಮುಂಜಾನೆ ನೋಡಿದರೆ ಬಹಳ ಸುಂದರ ಊರು ಅನ್ನಿಸುವುದು. ಎಲ್ಲ ಮೌನ, ಶಾಂತ. ನನ್ನ ಮಾವನವರು ಅತಿ ಇಷ್ಟಪಟ್ಟು ಬೆಳೆಸಿ ಸಾಕುತ್ತಿರುವ ಹೂದೋಟದ ತುಂಬಾ ಚಿಲಿಪಿಲಿಗುಟ್ಟುವ ಹಕ್ಕಿಗಳು. ಎಲೆಗಳ ಮೇಲೆ, ಹೂವುಗಳ ದಳಗಳ ಅಂಚಿನಲ್ಲಿ ಬಿಸಿಲಿಗೆ ಹೊಳೆಯುವ ನೀರ ಹನಿಗಳು. (ಇಬ್ಬನಿಯೋ, ಮಾವನವರು ಹಾಕಿದ ನೀರೋ ಗೊತ್ತಿಲ್ಲ)

ಬೆಂಗಳೂರಿನ characteristic ಬಿಸಿಲು? ಎರಡು ವರ್ಷವಾಯಿತು. ಇನ್ನೂ ಕಂಡಿಲ್ಲ. ದಿನವೂ ಬೆಳಗ್ಗೆ ಅಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಬಿಸಿಲಿನ analysis ಮಾಡಲು ಪುರುಸೊತ್ತಿಲ್ಲ. ವಾರಾಂತ್ಯದಲ್ಲಿ ಬಿಸಿಲೇರುವವರೆಗೆ ನಿದ್ದೆ!

ಕೆಲವೊಮ್ಮೆ ಒಂದು ಜಾಗದ ಬಿಸಿಲು ಇನ್ನೊಂದೆಡೆ ಕಾಣಸಿಗುತ್ತದೆ. ಮೂಡುಬಿದಿರೆಯ ಚಳಿಗಾಲದಲ್ಲಿ ಕೆಲವೊಮ್ಮೆ ಬೀಳುವ ಬಿಸಿಲು ಮೈಸೂರನ್ನು ನೆನಪಿಸುತ್ತದೆ. ಮೊನ್ನೆ ಬೆಂಗಳೂರಲ್ಲಿ ಮಳೆ ಬಂದು ಹತ್ತು ಗಂಟೆಗೆ ಮೂಡಿದ ಬಿಸಿಲು ಉಡುಪಿಯನ್ನು ನೆನಪಿಸಿತು. "ಇಂದು ಬೆಂಗಳೂರಲ್ಲಿ ಉಡುಪಿಯ ಬಿಸಿಲು" ಎಂದಿದ್ದೆ ನಾನು. ಸಂಜೆಯ ಬಿಸಿಲಲ್ಲಿ ನನಗೆ ಈವರೆಗೆ ಬೆಳಗಿನ ಬಿಸಿಲಂತಹ ವ್ಯತ್ಯಾಸ ಕಂಡಿಲ್ಲ. ಅಥವಾ ಬೆಳಗಿನ ಬಿಸಿಲಿನ ಈ ವಿಶೇಷಣಗಳೂ ನನ್ನ ಭ್ರಮೆಯೇನೋ. ಏನೇ ಇರಲಿ ಹೊಂಬಿಸಿಲು ಸಿಹಿ ನೆನಪುಗಳನ್ನು ಮೂಡಿಸುವುದು ನನಗೆ ಖುಷಿ ಕೊಡುತ್ತಿದೆ.

Monday, May 10, 2010

Communication skills ಎಂದರೇನು?

ಹೋದ ತಿಂಗಳು interpersonal effectiveness ಎನ್ನುವ ತರಬೇತಿ ಕಾರ್ಯಕ್ರಮವನ್ನು ನಮ್ಮ ಆಫೀಸು ನಡೆಸಿದ್ದು ನಾನು ಅದರಲ್ಲಿ ಭಾಗಿಯಾಗಬೇಕಾಯಿತು. ಸಹೋದ್ಯೋಗಿಗಳೊಂದಿಗೆ ಯಾವ ರೀತಿ ವ್ಯವಹರಿಸಬೇಕೆನ್ನುವುದರ ಬಗ್ಗೆ ತರಬೇತಿ. ಎರಡು ದಿನದ ಕಾರ್ಯಕ್ರಮ ಚೆನ್ನಾಗಿತ್ತು. ಕೆಲಸವಿಲ್ಲದ ಎರಡು ದಿನ ಮೋಜಿನಿಂದಲೂ ಕಳೆಯಿತು.
ವಾರದಲ್ಲಿ ಕನಿಷ್ಠ ನಾಲ್ಕು ದಿನ ಇಪ್ಪತ್ತು ನಿಮಿಷಗಳಿಗೆ ಕಮ್ಮಿಯಿಲ್ಲದಂತೆ ಫೋನಿನಲ್ಲಿ ಹರಟುವ ನನ್ನ ಗೆಳತಿಗೆ ಫೋನು ಮಾಡಿದೆ. ತರಬೇತಿ ಕಾರ್ಯಕ್ರಮದ ಬಗ್ಗೆ ಹೇಳಿದೆ. ವಿಷಯ ಮಾತನಾಡುತ್ತಾ communication skills ನತ್ತ ತಿರುಗಿತು.

"ನನ್ನ ಪರಿಚಯದವನೊಬ್ಬ ತಾನು ಮದುವೆಯಾಗಲಿರುವ ಹುಡುಗಿಯ ಫೋಟೋವನ್ನು social networking site ಅಲ್ಲಿ ಹಾಕಿ ಬಹಳ ಚೆನ್ನಾಗಿರುವ ವಾಕ್ಯಗಳನ್ನು ಬರೆದಿದ್ದಾನೆ" ಎಂದೆ.

"ನಾನೂ ಅಂಥ ಅನೇಕ ಜನರನ್ನು ನೋಡಿದ್ದೇನೆ" ಎಂದಳು.

"ನಾನು ಉಡುಪಿಯಲ್ಲಿ ಯಾರದ್ದೋ ಮನೆ ಕೇಳಿಕೊಂಡು ಬಂದ ಅಪರಿಚಿತ ಹುಡುಗನ ಬಳಿ ಸುಮಾರು ಇಪ್ಪತ್ತು ನಿಮಿಷ ಹರಟಿ ಕೊನೆಯಲ್ಲಿ ಅವನು ಫೋನ್ ನಂಬರ್ ಕೇಳಿದಾಗ ಎಚ್ಚೆತ್ತುಕೊಂಡೆ. ಅಷ್ಟು ಮಾತಾಡಲು ಕಾರಣ ಅವನ ಮಾತಿನ ಶೈಲಿ, communication skills. ಕೊನೆಗೆ ನಾನು ಪೇಯಿಂಗ್ ಗೆಸ್ಟ್ ಆಗಿದ್ದ ಕಡೆ ಆಂಟಿಯನ್ನು ಕೇಳಿದಾಗ ಅವನ ಕೆಲಸವೇ ಅದು, ಸಿಕ್ಕಿದವರ ಜೊತೆ ಗಂಟೆಗಟ್ಟಲೆ ಹರಟುತ್ತಾನೆ ಎಂದರು" ಎಂದೆ.

"ಹೌದು. ಚೆನ್ನಾಗಿ ಮಾತನಾಡುವವರು ಎಂಥವರನ್ನೂ ಮರುಳು ಮಾಡಬಲ್ಲರು" ಎಂದಳು.

"ನನ್ನ ಗೆಳೆಯನೊಬ್ಬ ನೋಡಲು ಚಂದ ಇಲ್ಲ. ಆದರೆ ಮಾತನಾಡುವುದರಲ್ಲಿ ಬಲು ಜಾಣ. ಈ communication skills ನಿಂದಾಗಿ ಅವನಿಗೆ ಸುಂದರಿಯಾದ girl friend ಇದ್ದಾಳೆ" ಎಂದು ನಕ್ಕೆ.

"ಹಾಗಾದರೆ communication skills ಎಂದರೆ ನಿಜವಾಗಿ ಜನರನ್ನು ಮಂಗಮಾಡುವುದು ಎಂದಾಯಿತಲ್ಲವೇ?" ಎಂದಳು.
(ಮಂಗಳೂರು ಕನ್ನಡದಲ್ಲಿ ಮಂಗಮಾಡುವುದು ಎಂದರೆ ಮೂರ್ಖರನ್ನಾಗಿಸುವುದು)

"ಹೌದಲ್ಲವೇ!!" ಎನ್ನುತ್ತಾ ಇಬ್ಬರೂ ಮನಸಾರೆ ನಕ್ಕೆವು. ಇಂದಿನವರೆಗೂ ಯೋಚಿಸಿದಾಗೆಲ್ಲ ಅವಳು ಹೇಳಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ. ಕೆಲವೊಮ್ಮೆ ತರಬೇತಿ ಕಾರ್ಯಕ್ರಮಗಳೂ ಒಂದರ್ಥದಲ್ಲಿ ನಮ್ಮ ಕೆಲಸ ಸಾಧಿಸಲು ನಯ ವಿನಯಗಳ ಸೋಗು ಹಾಕಲು ಕಲಿಸುವುದು ಎಂದು ಅನ್ನಿಸುತ್ತದೆ.

Monday, March 29, 2010

NGO ಗಳ ಹಿಡಿತದಲ್ಲಿ...

ಇತ್ತೀಚೆಗೆ ನಮ್ಮ ಆಫೀಸಿಗೆ ಭೇಟಿಕೊಡುತ್ತಿರುವ NGO (Non-governmental Organization)ಗಳ ಸಂಖ್ಯೆ ಹೆಚ್ಚುತ್ತಿದೆ. ಆಫೀಸಿನ ಕಾಫಿ ಯಂತ್ರದ ಬಳಿ ಮೇಜು-ಕುರ್ಚಿ ಹಾಕಿ ಕೂತ ಪ್ರತಿನಿಧಿಗಳು ಅತ್ತ ಹೋದವರನ್ನೆಲ್ಲಾ ಕರೆದು ವಿವರಣೆ ನೀಡುತ್ತಾರೆ. ಕೊನೆಯದಾಗಿ ನವಿರಾಗಿ ಸಹಾಯ, ಕೊಡುಗೆ ಯಾಚಿಸಿ ನಮ್ಮನ್ನು ಇಲ್ಲ ಎನ್ನಲಾಗದ ಸಿ್ಥತಿಗೆ ತಳ್ಳುತ್ತಾರೆ. ಮೊದಲು ನನಗೆ ಇವುಗಳ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಈಗ ಅತಿಯಾದರೆ ಅಮೃತವೂ ವಿಷವೆಂಬಂತೆ NGOದ ಪ್ರತಿನಿಧಿಗಳು ಬರುವರೆಂದರೆ ಹೆದರಿಕೆಯಾಗತೊಡಗಿದೆ.
ಈ NGOಗಳ ಜೊತೆ ನನಗೆ ಎದುರಾದ ಕೆಲ ಪ್ರಸಂಗಗಳನ್ನು ಬರೆಯುತ್ತೇನೆ.

ದೀಪಾವಳಿ ಸಮಯದಲ್ಲಿ ಬೌದ್ಧಿಕವಾಗಿ ಕಡಿಮೆ ಬೆಳೆದಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಸಂಸ್ಥೆಯಿಂದ ಒಬ್ಬರು ಬಂದಿದ್ದರು. ಅವರು ಆ ಸಂಸ್ಥೆಯ ಆಶ್ರಯದಲ್ಲಿರುವವರು ಮಾಡಿದ ಗ್ರೀಟಿಂಗ್ ಕಾರ್ಡ್, ಬಣ್ಣದ envelop, ರಟ್ಟಿನ ಫೋಟೋ ಫ್ರೇಮ್, ಬಣ್ಣ ಹಚ್ಚಿದ ಹಣತೆ, ಮೇಣದ ಬತ್ತಿ ಹೀಗೆ ಬೇರೆ ಬೇರೆ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದರು. ಹಣ ಜಾಸ್ತಿ ಇದ್ದರೂ ಸಹಾಯದ ರೂಪದಲ್ಲಿ ಹೆಚ್ಚು ಜನ ಕೊಂಡರು. ನನಗೂ ಈ ಸಹಾಯ ಕೋರುವ ವಿಧಾನ ಬಹಳ ಹಿಡಿಸಿತು. ಆದರೆ ಅವರು ಮರುದಿನವೂ ಬಂದರು. ಒಂದು ತಿಂಗಳಲ್ಲಿ ಮತ್ತೆ ಬಂದರು! ನನಗೆ ಪುನಃ ವ್ಯಾಪಾರ ಮಾಡುವ ಮನಸಿರಲಿಲ್ಲ. ಅತ್ತ ಸುಳಿದಾಡಲು ದಾಕ್ಷಿಣ್ಯವಾಗಿ ಚಹಾ ಬಿಟ್ಟು ನನ್ನ ಜಾಗದಲ್ಲೇ ಕುಳಿತಿದ್ದೆ. ಕೊನೆಗೆ ಸಂಜೆ ರೂ. 80 ತೆತ್ತು ಮೇಣದ ಬತ್ತಿಯೊಂದನ್ನು ಕೊಂಡೆ.

ಇದಾಗಿ ಜನವರಿ ತಿಂಗಳಲ್ಲಿ ವೃದ್ಧರಿಗೆ ಸಹಕರಿಸುವ ಸಂಸ್ಥೆಯವರು ಬಂದರು. ಚಹಾ ಕುಡಿಯಲು ಹೊರಟಾಗ ಹಿಡಿದರು. ಸಧ್ಯಕ್ಕೆ ಬೆಂಗಳೂರಿನಲ್ಲಿ ತಮ್ಮ ಶಾಖೆ ಇಲ್ಲವೆಂದೂ, ಬೇಗನೇ ತೆರೆಯಲಿದೆಯೆಂದೂ ಹೇಳಿ ತಮ್ಮ ಸಂಸ್ಥೆಯ ಕಾರ್ಯಕ್ರಮಗಳನ್ನೂ ಹೇಳಿದರು. ನಾನು ಹೂಂ... ಹೂಂ... ಎನ್ನುತ್ತಾ ಕೇಳುತ್ತಿದ್ದೆ. ಒಬ್ಬ ಅಜ್ಜ ಅಥವಾ ಅಜ್ಜಿಯನ್ನು ದತ್ತು ತೆಗೆದುಕೊಂಡರೆ ವರ್ಷಕ್ಕೆ ರೂ. 1,200, ಬೇರೆ ಬೇರೆ ಚಿಕಿತ್ಸೆಗಳಿಗೆ ರೂ. 4,000, ರೂ 6,000 ಇತ್ಯಾದಿ ಸಹಾಯಕ್ಕೆ ಅವಕಾಶವಿದೆ ಎಂದರು. ಕೊನೆಗೆ "ನಿಮ್ಮ ಕಂಪನಿಯವರಿಗೆ ಈ ರೂ. 4,000 ದ ಕಣ್ಣಿನ ಚಿಕೆತ್ಸೆಯ ಅವಕಾಶ ಮಾತ್ರ ಕೊಡುತ್ತಿದ್ದೇವೆ" ಎಂದರು. ಅರೇ... ಇದೇನು? ನಮಗೆ ಇಷ್ಟಬಂದಷ್ಟು ಸಹಾಯ ಮಾಡುವ ಅವಕಾಶವೇ ಇಲ್ಲವಲ್ಲಾ ಎಂದುಕೊಳ್ಳುತ್ತಾ ಹೋಗಲನುವಾದೆ. "ನಾಳೆ ಚೆಕ್ ತನ್ನಿ. ಮೊಬೈಲ್ ನಂಬರ ಕೊಡಿ. ನಾಳೆ ಚೆಕ್ ತರಲು ನೆನಪಿಸುತ್ತೇವೆ" ಎಂದರು. ನಾಳೆ ಪುನಃ ಅವರ ಮುಖ ನೋಡಬೇಕಾದ ಕಾರಣ ಸರಿಯಾದ ನಂಬರೇ ಕೊಟ್ಟು ಬಂದೆ. ಮರುದಿನ ಬೆಳಗ್ಗೆ ಬಂತು ಫೋನ್. ಚೆಕ್ ತರಲು ನೆನಪಿಸಿದರು. ನಾನು ಆಯಿತೆಂದು ಹೇಳಿದರೂ ಚೆಕ್ ಕೊಂಡು ಹೋಗಲಿಲ್ಲ. ಚಹಾ ಕುಡಿಯಲು ಹೋದಾಗ ಹೇಗೋ ದಾಕ್ಷಿಣ್ಯಬಿಟ್ಟು "sorry ನಾನು ಸಹಕರಿಸಲಾರೆ" ಎಂದೆ. ಮುಂದಿ ತಿಂಗಳು ಪುನಃ ಫೋನ್ ಮಾಡುತ್ತೇವೆ ಎಂದು ಹೇಳಿ ಹೋದರು.

ಈ ಮಾರ್ಚ್ ತಿಂಗಳು. ಬಾಲ ಕಾರ್ಮಿಕರನ್ನು ರಕ್ಷಿಸಿ ಶಿಕ್ಷಣ ನೀಡಲು ಸಹಕರಿಸುವ, ಬುಡಕಟ್ಟು ಜನಾಂಗದ ಹುಡುಗಿಯರ ಕಲ್ಯಾಣ, woman empowerment, ಜನರ ವಸತಿ ಮತ್ತು ಶ್ರೇಯಾಭಿವೃದ್ಧಿ ಕಾರ್ಯಕ್ರಮಕ್ಕೆ ಶ್ರಮಿಸುವುದೆಂದು ಹೇಳಿಕೊಳ್ಳುವ ಸಂಸ್ಥೆಯವರು ಬಂದರು. ಪುನ: ನನ್ನ ಚಹಾಕ್ಕೆ ಕುತ್ತಾದರು. ಈ ಬಾರಿ ಅವರ ಬಳಿ ಹೋಗಿ ದಾಕ್ಷಿಣ್ಯಕ್ಕೆ ಕಟ್ಟುಬೀಳುವ ಪರಿಸ್ಥತಿ ಬರಬಾರದೆಂದು ಆ ಕಡೆಗೆ ನೋಡದೆ ಹೋಗುತ್ತಿದ್ದೆ. ಒಬ್ಬ ಪ್ರತಿನಿಧಿ ಹಿಂಬಾಲಿಸಿ ಬಂದ. ಪುನಃ ಅವೇ ಮಾತುಗಳು. "... ನಿಮ್ಮ ಕಂಪನಿಯಲ್ಲಿ ಬಾಲಕಾರ್ಮಿಕರ ನಿಧಿಗೆ ಸಹಾಯ ಕೋರುತ್ತಿದ್ದೇವೆ. ಒಂದು ಮಗುವಿಗೆ ರೂ. 2,400 ಕೊಟ್ಟು sponsor ಮಾಡಬೇಕು" ಎಂದು ಕೇಳಲಾರಂಭಿಸಿದ. ನವಿರಾಗಿ ನಿರಾಕರಿಸಿದೆ. emotional blackmail ರೂಪದ್ದೇನೋ ಆರಂಭಿಸಿದ. "ಮಾ್ಯಡಮ್, ಭಾರತದಲ್ಲಿ ಬಾಲ ಕಾರ್ಮಿಕರ ಪರಿಸ್ಥಿತಿ ನಿಮಗೆ ಗೊತ್ತಿಲ್ಲವೇ? ನಿಮ್ಮ ಮನದಲ್ಲಿ ಅವರಿಗೆ ಸಹಕರಿಸುವ ಭಾವನೆ ಇಲ್ಲವೇ? ತಿಂಗಳಿಗೆ ನೂರು-ಇನ್ನೂರು ರೂಪಾಯಿ ನಿಮಗೆ ದೊಡ್ಡದೇ? Why ma'am? Don't you like to help them" ಎಂದು ಮುಂದಿನ ತಿಂಗಳಿಗೆ ಚೆಕ್ ಬರೆದು ಕೊಟ್ಟರೂ ಆದೀತೆಂದು ದಂಬಾಲು ಬಿದ್ದ. ನನಗೆ ನುಣುಚಿಕೊಳ್ಳಲು ಸಾಕು ಸಾಕಾಯಿತು. ಇನ್ನು ಮುಂದೆ NGO ಬರುವ ದಿನ ಚಹಾವನ್ನು ಕನಸಿನಲ್ಲೂ ನೆನೆಸಲಾರೆ ಎಂದುಕೊಂಡೆ.

ಸಮಸ್ಯೆ NGO ಗಳ ಸಹಾಯ ಯಾಚನೆಯ ವಿಷಯವಲ್ಲ. ಸಮಸ್ಯೆ ಪ್ರತಿನಿಧಿಗಳ ಮಾತುಗಳು, ಅವರು ವಿಧಿಸುವ ಕಟ್ಟಳೆಗಳು.
ಸಹಾಯ ಮಾಡುವ ಮನಸಿದ್ದವರು ಅವರಿಗೆ ಸಾಧ್ಯವಾದಷ್ಟು ಕೊಡುತ್ತಾರೆ. ಅದನ್ನು ಸ್ವೀಕರಿಸಬೇಕೆಂಬುದು ನನ್ನ ಅನಿಸಿಕೆ. ಅದಲ್ಲದೆ ಇಂಥದೇ scheme ಆರಿಸಬೇಕೆಂದು ಹೇರುವುದು ನನಗೆ ಸರಿಕಾಣುವುದಿಲ್ಲ. ಮತ್ತೆ ಫೋನ್ ಮಾಡಿ ಯಾಚಿಸುವುದು ಅಥವಾ ಮಾತಿನಲ್ಲಿ emotional blackmail ಮಾಡುವುದು ಸರಿಯಲ್ಲ. ಎಷ್ಟೋ ಸಾರಿ ನಮಗೆ ಅವರ ಮೇಲೆ ಭರವಸೆಯೇ ಇರುವುದಿಲ್ಲ. ನಾವು ಒಳ್ಳೆ ಮನಸಿಂದ ಕೊಟ್ಟ ಹಣ ಸರಿಯಾಗಿ ಬಳಕೆಯಾಗುವುದೆಂದ ನಂಬಕೆ ಬರುವುದಿಲ್ಲ. ವರ್ಷದಲ್ಲಿ ಆರೇಳು ಸಂಸ್ಥೆಗಳಿಗೆ ಸಹಾಯ ನೀಡಲೂ ಸಾಧ್ಯವಿಲ್ಲ. ಇನ್ನೂ ಅನೇಕ ಬಾರಿ ಕರ್ನಾಟಕದಲ್ಲಿ ಇಲ್ಲದ ಸಂಸ್ಥೆಗೆ ಕೊಡಬೇಕು ಎನಿಸುವುದಿಲ್ಲ. ಇವು personal choice. ಇವಕ್ಕೆ ಗೌರವ ಕೊಡಬೇಕು. ಒತ್ತಾಯಿಸಲು ಇವು ಸಾಮಾನು ಖರೀದಿಸಿದಂತಲ್ಲ. ಕೊಡುವವನು ಸಂತೋಷದಿಂದ ಕೊಟ್ಟರೆ ಚೆನ್ನ. ಕೊಟ್ಟವರ ಮನಸಿಗೆ ತೃಪ್ತಿಯಿರಬೇಕು ಎಂದು ನನ್ನ ಭಾವನೆ.

ನಾನು ದಕ್ಷಿಣ ಕನ್ನಡದ ಕನ್ಯಾನದಲ್ಲಿ ಬಹಳ ಹಳೆಯ ಕಾಲದಿಂದ ನಡೆಯುತ್ತಿರುವ ಸೇವಾಶ್ರಮವನ್ನು ನೋಡಿದ್ದೇನೆ. ಏನೋ ಒಂದೆರಡು ಬಾರಿ ಅಲ್ಲಿಗೆ ಅಲ್ಪ ಸಹಾಯ ನೀಡಿದ್ದೆ. ಕೆಲದಿನಗಳಲ್ಲಿ ಅವರಿಂದ ಒಂದು ಪತ್ರ ಬಂದಿತ್ತು. ಜೊತೆಗೆ ವಿಭೂತಿ ಮತ್ತು ಕುಂಕುಮ. ಸಹಕರಿಸಿದವರ ಹೆಸರಲ್ಲಿ ಪೂಜೆ ಮಾಡಿಸಿದ್ದರ ಪ್ರಸಾದ ಎಂದಿತ್ತು. ಒಮ್ಮೆ ಆ ದಾರಿಯಲ್ಲಿ ಹೋದಾಗ ಅಲ್ಲಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಅವರು ಬಲು ಪ್ರೀತಿಯಿಂದ ಬರಮಾಡಿಕೊಂಡು ಮಾತಾಡಿಸಿದರು. ಸಹಾಯ ಬಂದ್ದನ್ನು ಹೇಗೆ ಉಪಯೋಗಸುತ್ತಿದ್ದೇವೆಂದು ತೋರಿಸಿದರು. ಆಶ್ರಮಕ್ಕೆ ನಿಶ್ಚಿತ ಆದಾಯ ಬರುವಂತೆ ತೋಟ ಖರೀದಿ ಮಾಡುವ ಯೋಜನೆಯನ್ನು ಹೇಳಿದರು. ಅಲ್ಲಿ ನನ್ನಿಂದ ಏನೂ ನಿರೀಕ್ಷೆ ಮಾಡಲಿ್ಲಲ್ಲ. ಬದಲಾಗಿ ಹಬ್ಬದ ಸಮಯ ಎಂದು ನನಗೆ ಸೀರೆ ಉಡುಗೊರೆ ನೀಡಿ ಕಳಿಸಿದರು. ಅದು ನನ್ನ ಮನಸಿಗೆ ಬಹಳ ತಟ್ಟಿತು. ಯಾವತ್ತಾದರೂ ಸಹಾಯ ನೀಡುವ ಸಂದರ್ಭ ಬಂದರೆ ಇಲ್ಲಿಗೇ ಕೊಡುವೆ ಅನಿಸಿತು. ಆ ನಂತರ ಎರಡು ವರ್ಷಗಳಿಂದ ಅತ್ತ ಹೋಗಿಲ್ಲ. ಆದರೂ ವರ್ಷವೂ ಅವರ ಆಶ್ರಮದ ಉತ್ಸವವೊಂದಕ್ಕೆ ಆಮಂತ್ರಣ ಪತ್ರವನ್ನು ಪ್ರೀತಿಯಿಂದ ಕಳಿಸುತ್ತಾರೆ.

ಇದೇ ಕಾರಣಕ್ಕೋ ಏನೋ ಈ ಕಾಫಿ ಯಂತ್ರದಬಳಿ ಎರಡು ತಿಂಗಳಿಗೊಮ್ಮೆ ಕಾಣುವ NGO stall ಗಳು, ಅವುಗಳ ಅರಳು ಹುರಿದಂತೆ ಇಂಗ್ಲೀಷ್ ಮಾತಾಡುವ ಪ್ರತಿನಿಧಿಗಳು ನನ್ನನ್ನು ಸೆಳೆಯಲು ವಿಫಲವಾದದ್ದು.

Monday, March 15, 2010

ಸಣ್ಣದೊಂದು ಅನುಭವದ ಪಾಠ

ಎಷ್ಟೋ ದಿನಗಳಿಂದ ಉಸಿರುಗಟ್ಟಿಸುವಷ್ಟು ಕೆಲಸದಲ್ಲಿ ಹುದುಗಿ ಹೋಗಿದ್ದರಿಂದ ಅನೇಕ ಬರೆಯಲರ್ಹ ವಿಚಾರಗಳು ತಲೆಯಲ್ಲಿ ಬಂದರೂ ಬರೆಯಲಾಗದೆ ಕೆಲವಂತೂ ಮರೆತೇ ಹೋಗಿವೆ. ಏನಿಂಥಾ ಕೆಲಸ? ಎಂದು ಯೋಚಿಸುತ್ತಿದ್ದೀರಾದರೆ ಕೇಳಿ.

ನನ್ನ ಯಜಮಾನರಿಗೆ ಕಾಲಿನ ಚಿಕ್ಕ ಶಸ್ತ್ರಚಿಕಿತ್ಸೆಯೊಂದು ಆಗಬೇಕಾಗಿದ್ದು ಹಲವು ವರ್ಷಗಳಿಂದ "TODO" list ನಲ್ಲಿ ಇತ್ತು. ಹಠಾತ್ತಾಗಿ ಅದನ್ನು ಮಾಡಬೇಕಾದ ಸಂದರ್ಭ ಬಂದು (ಕಾಲ ಕೂಡಿಬಂದುದು ಎಂದು ಹೇಳಬಹುದೇನೋ) ಅದೇ ವಿಚಾರದಲ್ಲಿ ಎರಡು ತಿಂಗಳು ಆಫೀಸು, ಮನೆ, ಆಸ್ಪತ್ರೆ ಎಂದು ಓಡಾಡಬೇಕಾಗಿ ಬಂತು. ಅದರ ನಡುವೆ ಕೆಲ ವಾರಗಳಿಂದ ಪ್ರಾಜೆಕ್ಟ್ ನ ರಿಲೀಸ್ ಎಂದು ದಿನದಲ್ಲಿ ೧೦ ಗಂಟೆ ಆಫೀಸಿನಲ್ಲಿ ಒದ್ದಾಡಿ ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಿರಬೇಕಾದರೆ, ವೈರಸ್ ಗಳು "ನಿನ್ನನ್ನು ಸುಮ್ಮನೆ ಕೂರಲು ಬಿಡಲಾರೆವು" ಎಂದು ಶೀತ, ಕೆಮ್ಮು ತಂದಿಟ್ಟಿವೆ. ಯಜಮಾನರಿಗೆ ನಾಲ್ಕು ಚಕ್ರದ ವಾಹನ ಬಿಡಲು ಡಾಕ್ಟರು ಸಮ್ಮತಿ ನೀಡಿದ್ದೊಂದು ಸಮಾಧಾನ.

ಈ ಎರಡು ತಿಂಗಳಲ್ಲಿ ನನಗೆ ಹೊಸತಾದ ಬೇರೆ ಬೇರೆ ಅನುಭವಗಳಾಗಿವೆ. ಅವುಗಳಿಂದ ಚಿಕ್ಕ ಚಿಕ್ಕ ಪಾಠಗಳೂ ಸಿಕ್ಕಿವೆ. ಅದರಲ್ಲಿ ಒಂದನ್ನು ಇಲ್ಲಿ ಹೇಳಲಿದ್ದೇನೆ.

ನಾವು ಪ್ರತಿದಿನ ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಲೆತ್ನಿಸುತ್ತೇವೆ. ಹೆಚ್ಚಿನ ಸಲ ಅದು ನಮ್ಮ ಆಸಕ್ತಿಯಿಂದಾಗಿರುತ್ತದೆ. ನಮಗೆ ಉಪಯೋಗವಿದೆಯೋ ಇಲ್ಲವೋ ಎಂದು ನೋಡಲು ಹೋಗುವುದಿಲ್ಲ. ಕೆಲವು ಬಾರಿ ಹೀಗೆ ಯಾವತ್ತೋ ತಿಳಿದುಕೊಂಡ ವಿಚಾರಗಳು ಇನ್ನು ಯಾವತ್ತೋ ಉಪಯೋಗಕ್ಕೆ ಬರುತ್ತವೆ. ಸ್ಟೀವ್ ಜಾಬ್ಸ್ ಎಂದೋ ಕಲಿತ calligraphy, ಮೊದಲ Macintosh computer ನ ಸುಂದರ typography ಗೆ ಕಾರಣವಾದಂತೆ. (ನನ್ನದು ಇಷ್ಟು ದೊಡ್ಡ ವಿಚಾರವಲ್ಲ!)

ನಮ್ಮ ಆಸ್ಪತ್ರೆ ಖರ್ಚುಗಳನ್ನು ಇನ್ಶೂರೆನ್ಸ್ ಕಂಪನಿ ನೋಡಿಕೊಳ್ಳುವುದಿತ್ತು. ನಾನು ಆಸ್ಪತ್ರೆಯಲ್ಲಿ ಕುಳಿತು ನನ್ನ ಯಜಮಾನರ ಹೆಲ್ತ್ ಇನ್ಶೂರೆನ್ಸ್ ನ ಅತ್ಯಂತ ಉದಾಸೀನಮಯವಾದ document ಅನ್ನು ಓದುತ್ತಿದ್ದೆ. ಯಾಕೆ ಓದಬೇಕೆಂದೂ ತಿಳಿದಿರಲಿಲ್ಲ. ಮಾಡಲು ಕೆಲಸವಿಲ್ಲದೆ ಅದನ್ನು ಓದುತ್ತಿದ್ದೆ. ಡಿಸ್ಚಾರ್ಜ್ ಮಾಡುವ ದಿನ ನೋಡಿದಾಗ ಬಿಲ್ ನಲ್ಲಿ ಕೆಲವು ಸಾವಿರ ನಮ್ಮ ಕೈಯಿಂದ ಕೊಡಬೇಕೆಂದು(copayment) ಬರೆದಿತ್ತು. ನನಗೆ ಆಶ್ಚರ್ಯವಾಯಿತು. ಆ document ಪ್ರಕಾರ ನಮಗೆ ಕೋ-ಪೇಮೆಂಟು ಬೀಳಬಾರದಿತ್ತು. ಬಿಲ್ ಕೌಂಟರಿನಲ್ಲಿದ್ದವನ ಬಳಿ ಇನ್ಶೂರೆನ್ಸ್ ಕಂಪನಿ ಕಳಿಸಿದ ಮನ್ನಣೆ ಪತ್ರವನ್ನು (approval letter) ತೋರಿಸಲು ಕೇಳಿದೆ. ಅದನ್ನು ಓದಿ, ಆತ ಹಾಕಿರುವ ಲೆಕ್ಕಾಚಾರ ತಪ್ಪಿದೆಯೆಂದು ಮನವರಿಕೆ ಮಾಡಿಸಲು ಸಾಕು ಸಾಕಾಯಿತು. ಕೊನೆಗೆ ಆತ ತನ್ನ ತಪ್ಪನ್ನು ಒಪ್ಪಿ ಕ್ಷಮೆ ಕೇಳುತ್ತಾ ಹೊಸದಾಗಿ ಬಿಲ್ ತಯಾರಿಸಿ ಕೊಟ್ಟ. ನನಗೆ ಆ ಇನ್ಶೂರೆನ್ document ನಲ್ಲಿ ಏನಿದೆಯೆಂದು ತಿಳಿದಿಲ್ಲದಿದ್ದರೆ ಕೆಲವು ಸಾವಿರ ನಷ್ಟ ಮಾಡಿಕೊಳ್ಳಬೇಕಾಗುತ್ತಿತ್ತೇನೋ. ಸುಮ್ಮನೆ ಓದಿದ್ದು ಉಪಯೋಗಕ್ಕೆ ಬಂದಿತ್ತು.

ಇದು ಇನ್ನೊಂದು ವಿಷಯ. ನಾನು ಕಾರು ನಡೆಸಲು ಕಲಿತು, ಲೈಸನ್ಸ್ ಪಡೆದು ನಾಲ್ಕು ವರ್ಷವಾಗಿದೆಯೇನೋ. ಇಂದಿಗೂ ಸರಿಯಾಗಿ ನಡೆಸಿದ್ದಿಲ್ಲ. ಮೂರು ನಾಲ್ಕು ಕಿಲೋಮೀಟರು ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ನಡೆಸಿ ಸುಮ್ಮನೇ ಬಿಟ್ಟಿದ್ದೆ. ಅಭ್ಯಾಸ ಬಿಟ್ಟು ಹೋದಂತೆಲ್ಲ, ಕಾರು ಬಿಡಲು ಕುಳಿತಾಗ ಭಯ ಆವರಿಸಲಾರಂಭಿಸಿತ್ತು. ಆಸ್ಪತ್ರೆ, ಮನೆ, ಆಫೀಸು ಎಂದು ಓಡಾಡುವಾಗೆಲ್ಲಾ ರಿಕ್ಷಾ, ಟ್ಯಾಕ್ಸಿ ಅಥವಾ ವಜ್ರ (ಬಸ್ಸು)ವನ್ನು ನಂಬಿಕೊಂಡೇ ಬದುಕಬೇಕಾದ್ದಕ್ಕೆ ನನ್ನನ್ನು ನಾನೇ ಹಳಿದುಕೊಂಡಿದ್ದೆ. ಉಪಯೋಗವಿತ್ತೋ, ಇಲ್ಲವೋ ಕಾರೊಂದು ಕಲಿತಿದ್ದರೆ... ಎಂದು ಬಹಳ ಸಲ ಯೋಚಿಸುವಂತಾಗಿತ್ತು. ನಾವು ಏನಾದರೂ ಕಲಿಯುತ್ತಿರುವಾಗ ಸಧ್ಯದ ಉಪಯೋಗವನ್ನು ಮನಸಲ್ಲಿರಿಸದಿರುವುದೇ ಒಳ್ಳೆಯದೇನೋ. ಕಲಿತದ್ದು ಎಂದಾದರೂ ಒಂದುದಿನ ಉಪಯೋಗಕ್ಕೆ ಬರುತ್ತದೆ. ಕಲಿತದ್ದರ ಅಗತ್ಯ ಬಾರದಿದ್ದರೆ ಸುಮ್ಮನಿದ್ದುಬಿಡುವುದು, ಅಗತ್ಯ ಬಂದಾಗ ಕಲಿತಿರದೆ ದುಃಖಿಸುವುದಕ್ಕಿಂತ ಒಳ್ಳೆಯದೆಂದು ನಾನು ಅರಿತುಕೊಂಡೆ.

Wednesday, February 17, 2010

Water colour painting ನನ್ನ ನೆಚ್ಚಿನ ಹವ್ಯಾಸ. ಆದರೆ ಅದನ್ನು ಮಾಡದೆ ವರ್ಷವೇ ಆಯಿತು.
ಬೆಂಗಳೂರಿಗೆ ಬಂದು ಎರಡು ವರ್ಷವಾಗಲು ಬಂತು. ಕೇವಲ ಒಂದೇ painting ಮಾಡಿದ್ದೇನೆ. ಆದರೆ ಅದು ಹಾಳೆಯ ಗುಣದಿಂದಾಗಿ ಬಣ್ಣ ಹಚ್ಚುವಾಗ ಸಿಪ್ಪೆ ಎದ್ದು ಬಹಳ ದುಃಖವಾಯಿತು. ಬಿಟ್ಟು ಹೋದ ಹವ್ಯಾಸವನ್ನು ಪುನಃ ಮುಂದುವರಿಸುವಾಸೆ. ಈ ವರ್ಷ ಕನಿಷ್ಟ ಮೂರಾದರೂ painting ಮಾಡಬೇಕೆಂದುಕೊಂಡಿದ್ದೇನೆ. ನನಗೊಂದು ಪ್ರಶ್ನೆಯಿದೆ. ಬ್ಲಾಗ್ ನಲ್ಲಿ ಹಾಕಿದರೆ ಉತ್ತರ ಬಂದೀತೆಂದು ಭಾವಿಸಿದ್ದೇನೆ.
ಅದಕ್ಕಿಂತ ಮೊದಲು ಕಳೆದ ವರ್ಷ ಮಾಡಿದ painting ನ ಫೋಟೊ:



Water colour painting ಮಾಡಲು ಹಾಳೆಗಳು ಬೇಕು. ಬಣ್ಣವನ್ನು wash ಮಾಡಿದರೆ ಹಾಳೆಯ ಸಿಪ್ಪೆ ಏಳಬಾರದು. ಎಂಥ ಹಾಳೆ ಉಪಯೋಗಿಸಬೇಕು? ಮತ್ತು ಬೆಂಗಳೂರಿನಲ್ಲಿ ಯಾವ ಅಂಗಡಿಯಲ್ಲಿ ಅದನ್ನು ಪಡೆಯಬಹುದು? ಗೊತ್ತಿದ್ದರೆ ದಯವಿಟ್ಟು ಹೇಳಿ.