Thursday, October 15, 2009
Customer care ಅನುಭವ
ಈಗಷ್ಟೇ Airtel prepaid customer care ಗೆ phone ಮಾಡಿದ್ದೆ. ಕೈ ತಪ್ಪಿ ಭಾಷೆ "ಕನ್ನಡ" ಎಂದು ಆರಿಸಿದೆ. Customer care executive ಎಷ್ಟು ಸ್ಫುಟವಾಗಿ, ಸುಂದರವಾಗಿ ಕನ್ನಡ ಮಾತನಾಡಿದಳೆಂದರೆ ಇಡಲು ಮನಸ್ಸೇ ಬರಲಿಲ್ಲ. ಇನ್ನೂ ಕೇಳುತ್ತಲೇ ಇರಬೇಕೆನ್ನಿಸಿತು. ನಿಜಕ್ಕೂ Wow!
Tuesday, March 17, 2009
IT ಎಂದರೆ ಮೂಗು ಮುರಿಯದಿರಿ
ಇವತ್ತು ಒಂದು forwarded mail ನೋಡಿದೆ. ಕನ್ನಡದ ಒಂದು ಬರಹ. IT ಯ ಬಗ್ಗೆ ಬರೆಯಲಾಗಿತ್ತು. ಅದರಲ್ಲಿ ಒಂದು ವಾಕ್ಯ ನನ್ನ ಮನಸಿಗೆ ತಾಗಿತು. "ಡಾಲರ್ ಕನಸನ್ನು ಬೆನ್ನತ್ತಿ ಋಣವನ್ನು ಮರೆತಿದ್ದ ಯುವಕ ಯುವತಿಯರಿಗೆ ಆರ್ಥಿಕ ಸಂಕಷ್ಟ ತಕ್ಕ ಪಾಠ ಕಲಿಸಿದೆ" ಎಂದಿತ್ತು. Recession ಆರಂಭವಾದಾಗಿನಿಂದ ಈ ರೀತಿಯ ಬರಹಗಳನ್ನು ನೋಡುವುದು ಹೊಸತಲ್ಲ. ಆದರೆ ಈ ಬಗ್ಗೆ ಸ್ವಲ್ಪ ಯೋಚಿಸಿದಾಗ ಬಹಳ ದುಃಖವಾಯಿತು.
ನಮ್ಮ ಓರಗೆಯ ಹುಡುಗನೊಬ್ಬ engineering ಮಾಡಬೇಕೆಂದು ಬಯಸಿದ್ದ. ಅದು ಅವನಿಗೆ ಸಾಧ್ಯವಾಗಿರಲಿಲ್ಲ. ಅವನ ಮನೆಯವರು ಸರಳ ಮಧ್ಯಮ ವರ್ಗದವರು. ಕೊನೆಗೆ ಡಿಗ್ರಿ ಕಲಿತು, post graduation ಮಾಡಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಏರು-ಪೇರುಗಳಾಗಿ ಅವನ ಮನೆಯವರು ಚಿಂತಾಕ್ರಾಂತರಾದ ದಿನಗಳು ಇದ್ದವು. ಕೊನೆಗೆ ಸಹಾಯಕ್ಕೆ ಬಂದದ್ದು IT field. IT ಕೆಲಸ ಸಿಕ್ಕ ನಂತರ ಆತನ ಮನೆಯವರು ನಿರಾಳವಾಗಿ ಉಸಿರಾಡಿದ್ದರು.
ನಮ್ಮ ಬಹಳ ಆಪ್ತ ಸಂಬಂಧಿ ಕಳೆದ ವರ್ಷ engineering ಮುಗಿಸಿ ಕೆಲಸಕ್ಕೆ ಸೇರಿದ್ದರು. ಅವನ ಇಷ್ಟ ಪ್ರಕಾರ non-IT ಉದ್ಯೋಗಕ್ಕೆ ಸೇರಿಕೊಂಡ. ನಾವೂ ಪ್ರೋತ್ಸಾಹಿಸಿದ್ದೆವು. ಎರಡು ಬಾರಿ ಉದ್ಯೋಗ ಬದಲಿಸಿದರೂ work culture ಸರಿಹೋಗದೆ ಬಿಟ್ಟು ಬಂದ. ಮನೆಯವರು ಚಿಂತೆಯಲ್ಲಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಲಾರಂಭಿಸಿದ್ದಾರೆ.
ಇಲ್ಲಿ ಕೊಟ್ಟ ಉದಾಹರಣೆಗಳು IT ಯನ್ನು ಹೊಗಳಲಾಗಲೀ, ಇತರ field ಗಳನ್ನು ದೂರಲಿಕ್ಕಾಗಲೀ ಬರೆದುದಲ್ಲ. ಇಲ್ಲಿ ನಾನು ಹೇಳಹೊರಟದ್ದು ಜನರ ಬಗ್ಗೆ... ಜೀವನಕ್ಕಾಗಿ ಉದ್ಯೋಗ ಹಿಡಿಯಹೊರಟ graduateಗಳ ಬಗ್ಗೆ... ಅವರ ಬಗ್ಗೆ ಕಾಳಜಿವಹಿಸುತ್ತಾ, ಚಿಂತೆ ಮಾಡುತ್ತಾ ಇರುವ ಮನೆಯವರ ಬಗ್ಗೆ. ಇಲ್ಲಿರುವ ಎರಡು ಉದಾಹರಣೆಗಳಂತೆ ಅನೇಕವಿರಬಹುದು. ಅಂತೆಯೇ ಅನಿವಾರ್ಯವಾಗಿ IT ಉದ್ಯೋಗಹಿಡಿದವರೂ ಇರಬಹುದು. ಮನೆಯಲ್ಲಿ ಕಷ್ಟ ಪರಿಸ್ಥಿತಿ ಇರುವವರು ಮನೆಯವರ ತೊಂದರೆಗಳನ್ನು ಕಡಿಮೆ ಮಾಡಲು ಒಳ್ಳೆಯ ಪ್ರಯತ್ನದಿಂದ ಈ ಕೆಲಸ ಗಿಟ್ಟಿಸಿಕೊಂಡವರೂ ಇರಬಹುದು. ಇವರೆಲ್ಲರೂ ನಮ್ಮ ನಿಮ್ಮಂತೆಯೇ ಅಲ್ಲವೇ?
ಇಷ್ಟಕ್ಕೂ IT ಎಂದರೆ ಯಾಕಿಷ್ಟು ಮುನಿಸು? Work pressure ಕೆಲವೊಮ್ಮೆ ಅತಿಯೆನಿಸಿದರೂ ಮಾಡಲೇ ಬೇಕಾದ ಕೆಲಸ ಮಾಡುತ್ತಾ ದುಡಿಯುತ್ತಿರುವವರನ್ನು "ಕೂಲಿಗಳು" ಎಂದೇಕೆ ಗೇಲಿ ಮಾಡಬೇಕು? ಒಂದೆಡೆ ಎಲ್ಲ ಉದ್ಯೋಗಗಳೂ ಸಮಾನ ಎನ್ನುವವರು, ಇನ್ನೊಂದೆಡೆ "ಕೂಲಿ" ಎಂಬ ಪದಕ್ಕೆ ಕೀಳೆಂಬ ಅರ್ಥಬರುವಂತೆ ಈರೀತಿಯ ಹೋಲಿಕೆಗಳನ್ನೇಕೆ ಕೊಡಬೇಕು?
Recession ನಿಂದಾಗಿ ನಾವೂ confused ಆಗಿದ್ದೇವೆ. IT ದೂರುವ ಬರಹಗಳಿಗೆ ಉತ್ತರಿಸಬೇಕೆನಿಸಿದರೂ ಸೂಕ್ತ ಸಮಯ ದೊರಕುತ್ತಿಲ್ಲ. ಆದರೂ ಇಂದೇಕೋ ಬೇಸರಬಂದು ಬರೆಯುತ್ತಿದ್ದೇನೆ. ರಾತ್ರಿ ೧:೩೦ ಆಗಿದೆ. ನಾಳೆ officeಗೂ ಹೋಗಬೇಕು. ಕೊನೆಯದಾಗಿ ನಾನು ಕೇಳುವುದು ಇಷ್ಟೇ...
ಅಡಿಕೆ ಬೆಲೆ ಇಳಿದಾಗ ನಾವು, "ಬೆಲೆ ಇದ್ದಾಗ ಚಿನ್ನ, ಬಟ್ಟೆ ಅಂತ ಮೆರೆದರು. ಬೆಲೆ ಇಳಿದಾಗ ನೋಡು... ಚೆನ್ನಾಯಿತು ಅವರಿಗೆ" ಎಂದರೆ ಹೇಗಿರುತ್ತದೆ?
ಮಳೆ ಬಾರದೆ ಭೂಮಿ ಬಿರಿದು ಬೆಳೆ ಕಾಣದಾಗ "ಭೂಮಿಯನ್ನು ನಂಬಿ ಕೆಟ್ಟರು. ಬುದ್ಧಿ ಬರಬೇಕು ಅವರಿಗೆ" ಎಂದರೆ ಹೇಗಿರುತ್ತದೆ?
ಸರಕಾರ lecturers ನ ಹೊಸ appointments ರದ್ದುಗೊಳಿಸಿದಾಗ, "ಹೊಲ ಗದ್ದೆ ಬಿಟ್ಟು ಸರಕಾರಿ ಕೆಲಸದ ಆಸೆಗೆ ಬಿದ್ದ. ಹಾಗೇ ಆಗಬೇಕು ಅವನಿಗೆ" ಎಂದರೆ ಹೇಗಿರುತ್ತದೆ?
ಒಂದು ಪ್ರದೇಶದಲ್ಲಿನ court, ಹೊಸ cases ಆರಂಭಿಸಲಿಕ್ಕಿಲ್ಲ, ಹಳೇ cases ಮುಗಿಸಿ ನಿಲ್ಲಿಸಿಬಿಡುವುದು ಎಂದು ತೀರ್ಮಾನಿಸಿತ್ತು. ಅಂಥ ಸಂದರ್ಭ, "ಸುಳ್ಳು ಹೇಳುವ ವಕೀಲರಿಗೆ ತಕ್ಕ ಶಾಸ್ತಿಯಾಯಿತು. ಒಳ್ಳೆಯದು" ಎಂದರೆ ಹೇಗಿರುತ್ತದೆ?
ತೀರಾ ಜಾಸ್ತಿ ಎನಿಸಿತೇ? ಸರಿಯಾಗಿ ಯೋಚಿಸಿ ನೋಡಿ.
.
ನಮ್ಮ ಓರಗೆಯ ಹುಡುಗನೊಬ್ಬ engineering ಮಾಡಬೇಕೆಂದು ಬಯಸಿದ್ದ. ಅದು ಅವನಿಗೆ ಸಾಧ್ಯವಾಗಿರಲಿಲ್ಲ. ಅವನ ಮನೆಯವರು ಸರಳ ಮಧ್ಯಮ ವರ್ಗದವರು. ಕೊನೆಗೆ ಡಿಗ್ರಿ ಕಲಿತು, post graduation ಮಾಡಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಏರು-ಪೇರುಗಳಾಗಿ ಅವನ ಮನೆಯವರು ಚಿಂತಾಕ್ರಾಂತರಾದ ದಿನಗಳು ಇದ್ದವು. ಕೊನೆಗೆ ಸಹಾಯಕ್ಕೆ ಬಂದದ್ದು IT field. IT ಕೆಲಸ ಸಿಕ್ಕ ನಂತರ ಆತನ ಮನೆಯವರು ನಿರಾಳವಾಗಿ ಉಸಿರಾಡಿದ್ದರು.
ನಮ್ಮ ಬಹಳ ಆಪ್ತ ಸಂಬಂಧಿ ಕಳೆದ ವರ್ಷ engineering ಮುಗಿಸಿ ಕೆಲಸಕ್ಕೆ ಸೇರಿದ್ದರು. ಅವನ ಇಷ್ಟ ಪ್ರಕಾರ non-IT ಉದ್ಯೋಗಕ್ಕೆ ಸೇರಿಕೊಂಡ. ನಾವೂ ಪ್ರೋತ್ಸಾಹಿಸಿದ್ದೆವು. ಎರಡು ಬಾರಿ ಉದ್ಯೋಗ ಬದಲಿಸಿದರೂ work culture ಸರಿಹೋಗದೆ ಬಿಟ್ಟು ಬಂದ. ಮನೆಯವರು ಚಿಂತೆಯಲ್ಲಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಲಾರಂಭಿಸಿದ್ದಾರೆ.
ಇಲ್ಲಿ ಕೊಟ್ಟ ಉದಾಹರಣೆಗಳು IT ಯನ್ನು ಹೊಗಳಲಾಗಲೀ, ಇತರ field ಗಳನ್ನು ದೂರಲಿಕ್ಕಾಗಲೀ ಬರೆದುದಲ್ಲ. ಇಲ್ಲಿ ನಾನು ಹೇಳಹೊರಟದ್ದು ಜನರ ಬಗ್ಗೆ... ಜೀವನಕ್ಕಾಗಿ ಉದ್ಯೋಗ ಹಿಡಿಯಹೊರಟ graduateಗಳ ಬಗ್ಗೆ... ಅವರ ಬಗ್ಗೆ ಕಾಳಜಿವಹಿಸುತ್ತಾ, ಚಿಂತೆ ಮಾಡುತ್ತಾ ಇರುವ ಮನೆಯವರ ಬಗ್ಗೆ. ಇಲ್ಲಿರುವ ಎರಡು ಉದಾಹರಣೆಗಳಂತೆ ಅನೇಕವಿರಬಹುದು. ಅಂತೆಯೇ ಅನಿವಾರ್ಯವಾಗಿ IT ಉದ್ಯೋಗಹಿಡಿದವರೂ ಇರಬಹುದು. ಮನೆಯಲ್ಲಿ ಕಷ್ಟ ಪರಿಸ್ಥಿತಿ ಇರುವವರು ಮನೆಯವರ ತೊಂದರೆಗಳನ್ನು ಕಡಿಮೆ ಮಾಡಲು ಒಳ್ಳೆಯ ಪ್ರಯತ್ನದಿಂದ ಈ ಕೆಲಸ ಗಿಟ್ಟಿಸಿಕೊಂಡವರೂ ಇರಬಹುದು. ಇವರೆಲ್ಲರೂ ನಮ್ಮ ನಿಮ್ಮಂತೆಯೇ ಅಲ್ಲವೇ?
ಇಷ್ಟಕ್ಕೂ IT ಎಂದರೆ ಯಾಕಿಷ್ಟು ಮುನಿಸು? Work pressure ಕೆಲವೊಮ್ಮೆ ಅತಿಯೆನಿಸಿದರೂ ಮಾಡಲೇ ಬೇಕಾದ ಕೆಲಸ ಮಾಡುತ್ತಾ ದುಡಿಯುತ್ತಿರುವವರನ್ನು "ಕೂಲಿಗಳು" ಎಂದೇಕೆ ಗೇಲಿ ಮಾಡಬೇಕು? ಒಂದೆಡೆ ಎಲ್ಲ ಉದ್ಯೋಗಗಳೂ ಸಮಾನ ಎನ್ನುವವರು, ಇನ್ನೊಂದೆಡೆ "ಕೂಲಿ" ಎಂಬ ಪದಕ್ಕೆ ಕೀಳೆಂಬ ಅರ್ಥಬರುವಂತೆ ಈರೀತಿಯ ಹೋಲಿಕೆಗಳನ್ನೇಕೆ ಕೊಡಬೇಕು?
Recession ನಿಂದಾಗಿ ನಾವೂ confused ಆಗಿದ್ದೇವೆ. IT ದೂರುವ ಬರಹಗಳಿಗೆ ಉತ್ತರಿಸಬೇಕೆನಿಸಿದರೂ ಸೂಕ್ತ ಸಮಯ ದೊರಕುತ್ತಿಲ್ಲ. ಆದರೂ ಇಂದೇಕೋ ಬೇಸರಬಂದು ಬರೆಯುತ್ತಿದ್ದೇನೆ. ರಾತ್ರಿ ೧:೩೦ ಆಗಿದೆ. ನಾಳೆ officeಗೂ ಹೋಗಬೇಕು. ಕೊನೆಯದಾಗಿ ನಾನು ಕೇಳುವುದು ಇಷ್ಟೇ...
ಅಡಿಕೆ ಬೆಲೆ ಇಳಿದಾಗ ನಾವು, "ಬೆಲೆ ಇದ್ದಾಗ ಚಿನ್ನ, ಬಟ್ಟೆ ಅಂತ ಮೆರೆದರು. ಬೆಲೆ ಇಳಿದಾಗ ನೋಡು... ಚೆನ್ನಾಯಿತು ಅವರಿಗೆ" ಎಂದರೆ ಹೇಗಿರುತ್ತದೆ?
ಮಳೆ ಬಾರದೆ ಭೂಮಿ ಬಿರಿದು ಬೆಳೆ ಕಾಣದಾಗ "ಭೂಮಿಯನ್ನು ನಂಬಿ ಕೆಟ್ಟರು. ಬುದ್ಧಿ ಬರಬೇಕು ಅವರಿಗೆ" ಎಂದರೆ ಹೇಗಿರುತ್ತದೆ?
ಸರಕಾರ lecturers ನ ಹೊಸ appointments ರದ್ದುಗೊಳಿಸಿದಾಗ, "ಹೊಲ ಗದ್ದೆ ಬಿಟ್ಟು ಸರಕಾರಿ ಕೆಲಸದ ಆಸೆಗೆ ಬಿದ್ದ. ಹಾಗೇ ಆಗಬೇಕು ಅವನಿಗೆ" ಎಂದರೆ ಹೇಗಿರುತ್ತದೆ?
ಒಂದು ಪ್ರದೇಶದಲ್ಲಿನ court, ಹೊಸ cases ಆರಂಭಿಸಲಿಕ್ಕಿಲ್ಲ, ಹಳೇ cases ಮುಗಿಸಿ ನಿಲ್ಲಿಸಿಬಿಡುವುದು ಎಂದು ತೀರ್ಮಾನಿಸಿತ್ತು. ಅಂಥ ಸಂದರ್ಭ, "ಸುಳ್ಳು ಹೇಳುವ ವಕೀಲರಿಗೆ ತಕ್ಕ ಶಾಸ್ತಿಯಾಯಿತು. ಒಳ್ಳೆಯದು" ಎಂದರೆ ಹೇಗಿರುತ್ತದೆ?
ತೀರಾ ಜಾಸ್ತಿ ಎನಿಸಿತೇ? ಸರಿಯಾಗಿ ಯೋಚಿಸಿ ನೋಡಿ.
.
Monday, February 16, 2009
ಸಾಂಸ್ಕೃತಿಕ ದ್ವಂದ್ವ?
ಕೆಲವು ತಿಂಗಳುಗಳ ಹಿಂದೆ ಒಂದು ಮುಸ್ಸಂಜೆ Birthday party ಗೆ ಹೋಗಿದ್ದೆ. Birthday ಆಚರಿಸುತ್ತಿರುವ ಮಗು partyಯ ಕೇಂದ್ರ ಬಿಂದು. ಮನೆ ಪೂರ್ತಿ ಬಣ್ಣದ balloons. ಚಿಕ್ಕ ಮಕ್ಕಳೆಲ್ಲ ಸೇರಿ ಗಲಾಟೆ ಎಬ್ಬಿಸುತ್ತಾ ಕೇಕೆ ಹಾಕುತ್ತಿದ್ದುದು ನೋಡಲು ಬಲು ಮುದ ನೀಡುತ್ತಿತ್ತು. ಮಕ್ಕಳೆಲ್ಲ ಕಾತರದಿಂದ ಕಾಯುತ್ತಿದ್ದ cake cutting ಕಾರ್ಯಕ್ರಮ ಇನ್ನೇನು ಪ್ರಾರಂಭವಾಗುವುದರಲ್ಲಿತ್ತು. ಎಲ್ಲರ ಕೈಯಲ್ಲಿ ಬಣ್ಣ ಬಣ್ಣದ ಉಡುಗೊರೆ ಪೆಟ್ಟಿಗೆಗಳು.
Cherry, gemsನಿಂದ ಅಲಂಕರಿಸಿದ್ದ cake ತರಲಾಯಿತು. ಅದರ ಮೇಲೆ ಸಂಖ್ಯೆಯ ಆಕಾರದ ಮೇಣದ ಬತ್ತಿ. ಮೇಣದ ಬತ್ತಿ ಉರಿಸಲಾಯಿತು. ಅದನ್ನು ಊದಿ cake ಕತ್ತರಿಸಿ ಎಲ್ಲರೂ ತಿಂದಲ್ಲಿಗೆ ಮುಗಿಯಿತು ಎಂದು ಭಾವಿಸಿ ನಾನು ನೋಡುತ್ತಿದ್ದೆ. Birthday boy ಮೇಣದ ಬತ್ತಿ ಇನ್ನೇನು ಆರಿಸಬೇಕೆನ್ನುವಷ್ಟರಲ್ಲಿ "ಹಾಗಲ್ಲ!" ಎಂದು ಅವರಮ್ಮ ಕೂಗಿದರು. ನೋಡಿದರೆ "ಮೇಣದ ಬತ್ತಿ ಆರಿಸಬಾರದು" ಎನ್ನುತ್ತಾ ಅವರು ಒಂದು ತಟ್ಟೆ ಹಿಡಿದು ಬರುತ್ತಿದ್ದಾರೆ. ತಟ್ಟೆಯಲ್ಲಿ ನೀಲಾಂಜನದಂತಹ ಪುಟ್ಟ ದೀಪ. ಅವರು ಸುಮಾರು 5-5 ಜನರನ್ನು ಗಂಪಾಗಿ ಕರೆಯಲಾರಂಭಿಸಿದರು. ಎಲ್ಲರೂ ಸೇರಿ ಮಗುವಿಗೆ ಆರತಿ ಮಾಡಿದರು. ಕೊನೆಗೆ cake ಕತ್ತರಿಸಿದರು. ಉಡುಗೊರೆ ಕೊಟ್ಟಾದ ನಂತರ ಎಲ್ಲರಿಗೂ cake ಮತ್ತು snacks ಕೊಟ್ಟರು. snacks ಅಂದರೆ ಶ್ಯಾವಿಗೆ, ಹೋಳಿಗೆ, ಮಂಚೂರಿ, ಚಿಪ್ಸ್ ಇತ್ಯಾದಿ.
ಎಲ್ಲ ಮುಗಿದಾಗ 9 ಗಂಟೆಯಾಗಿರಬಹುದು. ಮನೆಗೆ ಹೊರಟಾಗ ನಾನು ಪತಿಯಲ್ಲಿ ಹೇಳಿದೆ...
"ಸಮಾರಂಭವೇನೋ ಚೆನ್ನಾಗಿತ್ತು. ನನಗೆ ಮಾತ್ರ ಕೆಲ ವಿಚಾರಗಳು ಇಷ್ಟವಾಗಲಿಲ್ಲ. Indian ಮತ್ತು western culture ಮಿಶ್ರಮಾಡಿ ಎರಡನ್ನೂ ಕೆಡಿಸುತ್ತಿದ್ದಾರೆ. ಅವರಿಗೆ ದೀಪ ಆರಿಸುವುದು ಇಷ್ಟವಿಲ್ಲ. ಆದರೆ cake ಕತ್ತರಿಸುವುದು ಬೇಕು. ಮುಸ್ಸಂಜೆ ದೀಪ ಹಚ್ಚಿ, 8 ಗಂಟೆಗೆ snacks ವಿತರಿಸುತ್ತಿದ್ದಾರೆ. ಇದರ ಬದಲು ಸಣ್ಣ ಔತಣ ಕೂಟ ಇಡಬಹುದಿತ್ತು. ಅಥವಾ ಸಂಜೆ cake cutting ಮತ್ತು snacks ಕೊಟ್ಟರೆ ಆಗಬಹುದಿತ್ತು. ಹೇಗೂ western ಕ್ರಮ ಬಳಸುವರಂತೆ, ಮೋಂಬತ್ತಿ ಆರಿಸಹೊರಟಾಗ ಭಾರತೀಯತೆ ಯಾಕೆ ಕಾಡಬೇಕು? ಮುಂದೆ cake ಇರಿಸಿ, ಮಗುವನ್ನು ಸೇರಿಸಿ cake ಗೂ ಆರತಿ! ನನಗೇಕೋ ಇದು ಬಹಳ odd ಅನ್ನಿಸಿತು. ಜನವರಿ 1ರಂದು ದೇವಸ್ಥಾನಕ್ಕೆ ಹೋದಂತೆ"
ಅವರ ಯೋಚನೆ ಮಾತ್ರ ನನ್ನ ಯೋಚನೆಗಿಂತ ಭಿನ್ನವಾಗಿತ್ತು. "ಮಕ್ಕಳು ಬೇರೆ ಕಡೆಗಳಲ್ಲಿ, TV ಕಾರ್ಯಕ್ರಮಗಳಲ್ಲಿ, Birthday ನೋಡುತ್ತಾರೆ. ತಮಗೂ ಅದೇ ತರಹದ ಆಚರಣೆ ಬೇಕು ಎಂದು ಬಯಸುತ್ತಾರೆ. ಮನೆಗಳಲ್ಲಿ ಹಿರಿಯರು ಇದ್ದರೆ, ಅಥವಾ Birthday ಯಂದು ಬಂದರೆ, ಅವರು ಭಾರತೀಯ ಕ್ರಮದಲ್ಲಿ ಆಚರಿಸಲು ಬಯಸಿಯಾರು, ಇಲ್ಲದಿದ್ದರೆ western ಕ್ರಮವನ್ನು ಸುಲಭವಾಗಿ ಸ್ವೀಕರಿಸಲಾರದೆ ಹೋದಾರು. ಯಾರಿಗೂ ಮನಸ್ಸಿಗೆ ಬೇಸವಾಗದಿರಲಿ ಅಂತ ಹೀಗೆ ಕ್ರಮಗಳನ್ನು ಬೆರೆಸುತ್ತಿರಬಹುದು. ನನಗೆ ಅದರಲ್ಲಿ odd ಆದದ್ದೇನೂ ಕಾಣಿಸುತ್ತಿಲ್ಲ" ಅಂದರು.
ಕೊನೆಗೂ ನಮಗೆ ಇಬ್ಬರಿಗೂ ಒಪ್ಪಿಗೆಯಾಗುವ ನಿರ್ಧಾರಕ್ಕೆ ಬರಲಾಗಲೇ ಇಲ್ಲ. "ಏನೇ ಆದರೂ ಇದನ್ನು cultural dilemma ಎನ್ನಬಹುದಷ್ಟೆ" ಎಂದು ಹೇಳಿದೆ. ಆನಂತರ ನಾವು ಇಷ್ಟರವರೆಗೆ ಆ ವಿಷಯ ಚರ್ಚಿಸಿಲ್ಲ. ಇಬ್ಬರೂ ಅವರವರ opinion ಗಳಲ್ಲೇ ಖುಶಿಯಾಗಿದ್ದೇವೆೆ!
Cherry, gemsನಿಂದ ಅಲಂಕರಿಸಿದ್ದ cake ತರಲಾಯಿತು. ಅದರ ಮೇಲೆ ಸಂಖ್ಯೆಯ ಆಕಾರದ ಮೇಣದ ಬತ್ತಿ. ಮೇಣದ ಬತ್ತಿ ಉರಿಸಲಾಯಿತು. ಅದನ್ನು ಊದಿ cake ಕತ್ತರಿಸಿ ಎಲ್ಲರೂ ತಿಂದಲ್ಲಿಗೆ ಮುಗಿಯಿತು ಎಂದು ಭಾವಿಸಿ ನಾನು ನೋಡುತ್ತಿದ್ದೆ. Birthday boy ಮೇಣದ ಬತ್ತಿ ಇನ್ನೇನು ಆರಿಸಬೇಕೆನ್ನುವಷ್ಟರಲ್ಲಿ "ಹಾಗಲ್ಲ!" ಎಂದು ಅವರಮ್ಮ ಕೂಗಿದರು. ನೋಡಿದರೆ "ಮೇಣದ ಬತ್ತಿ ಆರಿಸಬಾರದು" ಎನ್ನುತ್ತಾ ಅವರು ಒಂದು ತಟ್ಟೆ ಹಿಡಿದು ಬರುತ್ತಿದ್ದಾರೆ. ತಟ್ಟೆಯಲ್ಲಿ ನೀಲಾಂಜನದಂತಹ ಪುಟ್ಟ ದೀಪ. ಅವರು ಸುಮಾರು 5-5 ಜನರನ್ನು ಗಂಪಾಗಿ ಕರೆಯಲಾರಂಭಿಸಿದರು. ಎಲ್ಲರೂ ಸೇರಿ ಮಗುವಿಗೆ ಆರತಿ ಮಾಡಿದರು. ಕೊನೆಗೆ cake ಕತ್ತರಿಸಿದರು. ಉಡುಗೊರೆ ಕೊಟ್ಟಾದ ನಂತರ ಎಲ್ಲರಿಗೂ cake ಮತ್ತು snacks ಕೊಟ್ಟರು. snacks ಅಂದರೆ ಶ್ಯಾವಿಗೆ, ಹೋಳಿಗೆ, ಮಂಚೂರಿ, ಚಿಪ್ಸ್ ಇತ್ಯಾದಿ.
ಎಲ್ಲ ಮುಗಿದಾಗ 9 ಗಂಟೆಯಾಗಿರಬಹುದು. ಮನೆಗೆ ಹೊರಟಾಗ ನಾನು ಪತಿಯಲ್ಲಿ ಹೇಳಿದೆ...
"ಸಮಾರಂಭವೇನೋ ಚೆನ್ನಾಗಿತ್ತು. ನನಗೆ ಮಾತ್ರ ಕೆಲ ವಿಚಾರಗಳು ಇಷ್ಟವಾಗಲಿಲ್ಲ. Indian ಮತ್ತು western culture ಮಿಶ್ರಮಾಡಿ ಎರಡನ್ನೂ ಕೆಡಿಸುತ್ತಿದ್ದಾರೆ. ಅವರಿಗೆ ದೀಪ ಆರಿಸುವುದು ಇಷ್ಟವಿಲ್ಲ. ಆದರೆ cake ಕತ್ತರಿಸುವುದು ಬೇಕು. ಮುಸ್ಸಂಜೆ ದೀಪ ಹಚ್ಚಿ, 8 ಗಂಟೆಗೆ snacks ವಿತರಿಸುತ್ತಿದ್ದಾರೆ. ಇದರ ಬದಲು ಸಣ್ಣ ಔತಣ ಕೂಟ ಇಡಬಹುದಿತ್ತು. ಅಥವಾ ಸಂಜೆ cake cutting ಮತ್ತು snacks ಕೊಟ್ಟರೆ ಆಗಬಹುದಿತ್ತು. ಹೇಗೂ western ಕ್ರಮ ಬಳಸುವರಂತೆ, ಮೋಂಬತ್ತಿ ಆರಿಸಹೊರಟಾಗ ಭಾರತೀಯತೆ ಯಾಕೆ ಕಾಡಬೇಕು? ಮುಂದೆ cake ಇರಿಸಿ, ಮಗುವನ್ನು ಸೇರಿಸಿ cake ಗೂ ಆರತಿ! ನನಗೇಕೋ ಇದು ಬಹಳ odd ಅನ್ನಿಸಿತು. ಜನವರಿ 1ರಂದು ದೇವಸ್ಥಾನಕ್ಕೆ ಹೋದಂತೆ"
ಅವರ ಯೋಚನೆ ಮಾತ್ರ ನನ್ನ ಯೋಚನೆಗಿಂತ ಭಿನ್ನವಾಗಿತ್ತು. "ಮಕ್ಕಳು ಬೇರೆ ಕಡೆಗಳಲ್ಲಿ, TV ಕಾರ್ಯಕ್ರಮಗಳಲ್ಲಿ, Birthday ನೋಡುತ್ತಾರೆ. ತಮಗೂ ಅದೇ ತರಹದ ಆಚರಣೆ ಬೇಕು ಎಂದು ಬಯಸುತ್ತಾರೆ. ಮನೆಗಳಲ್ಲಿ ಹಿರಿಯರು ಇದ್ದರೆ, ಅಥವಾ Birthday ಯಂದು ಬಂದರೆ, ಅವರು ಭಾರತೀಯ ಕ್ರಮದಲ್ಲಿ ಆಚರಿಸಲು ಬಯಸಿಯಾರು, ಇಲ್ಲದಿದ್ದರೆ western ಕ್ರಮವನ್ನು ಸುಲಭವಾಗಿ ಸ್ವೀಕರಿಸಲಾರದೆ ಹೋದಾರು. ಯಾರಿಗೂ ಮನಸ್ಸಿಗೆ ಬೇಸವಾಗದಿರಲಿ ಅಂತ ಹೀಗೆ ಕ್ರಮಗಳನ್ನು ಬೆರೆಸುತ್ತಿರಬಹುದು. ನನಗೆ ಅದರಲ್ಲಿ odd ಆದದ್ದೇನೂ ಕಾಣಿಸುತ್ತಿಲ್ಲ" ಅಂದರು.
ಕೊನೆಗೂ ನಮಗೆ ಇಬ್ಬರಿಗೂ ಒಪ್ಪಿಗೆಯಾಗುವ ನಿರ್ಧಾರಕ್ಕೆ ಬರಲಾಗಲೇ ಇಲ್ಲ. "ಏನೇ ಆದರೂ ಇದನ್ನು cultural dilemma ಎನ್ನಬಹುದಷ್ಟೆ" ಎಂದು ಹೇಳಿದೆ. ಆನಂತರ ನಾವು ಇಷ್ಟರವರೆಗೆ ಆ ವಿಷಯ ಚರ್ಚಿಸಿಲ್ಲ. ಇಬ್ಬರೂ ಅವರವರ opinion ಗಳಲ್ಲೇ ಖುಶಿಯಾಗಿದ್ದೇವೆೆ!
Saturday, January 17, 2009
ದೂರುವ ಅರ್ಹತೆ ಇದೆಯೇ?
ಒ೦ದು ಸರಕಾರಿ ಕಛೇರಿ. ಹೆಸರು ಹೇಳಲಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದ್ದು. ಮೂರು ಬಾರಿ ಕರೆಯಿತು. ಅದು ಸರಿ ಇಲ್ಲ... ಇದು ಸರಿ ಇಲ್ಲ...clarifications...ಆ document ಕೊಡಿ... ಈ document ಕೊಡಿ... ಆಫೀಸಿಗೆ ರಜಾ ಹಾಕಿ ಹೋಗಬೇಕಾಯಿತು. ಎರಡು ಬಾರಿ ಸಂಬಂಧವಿಲ್ಲದ department ಗೆ... ಮತ್ತೊ೦ದು ಬಾರಿ ಬರಹೇಳಿದ ಆಫೀಸರು ರಜಾ.
ಕೊನೆಗೂ ಎಲ್ಲ settle ಆಗುವ ದಿನ ಬ೦ತು. ಏನೂ ಸಮಸ್ಯೆಗಳಿಲ್ಲ ಎ೦ಬುದನ್ನು ತಿಳಿಸಿದ ಪತ್ರ ಪಡೆಯಲು ಬರಹೇಳಿದ್ದರು. ತಕ್ಷಣ ಹೋದೆವು. ಆಫೀಸರು ಇನ್ನೇನು ಬರುತ್ತಾರೆ, 15 ನಿಮಿಷ ಕೂತಿರಿ ಎ೦ದರು. ಕೊನೆಗೆ ಸಹಿ ಹಾಕಿಸಿ ಪತ್ರ ಕೊಟ್ಟರು. ಅಷ್ಟೇ ಅಲ್ಲ... ಯಾವ ಸಂಕೋಚವೂ ಇಲ್ಲದೆ ದುಡ್ಡು ಕೊಡಬೇಕೆಂದರು.
ಎಷ್ಟು ಎಂದು ಕೇಳಿದರೆ ಮಾತಿಲ್ಲ! 10, 50, 100....? 200 ರೂಪಾಯಿ ಕೊಡಬೇಕಾಯಿತು. ಅಬ್ಬ! ಮುಗಿಯಿತು ಎ೦ದು ಪತ್ರ ನೋಡಿದರೆ, ನಮಗೆ ಬರಬೇಕಿದ್ದ 1500 ರೂಪಾಯಿ ಕೊಡಲ್ಪಟ್ಟಿದೆ ಎ೦ದಿದೆ! ಅದರ ಬಗ್ಗೆ ಕೇಳಿದಾಗ internet ಮೂಲಕ ನವಂಬರದಲ್ಲಿ Bank ಗೆ ಕಳಿಸಿರುವುದಾಗಿ ಹೇಳಿದರು.
ಮರಳಿ ಏನೋ ಬಂದಾಯಿತು. Bank ನಲ್ಲಿ ನೋಡಿದರೆ ಹಣವೇ ಬಂದಿಲ್ಲ! ನಮ್ಮದೇ ಹಣ, ನಮ್ಮ ತಪ್ಪಿಲ್ಲದಿದ್ದರೂ ನಮಗೆ ಬಂದಿಲ್ಲ! ಅದರ ಮೇಲೆ 200 ರೂಪಾಯಿ ನಷ್ಟ ಬೇರೆ. ಆಪ್ತರಲ್ಲಿ ಹೇಳಿಕೊಳ್ಳುವ ಎಂದು ಫೋನಾಯಿಸಿದೆ. "ತೊಂದರೆ ತಪ್ಪಿತಲ್ಲ ಎಂದು ಸುಮ್ಮನಿದ್ದು ಬಿಡಿ. ಇದು ಬಲು ಉಪದ್ರವಕಾರಿ ಕೆಲಸ, ಇದರ ತಂಟೆಗೆ ಹೋಗದಿರುವುದೇ ಒಳ್ಳೆಯದು" ಎಂದರು.
ಬಹಳ ಬೇಸರವಾಯಿತು. 4 working days waste ಮಾಡಿ ಏನೂ ಉಪಯೋಗವಾಗಲಿಲ್ಲ. ದುಡ್ಡು ಕೊಡದೆ ಹೋಗಿದ್ದರೆ ಇನ್ನೆಷ್ಟು ದಿನ waste ಆಗುತ್ತಿತ್ತೋ? ದೇಶ, ಭ್ರಷ್ಟಾಚಾರ ಎಂದೆಲ್ಲ ಕೂಗಾಡುತ್ತೇವೆ, ನಾವೂ ಮಾಡಿದ್ದೇನು? ಅದೇ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸಿದ್ದು. ಯಾರನ್ನು ದೂರುವುದು? ವಿರೋಧಿಸುತ್ತ ಕೂರಲು ನಮಗೆ ಸಮಯವೆಲ್ಲಿದೆ? ಇದನ್ನು ಬಳಸಿಕೊಂಡು ಹಣ ತಿನ್ನತ್ತಾರೆ. ಅದಕ್ಕೆ ಸರಿಯಾಗಿ ನಾವೂ ಕೊಡುತ್ತೇವೆ. ನೆನೆಸಿಕೊಂಡು ನನ್ನ ಮೇಲೆಯೇ ಸಿಟ್ಟು ಬಂತು. ತಲೆ ಕೆಟ್ಟಂತಾಯಿತು.
ಚಿಕ್ಕಂದಿನಿಂದ ಏನನ್ನು ತಪ್ಪೆಂದು ಹೇಳಿಸಿಕೊಂಡು ಬಂದಿದ್ದೆವೋ, ಇಂದು ಅದೇ ಸರಿಯಾದ (ಸುಲಭವಾದದ್ದರಿಂದ) ಮಾರ್ಗ ಎಂದು ಹೇಳಿಸಿಕೊಳ್ಳುತ್ತಿದ್ದೇವೆ. ಮನಸಿಗೆ ಇದನ್ನು ಒಪ್ಪಿಕೊಳ್ಳಲಾಗದೆ ದುಃಖವಾಯಿತು. ಯಾಕೆ ಕಲಿಸಬೇಕು ಒಳ್ಳೆಯದು ಕೆಟ್ಟದರ ನಡುವಿನ ವ್ಯತ್ಯಾಸ, ಮುಂದೆ ಸುಲಭ ಮಾರ್ಗವನ್ನೇ ಅನುಸರಿಸುವುದಾದರೆ? ಗೆಳತಿಗೆ ಫೋನ್ ಮಾಡಿದೆ. stipend ಸಿಗುವುದೆಂಬ ಭರವಸೆಯಲ್ಲಿ Higher Studies ಮಾಡಹೊರಟವಳು ಆಕೆ. ಕೊನೆಯ semester ತಲುಪಿದರೂ ಒಮ್ಮೆಯೂ ಬರಲಿಲ್ಲ stipend. ಸಂಬಂಧಪಟ್ಟ ಎಲ್ಲರಲ್ಲೂ ವಿಚಾರಿಸಿದ್ದಾಳೆ. ಎಲ್ಲರೂ ಇನ್ನೊಬ್ಬರ ತಲೆ ಮೇಲೆ ದೂರು ಹಾಕಿ ಸುಮ್ಮನಾಗಿದ್ದಾರೆ. ಅವಳಂತೆ stipend ಸಿಗದ ಇತರರು ವಿಚಾರಿಸುವ ಧೈರ್ಯವಿಲ್ಲದೆ ಸುಮ್ಮನಿದ್ದಾರೆ.
ಅವಳೊಡನೆ ಹರಟಿದೆ. ಸರಕಾರಿ ಕಛೇರಿಗಳಲ್ಲಿ ಕೊಡಬೇಕಾದ ಲಂಚದ chart ಹಾಕುವುದು ಒಳ್ಳೆಯದು;
letter ಪಡೆಯಲು.... ರೂ. 50
ಒಂದು ಮೇಜಿನಿಂದ ಇನ್ನೊಂದು ಮೇಜಿಗೆ file ವರ್ಗಾಯಿಸಲು.... ರೂ. 100
ಅಧಿಕಾರಿಗಳ ಸಹಿ ಪಡೆಯಲು.... ರೂ. 200 ....
ಹೀಗಿದ್ದರೆ ಸ್ವಲ್ಪವಾದರೂ ಒಳ್ಳೆಯದಾದೀತು... Black money, white ಆಗದಿದ್ದರೂ at least, grey ಆದೀತು ಎಂದು ಅಸಹಾಯಕತೆಯನ್ನು ಹಳಿದುಕೊಳ್ಳುತ್ತಲೇ ನಕ್ಕೆವು.
ಕೊನೆಗೂ ಎಲ್ಲ settle ಆಗುವ ದಿನ ಬ೦ತು. ಏನೂ ಸಮಸ್ಯೆಗಳಿಲ್ಲ ಎ೦ಬುದನ್ನು ತಿಳಿಸಿದ ಪತ್ರ ಪಡೆಯಲು ಬರಹೇಳಿದ್ದರು. ತಕ್ಷಣ ಹೋದೆವು. ಆಫೀಸರು ಇನ್ನೇನು ಬರುತ್ತಾರೆ, 15 ನಿಮಿಷ ಕೂತಿರಿ ಎ೦ದರು. ಕೊನೆಗೆ ಸಹಿ ಹಾಕಿಸಿ ಪತ್ರ ಕೊಟ್ಟರು. ಅಷ್ಟೇ ಅಲ್ಲ... ಯಾವ ಸಂಕೋಚವೂ ಇಲ್ಲದೆ ದುಡ್ಡು ಕೊಡಬೇಕೆಂದರು.
ಎಷ್ಟು ಎಂದು ಕೇಳಿದರೆ ಮಾತಿಲ್ಲ! 10, 50, 100....? 200 ರೂಪಾಯಿ ಕೊಡಬೇಕಾಯಿತು. ಅಬ್ಬ! ಮುಗಿಯಿತು ಎ೦ದು ಪತ್ರ ನೋಡಿದರೆ, ನಮಗೆ ಬರಬೇಕಿದ್ದ 1500 ರೂಪಾಯಿ ಕೊಡಲ್ಪಟ್ಟಿದೆ ಎ೦ದಿದೆ! ಅದರ ಬಗ್ಗೆ ಕೇಳಿದಾಗ internet ಮೂಲಕ ನವಂಬರದಲ್ಲಿ Bank ಗೆ ಕಳಿಸಿರುವುದಾಗಿ ಹೇಳಿದರು.
ಮರಳಿ ಏನೋ ಬಂದಾಯಿತು. Bank ನಲ್ಲಿ ನೋಡಿದರೆ ಹಣವೇ ಬಂದಿಲ್ಲ! ನಮ್ಮದೇ ಹಣ, ನಮ್ಮ ತಪ್ಪಿಲ್ಲದಿದ್ದರೂ ನಮಗೆ ಬಂದಿಲ್ಲ! ಅದರ ಮೇಲೆ 200 ರೂಪಾಯಿ ನಷ್ಟ ಬೇರೆ. ಆಪ್ತರಲ್ಲಿ ಹೇಳಿಕೊಳ್ಳುವ ಎಂದು ಫೋನಾಯಿಸಿದೆ. "ತೊಂದರೆ ತಪ್ಪಿತಲ್ಲ ಎಂದು ಸುಮ್ಮನಿದ್ದು ಬಿಡಿ. ಇದು ಬಲು ಉಪದ್ರವಕಾರಿ ಕೆಲಸ, ಇದರ ತಂಟೆಗೆ ಹೋಗದಿರುವುದೇ ಒಳ್ಳೆಯದು" ಎಂದರು.
ಬಹಳ ಬೇಸರವಾಯಿತು. 4 working days waste ಮಾಡಿ ಏನೂ ಉಪಯೋಗವಾಗಲಿಲ್ಲ. ದುಡ್ಡು ಕೊಡದೆ ಹೋಗಿದ್ದರೆ ಇನ್ನೆಷ್ಟು ದಿನ waste ಆಗುತ್ತಿತ್ತೋ? ದೇಶ, ಭ್ರಷ್ಟಾಚಾರ ಎಂದೆಲ್ಲ ಕೂಗಾಡುತ್ತೇವೆ, ನಾವೂ ಮಾಡಿದ್ದೇನು? ಅದೇ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸಿದ್ದು. ಯಾರನ್ನು ದೂರುವುದು? ವಿರೋಧಿಸುತ್ತ ಕೂರಲು ನಮಗೆ ಸಮಯವೆಲ್ಲಿದೆ? ಇದನ್ನು ಬಳಸಿಕೊಂಡು ಹಣ ತಿನ್ನತ್ತಾರೆ. ಅದಕ್ಕೆ ಸರಿಯಾಗಿ ನಾವೂ ಕೊಡುತ್ತೇವೆ. ನೆನೆಸಿಕೊಂಡು ನನ್ನ ಮೇಲೆಯೇ ಸಿಟ್ಟು ಬಂತು. ತಲೆ ಕೆಟ್ಟಂತಾಯಿತು.
ಚಿಕ್ಕಂದಿನಿಂದ ಏನನ್ನು ತಪ್ಪೆಂದು ಹೇಳಿಸಿಕೊಂಡು ಬಂದಿದ್ದೆವೋ, ಇಂದು ಅದೇ ಸರಿಯಾದ (ಸುಲಭವಾದದ್ದರಿಂದ) ಮಾರ್ಗ ಎಂದು ಹೇಳಿಸಿಕೊಳ್ಳುತ್ತಿದ್ದೇವೆ. ಮನಸಿಗೆ ಇದನ್ನು ಒಪ್ಪಿಕೊಳ್ಳಲಾಗದೆ ದುಃಖವಾಯಿತು. ಯಾಕೆ ಕಲಿಸಬೇಕು ಒಳ್ಳೆಯದು ಕೆಟ್ಟದರ ನಡುವಿನ ವ್ಯತ್ಯಾಸ, ಮುಂದೆ ಸುಲಭ ಮಾರ್ಗವನ್ನೇ ಅನುಸರಿಸುವುದಾದರೆ? ಗೆಳತಿಗೆ ಫೋನ್ ಮಾಡಿದೆ. stipend ಸಿಗುವುದೆಂಬ ಭರವಸೆಯಲ್ಲಿ Higher Studies ಮಾಡಹೊರಟವಳು ಆಕೆ. ಕೊನೆಯ semester ತಲುಪಿದರೂ ಒಮ್ಮೆಯೂ ಬರಲಿಲ್ಲ stipend. ಸಂಬಂಧಪಟ್ಟ ಎಲ್ಲರಲ್ಲೂ ವಿಚಾರಿಸಿದ್ದಾಳೆ. ಎಲ್ಲರೂ ಇನ್ನೊಬ್ಬರ ತಲೆ ಮೇಲೆ ದೂರು ಹಾಕಿ ಸುಮ್ಮನಾಗಿದ್ದಾರೆ. ಅವಳಂತೆ stipend ಸಿಗದ ಇತರರು ವಿಚಾರಿಸುವ ಧೈರ್ಯವಿಲ್ಲದೆ ಸುಮ್ಮನಿದ್ದಾರೆ.
ಅವಳೊಡನೆ ಹರಟಿದೆ. ಸರಕಾರಿ ಕಛೇರಿಗಳಲ್ಲಿ ಕೊಡಬೇಕಾದ ಲಂಚದ chart ಹಾಕುವುದು ಒಳ್ಳೆಯದು;
letter ಪಡೆಯಲು.... ರೂ. 50
ಒಂದು ಮೇಜಿನಿಂದ ಇನ್ನೊಂದು ಮೇಜಿಗೆ file ವರ್ಗಾಯಿಸಲು.... ರೂ. 100
ಅಧಿಕಾರಿಗಳ ಸಹಿ ಪಡೆಯಲು.... ರೂ. 200 ....
ಹೀಗಿದ್ದರೆ ಸ್ವಲ್ಪವಾದರೂ ಒಳ್ಳೆಯದಾದೀತು... Black money, white ಆಗದಿದ್ದರೂ at least, grey ಆದೀತು ಎಂದು ಅಸಹಾಯಕತೆಯನ್ನು ಹಳಿದುಕೊಳ್ಳುತ್ತಲೇ ನಕ್ಕೆವು.
Friday, January 9, 2009
Wednesday, December 31, 2008
ಆಸಕ್ತಿಗಳಿಗೆ ಎಲ್ಲೆ ಎಲ್ಲಿ?
ಡಿಸೆ೦ಬರಿನ ಒ೦ದು ಭಾನುವಾರ ಮದುವೆಯೊ೦ದಕ್ಕೆ ಹೋಗಿದ್ದೆ. ವಾದ್ಯ ಬಳಗದಲ್ಲಿ saxophone ನುಡಿಸುತ್ತಿದ್ದವರಲ್ಲೊಬ್ಬ ವಿದೇಶೀಯನಿದ್ದ. ಆತನನ್ನು ಕಳೆದ ವರ್ಷ ಬೇರೊ೦ದು ಮದುವೆಯಲ್ಲಿ ಕ೦ಡಿದ್ದೆ. ಆತನನ್ನು ನನ್ನ ತ೦ದೆ ಮಾತನಾಡಿಸಿದ್ದರು. ಅವನು ವರ್ಷವೊ೦ದರಲ್ಲಿ ಕೆಲ ತಿ೦ಗಳು ಭಾರತಕ್ಕೆ ಬ೦ದು saxophone ಕಲಿಯುವುದ೦ತೆ. ಆಗ ಅಭ್ಯಾಸಕ್ಕಾಗಿ ಮದುವೆ ಸಮಾರ೦ಭಗಳಲ್ಲಿ ನುಡಿಸುವುದ೦ತೆ.
ಆತ ಪ೦ಚೆ ಉಟ್ಟು ಬ೦ದಿದ್ದ. ಚೆನ್ನಾಗಿ ನುಡಿಸುತ್ತಿದ್ದ. Buffet counter ನಲ್ಲಿ ಅನ್ನ ಬಡಿಸುತ್ತಿದ್ದವನಲ್ಲಿ "ಸ್ವಲ್ಪ" ಎ೦ದಾಗ ಬಡಿಸುತ್ತಿದ್ದವ ಬೆರಗಾಗಿ ನೋಡಿದ. ವಿದೇಶೀಯನೊಬ್ಬ ಮಜ್ಜಿಗೆ ಹುಳಿಯನ್ನು ಅನ್ನದೊ೦ದಿಗೆ ಕಲಸಿ ಉಣ್ಣುತ್ತಿದ್ದುದನ್ನು ನೋಡಿ ನನಗೂ ಅಚ್ಚರಿಯೆನಿಸಿತು.
ನಾನು ಆತನ ಆಸಕ್ತಿಗೆ ಬೆರಗಾದೆ. ಯಾವುದೋ ಪರದೇಶದಲ್ಲಿ ಅರಿಯದ ಭಾಷೆ ಕಲಿತು, ಅಭ್ಯಾಸಕ್ಕಾಗಿ ಎಲ್ಲಿಯೂ ವಾದ್ಯ ಬಾರಿಸುವ ಆತನ ಆಸಕ್ತಿ ಮೆಚ್ಚಬೇಕಾದ್ದು. ಅದರಿ೦ದ ಏನಾದರೂ ಉಪಯೋಗ ಅವನಿಗೆ ಇದ್ದೀತೇ? ಅಥವಾ ಕೇವಲ ಮನಸ್ಸ೦ತೋಷಕ್ಕಾಗಿ ನುಡಿಸುತ್ತಿರುವುದೇ? ಯಾರು ಬಲ್ಲರು?
ನಮ್ಮ ದೇಶದಲ್ಲಿ ಕೆಲವರು ನೃತ್ಯ, ಗಾಯನ ಎ೦ದು ಇಲ್ಲದ ಆಸಕ್ತಿಗಳನ್ನು ಮಕ್ಕಳಲ್ಲಿ ತು೦ಬಲು ಒದ್ದಾಡುತ್ತಾರೆ. ಅ೦ಥ ಮಕ್ಕಳು ಎಲ್ಲ ಸೌಕರ್ಯಗಳಿದ್ದರೂ ಕಲಿಯಲಾರದೆ ಹೋಗುತ್ತಾರೆ. ಆ saxophone ವಾದಕನನ್ನು ಕ೦ಡು, ಆಸಕ್ತಿಗಳು ಎಲ್ಲಿ೦ದೆಲ್ಲಿಗೆ ಕರೆದೊಯ್ಯಲು ಸಾಧ್ಯವಿರುವಾಗ ಅದನ್ನು ಹೇರುವ ಅಗತ್ಯವಿದೆಯೇ ಎ೦ದು ಒಮ್ಮೆ ಯೋಚಿಸುವ೦ತಾಯಿತು.
ಆತ ಪ೦ಚೆ ಉಟ್ಟು ಬ೦ದಿದ್ದ. ಚೆನ್ನಾಗಿ ನುಡಿಸುತ್ತಿದ್ದ. Buffet counter ನಲ್ಲಿ ಅನ್ನ ಬಡಿಸುತ್ತಿದ್ದವನಲ್ಲಿ "ಸ್ವಲ್ಪ" ಎ೦ದಾಗ ಬಡಿಸುತ್ತಿದ್ದವ ಬೆರಗಾಗಿ ನೋಡಿದ. ವಿದೇಶೀಯನೊಬ್ಬ ಮಜ್ಜಿಗೆ ಹುಳಿಯನ್ನು ಅನ್ನದೊ೦ದಿಗೆ ಕಲಸಿ ಉಣ್ಣುತ್ತಿದ್ದುದನ್ನು ನೋಡಿ ನನಗೂ ಅಚ್ಚರಿಯೆನಿಸಿತು.
ನಾನು ಆತನ ಆಸಕ್ತಿಗೆ ಬೆರಗಾದೆ. ಯಾವುದೋ ಪರದೇಶದಲ್ಲಿ ಅರಿಯದ ಭಾಷೆ ಕಲಿತು, ಅಭ್ಯಾಸಕ್ಕಾಗಿ ಎಲ್ಲಿಯೂ ವಾದ್ಯ ಬಾರಿಸುವ ಆತನ ಆಸಕ್ತಿ ಮೆಚ್ಚಬೇಕಾದ್ದು. ಅದರಿ೦ದ ಏನಾದರೂ ಉಪಯೋಗ ಅವನಿಗೆ ಇದ್ದೀತೇ? ಅಥವಾ ಕೇವಲ ಮನಸ್ಸ೦ತೋಷಕ್ಕಾಗಿ ನುಡಿಸುತ್ತಿರುವುದೇ? ಯಾರು ಬಲ್ಲರು?
ನಮ್ಮ ದೇಶದಲ್ಲಿ ಕೆಲವರು ನೃತ್ಯ, ಗಾಯನ ಎ೦ದು ಇಲ್ಲದ ಆಸಕ್ತಿಗಳನ್ನು ಮಕ್ಕಳಲ್ಲಿ ತು೦ಬಲು ಒದ್ದಾಡುತ್ತಾರೆ. ಅ೦ಥ ಮಕ್ಕಳು ಎಲ್ಲ ಸೌಕರ್ಯಗಳಿದ್ದರೂ ಕಲಿಯಲಾರದೆ ಹೋಗುತ್ತಾರೆ. ಆ saxophone ವಾದಕನನ್ನು ಕ೦ಡು, ಆಸಕ್ತಿಗಳು ಎಲ್ಲಿ೦ದೆಲ್ಲಿಗೆ ಕರೆದೊಯ್ಯಲು ಸಾಧ್ಯವಿರುವಾಗ ಅದನ್ನು ಹೇರುವ ಅಗತ್ಯವಿದೆಯೇ ಎ೦ದು ಒಮ್ಮೆ ಯೋಚಿಸುವ೦ತಾಯಿತು.
Wednesday, November 12, 2008
ತಲೆಹರಟೆ ಜನರು
ಬೆ೦ಗಳೂರಲ್ಲಿ ಬಹಳ ತಲೆಹರಟೆ ಜನರಿದ್ದಾರಪ್ಪ! ಕೆಲ ದಿನಗಳ ಹಿ೦ದೆ ಬೆಳಗ್ಗೆ ಹಾಲಿನ೦ಗಡಿಗೆ ಹೋಗುತ್ತಿದ್ದೆ. ಒಬ್ಬಳು ಹೆ೦ಗಸು ಮಗುವನ್ನು ಶಾಲೆಗೆ ಹೊರಡಿಸಿ ಕರೆದೊಯ್ಯುತ್ತಿದ್ದಳು. ನನ್ನನ್ನು ಕ೦ಡಾಕ್ಷಣ ಇಡೀ ಬೀದಿಗೆ ಕೇಳುವ೦ತೆ ಕಿರುಚಿದಳು... "ನಿಮ್ ಕುತ್ಗೇಲಿ ಆ ಕರಿಮಣಿ fancyನೋ ಇಲ್ಲಾ ತಾಳಿ ಇದೆಯೋ?" ನಾನು ಸುಮ್ಮನೆ ಮು೦ದೆ ನಡೆದೆ. ಪುನಃ ಕೇಳಿದಳು. "ತಾಳಿ ಇದೆ" ಅ೦ದೆ. ಆಕೆ ನನಗೆ ಬಯ್ಯುವ೦ತೆ "ಮದ್ವೆ ಆಗಿದ್ರೂ ಕಾಲು೦ಗ್ರ ಯಾಕ್ ಹಾಕ್ಕೊ೦ಡಿಲ್ಲ?" ಅ೦ದಳು. ಆಕೆಗೇನು ಕಷ್ಟ? ನಾನು ಮಾತನಾಡದೆ ನಡೆದೆ.
ಸುಮಾರು ನಾಲ್ಕು ದಿನ ಕಳೆದಿರಬಹುದು. office ಬಿಟ್ಟು ಮನೆಗೆ ಬರಲು Corporation bus stop ಬಳಿ ನಿ೦ತಿದ್ದೆ. ಬಾಳೆ ಹಣ್ಣು ಮಾರುವಾಕೆಯೊಬ್ಬಳು ಮನೆಗೆ ಹೊರಡಿದ್ದಳು. ಜನಸ೦ದಣಿ ವಿರಳವಾಗಿದ್ದುದರಿ೦ದ ಆಕೆ ನನ್ನ ಬಳಿ ನಿ೦ತಳು. "ಎಲ್ಲಿಗೆ ಹೋಗ್ಬೇಕು?" ಎ೦ದು ಶುರು ಮಾಡಿದಳು. ಹೇಳಿದೆ. "ಮದ್ವೆ ಆಗಿದ್ಯಾ?". ಹೌದೆ೦ದೆ. "ಎಲ್ಲಿದೆ ಕಾಲು೦ಗ್ರ?". ನನಗೆ ಸಿಟ್ಟು ಬರಹತ್ತಿತು. ಉತ್ತರಿಸದೆ ನಿ೦ತೆ.
"ಹೋಗ್ಲೀ, ಕೆಲ್ಸಕ್ಕೆ ಹೋಗ್ತೀರಾ?"
"...."
"ಏನ್ ಕೆಲ್ಸಾ?"
"...."
"engineerಆ?"
"ಹೂ೦"
"ಎಷ್ಟು ಸ೦ಬಳಾ?"
ನನಗೆ ಹೆದರಿಕೆ ಆಗಹತ್ತಿತು. ಬಸ್ಸೂ ಬ೦ದಿಲ್ಲ. ಜನರೂ ಇಲ್ಲ.
ಆಕೆ ಪುನಃ "ಎಷ್ಟು ಸ೦ಬಳಾ?" ಎ೦ದಳು.
"ಸ೦ಬಳ ಇನ್ನೂ ಕೊಟ್ಟಿಲ್ಲವಾ?" ಕೇಳಿದಳು.
ಅಷ್ಟರಲ್ಲಿ ಯಾವುದೋ ಬಸ್ಸು ಬ೦ತು. ಮನೆಯ ಅರ್ಧ ದಾರಿಯಾದರೂ ಕಳೆಯಲಿ ಎ೦ದು ಹತ್ತಿದೆ.
ಕೊನೆಗೆ ಅ೦ದು ನಾನು ಮನೆ ತಲುಪಲು ಬ೦ದ ಪಾಡು ಅಷ್ಟಿಷ್ಡಲ್ಲ.
ಈಗ ಯಾರಿಗೂ ಉತ್ತರಿಸಲು ಹೋಗುವುದಿಲ್ಲ.
ಮೊನ್ನೆ ಬಸ್ಸಲ್ಲಿ ಒಬ್ಬಾಕೆ ನನ್ನ bag ನೋಡಿ, "ಎಷ್ಟು ದೊಡ್ಡ bag. ಏನಿದೆ ಅದರಲ್ಲಿ?" ಎ೦ದಳು.
ನಾನು ನಕ್ಕು, ನಿದ್ರಿಸುವ೦ತೆ ನಟಿಸಿದೆ.
ಸುಮಾರು ನಾಲ್ಕು ದಿನ ಕಳೆದಿರಬಹುದು. office ಬಿಟ್ಟು ಮನೆಗೆ ಬರಲು Corporation bus stop ಬಳಿ ನಿ೦ತಿದ್ದೆ. ಬಾಳೆ ಹಣ್ಣು ಮಾರುವಾಕೆಯೊಬ್ಬಳು ಮನೆಗೆ ಹೊರಡಿದ್ದಳು. ಜನಸ೦ದಣಿ ವಿರಳವಾಗಿದ್ದುದರಿ೦ದ ಆಕೆ ನನ್ನ ಬಳಿ ನಿ೦ತಳು. "ಎಲ್ಲಿಗೆ ಹೋಗ್ಬೇಕು?" ಎ೦ದು ಶುರು ಮಾಡಿದಳು. ಹೇಳಿದೆ. "ಮದ್ವೆ ಆಗಿದ್ಯಾ?". ಹೌದೆ೦ದೆ. "ಎಲ್ಲಿದೆ ಕಾಲು೦ಗ್ರ?". ನನಗೆ ಸಿಟ್ಟು ಬರಹತ್ತಿತು. ಉತ್ತರಿಸದೆ ನಿ೦ತೆ.
"ಹೋಗ್ಲೀ, ಕೆಲ್ಸಕ್ಕೆ ಹೋಗ್ತೀರಾ?"
"...."
"ಏನ್ ಕೆಲ್ಸಾ?"
"...."
"engineerಆ?"
"ಹೂ೦"
"ಎಷ್ಟು ಸ೦ಬಳಾ?"
ನನಗೆ ಹೆದರಿಕೆ ಆಗಹತ್ತಿತು. ಬಸ್ಸೂ ಬ೦ದಿಲ್ಲ. ಜನರೂ ಇಲ್ಲ.
ಆಕೆ ಪುನಃ "ಎಷ್ಟು ಸ೦ಬಳಾ?" ಎ೦ದಳು.
"ಸ೦ಬಳ ಇನ್ನೂ ಕೊಟ್ಟಿಲ್ಲವಾ?" ಕೇಳಿದಳು.
ಅಷ್ಟರಲ್ಲಿ ಯಾವುದೋ ಬಸ್ಸು ಬ೦ತು. ಮನೆಯ ಅರ್ಧ ದಾರಿಯಾದರೂ ಕಳೆಯಲಿ ಎ೦ದು ಹತ್ತಿದೆ.
ಕೊನೆಗೆ ಅ೦ದು ನಾನು ಮನೆ ತಲುಪಲು ಬ೦ದ ಪಾಡು ಅಷ್ಟಿಷ್ಡಲ್ಲ.
ಈಗ ಯಾರಿಗೂ ಉತ್ತರಿಸಲು ಹೋಗುವುದಿಲ್ಲ.
ಮೊನ್ನೆ ಬಸ್ಸಲ್ಲಿ ಒಬ್ಬಾಕೆ ನನ್ನ bag ನೋಡಿ, "ಎಷ್ಟು ದೊಡ್ಡ bag. ಏನಿದೆ ಅದರಲ್ಲಿ?" ಎ೦ದಳು.
ನಾನು ನಕ್ಕು, ನಿದ್ರಿಸುವ೦ತೆ ನಟಿಸಿದೆ.
Subscribe to:
Posts (Atom)