Thursday, August 15, 2013

ಪ್ರಶ್ನೆಗಳ ಸುಳಿಯಲಿ್ಲ…

ನಾನು ಹುಟ್ಟಿದ ಮೇಲೆ ಮೂವತ್ತು ಸ್ವಾತಂತ್ರ್ಯ ದಿನಾಚರಣೆಗಳು ಕಳೆದವು. ಹಿಂದೆ ಶಾಲೆಯಲ್ಲಿ ತುಂತುರು ಮಳೆಗೆ ಧ್ವಜದ ಎದುರು ನಿಂತು ಸೆಲ್ಯೂಟ್ ಹೊಡೆದುದು, ಐವತ್ತು ಪೈಸೆ ಚಾಕಲೇಟು ಪಡೆದು, ಮುಖೋ್ಯಪಾಧ್ಯಾಯರ ಭಾಷಣ ಕೇಳಿ ಮರಳುತ್ತಿದ್ದುದು ಈಗ ಮಾಸಿ ಹೋದ ನೆನಪು. ಅದರ ನಂತರ ಅನೇಕ ಸ್ವಾತಂತ್ರ್ಯ ಸಂಗ್ರಾಮ ಸಂಬಂಧಿ ಪುಸ್ತಕಗಳನ್ನು ಓದಿ, ದೇಶಕ್ಕಾಗಿ ಹೋರಾಡಿ ಮಡಿದವರ ಕಥೆಗಳನ್ನು, ಘಟನೆಗಳನ್ನು ಕಲ್ಪಿಸುತ್ತಾ ಬೆಳೆದು ದೊಡ್ಡವರಾದೆವು. ಮುಂದೆ ಬದುಕು ಕಟ್ಟಿಕೊಳ್ಳಬೇಕಾದ ಓಟ(?)ದಲ್ಲಿ ಸ್ವಾತಂತ್ರ್ಯದ ಬಗೆಗಿನ ಪುಸ್ತಕಗಳು ಎಲೋ್ಲ ಹಿಂದೆ ಬಿದ್ದವು. ಈಗ ನಾನು ಒಂದು ವರುಷದ ಮಗುವಿನ ಅಮ್ಮ. ಕೆಲ ವರ್ಷಗಳಲ್ಲಿ ನನ್ನ ಮಗು ನನ್ನಂತೆಯೇ ಧ್ವಜಾರೋಹಣದಲ್ಲಿ ಪಾಲ್ಗೊಳ್ಳಲು ಹೋಗುವಳೆಂಬ ಕಲ್ಪನೆಯೇ ನನ್ನನ್ನು ಒಂದು ಗೊಂದಲದಲ್ಲಿ ಬೀಳಿಸಿದೆ.

"ಅಮ್ಮ ಸ್ವಾತಂತ್ರ್ಯ ಅಂದರೆ ಏನು?" ಎನ್ನುವ ಪ್ರಶ್ನೆಗೆ ನಾನು ಈ ಸಂದರ್ಭದಲ್ಲಿ ಹೇಗೆ ಉತ್ತರಿಸಬಲ್ಲೆ? ನನಗೆ ಸ್ವಾತಂತ್ರ್ಯ ಎಂದರೆ ಏನೆಂದು ತಿಳಿದಿದೆಯೇ? ನಾನು ಸ್ವಾತಂತೋ್ರ್ಯತ್ತರ ಭಾರತದಲ್ಲಿ ಹುಟ್ಟಿದವಳು. ದಾಸ್ಯದಲ್ಲಿ ಬದುಕು ಹೇಗಿರುತ್ತದೆ ಎಂಬುದು ಕಲ್ಪನೆಗೆ ನಿಲುಕದ್ದು. ಸ್ವತಂತ್ರ ಬದುಕನ್ನು ಹಂಬಲಿಸುವ ಮನಸ್ಥಿತಿ ಹೇಗಿರುವುದೆಂದು ಊಹಿಸುವುದೂ ನನ್ನಿಂದ ಆಗಲಾರದು. ಇದು ನನ್ನ ತಪೇ್ಪ? ನಾನು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಿತೇ್ತ? ಅಥವಾ ನನ್ನ ಹೆತ್ತವರು ಹೇಳಬೇಕಿತೇ್ತ? ನನ್ನ ಹೆತ್ತವರು ಸ್ವಾತಂತೋ್ರ್ಯತ್ತರ ಭಾರತದಲ್ಲಿ ಹುಟ್ಟಿರುವಾಗ ಅವರಿಂದಲೂ ಇದನ್ನು ಪ್ರಭಾವಶಾಲಿಯಾಗಿ ಹೇಳಲು ಸಾಧ್ಯವೇ? ಹೇಗೆ ಕಲ್ಪಿಸಲಿ? ಅಂಡಮಾನಿನ ಹವಳದ ದಂಡೆಗಳನೋ್ನ, ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ ಖಲೀಫಾವನೋ್ನ ನನ್ನೆದುರು ವರ್ಣಿಸಿದರೆ  ನನಗೆ ಎಷ್ಟು ಅರ್ಥವಾದೀತೋ, ಸ್ವಾತಂತ್ರ್ಯ ಸಂಗ್ರಾಮವೂ ಅಷೇ್ಡ ಎಂದು ಹೇಳಲು ನನಗೆ ದುಃಖವೂ ನಾಚಿಕೆಯೂ ಆಗುತ್ತದೆ. ಚಿತ್ರ ನೋಡಿದರೆ ನನಗೆ ಬುರ್ಜ ಖಲೀಫಾದ ಎತ್ತರ, ಅದರ ತುದಿಯಿಂದ ಕಾಣುವ ಜಗತ್ತಿನ ರೂಪ ಹೇಗೆ ಊಹೆಗೆ ನಿಲುಕಲಾರದೋ, ಸಾಗರದ ದಂಡೆಯಲ್ಲಿ ನಿಂತು ದಿಟ್ಟಿಸಿದರೆ ಅದರ ನಿಜ ವೈಶಾಲ್ಯ, ಅಗಾಧತೆ ಹೇಗೆ ಕಲ್ಪನೆಗೆ ನಿಲುಕದಾಗುತ್ತದೋ,  ಸ್ವಾತಂತ್ರ್ಯ ಸಂಗ್ರಾಮದ, ಸಹಸ್ರಾರು ದೇಶಭಕ್ತರ ಬಲಿದಾನದ ಕತೆಗಳು ಅವುಗಳ ನಿಜ ಸ್ವರೂಪವನ್ನು ನನಗೆ ಬಿತ್ತರಿಸಲಾರವು. ಇನ್ನು ನಾನು ಇದನ್ನು ನನ್ನ ಮುಂದಿನ ಪೀಳಿಗೆಗೆ ಹೇಗೆ ತಲುಪಿಸಿಯೇನು?

ಸ್ವಾತಂತ್ರ್ಯವೆಂದರೆ "ಬೇಕಾದ್ದು ಮಾಡುವುದು" ಎಂದು ಯೋಚಿಸುವವರು ಬಹಳ ಮಂದಿ. ಅನೇಕರ ಮನದಲ್ಲಿ ಸ್ವಾತಂತ್ರ್ಯಕ್ಕೂ ಸೇ್ವಚಾ್ಛಚಾರಕ್ಕೂ ವ್ಯತ್ಯಾಸವೇ ಇಲ್ಲದಾಗಿದೆ. "ಬೇಕಾದ್ದು ಮಾಡುವುದು" ಎಂದರೆ ಸೇ್ವಚೆ್ಛ. ಸ್ವಾತಂತ್ರ್ಯ ಎಂದರೆ ಅದರ ಜೊತೆ ಜವಾಬ್ದಾರಿಯೂ ಇರುತ್ತದೆ. ಅದನ್ನು ಅನುಭವಿಸಲು ಕೆಲವು ಕರ್ತವ್ಯಗಳೂ ಇರುತ್ತವೆ. ರಸ್ತೆಯಲ್ಲಿ ಬೇಕೆಂದಾಗ ಓಡಾಡುವ ಸ್ವಾತಂತ್ರ್ಯ ನಮಗಿದೆ. ಆದರೆ ಖುಷಿ ಬಂದಂತೆ ಕಸ ಎಸೆಯುವ ಅಧಿಕಾರ ಇಲ್ಲ. ಅದು ಸೇ್ವಚೆ್ಛ. ಸಂಪನ್ಮೂಲಗಳನ್ನು ಉಪಯೋಗಿಸುವ ಸ್ವಾತಂತ್ರ್ಯದೊಂದಿಗೆ ಅದನ್ನು ಕಾಪಾಡುವ ಜವಾಬ್ದಾರಿ ಹಾಗೂ ಕರ್ತವ್ಯ ನಮಗಿದೆ. ಇದನ್ನು ನಾನು ನನ್ನ ಮಗಳಿಗೆ ತಿಳಿಸಿ ಹೇಳಲು ಶಕ್ತನಾದೇನೇ? ಅಥವಾ ಇದನ್ನು ನಮಗೆ ಕಲಿಸಿದ ಮೇಷ್ಡರಂತಹಾ ಗುರುಗಳು ನನ್ನ ಮಗಳಿಗೆ ಸಿಗುವರೆಂದು ಭಾವಿಸಲೇ?

ಸಿನೆಮಾದಂತಹ ದೃಶ್ಯ ಮಾಧ್ಯಮ ಸ್ವಲ್ಲ ಮಟ್ಟಿಗೆ ನಮಗೆ ಸ್ವಾತಂತ್ರ್ಯದ ಅರಿವು, ಕಲ್ಪನೆ ಮೂಡಿಸೀತೇನೋ. ಆದರೆ ಅವು ಸಾಕಷ್ಟು ಪ್ರಮಾಣದಲ್ಲಿ ಲಭ್ಯವೇ? ಲಭ್ಯವಿದ್ದರೂ ಪ್ರಭಾವ ಬೀರುವ ಮಟ್ಟಿಗೆ ಅವುಗಳ ಗುಣಮಟ್ಟವಿದೆಯೇ? ನಾನು ಸಂಪೂರ್ಣ ಗೊಂದಲದಲ್ಲಿದೇ್ದನೆ. ನಾನು ಇದನ್ನು ಅರಿಯಲು ಹೆಚ್ಚಿನ ಪ್ರಯತ್ನ ಮಾಡಬೇಕಿತೇ್ತ? ಅಥವಾ ಇದರಲ್ಲಿ ನನ್ನ ತಪ್ಪು ಇಲ್ಲವೇ? ಉದ್ದದ ವಾಕ್ಯವನ್ನು ಅನೇಕರು ಒಬ್ಬರಿಂದ ಒಬ್ಬರಿಗೆ ಪಿಸುಗುಟ್ಟುತ್ತಾ ಹೋಗುವ ಆಟವೊಂದಿದೆ. ಕೊನೆಯವನು ತಾನು ಕೇಳಿದ್ದನ್ನು ಜೋರಾಗಿ ಹೇಳುವಾಗ ವಾಕ್ಯ ಅರ್ಧರ್ಧವಾಗಿ, ಅರ್ಥ ಅನರ್ಥವಾಗಿ ನಗು ತರಿಸುತ್ತದೆ. ಹಾಗೆಯೇ ನಮ್ಮ ದೇಶದ ನೆತ್ತರ ಕಥೆಗಳು ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಾ ತೂಕ ಕಳೆದುಕೊಂಡು, ಕೊನೆಗೆ ಹಲವರು ಹಲವು ರೀತಿ ಅರ್ಥ ಮಾಡಿಕೊಂಡು tea time ನ argument ಗಳಿಗೆ ಸೀಮಿತವಾಗುತ್ತಿರುವುದು ವಿಪರ್ಯಾಸ. ಇದಕ್ಕೆ ಹಳಿಯಬೇಕಾದ್ದು ಯಾರನ್ನು?

ಗೊಂದಲ ಸಿಕ್ಕಾಪಟ್ಟೆ ಆಗಿ, ತಲೆ ಕೆಟ್ಟು, ನೋಯತೊಡಗಿ ನಿದ್ರೆ ಹೋಗುತೇ್ತನೆ.

Thursday, July 11, 2013

ಕನ್ನಡ - ಅಳಿವು, ಉಳಿವು

ನಮ್ಮ ಜೀವನದಲ್ಲಿ ಲಹರಿ(ಮಗಳು)ಯ ಆಗಮನವಾಗಿ ಒಂದು ವರ್ಷವಾಗುತ್ತಾ ಬಂತು. ಬರೆಯಬೇಕೆಂದು ಹೊರಟ ಅನೇಕ ವಿಷಯಗಳು ಮನದ ಮೂಲೆಯಿಂದ ಆಗೊಮ್ಮೆ ಈಗೊಮ್ಮೆ ಎದು್ದ "ನೀನು ಇದನ್ನು ಯೋಚಿಸಿ ಒಂದೂವರೆ ವರ್ಷವಾಯಿತು" ಎಂದು ಅಣಕಿಸಿ, "ನಾಳೆ ಬರೆದೇ ತೀರುತೇ್ತನೆ" ಎಂದು ಘೋಷಿಸಿ ಹೊದ್ದು ಮಲಗುವಂತೆ ಮಾಡುತ್ತಿವೆ ಅಷ್ಟೆ.
ಈಗ ಹೇಳುತ್ತಿರುವುದು ಹಳೆಯ ವಿಚಾರ. ನಾನು ಉದೋ್ಯಗಸ್ಥಳಾಗಿದ್ದಾಗಿನದ್ದು. (ಉದೋ್ಯಗ ಬಿಟ್ಟು ಒಂದು ವರ್ಷ ಮೇಲಾಯಿತು).
ಆಫೀಸಿನಲ್ಲೊಮ್ಮೆ ಭಾಷೆಗಳ ವಿಚಾರವೇನೋ ಮಾತಾಡುತ್ತಿದ್ದಾಗ ಮಲಯಾಳದಲ್ಲಿ ವಿವಿಧ ರೀತಿಯ "ಲ" ಉಚ್ಛಾರಗಳಿವೆ ಎಂದರು. ತಮಿಳಿನಲ್ಲೂ ಇದೆ ಎಂದು ತಿಳಿಯಿತು. (ಇಂಗೀ್ಲಷ್ ನಲ್ಲಿ ಬರೆಯುವಾಗ ತಮಿಳಿನ ಒಂದು "ಲ" ಮಾದರಿಯ ಪದವನ್ನು "zh" ಎಂದು ಬರೆಯುತ್ತಾರೆ.) ನಾನು ನನ್ನ ತಮಿಳ ಸಹೋದೋ್ಯಗಿಯ ಬಳಿ ಕೇಳಿದೆ. "ಹಾಗಾದರೆ ತಮಿಳು ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?". ಆತ ಕಕ್ಕಾಬಿಕ್ಕಿಯಾಗಿ "ಹ್ಹಿ ಹ್ಹಿ ಹ್ಹಿ" ಎಂದ!
"ಅರೆ! ಗೊತ್ತಿಲ್ಲವೇನು?" ಎಂದೆ. (ತಮಿಳರು ಅತಿ ದೊಡ್ಡ ಭಾಷಾಭಿಮಾನಿಗಳೆಂದು ಕೇಳಿದೇ್ದನೆ.)
ಆತ ಕೆಲ ಕ್ಷಣಗಳ ನಂತರ google search ಮಾಡುತ್ತಿದ್ದುದು ಕಂಡಿತು. ಸಮಾಧಾನವಾಗಲಿಲ್ಲವೆಂದು ತೋರುತ್ತದೆ. ಇನೋ್ನರ್ವನನು್ನ ಕರೆತಂದನು.
ಅದೇ ಪ್ರಶ್ನೆ ಕೇಳಿದೆ. ಉತ್ತರ ಗೊತ್ತಿಲ್ಲವೆಂದಾಯಿತು. "ಲೆಕ್ಕ ಹಾಕೋಣ. ಕ, ಚ, ಟ, ತ, ಪ ಹೇಳಿರಿ" ಎಂದೆ.
ಪರಮಾಶ್ಚರ್ಯ! "ಗ, ಜ, ಡ, ದ, ಬ ಇಲ್ಲ" ಎಂದರು.
"ಇಲ್ಲದೆ ಎಲ್ಲಿ ಹೋಗುತ್ತದೆ? 'ಸಿಂಗಂ' ಎಂದು ಸಿನೆಮಾ ಇಲ್ಲವೇ? ಅದನ್ನು ಹೇಗೆ ಬರೆಯುತೀ್ತರಿ?" ಎಂದು ಕೇಳಿದೆ.
"ಸಿಂಕಂ ಎಂದು ಬರೆಯುತೇ್ತವೆ. ಸಿಂಗಂ ಎಂದು ಓದುತೇ್ತವೆ" ಎಂದರು.
"ಅದು ಹೇಗೆ ಗೊತಾ್ತಗುತ್ತದೆ? 'ಕ' ಬೇಕೋ, 'ಗ" ಬೇಕೋ?" ಎಂದರೆ, "ಸಂದರ್ಭಾನುಸಾರ, ಅರ್ಥಾನುಸಾರ" ಎಂಬ ಉತ್ತರ ಬಂತು.
ಹೊಸದಾಗಿ ಭಾಷೆ ಕಲಿಯುವವರ ಗತಿ ಗೋ…ವಿಂದ ಎಂದುಕೊಂಡೆ. ಪದಗಳು ಗೊತ್ತಿದ್ದರೆ ತಾನೇ 'ಕ', 'ಗ' ಎಲ್ಲಿ ಬೇಕೆಂದು ತಿಳಿಯುವುದು. ಪದ ಕಲಿತ ನಂತರ ಅಕ್ಷರ ಕಲಿಯಬೇಕೇ? ಗೊಂದಲಕ್ಕಿಟ್ಟುಕೊಂಡು ಮಾತು ಅಲ್ಲಿಗೇ ನಿಂತಿತು.
(ಹೀಗಾದರೆ ಬೆಂಗಳೂರಿನ "ಕೋಣನ ಕುಂಟೆ", "ಕೋಣನ ಕುಂಡೆ" ಆದೀತೆಂದು ಮನದಲೇ್ಲ ನಗು ಬಂತು).

ಎಷೋ್ಟ ಸಮಯ ನಂತರ ಪತ್ರಿಕೆಯಲ್ಲಿ ಭಾಷಾ ಸರಳೀಕರಣದ ಬಗ್ಗೆ ಲೇಖನ ನೋಡಿದಾಗ ತಮಿಳಿನ "ಗ, ಜ, ಡ, ದ, ಬ" (ಮಹಾಪಾ್ರಣ ಕೂಡಾ) ಅಕ್ಷರಗಳು ಸರಳೀಕರಣಕ್ಕೆ ಬಲಿಯಾದವು ಎಂಬ ಅಸ್ಟಷ್ಟ ಚಿತ್ರಣ ಸಿಕ್ಕಿತು. (ಇದು ತಪ್ಪಿದ್ದರೆ ತಿದ್ದಿ).

ಆದರೆ ಈ ಘಟನೆ ನನ್ನ ಯೋಚನೆಯನ್ನೇ ಬದಲಿಸಿತು. ಭಾಷಾಭಿಮಾನಕ್ಕೆ ಹೆಸರುವಾಸಿಯಾದ ತಮಿಳರು ವರ್ಣಮಾಲೆಯ ಅಕ್ಷರಗಳೆಷ್ಟಿವೆ ಎಂದು ತಿಳಿದಿರದಿದ್ದರೆ, ತಮಿಳಿನ ಸ್ಥಿತಿ ಕನ್ನಡಕ್ಕಿಂತ ಹೆಚ್ಚು ಭಿನ್ನವಾಗಿ ಏನೂ ಇಲ್ಲ ಎನಿಸಿತು. ಹಾಗೆ ನೋಡಿದರೆ ಕನ್ನಡ ಭಾಷೆಗೆ ಅಳಿವಿನ risk ಎಷ್ಟು ಇದೆಯೋ, ಉಳಿದ ಭಾಷೆಗಳಿಗೂ ಅಷೇ್ಟ ಇದೆ ಅನಿಸಿತು.
ಬರಿಯ ಆಡುಮಾತಿನಲ್ಲಿ ಭಾಷೆ ಎಷ್ಟು ಶುದ್ಧವಾಗಿ ಉಳಿದೀತು? ಆಂಗ್ಲ ಪದಗಳೊಂದಿಗೆ ಬೆರೆತು ಅನೇಕ ಪದಗಳೇ ಅಳಿದು ಹೋದಾವು. ಭಾಷೆ ಉಳಿಯಬೇಕಾದರೆ ಆಡು ಮಾತಿಗಿಂತ ಹೆಚ್ಚಾಗಿ ಸಾಹಿತ್ಯದಲ್ಲಿ ಕಾಣಬೇಕು. ಬರಹ, ಓದುಗಳ ಮೂಲಕ ಪದಗಳು ಜನರನ್ನು ತಲುಪಬೇಕು. ಸಾಹಿತ್ಯ ಸೃಷ್ಡಿಯ ಜೊತೆ ಓದುಗರೂ ಹೆಚ್ಚಾಗಬೇಕು. ಇಲ್ಲವಾದಲ್ಲಿ "evening walking ಬರುತೀ್ತಯಾ?" ಎನ್ನುವುದೇ ಕನ್ನಡ ಎಂದು ತೃಪ್ತಿ ಪಡಬೇಕಾದೀತು.




Monday, July 16, 2012

"ನನ್ನ ತೇಜಸ್ವಿ" ಪುಸ್ತಕ ಪರಿಚಯ


ತೇಜಸ್ವಿ ಅಭಿಮಾನಿಯಾದ ನಾನು ಕೆಲ ಸಮಯದ ಹಿಂದೆ ಇಂಟರ್ನೆಟ್ ನಲ್ಲಿ ಏನೋ ಹುಡುಕುತ್ತಿದ್ದಾಗ "ನನ್ನ ತೇಜಸ್ವಿ" ಪುಸ್ತಕದ ವಿಮರ್ಷೆ ಕಾಣಸಿಕ್ಕಿತು. ಎರಡು ಕಡೆ ನಾನು ಈ ಪುಸ್ತಕದ ಬಗ್ಗೆ ಒಳ್ಳೆ ಅಭಿಪ್ರಾಯ ಬರೆಯಲ್ಪಟ್ಟದ್ದನ್ನು ನೋಡಿ ಓದುವ ಆಸಕ್ತಿಯಿಂದ ಕೊಂಡು ತಂದೆ. ಅದನ್ನು ಓದಿ ಮುಗಿಸಿ ಕೆಲವು ತಿಂಗಳುಗಳಾದವು. ಆದರೂ ಅದರ ಬಗ್ಗೆ ಒಂದೆರಡು ಅಭಿಪ್ರಾಯ ಬರೆಯಬೇಕು ಎಂದು ಅನ್ನಿಸಿ ಇಲ್ಲಿ ಬರೆಯುತ್ತಿದೇ್ದನೆ. 
(ಇದು ಕೇವಲ ನನ್ನ ಅಭಿಪ್ರಾಯ ಎಲ್ಲರಿಗೆ ಅನ್ವಯಿಸಬೇಕೆಂದಿಲ್ಲ)

ಈ ಪುಸ್ತಕ ಸುಮಾರು 600 ಪುಟ ಹೊಂದಿದ್ದು (ಬೆಲೆ ರೂ: 369) ಬಹು ನಿರೀಕ್ಷೆಯಿಟ್ಟು ಓದಲಾರಂಭಿಸಿದಾಗ ಆರಂಭದಲ್ಲಿ ನನಗೆ ನಿರಾಸೆಯುಂಟುಮಾಡಿತು.  ಆರಂಭದಲ್ಲಿಯೇ ಲೇಖಕಿ ರಾಜೇಶ್ವರಿಯವರು ಇದು ಬರಹದ ತಮ್ಮ ಪ್ರಥಮ ಪ್ರಯತ್ನವೆಂದೂ, ತಮಗೆ ಆ ಬಗ್ಗೆ ಹೆಚ್ಚಿನ ಅನುಭವವಿಲ್ಲವೆಂದೂ ಹೇಳಿದ್ದರಿಂದ ಓದನ್ನು ಮುಂದುವರಿಸಿದೆ. ಪ್ರಾರಂಭದ ಕೆಲವು ಆಧ್ಯಾಯಗಳ ನಂತರ ಬರಹದ ಕ್ರಮ ಸ್ವಲ್ಪ ಅಭ್ಯಾಸವಾಯಿತು. ತೇಜಸ್ವಿಯವರ ದಿನ ನಿತ್ಯದ ಬದುಕು, ಅವರ ಆಸಕ್ತಿಗಳು, ಅಭಿಪ್ರಾಯಗಳು ಇತ್ಯಾದಿಗಳನೇ್ನ ಹೆಚಾ್ಚಗಿ ಬರೆದಿರುವ ಲೇಖಕಿ ತೇಜಸ್ವಿಯವರ ತಂದೆ, ತಾಯಿ, ಸಹೋದರ, ಸಹೋದರಿಯರ ವಿವರಗಳನ್ನೂ ಸೇರಿಸಿದ್ದಾರೆ. 

ಆದರೆ ಹಲವು ಹಲವು ಕಡೆ ಬರಹದ ಶೈಲಿ ಅರ್ಥವಾಗದಂತಿದೆ. ಉದಾಹರಣೆಗೆ ತೇಜಸ್ವಿಯವರು ಮನೆಗೆ ನೀರು ಬರಿಸಲು ಅಳವಡಿಸಿದ ಪಂಪ್ ನ ಕಾರ್ಯವಿಧಾನದ ವಿವರಣೆ ಇದ್ದರೂ ಅದು ಏನೆಂದು ಸರಿ ಅರ್ಥವೇ ಆಗುವುದಿಲ್ಲ. ಅನೇಕ ಕಡೆ ಒಂದು ವಿಷಯದ ನಡುವೆ ಇನ್ನೊಂದು ವಿಷಯ ಹೊಕ್ಕು ನಮ್ಮನ್ನು ಎತ್ತಲೋ ಕೊಂಡೊಯು್ಯತ್ತದೆ. ಪುನಃ ಹಿಂದಿನ ವಿಷಯಕ್ಕೆ ಬಂದಾಗ ದಾರಿ ತಪ್ಪಿದಂತಾಗುತ್ತದೆ. ಇದು ಆರಂಭಿಕ ಅಧ್ಯಾಯಗಳಲ್ಲಿ ಅವರ ಕಾಲೇಜು ದಿನಗಳ ವಿವರಣೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 

ಇದರ ನಂತರ ಅನೇಕ ಪುಟಗಳು ರಾಜೇಶ್ವರಿ ಮತ್ತು ತೇಜಸ್ವಿಯವರ ಪತ್ರ ವ್ಯವಹಾರಕ್ಕೆ ಮೀಸಲಿದೆ. ಆದರೆ ರಾಜೇಶ್ವರಿಯವರು ತೇಜಸ್ವಿಯವರ ಪತ್ರಗಳನ್ನು ಮಾತ್ರ ಸಂರಕ್ಷಿಸಿದ್ದು ತಮ್ಮ ಪತ್ರಗಳನ್ನು ಸುಟ್ಟು ಹಾಕಿದುದಾಗಿ ಹೇಳಿದ್ದು, ಪುಸ್ತಕದಲ್ಲಿ ಕೇವಲ ತೇಜಸ್ವಿಯವರ ಪತ್ರಗಳನ್ನು ಮಾತ್ರ ಪ್ರಕಟಿಸಲಾಗಿದೆ. ಬೆರಳೆಣಿಕೆಯಷ್ಟು ಮಾತ್ರ ತಮ್ಮ ಪತ್ರಗಳನ್ನು ಪ್ರಕಟಿಸಿದ್ದಾರೆ. ಇದರಿಂದ ನಮಗೆ ಕೆಲವು ಕಡೆ ಸಂದರ್ಭವೇ ಅರ್ಥವಾಗದಂತಿದೆ. ಪತ್ರಗಳನ್ನು ಹೊಂದಿದ ಅಧ್ಯಾಯ ಬಹು ನೀರಸವೆನಿಸುತ್ತದೆ.

ಲೇಖಕಿಯವರು ತೇಜಸ್ವಿಯವರ ಬಗ್ಗೆ ತಮ್ಮ ಅಭಿಪ್ರಾಯ ಹೇಳದೆ nutral ಆಗಿ ಬರೆಯಬೇಕಿತ್ತು ಎಂದು ನನಗೆ ಪುಸ್ತಕದ ಮೊದಲಿಂದ ಕೊನೆವರೆಗೂ ಅನ್ನಿಸಿತು. ಪುಸ್ತಕದ ತುಂಬಾ ಅನೇಕ ಕಡೆ ತೇಜಸ್ವಿಯವರನ್ನು ಸ್ವಲ್ಪ ಉನ್ನತ ಮಟ್ಟಕ್ಕೆ ಏರಿಸಿ ಬರೆದಂತೆ ನನಗೆ ಕಾಣಿಸಿತು. (ಉದಾ: ಅವರಿಂದ ಅವರ ಆಪ್ತರು ಹೇಗೆ ಪ್ರಭಾವಿತರಾಗಿದ್ದರು, ಚಿಕ್ಕ ಪ್ರಾಯದಲ್ಲಿ ಅವರ ಯೋಚನೆಗಳು ಯಾವ ರೀತಿ ಇದ್ದವು, ಅವರು ಕಂಪ್ಯೂಟರ ಕಲಿಕೆಯಲ್ಲಿ ಪಳಗಿದ್ದು ಇತ್ಯಾದಿ) ಈ ಅಭಿಪ್ರಾಯವನ್ನು ಪತ್ನಿಯಾಗಿ ಅವರು ಬರೆಯದೆ ಇದ್ದರೆ ಒಳ್ಳೆಯದಿತ್ತು ಎನಿಸಿತು. ತೇಜಸ್ವಿಯವರ ಬಗ್ಗೆ ಎಂತಹ ಅಭಿಪ್ರಾಯ ಹೊಂದಬೇಕೆನ್ನುವುದನ್ನು ಓದುಗರಿಗೇ ಬಿಡಬೇಕಿತ್ತು. 

ಉಳಿದಂತೆ ಕೆಲವು ಉತ್ತಮ ಮಾಹಿತಿಗಳು (ಪ್ರಕೃತಿಯ ಬಗ್ಗೆ, ಕಾಫಿ ಬೆಳೆಯ ಬಗ್ಗೆ, ತೇಜಸ್ವಿವಯರ ಚಳುವಳಿಗಳ ಬಗ್ಗೆ, ಕುವೆಂಪು ಅವರ ಜೀವನದ ಬಗ್ಗೆ), ಸ್ವಾರಸ್ಯಕರ ಘಟನೆಗಳು ಉಲೇ್ಲಖಿಸಲ್ಪಟ್ಟಿವೆ.
ಒಟ್ಟಿನಲ್ಲಿ ಈ ಪುಸ್ತಕವನ್ನು ಓದಿದರೆ ನಮಗೆ ತೇಜಸ್ವಿಯವರ ಜೀವನದ ಇನ್ನೊಂದು ಆಯಾಮ ಕಾಣಸಿಗುತ್ತದೆ. ಆದರೆ ತೇಜಸ್ವಿ ಅಭಿಮಾನಿಗಳಲ್ಲದವರಿಗೆ ಈ ಪುಸ್ತಕ ಇಷ್ಟವಾಗುವುದು ಅನುಮಾನ. ನನ್ನ ದೃಷ್ಟಿಯಲ್ಲಿ ಇದು ಹೆಚ್ಚಿನ ನಿರೀಕ್ಷೆಯಿಲ್ಲದೆ ಸಮಯ ಕಳೆಯಲು ಓದಬಹುದಾದ ಪುಸ್ತಕ. ಓದದೆ ಹೋದರೆ ದೊಡ್ಡ ನಷ್ಟವೇನೂ ಆಗಲಾರದು ಎಂದು ನನ್ನ ಅನಿಸಿಕೆ.


Thursday, July 5, 2012

ಗಮ್ಮತ್ತು

ಮಂಗಳೂರಿನ ಪ್ಯಾಂಟಲೂನ್ಸ್ ಹೊಕ್ಕ ಕೆಲ ಕನ್ನಡಿಗರು ಬಟ್ಟೆಗಳನ್ನು ಹುಡುಕಿದರು. ಕೆಲಸಗಾರರು ಇಂಗ್ಲೀಷ್ ನಲ್ಲಿ ಸ್ವಾಗತಿಸಿದರು.
ಆ ಕನ್ನಡಿಗ ಗಿರಾಕಿಗಳು ಪಕ್ಕದಲ್ಲಿ ಸುಂದರವಾದ ದಿರಿಸಿನಲ್ಲಿದ್ದ ಒಬ್ಬ ಕೆಲಸಗಾರನನ್ನು ಕರೆದು "Do you have large one in this?" ಎಂದು ಕೇಳಿದರು.
ಆತ ಇನ್ನೊಬ್ಬನ್ನು ಕರೆದು "ಐಟ್ large size ದ ಕೊರ್ಲಯಾ" (ತುಳು: ಅದರಲ್ಲಿ large size ನದನ್ನು ಕೊಡು) ಎಂದನು. ನೋಡುತ್ತಿದ್ದ ನನಗೆ ನಗು!

ಹೀಗೊಬ್ಬಳು ಗೆಳತಿ


ಒಂದು ವರ್ಷದಿಂದ ಸತ್ತಂತಿದ್ದ ಬ್ಲಾಗ್ ಅನ್ನು ಈಗ ಎಬ್ಬಿಸುತ್ತಿದೇ್ದನೆ. ಬರೆಯದಿದ್ದುದಕ್ಕೆ ಕಾರಣಗಳು ಹಲವಿವೆ. ಅದನ್ನು ಹೇಳುವ ಅಗತ್ಯ ಕಾಣುತ್ತಿಲ್ಲ. ಅದರ ಮೇಲೆ ನನ್ನ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಡಂ ಬದಲಾಯಿಸಲಾಗಿ ಕನ್ನಡ ಬರಹ ಏನೇನೋ ಆಗುತ್ತಿದೆ.

ನಿನ್ನೆ ಬಿದ್ದ ಕನಸೊಂದು ನನ್ನ ಬಹು ವರ್ಷಗಳ ನೆನಪೊಂದನ್ನು ಮರಳಿ ತಂದಿತು. ಕನಸಲ್ಲಿ ಬಂದವಳು ನನ್ನ ಒಬ್ಬಳು ಗೆಳತಿ. ಶಾಲೆಯ ಒಂದನೇ ತರಗತಿಯಿಂದ ಏಳು ವರ್ಷ ಜೊತೆಗಿದ್ದವಳು. ಅವಳ ಹೆಸರು ಇಲ್ಲಿ ಅನಗತ್ಯ. ನಮ್ಮ ಮನೆಯ ಸಮೀಪದಲೇ್ಲ ಅವಳ ಮನೆ ಇತ್ತು. ಆದರೂ ಮನೆಗೆ ಹೋಗಿ ಬರುವ ರೂಢಿ ಇರಲಿಲ್ಲ. ಅವಳ ಅತಿ ದೊಡ್ಡ ಸಮಸ್ಯೆ ಎಂದರೆ ಅವಳಿಗೆ ಓದು ತಲೆಗೆ ಹತ್ತುತ್ತಲೇ ಇರಲಿಲ್ಲ. ಬರೆಯುವಾಗ ವಿಚಿತ್ರವಾಗಿ ಪನ್ನು ಹಿಡಿಯುತ್ತಿದ್ದು ಅಕ್ಷರಗಳು ಗೆರೆಯ ಮೇಲೆ ಮೂಡದೆ ಓರೆ ಓರೆಯಾಗಿ ಮೂಡುತ್ತಿದ್ದವು. 

ಚಿಕ್ಕ ತರಗತಿಗಳಲ್ಲಿ ಹೇಗಿದ್ದಳೋ ನೆನಪಿಲ್ಲ. ಆದರೆ ಮೂರನೇ ತರಗತಿ ಮತ್ತು ಐದನೇ ತರಗತಿಯಿಂದ ಬಾಲ್ ಪೆನ್ ಉಪಯೋಗಿಸಿ ಬರೆಯುತ್ತಿದ್ದ ಕಾಲದಲ್ಲಿ (ನಮ್ಮ ಶಾಲೆಯಲ್ಲಿ ಎಂದೂ ಇಂಕ್ ಪೆನ್ ಉಪಯೋಗಿಸಲು ಹೇಳಲಿಲ್ಲ) ನನ್ನ ಪಕ್ಕವೇ ಆಕೆ ಕುಳಿತಿರುತ್ತಿದ್ದುದು ನೆನಪಿದೆ. ಟೀಚರು ಹೇಳುತ್ತಿದ್ದ ಪ್ರತಿ ನೋಟ್ಸೂ ಅವಳಿಗೆ ಕಬ್ಬಿಣದ ಕಡಲೆಯಾಗಿ ಪ್ರತಿ ಅಕ್ಷರವನ್ನೂ ನನ್ನ ಪುಸ್ತಕ ನೋಡಿ ನಕಲು ಮಾಡುತ್ತಿದ್ದಳು. ಟೀಚರು ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆಗೂ ಉತ್ತರಿಸುತ್ತಿರಲಿಲ್ಲ. ಸದಾ ಏಟು, ಬೈಗಳು ತಿನ್ನುವುದು ನಡೆದಿತ್ತು. ಅವಳು ಒಳ್ಳೆ ಗುಣದವಳೂ, ಪ್ರಾಮಾಣಿಕಳೂ ಆಗಿದ್ದಳು. ಶಾಲೆಯಲ್ಲಿ ಯಾರೋ ಕಳೆದುಕೊಂಡಿದ್ದ ಚಿನ್ನದ ಸರವು ಅವಳಿಗೆ ಸಿಕ್ಕಾಗ ಅದನ್ನು ಮರಳಿಸಿ ಪ್ರಾಮಾಣಿಕತೆಗೆ ಬಹುಮಾನ ಪಡೆದಿದ್ದಳು.
ಆಗ ನನಗೆ ಬೇರೆ ಗೆಳತಿಯರಿದ್ದರು. ಹಾಗಾಗಿ ಅವಳು ತುಂಬ ಹತ್ತಿರದ ಗೆಳತಿಯೇನು ಆಗಿರಲಿಲ್ಲ. ಆದರೆ ನನಗೆ ತಿಳಿದಂತೆ ಆಕೆ ನನ್ನನ್ನು ತುಂಬಾ ಹಚ್ಚಿಕೊಂಡಿದ್ದಳು. ನಾನು ಟೀಚರಿಂದ ಭೇಷ್ ಅನ್ನಿಸಿಕೊಂಡಾಗಲೆಲ್ಲ ಅವಳು ಅತೀವ ಸಂತೋಷ ಪಡುತ್ತಿದ್ದಳು. ನಾನೂ ಅವಳ ಓದು ಬರಹಗಳಿಗೆ ತಕ್ಕ ಮಟ್ಟಿಗೆ ನೆರವಾಗುತ್ತಿದ್ದೆ. 

ಆಗ ನಾವು ಚಿಕ್ಕ ಪ್ರಾಯದವರಾಗಿ ಜಗತ್ತಿನ ಪರಿವೆಯೇ ಇರದಿದ್ದ ಕಾಲ. ನನಗೆ ಅವಳ ಕೆಲವು ಸಂಗತಿಗಳು ವಿಚಿತ್ರವೆನಿಸುತ್ತಿದ್ದವು. ಅವಳು ಮನೆಯಲ್ಲಿ ಆಗಾಗ ತಂದೆಯಿಂದ ಬಹಳವಾಗಿ ಏಟು ತಿನ್ನುತ್ತಿದ್ದಳು. ಒಮ್ಮೆ ತುಟಿ ಹರಿದುಕೊಂಡು ಅದಕ್ಕೆ ಕಾರಣವೇ ಹೇಳಿರಲಿಲ್ಲ. ಇನ್ನೊಮ್ಮೆ ಮುಖದಲ್ಲಿ ಮೂಗಿನ ಬಳಿ ಸುಟ್ಟ ಗಾಯ ಮಾಡಿಕೊಂಡು ಬಂದಿದ್ದಳು. ಹಲವು ಬಾರಿ ನಾನು ಪ್ರಶ್ನಿಸಿದ ನಂತರ, ಅವಳ ಅಣ್ಣ(ಚಿಕ್ಕಪ್ಪನ ಮಗ)ನಿಗೆ ದೇವರ ಪ್ರಸಾದ ಕೊಡಲು ಮರೆತಳು ಎಂಬ ಕ್ಷುಲ್ಲಕ ಕಾರಣವೊಂದಕ್ಕೆ ಅವಳ ತಂದೆ ದೀಪದ ಬೆಂಕಿಗೆ ಮುಖವೊಡ್ಡಿಸಿದರು ಎಂದಳು. ನನಗೆ ಇದು ಅರಗಿಸಿಕೊಳ್ಳಲಾರದ ವಿಷಯವಾಗಿತ್ತು. ನೌಕರಿಯಲ್ಲಿದ್ದು ಗೌರವಸ್ಥರಂತೆ ಕಾಣುತ್ತಿದ್ದ ಅವಳ ತಂದೆ ಕೋಪಿಷ್ಟರೆಂದು ಕೇಳಿದ್ದರೂ ಈರೀತಿ ಮಾಡಬಹುದೆಂಬ ಕಲ್ಪನೆಯೇ ಇರಲಿಲ್ಲ. ಅವಳ ಹಲ್ಲುಗಳಿಗೆ ಹುಳ ಹಿಡಿದಿದ್ದರೂ ಅವಳನ್ನು ಮನೆಯವರು ಒಮ್ಮೆಯೂ ವೈದ್ಯರಲ್ಲಿಗೆ ಕರೆದೊಯ್ಯಲಿಲ್ಲ. ಅವಳ ತಾಯಿಯು ತವರು ಮನೆಗೆ ಹೋಗದೆ ಅವಳಷೇ್ಟ ವರ್ಷಗಳಾಗಿದ್ದವಂತೆ. ಹಾಗಾಗಿ ಅವಳಿಗೆ ಅಜ್ಜನ ಮನೆಯ ಸಂಪರ್ಕವೇ ಇರಲಿಲ್ಲ. ಅವರನ್ನು ತವರಿನೊಂದಿಗೆ ಯಾವ ಸಂಪರ್ಕವೂ ಇಡದಂತೆ ಮಾಡಲಾಗಿತ್ತಂತೆ. ನಾನು ಆಗ ಇಂಥ ಕೌಟುಂಬಿಕ ಕೌ್ರರ್ಯಗಳು ಅರ್ಥವಾಗುವಷ್ಟು ದೊಡ್ಡವಳಿರಲಿಲ್ಲ.

ನಾವು ಏಳನೇ ತರಗತಿಯಲ್ಲಿರುವಾಗ ಪಬ್ಲಿಕ್ ಪರೀಕ್ಷೆ ಇತ್ತು. ಫಲಿತಾಂಶದ ದಿನ ಅವಳಷ್ಟು ಖುಷಿ ಪಟ್ಟವರನ್ನು ನಾನು ಕಾಣಲೇ ಇಲ್ಲ. ಅವಳು ಅತಿ ಕಡಿಮೆ ಅಂಕದಲ್ಲೂ ಪಾಸ್ ಆಗಿದ್ದಳೂ. ಅವಳು "ನಾನು ಪಾಸ್, ನಾನು ಪಾಸ್" ಎಂದು ದೆವ್ವ ಹಿಡಿದಂತೆ ಓಡಿಬಂದು ನನ್ನನ್ನು ಗಟ್ಡಿಯಾಗಿ ಕುಲುಕಿದ್ದು ಈಗಲೂ ಕಣ್ಣಿಗೆ ಕಟ್ಟುತ್ತದೆ. ನಾನು ಆಗ ಅವಳ ಮನಸ್ಥಿತಿ ಗೊತ್ತಾಗದೆ "ಹಾಂ" ಎಂದಷೇ್ಟ ಹೇಳಿದ್ದು ಈಗ ಬೇಸರ ತರಿಸುತ್ತದೆ. 

ಪೌ್ರಢ ಶಿಕ್ಷಣದಲ್ಲಿ ನಮ್ಮ ತರಗತಿಗಳು ಬೇರೆಯಾದವು. ನಮ್ಮ ಮನೆಯೂ ಬೇರೆ ಕಡೆಗೆ ಬದಲಾಯಿತು. ನನಗೆ ಬೇರೆ ಗೆಳತಿಯರು ಸಿಕ್ಕಿದರು. ಅವಳು ಆಗೀಗ ಕಂಡರೂ ನನಗೆ ವಿಶೇಷವಾಗಿ ಮಾತಿಗೇನು ಸಿಗುತ್ತಿರಲಿಲ್ಲ. ನನಗೆ ತಿಳಿದಂತೆ ಅವಳು ಎಂಟನೇ, ಒಂಭತ್ತನೇ ತರಗತಿಗಳಲ್ಲಿ ಒಮ್ಮೊಮ್ಮೆ ಫೇಲ್ ಆಗಿರಬೇಕು. ಆಗೆಲ್ಲ ಮನೆಯಲ್ಲಿ ಎಷ್ಟು ಹೊಡೆತ ತಿಂದಳೋ ದೇವರಿಗೇ ಗೊತ್ತು. ಹತ್ತನೆಯಲ್ಲಿ ಫೇಲ್ ಆದ ಕೆಲ ಸಮಯ ನಂತರ ಓದನೇ್ನ ಬಿಟ್ಟಿರಬೇಕು. ಆಮೇಲೆ ಅವಳಿಗೆ ಮದುವೆಯಾಯಿತು. ಅಲ್ಲಿಗೆ ಅವಳ ಸಂಪರ್ಕವೇ ಮುಗಿಯಿತು.

ಮುಂದೊಂದು ದಿನ (ಐದಾರು ವರ್ಷ ನಂತರ) ಅನಿರೀಕ್ಷಿತವಾಗಿ ಅವಳು ಕಂಡಳು. ಬೈಕ್ ನಲ್ಲಿ ಇಬ್ಬರು ವ್ಯಕ್ತಿಗಳು ಹೋಗುತ್ತಿದ್ದು, ದಾರಿಯಲ್ಲಿ ನನ್ನನ್ನು ಕಂಡಾಕ್ಷಣ ನಿಲ್ಲಿಸಿದರು. ಹಿಂದೆ ಕುಳಿತಿದ್ದ ಅವಳು ಬಂದು ನನ್ನನ್ನು ಮಾತಾಡಿಸಿದಾಗ ನನಗೆ ಅಚ್ಚರಿಯೂ ಸಂತೋಷವೂ ಆಯಿತು. ಬೈಕ್ ಚಲಾಯಿಸುತ್ತಿದ್ದಾತನನ್ನು ತನ್ನ ಪತಿ ಎಂದು ಪರಿಚಯಿಸಿದಳು. ಅವಳ ಮುಖ ಸಂತಸದಿಂದ ಕೂಡಿತ್ತು. ನಕ್ಕಾಗ ಹುಳುಕು ಹಲ್ಲುಗಳ ಬದಲು ಹೊಸದಾಗಿ ಮಾಡಿಸಿದ ಹಲ್ಲುಗಳು ಕಂಡವು. ಐದು ನಿಮಿಷವಷೇ್ಟ ಮಾತನಾಡಿ ತಮ್ಮ ದಾರಿ ಹಿಡಿದರು. ನನಗೆ ಅಷೇ್ಟ ಸಾಕಿತ್ತು. ಅವಳು ನನ್ನನ್ನು ಕಂಡಾಗ ನಿಲ್ಲಿಸಿ ಮಾತನಾಡುವಷ್ಟು ಪ್ರೀತಿ ಇಟ್ಟುಕೊಂಡದ್ದು ಮನಸಿಗೆ ತಟ್ಟಿತು. ಅವಳ ಅರಳಿದ ಮುಖ ಈಗ ಅವಳ ಜೀವನ ಸುಂದರವಾಗಿದೆ ಎಂದು ಹೇಳಿದಂತಿತ್ತು. ಇಷ್ಟು ವರ್ಷಗಳ ನಂತರವಾದರೂ ಒಳ್ಳೆ ಬದುಕು ಸಿಕ್ಕಿತಲ್ಲಾ ಎಂದು ನಾನು ಸಮಾಧಾನ ಪಟ್ಟೆ. ಆಮೇಲೆ ಅವಳು ನನಗೆ ಸಿಕ್ಕಿಲ್ಲ. ಅವಳು ಈಗಲೂ ಸಂತೋಷದ ಜೀವನ ನಡೆಸುತ್ತಿರಲಿ ಎಂದು ಸದಾ ಬಯಸುತೇ್ತನೆ.

Friday, July 8, 2011

ಇಂಗ್ಲೀಷ್ ಭಾಷೆ… ಒಂದು "ಭಾಷೆ".

ಎಷ್ಟೋ ದಿನಗಳ ನಂತರ ಬರೆಯಲು ಹೊರಟದ್ದೇನೆ.
ಬೇರೆ ಬೇರೆ ಕಾರಣಗಳಿಂದ (ಮದುವೆ ಸಮಾರಂಭಗಳ ತಿರುಗಾಟ, ಅನಾರೋಗ್ಯ, ಕೆಲಸ ಮಾಡದ ಕಂಪ್ಯೂಟರ್ ಇತ್ಯಾದಿ) ಬ್ಲಾಗ್ ಬರಹಕ್ಕೆ ಸಮಯ ಹೊಂದಿಸಿಕೊಳ್ಳಲಾಗದೆ ಇಂದು ಹೇಗೋ ಹೊಂದಿಸಿಕೊಂಡಿದ್ದೇನೆ.
ಬರೆಯಲು ಅನೇಕ ವಿಷಯಗಳು ತಲೆಯಲ್ಲಿ ಮೂಡಿ ಮರೆತೂ ಹೋಗಿವೆ. ಕಂಪ್ಯೂಟರಿನೊಳಗಿದ್ದ ಬರೆಯಲರ್ಹ ವಿಷಯಗಳ ಪಟ್ಟಿ ಕಾಣೆಯಾಗಿದೆ. ಸಧ್ಯದಲ್ಲಿ ನೆನಪಿರುವುದು ಇಂಗ್ಲೀಷ್ ಭಾಷೆಯ ಬಗ್ಗೆ ಮಾತನಾಡಬೇಕೆನಿಸಿದ ವಿಷಯಗಳು.

ನಾನು ಏಳನೆ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವಳು. ಎಂಟನೇ ತರಗತಿಯಲ್ಲಿ ಆಂಗ್ಲ ಮಾಧ್ಯಮಕ್ಕೆ ಸೇರಿದರೂ, ನಮ್ಮ ಆ ಸಣ್ಣ ಊರಲ್ಲಿ ಹೀಗೆ ಕನ್ನಡದಿಂದ ಇಂಗ್ಲೀಷ್ ಗೆ ಬದಲಿಸುವವರು ಹಲವರಿದ್ದುದರಿಂದ ಅಧ್ಯಾಪಕರು ಇಂಗ್ಲೀಷ್, ಕನ್ನಡ ಎರಡೂ ಭಾಷೆಯಲ್ಲಿ ವಿವರಿಸುತ್ತಿದ್ದರು. ಆಗ ನನ್ನ ಇಂಗ್ಲೀಷ್ ಜ್ಞಾನ ಪರೀಕ್ಷೆಗೆ ಓದಲು ಹಾಗೂ ಬರೆಯಲು ಬೇಕಾಗುವಷ್ಟೇ ಇತ್ತು. ಮಾತನಾಡಲು ಬರುತ್ತಿರಲಿಲ್ಲ.

ಪಿ.ಯು.ಸಿ.ಯಲ್ಲೂ ಕನ್ನಡದಲ್ಲೇ ಮಾತು. ಪಾಠ ಮಾತ್ರವೇ ಇಂಗ್ಲೀಷ್ ನಲ್ಲಿ ಇದ್ದುದು! ಇಂಥ ನಮೂನೆ ಬೆಳೆದವಳಿಗೆ ಎಂಜಿನೀರಿಂಗ್ ಸೇರಿದಾಗ ಪೇಚಾಟಕ್ಕಿಟ್ಟುಕೊಂಡಿತು. ಕಾಲೇಜು ದಕ್ಷಿಣ ಕನ್ನಡದ್ದೇ ಆಗಿದ್ದರೂ ಅನೇಕರು ಕನ್ನಡ ಬರದವರೂ, ಕನ್ನಡ ಬರದಂತೆ ನಟಿಸುವವರೂ ಅಲ್ಲಿದ್ದರು. ಅದಲ್ಲದೆ ಮಲಯಾಳ ಮಾತನಾಡುತ್ತಿದ್ದ ನನ್ನ ರೂಂ ಮೇಟ್ ಜೊತೆ ಇಂಗ್ಲೀಷ್ ಅಲ್ಲದೆ ಬೇರೇನೂ ಭಾಷೆ ಮಾತನಾಡುವುದು ಸಾಧ್ಯವಿರಲಿಲ್ಲ. ಅವಳೊಡನೆ ಹೇಗೋ ಕಷ್ಟಪಟ್ಟು ಮಾತನಾಡುತ್ತಾ ನಿಧಾನಕ್ಕೆ ಭಾಷೆಯ ಮೇಲೆ ಹಿಡಿತ ಸಿಗಲ;ಾರಂಭಿಸಿತು. ಆದರೆ ಇತರೆ ಓದುವಿಕೆಯು ಕನ್ನಡದಲ್ಲೇ ಇದ್ದಕಾರಣ ಶಬ್ಧಗಳು ನಾಲಿಗೆ ಮೇಲೆ ಬೇಕಾದಂತೆ ಕುಣಿಯುತ್ತಿರಲಿಲ್ಲ. ಆದರೂ ಮಾತನಾಡಲು ಏನೂ ತೊಂದರೆಯಾಗಲಿಲ್ಲ.

ವರುಷಗಳ ನಂತರ ಮದುವೆಯಾಯಿತು. ನನ್ನ ಯಜಮಾನರು ಮರಾಠಿ ಮಾಧ್ಯಮದಲ್ಲಿ ಕಲಿತವರು! ಅವರಿಗೆ ಓದುವ ಹವ್ಯಾಸವೂ ಇಲ್ಲ. ಅವರ ಇಂಗ್ಲೀಷ್ ಕೂಡಾ ಒಮ್ಮೊಮ್ಮೆ ತಡವರಿಸುತ್ತಿತ್ತು. ಕೆಲವು ಕಡೆ ವ್ಯಾಕರಣ ತಪ್ಪುತ್ತಿತ್ತು. ನನಗೆ ಅದನ್ನು ಸರಿಪಡಿಸಬೇಕೆಂದು ಬಲವಾಗಿ ಅನಿಸಿತು. ಮನೆಗೆ ಇಂಗ್ಲೀಷ್ ಪೇಪರ್ ತರಿಸಿ ಓದಲು ಹೇಳಿದೆ. ಓದುವ ಹವ್ಯಾಸ ಇಲ್ಲದಿದ್ದರೂ ಅದು ಓದು, ಇದು ಓದು ಎಂದು ಕೊಡತೊಡಗಿದೆ. ಅದು ಅವರಿಗೆ ಅಷ್ಟೊಂದು ಇಷ್ಟವಾಗುತ್ತಿದ್ದಂದೆ ಕಾಣಲಿಲ್ಲ.

ಮತ್ತೊಂದು ದಿನ ಆಫೀಸಿನಲ್ಲಿ ಹೊರ ರಾಜ್ಯದವರೊಡನೆ ಮಾತನಾಡುವಾಗ ನನ್ನ ದೃಷ್ಟಿಕೋನವೇ ಬದಲಾಗುವಂಥ ಸಂದರ್ಭ ಬಂತು. ಆಫೀಸಿನಲ್ಲಿ ಕನ್ನಡಿಗರಲ್ಲದವರೊಬ್ಬರು ಕನ್ನಡದ ಒಂದೆರಡು ಶಬ್ದಗಳನ್ನು ವಾಕ್ಯಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರು. ನನಗೆ ಇದನ್ನು ಕಂಡು ಬಹಳ ಖುಷಿಯಾಗಿ ಅವರಿಗೆ ವಾಕ್ಯ ಪೂರ್ಣ ಮಾಡಲು ಹೇಳಿಕೊಟ್ಟೆ. ತಪ್ಪಿದ್ದರೆ ತೊಂದರೆಯಿಲ್ಲ, ನಮ್ಮ ಭಾಷೆ ಕಲಿಯಲು ಯತ್ನಿಸಿದ್ದಾರೆ ಎಂದು ಸಂತೋಷಗೊಂಡು ಇನ್ನಷ್ಟು ಪ್ರೋತ್ಸಾಹಿಸಿದೆ. ಆಗ "ನಮ್ಮ ಭಾಷೆ ಅರಿಯದವರು ಅದನ್ನು ಕಲಿತು ತೊದಲಿದರೂ ನಮಗೆ ಇಷ್ಟವಾಗುತ್ತದೆ, ಹೆಮ್ಮೆಯೆನಿಸುತ್ತದೆ, ಆದರೆ ಇಂಗ್ಲೀಷ್ ಭಾಷೆಯಲ್ಲಿ ತಡವರಿಸುವವರನ್ನು ಕಂಡರೆ ಹಾಗೇಕೆ ಅನ್ನಿಸುವುದಿಲ್ಲ" ಎಂದು ಆಶ್ಚರ್ಯ ಪಟ್ಟೆ.

ನಾನು ಅನೇಕರನ್ನು ನೋಡಿದ್ದೇನೆ. ಇಂಗ್ಲೀಷ್ ಮಾತನಾಡಲು ಬರುವವರು ಇಂಗ್ಲೀಷ್ ಬಾರದವರನ್ನು ಗೇಲಿ ಮಾಡುವುದನ್ನು ಕಂಡಿದ್ದೇನೆ. ಅಲ್ಲದೆ ನನ್ನ ಸಹಪಾಠಿಗಳಲ್ಲಿ ಹಲವರು ಕನ್ನಡ ಬರುತ್ತಿದ್ದರೂ "I don't know Kannada" ಎಂದು ಹೆಮ್ಮೆಯಿಂದ ಹೇಳುವುದನ್ನು ಕೇಳಿದ್ದೇನೆ. ಅಪರಿಚಿತರಲ್ಲಿ ಕನ್ನಡದಲ್ಲಿ ದಾರಿಕೇಳಿದಾಗ, ಅಂಗಡಿಗಳಲ್ಲಿ ಸಾಮಾನು ವಿಚಾರಿಸಿದಾಗ ಇಂಗ್ಲೀಷ್ ಮಾತನಾಡಲು ಬರದಿದ್ದರೂ ಕಷ್ಟ ಪಟ್ಟು ಏನೇನೋ ಉತ್ತರ ಕೊಡುವುದನ್ನು ನೋಡಿದ್ದೇನೆ. ನಾನೇ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿದಾಗ ಹಲವು ಮಕ್ಕಳು ಇಂಗ್ಲೀಷ್ ಮಾತನಾಡುವುದನ್ನು ನೋಡಿ ಕೀಳರಿಮೆಗೊಳಗಾಗಿದ್ದೇನೆ. ಈಗ ನೆನಪಿಸಿಕೊಂಡರೆ ಅಂದು ಹೆಚ್ಚಿನ ಮಕ್ಕಳು ಕನ್ನಡವನ್ನು ನೇರ ಇಂಗ್ಲೀಷ್ ಗೆ ತರ್ಜುಮೆ ಮಾಡಿ ಮಾತನಾಡಿಕೊಳ್ಳುತ್ತಿದ್ದುದು ಎಂದು ಗೊತ್ತಾಗಿ ನಗು ಬರುತ್ತದೆ. ಕೇವಲ ಇಂಗ್ಲೀಷ್ ಗೆ ಹೀಗೇಕೆ ಎಂದು ಬಹಳ ವಿಚಿತ್ರವೆನಿಸುತ್ತದೆ.

ಬಹುಶಃ ನಾವು ಇಂಗ್ಲೀಷ್ ಅನ್ನು ಒಂದು ಭಾಷೆಯ ರೂಪದಲ್ಲಿ ನೋಡುತ್ತಲೇ ಇಲ್ಲ. ಅದರ ಜೊತೆ ನಮ್ಮ prestige, pride ಅನ್ನು ಅಂಟಿಸಿಕೊಳ್ಳುತ್ತೇವೆ. ಯಾವುದೇ ರಾಜ್ಯದವರಾಗಲೀ ನಾವು ಅವರ ಭಾಷೆ ಮಾತನಾಡಲು ಯತ್ನಿಸಿದರೆ ಸಂತೋಷ ಪಡುತ್ತಾರೆ. ಇದನು್ನ ಭಾಷಾಭಿಮಾನ ಎನ್ನೋಣವೇ? ಹಾಗಾದರೆ ಇಂಗ್ಲೀಷ್ ಬಗ್ಗೆ ಯಾರಿಗೂ ಅಭಿಮಾನವೇ ಇಲ್ಲ ಎಂದಹಾಗಾಯಿತಲ್ಲ! ಇಂಗ್ಲೀಷ್ ಅನ್ನು ಇತರ ಭಾಷೆಗಳಂತೆ ಒಂದು communication ನ ಮಾಧ್ಯಮವಾಗಿ ನೋಡಿದರೆ ಏನೂ ಸಮಸ್ಯೆಯೇ ಇರಲಿಕ್ಕಿಲ್ಲ ಅಲ್ಲವೇ?

ನನ್ನ ಸಹೋದ್ಯೋಗಿಯ ಆ ಸಣ್ಣ ಪ್ರಯತ್ನ ಇಂಗ್ಲೀಷ್ ಭಾಷೆಯನ್ನು ನೋಡುವ ದೃಷ್ಟಿಯನ್ನೇ ಬದಲಿಸಿತು. ಈಗ ನಾನು ಯಜಮಾನರ ಇಂಗ್ಲೀಷ್ ಭಾಷಾಜ್ಞಾನದ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ದಿನವೂ ಪೇಪರ್ ಓದುವ ಅಭ್ಯಾಸ ಅವರಿಗೆ ಹಿಡಿದಿರುವುದರಿಂದ ಶಬ್ದ ಭಂಡಾರವೂ ನಿಧಾನಕ್ಕೆ ಉತ್ತಮಗೊಳ್ಳುತ್ತದೆ. ನಾವು ಹೇಳಿದ್ದು ಎದುರಿನ ವ್ಯಕ್ತಿಗೆ ಸರಿಯಾಗಿ ಅರ್ಥವಾಗುತ್ತಿದ್ದರೆ ಅದರಲ್ಲಿ ಇನ್ನೇನು ತೊಂದರೆಯಿದೆ? ಈಗ ಇಂಗ್ಲೀಷ್ ನನಗೆ ಕೇವಲ ಒಂದು ಭಾಷೆ. ಹೊಸ ಶಬ್ದಗಳನ್ನು ಕಲಿಯುತ್ತೇನೆ, ವ್ಯಾಕರಣ ಸರಿಪಡಿಸಿಕೊಳ್ಳುತ್ತೇನೆ, ಇತರ ಭಾಷೆಗಳಂತೆ ಪ್ರೀತಿಸುತ್ತೇನೆ (ಕನ್ನಡದಷ್ಟು ಅಲ್ಲ) ಮತ್ತು ಯಾವತ್ತಾದರೂ ತಪ್ಪುಗಳಾದರೆ ಕೀಳರಿಮೆ ಹಚ್ಚಿಕೊಳ್ಳುವುದಿಲ್ಲ :-)
-

Monday, April 11, 2011

ನನಸಾಗದ ಚಾರಣದ ಕನಸು (ಅಂತರಗಂಗೆ)

ಬೆಟ್ಟ ಹತ್ತುವ ಹುಚ್ಚು ಒಮ್ಮೆ ಹಿಡಿದರೆ ಮತ್ತೆ ಬಿಡುವುದು ಕಷ್ಟ ಎಂದು ನನ್ನ ಅನಿಸಿಕೆ. ಚಿಕ್ಕಂದಿನಲ್ಲಿ ಅಜ್ಜನ ಮನೆಯ ಬಳಿ ಇದ್ದ ಗುಡ್ಡಕ್ಕೆ ಏರಿ ಎತ್ತರದಿಂದ ಪುಟಾಣಿ ಬಸ್ ಗಳನ್ನು, ಪುಟಾಣಿ ಮನೆಗಳನ್ನು ಮತ್ತು ನೂರು ಕಿಲೋಮೀಟರು ದೂರದ ಸಮುದ್ರವನ್ನು ನೋಡುತ್ತಿದ್ದಾಗಲೇ ಗುಡ್ಡ ಹತ್ತುವ ಹುಚ್ಚು ಹಿಡಿದಿತ್ತು. ಅಜ್ಜನ ಮನೆಯಲ್ಲಿ ಚಿಕ್ಕಮ್ಮ-ದೊಡ್ಡಮ್ಮನ ಮಕ್ಕಳು ಸೇರಿದಾಗೆಲ್ಲ ಒಟ್ಟಾಗಿ ಹರಳುಕಲ್ಲುಗಳ ಗುಡ್ಡಕ್ಕೆ ಕಾಲು-ಕೈ ಉಪಯೋಗಿಸಿ ಜಾರುತ್ತಾ ಏರುತ್ತಿದ್ದ ನೆನಪು ಇನ್ನೂ ಹಸಿರು. ಬೆಳೆಯುತ್ತಾ ಹೋದಂತೆ ಅಜ್ಜನ ಮನೆಯಲ್ಲಿ cousins ಜೊತೆ ಸೇರುವುದು ಕಮ್ಮಿಯಾಯಿತು. ಬೆಟ್ಟ ಹತ್ತುವ ಅವಕಾಶಗಳೂ ಕಡಿಮೆಯಾದುವು. ಅಲ್ಲದೆ ಸಮಾನ ಆಸಕ್ತಿ ಹೊಂದಿದವರೂ ಸಿಗದಾದರು.

ವರುಷಗಳ ನಂತರ ಚಿತ್ರದುರ್ಗದ ಕಲ್ಲುಗಳಲ್ಲಿ ಅಲೆದಾಗ ಬೆಟ್ಟ ಹತ್ತುವ ಹುಚ್ಚು ಪುನಃ ಹತ್ತಲಾರಂಭಿಸಿತು. ಹಾಸನದ ಬಳಿ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಪುಟ್ಟ ಬಂಡೆಯನ್ನು ಹತ್ತಿ ಮೇಲಿಂದ ಕೆಳ ನೋಡಿದಾಗ ಹುಚ್ಚು ಇನ್ನಷ್ಟು ಹೆಚ್ಚಿತು. ಶಿವಗಂಗೆಯ ಚಾರಣವಂತೂ ಮರೆಯಲಾಗದ ಅನುಭವ ಎನಿಸಿತು. ಅದೇ ಗುಂಗಿನಲ್ಲಿ browsing ಮಾಡುತ್ತಾ ಅಂತರಗಂಗೆಗೆ ಹೋಗಿ ಬೆಟ್ಟ ಹತ್ತುವ ಯೋಜನೆ ಹಾಕಿಯೇ ಬಿಟ್ಟೆ.

ಕೋಲಾರದತ್ತ...


ಶನಿವಾರ 26 ಫೆಬ್ರವರಿಯಂದು ನಾವಿಬ್ಬರು ಕೋಲಾರಕ್ಕೆ ಹೊರಟೆವು. ಶುಕ್ರವಾರ ರಾತ್ರಿವರೆಗೆ ಎಲ್ಲಿಗೆ ಹೋಗುವುದು ಎಂಬ ನಿರ್ಧಾರವೇ ಆಗಿರಲಿಲ್ಲ. ಕೊನೆಗೆ ಅಂತರಗಂಗೆ ಎಂದು ನಿರ್ಧರಿಸಿ ಹೊರಟಿದ್ದೆವು. ಸುಮಾರು ಎಂಭತ್ತು ಕಿಲೋಮೀಟರು ಇದ್ದ ಅಂತರಗಂಗೆಗೆ ನಾವು ತಡವಾಗಿ ಹೊರಟಕಾರಣ ತಲುಪಿದಾಗ ಮಧ್ಯಾಹ್ನವಾಗಿತ್ತು. ದ್ವಾರದ ಬಳಿ ಒಂದೆರಡು ಗೂಡಂಗಡಿಗಳನ್ನು ಬಿಟ್ಟರೆ ಬೇರೆ ಯಾವುದೇ ಜನಸಂಚಾರ ಇದ್ದಂತೆ ಕಾಣಲಿಲ್ಲ. ದ್ವಾರದಿಂದ ಸುಮಾರು 200 ಮೀಟರ್ ನಡೆದಾಗ ಅಂತರಗಂಗೆಯ ಶಿವ ದೇವಸ್ಥಾನ ಕಂಡಿತು. ದಾರಿಯುದ್ದಕ್ಕೂ ಮಂಗಗಳ ಹಿಂಡು ನಮ್ಮ ಕೈಯಲ್ಲಿ ತಿನಿಸುಗಳಿವೆಯೇ ಎಂದು ನೋಡುವುದರಲ್ಲಿ ಮಗ್ನವಾಗಿತ್ತು. ಶಿವ ದೇವಸ್ಥಾನದ ಪಕ್ಕ ಬಂಡೆಯೊಳಗಿಂದ ಸಿಹಿನೀರಿನ ತೊರೆ ಚಿಮ್ಮಿ ಬರುತ್ತಿತ್ತು. ಅದರ ಕೆಳಗೆ ಕೆಲವರು ಸ್ನಾನ ಮಾಡುತ್ತಿದ್ದರು. ಹಲವು ಮಕ್ಕಳು ಅದರಿಂದ ಕ್ಯಾನುಗಳಲ್ಲಿ ನೀರುತುಂಬಿಕೊಳ್ಳುತ್ತಿದ್ದರು. ಆ ನೀರು ಹರಿದು ಬೀಳುತ್ತಿದ್ದ ಕೊಳವು ಕಸಕಡ್ಡಿ, ಹೂ, ಪಾಚಿಗಳಿಂದ ತುಂಬಿ ನೋಡಲು ಕೆಟ್ಟದಾಗಿ ಕಾಣುತ್ತಿತ್ತು. ಅಲ್ಲದೆ ಅದರ ಅಡಿಯಲ್ಲಿ ಜನರು ಸ್ನಾನ ಮಾಡುತ್ತಿದ್ದು, ನಾವು ನೀರು ಹಿಡಿಯಲು ಹೋದರೆ ಅವರ ತಲೆಗಿಂತ ಅರ್ಧ ಅಡಿ ಮೇಲೆಯಷ್ಟೇ ಕೈಯಿಡಬೇಕಿತ್ತು. ಹಾಗಾಗಿ ನನಗೇಕೋ ನೀರು ಹಿಡಿದುಕೊಳ್ಳುವುದರಲ್ಲಿ ಅಷ್ಟಾಗಿ ಆಸಕ್ತಿ ಉಂಟಾಗಲಿಲ್ಲ.

ಅಂತರಗಂಗೆ:


ಐದು ವರ್ಷ ಹಿಂದೆ ನಮ್ಮ ಮನೆ ಮಾಲೀಕರು ಬೆಟ್ಟ ಹತ್ತಿದ್ದರೆಂದೂ, ಆಗ ಅನೇಕರು ಹತ್ತುತ್ತಿದ್ದುದಲ್ಲದೆ, ಹಲವು ಮಕ್ಕಳು ಬೆಟ್ಟದ ಮೇಲೆ ಹತ್ತಿ ಅಲ್ಲಿಂದ can ಗಳಲ್ಲಿ ನೀರು ತುಂಬಿ ಕೆಳ ತಂದು, ತೀರ್ಥವೆಂದು ಮಾರುತ್ತಿದ್ದರೆಂದೂ, ಆಮೇಲೆ ತಿಳಿಯಿತು.

ನಾವು ಬೆಟ್ಟ ಹತ್ತುವ ಉತ್ಸಾಹದಿಂದ ಎರಡು ಲೀಟರ್ ನೀರು, ಟೊಪ್ಪಿ, ಕ್ಯಾಮರಾ ಹೊತ್ತು ತಂದಿದ್ದೆವು. ಬೆಟ್ಟ ಹತ್ತುವ ಕಡೆ ಜನಸಂಚಾರವೇ ಕಾಣುತ್ತಿರಲಿಲ್ಲ. ಅಲ್ಲದೆ ಇಂಟರ್ನೆಟ್ ನಲ್ಲಿ ಒಬ್ಬರು ಅಲ್ಲಿ ಕಳ್ಳಕಾಕರು ಇರಬಹುದೆಂಬ ಎಚ್ಚರಿಕೆ ಕೊಟ್ಟಿದ್ದರಿಂದ ನನಗೆ ಸ್ವಲ್ಪ ಇರುಸು-ಮುರುಸಾಗತೊಡಗಿತು. ಅಲ್ಲಿ ಚಿಕ್ಕ ಬಾಲಕನೊಬ್ಬ ಅತಿ ಉತ್ಸಾಹದಿಂದ ಮೇಲೆ ಕರೆದೊಯ್ಯುವೆನೆಂದು ಬಂದ. ಇನ್ನೂ ಏನು ಮಾಡುವುದೆಂದು ಯೋಚಿಸುತ್ತಿರಬೇಕಾದರೆ "ಚಿರತೆಗಳಿವೆ. ಯಾತ್ರಿಕರು ಬೆಟ್ಟ ಹತ್ತುವುದನ್ನು ನಿಷೇಧಿಸಲಾಗಿದೆ - ಪೋಲೀಸ್ ಇಲಾಖೆ" ಎಂಬ ಬೋರ್ಡು ದೃಷ್ಟಿಗಪ್ಪಳಿಸಿತು. ಇನ್ನು ಇಬ್ಬರಾಗಿ ಬೆಟ್ಟ ಹತ್ತುವ ಮಾತೇ ಇರಲಿಲ್ಲ. ಅದಲ್ಲದೆ ಬೇರೆ ಯಾರೂ ಹತ್ತುತ್ತಿರುವುದು ನಮಗೆ ಕಾಣಿಸಲಿಲ್ಲ. ನನಗೆ ನಿರಾಸೆಯಾಯಿತು. ಕೃಷ್ಣನಿಗೆ mood ಹೋಗಲಾರಂಭಿಸಿ, ಸಿಟ್ಟು ಬರತೊಡಗಿತು. "ಇನ್ನೇನು ಮಾಡುವುದು ಇಲ್ಲಿ ಕೂತು? ವಾಪಸ್ ಹೋಗೋಣ" ಎಂದು ತಿರುಗಿ ನಡೆದೇ ಬಿಟ್ಟರು.

ನಾನೂ ಇನ್ನೇನೆಂದು ಯೋಚಿಸುತ್ತಾ ಹಿಂಬಾಲಿಸಿದೆ. ಅಂತರಗಂಗೆಯ ದ್ವಾರದ ಸ್ವಲ್ಪ ದೂರದಲ್ಲಿ ಒಂದು ಬೋರ್ಡು ಹಾಕಿದ್ದು, ಅದರಲ್ಲಿ ನೋಡಲರ್ಹ ತಾಣಗಳ ಹಾಗೂ ಅಂತರಗಂಗೆಯಿಂದ ಅಲ್ಲಿಗೆ ಇರುವ ದೂರದ ಪಟ್ಟಿ ಇತ್ತು. ಅದರಲ್ಲಿ ಸುಮಾರು ನಲ್ವತ್ತು ಕಿಲೋಮೀಟರು ದೂರದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನವೂ, ಅಲ್ಲಿಂದ ಮತ್ತೆ ಹತ್ತು ಕಿಲೋಮೀಟರು ದೂರದಲ್ಲಿ ಬಂಗಾರು ತಿರುಪತಿ ಇರುವುದೂ ತಿಳಿಯಿತು. ಎಪ್ಪತ್ತು-ಎಂಭತ್ತು ಕಿಲೋಮೀಟರು ಮೇಲೆ ಪ್ರಯಾಣಿಸಿ ಬಂದು ಸುಮ್ಮನೆ ತಿರುಗಿ ಹೋಗಲು ಮನಸಿರದ ಕಾರಣ ಈ ದೇವಸ್ಥಾನಗಳನ್ನು ನೋಡುವುದೆಂದು ನಿರ್ಧರಿಸಿದೆವು.

ಯೋಜನೆಗಳು ತಲೆಕೆಳಗಾದ ಕಾರಣ ಊಟ ಮಾಡಲು ವಿಷೇಶ ಉತ್ಸಾಹವೇನೂ ಇರಲಿಲ್ಲ. ಸುಮಾರು ಮೂರು ಗಂಟೆಯ ಹೊತ್ತಿಗೆ ಕೋಟಿಲಿಂಗೇಶ್ವರ ದೇವಸ್ಥಾನ ತಲುಪಿದೆವು. ಒಳ ಹೋಗಲು ತಲಾ ಇಪ್ಪತ್ತು ರೂಪಾಯಿಯ ಟಿಕೇಟು. ಕ್ಯಾಮೆರಾಗೆ ನೂರು. ಆ ಜಾಗದಲ್ಲಿ ಹೆಚ್ಚಿನ ನಿರೀಕ್ಷೆಗಳೇನೂ ಇದ್ದಿರದ ಕಾರಣ, ಕ್ಯಾಮೆರಾಗೆ ನೂರು ರೂಪಾಯಿ ಕೊಡಲಿಚ್ಛಿಸದೆ ಕಾರೊಳಗೆ ಇಟ್ಟು ಬಂದೆ. ಅನೇಕ ಲಿಂಗಗಳನ್ನು ಸಾಲು ಸಾಲಾಗಿ ಇಟ್ಟಿರುವ ದೇವಸ್ಥಾನದ ಹೊರಭಾಗ, ನೋಡಲು ಚೆನ್ನಾಗಿದ್ದರೂ ವಿಶೇಷವಾಗಿ ಏನೂ ಇರಲಿಲ್ಲ. ನೂರು ಅಡಿ ಮೀರಿದ ಎತ್ತರದ ಲಿಂಗ ಯಾವುದೇ ಕೆತ್ತನೆ, ತಿರುವುಗಳಿಲ್ಲದೆ ತೀರಾ ಸಾಮಾನ್ಯವೆನಿಸಿತು. ನಂದಿ ವಿಗ್ರಹವೂ ಬಹಳ ಸರಳವಾಗಿದ್ದು ನಂದಿಯ ತಲೆ ಅದರ ದೇಹಕ್ಕೆ ತುಂಬಾ ಚಿಕ್ಕದಾಗಿ (disproportionate) ಆಗಿತ್ತು. ಅಲ್ಲಿ ಕ್ಯಾಮೆರಾಗೆ ನೂರು ರೂಪಾಯಿ ತೆತ್ತು ಫೋಟೋ ತೆಗೆಯುವಂಥದ್ದೇನೂ ಕಾಣಿಸಲಿಲ್ಲ. ನನಗೆ ಮೊದಲಿಂದಲೂ ಬಣ್ಣ ಬಳಿದ, ಮಾರ್ಬಲ್, ಅಥವಾ ಟೈಲ್ಸ್ ಅಂಟಿಸಿದ ದೇವಸ್ಥಾನಗಳು ಅಷ್ಟೊಂದು ಇಷ್ಟವಾಗದ ಕಾರಣ, ಕೋಟಿಲಿಂಗೇಶ್ವರ ಮೂಲ ದೇವಸ್ಥಾನ ಬಿಟ್ಟರೆ ಬೇರೇನು ಭಕ್ತಿ ತರಿಸುವಂತೆ ಅನ್ನಿಸಲಿಲ್ಲ.

ಕೋಟಿಲಿಂಗೇಶ್ವರ:


ಬಂಗಾರು ತಿರುಪತಿ:


ಅಲ್ಲಿಂದ ಹೊರಟು ಬಂಗಾರು ತಿರುಪತಿ ತಲುಪಿದಾಗ ನಾಲ್ಕು ಗಂಟೆ ಮೀರಿತ್ತು. ಅಲ್ಲಿ ವಿಷ್ಣು ಮತ್ತು ಲಕ್ಷ್ಮೀ ದೇವಸ್ಥಾನ ನೋಡಿ ಮರಳಿ ಹೊರಟೆವು. ಅಂತರಗಂಗೆ, ಕೋಟಿಲಿಂಗೇಶ್ವರ, ಬಂಗಾರು ತಿರುಪತಿ ಬಗ್ಗೆ ಬರೆದು ನಮ್ಮನ್ನು ಹೋಗಲು ಹುರಿದುಂಬಿಸಿದ ಬ್ಲಾಗುಗಳ ಬಗ್ಗೆ ಮನಸ್ಸಿನೊಳಗೇ ಅಸಮಾಧಾನವೂ ಆಶ್ಚರ್ಯವೂ ಆಗುತ್ತಿತ್ತು. ಎಂಭತ್ತು ಕಿಲೋಮೀಟರು ಪ್ರಯಾಣ ಮಾಡಿ ಹೋಗಿ ನೋಡುವಂಥದ್ದೇನೂ ಅಲ್ಲಿ ಇರಲಿಲ್ಲ. ಅಂತರಗಂಗೆಯ ಬೆಟ್ಟ ಹತ್ತುತ್ತಿದ್ದರೆ ಬೇರೆ ಮಾತು. ಅಲ್ಲಿಂದ ಬರುತ್ತಾ ಸಿಕ್ಕಿದ ಬಹಳ ಒಳ್ಳೆಯ ವಿಷಯವೆಂದರೆ ದಾರಿ ಬದಿಯ ಮೂಲಂಗಿ, ಕ್ಯಾರೇಟ್ ಹೊಲಗಳು, ಮತ್ತು ಅವುಗಳ ಬಳಿ ರಾಶಿ ಹಾಕಿ ಮಾರಲ್ಲದುತ್ತಿದ್ದ ತಾಜಾ ತರಕಾರಿಗಳು. ಅನೇಕ ವಾಹನಗಳು ದಾರಿಬದಿಯಲ್ಲಿ ನಿಲ್ಲಿಸಿ ತರಕಾರಿ ತುಂಬಿಕೊಳ್ಳುತ್ತಿದ್ದವು. ನಾನು ಕೆಲವು ಸೊಪ್ಪು, ಮೆಣಸು ಮತ್ತು ಮುಳ್ಳುಸೌತೆ ಕೊಂಡೆ. ಒಂದು ಕಿಲೋ ಮುಳ್ಳುಸೌತೆಗೆ ಹತ್ತೇ ರುಪಾಯಿ! ಮನೆಯಲ್ಲಿ ತಂದು ತಿಂದಾಗ ಇನ್ನೊಂದೆರಡು ಕಿಲೋ ತರಬಹುದಿತ್ತು ಎನಿಸಿತು. ಅಷ್ಟು ರಸಭರಿತವಾಗಿತ್ತು. ಅದೇ ಜಾಗದಲ್ಲಿ ನಾನು ಕ್ಯಾರೇಟ್ ಹಾಗೂ ಮೂಲಂಗಿಯ ಹೊಲಗಳನ್ನು ಹತ್ತಿರದಿಂದ ನೋಡಿದೆ. ಹೊಲದ ತುಂಬ ಬೆಳೆದು ನಿಂತಿದ್ದ (ಅಲ್ಲ... ಹೂತಿದ್ದ) ಕ್ಯಾರೇಟ್ ಹಾಗೂ ಮೋಲಂಗಿಗಳು ಮನಸಿಗೆ ಬಹಳ ಉಲ್ಲಾಸ ನೀಡಿದವು.

ಕ್ಯಾರೇಟ್ ಹೊಲ:


ಮೂಲಂಗಿ ಹೊಲ:


ಆನಂತರ ಅಲ್ಲಿಂದ ಹೊರಟು ಮನೆಗೆ ಮರಳಿದೆವು. ಬರುತ್ತಾ ದಾರಿಯಲ್ಲೇ ಕಾಮತ್ ಹೋಟೆಲಿನಲ್ಲಿ ತಿಂಡಿತಿಂದೆವು. ನಮ್ಮ ಈ ಪ್ರಯಾಣ ನೆನಪಿಡುವಂತಹದ್ದೇನೂ ಆಗಿರಲಿಲ್ಲ. ಫೋಟೋ ತೆಗೆಯಲು ಹೆಚ್ಚಿನ ಅವಕಾಶಗಳೂ ಇರಲಿಲ್ಲ. ಅಲ್ಲದೆ ಇದರ ಬಗ್ಗೆ ಬರೆಯುವ ಉತ್ಸಾಹವೂ ಅಷ್ಟಾಗಿ ಇರಲಿಲ್ಲ. ಆದರೂ ಯಾರಾದರೂ ಬ್ಲಾಗು ಓದುಗರು ಇಷ್ಟು ದೂರದ ಪ್ರಯಾಣದ ಯೋಜನೆ ಹಾಕಿದ್ದರೆ ಅವರಿಗೆ ಮೊದಲೇ ಸ್ವಲ್ಪ ಎಚ್ಚರಿಕೆ ಕೊಡಬೇಕೆಂದು ಅನ್ನಿಸಿ ಇದನ್ನು ಬರೆದೆ. ನಮ್ಮ ಪ್ರಯಾಣವು ಆಸಕ್ತಿದಾಯಕವಾಗುವಂತೆ ಇನ್ನೇನಾದರೂ ನೋಡಬೇಕಿತ್ತೇ ಎಂದು ನಿಮಗೆ ತಿಳಿದಿದ್ದರೆ ತಿಳಿಸಿ.

ಸಂಜೆ...


(ಇದನ್ನು ಬರೆಯಲಾರಂಭಿಸಿದ್ದು ಫೆಬ್ರವರಿ 28ರಂದು. ಇಂದು ಮುಗಿಯಿತು!)
-