<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-2942048231899528037</id><updated>2012-02-16T12:49:51.240+05:30</updated><category term='ಶಿವಗಂಗೆ'/><category term='ಖುಷಿ'/><category term='tour'/><category term='ಪಾಠ'/><category term='communication skills'/><category term='ಪರೀಕ್ಷೆ'/><category term='ಕಷ್ಟ'/><category term='ತುಣುಕು'/><category term='ಸಮಾನತೆ'/><category term='ಮಂತ್ರಿ ಮಾಲ್'/><category term='smoothie'/><category term='ಇಂಗ್ಲೀಷ್'/><category term='ಅನುಭವ'/><category term='ಮುಂಜಾನೆ'/><category term='password hack'/><category term='new year resolution'/><category term='ಅಂತರಗಂಗೆ'/><category term='NGO'/><category term='ಕೋಲಾರ'/><category term='ಸಂಸ್ಕೃತಿ'/><category term='Ladies seat'/><category term='Thank you'/><category term='ಬಂಗಾರು ತಿರುಪತಿ'/><category term='English language'/><category term='book review'/><category term='ಭಾಷೆ'/><category term='sorry'/><category term='parking'/><category term='ಚಿಕ್ಕು'/><category term='ಪೇರಳೆ'/><category term='ಬಿಸಿಲು'/><category term='ಹರಟೆ'/><category term='ಕೋಟಿಲಿಂಗೇಶ್ವರ'/><category term='chitradurga'/><title type='text'>ಸಿಹಿ ಬದುಕು</title><subtitle type='html'>Chaithrika's Blog</subtitle><link rel='http://schemas.google.com/g/2005#feed' type='application/atom+xml' href='http://chaithrika.blogspot.com/feeds/posts/default'/><link rel='self' type='application/atom+xml' href='http://www.blogger.com/feeds/2942048231899528037/posts/default?max-results=100'/><link rel='alternate' type='text/html' href='http://chaithrika.blogspot.com/'/><link rel='hub' href='http://pubsubhubbub.appspot.com/'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><generator version='7.00' uri='http://www.blogger.com'>Blogger</generator><openSearch:totalResults>36</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-2942048231899528037.post-7861015187791334529</id><published>2011-07-08T19:50:00.002+05:30</published><updated>2011-07-08T19:54:29.181+05:30</updated><category scheme='http://www.blogger.com/atom/ns#' term='ಭಾಷೆ'/><category scheme='http://www.blogger.com/atom/ns#' term='English language'/><category scheme='http://www.blogger.com/atom/ns#' term='ಇಂಗ್ಲೀಷ್'/><title type='text'>ಇಂಗ್ಲೀಷ್ ಭಾಷೆ… ಒಂದು "ಭಾಷೆ".</title><content type='html'>ಎಷ್ಟೋ ದಿನಗಳ ನಂತರ ಬರೆಯಲು ಹೊರಟದ್ದೇನೆ.&lt;br /&gt;ಬೇರೆ ಬೇರೆ ಕಾರಣಗಳಿಂದ (ಮದುವೆ ಸಮಾರಂಭಗಳ ತಿರುಗಾಟ, ಅನಾರೋಗ್ಯ, ಕೆಲಸ ಮಾಡದ ಕಂಪ್ಯೂಟರ್ ಇತ್ಯಾದಿ) ಬ್ಲಾಗ್ ಬರಹಕ್ಕೆ ಸಮಯ ಹೊಂದಿಸಿಕೊಳ್ಳಲಾಗದೆ ಇಂದು ಹೇಗೋ ಹೊಂದಿಸಿಕೊಂಡಿದ್ದೇನೆ.&lt;br /&gt;ಬರೆಯಲು ಅನೇಕ ವಿಷಯಗಳು ತಲೆಯಲ್ಲಿ ಮೂಡಿ ಮರೆತೂ ಹೋಗಿವೆ. ಕಂಪ್ಯೂಟರಿನೊಳಗಿದ್ದ ಬರೆಯಲರ್ಹ ವಿಷಯಗಳ ಪಟ್ಟಿ ಕಾಣೆಯಾಗಿದೆ. ಸಧ್ಯದಲ್ಲಿ ನೆನಪಿರುವುದು ಇಂಗ್ಲೀಷ್ ಭಾಷೆಯ ಬಗ್ಗೆ ಮಾತನಾಡಬೇಕೆನಿಸಿದ ವಿಷಯಗಳು.&lt;br /&gt;&lt;br /&gt;ನಾನು ಏಳನೆ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವಳು. ಎಂಟನೇ ತರಗತಿಯಲ್ಲಿ ಆಂಗ್ಲ ಮಾಧ್ಯಮಕ್ಕೆ ಸೇರಿದರೂ, ನಮ್ಮ ಆ ಸಣ್ಣ ಊರಲ್ಲಿ ಹೀಗೆ ಕನ್ನಡದಿಂದ ಇಂಗ್ಲೀಷ್ ಗೆ ಬದಲಿಸುವವರು ಹಲವರಿದ್ದುದರಿಂದ ಅಧ್ಯಾಪಕರು ಇಂಗ್ಲೀಷ್, ಕನ್ನಡ ಎರಡೂ ಭಾಷೆಯಲ್ಲಿ ವಿವರಿಸುತ್ತಿದ್ದರು. ಆಗ ನನ್ನ ಇಂಗ್ಲೀಷ್ ಜ್ಞಾನ ಪರೀಕ್ಷೆಗೆ ಓದಲು ಹಾಗೂ ಬರೆಯಲು ಬೇಕಾಗುವಷ್ಟೇ ಇತ್ತು. ಮಾತನಾಡಲು ಬರುತ್ತಿರಲಿಲ್ಲ. &lt;br /&gt;&lt;br /&gt;ಪಿ.ಯು.ಸಿ.ಯಲ್ಲೂ ಕನ್ನಡದಲ್ಲೇ ಮಾತು. ಪಾಠ ಮಾತ್ರವೇ ಇಂಗ್ಲೀಷ್ ನಲ್ಲಿ ಇದ್ದುದು! ಇಂಥ ನಮೂನೆ ಬೆಳೆದವಳಿಗೆ ಎಂಜಿನೀರಿಂಗ್ ಸೇರಿದಾಗ ಪೇಚಾಟಕ್ಕಿಟ್ಟುಕೊಂಡಿತು. ಕಾಲೇಜು ದಕ್ಷಿಣ ಕನ್ನಡದ್ದೇ ಆಗಿದ್ದರೂ ಅನೇಕರು ಕನ್ನಡ ಬರದವರೂ, ಕನ್ನಡ ಬರದಂತೆ ನಟಿಸುವವರೂ ಅಲ್ಲಿದ್ದರು. ಅದಲ್ಲದೆ ಮಲಯಾಳ ಮಾತನಾಡುತ್ತಿದ್ದ ನನ್ನ ರೂಂ ಮೇಟ್ ಜೊತೆ ಇಂಗ್ಲೀಷ್ ಅಲ್ಲದೆ ಬೇರೇನೂ ಭಾಷೆ ಮಾತನಾಡುವುದು ಸಾಧ್ಯವಿರಲಿಲ್ಲ. ಅವಳೊಡನೆ ಹೇಗೋ ಕಷ್ಟಪಟ್ಟು ಮಾತನಾಡುತ್ತಾ ನಿಧಾನಕ್ಕೆ ಭಾಷೆಯ ಮೇಲೆ ಹಿಡಿತ ಸಿಗಲ;ಾರಂಭಿಸಿತು. ಆದರೆ ಇತರೆ ಓದುವಿಕೆಯು ಕನ್ನಡದಲ್ಲೇ ಇದ್ದಕಾರಣ ಶಬ್ಧಗಳು ನಾಲಿಗೆ ಮೇಲೆ ಬೇಕಾದಂತೆ ಕುಣಿಯುತ್ತಿರಲಿಲ್ಲ. ಆದರೂ ಮಾತನಾಡಲು ಏನೂ ತೊಂದರೆಯಾಗಲಿಲ್ಲ.&lt;br /&gt;&lt;br /&gt;ವರುಷಗಳ ನಂತರ ಮದುವೆಯಾಯಿತು. ನನ್ನ ಯಜಮಾನರು ಮರಾಠಿ ಮಾಧ್ಯಮದಲ್ಲಿ ಕಲಿತವರು! ಅವರಿಗೆ ಓದುವ ಹವ್ಯಾಸವೂ ಇಲ್ಲ. ಅವರ ಇಂಗ್ಲೀಷ್ ಕೂಡಾ ಒಮ್ಮೊಮ್ಮೆ ತಡವರಿಸುತ್ತಿತ್ತು. ಕೆಲವು ಕಡೆ ವ್ಯಾಕರಣ ತಪ್ಪುತ್ತಿತ್ತು. ನನಗೆ ಅದನ್ನು ಸರಿಪಡಿಸಬೇಕೆಂದು ಬಲವಾಗಿ ಅನಿಸಿತು. ಮನೆಗೆ ಇಂಗ್ಲೀಷ್ ಪೇಪರ್ ತರಿಸಿ ಓದಲು ಹೇಳಿದೆ. ಓದುವ ಹವ್ಯಾಸ ಇಲ್ಲದಿದ್ದರೂ ಅದು ಓದು, ಇದು ಓದು ಎಂದು ಕೊಡತೊಡಗಿದೆ. ಅದು ಅವರಿಗೆ ಅಷ್ಟೊಂದು ಇಷ್ಟವಾಗುತ್ತಿದ್ದಂದೆ ಕಾಣಲಿಲ್ಲ.&lt;br /&gt;&lt;br /&gt;ಮತ್ತೊಂದು ದಿನ ಆಫೀಸಿನಲ್ಲಿ ಹೊರ ರಾಜ್ಯದವರೊಡನೆ ಮಾತನಾಡುವಾಗ ನನ್ನ ದೃಷ್ಟಿಕೋನವೇ ಬದಲಾಗುವಂಥ ಸಂದರ್ಭ ಬಂತು. ಆಫೀಸಿನಲ್ಲಿ ಕನ್ನಡಿಗರಲ್ಲದವರೊಬ್ಬರು ಕನ್ನಡದ ಒಂದೆರಡು ಶಬ್ದಗಳನ್ನು ವಾಕ್ಯಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರು. ನನಗೆ ಇದನ್ನು ಕಂಡು ಬಹಳ ಖುಷಿಯಾಗಿ ಅವರಿಗೆ ವಾಕ್ಯ ಪೂರ್ಣ ಮಾಡಲು ಹೇಳಿಕೊಟ್ಟೆ. ತಪ್ಪಿದ್ದರೆ ತೊಂದರೆಯಿಲ್ಲ, ನಮ್ಮ ಭಾಷೆ ಕಲಿಯಲು ಯತ್ನಿಸಿದ್ದಾರೆ ಎಂದು ಸಂತೋಷಗೊಂಡು ಇನ್ನಷ್ಟು ಪ್ರೋತ್ಸಾಹಿಸಿದೆ. ಆಗ "ನಮ್ಮ ಭಾಷೆ ಅರಿಯದವರು ಅದನ್ನು ಕಲಿತು ತೊದಲಿದರೂ ನಮಗೆ ಇಷ್ಟವಾಗುತ್ತದೆ, ಹೆಮ್ಮೆಯೆನಿಸುತ್ತದೆ, ಆದರೆ ಇಂಗ್ಲೀಷ್ ಭಾಷೆಯಲ್ಲಿ ತಡವರಿಸುವವರನ್ನು ಕಂಡರೆ ಹಾಗೇಕೆ ಅನ್ನಿಸುವುದಿಲ್ಲ" ಎಂದು ಆಶ್ಚರ್ಯ ಪಟ್ಟೆ. &lt;br /&gt;&lt;br /&gt;ನಾನು ಅನೇಕರನ್ನು ನೋಡಿದ್ದೇನೆ. ಇಂಗ್ಲೀಷ್ ಮಾತನಾಡಲು ಬರುವವರು ಇಂಗ್ಲೀಷ್ ಬಾರದವರನ್ನು ಗೇಲಿ ಮಾಡುವುದನ್ನು ಕಂಡಿದ್ದೇನೆ. ಅಲ್ಲದೆ ನನ್ನ ಸಹಪಾಠಿಗಳಲ್ಲಿ ಹಲವರು ಕನ್ನಡ ಬರುತ್ತಿದ್ದರೂ "I don't know Kannada" ಎಂದು ಹೆಮ್ಮೆಯಿಂದ ಹೇಳುವುದನ್ನು ಕೇಳಿದ್ದೇನೆ. ಅಪರಿಚಿತರಲ್ಲಿ ಕನ್ನಡದಲ್ಲಿ ದಾರಿಕೇಳಿದಾಗ, ಅಂಗಡಿಗಳಲ್ಲಿ ಸಾಮಾನು ವಿಚಾರಿಸಿದಾಗ ಇಂಗ್ಲೀಷ್ ಮಾತನಾಡಲು ಬರದಿದ್ದರೂ ಕಷ್ಟ ಪಟ್ಟು ಏನೇನೋ ಉತ್ತರ ಕೊಡುವುದನ್ನು ನೋಡಿದ್ದೇನೆ. ನಾನೇ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿದಾಗ ಹಲವು ಮಕ್ಕಳು ಇಂಗ್ಲೀಷ್ ಮಾತನಾಡುವುದನ್ನು ನೋಡಿ ಕೀಳರಿಮೆಗೊಳಗಾಗಿದ್ದೇನೆ. ಈಗ ನೆನಪಿಸಿಕೊಂಡರೆ ಅಂದು ಹೆಚ್ಚಿನ ಮಕ್ಕಳು ಕನ್ನಡವನ್ನು ನೇರ ಇಂಗ್ಲೀಷ್ ಗೆ ತರ್ಜುಮೆ ಮಾಡಿ ಮಾತನಾಡಿಕೊಳ್ಳುತ್ತಿದ್ದುದು ಎಂದು ಗೊತ್ತಾಗಿ ನಗು ಬರುತ್ತದೆ. ಕೇವಲ ಇಂಗ್ಲೀಷ್ ಗೆ ಹೀಗೇಕೆ ಎಂದು ಬಹಳ ವಿಚಿತ್ರವೆನಿಸುತ್ತದೆ. &lt;br /&gt;&lt;br /&gt;ಬಹುಶಃ ನಾವು ಇಂಗ್ಲೀಷ್ ಅನ್ನು ಒಂದು ಭಾಷೆಯ ರೂಪದಲ್ಲಿ ನೋಡುತ್ತಲೇ ಇಲ್ಲ. ಅದರ ಜೊತೆ ನಮ್ಮ prestige, pride ಅನ್ನು ಅಂಟಿಸಿಕೊಳ್ಳುತ್ತೇವೆ. ಯಾವುದೇ ರಾಜ್ಯದವರಾಗಲೀ ನಾವು ಅವರ ಭಾಷೆ ಮಾತನಾಡಲು ಯತ್ನಿಸಿದರೆ ಸಂತೋಷ ಪಡುತ್ತಾರೆ. ಇದನು್ನ ಭಾಷಾಭಿಮಾನ ಎನ್ನೋಣವೇ? ಹಾಗಾದರೆ ಇಂಗ್ಲೀಷ್ ಬಗ್ಗೆ ಯಾರಿಗೂ ಅಭಿಮಾನವೇ ಇಲ್ಲ ಎಂದಹಾಗಾಯಿತಲ್ಲ! ಇಂಗ್ಲೀಷ್ ಅನ್ನು ಇತರ ಭಾಷೆಗಳಂತೆ ಒಂದು communication ನ ಮಾಧ್ಯಮವಾಗಿ ನೋಡಿದರೆ ಏನೂ ಸಮಸ್ಯೆಯೇ ಇರಲಿಕ್ಕಿಲ್ಲ ಅಲ್ಲವೇ?&lt;br /&gt;&lt;br /&gt;ನನ್ನ ಸಹೋದ್ಯೋಗಿಯ ಆ ಸಣ್ಣ ಪ್ರಯತ್ನ ಇಂಗ್ಲೀಷ್ ಭಾಷೆಯನ್ನು ನೋಡುವ ದೃಷ್ಟಿಯನ್ನೇ ಬದಲಿಸಿತು. ಈಗ ನಾನು ಯಜಮಾನರ ಇಂಗ್ಲೀಷ್ ಭಾಷಾಜ್ಞಾನದ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ.  ದಿನವೂ ಪೇಪರ್ ಓದುವ ಅಭ್ಯಾಸ ಅವರಿಗೆ ಹಿಡಿದಿರುವುದರಿಂದ ಶಬ್ದ ಭಂಡಾರವೂ ನಿಧಾನಕ್ಕೆ ಉತ್ತಮಗೊಳ್ಳುತ್ತದೆ. ನಾವು ಹೇಳಿದ್ದು ಎದುರಿನ ವ್ಯಕ್ತಿಗೆ ಸರಿಯಾಗಿ ಅರ್ಥವಾಗುತ್ತಿದ್ದರೆ ಅದರಲ್ಲಿ ಇನ್ನೇನು ತೊಂದರೆಯಿದೆ? ಈಗ ಇಂಗ್ಲೀಷ್ ನನಗೆ ಕೇವಲ ಒಂದು ಭಾಷೆ. ಹೊಸ ಶಬ್ದಗಳನ್ನು ಕಲಿಯುತ್ತೇನೆ, ವ್ಯಾಕರಣ ಸರಿಪಡಿಸಿಕೊಳ್ಳುತ್ತೇನೆ, ಇತರ ಭಾಷೆಗಳಂತೆ ಪ್ರೀತಿಸುತ್ತೇನೆ (ಕನ್ನಡದಷ್ಟು ಅಲ್ಲ) ಮತ್ತು ಯಾವತ್ತಾದರೂ ತಪ್ಪುಗಳಾದರೆ ಕೀಳರಿಮೆ ಹಚ್ಚಿಕೊಳ್ಳುವುದಿಲ್ಲ :-)&lt;br /&gt;-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-7861015187791334529?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/7861015187791334529/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=7861015187791334529' title='11 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/7861015187791334529'/><link rel='self' type='application/atom+xml' href='http://www.blogger.com/feeds/2942048231899528037/posts/default/7861015187791334529'/><link rel='alternate' type='text/html' href='http://chaithrika.blogspot.com/2011/07/blog-post.html' title='ಇಂಗ್ಲೀಷ್ ಭಾಷೆ… ಒಂದು &quot;ಭಾಷೆ&quot;.'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>11</thr:total></entry><entry><id>tag:blogger.com,1999:blog-2942048231899528037.post-4757835739176646424</id><published>2011-04-11T16:13:00.011+05:30</published><updated>2011-04-12T12:03:45.634+05:30</updated><category scheme='http://www.blogger.com/atom/ns#' term='ಬಂಗಾರು ತಿರುಪತಿ'/><category scheme='http://www.blogger.com/atom/ns#' term='ಕೋಲಾರ'/><category scheme='http://www.blogger.com/atom/ns#' term='ಅಂತರಗಂಗೆ'/><category scheme='http://www.blogger.com/atom/ns#' term='ಕೋಟಿಲಿಂಗೇಶ್ವರ'/><title type='text'>ನನಸಾಗದ ಚಾರಣದ ಕನಸು (ಅಂತರಗಂಗೆ)</title><content type='html'>ಬೆಟ್ಟ ಹತ್ತುವ ಹುಚ್ಚು ಒಮ್ಮೆ ಹಿಡಿದರೆ ಮತ್ತೆ ಬಿಡುವುದು ಕಷ್ಟ ಎಂದು ನನ್ನ ಅನಿಸಿಕೆ. ಚಿಕ್ಕಂದಿನಲ್ಲಿ ಅಜ್ಜನ ಮನೆಯ ಬಳಿ ಇದ್ದ ಗುಡ್ಡಕ್ಕೆ ಏರಿ ಎತ್ತರದಿಂದ ಪುಟಾಣಿ ಬಸ್ ಗಳನ್ನು, ಪುಟಾಣಿ ಮನೆಗಳನ್ನು ಮತ್ತು ನೂರು ಕಿಲೋಮೀಟರು ದೂರದ ಸಮುದ್ರವನ್ನು ನೋಡುತ್ತಿದ್ದಾಗಲೇ ಗುಡ್ಡ ಹತ್ತುವ ಹುಚ್ಚು ಹಿಡಿದಿತ್ತು.  ಅಜ್ಜನ ಮನೆಯಲ್ಲಿ ಚಿಕ್ಕಮ್ಮ-ದೊಡ್ಡಮ್ಮನ ಮಕ್ಕಳು ಸೇರಿದಾಗೆಲ್ಲ ಒಟ್ಟಾಗಿ ಹರಳುಕಲ್ಲುಗಳ ಗುಡ್ಡಕ್ಕೆ ಕಾಲು-ಕೈ ಉಪಯೋಗಿಸಿ ಜಾರುತ್ತಾ ಏರುತ್ತಿದ್ದ ನೆನಪು ಇನ್ನೂ ಹಸಿರು. ಬೆಳೆಯುತ್ತಾ ಹೋದಂತೆ ಅಜ್ಜನ ಮನೆಯಲ್ಲಿ cousins ಜೊತೆ ಸೇರುವುದು ಕಮ್ಮಿಯಾಯಿತು. ಬೆಟ್ಟ ಹತ್ತುವ ಅವಕಾಶಗಳೂ ಕಡಿಮೆಯಾದುವು. ಅಲ್ಲದೆ ಸಮಾನ ಆಸಕ್ತಿ ಹೊಂದಿದವರೂ ಸಿಗದಾದರು. &lt;br /&gt;&lt;br /&gt;ವರುಷಗಳ ನಂತರ ಚಿತ್ರದುರ್ಗದ ಕಲ್ಲುಗಳಲ್ಲಿ ಅಲೆದಾಗ ಬೆಟ್ಟ ಹತ್ತುವ ಹುಚ್ಚು ಪುನಃ ಹತ್ತಲಾರಂಭಿಸಿತು. ಹಾಸನದ ಬಳಿ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಪುಟ್ಟ ಬಂಡೆಯನ್ನು ಹತ್ತಿ ಮೇಲಿಂದ ಕೆಳ ನೋಡಿದಾಗ ಹುಚ್ಚು ಇನ್ನಷ್ಟು ಹೆಚ್ಚಿತು. ಶಿವಗಂಗೆಯ ಚಾರಣವಂತೂ ಮರೆಯಲಾಗದ ಅನುಭವ ಎನಿಸಿತು. ಅದೇ ಗುಂಗಿನಲ್ಲಿ browsing ಮಾಡುತ್ತಾ ಅಂತರಗಂಗೆಗೆ ಹೋಗಿ ಬೆಟ್ಟ ಹತ್ತುವ ಯೋಜನೆ ಹಾಕಿಯೇ ಬಿಟ್ಟೆ.&lt;br /&gt;&lt;br /&gt;ಕೋಲಾರದತ್ತ...&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-ZNnJ_eJCHtk/TaLyGGj888I/AAAAAAAADKU/_obhn6H_0BY/s1600/way.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-ZNnJ_eJCHtk/TaLyGGj888I/AAAAAAAADKU/_obhn6H_0BY/s320/way.jpg" border="0" alt=""id="BLOGGER_PHOTO_ID_5594299873802122178" /&gt;&lt;/a&gt;&lt;br /&gt;&lt;br /&gt;ಶನಿವಾರ 26 ಫೆಬ್ರವರಿಯಂದು ನಾವಿಬ್ಬರು ಕೋಲಾರಕ್ಕೆ ಹೊರಟೆವು. ಶುಕ್ರವಾರ ರಾತ್ರಿವರೆಗೆ ಎಲ್ಲಿಗೆ ಹೋಗುವುದು ಎಂಬ ನಿರ್ಧಾರವೇ ಆಗಿರಲಿಲ್ಲ. ಕೊನೆಗೆ ಅಂತರಗಂಗೆ ಎಂದು ನಿರ್ಧರಿಸಿ ಹೊರಟಿದ್ದೆವು. ಸುಮಾರು ಎಂಭತ್ತು ಕಿಲೋಮೀಟರು ಇದ್ದ ಅಂತರಗಂಗೆಗೆ ನಾವು ತಡವಾಗಿ ಹೊರಟಕಾರಣ ತಲುಪಿದಾಗ ಮಧ್ಯಾಹ್ನವಾಗಿತ್ತು. ದ್ವಾರದ ಬಳಿ ಒಂದೆರಡು ಗೂಡಂಗಡಿಗಳನ್ನು ಬಿಟ್ಟರೆ ಬೇರೆ ಯಾವುದೇ ಜನಸಂಚಾರ ಇದ್ದಂತೆ ಕಾಣಲಿಲ್ಲ. ದ್ವಾರದಿಂದ ಸುಮಾರು 200 ಮೀಟರ್ ನಡೆದಾಗ ಅಂತರಗಂಗೆಯ ಶಿವ ದೇವಸ್ಥಾನ ಕಂಡಿತು. ದಾರಿಯುದ್ದಕ್ಕೂ ಮಂಗಗಳ ಹಿಂಡು ನಮ್ಮ ಕೈಯಲ್ಲಿ ತಿನಿಸುಗಳಿವೆಯೇ ಎಂದು ನೋಡುವುದರಲ್ಲಿ ಮಗ್ನವಾಗಿತ್ತು. ಶಿವ ದೇವಸ್ಥಾನದ ಪಕ್ಕ ಬಂಡೆಯೊಳಗಿಂದ ಸಿಹಿನೀರಿನ ತೊರೆ ಚಿಮ್ಮಿ ಬರುತ್ತಿತ್ತು. ಅದರ ಕೆಳಗೆ ಕೆಲವರು ಸ್ನಾನ ಮಾಡುತ್ತಿದ್ದರು. ಹಲವು ಮಕ್ಕಳು ಅದರಿಂದ ಕ್ಯಾನುಗಳಲ್ಲಿ ನೀರುತುಂಬಿಕೊಳ್ಳುತ್ತಿದ್ದರು. ಆ ನೀರು ಹರಿದು ಬೀಳುತ್ತಿದ್ದ ಕೊಳವು ಕಸಕಡ್ಡಿ, ಹೂ, ಪಾಚಿಗಳಿಂದ ತುಂಬಿ ನೋಡಲು ಕೆಟ್ಟದಾಗಿ ಕಾಣುತ್ತಿತ್ತು. ಅಲ್ಲದೆ ಅದರ ಅಡಿಯಲ್ಲಿ ಜನರು ಸ್ನಾನ ಮಾಡುತ್ತಿದ್ದು, ನಾವು ನೀರು ಹಿಡಿಯಲು ಹೋದರೆ ಅವರ ತಲೆಗಿಂತ ಅರ್ಧ ಅಡಿ ಮೇಲೆಯಷ್ಟೇ ಕೈಯಿಡಬೇಕಿತ್ತು. ಹಾಗಾಗಿ ನನಗೇಕೋ ನೀರು ಹಿಡಿದುಕೊಳ್ಳುವುದರಲ್ಲಿ ಅಷ್ಟಾಗಿ ಆಸಕ್ತಿ ಉಂಟಾಗಲಿಲ್ಲ.&lt;br /&gt;&lt;br /&gt;ಅಂತರಗಂಗೆ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-1Pxix8VjM6o/TaLvrRj594I/AAAAAAAADJc/nHYbWarQWv8/s1600/antaragange.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-1Pxix8VjM6o/TaLvrRj594I/AAAAAAAADJc/nHYbWarQWv8/s320/antaragange.jpg" border="0" alt=""id="BLOGGER_PHOTO_ID_5594297213874993026" /&gt;&lt;/a&gt;&lt;br /&gt;&lt;br /&gt;ಐದು ವರ್ಷ ಹಿಂದೆ ನಮ್ಮ ಮನೆ ಮಾಲೀಕರು ಬೆಟ್ಟ ಹತ್ತಿದ್ದರೆಂದೂ, ಆಗ ಅನೇಕರು ಹತ್ತುತ್ತಿದ್ದುದಲ್ಲದೆ, ಹಲವು ಮಕ್ಕಳು ಬೆಟ್ಟದ ಮೇಲೆ ಹತ್ತಿ ಅಲ್ಲಿಂದ can ಗಳಲ್ಲಿ ನೀರು ತುಂಬಿ ಕೆಳ ತಂದು, ತೀರ್ಥವೆಂದು ಮಾರುತ್ತಿದ್ದರೆಂದೂ, ಆಮೇಲೆ ತಿಳಿಯಿತು.&lt;br /&gt;&lt;br /&gt;ನಾವು ಬೆಟ್ಟ ಹತ್ತುವ ಉತ್ಸಾಹದಿಂದ ಎರಡು ಲೀಟರ್ ನೀರು, ಟೊಪ್ಪಿ, ಕ್ಯಾಮರಾ ಹೊತ್ತು ತಂದಿದ್ದೆವು. ಬೆಟ್ಟ ಹತ್ತುವ ಕಡೆ ಜನಸಂಚಾರವೇ ಕಾಣುತ್ತಿರಲಿಲ್ಲ. ಅಲ್ಲದೆ ಇಂಟರ್ನೆಟ್ ನಲ್ಲಿ ಒಬ್ಬರು ಅಲ್ಲಿ ಕಳ್ಳಕಾಕರು ಇರಬಹುದೆಂಬ ಎಚ್ಚರಿಕೆ ಕೊಟ್ಟಿದ್ದರಿಂದ ನನಗೆ ಸ್ವಲ್ಪ ಇರುಸು-ಮುರುಸಾಗತೊಡಗಿತು. ಅಲ್ಲಿ ಚಿಕ್ಕ ಬಾಲಕನೊಬ್ಬ ಅತಿ ಉತ್ಸಾಹದಿಂದ ಮೇಲೆ ಕರೆದೊಯ್ಯುವೆನೆಂದು ಬಂದ. ಇನ್ನೂ ಏನು ಮಾಡುವುದೆಂದು ಯೋಚಿಸುತ್ತಿರಬೇಕಾದರೆ "ಚಿರತೆಗಳಿವೆ. ಯಾತ್ರಿಕರು ಬೆಟ್ಟ ಹತ್ತುವುದನ್ನು ನಿಷೇಧಿಸಲಾಗಿದೆ - ಪೋಲೀಸ್ ಇಲಾಖೆ" ಎಂಬ ಬೋರ್ಡು ದೃಷ್ಟಿಗಪ್ಪಳಿಸಿತು. ಇನ್ನು ಇಬ್ಬರಾಗಿ ಬೆಟ್ಟ ಹತ್ತುವ ಮಾತೇ ಇರಲಿಲ್ಲ. ಅದಲ್ಲದೆ ಬೇರೆ ಯಾರೂ ಹತ್ತುತ್ತಿರುವುದು ನಮಗೆ ಕಾಣಿಸಲಿಲ್ಲ. ನನಗೆ ನಿರಾಸೆಯಾಯಿತು. ಕೃಷ್ಣನಿಗೆ mood ಹೋಗಲಾರಂಭಿಸಿ, ಸಿಟ್ಟು ಬರತೊಡಗಿತು. "ಇನ್ನೇನು ಮಾಡುವುದು ಇಲ್ಲಿ ಕೂತು? ವಾಪಸ್ ಹೋಗೋಣ" ಎಂದು ತಿರುಗಿ ನಡೆದೇ ಬಿಟ್ಟರು. &lt;br /&gt;&lt;br /&gt;ನಾನೂ ಇನ್ನೇನೆಂದು ಯೋಚಿಸುತ್ತಾ ಹಿಂಬಾಲಿಸಿದೆ. ಅಂತರಗಂಗೆಯ ದ್ವಾರದ ಸ್ವಲ್ಪ ದೂರದಲ್ಲಿ ಒಂದು ಬೋರ್ಡು ಹಾಕಿದ್ದು, ಅದರಲ್ಲಿ ನೋಡಲರ್ಹ ತಾಣಗಳ ಹಾಗೂ ಅಂತರಗಂಗೆಯಿಂದ ಅಲ್ಲಿಗೆ ಇರುವ ದೂರದ ಪಟ್ಟಿ ಇತ್ತು. ಅದರಲ್ಲಿ ಸುಮಾರು ನಲ್ವತ್ತು ಕಿಲೋಮೀಟರು ದೂರದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನವೂ, ಅಲ್ಲಿಂದ ಮತ್ತೆ ಹತ್ತು ಕಿಲೋಮೀಟರು ದೂರದಲ್ಲಿ ಬಂಗಾರು ತಿರುಪತಿ ಇರುವುದೂ ತಿಳಿಯಿತು. ಎಪ್ಪತ್ತು-ಎಂಭತ್ತು ಕಿಲೋಮೀಟರು ಮೇಲೆ ಪ್ರಯಾಣಿಸಿ ಬಂದು ಸುಮ್ಮನೆ ತಿರುಗಿ ಹೋಗಲು ಮನಸಿರದ ಕಾರಣ ಈ ದೇವಸ್ಥಾನಗಳನ್ನು ನೋಡುವುದೆಂದು ನಿರ್ಧರಿಸಿದೆವು.&lt;br /&gt; &lt;br /&gt;ಯೋಜನೆಗಳು ತಲೆಕೆಳಗಾದ ಕಾರಣ ಊಟ ಮಾಡಲು ವಿಷೇಶ ಉತ್ಸಾಹವೇನೂ ಇರಲಿಲ್ಲ. ಸುಮಾರು ಮೂರು ಗಂಟೆಯ ಹೊತ್ತಿಗೆ ಕೋಟಿಲಿಂಗೇಶ್ವರ ದೇವಸ್ಥಾನ ತಲುಪಿದೆವು. ಒಳ ಹೋಗಲು ತಲಾ ಇಪ್ಪತ್ತು ರೂಪಾಯಿಯ ಟಿಕೇಟು. ಕ್ಯಾಮೆರಾಗೆ ನೂರು. ಆ ಜಾಗದಲ್ಲಿ ಹೆಚ್ಚಿನ ನಿರೀಕ್ಷೆಗಳೇನೂ ಇದ್ದಿರದ ಕಾರಣ, ಕ್ಯಾಮೆರಾಗೆ ನೂರು ರೂಪಾಯಿ ಕೊಡಲಿಚ್ಛಿಸದೆ ಕಾರೊಳಗೆ ಇಟ್ಟು ಬಂದೆ. ಅನೇಕ ಲಿಂಗಗಳನ್ನು ಸಾಲು ಸಾಲಾಗಿ ಇಟ್ಟಿರುವ ದೇವಸ್ಥಾನದ ಹೊರಭಾಗ, ನೋಡಲು ಚೆನ್ನಾಗಿದ್ದರೂ ವಿಶೇಷವಾಗಿ ಏನೂ ಇರಲಿಲ್ಲ. ನೂರು ಅಡಿ ಮೀರಿದ ಎತ್ತರದ ಲಿಂಗ ಯಾವುದೇ ಕೆತ್ತನೆ, ತಿರುವುಗಳಿಲ್ಲದೆ ತೀರಾ ಸಾಮಾನ್ಯವೆನಿಸಿತು. ನಂದಿ ವಿಗ್ರಹವೂ ಬಹಳ ಸರಳವಾಗಿದ್ದು ನಂದಿಯ ತಲೆ ಅದರ ದೇಹಕ್ಕೆ ತುಂಬಾ ಚಿಕ್ಕದಾಗಿ (disproportionate) ಆಗಿತ್ತು. ಅಲ್ಲಿ ಕ್ಯಾಮೆರಾಗೆ ನೂರು ರೂಪಾಯಿ ತೆತ್ತು ಫೋಟೋ ತೆಗೆಯುವಂಥದ್ದೇನೂ ಕಾಣಿಸಲಿಲ್ಲ. ನನಗೆ ಮೊದಲಿಂದಲೂ ಬಣ್ಣ ಬಳಿದ, ಮಾರ್ಬಲ್, ಅಥವಾ ಟೈಲ್ಸ್ ಅಂಟಿಸಿದ ದೇವಸ್ಥಾನಗಳು ಅಷ್ಟೊಂದು ಇಷ್ಟವಾಗದ ಕಾರಣ, ಕೋಟಿಲಿಂಗೇಶ್ವರ ಮೂಲ ದೇವಸ್ಥಾನ ಬಿಟ್ಟರೆ ಬೇರೇನು ಭಕ್ತಿ ತರಿಸುವಂತೆ ಅನ್ನಿಸಲಿಲ್ಲ. &lt;br /&gt;&lt;br /&gt;ಕೋಟಿಲಿಂಗೇಶ್ವರ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-VsYLtgDaZrU/TaLv-Rxb_kI/AAAAAAAADJk/9skKj84Z-7c/s1600/kotilinga.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 256px;" src="http://1.bp.blogspot.com/-VsYLtgDaZrU/TaLv-Rxb_kI/AAAAAAAADJk/9skKj84Z-7c/s320/kotilinga.jpg" border="0" alt=""id="BLOGGER_PHOTO_ID_5594297540349263426" /&gt;&lt;/a&gt;&lt;br /&gt;&lt;br /&gt;ಬಂಗಾರು ತಿರುಪತಿ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-Yy03NTRelC0/TaLwgfMF_eI/AAAAAAAADJs/tKoUEbbCtak/s1600/Bangaru%2Btirupati.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/-Yy03NTRelC0/TaLwgfMF_eI/AAAAAAAADJs/tKoUEbbCtak/s320/Bangaru%2Btirupati.jpg" border="0" alt=""id="BLOGGER_PHOTO_ID_5594298128066280930" /&gt;&lt;/a&gt;&lt;br /&gt;&lt;br /&gt;ಅಲ್ಲಿಂದ ಹೊರಟು ಬಂಗಾರು ತಿರುಪತಿ ತಲುಪಿದಾಗ ನಾಲ್ಕು ಗಂಟೆ ಮೀರಿತ್ತು. ಅಲ್ಲಿ ವಿಷ್ಣು ಮತ್ತು ಲಕ್ಷ್ಮೀ ದೇವಸ್ಥಾನ ನೋಡಿ ಮರಳಿ ಹೊರಟೆವು. ಅಂತರಗಂಗೆ, ಕೋಟಿಲಿಂಗೇಶ್ವರ, ಬಂಗಾರು ತಿರುಪತಿ ಬಗ್ಗೆ ಬರೆದು ನಮ್ಮನ್ನು ಹೋಗಲು ಹುರಿದುಂಬಿಸಿದ ಬ್ಲಾಗುಗಳ ಬಗ್ಗೆ ಮನಸ್ಸಿನೊಳಗೇ ಅಸಮಾಧಾನವೂ ಆಶ್ಚರ್ಯವೂ ಆಗುತ್ತಿತ್ತು. ಎಂಭತ್ತು ಕಿಲೋಮೀಟರು ಪ್ರಯಾಣ ಮಾಡಿ ಹೋಗಿ ನೋಡುವಂಥದ್ದೇನೂ ಅಲ್ಲಿ ಇರಲಿಲ್ಲ. ಅಂತರಗಂಗೆಯ ಬೆಟ್ಟ ಹತ್ತುತ್ತಿದ್ದರೆ ಬೇರೆ ಮಾತು. ಅಲ್ಲಿಂದ ಬರುತ್ತಾ ಸಿಕ್ಕಿದ ಬಹಳ ಒಳ್ಳೆಯ ವಿಷಯವೆಂದರೆ ದಾರಿ ಬದಿಯ ಮೂಲಂಗಿ, ಕ್ಯಾರೇಟ್ ಹೊಲಗಳು, ಮತ್ತು ಅವುಗಳ ಬಳಿ ರಾಶಿ ಹಾಕಿ ಮಾರಲ್ಲದುತ್ತಿದ್ದ ತಾಜಾ ತರಕಾರಿಗಳು. ಅನೇಕ ವಾಹನಗಳು ದಾರಿಬದಿಯಲ್ಲಿ ನಿಲ್ಲಿಸಿ ತರಕಾರಿ ತುಂಬಿಕೊಳ್ಳುತ್ತಿದ್ದವು. ನಾನು ಕೆಲವು ಸೊಪ್ಪು, ಮೆಣಸು ಮತ್ತು ಮುಳ್ಳುಸೌತೆ ಕೊಂಡೆ. ಒಂದು ಕಿಲೋ ಮುಳ್ಳುಸೌತೆಗೆ ಹತ್ತೇ ರುಪಾಯಿ! ಮನೆಯಲ್ಲಿ ತಂದು ತಿಂದಾಗ ಇನ್ನೊಂದೆರಡು ಕಿಲೋ ತರಬಹುದಿತ್ತು ಎನಿಸಿತು. ಅಷ್ಟು ರಸಭರಿತವಾಗಿತ್ತು. ಅದೇ ಜಾಗದಲ್ಲಿ ನಾನು ಕ್ಯಾರೇಟ್ ಹಾಗೂ ಮೂಲಂಗಿಯ ಹೊಲಗಳನ್ನು ಹತ್ತಿರದಿಂದ ನೋಡಿದೆ. ಹೊಲದ ತುಂಬ ಬೆಳೆದು ನಿಂತಿದ್ದ (ಅಲ್ಲ... ಹೂತಿದ್ದ) ಕ್ಯಾರೇಟ್ ಹಾಗೂ ಮೋಲಂಗಿಗಳು ಮನಸಿಗೆ ಬಹಳ ಉಲ್ಲಾಸ ನೀಡಿದವು.&lt;br /&gt;&lt;br /&gt;ಕ್ಯಾರೇಟ್ ಹೊಲ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-d3YBmkEM5wA/TaLxB3MhYrI/AAAAAAAADJ8/pakSje4akQs/s1600/Carrot%2Bfield.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/-d3YBmkEM5wA/TaLxB3MhYrI/AAAAAAAADJ8/pakSje4akQs/s320/Carrot%2Bfield.jpg" border="0" alt=""id="BLOGGER_PHOTO_ID_5594298701446210226" /&gt;&lt;/a&gt;&lt;br /&gt;&lt;br /&gt;ಮೂಲಂಗಿ ಹೊಲ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-6FuldYOsPCU/TaLxT_5aQLI/AAAAAAAADKE/UIKG40EuZ-g/s1600/radish%2Bfield.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/-6FuldYOsPCU/TaLxT_5aQLI/AAAAAAAADKE/UIKG40EuZ-g/s320/radish%2Bfield.jpg" border="0" alt=""id="BLOGGER_PHOTO_ID_5594299013019615410" /&gt;&lt;/a&gt;&lt;br /&gt;&lt;br /&gt;ಆನಂತರ ಅಲ್ಲಿಂದ ಹೊರಟು ಮನೆಗೆ ಮರಳಿದೆವು. ಬರುತ್ತಾ ದಾರಿಯಲ್ಲೇ ಕಾಮತ್ ಹೋಟೆಲಿನಲ್ಲಿ ತಿಂಡಿತಿಂದೆವು. ನಮ್ಮ ಈ ಪ್ರಯಾಣ ನೆನಪಿಡುವಂತಹದ್ದೇನೂ ಆಗಿರಲಿಲ್ಲ. ಫೋಟೋ ತೆಗೆಯಲು ಹೆಚ್ಚಿನ ಅವಕಾಶಗಳೂ ಇರಲಿಲ್ಲ. ಅಲ್ಲದೆ ಇದರ ಬಗ್ಗೆ ಬರೆಯುವ ಉತ್ಸಾಹವೂ ಅಷ್ಟಾಗಿ ಇರಲಿಲ್ಲ. ಆದರೂ ಯಾರಾದರೂ ಬ್ಲಾಗು ಓದುಗರು ಇಷ್ಟು ದೂರದ ಪ್ರಯಾಣದ ಯೋಜನೆ ಹಾಕಿದ್ದರೆ ಅವರಿಗೆ ಮೊದಲೇ ಸ್ವಲ್ಪ ಎಚ್ಚರಿಕೆ ಕೊಡಬೇಕೆಂದು ಅನ್ನಿಸಿ ಇದನ್ನು ಬರೆದೆ. ನಮ್ಮ ಪ್ರಯಾಣವು ಆಸಕ್ತಿದಾಯಕವಾಗುವಂತೆ ಇನ್ನೇನಾದರೂ ನೋಡಬೇಕಿತ್ತೇ ಎಂದು ನಿಮಗೆ ತಿಳಿದಿದ್ದರೆ ತಿಳಿಸಿ.&lt;br /&gt;&lt;br /&gt;ಸಂಜೆ...&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-97Vx1RWKd2o/TaLx6W5QxBI/AAAAAAAADKM/MromJ2hovZI/s1600/way_2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/-97Vx1RWKd2o/TaLx6W5QxBI/AAAAAAAADKM/MromJ2hovZI/s320/way_2.jpg" border="0" alt=""id="BLOGGER_PHOTO_ID_5594299672028038162" /&gt;&lt;/a&gt;&lt;br /&gt;&lt;br /&gt;(ಇದನ್ನು ಬರೆಯಲಾರಂಭಿಸಿದ್ದು ಫೆಬ್ರವರಿ 28ರಂದು. ಇಂದು ಮುಗಿಯಿತು!)&lt;br /&gt;-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-4757835739176646424?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/4757835739176646424/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=4757835739176646424' title='8 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/4757835739176646424'/><link rel='self' type='application/atom+xml' href='http://www.blogger.com/feeds/2942048231899528037/posts/default/4757835739176646424'/><link rel='alternate' type='text/html' href='http://chaithrika.blogspot.com/2011/04/blog-post.html' title='ನನಸಾಗದ ಚಾರಣದ ಕನಸು (ಅಂತರಗಂಗೆ)'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-ZNnJ_eJCHtk/TaLyGGj888I/AAAAAAAADKU/_obhn6H_0BY/s72-c/way.jpg' height='72' width='72'/><thr:total>8</thr:total></entry><entry><id>tag:blogger.com,1999:blog-2942048231899528037.post-1803953305453819831</id><published>2011-02-07T15:02:00.005+05:30</published><updated>2011-02-09T14:18:46.989+05:30</updated><category scheme='http://www.blogger.com/atom/ns#' term='ಸಂಸ್ಕೃತಿ'/><category scheme='http://www.blogger.com/atom/ns#' term='sorry'/><category scheme='http://www.blogger.com/atom/ns#' term='Thank you'/><title type='text'>"Sorry" ಮತ್ತು "Thank you"? ನಾನು ಹೇಳಲ್ಲ ಬಿಡಿ.</title><content type='html'>ಶುಕ್ರವಾರವೆಂದರೆ ಮೆಜೆಸ್ಟಿಕ್ ಹೋಗುವ ಬಸ್ ಗಳೆಲ್ಲ ಊರಿಗೆ ಹೊರಟ ಜನರು ಹಾಗೂ ಅವರ ಬ್ಯಾಗುಗಳಿಂದ ತುಂಬಿರುತ್ತವೆ. ಸೀಟು ಬಿಡಿ, ನಿಲ್ಲಲು ಜಾಗ ಸಿಕ್ಕಿದರೆ ಸಾಕು ಎಂಬ ಪರಿಸ್ಥಿತಿ ಇರುತ್ತದೆ. ಕಳೆದ ಶುಕ್ರವಾರ ತಡವಾಗಿ ಆಫೀಸ್ ಬಿಟ್ಟ ನಾನು ಇಂಥದ್ದೇ ಒಂದು ಕಿಕ್ಕಿರಿದ ವಜ್ರದಲ್ಲಿ (ವೋಲ್ವೋ ಬಸ್) ಆಫೀಸ್ ನ ಭಾರದ ಬ್ಯಾಗ್ ಹೊತ್ತು ನಿಂತು ಸಾಗಿದ್ದೆ. ಹಸಿವೆಯಿಂದ ಹೊಟ್ಟೆ ಖಾಲಿಯಾಗಿ ತೊಳಸಿದಂತಾಗುತ್ತಿತ್ತು. ಅಂತೂ ಅರ್ಧ ಗಂಟೆಯ ಒದ್ದಾಟದ ನಂತರ ಇಳಿಯುವ ಜಾಗ ಬಂತು. ಅಲ್ಲಿಂದ ಬೇರೆ ಬಸ್. ಹತ್ತು ನಿಮಿಷ ಕಾದಾಗ ಕಿಕ್ಕಿರಿದ ಬಸ್ ಬಂತು. ಮೆಜೆಸ್ಟಿಕ್ ನಿಂದ ಹೊರಬರುವ ಬಸ್ಸೂ ಹೀಗೆ ಜನರಿಂದ ತುಂಬಿರುವುದೇಕೆ ಎಂದು ಒಂದೆಡೆ ಆಶ್ಚರ್ಯವಾದರೆ, ಇನ್ನೊಂದೆಡೆ ಪುನಃ ನಿಂತೇ ಪ್ರಯಾಣಿಸಬೇಕಾದ ಕಷ್ಟವನ್ನು ಯೋಚಿಸಿ ಬೇಸರದಿಂದ ಬಸ್ ಹತ್ತಿದೆ. &lt;br /&gt;&lt;br /&gt;ಹತ್ತು ನಿಮಿಷ ಕಳೆದಾಗ ಸೀಟು ಸಿಕ್ಕಿತು. ಪಕ್ಕದಲ್ಲಿ ಮುದುಕರೊಬ್ಬರು ಕುಳಿತಿದ್ದರು. ನಾನು ಆದಿನ ಕಷ್ಟಪಡಬೇಕೆಂಬುದು ಹಣೆಬರಹವಾಗಿತ್ತೋ ಎಂಬಂತೆ ಸ್ವಲ್ಪ ಹೊತ್ತಿನಲ್ಲೇ ಪುಟ್ಟ ಮಗುವೊಂದನ್ನು ಎತ್ತಿಕೊಂಡು ಸಭ್ಯರಂತೆ ಕಾಣುತ್ತಿದ್ದ ಹೆಂಗಸರಿಬ್ಬರು ಹತ್ತಿದರು. ಅಷ್ಟಲ್ಲದೆ "ಸೀಟು ಕೊಡ್ರೀ, ಸೀಟು ಕೊಡ್ರೀ" ಎಂದು ಆಚೆ ಈಚೆ ಬೊಬ್ಬಿಡತೊಡಗಿದರು. ಮುದುಕರನ್ನು ಏಕೆ ಏಳಿಸಬೇಕು ಎಂದು ನಾನೇ ಸೀಟು ಕೊಟ್ಟೆ. "Thanks" ಹೇಳದಿದ್ದರೆ ಪರವಾಗಿಲ್ಲ, ಆದರೆ ಆ ಹೆಂಗಸು ನನ್ನನ್ನು, ತನ್ನ ಹಕ್ಕಿನ ಸೀಟು ಕಸಿದಿರುವವಳಂತೆ ದುರುಗುಟ್ಟಿ ನೋಡಿ ಕುಳಿತಳು. ಬಸ್ ಆಮೆಯಂತೆ ಸಾಗುತ್ತಿತ್ತು. ನನಗೆ ಹಸಿವು ಜೋರಾಗಿ ತಲೆನೋಯುತ್ತಿತ್ತು. ಕಾಲು ಗಂಟೆ ಕಳೆದಿರಬೇಕು. ನನ್ನ ಪಕ್ಕದಲ್ಲಿ ಕುಳಿತಿದ್ದ ಮುದುಕರು ಎದ್ದು ಹೋದರು. ನಾನು ಆ ಸೀಟಿನಲ್ಲಿ ಕೂರಬೇಕೆನ್ನುವಷ್ಟರಲ್ಲಿ ಆ ಹೆಂಗಸು ತನ್ನೊಂದಿಗಿದ್ದ ಇನ್ನೊಬ್ಬ ಹೆಂಗಸನ್ನು ಕರೆದು ಅಲ್ಲಿ ಕೂರಿಸಿದರು! ನನಗೆ ದಿಗಿಲಾಯಿತು. ಇವರಿಗೆ ಯಾಕೆ ಸೀಟು ಕೊಡಬೇಕಿತ್ತೋ ಎಂದು ಬೇಸರವಾಯಿತು. &lt;br /&gt;&lt;br /&gt;ಡಿಸೆಂಬರಿನಲ್ಲಿ ನಾನು ನೆಂಟರ ಮನೆಗೆ ಉಪನಯನವೊಂದಕ್ಕೆ ಹೋಗಿದ್ದೆ. ಅಲ್ಲಿ ನನ್ನ cousin ನ ನಾಲ್ಕು ವರ್ಷದ ಮಗಳು ಬಂದಿದ್ದಳು. ದಕ್ಷಿಣ ಅಮೇರಿಕಾದಲ್ಲಿ ಇರುವ ಅವಳಿಗೆ ಹಸು ಎಂದರೆ ಪಂಚಪ್ರಾಣ. ಇಡೀ ದಿನ ಹಟ್ಟಿಯಲ್ಲಿ ಹಸುಗಳನ್ನು ನೋಡುತ್ತಾ, ಅವಕ್ಕೆ ಹುಲ್ಲು ಹಾಕುತ್ತಾ ನಿಂತಿರುತ್ತಿದ್ದಳು. ನಾನು ಅವಳತ್ತ ಹೋದಾಗೆಲ್ಲ ಸ್ವಲ್ಪ ಹುಲ್ಲು ತಂದು ಕೊಡಲು ಹೇಳುತ್ತಿದ್ದಳು. ನಾನು ಪ್ರತಿ ಬಾರಿ ಹುಲ್ಲು ತೆಗೆದು ಕೊಟ್ಟಾಗಲೂ "Thank you" ಎನ್ನುತ್ತಿದ್ದಳು. ಸಂಜೆ ಆಟವಾಡುತ್ತಾ ನನ್ನ ಕೈಗೆ ಏನೋ ಕೊಟ್ಟಳು. ನಾನು ಅದನ್ನು ನೋಡುತ್ತಿರಬೇಕಾದರೆ "Say thank you" ಎಂದಳು. ಅವಳು ಕಲಿಯುತ್ತಿರುವ ಶಾಲೆಯಲ್ಲಿ ಎಷ್ಟು ಚಿಕ್ಕಂದಿನಲ್ಲೇ "Thanks" ಮತ್ತು "Sorry" ಗಳನ್ನು ಕಲಿಸುತ್ತಾರೆ ಎಂದು ತಿಳಿದು ಆಶ್ಚರ್ಯವೂ, ಸಂತೋಷವೂ ಆಯಿತು. &lt;br /&gt;&lt;br /&gt;ಒಮ್ಮೆ ಬಸ್ ನಲ್ಲಿ conductor ಭರ್ತಿ ಮೂರು ಬಾರಿ ಕಾಲು ತುಳಿದು "ರಶ್ ಇದೆ ಅಡ್ಜಸ್ಟ ಮಾಡಿಕೊಳ್ಳಿ" ಎಂದು ನನಗೇ ಬೈದುದಿದೆ. ಬೆಂಗಳೂರಿನ ಪ್ರತಿಷ್ಠಿತ ಎನಿಸಿರುವ ಬಿಷಪ್ ಕಾಟನ್ ಶಾಲೆಯ ಮಕ್ಕಳೂ ಬಸ್ ನಲ್ಲಿ ಕಾಲು ತುಳಿದಾಗ "Sorry" ಎನ್ನುವ ಸೌಜನ್ಯ ತೋರಿಸದಿರುವುದನ್ನು ಕಂಡು ನಾನು ಬೆರಗಾಗಿದ್ದೇನೆ. ನನ್ನ ಸಹೋದ್ಯೋಗಿಯೊಬ್ಬಳು "ನಾವು ತಪ್ಪು ಮಾಡಿದ್ದರೂ ಬೇರೆಯವರಿಗೆ ತಪ್ಪಿತಸ್ಥರು ಯಾರೆಂದು ಗೊತ್ತಾಗದಿದ್ದರೆ "Sorry" ಹೇಳಿ ಸಣ್ಣವರೇಕೆ ಆಗಬೇಕು?" ಎಂದು ವಾಗ್ವಾದಕ್ಕಿಳಿದದ್ದು ನೋಡಿದ್ದೇನೆ. ಹಲವು ದೇಶಗಳಲ್ಲಿ ವಾಹನ over take ಮಾಡುವಾಗ ಬದಿಗೆ ಸರಿದ ಚಾಲಕನಿಗೆ "Thank you" ಹೇಳುವ ಕ್ರಮವಿದೆಯಂತೆ. ನಮ್ಮ ಸಂಸ್ಕೃತಿಯ ಶ್ರೇಷ್ಠತೆಯನ್ನು ಕೊಂಡಾಡುತ್ತಾ ಇತರ ಸಂಸ್ಕೃತಿಗಳನ್ನು ತುಚ್ಛವೆಂದು ಭಾವಿಸುವವರಿಗೆ ಕ್ಷಮೆ ಹಾಗೂ ಧನ್ಯವಾದಕ್ಕೆ ಹಿಂಜರಿಯುವ ಮನಸ್ಥಿತಿಯ ಬಗ್ಗೆ ಹೇಗೆ ಅನ್ನಿಸುತ್ತದೆ ಎಂದು ಕೇಳಬೇಕೆನಿಸುತ್ತದೆ. ನಾವೆಷ್ಟೇ ಸಂಸ್ಕಾರವಂತರೆಂದರೂ ಕಲಿಯಲೇ ಬೇಕಾದ ಚಿಕ್ಕ ಪುಟ್ಟ ವಿಚಾರಗಳು ಅನೇಕವಿವೆ. ಬೇರೆ ಸಂಸ್ಕೃತಿಗಳನ್ನು ನೋಡುವಾಗ ಬರೇ "ಮಕ್ಕಳು ಅಪ್ಪ ಅಮ್ಮನನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾರೆ. ಮದುವೆಯಾದ ಕೆಲ ವರ್ಷಗಳಲ್ಲಿ ಬೇರೆೆಯಾಗುತ್ತಾರೆ" ಎಂದಷ್ಟೇ ನೋಡದೆ ಒಳ್ಳೆಯ ಅಂಶಗಳನ್ನೂ ನೋಡಬೇಕಿದೆ. ಹುಡುಕಿದರೆ ನಮ್ಮ ಸಂಸ್ಕೃತಿಯಲ್ಲೂ ಹುಳುಕು ಸಿಗದೆ ಇದ್ದೀತೇ?&lt;br /&gt;-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-1803953305453819831?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/1803953305453819831/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=1803953305453819831' title='7 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/1803953305453819831'/><link rel='self' type='application/atom+xml' href='http://www.blogger.com/feeds/2942048231899528037/posts/default/1803953305453819831'/><link rel='alternate' type='text/html' href='http://chaithrika.blogspot.com/2011/02/sorry-thank-you.html' title='&quot;Sorry&quot; ಮತ್ತು &quot;Thank you&quot;? ನಾನು ಹೇಳಲ್ಲ ಬಿಡಿ.'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>7</thr:total></entry><entry><id>tag:blogger.com,1999:blog-2942048231899528037.post-6243024341375784983</id><published>2011-01-27T12:09:00.003+05:30</published><updated>2011-01-27T12:17:58.398+05:30</updated><title type='text'>ಸರ್ವವೂ ಎಣ್ಣೆಮಯ</title><content type='html'>ಭಾನುವಾರವೆಂದರೆ ಅನೇಕರಿಗೆ ತಲೆಗೆ ಎಣ್ಣೆ ಹಚ್ಚಿ ಸ್ನಾನಮಾಡುವ ದಿನ. ನಾನೂ ಇದಕ್ಕೆ ಹೊರತಲ್ಲ. ಅದೇನೋ ಮಿಶ್ರ ಸೊಪ್ಪುಗಳ ಒಣಗಿಸಿ ಹುರಿದು ಕಾಯಿಸಿ ಮಾಡಿದ ಎಣ್ಣೆಯಿರಬಹುದು, ಅದೇ ಸತ್ವಗಳ ಮಾರುಕಟ್ಟೆಯಿಂದ ತಂದ ಎಣ್ಣೆಯಿರಬಹುದು ಅಥವಾ ಕೊಬ್ಬರಿ ಎಣ್ಣೆಯಿರಬಹುದು, ಲೀಟರಿನಷ್ಟು ತಲೆಗೆ ಸುರಿದು "ಫಿಂಗರ್ ಟಿಪ್ಸ್"ನಿಂದ ತಿಕ್ಕಿ, ಬಾಚಿ ಎಳೆದು ಕಟ್ಟಿ ತಣ್ಣಗಿನ ಅನುಭವ ಪಡೆಯುವುದೆಂದರೆ ಏನೋ ಖುಷಿ. ಆರೇಳು ವರ್ಷ ಹಿಂದೆ ನಾವು ಹಾಸ್ಟೆಲ್ಲಿನಲ್ಲಿದ್ದಾಗ ಶನಿವಾರ ಬಂದರೆ ಏನೋ ಸಂಭ್ರಮ. ಹೆಚ್ಚಿನವರು ಬೇರೆ ಬೇರೆ (ಸು)ವಾಸನೆಯ ಎಣ್ಣೆಗಳನ್ನು ತಲೆಗೆ ತಿಕ್ಕಿ, ದಿಂಬಿನ ಮೇಲೆ ದಿನ ಪತ್ರಿಕೆ ಹಾಸಿ, ರಾತ್ರಿ ಪೂರ್ತಿ ತಲೆ ತಂಪಾಗಿಸುತ್ತಿದ್ದರು. ಎಷ್ಟೋ ಮಂದಿ ಮಾತನಾಡುತ್ತಾ ಎಣ್ಣೆ ಸುರಿದುಕೊಂಡು ಅದು ಕಿವಿಯ ಹಿಂದೆ ತಣ್ಣನೆ ಇಳಿದಾಗ ಏನೋ ಹುಳ ಹರಿದಾಡುತ್ತಿದ್ದಂತೆ ಬೆಚ್ಚಿ ಬೊಬ್ಬಿಡುತ್ತಿದ್ದರು. ತಮ್ಮ ಎಣ್ಣೆಗಳು ಮುಗಿದಿದ್ದರೆ ಬೇರೆಯವರ ರೂಂ ಬಾಗಿಲು ತಟ್ಟಿ ಎಣ್ಣೆ ಸಾಲಕ್ಕೆ ಪಡೆಯುತ್ತಿದ್ದರು. (ಮತ್ತೆ ಆ ಪ್ರಮಾಣದಲ್ಲಿ ಎಣ್ಣೆ ಉಚಿತ ಕೊಡಲು ಸಾಧ್ಯವೇ?). ಭಾನುವಾರ ಬೆಳಗಾದರೆ ಬಚ್ಚಲಿನ ಮುಂದೆ ಬಕೇಟುಗಳ ಸಾಲು. ಬಕೇಟಿನ ಮಾಲೀಕರ ಪತ್ತೆ ಇಲ್ಲದೆ ಬೇರೊಬ್ಬರು ಒಳ ನುಗ್ಗಿದರೆ ಅಲ್ಲೊಂದು ಸಣ್ಣ ಜಗಳ ಖಾತರಿಯಾಗಿತ್ತು. ಸೌರ ಶಕ್ತಿ ನೀರಿನ ಒಲೆಯಲ್ಲಿ ಬಿಸಿನೀರು ಮುಗಿದು ವಿದ್ಯುತ್ ಹೀಟರು ಆನ್ ಮಾಡುವಂತೆ ವಾಚ್ ಮಾ್ಯನ್ ಬಳಿ ದಂಬಾಲು ಬೀಳಬೇಕಾಗುತ್ತಿತ್ತು. ಆದರೆ ಅದಕ್ಕಿಂತ ಕಷ್ಟ ಕೊನೆಯಲ್ಲಿ ಸ್ನಾನಕ್ಕೆ ಹೋಗುವುದು. ಬಚ್ಚಲೆಲ್ಲ ಎಣ್ಣೆಮಯವಾಗಿ ಕಾಲಿಟ್ಟಲ್ಲಿ ಜಾರಿಬೀಳುವ ಸಂಭವವಿತ್ತು. ಎಷ್ಟೋ ಬಾರಿ ನೆಲಕ್ಕೆ ಸೋಪಿನ ಪುಡಿ ಸಿಂಪಡಿಸಿ ಎಣ್ಣೆಯನ್ನು ಹೊರ ಸಾಗಿಸಿ ಸ್ನಾನ ಮಾಡುವ ಪರಿಸ್ಥಿತಿ ಬಂದಿತ್ತು. ಬಚ್ಚಲಿನ ನೀರಿಂದ ಎಣ್ಣೆ ಹೊರತೆಗೆಯುವ ವಿಧಾನವಿದ್ದರೆ ನೂರಾರು ಬಾಟಲಿ ತುಂಬುತ್ತಿತ್ತೇನೋ.&lt;br /&gt;&lt;br /&gt;ಹಾಸ್ಟೆಲ್ಲಿನಲ್ಲಿದ್ದಾಗ ನನ್ನ ಪ್ರಯೋಗ ಪ್ರಿಯ ಗೆಳತಿಯೊಬ್ಬಳು ಹರಳೆಣ್ಣೆ ತಲೆಗೆ ಸುರಿದು ಗಾಢ ನಿದ್ದೆ ಮಾಡಿದ್ದು ಇಲ್ಲಿ ನೆನಪಾಗುತ್ತದೆ. ಮರುದಿನ ಹರಳೆಣ್ಣೆಯ ಅಂಟಿನಿಂದ ಕೂದಲನ್ನು ಬಿಡಿಸು ಹೋಗಿ ಒಂದು ಗಂಟೆಗೂ ಮೀರಿದ ಸುದೀರ್ಘ ಸ್ನಾನ ಮಾಡಿದ್ದು ಬೇರೆ ವಿಚಾರ.&lt;br /&gt;&lt;br /&gt;ಎಣ್ಣೆ ತಿಕ್ಕುವುದರಲ್ಲಿ ಬ್ಯೂಟಿ ಪಾರ್ಲರುಗಳೂ ಕಮ್ಮಿ ಇಲ್ಲ. ಪುರುಷರ ಕೂದಲು ಕತ್ತರಿಸುವ ಸಲೂನುಗಳಲ್ಲಿ ಹೆಚ್ಚಾಗಿ ಕಂಡುಬರುವುದು ನವರತ್ನ ತೈಲ. ಪ್ರತಿ ಬಾರಿ ಕೂದಲು ಕತ್ತರಿಸಲು ಹೋದಾಗಲೂ ನನ್ನ ಯಜಮಾನರು ನೂರು ರೂಪಾಯಿಗೆ (ಬೆಂಗಳೂರಿನಲ್ಲಿ) ಆಯಿಲ್ ಮಸಾಜ್ ಎಂದು ತಲೆಗೆ ನವರತ್ನ ಸುರಿಸಿ ಪಟಪಟ ಹೊಡೆಸಿ, ಕುತ್ತಿಗೆ ತಿರುವಿ ಟಕ್ ಎನಿಸಿಕೊಂಡು ಎಣ್ಣೆಮಯ ಮುಖ ಹೊತ್ತು ಮನೆಗೆ ಬರುತ್ತಾರೆ. ಹೀಗೇ ಒಮ್ಮೆ ನನ್ನ ತಂದೆ ಆಯಿಲ್ ಮಸಾಜ್ ಮಾಡಿಸಿ ಕುತ್ತಿಗೆ ಟಕ್ ಎನಿಸಿದಾಗ ಅಲ್ಪಕಾಲದಿಂದ ಬಾಧಿಸಿದ ಹೆಗಲು ನೋವು ಮಾಯವಾಯಿತಂತೆ!&lt;br /&gt;&lt;br /&gt;ಸರ್ವ ವ್ಯಾಪಿ ಎಣ್ಣೆಯ ಇನ್ನೊಂದು ರೂಪ ಬಸ್ ಗಳಲ್ಲಿ ಕಾಣಸಿಗುತ್ತದೆ. ಅದು ಬಸ್ ಗಳ ಕಿಟಕಿ ಗಾಜುಗಳ ಮೇಲೆ ಯಾವತ್ತೂ ಮೂಡಿರುವ ಎಣ್ಣೆ ವೃತ್ತಗಳು. ಕಿಟಕಿ ಗಾಜಿಗೆ ಆತು ತೂಕಡಿಸಿದವರ ತಲೆಯ ಪರಿಧಿಯ ಮೇಲೆ ಈ ಎಣ್ಣೆಯ ವೃತ್ತಗಳ ಆಕಾರ ವ್ಯತ್ಯಾಸವಾಗುತ್ತದೆ. ಆ ಸೀಟಿನಲ್ಲಿ ಕುಳಿತ ಬೇರೆ ಬೇರೆ ಜನರೂ ಅದೇ ವೃತ್ತಗಳ ಮೇಲೆ ತಮ್ಮ  ತಲೆಯಿಂದ ಇನ್ನಷ್ಟು ಎಣ್ಣೆ ತುಂಬಿಸಿ ಹೋಗುತ್ತಾರೆ. ದಿನದ ಮೊದಲ ಟ್ರಿಪ್ ನಲ್ಲಿ ಹೋದರೂ ಎಣ್ಣೆ  ವೃತ್ತ ಇದ್ದೇ ಇರುತ್ತದೆ. ಇವು ಹಿಂದಿನ ದಿನಗಳವು ಇರಬೇಕು ಎಂದುಕೊಂಡಿದ್ದೇನೆ. ಎಷ್ಟೋ ಬಾರಿ ಕಿಕ್ಕಿರಿದ ಬಸ್ ಗಳಲ್ಲಿ ಎಣ್ಣೆ ಹಚ್ಚಿ, ಹೂವು ಮುಡಿದ ಹೆಂಗಸರು ನಿಂತಿರುತ್ತಾರೆ. ಅವರು ನಮಗಿಂತ ಕುಳ್ಳಗಿದ್ದು ನಮ್ಮ ಪಕ್ಕವೇನಾದರೂ ನಿಂತಿದ್ದರೆ ನಮಗೂ ಎಣ್ಣೆ ಲೇಪ ಗ್ಯಾರಂಟಿ. ಅವರು ಅತ್ತಿತ್ತ ಅಲುಗುತ್ತಾ ತಲೆಯ ಎಣ್ಣೆಯನ್ನು ನಮ್ಮ ಮುಖ ಮೂತಿಗೆ, ಕಂಬಿ ಹಿಡಿದುಕೊಂಡ ಕೈಗೆ ಲೇಪಿಸುತ್ತಿದ್ದರೆ ಏನೋ ಸಂಕಟ. ಎಣ್ಣೆ, ಹೂವು (ಬೇಕಿದ್ದರೆ ಬೆವರು) ಸೇರಿ ಮಿಶ್ರ ವಾಸನೆಯೊಂದನ್ನು ಬೀರುತ್ತಿದ್ದರೆ  ಸಹಿಸಿಕೊಳ್ಳಬೇಕಾದ ಅನಿವಾರ್ಯತೆ.&lt;br /&gt;&lt;br /&gt;ಇದೇ ಸಂದರ್ಭ ನನಗೊಂದು ಮೋಜಿನ ಸಂಗತಿ ನೆನಪಾಗುತ್ತದೆ. ಕೆಲವು ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ತಮ್ಮ ಮಗನನ್ನು ಅಂಗನವಾಡಿಗೆ ಸೇರಿಸಿದರು. ಅದು ಹಳ್ಳಿ ಪ್ರದೇಶ. ಅಲ್ಲಿಗೆ ಬರುತ್ತಿದ್ದ ಮಕ್ಕಳೆಲ್ಲಾ ತಲೆಗೆ ರಾಶಿ ಎಣ್ಣೆ ಸುರಿದುಕೊಂಡಿರುತ್ತಿದ್ದರು. ಆ ಮಕ್ಕಳು ಒಂದು ಹೊಸದಾದ ಆಟ ಕಂಡುಕೊಂಡಿದ್ದರಂತೆ. ಅಂಗಾತ ಮಲಗಿ ಕಾಲುಗಳಿಂದ ನೆಲವನ್ನು ದೂಡುತ್ತಾ ತಲೆಯ ಹಿಂಭಾಗದ ಎಣ್ಣೆಯ ಜಿಡ್ಡಿನಲ್ಲಿ ಸುಲಭವಾಗಿ ಜಾರುತ್ತಾ ಇಡೀ ತರಗತಿ ಸುತ್ತುತ್ತಿದ್ದರಂತೆ. ನಮ್ಮ ಸಂಬಂಧಿ ಅಲ್ಲಿ ಹೋದಾಗ ಈ "ಹಿಂದಲೆಯಲ್ಲಿ ಜಾರುವ" ಮಕ್ಕಳ ಹಿಂದೆ ಶಿಕ್ಷಕಿ ಬೆತ್ತ ತೋರಿಸಿ ಗದರಿಸುತ್ತಾ ಓಡಾಡುತ್ತಿದ್ದರಂತೆ. ನನಗಂತೂ ಈ ಅಂಗನವಾಡಿ ಚಪ್ಪಟೆ ತಲೆಯ ಮಕ್ಕಳನ್ನು ಸೃಷ್ಟಿಸುವ ಕೇಂದ್ರದಂತೆ ಭಾಸವಾಯಿತು.&lt;br /&gt;&lt;br /&gt;ಎಣ್ಣೆ ಹಚ್ಚುವಿಕೆ ಬರಿಯ ತಲೆಗಷ್ಟೇ ಸೀಮಿತವಾಗಿಲ್ಲ. ಚರ್ಮದ ಕಾಂತಿಗೆ, ಯೌವನಕ್ಕೆ, ಚಳಿಗಾಲದ ಬಿರುಕಿಗೆ ಎಂದು ಮೈಗೆಲ್ಲ ಎಣ್ಣೆ ಹಚ್ಚಿಕೊಳ್ಳಬಹುದು. ದೀಪಾವಳಿ ಬಂತೆಂದರೆ ಮೈಗೆ ಎಣ್ಣೆ ತಿಕ್ಕಿಸಿಕೊಳ್ಳಲು ನೆಪ ಸಿಕ್ಕಂತಾಗುತ್ತದೆ. ಕೆಲವರು ಇಡೀ ಮೈಗೆ  ಹಚ್ಚಿಕೊಳ್ಳದಿದ್ದರೂ "ಶಾಸ್ತ್ರ" ಎಂದು ಕೈ-ಕಾಲಿಗೆ ಮಾತ್ರ ಹಚ್ಚಿ ಸ್ನಾನಮಾಡುವುದಿದೆ. ನರಕಾಸುರ ಹತನಾದರೆ ನಾವೇಕೆ ಎಣ್ಣೆ ತಿಕ್ಕಿಕೊಳ್ಳಬೇಕೋ ಗೊತ್ತಿಲ್ಲ. ಇನ್ನು ಹಸುಳೆಗಳನ್ನಂತೂ ಕೇಳಲೇ ಬೇಡಿ. ದಿನವೂ ಸ್ನಾನಕ್ಕೆ ಮೊದಲು ಪರಿಣತರಿಂದ  ಎಣ್ಣೆ ತಿಕ್ಕಿಸಿ ವ್ಯಾಯಾಮ ಮಾಡಿಸಿಕೊಳ್ಳುತ್ತವೆ. ಕೆಲವು ಹಸುಳೆಗಳಿಗೆ ತುಪ್ಪ, ಇನ್ನು ಕೆಲವಕ್ಕೆ ಕೊಬ್ಬರಿ ಎಣ್ಣೆ, ಶೀತ ಪ್ರಕೃತಿಗಳವರಿಗೆ ಆಲೀವ್ ಎಣ್ಣೆೆ, ಜಾನ್ಸನ್ನನ ಮಕ್ಕಳಿಗೆ ಇನ್ನೇನೋ ಎಣ್ಣೆ!  (ಕೆಲವರಲ್ಲಿ ಮಗುವಿಗೆ ಯಾವ ಎಣ್ಣೆ ಹಚ್ಚುವುದೆಂದು ಎಂದು ಪ್ರಶ್ನಿಸಿದಾಗ "ನಮ್ಮದು ಜಾನ್ಸನ್ಸ್ ಬೇಬಿ" ಎಂದಿದ್ದಾರೆ).&lt;br /&gt;&lt;br /&gt;ಕಳ್ಳರಿಗೂ ಮೈ ಪೂರ್ತಿ ಎಣ್ಣೆ ಹಚ್ಚಿಕೊಳ್ಳುವ ಅಭ್ಯಾಸವಿದೆ ಎಂದು ಇತ್ತೀಚೆಗಷ್ಟೇ ತಿಳಿಯಿತು. ಕದಿಯುತ್ತಿರುವಾಗ ಯಾರಾದರೂ ಹಿಡಿಯಲು ಬಂದರೆ ಅಕ್ಷರಶಃ "ಜಾರಿಕೊಳ್ಳಲು" ಎಣ್ಣೆಗಿಂತ ಇನ್ನೇನು ಸಹಕಾರಿಯಾದೀತು? ಹಿಂದೊಮ್ಮೆ ರೈಲಿನಲ್ಲಿದ್ದ ನನ್ನತ್ತೆಯವರ ಕೊರಳ ಸರವನ್ನು ಕಿಟಕಿ ಹೊರಗಿನಿಂದ ಎಳೆಯ ಹೊರಟಿದ್ದ ಕಳ್ಳನನ್ನು ಹಿಡಿಯಲು ಹೋದಾಗ ಎಣ್ಣೆ ಮೆತ್ತಿದ ಕೈಯಿಂದಾಗಿ ಜಾರಿಕೊಂಡನಂತೆ.&lt;br /&gt;&lt;br /&gt;ಎಣ್ಣೆಯ ಕಾರುಭಾರು ಇಷ್ಟಕ್ಕೇ ನಿಂತಿಲ್ಲ. ಬಹಳಷ್ಟು ಜನರಿಗೆ ಎಣ್ಣೆಯಲ್ಲಿ ಕರಿದ ತಿಂಡಿಗಳೆಂದರೆ ಅದ್ಭುತ ರುಚಿಯ ತಿಂಡಿಗಳು ಎಂದರ್ಥ. ನನಗೆ ಎಣ್ಣೆ ತಿಂಡಿ ಎಂದರೆ ಅಷ್ಟಕ್ಕಷ್ಟೆ. ನಾನು ಎಣ್ಣೆ ತಿಂಡಿ ಮಾಡುವುದರಲ್ಲಿ ಬಲು ಹಿಂದೆ. ಎಷ್ಟೋ ಬಾರಿ ಎಣ್ಣೆಯಲ್ಲಿ ಕರಿಯಲು ಹೊರಟು ಏನೇನೋ ಅವಾಂತರಗಳಾಗಿ "ಇದು ನನ್ನ ಡಿಪಾರ್ಟಮೆಂಟ್ ಅಲ್ಲ" ಎಂದು ಬಿಟ್ಟು ಬಿಟ್ಟಿದ್ದೇನೆ. ಇದನ್ನು ಅರಿತ ನನ್ನ ಮಿತ್ರರು "ನೀನು ಎಷ್ಟೇ ಒಳ್ಳೆಯ ಅಡುಗೆ ಮಾಡು, ಎಣ್ಣೆಯಲ್ಲಿ ಕಾಯಿಸಲು ಬರಲಿಲ್ಲ ಎಂದರೆ ನೀನು ಉತ್ತಮ ಅಡುಗೆಯವಳೆಂದು ಕರೆಸಿಕೊಳ್ಳಲು ಯೋಗ್ಯಳೇ ಅಲ್ಲ" ಎಂದಿದ್ದರು. ಆ ಮಟ್ಟಿಗಿದೆ ಎಣ್ಣೆಯ ಶ್ರೇಷ್ಠತೆ. ಎಣ್ಣೆಯಲ್ಲಿ ಕರಿಯುವುದು ಬಿಡಿ ಎಣ್ಣೆಯನ್ನು ಹಾಗೇ ಕುಡಿದ ಉದಾಹರಣೆಗಳಿವೆ. "ಹರಳೆಣ್ಣೆ ಕುಡಿದವನಂತೆ ಮುಖಮಾಡಿಕೊಂಡು..." ಎಂಬ ಮಾತಿನಿಂದ ಎಣ್ಣೆಯನ್ನು ಯಾರೋ ಕುಡಿದಿರುವುದು ಸಾಬೀತಾಗುತ್ತದೆ. ಅದೇಕೆ ಹರಳೆಣ್ಣೆ ಕುಡಿದರೋ, ಕುಡಿದ ನಂತರ ಮುಖ ಹೇಗೆ ಆಯಿತೋ? ನನಗಂತೂ ಗೊತ್ತಿಲ್ಲ. ಸಧ್ಯಕ್ಕೆ ಹರಳೆಣ್ಣೆ ಕುಡಿದವರಾರೂ ಗೊತ್ತಿಲ್ಲದಿದ್ದರೂ ಆ ಮಾತು ಇನ್ನೂ ಚಾಲ್ತಿಯಲ್ಲಿರುವುದರಿಂದ ಆ ಮುಖಭಾವ ಏನೋ ವಿಶೇಷ ಸ್ಟಾ್ಯಂಡರ್ಡ್ ಇರಬೇಕೆಂದು ಭಾವಿಸಿದ್ದೇನೆ. ಕೆಲವು ಎಣ್ಣೆಗಳು ಕುಡಿಯಲು ಇಷ್ಟವಾಗುತ್ತಲೂ ಇರಬಹುದು. ಇಲ್ಲದಿದ್ದರೆ ಮದ್ಯ ಕುಡಿಯುವಿಕೆಗೆ "ಎಣ್ಣೆ ಹಾಕಿಕೊಳ್ಳುವುದು" ಎನ್ನಬಹುದೆಂದು ನನಗನ್ನಿಸುವುದಿಲ್ಲ. ನಿದ್ದೆ ಓಡಿಸಲೂ ಎಣ್ಣೆ ಉಪಯೋಗವಾಗುತ್ತದೆ. "ಕಣ್ಣಿಗೆ ಎಣ್ಣೆ ಬಿಟ್ಟು" ರಾತ್ರಿಯಿಡೀ ಕಾಯುವುದೋ, ಓದುವುದೋ ಮಾಡುತ್ತಾರೆಂದರೆ ಎಣ್ಣೆ ಏನೆಲ್ಲ ಮಾಡಲು ಶಕ್ತವಾಗಿದೆ ಎಂದು ಗೊತ್ತಾಗುತ್ತದೆ. &lt;br /&gt;&lt;br /&gt;ಎಣ್ಣೆ ಬಳಕೆಯಾಗದ ಜಾಗವೆಲ್ಲಿದೆ ಹೇಳಿ. ಅಡುಗೆಯಿಂದ ಹಿಡಿದು ನೋವು ನಿವಾರಕದವರೆಗೆ, ಕಿರ್ರೆನ್ನುವ ಲೋಹದ ಕೀಲುಗಳಿಂದ ಹಿಡಿದು ಎಣ್ಣೆಕಂಬದಂತಹ ಸಾಂಪ್ರದಾಯಿಕ ಆಟಗಳವರೆಗೆ, ಕೇಶ ಚರ್ಮಗಳ ಸೌಂದರ್ಯವರ್ಧನೆಯಿಂದ ಹಿಡಿದು ಜಾರಿಕೊಳ್ಳುವ ಕಳ್ಳರವರೆಗೆ ಎಲ್ಲವೂ ಎಣ್ಣೆಮಯ. ಇದೂ ಸಾಕಾಗಲಿಲ್ಲವೆಂದು ನಮ್ಮೂರ ಕಡೆ ಒಂದು ಹೊಳೆಗೂ "ಎಣ್ಣೆ ಹೊಳೆ" ಎಂದು ಹೆಸರಿಟ್ಟಿದ್ದಾರೆ. ಕಾರಣ ಕೇಳಿದರೆ "ನೀರು ಎಣ್ಣೆಯಂತಿದೆ" ಎನ್ನುತ್ತಾರೆ! ಹೀಗೇ ಕಳೆದ ಭಾನುವಾರ ಯಜಮಾನರ ತಲೆಗೆ ಎಣ್ಣೆ ಮಾಲೀಶು ಮಾಡುತ್ತಾ ಒಂದು ತರಲೆ ಪ್ರಶ್ನೆ ಎಸೆದೆ. "ಅದೇಕೆ ಜನರು ಸೆಲೂನುಗಳಲ್ಲಿ ಆಯಿಲ್ ಮಸಾಜ್ ಮಾಡಿಸಿಕೊಳ್ಳುತ್ತಾರೆ?". ತೂಕಡಿಸುತ್ತಾ ಕೂತ ಅವರಿಗೆ ನನ್ನ ಪ್ರಶ್ನೆ ನಿದ್ರಾಭಂಗ ಮಾಡಿರಬೇಕು. "ಮದುವೆಯಾದ ಮೇಲೆ ನೂರೆಂಟು ಯೋಚನೆಗಳು, ತಲೆಬಿಸಿಗಳು ಇರುತ್ತವೆ. ಸಲೂನಿಗೆ ಹೋಗಿ ಎಣ್ಣೆ ಮಾಲೀಶು ಮಾಡಿಸಿಕೊಂಡರೆ ತಲೆ ತಣ್ಣಗಾಗುತ್ತದೆ. ಅಲ್ಲಿ ಹೆಂಡತಿಯ ಕಿರಿಕಿರಿಯೂ ಇರುವುದಿಲ್ಲ" ಎಂದು ಆರಾಮವಾಗಿ ಅವರು ಹೇಳಿದಾಗ ಪೆಚ್ಚಾಗುವ ಸರದಿ ನನ್ನದಾಗಿತ್ತು.&lt;br /&gt;-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-6243024341375784983?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/6243024341375784983/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=6243024341375784983' title='8 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/6243024341375784983'/><link rel='self' type='application/atom+xml' href='http://www.blogger.com/feeds/2942048231899528037/posts/default/6243024341375784983'/><link rel='alternate' type='text/html' href='http://chaithrika.blogspot.com/2011/01/blog-post_27.html' title='ಸರ್ವವೂ ಎಣ್ಣೆಮಯ'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>8</thr:total></entry><entry><id>tag:blogger.com,1999:blog-2942048231899528037.post-3394805543865712488</id><published>2011-01-06T16:36:00.009+05:30</published><updated>2011-01-06T17:32:10.198+05:30</updated><category scheme='http://www.blogger.com/atom/ns#' term='ಶಿವಗಂಗೆ'/><title type='text'>ಶಿವಗಂಗಾ ಚಾರಣ</title><content type='html'>ಎಷ್ಟೋ ತಿಂಗಳು ಎಲ್ಲೂ ತಿರುಗಾಡಲು ಹೋಗಲು ಅವಕಾಶ ಸಿಕ್ಕಿರಲಿಲ್ಲ. ಹೆಚ್ಚಿನ ಸಮಯ ಮಳೆ, ಇನ್ನು ಕೆಲವೊಮ್ಮೆ ಅಗತ್ಯ ಕೆಲಸಗಳು, ಊರಿಗೆ ಪ್ರಯಾಣ ಇತ್ಯಾದಿ ಕಾರಣಗಳಿಂದ ಜೀವನವೇ ನೀರಸವಾದಂತಿತ್ತು. ಕೊನೆಗೆ ನವಂಬರದ ಕೊನೆಯ ಶುಕ್ರವಾರ "ನಾಳೆ ಶಿವಗಂಗೆಗೆ ಹೋಗೋಣ" ಎಂದು ಧತ್ತನೆ ನಿರ್ಧಾರ ಮಾಡಿದೆವು. ಶಿವಗಂಗೆ ನಮ್ಮ ನೋಡಬೇಕಾದ ಜಾಗಗಳ ಪಟ್ಟಿಯಲ್ಲಿ ಮೊದಲೇ ಇತ್ತು. ಕಳೆದ ಬಾರಿ ದೇವರಾಯನ ದುರ್ಗಕ್ಕೆ ಹೋಗಿದ್ದಾಗ ಇನ್ನೊಮ್ಮೆ ಶಿವಗಂಗಾಗೆ ಬರಬೇಕು ಎಂದು ನಿರ್ಧರಿಸಿ ಹೋಗುವ ಯೋಜನೆಯನ್ನೂ ಹಾಕಿಯಾಗಿತ್ತು. ಶನಿವಾರ ಬೆಳಗ್ಗೆ 7 ಗಂಟೆ ಹೊರಡೋಣ ಎಂದು ಯೋಚಿಸಿ ನಿದ್ರಿಸಿದರೆ ಎದ್ದಾಗ ಗಂಟೆ ಎಂಟೂ ವರೆ ಆಗಿತ್ತು! ಏನು ಮಾಡುವುದು? ಶುಕ್ರವಾರದವರೆಗೆ ಕೆಲಸಮಾಡಿ ಶನಿವಾರ ಬೇಗ ಏಳು ಎಂದರೆ ದೇಹ ಕೇಳುತ್ತದೆಯೇ? ಬೇಗ ಬೇಗನೆ ಹಲ್ಲುಜ್ಜಿ, ಸ್ನಾನ ಮಾಡಿ, corn flakes ಮುಕ್ಕಿ ಹೊರಟಾಗ ಗಂಟೆ ಹತ್ತಾಗಿರಬೇಕು. ಬೇಗನೆ ತಲುಪುವ ಸಲುವಾಗಿ 82 ರೂಪಾಯಿ ತೆತ್ತು NICE ರಸ್ತೆ ಹಿಡಿದೆವು. ಖಾಲಿ ರಸ್ತೆಯಲ್ಲಿ ಕಾರು ವೇಗವಾಗಿ ಸಾಗಿತು. ಅರ್ಧಗಂಟೆಯೊಳಗೆ ನೆಲಮಂಗಲ ಬಂದಿತ್ತು. 12:15 ಗೆ ನಾವು ಶಿವಗಂಗೆ ತಲುಪಿದ್ದೆವು.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_KKfkb37kvUA/TSWijSxkK7I/AAAAAAAACwU/porhEzC02n4/s1600/DSC08822_1.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/_KKfkb37kvUA/TSWijSxkK7I/AAAAAAAACwU/porhEzC02n4/s320/DSC08822_1.JPG" border="0" alt=""id="BLOGGER_PHOTO_ID_5559028042277596082" /&gt;&lt;/a&gt;&lt;br /&gt;&lt;br /&gt;ಶಿವಗಂಗೆಯ ಬೆಟ್ಟದ ತಪ್ಪಲಲ್ಲಿ  ಬಂಡೆಯೊಳಗೆ ಕೊರೆದಂತಿರುವ ಸ್ವರ್ಣಾಂಬಾ ದೇವಿ ದೇವಸ್ಥಾನ ಮತ್ತು ಗಂಗಾಧರೇಶ್ವರ ದೇವಸ್ಥಾನ ನೋಡಿ ನಾವು ಮೇಲಕ್ಕೆ ಹತ್ತಲನುವಾದೆವು. ಆರಂಭದಲ್ಲಿ ಅತ್ಯಂತ ಉತ್ಸಾಹದಲ್ಲಿ ಏರುತ್ತಿದ್ದ ನನಗೆ ಇದು ಸಾಮಾನ್ಯಕ್ಕೆ ತಲುಪುವ ತುದಿಯಲ್ಲ ಎಂದು ಅರಿವಾಗಲು ಬಹಳ ಹೊತ್ತು ಬೇಕಾಗಲಿಲ್ಲ. ಏರುತ್ತಿರುವಾಗ ಮೊದಲಿಗೆ ಬಂಡೆಯಲ್ಲೇ ಮೆಟ್ಟಿಲ ಆಕಾರ ಕೊರೆದು ಕಬ್ಬಿಣದ ಸ್ತಂಭ ಊರಿ ಸರಳು ಬಿಗಿದಿರುವುದರಿಂದ ಹತ್ತುವಿಕೆ ಸುಲಭವೆನಿಸುತ್ತಿತ್ತು. ಹಾಗೇ ಮುಂದುವರಿದಾಗ ಒಳಕಲ್ಲು ತೀರ್ಥ ಎಂಬ ಜಾಗ ಎದುರಾಯಿತು. ಇಲ್ಲಿ ಬಂಡೆಯಲ್ಲಿ ಸುಮಾರು 20ಅಡಿ ಒಳಗೆ  ಗಣಪತಿ ಮತ್ತು ಈಶ್ವರನ ದೇವಸ್ಥಾನವಿದೆ. ವಿದ್ಯುತ್ ಇಲ್ಲದ ಕಾರಣ ಕತ್ತಲೆ ಇರುವುದರಿಂದ ಆಗ ಯಾರನ್ನೂ ಒಳಗಡೆ ಬಿಡುತ್ತಿರಲಿಲ್ಲ. ಬರುತ್ತಾ ನೋಡೋಣ ಎಂದು ನಾವು ಮುಂದುವರಿದೆವು. &lt;br /&gt;&lt;br /&gt;ಇಲ್ಲಿಂದ ನಂತರ ಸುಮಾರು ಎತ್ತರದ ವರೆಗೆ ಕಬ್ಬಿಣದ railಗಳಿಲ್ಲ. ಇಲ್ಲಿ ಮೆಟ್ಟಿಲುಗಳಂತೆ ದೊಡ್ಡ ದೊಡ್ಡ ಕಲ್ಲುಗಳಿದ್ದು ಹತ್ತಲು railಗಳ ಅಗತ್ಯವೂ ಇಲ್ಲ. ಆದರೆ ಇಲ್ಲಿ ಹತ್ತುತ್ತಾ ನಮಗೆ ಕಾಲು ನೋವು ಬರಲಾರಂಭಿಸಿತು. ಏದುಸಿರು ತಗ್ಗಿಸಲು ಅಲ್ಲಲ್ಲಿ ನಿಲ್ಲಬೇಕಾಯಿತು. ಈ ಹಾದಿಯ ಕೊನೆಯಲ್ಲಿ ಶಿವ ಪಾರ್ವತಿಯರ 8-10 ಅಡಿ ಎತ್ತರದ ವಿಗ್ರಹ ರಚನೆಯಾಗುತ್ತಿತ್ತು. ಅದಕ್ಕಾಗಿ ಕೆಲಸಗಾರರು ಸಿಮೆಂಟು ಗೋಣಿಚೀಲಗಳನ್ನು ಕೆಳಗಿಂದ ಹೊತ್ತು ತರುತ್ತಿದ್ದರು! ನನಗೆ ಅವರನ್ನು ಕಂಡು ಬೇಸರವಾಯಿತು. ಆದರೇನು ಮಾಡುವುದು? ಹೊಟ್ಟೆಗೆ ಹಸಿವೆಯೆಂಬುದೊಂದು ಇದೆಯಲ್ಲವೇ ಎಂದುಕೊಂಡು ಸುಮ್ಮನಾದೆ. ಶಿವಪಾರ್ವತಿ ವಿಗ್ರಹದವರೆಗೆ ಅನೇಕ ಚಿಕ್ಕ ಅಂಗಡಿಗಳು ಚರುಮುರಿ, ಮಜ್ಜಿಗೆ, ಮುಳ್ಳು ಸೌತೆ, ಅನಾನಸು, ನೀರು ಮಾರಾಟ ಮಾಡುತ್ತಿದ್ದವು. ಇಲ್ಲಿಯವರೆಗೆ ನಮಗೆ ಯಾವುದೇ ಮಂಗಗಳೂ ಎದುರಾಗಲಿಲ್ಲ.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_KKfkb37kvUA/TSWi5o7wBfI/AAAAAAAACwc/zh_wl6Z5MxY/s1600/DSC08835_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/_KKfkb37kvUA/TSWi5o7wBfI/AAAAAAAACwc/zh_wl6Z5MxY/s320/DSC08835_1.jpg" border="0" alt=""id="BLOGGER_PHOTO_ID_5559028426183017970" /&gt;&lt;/a&gt;&lt;br /&gt;&lt;br /&gt;ಶಿವಗಂಗೆಗೆ ಹೊರಡುವ ಮೊದಲು ನಾನು ಅಲ್ಲಿಯ ಮಂಗಗಳ ಬಗ್ಗೆ ಸಾಕಷ್ಟು ಕೇಳಿದ್ದೆ. collegeಗೆ ಹಾಕುವಂತಹಾ ಬೆನ್ನಿನ ಚೀಲ ಕೊಂಡೊಯ್ಯುವುದು ಒಳಿತೆಂದು ತಿಳಿದಿದ್ದೆ. ಆದರೂ ಅನೇಕರು ತಮ್ಮ ಅನುಭವ ವಿವರಿಸಿ ಮಂಗಗಳ ಬಗ್ಗೆ ನನ್ನಲ್ಲಿ ಹೆದರಿಕೆ ಹುಟ್ಟಿಸಿದ್ದರು. ಕೆಲವರು ಮಂಗಗಳು ಬೆನ್ನಿನ ಚೀಲವನ್ನು ಹಿಂದಿಂದ ಎಳೆಯುತ್ತವೆ, ಕೊಡದಿದ್ದರೆ ಪರಚುತ್ತವೆ ಎಂದೂ, ಇನ್ನು ಕೆಲವರು, ಜಿಪ್ ತೆರೆದು ಹುಡುಕಾಡುತ್ತವೆ ಎಂದೂ ಹೇಳಿದ್ದರಿಂದ ನಾವು ನೀರು ಬಿಟ್ಟರೆ ಬೇರೇನೂ ತೆಗೆದುಕೊಂಡು ಹೋಗಿರಲಿಲ್ಲ. ಮಂಗಗಳು ಹೆಂಗಸರಿಗೆ ಜಾಸ್ತಿ ಉಪಟಳ ಕೊಡುತ್ತವೆ ಎಂದು ಕೇಳಿದ್ದ ನಾನು ಬ್ಯಾಗನ್ನು ಕೃಷ್ಣನಿಗೆ ತೊಡಿಸಿದ್ದೆ. &lt;br /&gt;ಸದ್ಯಕ್ಕೆ ಮಂಗಗಳು ಎದುರಾಗದ್ದು ನೋಡಿ ನನಗೆ ಧೈರ್ಯ ಬಂತು. ಕೃಷ್ಣನಿಗೆ ಆಯಾಸ ಕಡಿಮೆ ಮಾಡಿಕೋ ಎಂದು ಬ್ಯಾಗನ್ನು ನಾನೇ ಎತ್ತಿಕೊಂಡೆ. ಹತ್ತು ಹೆಜ್ಜೆ ನಡೆಯುವುದರೊಳಗಾಗಿ ಮಂಗಗಳ ಹಿಂಡು ಕಂಡಿತು. "ಇಕೋ ಬ್ಯಾಗ್" ಎಂದು ಕೃಷ್ಣನತ್ತ ಬ್ಯಾಗ್ ಎಸೆದು ಕೋಲಿಗಾಗಿ ತಡಕಾಡಿದೆ. ಒಂದು ಧೈರ್ಯಕ್ಕೆ ಸಾಕಾಗುವಷ್ಟು ದೊಡ್ಡ ಕೋಲು ಸಿಕ್ಕಿತು. ಆದರೆ ಸ್ವಲ್ಪದರಲ್ಲೇ ಅದನ್ನು ಹಿಡಿದು ಹತ್ತುವುದು ಕಷ್ಟವಾಗಿ ಕೋಲೂ ಕೃಷ್ಣನ ಕೈ ಸೇರಿತು.&lt;br /&gt;&lt;br /&gt;ಶಿವಪಾರ್ವತಿ ವಿಗ್ರಹದ ನಂತರ ಸಿಗುವುದು ಬಂಡೆಯ ತುದಿಗೆ ಹತ್ತುವ ಹಾದಿ. ಇದು ಬಹಳ ಇಳಿಜಾರಾಗಿದ್ದು ಹತ್ತಲು ಕಷ್ಟವಾಗುತ್ತದೆ. ಇಲ್ಲಿ ಬಂಡೆಯನ್ನು ಸುಮಾರಾಗಿ ಮೆಟ್ಟಿಲ ಆಕಾರಕ್ಕೆ ಕೊರೆದು ಎರಡೂ ಪಕ್ಕದಲ್ಲಿ railಗಳನ್ನು ಊರಿದ್ದಾರೆ. ಈ ಸರಳುಗಳಿಲ್ಲದಿದ್ದರೆ ಹತ್ತುವುದು ಬಹು ಕಷ್ಟವೇ ಸರಿ. ಅದಲ್ಲದೆ ಈ ಹಾದಿಯುದ್ದಕ್ಕೂ ಮಂಗಗಳು ಕುಳಿತಿರುತ್ತವೆ. ನಮ್ಮ ಅದೃಷ್ಟಕ್ಕೆ ಹಲವಾರು ಜನರಿಗೆ ಉಪದ್ರ ಕೊಡುತ್ತಿದ್ದ ಮಂಗಗಳು ನಮ್ಮ ಹತ್ತಿರವೂ ಸುಳಿಯಲಿಲ್ಲ. ಹೇಗೋ ಕಷ್ಟಪಡುತ್ತಾ ಮೇಲಕ್ಕೆ ಏರುತ್ತಾ ಹೋದೆವು. ಅಷ್ಟೆತ್ತರದಲ್ಲೂ ಮೇಕೆಗಳು ಬಂಡೆ ಮೇಲೆ ನಿಂತು ಮೇಯುತ್ತಿದ್ದುದನ್ನು ನೋಡಿ ಆಶ್ಚರ್ಯವಾಯಿತು. ತುದಿತಲುಪುತ್ತಾ ಮೊದಲಿಗೆ ಸಿಕ್ಕಿದ್ದು ನಂದಿ. ನಂದಿಯು ಸುಮಾರು ಹನ್ನೆರಡು ಅಡಿ ಎತ್ತರದ ಬಂಡೆಯ ಮೇಲೆ ಇದೆ. ಅಲ್ಲಿಗೆ ಹತ್ತಲೂ, ನಂದಿಯ ಸುತ್ತಲೂ ಕಬ್ಬಿಣದ ಸರಳು ಹಾಕಿದ್ದು, ಎಲ್ಲರಿಗೂ ಹತ್ತಲು ಅನುಕೂಲವಾಗುವಂತಿದೆ. ಆ ಸರಳುಗಳಿಲ್ಲದಿದ್ದರೆ ನನಗಂತೂ ಹತ್ತುವುದು ಅಸಾಧ್ಯವಾಗಿತ್ತು. ಅಲ್ಲಿಂದ ಅನತಿ ದೂರದಲ್ಲಿ ಬಂಡೆಯ ತುದಿಯೂ, ಅಲ್ಲಿ ಗಿರಿಗಂಗಾಧರೇಶ್ವರ ದೇವಸ್ಥಾನವೂ ಕಂಡಿತು.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_KKfkb37kvUA/TSWjJyrWS2I/AAAAAAAACwk/YGt4bhdQazs/s1600/DSC08851_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 240px; height: 320px;" src="http://1.bp.blogspot.com/_KKfkb37kvUA/TSWjJyrWS2I/AAAAAAAACwk/YGt4bhdQazs/s320/DSC08851_1.jpg" border="0" alt=""id="BLOGGER_PHOTO_ID_5559028703676484450" /&gt;&lt;/a&gt;&lt;br /&gt;&lt;br /&gt;ಅದರ ಎದುರಲ್ಲಿ ಒಬ್ಬ ಚರುಮುರಿ, ಮುಳ್ಳು ಸೌತೆ, ಮಜ್ಜಿಗೆ ನೀರು ಇತ್ಯಾದಿ ಮಾರುತ್ತಿದ್ದ. ಆತ ದಿನವೂ ಇಷ್ಟೆತ್ತರ ಹತ್ತಿ ಇವನ್ನೆಲ್ಲ ತರುತ್ತಿರಬಹುದೇ ಎಂದು ಯೋಚಿಸಿ ಅಚ್ಚರಿಯಾಯಿತು. ಇಲ್ಲೂ ಮಂಗಗಳಿಗೆ ಕೊರತೆಯಿರಲಿಲ್ಲ. ದೇವಸ್ಥಾನದ ಬಳಿ ಬಂದು ಉಪಟಳ ಕೊಡುವ ಮಂಗಗಳನ್ನು ಓಡಿಸಲು ಒಂದು ವಿಶಿಷ್ಟ ವಿಧಾನ ಉಪಯೋಗಿಸುತ್ತಿದ್ದುದನ್ನು ಇಲ್ಲಿ ನೋಡಿದೆ. ಒಂದು ಚಿರತೆಯ ಬೊಂಬೆಯನ್ನು ಒಬ್ಬ ಆಗಾಗ ದೇವಸ್ಥಾನದೊಳಗೊಂದ ತಂದು ಹೊರ ಭಾಗದಲ್ಲಿ ಇಡುತ್ತಿದ್ದ. ಅದನ್ನು ಕಂಡಾಕ್ಷಣ ಮಂಗಗಳು ಬಹು ದೂರ ಓಡಿ ಹೋಗುತ್ತಿದ್ದವು. ಮತ್ತೆ ಆತ ಅದನ್ನು ಒಳಗಿಟ್ಟು ಮಂಗಗಳು ಪುನಃ ಗುಂಪುಗೂಡಿದಾಗ ಹೊರತರುತ್ತಿದ್ದ. ಮಂಗಗಳನ್ನು ಓಡಿಸುವ ಮನುಷ್ಯನ ಮಂಗಬುದ್ಧಿ ನನಗೆ ತಮಾಷೆಯೆನಿಸಿತು. &lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_KKfkb37kvUA/TSWjTBkhzFI/AAAAAAAACws/j479v-I0qeI/s1600/DSC08855_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/_KKfkb37kvUA/TSWjTBkhzFI/AAAAAAAACws/j479v-I0qeI/s320/DSC08855_1.jpg" border="0" alt=""id="BLOGGER_PHOTO_ID_5559028862293232722" /&gt;&lt;/a&gt;&lt;br /&gt;(ಚಿರತೆ ಬೊಂಬೆಯನ್ನು ಒಳಗೆ ಒಯ್ಯುತ್ತಿರುವುದು)&lt;br /&gt;&lt;br /&gt;ಬಂಡೆಯ ಮೇಲೆ ನಾವು ತಲುಪಿದಾಗ ಗಂಟೆ ಎರಡಕ್ಕೆ ಹತ್ತಿರವಾಗಿತ್ತು. ಆ ದಿನ ನಮ್ಮ ಅದೃಷ್ಟಕ್ಕೆ ಮೋಡ ಕವಿದಿದ್ದು ಬಿಸಿಲೇ ಇರಲಿಲ್ಲ. ಬಂಡೆಯ ಮೇಲೆ ice-cold ಗಾಳಿ ಜೋರಾಗಿ ಬೀಸುತ್ತಿತ್ತು. ಅಲ್ಲೇ ಕುಳಿತು ನಾವು ಹಲವಾರು ಫೋಟೋ ತೆಗೆದೆವು. ಮಂಗಗಳಿಗೆ ಹೆದರಿ ಆಹಾರ ತಾರದ ಕಾರಣ ಅಲ್ಲೇ ಚರುಮುರಿ ಕೊಂಡು ತಿನ್ನಬೇಕಾಯಿತು. ಎರಡು ಮೂರು ಲೋಟ ಮಜ್ಜಿಗೆ ನೀರೂ ಕುಡಿದೆವು. ಸಮಯ ಹೋಗಬೇಕೆಂದು ಸೂಚನೆ ಕೊಡುತ್ತಿದ್ದರೂ ಮನಸು ಕೇಳುತ್ತಲೇ ಇರಲಿಲ್ಲ. ಇನ್ನೊಂದು ಸ್ವಲ್ಪ ಹೊತ್ತು ಕೂತಿರಬೇಕು ಎನಿಸುತ್ತಿತ್ತು. ಬಂಡೆಯ ಮೇಲಿಂದ ಸುಮ್ಮನೇ ಕೆಳಗೆ ನೋಡುತ್ತ ಕುಳಿತುಕೊಳ್ಳುವುದು ಬಹಳ ಆನಂದ ನೀಡುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಮನಸನ್ನು ಇನ್ನು ಮರಳುವುದು ಒಳಿತು ಎಂದು ಸಮಾಧಾನಪಡಿಸಿ ಇಳಿಯಲು ಆರಂಭಿಸಿದೆವು.&lt;br /&gt;&lt;br /&gt;ಇಳಿಯುವಿಕೆ ನಾವು ಯೋಚಿಸಿದಷ್ಟು ಸುಲಭವಾಗಿರಲಿಲ್ಲ. ನಾನು ಹಾಕಿದ ಸಾದಾ ಚಪ್ಪಲಿ ಹತ್ತುವಾಗ ಏನೂ ತೊಂದರೆ ಕೊಡದಿದ್ದರೂ ಇಳಿಯುವಾಗ ಬಹುವಾಗಿ ಕಾಡಿತು. ಇಳಿಜಾರಿನಲ್ಲಿ ಇಳಿಯುವಾಗ ಕಾಲು ಜಾರುವುದರಿಂದ ಚಪ್ಪಲಿಯ ಎದುರಿನ ಪಟ್ಟಿ ಮೊದಲ ಎರಡು ಬೆರಳುಗಳ ನಡುವೆ ನೋಯುವಷ್ಟು ಒತ್ತಡ ಹಾಕುತ್ತಿತ್ತು. ಅದಲ್ಲದೆ ಇಳಿಯುವಾಗ ಪಾದಗಳು ನಡುಗುತ್ತಿದ್ದವು. ನಡುಗುತ್ತಿರುವ ಪದಗಳಲ್ಲಿ ಹಿಡಿತವಿಲ್ಲದ ಚಪ್ಪಲಿ ಹಿಡಿಯುವುದು ಬಹಳ ತ್ರಾಸದಾಯಕವಾಗಿತ್ತು. ಇಳಿಯುತ್ತಾ ಪುನಃ ಒಳಕಲ್ಲು ತೀರ್ಥಎದುರಾಯಿತು. ಅಲ್ಲಿ ಈಗ ಲೈಟ್ ಹಾಕಿದ್ದರು. ತಲೆಗೆ ನಾಲ್ಕು ರೂಪಾಯಿಯಂತೆ ಕೊಟ್ಟು ಗುಹೆಯಂತಿದ್ದ ಬಂಡೆಯ ಒಳ ಹೊಕ್ಕೆವು. ಸುಮಾರು ಹತ್ತು ಅಡಿ ದೂರದ ವರೆಗೆ ಒಂದಡಿ ನೀರು ತುಂಬಿದ್ದ ಹಾದಿಯಲ್ಲಿ ನಡೆದಾಗ ದೇವರ ಎರಡು ಮೂರ್ತಿಗಳು ಕಂಡವು. ಮೂರ್ತಿಗಳ ಹಿಂದೆ ಎಡಕ್ಕೆ ಬಂಡೆಯಲ್ಲಿ ಒಂದು ಕೊಳವೆಯಂತಹ ಆಳದ ತೂತು ಇದ್ದು ಅದರೊಳಗೆ ಅನೇಕರು ಕೈ ಹಾಕುತ್ತಿದ್ದರು. ನಾನು ಅದರತ್ತ ಗಮನ ಕೊಡದೆ ಮುಂದುವರಿದೆ. ಕೃಷ್ಣನಿಗೆ ಅದರೊಳಗೆ ಕೈ ಹಾಕಿದಾಗ ನೀರು ಸಿಕ್ಕಿತಂತೆ. ಅಲ್ಲಿಂದ ಬಂದ ಮೇಲೆ ಬಂಡೆಯೊಳಗೆ ತೀರ್ಥ ಸಿಗುವುದು ಶುಭವೆಂದೂ, ನೀರನ್ನು ಮುಟ್ಟಿದವರು ಅದೃಷ್ಟವಂತರೆಂದೂ ನಂಬಿಕೆಗಳಿವೆ ಎಂದು ಒಬ್ಬರು ಹೇಳಿದರು. ನಾನೂ ಪ್ರಯತ್ನಿಸಬಹುದಿತ್ತು ಎಂದು ಆಗ ಬಹುವಾಗಿ ಅನಿಸಿತು. &lt;br /&gt;&lt;br /&gt;ಗುಡ್ಡದ ಮೇಲಿಂದ ತಳ ತಲುಪಲು ನಮಗೆ ಒಂದು ಗಂಟೆ ಹಿಡಿಯಿತು. ಬಂಡೆಯನ್ನು ಹತ್ತುತ್ತಾ ಇಳಿಯುತ್ತಾ ಅನೇಕ ಸ್ಥಳೀಯರು ಸಿಗುತ್ತಿದ್ದರು. ಇವರು ಏನೂ ಮುಜುಗರವಿಲ್ಲದೆ ದುಡ್ಡು ಕೇಳುತ್ತಿದ್ದರು. ನಾವು ಹೀಗೇ ಅಲ್ಲಲ್ಲಿ ದುಡ್ಡು ಕೇಳಿದವರಿಗೆ ಒಂದೈದು ರುಪಾಯಿ ಕೊಡುತ್ತಾ ಕೆಳ ಬಂದಾಗ ಮೂವತ್ತೈದು ರೂಪಾಯಿ ಖಾಲಿಯಾಗಿತ್ತು!  &lt;br /&gt;&lt;br /&gt;ಅಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿ ಕೊಳವೊಂದಿತ್ತು. ಅದರ ಹತ್ತಿರ ಹೋಗಿ ನೋಡಿದರೆ ದೂರದಿಂದ ಕಂಡ ಸೌಂದರ್ಯವೇ ಇರಲಿಲ್ಲ. ಕೊಳದ ಮೂಲೆಗಳಲ್ಲಿ ಪ್ಲಾಸ್ಟಿಕ್ ಮತ್ತು ಕಸ ಜಮೆಯಾಗಿತ್ತು. ಬೆಟ್ಟ ಹತ್ತುವಾಗಲೂ ಕಸಕ್ಕೆ, ಪ್ಲಾಸ್ಟಿಕ್ ಬಾಟಲಿಗಳಿಗೆ ಕೊರತೆಯಿರಲಿಲ್ಲ. ಎಲ್ಲೆಲ್ಲಿ ಕಸ ಎಸೆಯಬಾರದೆಂಬ ಬೋರ್ಡ ಇತ್ತೋ ಅವನ್ನು ಅಣಕಿಸುವಂತೆ ಅಲ್ಲೇ ಕಸ ರಾಶಿ ಬಿದ್ದಿತ್ತು. ಜನರಿಗೆ ಯಾವಾಗ ಬುದ್ಧಿ ಬರುವುದೋ ಎಂದು ಬೇಸರಿಸಿಕೊಂಡೆ. ನಾವು ಸ್ವಲ್ಪ ಹೊತ್ತು ಅಲ್ಲೇ ಅತ್ತಿತ್ತ ಅಡ್ಡಾಡಿದೆವು. ಹತ್ತಿರದಲ್ಲಿ ಕೆಲವು ಹೊಲಗಳಿದ್ದವು. ನಾನು ಮೊದಲ ಬಾರಿಗೆ ಕ್ಯಾಬೇಜಿನ ಹೊಲ ನೋಡಿದೆ. ಅನತಿ ದೂರದಲ್ಲಿ ಪ್ರವಾಸಿಗಳ ಉಪಯೋಗಕ್ಕೆ pay and use toilets ಇರುವುದು ಕಂಡಿತು. ನಮಗೆ ಹಸಿವೆಯಾಗಲಾರಂಭಿಸಿತ್ತು. ಚಿಕ್ಕ ಹಳ್ಳಿಯಂತಿದ್ದ ಆ ಜಾಗದಲ್ಲಿ ಊಟಕ್ಕೆ ಸರಿಯಾದ ವ್ಯವಸ್ಥೆಯೇನೂ ಕಾಣಿಸಲಿಲ್ಲ. ಡಾಬಸ್ ಪೇಟೆಯ ಕಾಮತ್ ಉಪಚಾರವೇ ಗತಿ ಎಂದು ಅನ್ನಿಸಿತು. ಹಾಗೇ ಗುಡ್ಡವನ್ನು ನೋಡುತ್ತಾ ಮರಳಿ ಹೊರಟೆವು. &lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_KKfkb37kvUA/TSWkbdOk6cI/AAAAAAAACxE/FyVP7-9vU_M/s1600/DSC08943_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/_KKfkb37kvUA/TSWkbdOk6cI/AAAAAAAACxE/FyVP7-9vU_M/s320/DSC08943_1.jpg" border="0" alt=""id="BLOGGER_PHOTO_ID_5559030106667936194" /&gt;&lt;/a&gt;&lt;br /&gt;&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_KKfkb37kvUA/TSWj14OqdPI/AAAAAAAACw0/UrgLK1N9U6Y/s1600/DSC08950_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/_KKfkb37kvUA/TSWj14OqdPI/AAAAAAAACw0/UrgLK1N9U6Y/s320/DSC08950_1.jpg" border="0" alt=""id="BLOGGER_PHOTO_ID_5559029461081027826" /&gt;&lt;/a&gt;&lt;br /&gt;&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_KKfkb37kvUA/TSWkBfDmWhI/AAAAAAAACw8/L5Hssz2LBXI/s1600/DSC08949_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://3.bp.blogspot.com/_KKfkb37kvUA/TSWkBfDmWhI/AAAAAAAACw8/L5Hssz2LBXI/s320/DSC08949_1.jpg" border="0" alt=""id="BLOGGER_PHOTO_ID_5559029660482165266" /&gt;&lt;/a&gt;&lt;br /&gt;&lt;br /&gt;ಡಾಬಸ್ ಪೇಟೆಯ ಕಾಮತ್ ಉಪಚಾರದ ಬಳಿ ಬಂದಾಗ ನಾಲ್ಕು ಗಂಟೆಯಾಗಿತ್ತು. ಅಲ್ಲಿ ದೋಸೆಗಳು ಮತ್ತು ಇಡ್ಲಿ-ವಡೆ ಮಾತ್ರ ಇತ್ತು. ಊರ ಹೊರಗಿನ ಹೋಟೆಲು, ಪ್ರವಾಸಿಗಳಿಂದ ಮಾತ್ರ ನಡೆಯ ಬೇಕಿದ್ದಂತೆ ಕಾಣುತ್ತಿದ್ದ ಕಾಮತ್ ಉಪಚಾರದಿಂದ ನಮಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಇಷ್ಟರವರೆಗೆ ರಾಗಿ ದೋಸೆ ತಿಂದಿರದ ನಮಗೆ ಅದರ ರುಚಿ ನೋಡೋಣ ಎನಿಸಿತು. ರವಾ ದೋಸೆಯಂತೆ ತಯಾರಿಸಿದ್ದ ರಾಗಿ ದೋಸೆ ನಿರೀಕ್ಷೆಯನ್ನು ಮೀರಿ ಚೆನ್ನಾಗಿತ್ತು. (ಆ ನಂತರ ನಾನು ಬೇರೆ ಕಡೆ ರಾಗಿ ದೋಸೆ ತಿಂದಿದ್ದರೂ ರುಚಿ ಅಂಥಾ ಅದ್ಭುತವಿರಲಿಲ್ಲ). ಅದರ ನಂತರ ಮಸಾಲೆ ದೋಸೆ ತರಹೇಳಿ, ಅದು ಬಲು ಉಪ್ಪಾಗಿದ್ದು, ಏಕೆ order ಮಾಡಿದೆನೋ ಎಂದುಕೊಂಡು ತಿಂದದ್ದು ಬೇರೆ ವಿಚಾರ.  &lt;br /&gt;&lt;br /&gt;ಅಲ್ಲಿಂದ ಮತ್ತೊಮ್ಮೆ NICE road ಹಿಡಿದು ವೇಗವಾಗಿ ಮನೆಯತ್ತ ಸಾಗಿದೆವು. ಸೂರ್ಯ ಕಂತಿ, ದೂರದಿಂದ ಕಾಣುತ್ತಿದ್ದ ಬೆಂಗಳೂರಿನ ಒಂದು ಪಾರ್ಶ್ವದಲ್ಲಿ ದೀಪಗಳು ಉರಿಯಲಾರಂಭಿಸಿದವು. ಒಂದು ಸುಂದರ ಪ್ರಯಾಣ ಕೊನೆಮುಟ್ಟುತ್ತಲಿತ್ತು. ಶಿವಗಂಗೆ ಹಾಗೂ ಅಂತಹಾ ಸ್ಥಳಗಳಿಗೆ ಆಗಾಗ ಹೋಗುತ್ತಾ ಇರಬೇಕು ಎನಿಸುತ್ತಿತ್ತು. ಹಾಗೇ ದಿನವನ್ನು ಮೆಲುಕು ಹಾಕುತ್ತಾ ಸೀಟಿಗೆ ಒರಗಿದೆ. ಮನೆಯಲ್ಲಿ ಮಾಡಲಿದ್ದ ಕೆಲಸಗಳು ನೆನಪಾಗತೊಡಗಿದವು. ಮರುದಿನ ಬರಲಿದ್ದ ನನ್ನ ಸಂಬಂಧಿಯೊಬ್ಬಳಿಗೆ ಏನು ಅಡುಗೆ ತಯಾರಿಸುವುದು ಎಂದು ಯೋಚಿಸುತ್ತಾ ಗಾಳಿಗೆ ಮುಖವೊಡ್ಡಿ ಕೂತೆ. &lt;br /&gt;-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-3394805543865712488?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/3394805543865712488/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=3394805543865712488' title='8 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/3394805543865712488'/><link rel='self' type='application/atom+xml' href='http://www.blogger.com/feeds/2942048231899528037/posts/default/3394805543865712488'/><link rel='alternate' type='text/html' href='http://chaithrika.blogspot.com/2011/01/blog-post.html' title='ಶಿವಗಂಗಾ ಚಾರಣ'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_KKfkb37kvUA/TSWijSxkK7I/AAAAAAAACwU/porhEzC02n4/s72-c/DSC08822_1.JPG' height='72' width='72'/><thr:total>8</thr:total></entry><entry><id>tag:blogger.com,1999:blog-2942048231899528037.post-3711230223331001024</id><published>2010-10-18T17:49:00.002+05:30</published><updated>2010-10-18T17:54:42.215+05:30</updated><category scheme='http://www.blogger.com/atom/ns#' term='ಕಷ್ಟ'/><category scheme='http://www.blogger.com/atom/ns#' term='ಖುಷಿ'/><title type='text'>ಕಷ್ಟವಿಲ್ಲದಿದ್ದರೆ ಖುಷಿ ಪಡಿ</title><content type='html'>ಆಫೀಸಿನಲ್ಲಿ ಬಹು ದಿನಗಳ ನಂತರ ಇಷ್ಟದ ಕೆಲಸ ಮಾಡುತ್ತಿದ್ದೆ. ನಾನು ಬರೆಯುತ್ತಿದ್ದ program ಗೆ ನಾನು ಬಳಸುತ್ತಿದ್ದ programming language ಬೇಕಾದಷ್ಟು API ಗಳನ್ನು ಕೊಟ್ಟು ನನ್ನ ಕೆಲಸ ಸುಲಭ ಮಾಡಿತ್ತು. (API = ನಾವು computer ಜೊತೆ ವ್ಯವಹರಿಸಲು ಸುಲಭವಾಗಲು ಅದಕ್ಕೆ ಸಂಬಂಧ ಪಟ್ಟ ಕೆಲವು ಸೂಚನೆಗಳು ಮೊದಲೇ ಲಭ್ಯವಿರುತ್ತವೆ. ನಾವು ಅದನ್ನು ಬಳಸಿ ಆ ಯಂತ್ರದ ಬಗೆ್ಗೆ ಬೇಕಾದ ಮಾಹಿತಿ ಪಡೆದು ನಮ್ಮ program ರಚಿಸಬಹುದು). ಹಾಗೇ ಟೈಪ್ ಮಾಡುತ್ತಾ "ಆಹಾ... ಇದರಲ್ಲಿ program ಬರೆಯುವುದೆಂದರೆ ಆಟವಾಡಿದಂತಾಗುತ್ತದೆ" ಎಂದು ಖುಷಿಯಿಂದ ಉದ್ಗರಿಸಿದೆ. ನನ್ನ ಪಕ್ಕ ಕುಳಿತಿದ್ದಾತ ಅದನ್ನು ಕೇಳಿ "ಹೌದೌದು... ನಿನ್ನ ಕೆಲಸ ಕಷ್ಟವಿಲ್ಲದೆ ನಡೆಯುತ್ತಿದ್ದರೆ ಖುಷಿ ಆಗದೆ ಇನ್ನೇನು" ಎಂದ. ನನಗೆ ನನ್ನ ಕೆಲಸ ಸುಲಭವಾಗಿದೆ ಎಂದು ಕೇಳಿದ ತಕ್ಷಣ ಮನಸಲ್ಲಿ ಸಿಟ್ಟು ಮಿಂಚಿದಂತಾಯಿತು. "ಯಾರು ಹೇಳಿದ್ದು? ತಾವು ಮಾಡುವ ಕೆಲಸ ಕಷ್ಟವೆಂದು ಬೇರೆಯವರದ್ದನ್ನು ಸುಲಭವೆನ್ನಬೇಕಿಲ್ಲ. ಎಲ್ಲರೂ ಅವರವರ ರೀತಿಯಲ್ಲಿ ಕಷ್ಟಪಡುತ್ತಾರೆ" ಎಂದೇನೋ ಹೇಳಿ ಸುಮ್ಮನಾದೆ.  ಸಂಜೆ ಬಸ್ ನಲ್ಲಿ ಮನೆಗೆ ಹೋಗುವಾಗ ಬೆಳಗ್ಗಿನ ವಿಚಾರ ನೆನಪಿಗೆ ಬಂತು. ನನ್ನ ಕೆಲಸ ಸುಲಭವಿದೆ ಎಂದ ತಕ್ಷಣ ನನಗೆ ಸಿಟ್ಟು ಬಂದದ್ದು ಏಕೆ? ಕೆಲಸ ಸುಲಭವಿದೆ ಎಂದಾಗ ನನಗೆ ಕೀಳರಿಮೆಯೇಕೆ ಅನಿಸಿದೆ? ಕಷ್ಟವು ನನಗೆ ಇಷ್ಟವಾಗಿದೆಯೇ? ಕೆಲಸ ಸುಲಭವಾದರೆ ಸಂತೋಷವಾಗಬೇಕು ತಾನೇ? ಯೋಚನೆಗಳು ಸುಳಿದಾಡಿದವು. &lt;br /&gt;&lt;br /&gt;ಏಳೆಂಟು ವರ್ಷಗಳ ಹಿಂದೆ ನಾನು engineering ವಿದ್ಯಾರ್ಥಿಯಾಗಿದ್ದೆ. ಆಗ ಅನೇಕರು electronics engineering ಬಲು ಕಷ್ಟ, civil engineering ಅಂತೂ ಕಬ್ಬಿಣದ ಕಡಲೆ, computer engineering ಸುಲಭ ಎಂದೆಲ್ಲ ತೋಚಿದಂತೆ ಮಾತನಾಡುತ್ತಿದ್ದರು. ನನಗೆ ಆಗ ಸಿಟ್ಟು ಬರುತ್ತಿತ್ತು. ನನ್ನಂತೆ ಅನೇಕ ಸಹಪಾಠಿಗಳಿಗೂ ಸಿಟ್ಟುಬರುತ್ತಿತ್ತು. ನಾವೆಲ್ಲ "computer engineering ಸುಲಭವಿಲ್ಲವೇ ಇಲ್ಲ" ಎಂದು ವಾದಕ್ಕಿಳಿಯುತ್ತಿದ್ದೆವು. ಸುಲಭವೆಂದರೆ ತೊಂದರೆಯೇನಿತ್ತು ಎಂದು ನನಗೆ ಈಗ ಅನಿಸುತ್ತದೆ. ಕಬ್ಬಿಣದ ಕಡಲೆ ಜಗಿದು ಹಲ್ಲು ಮುರಿದುಕೊಳ್ಳುವುದಕ್ಕಿಂತ ಬೆಣ್ಣೆ ಮೆಲ್ಲುವುದರಲ್ಲಿ smartness ಇಲ್ಲವೇ? ಕಷ್ಟದ ವಿಷಯ ಆರಿಸಿ ಸೋಲುವುದರಿಂದ ನಾನು ಪಾರಾಗಿದ್ದೇನೆ ಎಂಬುದನ್ನು ನಾನು ಜಾಣ್ಮೆಎಂದು ಪರಿಗಣಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ಆಶ್ಚರ್ಯಪಡುತ್ತೇನೆ.&lt;br /&gt;&lt;br /&gt;ಬಹುಶಃ ನಮಗೆ ಕಷ್ಟ ಅನುಭವಿಸಲು ಇಷ್ಟವಿದೆ. ಕಷ್ಟ ಪಟ್ಟರೆ ನಾನು great ಆಗುತ್ತೇನೆ ಎಂಬ ಭಾವನೆ ಮನಸಿನೊಳಗೆಲ್ಲೋ ಬೇರೂರಿಬಿಟ್ಟಿದೆ. ಯಾಕೆ? ಹೇಗೆ? ಗೊತ್ತಿಲ್ಲ. ಹೆಚ್ಚಿನ ವ್ಯಕ್ತಿಗಳ ಮನದೊಳಗೆ ಅರಿವೇ ಇರದಂತೆ ಈ ಭಾವನೆ ಅಡಗಿ ಕೂತಿದೆ. ಅದಕ್ಕೇ ನಮಗೆ ಸಂತೋಷ ಅನುಭವಿಸಲು ಹಿಂಜರಿಯುವ ಜನರು ಕಾಣುತ್ತಾರೆ. ಅಂಗಡಿಯಲ್ಲಿ ಕಿಕ್ಕಿರಿದು ಗಿರಾಕಿಗಳು ತುಂಬಿದ್ದರೂ "ವ್ಯಾಪಾರ ಏನೂ ಚೆನ್ನಾಗಿಲ್ಲ" ಎಂದು ಸದಾ ಗೋಳಾಡುವ ವ್ಯಾಪಾರಿಗಳನ್ನು ನಾನು ನೋಡಿದ್ದೇನೆ. "ಕಷ್ಟ ಪಟ್ಟು" ಜೀವನದಲ್ಲಿ ಮೇಲೆ ಬಂದವನನ್ನು ಜನರು ನೋಡುವ ಪರಿಗೂ "ಕಷ್ಟ ಪಡದೆ" ಮೇಲೆ ಬಂದವನನ್ನು ನೋಡುವ ಪರಿಗೂ ಬಹಳ ವ್ಯತ್ಯಾಸ ಕಾಣುತ್ತದೆ. "ಪಾಪ ಕಷ್ಟದಲ್ಲಿದ್ದಾರೆ" ಎನ್ನುವಾಗ ಕನಿಕರ ಪಡುವ ಹೃದಯ ಸುಖದಲ್ಲಿದ್ದವರನ್ನು ಕಂಡಾಗ ಸಂತಸಪಡುವುದಿಲ್ಲ. ಬೀದಿ ದೀಪದಡಿ ಓದಿ ಡಿಗ್ರಿ ಪಡೆದವ IIMನಲ್ಲಿ MBA ಮಾಡಿದವನ ಮುಂದೆ star ಆಗಿ ಕಾಣುತ್ತಾನೆ. ಯಾಕೆ?&lt;br /&gt;&lt;br /&gt;ನಮ್ಮ ಮಕ್ಕಳು ಕಷ್ಟಪಡುವ ಪರಿಸ್ಥಿತಿ ಬರಬಾರದೆಂದು ನಾವೆಲ್ಲರೂ ಬಯಸುತ್ತೇವೆ. ಮುಂದೆ ಕೆಲ ಸಂದರ್ಭಗಳಲ್ಲಿ ಇತರನ್ನು "ಕಷ್ಟಗಳು ಏನೆಂದೇ ಗೊತ್ತಿಲ್ಲ" ಎಂದು ಮೂದಲಿಸುತ್ತೇವೆ. ಆದರೆ ಕಷ್ಟಗಳು ಗೊತ್ತಾಗಬಾರದೆನ್ನುವುದು ನಮ್ಮದೂ ಬಯಕೆಯಾಗಿರಲಿಲ್ಲವೇ? ನಮ್ಮ ನೆಂಟರೊಬ್ಬರು "ನಮ್ಮ ಬಳಿ ಬೇಕಾದಷ್ಟು ಅನುಕೂಲ (ಹಣ) ಇದೆ." ಎಂದು ಹೇಳುತ್ತಿರುತ್ತಾರೆ. ಅವರನ್ನು ನೋಡಿದವರು ಮೆರೆದಾಟ, ಜಂಭ ಕೊಚ್ಚಿಕೊಳ್ಳುವುದು ಎಂದು ಭಾವಿಸುತ್ತಾರೆ. ಅದೇ ಎಷ್ಟೋ ಜನ "ನಾವು ಬಹಳ ಕಷ್ಟದಲ್ಲಿದ್ದೇವೆ" ಎಂದಾಗ  ಕಷ್ಟವನ್ನು "ಕೊಚ್ಚಿಕೊಳ್ಳುವುದು" ಎಂದು ಭಾವಿಸುವುದೇ ಇಲ್ಲ. ಏಕೆಂದರೆ ಕಷ್ಟ ನಮಗೆಲ್ಲ ಬಲು ಪ್ರಿಯ. ನಮ್ಮದಾಗಲೀ ಇತರರದ್ದಾಗಲೀ ಕಷ್ಟವೆಂದರೆ ಎಲ್ಲರಿಗೂ ಇಷ್ಟ. ಕಷ್ಟ ಪಟ್ಟು ಪಡೆದುದರ ಬಗ್ಗೆ ಯಾವತ್ತೂ ಹೆಮ್ಮೆ. ಹಾಗಾದರೆ ನಾವು ಸುಖಪಡುವುದು ಯಾವಾಗ?&lt;br /&gt;&lt;br /&gt;ಯೋಚನೆ ಓಡುತ್ತಿದ್ದರೆ ಬಸ್ ನಿಲ್ದಾಣ ಬಂತು. ನೂಕು ನುಗ್ಗಲನಲ್ಲಿ ಇನ್ನೊಂದು ಬಸ್ ಹತ್ತಿ ಕಷ್ಟಪಟ್ಟು... ಅಲ್ಲಲ್ಲ ಖುಷಿಯಿಂದಲೇ ಸೀಟು ಹಿಡಿದೆ. ಮನೆ ತಲುಪುವವರೆಗೆ ಪುನಃ ಯೋಚನೆಯಲ್ಲಿ ಮುಳುಗಿದೆ. ಕಷ್ಟವಾದರೇನು ಸುಲಭವಾದರೇನು? ನಾವು ಮಾಡುವ ಕೆಲಸ ನಮಗೆ ಖುಷಿ ಕೊಡಬೇಕು ಅನಿಸಿತು. ಆಗ ಅಲ್ಲಿ ಕಷ್ಟವಿದ್ದರೂ ಹಾಗೆ ಅನಿ್ನಸುವುದಿಲ್ಲ. ಕಷ್ಟದ ವೈಭವೀಕರಣವಾಗಲೀ, ಸುಲಭದಿಂದ ಪಡೆದುದರ ಬಗ್ಗೆ ಕೀಳರಿಮೆಯಾಗಲೀ ಅಲ್ಲಿ ಉಂಟಾಗುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾದುದು ಖುಷಿಯಲ್ಲವೇ? ಖುಷಿ ಸಿಕ್ಕಾಗ ಅನುಭವಿಸಲೇನು ಕಷ್ಟ?&lt;br /&gt;-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-3711230223331001024?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/3711230223331001024/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=3711230223331001024' title='3 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/3711230223331001024'/><link rel='self' type='application/atom+xml' href='http://www.blogger.com/feeds/2942048231899528037/posts/default/3711230223331001024'/><link rel='alternate' type='text/html' href='http://chaithrika.blogspot.com/2010/10/blog-post_18.html' title='ಕಷ್ಟವಿಲ್ಲದಿದ್ದರೆ ಖುಷಿ ಪಡಿ'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>3</thr:total></entry><entry><id>tag:blogger.com,1999:blog-2942048231899528037.post-6346367562262363831</id><published>2010-10-07T14:42:00.001+05:30</published><updated>2010-10-07T14:43:49.052+05:30</updated><title type='text'>ನಾನು</title><content type='html'>ಈ ಬ್ಲಾಗು ಆರಂಭಿಸಿದಾಗ ನಾನು ಅನಾಮಿಕಳಾಗಿರಬೇಕೆಂದು ಬಯಸಿದ್ದೆ. ನನ್ನ ಬರಹಗಳಿಗೆ ಪ್ರತಿಕ್ರಿಯೆ ಬರೆಯುವವರು ನನ್ನ ಪರಿಚಿತರಾಗಿದ್ದರೆ ಪ್ರತಿಕ್ರಿಯೆ ಬೇರೆ ರೀತಿ ಇದ್ದೀತು ಎಂದು ಯೋಚಿಸಿದ್ದೆ. ನನ್ನ ಸಂಬಂಧಿಗಳಿಗೆ ನನ್ನ ಬರಹಗಳನ್ನು ಓದುವ ಅವಕಾಶವಿದ್ದರೆ ನಾನು ಬರಹಗಳಲ್ಲಿ ಜಾಗರೂಕತೆಯಿಂದ ವರ್ತಿಸಬೇಕಾದೀತೆಂದು ಹೆದರಿದ್ದೆ. &lt;br /&gt;ಬ್ಲಾಗಿಗೆ ಮೂರು ವರುಷ ತುಂಬುವುದಕ್ಕೆ ಬಂದಿದೆ. ಈಗ ಅನೇಕ ಸಂಬಂಧಿಕರು, ಮಿತ್ರರು, ಪರಿಚಿತರು ಇದನ್ನು ಓದುತ್ತಾರೆ. ಜೊತೆಗೆ ಪರಿಚಿತರಲ್ಲದವರೂ ಓದಿ ಪ್ರತಿಕ್ರಿಯೆ ಬರೆದು ಪರಿಚಿತರಾಗಿದ್ದಾರೆ. ಬ್ಲಾಗು ನನ್ನದೆಂದು ಗೊತ್ತಾದ ಮೇಲೂ ಓದಲು ಆಸಕ್ತಿ ತೋರಿಸದ ಕೆಲ ಬಂಧುಗಳು ಇದ್ದಾರೆ. ಇಷ್ಟು ಸಮಯದ ನಂತರ ನಾನು ಅನಾಮಿಕಳಾಗಿರುವ ಬಯಕೆ ಅರ್ಥಹೀನವೆನಿಸುತ್ತದೆ. &lt;br /&gt;ಹಾಗಾಗಿ ನನ್ನ ನಿಜ ಹೆಸರು ಹಾಕುತ್ತಿದ್ದೇನೆ. ನನ್ನ ಹೆಸರು ಸಿಂಧೂ. ಇತಿಹಾಸದಲ್ಲಿ ಅತ್ಯಂತ ಆಸಕ್ತಿ ಇರುವ ನನ್ನ ತಂದೆಯವರು ಪ್ರೀತಿಯಿಂದ ಆರಿಸಿದ ಹೆಸರು. ಹಾಗಾದರೆ ಚೈತ್ರಿಕಾ ಎಂಬ ಹೆಸರು ಎಲ್ಲಿಂದ ಸಿಕ್ಕಿತೆಂದು ಆಶ್ಚರ್ಯವೇ? ಅದೂ ನನ್ನದೇ ಹೆಸರು. ನನಗೆ ಇಡದ ಹೆಸರು. ಪೂಜೆ, ದೇವರ ಸಮಾರಂಭಗಳನ್ನು ನಡೆಸಿಕೊಡುವ ಭಟ್ಟರು ಸೂಚಿಸಿದ ಹೆಸರು ಅದು. ನನಗೆ ಚೈತ್ರಿಕಾಳಾಗಿಯೇ ಬ್ಲಾಗಿನಲ್ಲಿರಬೇಕೆಂಬ ಆಸೆಯಾದರೂ ನಿಜ ಹೆಸರು ಕಳೆದುಹೋದರೆ ಎಂದು ಒಮ್ಮೊಮ್ಮೆ ಅನಿಸಿದ್ದಕ್ಕೆ ಇಲ್ಲಿ ಬರೆದಿದ್ದೇನೆ. ನನ್ನ ಹೆಸರು ಏನೇ ಆದರೂ ಓದುವವರಿಗೆ ಅದು ಮುಖ್ಯವಲ್ಲ ಎಂದೂ ಭಾವಿಸಿದ್ದೇನೆ.&lt;br /&gt;-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-6346367562262363831?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/6346367562262363831/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=6346367562262363831' title='7 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/6346367562262363831'/><link rel='self' type='application/atom+xml' href='http://www.blogger.com/feeds/2942048231899528037/posts/default/6346367562262363831'/><link rel='alternate' type='text/html' href='http://chaithrika.blogspot.com/2010/10/blog-post.html' title='ನಾನು'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>7</thr:total></entry><entry><id>tag:blogger.com,1999:blog-2942048231899528037.post-6358417293782453177</id><published>2010-09-27T16:44:00.007+05:30</published><updated>2010-09-27T19:46:44.044+05:30</updated><category scheme='http://www.blogger.com/atom/ns#' term='parking'/><category scheme='http://www.blogger.com/atom/ns#' term='ಮಂತ್ರಿ ಮಾಲ್'/><category scheme='http://www.blogger.com/atom/ns#' term='ಪರೀಕ್ಷೆ'/><category scheme='http://www.blogger.com/atom/ns#' term='smoothie'/><title type='text'>ಭಾನುವಾರದ ಟೈಂಪಾಸ್</title><content type='html'>ನಿನ್ನೆ ಭಾನುವಾರ ನನ್ನ ಅತ್ತಿಗೆ(ನಾದಿನಿ)ಗೆ ಒಂದು ಪರೀಕ್ಷೆ ಬರೆಯಲಿದ್ದ ಕಾರಣ ಅವರು ಪತಿ ಸಮೇತರಾಗಿ ಶನಿವಾರ ಮನೆಗೆ ಬಂದಿದ್ದರು. ಎಂ. ಎಸ್. ರಾಮಯ್ಯ ಕಾಲೇಜಿನಲ್ಲಿ ಹನ್ನೊಂದು ಗಂಟೆಗೆ ನಡೆಯಲಿದ್ದ ಪರೀಕ್ಷೆಗೆ ನಾವು ಒಂಭತ್ತು ಗಂಟೆಯೊಳಗಾಗಿ ಮನೆ ಬಿಡಬೇಕಿತ್ತು. ಏನೂ ಎಡವಟ್ಟಾಗದಂತೆ ಆರೂವರೆಗೆ ಎದ್ದ ನಾನು ಇಡ್ಲಿ ಬೇಯಲು ಇಟ್ಟು, ಸಾಂಬಾರಿಗೆ ತರಕಾರಿ ಬೇಯಲು ಇಟ್ಟು ಸುಮ್ಮನೆ ಕೂತೆ. ನಿದ್ದೆಯ ಜೊಂಪು ಹತ್ತಿತು. 5... 10... 15... 20... 30 ನಿಮಿಷ ಕಳೆದಾಗ ಕೃಷ್ಣನನ್ನು(ನನ್ನ ಪತಿ) ಸುಟ್ಟ ವಾಸನೆ ಬಡಿದೆಬ್ಬಿಸಿರಬೇಕು. "ಏ ಒಲೆಮೇಲೆ ಎಂತದ್ದು?" ಎಂದರು. ನಾನು ದಡಬಡ ಎದ್ದು ಓಡಿ ನೋಡಿದರೆ ತರಕಾರಿ ಸೀದು ತಳಕ್ಕಂಟಿದ್ದಲ್ಲದೆ ಪಾತ್ರೆಯ ತಳದಲ್ಲಿ ನೇರಳೆ ಬಣ್ಣದ ಶಾಶ್ವತ ಉಂಗುರ ಮೂಡಿತ್ತು. ಅತ್ತಿಗೆ ಮಾಡಿದ ಪುಣ್ಯವಿರಬೇಕು. ಇಡ್ಲಿ ಸರಿ ಇತ್ತು. ಪುನಃ ಹೊಸದಾಗಿ ಸಾಂಬಾರು ಮಾಡಿ ತಿಂದು ಒಂಭತ್ತು ಗಂಟೆಗೆ ಮನೆ ಬಿಟ್ಟೆವು.&lt;br /&gt;&lt;br /&gt; ಹತ್ತು ಗಂಟೆಗೆ ಎಂ. ಎಸ್. ರಾಮಯ್ಯ ಕಾಲೇಜು ತಲುಪಿಯಾಗಿತ್ತು. ಪರೀಕ್ಷಾ ಕೊಠಡಿ ಹುಡುಕಿ ಅದರ ಮುಂದೆ ಕುಳಿತಿರಬೇಕಾದರೆ ಅತ್ತಿಗೆ ಪುಸ್ತಕ ತೆರೆದರು. ನನಗೆ ಮಾಡಲು ಕೆಲಸವಿಲ್ಲ. ಜನರನ್ನು ನೋಡುತ್ತಾ ಕುಳಿತೆ. ಒಂದು ಮಹಿಳಾ ಗುಂಪು ತಮಗೆ ತೋಚಿದ ಪ್ರಶ್ನೋತ್ತರಗಳ ಕೊಡು-ಪಡೆಯುವಿಕೆ ನಡೆಸಿತ್ತು. ಇನ್ನೊಬ್ಬಳು ತಾನು ಉರುಹೊಡೆದುದನ್ನು ಪುನಃ ಹೇಳಿಕೊಳ್ಳುತ್ತಿರುವಂತಿತ್ತು. ಆಕೆ ಶೂನ್ಯ ದೃಷ್ಟಿಯಲ್ಲಿ ಮಾಡಿನ (ಛಾವಣಿ) ಮೂಲೆಯನ್ನು ನೋಡುತ್ತಾ ಉರುಹೊಡೆಯುತ್ತಿದ್ದರೆ ಅಲ್ಲೇ ಉತ್ತರಗಳು ಕಂಡಂತಿತ್ತು. ಮತ್ತೊಬ್ಬಳು ಲಿಪ್ ಸ್ಟಿಕ್ ಹಾಕಿ ಸಂಪೂರ್ಣ ಮೇಕಪ್ಪಿನೊಂದಿಗೆ ಪರೀಕ್ಷೆ ಬರೆಯಲು ಬಂದಿದ್ದಳು. ಒಬ್ಬರ ತಲೆಕೂದಲು ನೆಟ್ಟಗೆ ನಿಮಿರಿ ಕೆದರಿಕೊಂಡು ಚಾರ್ಜ್ ಆದ ಹಾಗೆ ಕಾಣುತ್ತಿದ್ದರು. ನನಗೆ ಪುನಃ ನಿದ್ದೆಯ ಜೊಂಪು ಹತ್ತುತ್ತಲಿತ್ತು. ಅಷ್ಟರಲ್ಲಿ ಪರೀಕ್ಷೆ ಆರಂಭವಾಗುವ ಗಂಟೆಯಾಯಿತು. ನಾವು ಮೂವರು ಅತ್ತಿಗೆಯನ್ನು ಬಿಟ್ಟು ಹೊರಬಂದೆವು.&lt;br /&gt;&lt;br /&gt;ಎರಡು ಗಂಟೆ ಕಾಲಹರಣ ಮಾಡಬೇಕಿತ್ತು. ಎಲ್ಲಿ ಹೋಗುವುದು ಎಂದುಕೊಂಡಾಗ ಮಂತ್ರಿ ಸ್ಕ್ವೇರ್ ನೆನಪಾಯಿತು. ಅಲ್ಲಿಗೆ ಹೋದೆವು. ಏನೂ ಕಲ್ಪನೆ ಹೊತ್ತು ಮಂತ್ರಿ ಹೊಕ್ಕ ನನಗೆ ಅಷ್ಟೇನೂ ವಿಶೇಷತೆ ಗೋಚರಿಸಲಿಲ್ಲ. ದೊಡ್ಡ ಕಟ್ಟಡದಲ್ಲಿ ತುಂಬಿದ ಅನೇಕಾನೇಕ ಅಂಗಡಿಗಳಂತೆ ಕಂಡಿತು. ಮಾಲ್ ಹೊಕ್ಕರೆ ಬೇಡದ ವಸ್ತುಗಳೂ ಅಗತ್ಯವೆನಿಸುತ್ತವೆ. ಸಧ್ಯಕ್ಕೆ ಒಂದು ಪೆನ್ ಡ್ರೈವ್ ಅತ್ಯಗತ್ಯ ವಸ್ತುವೆನಿಸಿತು. ಅದನ್ನು ಕೊಂಡಾಗುವಾಗ ಹೊಟ್ಟೆಯೊಳಗೆ ಹಸಿವು ಕುಣಿತ ಆರಂಭಿಸಿತು. ಅಲ್ಲೇ ಪಾನೀಯದ ಅಂಗಡಿ ಕಂಡಿತು. ಬ್ಲೂ ಬೆರ್ರಿ, ಸ್ಟ್ರಾ ಬೆರ್ರಿ, ರಾಸ್ಪ್ ಬೆರ್ರಿ smoothie ಹೇಳಿದೆವು. ಲೋಟಗಳು ಬಂದಾಗ ಎಲ್ಲ ಒಂದೇ ಬಣ್ಣ. ಬರೀ contrast ವ್ಯತ್ಯಾಸ ಅಷ್ಟೇ. ರುಚಿ? ಹುಳಿ ವ್ಯತ್ಯಾಸ ಅಷ್ಟೇ. ಹಲ್ಲು ಮುರಿಯುವಷ್ಟು ತಂಪು. ಕಾಲು ಲೀಟರು ಇದ್ದಿರಬಹುದು. 280 ರೂಪಾಯಿ ತೆತ್ತ ಕರ್ಮಕ್ಕೆ ಮುಗಿಸಬೇಕಾಯಿತು. ಲೋಟ ಅರ್ಧ ತುಂಬಿದೆ ಎಂದರೆ ಧನಾತ್ಮಕ ಚಿಂತನೆಯಂತೆ. ನಮಗಂತೂ "ಇನ್ನೂ ಅರ್ಧ ಬಾಕಿ ಇದೆ" ಎಂಬುದು ಋಣಾತ್ಮಕವೇ ಆಗಿತ್ತು. ಈ ಪೇಯಗಳು ಕೆಲವರಿಗೆ ಇಷ್ಟವಾದೀತೇನೋ. ನಾನು ಈ ವಿಷಯದಲ್ಲಿ ಹಿಂದುಳಿದ ವರ್ಗಕ್ಕೆ (ಕಾಲಮಾನದ ಪ್ರಕಾರ) ಸೇರಿದ್ದೇನೆ. &lt;br /&gt;&lt;br /&gt;ಸಮಯ ಮೀರಲಾರಂಭಿಸಿತ್ತು. ಪರೀಕ್ಷೆ ಮುಗಿಯುವ ಹೊತ್ತಿಗೆ ಎಂ. ಎಸ್. ರಾಮಯ್ಯ ತಲುಪಬೇಕಿತ್ತು. ಕೊನೆ ಮಹಡಿ ನೋಡಲಾಗಲಿಲ್ಲ. "ಮಂತ್ರಿ ಹೇಳುವಂಥಾ ವಿಶೇಷ ಕಾಣಲಿಲ್ಲ" ಎನ್ನುತ್ತಾ ನಾನು ಬರುತ್ತಿದ್ದರೆ parking area ದಲ್ಲಿ ಪೇಚಾಟಕ್ಕಿಟ್ಟುಕೊಂಡಿತು. parking ಚೀಟಿ ಕಾರಿನೊಳಗೇ ಉಳಿದಿತ್ತು. ನಿಲ್ಲಿಸಿದ ಜಾಗ ಎಷ್ಟು ಹುಡುಕಿದರೂ ಸಿಗದು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ನೋಡುತ್ತಿದ್ದರೆ ಕೃಷ್ಣ ನಾಪತ್ತೆ. ಅವನಿಗೆ ಫೋನ್ ಮಾಡಿದರೆ ನೆಟ್ ವರ್ಕ್ ಸಿಗದೆ call forward ಆಗಿ ನನ್ನ ಫೋನಿಗೇ ಬಂದು user busy ಎನ್ನುತ್ತಿತ್ತು. ಅಲ್ಲಿದ್ದ ಹಳದಿ ಸಮವಸ್ತ್ರಧಾರಿಯೊಬ್ಬನಲ್ಲಿ ಸಮಸ್ಯೆ ಹೇಳಿ ದಾರಿ ಕೇಳಿದೆವು. ಏನೋ ಒಂದು ಹೇಳಿ ಬೇರೆ ಕಡೆಗೆ ಹೋದ. ಅವನು ಹೇಳಿದ ಕಡೆ ಹೋದರೆ ಹೊರ ಹೋಗುವ ಮಾರ್ಗ ಕಂಡಿತು. ಸಿಟ್ಟು ಬಂದು ಬೈಯಬೇಕೆಸಿತು. ಆದರೆ ಅವನನ್ನೆಲ್ಲಿ ಹುಡುಕುವುದು? ಹತ್ತು ನಿಮಿಷ ಅಲೆದಾಡಿಯಾಗುವಾಗ ಕೃಷ್ಣ ನಡೆಯುತ್ತಿರುವುದು ಕಂಡಿತು. ಅತ್ತ ಓಡಿ ಇನ್ನೊಬ್ಬ ಹಳದಿ ಸಮವಸ್ತ್ರಧಾರಿಯನ್ನು ಸಹಾಯಮಾಡಲು ಕೇಳಿದೆವು. ಆತ ನಾವು ಬಂದ ಸಮಯ, ನಿಲ್ಲಿಸಿದ ಜಾಗದ ಅಕ್ಕ ಪಕ್ಕ ಏನಿತ್ತೆಂದು ಕೇಳಿ ಸರಿ ದಾರಿ ತೋರಿಸಿದ. ಸಧ್ಯ ಕಾರು ಸಿಕ್ಕಿತು. ಹೊರ ಬಂದಾಗ ಗಂಟೆ ಒಂದೂ ಕಾಲು ಆಗಿತ್ತು. ಎಂ. ಎಸ್. ರಾಮಯ್ಯ ತಲುಪಿದಾಗ ಅತ್ತಿಗೆ ಬಹಳ ಹೊತ್ತಿನಿಂದ ಕಾಯುತ್ತಿದ್ದರು. ಮಂತ್ರಿಯ parking areaದ ತಿರುಗಾಟದಲ್ಲಿ ಸಾಕು ಸಾಕಾಗಿತ್ತು. ಅತ್ತಿಗೆಯಲ್ಲಿ "ಮಂತ್ರಿ ಮಾಲ್ ಗೆ ಹೋಗಿದ್ದೆವು... parking lot ಸಿಕ್ಕಾಪಟ್ಟೆ ದೊಡ್ಡದಾಗಿದೆ" ಎಂದೆ.&lt;br /&gt;&lt;br /&gt;ಅತ್ತಿಗೆ, ಅಣ್ಣ ಅಲ್ಲಿಂದಲೇ ತಮ್ಮ ಮನೆಗೆ ಹೊರಡಲನುವಾದರು. "ಸ್ವಲ್ಪ urgent ಇದೆ, ದಾರಿಯಲ್ಲಿ ಊಟ ಮಾಡಿಕೊಂಡು ಹೋಗುತ್ತೇವೆ" ಎಂದರು. ನಾನು ಪುನಃ ತರಕಾರಿ, ಪಾತ್ರೆ ಸುಟ್ಟು ಹಾಕುವುದು ಬೇಡವೆಂದೋ ಏನೋ; ಗೊತ್ತಾಗಲಿಲ್ಲ. ನಮಗೆ ನನ್ನ ದೊಡ್ಡಮ್ಮನ ಮನೆಗೆ ಸಾಮಾನೊಂದನ್ನು ತಲುಪಿಸುವ ಕೆಲಸವಿತ್ತು. ಅಲ್ಲೇ ಊಟಕ್ಕೆ ಆಹ್ವಾನವೂ ಇತ್ತು. ಗಡದ್ದಾಗಿ ಬರ್ಫಿ, ದೊಣ್ಣೆ ಮೆಣಸಿನ (capsicum) ಭಾತ್, ಚಪಾತಿ, ಅಲೂ ಮಟರ್, ಅನ್ನ, ಸಾರಿನ ಊಟ ಮಾಡಿ ಮನೆಗೆ ಮರಳಿದೆವು.&lt;br /&gt;-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-6358417293782453177?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/6358417293782453177/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=6358417293782453177' title='6 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/6358417293782453177'/><link rel='self' type='application/atom+xml' href='http://www.blogger.com/feeds/2942048231899528037/posts/default/6358417293782453177'/><link rel='alternate' type='text/html' href='http://chaithrika.blogspot.com/2010/09/blog-post.html' title='ಭಾನುವಾರದ ಟೈಂಪಾಸ್'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>6</thr:total></entry><entry><id>tag:blogger.com,1999:blog-2942048231899528037.post-6091203860382290011</id><published>2010-09-16T19:28:00.000+05:30</published><updated>2010-09-16T19:29:43.986+05:30</updated><category scheme='http://www.blogger.com/atom/ns#' term='ಸಮಾನತೆ'/><category scheme='http://www.blogger.com/atom/ns#' term='Ladies seat'/><title type='text'>"Ladies seat" ನಿಂದ ಚಿಂತನಾಲಹರಿ...</title><content type='html'>ದಿನವೂ ಬಸ್ಸಿನಲ್ಲಿ ಕನಿಷ್ಟ ಎರಡು ಗಂಟೆ ಪ್ರಯಾಣಿಸುವ ನನ್ನನ್ನು "ಮಹಿಳೆಯರಿಗೆ" ಎಂದು ಬರೆದ ಫಲಕ ಆಗಾಗ ಚಿಂತನೆಗೆ ಹಚ್ಚುತ್ತದೆ. ನಮ್ಮೂರ ಕಡೆ (ದಕ್ಷಿಣ ಕನ್ನಡ) ಖಾಸಗಿ ಬಸ್ಸುಗಳೇ ಹೆಚ್ಚಾಗಿದ್ದು ಅಲ್ಲಿ ಈ Ladies seat ಫಲಕ ಅಷ್ಟಾಗಿ ಪ್ರಾಮುಖ್ಯ ಪಡೆದಿಲ್ಲ. ಕತ್ತಲ ವೇಳೆ ಪ್ರಯಾಣಿಸುತ್ತಿದ್ದಲ್ಲಿ ಅಥವಾ ಬೆರಳೆಣಿಕೆಯಷ್ಟೇ ಮಹಿಳೆಯರಿದ್ದರೆ ಈ ಸೀಟನ್ನು "ಕೇಳಿ ಪಡೆಯುವ" ಪ್ರಯತ್ನ ನಡೆಯುತ್ತದೆ. ಬೆಂಗಳೂರಲ್ಲಿ ಇದಕ್ಕೆ ವಿರುದ್ಧವಾದ ಪದ್ಧತಿ ಇರುವುದರಿಂದ ಮೊದಮೊದಲು ನನಗೆ ವಿಚಿತ್ರವೆನಿಸಿದ್ದು ಸಹಜ.&lt;br /&gt;&lt;br /&gt;ಬೆಂಗಳೂರಿನಲ್ಲಿ ನಾನು ನೋಡಿದಂತೆ ಈ ಮಹಿಳಾ ಸೀಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಇವನ್ನು ಅನೇಕ ಮಹಿಳೆಯರು "ಹಕ್ಕು" ಎಂದು ಭಾವಿಸುವುದು ವಿಚಿತ್ರವೆನಿಸುತ್ತದೆ. ಹಲವರು ಸ್ವಲ್ಪವೂ ಸೌಜನ್ಯವಿಲ್ಲದಂತೆ "ಎದ್ದೇಳ್ರೀ... ಲೇಡೀಸ್ ಸೀಟೂ" ಎಂದು ದೊಡ್ಡ ಸ್ವರದಲ್ಲಿ ಹೇಳುವುದನ್ನು ನಾನು ಕೇಳಿದ್ದೇನೆ. ಬೆಂಗಳೂರಿಗೆ ಹೊಸಬಳಾಗಿದ್ದಾಗ ಸೀಟು ಬಿಟ್ಟುಕೊಟ್ಟವರಿಗೆ thanks ಹೇಳಿ ಅಕ್ಕ ಪಕ್ಕದವರಿಂದ ವಿಚಿತ್ರವಾಗಿ ನೋಡಿಸಿಕೊಂಡಿದ್ದೇನೆ. ಎಷ್ಟೋ ಸಲ ವಯಸ್ಸಾದವರನ್ನು, ಮುದುಕರನ್ನು "ಎದ್ದೇಳಿ" ಎಂದು ಚಿಕ್ಕ ಪ್ರಾಯದ, ಕೈ-ಕಾಲು ಗಟ್ಟಿ ಇರುವ ಹೆಂಗಸರು ತಮ್ಮ ಆರಾಮಕ್ಕೋಸ್ಕರ ಎಬ್ಬಿಸುವುದನ್ನು ನೋಡಿ ಮುಜುಗರ ಪಟ್ಟಿದ್ದೇನೆ. ಮಗು ಎತ್ತಿಕೊಂಡವರಿಗೂ ಜಾಗ ಕೊಡದೆ, ಕೆಲವರು ಮಗುವನ್ನು ತಾವೇ ಕೂರಿಸಿಕೊಳ್ಳುವ ಧಾರಾಳತನ ತೋರಿದ್ದನ್ನು ನೋಡಿದ್ದೇನೆ. ಇಷ್ಟೆಲ್ಲ ಆದಮೇಲೆ ನಿಜವಾಗಿ Ladies seat ಮೀಸಲಿಟ್ಟ ಉದ್ದೇಶವೇನು ಎಂಬ ಪ್ರಶ್ನೆ ಆಗಾಗ ಕಾಡಿದೆ. ಇದೇ ಪ್ರಶ್ನೆ ಪುನಃ ಕೇಳಿಕೊಳ್ಳುವ ಪ್ರಸಂಗ ನಿನ್ನೆ ಒದಗಿತು.&lt;br /&gt;ನಾನು ಕೂತಿದ್ದ ಮೀಸಲಾತಿ ಸೀಟಿನ ಹಿಂದೆ ಕುಳಿತ ಸುಮಾರು ಐವತ್ತು ವರ್ಷ ಪ್ರಾಯದ ವ್ಯಕ್ತಿ ನಮ್ಮ ಸೀಟಿನ ನಡುವೆ ಕೈ ತೂರಿಸುವಂತಹ ಕೀಳು ಮಟ್ಟದ ಚೇಷ್ಟೆ ಮಾಡುತ್ತಿದ್ದ. ಎರಡು ಬಾರಿ ಬೈಸಿಕೊಂಡರೂ ಹಲ್ಲು ಕಿರಿತವೇ ಅವನ ಉತ್ತರ! ಮರುಕಳಿಸುವ ಉಪಟಳ! conductor ಸೇರಿದಂತೆ ಒಂದು ನರಪಿಳ್ಳೆಯೂ ಆತನಿಗೆ ಏನೂ ಅನ್ನಲಿಲ್ಲ. Ladies seat ನಲ್ಲಿ ಕೂತರೆ ಹೆಚ್ಚಿನ safety ಅಂತಾರೆಯೇ?&lt;br /&gt;&lt;br /&gt;"Ladies" ಬೋರ್ಡ್ ಕಂಡಾಗ ನನ್ನ ಹಳೆಯ ಸಹೋದ್ಯೋಗಿಯೊಡನೆ ನಡೆದ ವಾಗ್ವಾದ ನೆನಪಾಗುತ್ತದೆ. ನಾನು ಸ್ತ್ರೀ ಪುರುಷ ಸಮಾನತೆಯಂತಹ ವಿಷಯಗಳ ಬಗ್ಗೆ ಯಾವತ್ತೂ ಆಸಕ್ತಿ ತೋರಿದ್ದಿಲ್ಲ. ಎಲ್ಲರೂ ಮನುಷ್ಯರು. ಕೆಲವರು ಪ್ರತಿಭಾವಂತರು, ಕೆಲವರು ತೀಕ್ಷ್ಣಮತಿಗಳು. ಕೆಲವರು ಬೇಜವಾಬ್ದಾರರು. ಇನ್ನು ಕೆಲವರು ಬೇಕಾಬಿಟ್ಟಿ ಬದುಕುವವರು. ಈ ಗುಣವಿಶೇಷಣಗಳಿಗೆ ಸ್ತ್ರೀ ಪುರುಷ ಭೇದವಿಲ್ಲ. ಅವಕಾಶ ವಂಚಿತರು, ಶೋಷಿತರು, ಕೆಲಸದ ಹೊರೆ ಹೊತ್ತವರು ಎಲ್ಲರಲ್ಲಿ ಇದ್ದಾರೆ. ಭೇದ ಮಾಡಲು ಇವೇನು ಬೇರೆ ಬೇರೆ ಪಂಗಡಗಳಲ್ಲ. co-operation, co-ordination ನಿಂದ ಬದುಕಬೇಕಾದವರು. ಇದು ನನ್ನ ಅನಿಸಿಕೆ. ಸ್ತ್ರೀ ಪುರುಷರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಶ್ರೇಷ್ಠ ಎಂಬ ವಾದವನ್ನು ನನಗೆ ಕೇಳಿದರಾಗದು. ಇಂಥದ್ದರಲ್ಲಿ ನನ್ನ ಸಹೋದ್ಯೋಗಿಯೊಬ್ಬರು ವಾದಕ್ಕಿಳಿದರು.&lt;br /&gt;"ಎಲ್ಲರೂ ಸಮಾನರೆಂದು ತಿಳಿಯುವುದಾದರೆ ಬಸ್ ಗಳಲ್ಲಿ Ladies seat ಇರುವುದಕ್ಕೆ ಯಾಕೆ ಪ್ರತಿಭಟಿಸುತ್ತಿಲ್ಲ?"&lt;br /&gt;"ಇಲ್ಲಿ ಸಮಾನತೆಯ ಪ್ರಶ್ನೆಯಿಲ್ಲ. ಬಸ್ ಗಳಲ್ಲಿ ಅಸಭ್ಯವಾಗಿ ವರ್ತಿಸುವ ಕೆಲವು ಮಂದಿ ಇರುತ್ತಾರೆ. ಅದಲ್ಲದೆ ಹೆಚ್ಚಾಗಿ ಮಹಿಳೆಯರಿಗೂ ಪುರುಷರಿಗೂ ಗುಂಪಿನಲ್ಲಿ ನಿಲ್ಲಲು ಅನನುಕೂಲವೆನಿಸುತ್ತದೆ. ಇದು ಅವರವರ ಪ್ರಾಕೃತಿಕ ಸ್ವಭಾವವಿರಬಹುದು. ಅಂತಹ ಸಂದರ್ಭಗಳನ್ನು ಕಡಿಮೆ ಮಾಡಲು ಸೀಟುಗಳನ್ನು ಮೀಸಲಿಟ್ಟಿರಬೇಕು" ಎಂದೆ. &lt;br /&gt;ಆತ ನನ್ನ ವಾದವನ್ನು ಒಪ್ಪಲೇ ಇಲ್ಲವೆನ್ನುವುದು ಬೇರೆ ವಿಚಾರ.&lt;br /&gt;ಅದೇ ಸಹೋದ್ಯೋಗಿಗೆ ಬಸ್ ಗಳಲ್ಲಿ ನಡೆಯುವ ಅಸಭ್ಯ ವರ್ತನೆಗಳನ್ನು ಹೇಳಿದಾಗ "ಮೀಸಲಿಟ್ಟ ಸೀಟು ಬಿಟ್ಟು ಬೇರೆಡೆ ಕೂತರೆ ಇಂತಹವು ಅನಿವಾರ್ಯ" ಎಂಬ ಆಶ್ಚರ್ಯಕರ ಹೇಳಿಕೆಯನ್ನೂ ನೀಡಿದ್ದರು. &lt;br /&gt;&lt;br /&gt;ಈ ರೀತಿಯ ಮೀಸಲಾತಿಗಳಿಗೂ ಸಮಾನತೆ ಯಾ ಏಳಿಗೆಗೂ ನನಗೆ ಯಾವ ಸಂಬಂಧವೂ ಕಂಡುಬರುತ್ತಿಲ್ಲ. &lt;br /&gt;Ladies seat ಮೇಲೆ ಹಕ್ಕು ಚಲಾಯಿಸಿದಂತೆ ಇನ್ನೂ ಕೆಲವೆಡೆ ಕೆಲವು ಮಹಿಳೆಯರು advantage ತೆಗೆದುಕೊಳ್ಳುವುದನ್ನು ನಾನ ಕಂಡಿದ್ದೇನೆ. ಊಟಕ್ಕೆ ಕಾದು ನಿಂತ ದೊಡ್ಡ ಸಾಲಿನಲ್ಲಿ "Ladies first" ಎಂದು ನಗುತ್ತಾ ಮುಂದೆ ಸೇರಿಕೊಳ್ಳುವವರನ್ನು ನೋಡಿದ್ದೇನೆ. ಹಸಿವು ಎಲ್ಲರಿಗೂ ಒಂದೇ ಅಲ್ಲವೇ? ಇಂತಹ ಸಂದರ್ಭಗಳನ್ನು ನೋಡಿ ಅನೇಕರು ಈ ನಡತೆಗಳನ್ನು ಸಾರ್ವತ್ರಿಕ ಎಂದು ಪರಿಗಣಿಸುತ್ತಾರೆ. Generalise ಮಾಡುತ್ತಾರೆ. ರಾತ್ರಿ ತಡವಾಗಿ ಆಫೀಸು ಬಿಡಲು ಬಯಸದ ಮಹಿಳೆಯರನ್ನು, ಬಸ್ ಗಳಲ್ಲಿ ಕಿರುಕುಳ ಅನುಭವಿಸುವವರನ್ನು ಸಮಾನತೆ, ಮೀಸಲಾತಿಗಳ ನೆಲೆಯಲ್ಲಿ ಪ್ರಶ್ನಿಸುತ್ತಾರೆ. biological differences ಅನ್ನು, ಅದಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಸಮಾನತೆ ನಿರ್ಧರಿಸುವಲ್ಲಿ ಗಣನೆಗೆ ತೆಗೆದುಕೊಳ್ಳಬಾರದು. ಇಲ್ಲಿ ಬದಲಾಗಬೇಕಿರುವುದು ಜನರ (ಮಹಿಳೆಯರೂ ಸೇರಿದಂತೆ) ದೃಷ್ಟಿಕೋನ. ಅಲ್ಲಿವರೆಗೆ Ladies seat ಆಗಲೀ ಮೀಸಲಾತಿ ಇರುವ ಯಾವುದೇ ಕ್ಷೇತ್ರವಾಗಲೀ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ.&lt;br /&gt;-&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-6091203860382290011?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/6091203860382290011/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=6091203860382290011' title='6 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/6091203860382290011'/><link rel='self' type='application/atom+xml' href='http://www.blogger.com/feeds/2942048231899528037/posts/default/6091203860382290011'/><link rel='alternate' type='text/html' href='http://chaithrika.blogspot.com/2010/09/ladies-seat.html' title='&quot;Ladies seat&quot; ನಿಂದ ಚಿಂತನಾಲಹರಿ...'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>6</thr:total></entry><entry><id>tag:blogger.com,1999:blog-2942048231899528037.post-8553495401519789634</id><published>2010-07-28T17:16:00.004+05:30</published><updated>2010-07-28T17:26:06.327+05:30</updated><category scheme='http://www.blogger.com/atom/ns#' term='ಸಂಸ್ಕೃತಿ'/><category scheme='http://www.blogger.com/atom/ns#' term='ತುಣುಕು'/><title type='text'>ಸಂಸ್ಕೃತಿಯ ತುಣುಕುಗಳನ್ನು ಅರಸುತ್ತಾ...</title><content type='html'>(ಇದೊಂದು ಸ್ವಗತ. ಬರಹ ರೂಪದಲ್ಲಿ ಹಾಕೋಣ ಎನಿಸಿತು. ಇಲ್ಲಿ ಹಾಕಿದ್ದೇನೆ)&lt;br /&gt;&lt;br /&gt;"ಸಂಸ್ಕೃತಿ" ಎಂದರೇನು? ಈ ಪ್ರಶ್ನೆ ಯಾವತ್ತೂ ನನನ್ನು ಕಾಡಿರಲಿಲ್ಲ. ಆಗ ನಾನು ಪಿ.ಯು.ಸಿ ಓದುತ್ತಿದ್ದೆ. ನಾನು ಆರಿಸಿಕೊಂಡ ಭಾಷೆ ಕನ್ನಡವಾಗಿತ್ತು. ಒಂದು ದಿನ ನಮಗೆ ಕನ್ನಡ ಕಲಿಸುತ್ತಿದ್ದ ಮೀನಾಕ್ಷಿ ಮೇಡಮ್ ಕಾ್ಲಸ್ ನಲ್ಲಿ ಒಂದು ಪ್ರಶ್ನೆ ಕೇಳಿದರು. "ಸಂಸ್ಕೃತಿ ಎಂದರೇನು?". ಕೆಲ ಕ್ಷಣಗಳ ಮೌನದ ನಂತರ ಕೆಲವು ಧ್ವನಿಗಳು ಕೇಳಿದವು. "ಮೇಡಮ್ ಬಳೆ ಹಾಕಿಕೊಳ್ಲೂದೂ..., ಬೊಟ್ಟು ಹಾಕಿಕೊಳ್ಳೂದೂ..." ,&lt;br /&gt;"ಮೇಡಮ್ ಹೂವು, ಸೀರೇ..."&lt;br /&gt;"ಕುಂಕುಮಾ...."&lt;br /&gt;ಮೇಡಮ್ ನಕ್ಕರು. "ಸಂಸ್ಕೃತಿ ಎಂದರೆ ಅಷ್ಟೇಯಾ?... ಬಳೆ, ಬೊಟ್ಟು, ಹೂವು, ಸೀರೆ... ಹೂಮ್?" ಎಂದರು.&lt;br /&gt;ಯಾರೂ ಮಾತನಾಡಲಿಲ್ಲ. "ಏನು ಸಂಸ್ಕೃತಿ ಎಂದರೆ?" ಇನ್ನೊಮ್ಮೆ ಕೂಗಿದರು. ಎಲ್ಲರೂ ಮೌನ. ಒಮ್ಮೆ ಮುಗುಳ್ನಕ್ಕು ಪಾಠ ಮುಂದುವರಿಸಿದರು. ನಾವು ಉತ್ತರಕ್ಕಾಗು ಕಾದೆವು. ಮೇಡಮ್ ಮಾತ್ರ ಅಂದು ಉತ್ತರ ಹೇಳಲೇ ಇಲ್ಲ. ಆದರೆ ನನ್ನ ತಲೆಯೊಳಗೆ ಆ ದಿನ ಅವರು ಹುಳ ಬಿಟ್ಟರು. &lt;br /&gt;ನಾನು ಅನೇಕ ಬಾರಿ ಈ ಸಂದರ್ಭ ನೆನಪಾದಾಗ ಉತ್ತರ ಹುಡುಕಲು ಪ್ರಯತ್ನಿಸಿದೆ. ಈಗಲೂ ಹುಡುಕುತ್ತಿದ್ದೇನೆ. ಸರಿಯಾದ ಉತ್ತರ ಸಿಕ್ಕಿರದಿದ್ದರೂ ಕೆಲವು ಸಂಸ್ಕೃತಿಯ ತುಣುಕುಗಳು ಕಾಣಸಿಕ್ಕಿವೆ. ಆಗೆಲ್ಲ ಇದೇ "ಸಂಸ್ಕೃತಿ" ಇರಬೇಕು ಎಂದುಕೊಂಡು ಆ ತುಣುಕುಗಳನ್ನು ಆಯ್ದಿಡುತ್ತಿದ್ದೇನೆ.&lt;br /&gt;&lt;br /&gt;1. ನಾವು ಚಿತ್ರದುರ್ಗಕ್ಕೆ ಹೊರಟ ದಿನ. &lt;br /&gt;ಮೈಸೂರಿಂದ ಚಿಕ್ಕನಾಯಕನ ಹಳ್ಳಿ ತಲುಪಿದಾಗ ಎಲ್ಲರ ಹೊಟ್ಟೆಯೂ ಚುರುಗುಟ್ಟುತ್ತಿತ್ತು. ಈ ದಾರಿಯಲ್ಲಿ ಎಲ್ಲೂ ಸರಿಯಾದ ಹೋಟೆಲ್ ಗಳಿಲ್ಲ. ಚೆನ್ನಾಗಿರುವ Toilet ಇರುವ ಹೋಟೆಲ್ ಹುಡುಕುತ್ತ ಸಾಗಿದ್ದ ನಮಗೆ ಒಂದೂ ಹೋಟೆಲ್ ಸಿಗದ ಪರಿಸ್ಥಿತಿ ಎದುರಾಗಿತ್ತು. ಕೊನೆಗೆ ಚಿಕ್ಕನಾಯಕನ ಹಳ್ಳಿಯಲ್ಲಿ ಸುಮುಖ ರಿಫ್ರೆಶ್ ಮೆಂಟ್ಸ್ ಎಂಬ ಚಿಕ್ಕ ಹೋಟೆಲ್ ನಲ್ಲಿ ತಿಂಡಿತಿನ್ನಲು ಹೋದೆವು. ಅಲ್ಲಿಯ ಮಾಲಕನಲ್ಲಿ "ಈ ಪಕ್ಕದ ಮನೆ ನಿಮ್ಮದೇ?" ಎಂದಾಗ  Toilet  ಹುಡುಕುತ್ತಿದ್ದ ನಮ್ಮ ಸಮಸ್ಯೆ ಅವರಿಗೆ ಅರಿವಾಯಿತು. ಅವರು ತಕ್ಷಣ ಮುಂದೆ ಇದ್ದ ತಮ್ಮ ಮನೆಗೆ ಕರೆದೊಯ್ದು ಅವರ ಹೆಂಡತಿಯಲ್ಲಿ ಏನೋ ಹೇಳಿ ಹೋದರು. ಅವರ ಹೆಂಡತಿ ನಮಗೆ ಮುಖ-ಕೈ-ಕಾಲು ತೊಳೆದು ಫ್ರೆಶ್ ಆಗಲು ಬಿಸಿಬಿಸಿ ನೀರು ಕೊಟ್ಟರು. ಅದಲ್ಲದೆ ಒರೆಸಿಕೊಳ್ಳಲು ಬಟ್ಟೆ ಬೇರೆ. ಯಾರೆಂದೇ ಅರಿಯದ ಮನುಷ್ಯರನ್ನು ನಂಬಿಕೆಯಲ್ಲಿ ಮನೆಯೊಳಗೆ ಬರಲು ಬಿಟ್ಟು, ಚೆನ್ನಾಗಿ ಮಾತನಾಡಿಸಿ, ಉಪಚರಿಸಿ ಕಳುಹಿಸಿದ ಅವರು ಎಷ್ಟು ಸಹೃದಯಿಗಳು ಎಂದುಕೊಳ್ಳುತ್ತಾ ಹೊರಟೆವು. ಅವರಲ್ಲಿ ಅಂದು ಕಂಡ ಸಂಸ್ಕೃತಿಯ ತುಣುಕನ್ನು ನಾನು ಆಯ್ದುಕೊಂಡೆ.&lt;br /&gt;&lt;br /&gt;2. ನಮ್ಮ ಪರಿಚಯದವರೊಬ್ಬರು ತಮ್ಮ ಕುಟುಂಬದ ಜೊತೆ ನೆಂಟರಿಷ್ಟರ ಊರಿಗೆ ಹೋಗಿದ್ದರು. ಅಲ್ಲಿ ಒಂದೆರಡು ಮನೆಗಳಿಗೆ ಹೋಗಿ ಮಾತನಾಡಿ, ಊಟ ಮಾಡಿದ ನಂತರ ನಿದ್ದೆ ಮಾಡಲು ಇನ್ನೊಬ್ಬರ ಮನೆಗೆ ಹೊರಟರು. ಕೊನೆ ಗಳಿಗೆಯಲ್ಲಿ ಫೋನ್ ಮಾಡಿ ತಾವು ಬರುತ್ತಿರುವುದನ್ನು ಹೇಳಿದ ನಮ್ಮ ಈ ನೆಂಟರಿಗೆ ಆ ಕಡೆಯಿಂದ ಸಿಕ್ಕಿದ ಪ್ರತಿಕ್ರಿಯೆ ಏನೂ ಆಶಾದಾಯಕವಾಗಿರಲಿಲ್ಲ. ರಾತ್ರಿಯಾಗಿದ್ದಲ್ಲದೆ ಮಳೆ ಬರುತ್ತಿದ್ದ ಕಾರಣ ಬೇರೆ ಕಡೆತಂಗಲು ವ್ಯವಸ್ಥೆ ಸಿಗದಿದ್ದರೆ ಗೆಸ್ಟ್ ಹೌಸ್ ನೋಡಬೇಕಾದೀತೆಂದು ಯೋಚನೆ ಮಾಡತೊಡಗಿದರು. ಕೊನೆಯದಾಗಿ ಅವರ ಪತ್ನಿ ತಮ್ಮ ಅಣ್ಣನ ಮಗಳಿಗೆ ಹಿಂಜರಿಯುತ್ತಲೇ ಫೋನ್ ಮಾಡಿದರು. ಅವಳು ಸಂತಸದಿಂದ ಬರಹೇಳಿದ್ದಲ್ಲದೆ, ಅವಳು ಮತ್ತು ಅವಳ ಪತಿ ನಮ್ಮ ನೆಂಟರು ತಲುಪುವ ಮೊದಲೇ ಚಾಪೆ ಹಾಸಿ ಮಲಗಲು ವ್ಯವಸ್ಥೆಮಾಡಿದರಂತೆ. ಊಟಕ್ಕೇ ಬರಬೇಕಿತ್ತು ಎಂದರಂತೆ. ಅವಳ ನಡತೆಯಲ್ಲಿ ಅಂದು ಕಂಡ ಸಂಸ್ಕೃತಿಯ ತುಣುಕನ್ನು ನಾನು ಆಯ್ದುಕೊಂಡೆ.&lt;br /&gt;&lt;br /&gt;3. ನಾನು ಬಾಳಸಂಗಾತಿಯನ್ನು ಆರಿಸ ಹೊರಟ ಸಂದರ್ಭ. &lt;br /&gt;ಹುಡುಗನ ಮನೆ ಮೈಸೂರು. ಅದು ನನ್ನ ಆಪ್ತ ಬಂಧುಗಳೂ ಇರುವ ಊರು. ಏನೂ ನಿರ್ಧಾರವಾಗದೆ ಎಲ್ಲರಿಗೂ ಪ್ರಚಾರ ಮಾಡಲಿಚ್ಛಿಸದ ನನ್ನ ಅಪ್ಪ, ಅಮ್ಮ ಮೈಸೂರಿಗೆ ನಾವೇ ಹೋಗಿ ನನ್ನ ಸೋದರ ಮಾವನ ಮನೆಯಲ್ಲಿ ಹುಡುಗಿ-ಹುಡುಗ ನೋಡುವ ಕಾರ್ಯಕ್ರಮ ಇಟ್ಟುಕೊಳ್ಳುವುದು ಉತ್ತಮವೆಂದು ಮನಗಂಡರು. ನನ್ನ ಅಮ್ಮ ಸಿಹಿ ತಿಂಡಿ (ಹುಡುಗ ಮತ್ತು ಮನೆಯವರಿಗೆ ತಿನ್ನಲು ಕೊಡಬೇಕಲ್ಲವೇ?) ಮನೆಯಲ್ಲೇ ಮಾಡಿ ಕೊಂಡೊಯ್ಯುವುದೆಂದು ನಿರ್ಧರಿಸಿದರು. ಹಾಗೇ ಸಿಹಿ, ಖಾರ ಮನೆಯಲ್ಲೇ ಮಾಡಿ ತೆಗೆದುಕೊಂಡು ಹೋದೆವು. ಅಲ್ಲಿ ತಲುಪಿದಾಗ ನಮಗೆ ಆಶ್ಚರ್ಯ ಕಾದಿತ್ತು. ನನ್ನ ಅತ್ತೆ (ಸೋದರ ಮಾವನ ಮಡದಿ) ತಾವೇ ಉತ್ಸಾಹದಲ್ಲಿ ಸಿಹಿತಿಂಡಿ ತಯಾರಿಸಿದ್ದರು. ಅಲ್ಲದೇ ತಮ್ಮಿಂದ ಏನೂ ಕುಂದುಂಟಾಗದಂತೆ ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಕಿಟಕಿಯ ಪರದೆಗಳು, ಸೋಫಾದ ಹೊದಿಕೆಗಳು ಇತ್ಯಾದಿಗಳನ್ನು ಒಗೆದು ಹಾಕಿದ್ದರು. ತಮ್ಮದೇ ಮನೆಯ ಶುಭಕಾರ್ಯದಂತೆ ಸಹಕರಿಸಿದ್ದರು. ಅವರ ಈ ನಡತೆ ನಮಗೆ ಬಹಳ ಖುಷಿಕೊಟ್ಟಿತು. ನಮ್ಮೊಡನೆ ಬೆರೆತು, ಸಹಕರಿಸಿ, ಆನಂದಿಸಿದ ಅವರಲ್ಲಿ ನಾನು ಸಂಸ್ಕೃತಿಯ ತುಣುಕೊಂದನ್ನು ಆಯ್ದುಕೊಂಡೆ. &lt;br /&gt;&lt;br /&gt;4. ನನ್ನ ಅತ್ತೆ, ಮಾವ ಇರುವಲ್ಲಿ ಬಿಲ್ವಪತ್ರೆ ಮಾರುವ ಅಜ್ಜಿಯೊಬ್ಬರು ಆಗಾಗ ಹಸಿವೆ ಎಂದುಕೊಂಡು ಬರುತ್ತಾರೆ. ನನ್ನ ಅತ್ತೆಯವರು ಏನಾದರೂ ತಿನಿಸು ಕೊಟ್ಟು ಕಳಿಸುತ್ತಾರೆ. (ನನಗೆ ಆ ಅಭ್ಯಾಸವಿಲ್ಲ!). ಒಂದು ದಿನ ನಾವು ಮಧ್ಯಾಹ್ನದ ಊಟಕ್ಕೆ ಬೇರೆಕಡೆ ಹೋಗುವುದಿತ್ತು. ಅಡುಗೆ ಮಾಡಿರಲಿಲ್ಲ. ಹಿಂದಿನ ದಿನ ಉಳಿದ ಎರಡು ಹಿಡಿ ಅನ್ನವನ್ನು ನನ್ನ ಅತ್ತೆಯವರು ರುಚಿಯಾದ ಮೊಸರನ್ನವಾಗಿ ಬದಲಿಸಿದ್ದರು. ನಾವು ಹೊರಡುವ ಹೊತ್ತಿಗೆ ಬಿಲ್ವಪತ್ರೆ ಅಜ್ಜಿ ಹಸಿವೆಂದು ಬಂದರು. ನನ್ನತ್ತೆ ಆಗಷ್ಟೇ ಮಾಡಿದ ಮೊಸರನ್ನವನ್ನು ಆಕೆಗೆ ಕೊಟ್ಟರು. ನನಗೆ ಬಹಳ ಆಶ್ಚರ್ಯವಾದರೂ ಇದೂ ಸಂಸ್ಕೃತಿಯ ಒಂದು ತುಣುಕೇ ಎಂದು ಆಯ್ದಿಟ್ಟೆ.&lt;br /&gt;&lt;br /&gt;5. ನನ್ನ ಅತ್ತಿಗೆಯ (ಗಂಡನ ಅಕ್ಕ) ಹತ್ತು ವರ್ಷದ ಮಗ ನಾನು ಕೊಟ್ಟ ಬಹು ಸಣ್ಣದೊಂದು ಚಿಪ್ಸ್ ಪಾ್ಯಕೇಟ್ ಹಿಡಿದು ಗೆಳೆಯರೊಂದಿಗೆ ಹಂಚಿ ತಿನ್ನುತ್ತೇನೆ ಎಂದು ಹೊರಗೋಡಿದಾಗ ನನಗೆ ಸಿಕ್ಕಿದ್ದು ಸಂಸ್ಕೃತಿಯ ಇನ್ನೊಂದು ತುಣುಕು.&lt;br /&gt;&lt;br /&gt;ಮನೆಗೆ ಯಾರಾದರೂ ಬಂದರೆ ಮನೆಯವರೆಲ್ಲರೂ ಒಮ್ಮೆ ಬಂದು ಕುಶಲ ವಿಚಾರಿಸುವುದು, ವಿಶೇಷ ಅಡಿಗೆಯೇನಾದರೂ ಮಾಡಿದರೆ ಆಪ್ತರೊಡನೆ (ಗೆಳೆಯರು, ಪಕ್ಕದ ಮನೆಯವರು) ಹಂಚಿಕೊಳ್ಳುವುದು, ಉಪ್ಪಿನಕಾಯಿ, ಹಪ್ಪಳಗಳನ್ನು ನೂರಾರು ಕಿಲೋ ಮೀಟರು ದೂರದ ನೆಂಟರಿಗೆ ಕಳಿಸುವುದು, ಸಂತಸದ ವಿಷಯಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು ಇವುಗಳಲ್ಲೆಲ್ಲ ನನಗೆ ಕಾಣುವುದು ಸಂಸ್ಕೃತಿಯ ತುಣುಕುಗಳು.&lt;br /&gt;ಇಲ್ಲಿ ಒಳ್ಳೆಯದೋ ಕೆಟ್ಟದೋ ಎಂಬ ಯೋಚನೆ ನಾನು ಮಾಡುತ್ತಿಲ್ಲ. ತುಂಬಾ ಯೋಚಿಸುತ್ತಾ ಹೋದರೆ ಚಿಕ್ಕ ಪುಟ್ಟ ವಿಷಯಗಳನ್ನು ಹಿಡಿದು ಸಾರ್ವಜನಿಕವಾಗಿ ಜಗಳಾಡುವುದು, ಊರಿಗೆ ಹೊಸಬರು ಬಂದರೆ ಸುಳ್ಳು ಹೇಳಿ ವಂಚಿಸುವುದು ಕೂಡಾ ಸಂಸ್ಕೃತಿಯ ಭಾಗವಾದೀತೇನೋ. ಆಗ ಸುಸಂಸ್ಕೃತಿ, ಅಸಂಸ್ಕೃತಿ ಎಂದು ವಿಂಗಡನೆ ಮಾಡಬೇಕಾದೀತು. &lt;br /&gt;ನಾನು ಆಯುತ್ತಿರುವ ಸಂಸ್ಕೃತಿಯ ತುಣುಕುಗಳು ಕಾಲಾಂತರದಲ್ಲಿ ಚೆಲ್ಲಿ ಚದುರಿ ಹೋದಾವು. ಹೊಸ ತುಣುಕುಗಳು ಸಿಕ್ಕಿಯಾವು. ಹರಿವ ನೀರಿನಂತೆ ಸಂಸ್ಕೃತಿ ಬದಲಾಗುತ್ತಿರುವುದು. ಬದಲಾಗಬೇಕೂ ಕೂಡಾ. ಇಲ್ಲದಿದ್ದರೆ ನಿಂತ ನೀರಿನಂತೆ ಕೊಳೆತೀತು. ಬಾಂಧವ್ಯಗಳು ಹಳಸಿಯಾವು.  ಬದಲಾಗುತ್ತಿದ್ದರೂ (ಸು)ಸಂಸ್ಕೃತಿಯ ಮೂಲ ಮೌಲ್ಯಗಳು ಉಳಿದರೆ ಸಾಕು.  &lt;br /&gt;- - - -&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-8553495401519789634?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/8553495401519789634/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=8553495401519789634' title='9 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/8553495401519789634'/><link rel='self' type='application/atom+xml' href='http://www.blogger.com/feeds/2942048231899528037/posts/default/8553495401519789634'/><link rel='alternate' type='text/html' href='http://chaithrika.blogspot.com/2010/07/blog-post_28.html' title='ಸಂಸ್ಕೃತಿಯ ತುಣುಕುಗಳನ್ನು ಅರಸುತ್ತಾ...'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>9</thr:total></entry><entry><id>tag:blogger.com,1999:blog-2942048231899528037.post-478019739768562597</id><published>2010-07-23T19:00:00.002+05:30</published><updated>2010-07-23T19:06:48.197+05:30</updated><category scheme='http://www.blogger.com/atom/ns#' term='ಬಿಸಿಲು'/><category scheme='http://www.blogger.com/atom/ns#' term='ಮುಂಜಾನೆ'/><category scheme='http://www.blogger.com/atom/ns#' term='ಪೇರಳೆ'/><category scheme='http://www.blogger.com/atom/ns#' term='ಚಿಕ್ಕು'/><title type='text'>ಬಿಸಿಲ ನೆನಪು</title><content type='html'>ಮುಂಜಾನೆ (ನನಗೆ ಮುಂಜಾನೆಯೆಂದರೆ ಬೆಳಗ್ಗಿನ ಏಳು ಗಂಟೆ) ಬಿಸಿಲು ನೋಡುವುದೆಂದರೆ ನನಗೆ ಒಂದು ರೀತಿಯ ಖುಷಿ. ಬೇರೆ ಬೇರೆ ಊರುಗಳಲ್ಲಿ ಬಿಸಿಲು ಬೇರೆ ಬೇರೆ ರೀತಿಯಲ್ಲಿರುತ್ತದೆ ಎಂದು ನನ್ನ ಅನಿಸಿಕೆ. &lt;br /&gt;ನಾನು ಮೂಡುಬಿದಿರೆಯಲ್ಲಿದ್ದಾಗ (ದಕ್ಷಿಣ ಕನ್ನಡ) ಒಂದು ರೀತಿಯ ಬಿಸಿಲಿತ್ತು. ನಾನು ಆಗ ಒಂಭತ್ತು ಗಂಟೆ ನಂತರ ಏಳುತ್ತಿದ್ದ ಕಾರಣ ಈ characteristic ಬಿಸಿಲು ಕಾಣಸಿಗುತ್ತಿದ್ದುದು ಕಡಿಮೆ. ಆದರೂ ಮನೆಯ ಅಂಗಳದಲ್ಲಿ ಕೂತು ಅಮ್ಮ ಮಾಡಿದ ರುಚಿ ಚಹಾ ಕುಡಿಯುತ್ತಾ ಬಿಸಿಲನ್ನು ನೋಡುವುದು ಖುಷಿ ಕೊಡುತ್ತಿತ್ತು. ಮನೆಯ ಸುತ್ತುಮುತ್ತಲಿದ್ದ ತೆಂಗು, ಪೇರಳೆ(ಸೀಬೆ), ಚಿಕ್ಕಿನ ಮರ(ಸಪೋಟ)ಗಳ ನಡುವಿಂದ ಇಳಿದ ಉದ್ದುದ್ದನೆಯ ಬಿಸಿಲ ಕೋಲುಗಳು, ಅವುಗಳಲ್ಲಿ ಮಿಣಮಿಣ ಹೊಳೆಯುತ್ತ ತೇಲುವ ಧೂಳ ಕಣಗಳು.  &lt;br /&gt;&lt;br /&gt;ಉಡುಪಿಯಲ್ಲಿ ಬೇರೆ ರೀತಿಯ ಬಿಸಿಲು. ಎಳೆಬಿಸಿಲಲ್ಲಿ ನನ್ನ room mate (ನಾವು paying guest ಆಗಿ ಮನೆಯವರೊಂದಿಗೇ ಇರುತ್ತಿದ್ದುದು) ಮನೆಯ ದೇವರ ಕೋಣೆ ಅಲಂಕರಿಸಲು ಹೂವು ಕೊಯ್ಯುತ್ತಿದ್ದಳು. ಆ ಬಿಸಿಲು ಏರಲು ಶುರುವಾಗುವಾಗಲೇ ನಾವು ಆಫೀಸಿಗೆ ನಡೆದು ಹೋಗುತ್ತಿದ್ದುದು. ಮಳೆಗಾಲದಲ್ಲಿ ಆ ದಾರಿಯ ಬದಿಯಲ್ಲಿದ್ದ ಗದ್ದೆಯೊಂದರಲ್ಲಿ (ಅಲ್ಲಿ ಬೆಳೆ ಬೆಳೆದ ನೆನಪಿಲ್ಲ) ಪಕ್ಕದ ಹೊಳೆಯಿಂದ ಹರಿದ ನೀರು ತುಂಬಿರುತ್ತಿತ್ತು. ಅದರಲ್ಲಿ ತಾವರೆ, ನೈದಿಲೆ ಬೆಳೆದು ಬಿಸಿಲಿಗೆ ಅರಳುತ್ತಿದ್ದವು.  ಮಳೆಗಾಲ ಮುಗಿದ ಮೇಲೂ ಕೆಲವು ತಿಂಗಳು ನೀರು ತುಂಬಿರುತ್ತಿತ್ತು. ಬೆಳಗ್ಗಿನ ನಸು ಬಿಸಿಲಲ್ಲಿ ಕೆಲವರು ತಾವರೆ ಕೊಯ್ಯುತ್ತಿದ್ದರು. &lt;br /&gt;&lt;br /&gt;ಮೈಸೂರಿನಲ್ಲಿ ಬಹಳ ಎಳೆಯ ನಾಜೂಕಾದ ಬಿಸಿಲು. ಮೈಸೂರನ್ನು ಮುಂಜಾನೆ ನೋಡಿದರೆ ಬಹಳ ಸುಂದರ ಊರು ಅನ್ನಿಸುವುದು. ಎಲ್ಲ ಮೌನ, ಶಾಂತ. ನನ್ನ ಮಾವನವರು ಅತಿ ಇಷ್ಟಪಟ್ಟು ಬೆಳೆಸಿ ಸಾಕುತ್ತಿರುವ ಹೂದೋಟದ ತುಂಬಾ ಚಿಲಿಪಿಲಿಗುಟ್ಟುವ ಹಕ್ಕಿಗಳು. ಎಲೆಗಳ ಮೇಲೆ, ಹೂವುಗಳ ದಳಗಳ ಅಂಚಿನಲ್ಲಿ ಬಿಸಿಲಿಗೆ ಹೊಳೆಯುವ ನೀರ ಹನಿಗಳು. (ಇಬ್ಬನಿಯೋ, ಮಾವನವರು ಹಾಕಿದ ನೀರೋ ಗೊತ್ತಿಲ್ಲ)&lt;br /&gt;&lt;br /&gt;ಬೆಂಗಳೂರಿನ characteristic ಬಿಸಿಲು? ಎರಡು ವರ್ಷವಾಯಿತು. ಇನ್ನೂ ಕಂಡಿಲ್ಲ. ದಿನವೂ ಬೆಳಗ್ಗೆ ಅಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಬಿಸಿಲಿನ analysis ಮಾಡಲು ಪುರುಸೊತ್ತಿಲ್ಲ. ವಾರಾಂತ್ಯದಲ್ಲಿ ಬಿಸಿಲೇರುವವರೆಗೆ ನಿದ್ದೆ!&lt;br /&gt; &lt;br /&gt;ಕೆಲವೊಮ್ಮೆ ಒಂದು ಜಾಗದ ಬಿಸಿಲು ಇನ್ನೊಂದೆಡೆ ಕಾಣಸಿಗುತ್ತದೆ. ಮೂಡುಬಿದಿರೆಯ ಚಳಿಗಾಲದಲ್ಲಿ ಕೆಲವೊಮ್ಮೆ ಬೀಳುವ ಬಿಸಿಲು ಮೈಸೂರನ್ನು ನೆನಪಿಸುತ್ತದೆ. ಮೊನ್ನೆ ಬೆಂಗಳೂರಲ್ಲಿ ಮಳೆ ಬಂದು ಹತ್ತು ಗಂಟೆಗೆ ಮೂಡಿದ ಬಿಸಿಲು ಉಡುಪಿಯನ್ನು ನೆನಪಿಸಿತು. "ಇಂದು ಬೆಂಗಳೂರಲ್ಲಿ ಉಡುಪಿಯ ಬಿಸಿಲು" ಎಂದಿದ್ದೆ ನಾನು. ಸಂಜೆಯ ಬಿಸಿಲಲ್ಲಿ ನನಗೆ ಈವರೆಗೆ ಬೆಳಗಿನ ಬಿಸಿಲಂತಹ ವ್ಯತ್ಯಾಸ ಕಂಡಿಲ್ಲ. ಅಥವಾ ಬೆಳಗಿನ ಬಿಸಿಲಿನ ಈ ವಿಶೇಷಣಗಳೂ ನನ್ನ ಭ್ರಮೆಯೇನೋ. ಏನೇ ಇರಲಿ ಹೊಂಬಿಸಿಲು ಸಿಹಿ ನೆನಪುಗಳನ್ನು ಮೂಡಿಸುವುದು ನನಗೆ ಖುಷಿ ಕೊಡುತ್ತಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-478019739768562597?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/478019739768562597/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=478019739768562597' title='4 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/478019739768562597'/><link rel='self' type='application/atom+xml' href='http://www.blogger.com/feeds/2942048231899528037/posts/default/478019739768562597'/><link rel='alternate' type='text/html' href='http://chaithrika.blogspot.com/2010/07/blog-post.html' title='ಬಿಸಿಲ ನೆನಪು'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>4</thr:total></entry><entry><id>tag:blogger.com,1999:blog-2942048231899528037.post-1025981424625908797</id><published>2010-05-10T15:09:00.005+05:30</published><updated>2010-05-18T11:52:46.348+05:30</updated><category scheme='http://www.blogger.com/atom/ns#' term='communication skills'/><title type='text'>Communication skills ಎಂದರೇನು?</title><content type='html'>ಹೋದ ತಿಂಗಳು interpersonal effectiveness ಎನ್ನುವ ತರಬೇತಿ ಕಾರ್ಯಕ್ರಮವನ್ನು ನಮ್ಮ ಆಫೀಸು ನಡೆಸಿದ್ದು ನಾನು ಅದರಲ್ಲಿ ಭಾಗಿಯಾಗಬೇಕಾಯಿತು. ಸಹೋದ್ಯೋಗಿಗಳೊಂದಿಗೆ ಯಾವ ರೀತಿ ವ್ಯವಹರಿಸಬೇಕೆನ್ನುವುದರ ಬಗ್ಗೆ ತರಬೇತಿ. ಎರಡು ದಿನದ ಕಾರ್ಯಕ್ರಮ ಚೆನ್ನಾಗಿತ್ತು. ಕೆಲಸವಿಲ್ಲದ ಎರಡು ದಿನ ಮೋಜಿನಿಂದಲೂ ಕಳೆಯಿತು. &lt;br /&gt;ವಾರದಲ್ಲಿ ಕನಿಷ್ಠ ನಾಲ್ಕು ದಿನ ಇಪ್ಪತ್ತು ನಿಮಿಷಗಳಿಗೆ ಕಮ್ಮಿಯಿಲ್ಲದಂತೆ ಫೋನಿನಲ್ಲಿ ಹರಟುವ ನನ್ನ ಗೆಳತಿಗೆ ಫೋನು ಮಾಡಿದೆ. ತರಬೇತಿ ಕಾರ್ಯಕ್ರಮದ ಬಗ್ಗೆ ಹೇಳಿದೆ. ವಿಷಯ ಮಾತನಾಡುತ್ತಾ communication skills ನತ್ತ ತಿರುಗಿತು.&lt;br /&gt; &lt;br /&gt;"ನನ್ನ ಪರಿಚಯದವನೊಬ್ಬ ತಾನು ಮದುವೆಯಾಗಲಿರುವ ಹುಡುಗಿಯ ಫೋಟೋವನ್ನು social networking site ಅಲ್ಲಿ ಹಾಕಿ ಬಹಳ ಚೆನ್ನಾಗಿರುವ ವಾಕ್ಯಗಳನ್ನು ಬರೆದಿದ್ದಾನೆ" ಎಂದೆ.&lt;br /&gt;&lt;br /&gt;"ನಾನೂ ಅಂಥ ಅನೇಕ ಜನರನ್ನು ನೋಡಿದ್ದೇನೆ" ಎಂದಳು.&lt;br /&gt;&lt;br /&gt;"ನಾನು ಉಡುಪಿಯಲ್ಲಿ ಯಾರದ್ದೋ ಮನೆ ಕೇಳಿಕೊಂಡು ಬಂದ ಅಪರಿಚಿತ ಹುಡುಗನ ಬಳಿ ಸುಮಾರು ಇಪ್ಪತ್ತು ನಿಮಿಷ ಹರಟಿ ಕೊನೆಯಲ್ಲಿ ಅವನು ಫೋನ್ ನಂಬರ್ ಕೇಳಿದಾಗ ಎಚ್ಚೆತ್ತುಕೊಂಡೆ. ಅಷ್ಟು ಮಾತಾಡಲು ಕಾರಣ ಅವನ ಮಾತಿನ ಶೈಲಿ, communication skills. ಕೊನೆಗೆ ನಾನು ಪೇಯಿಂಗ್ ಗೆಸ್ಟ್ ಆಗಿದ್ದ ಕಡೆ ಆಂಟಿಯನ್ನು ಕೇಳಿದಾಗ ಅವನ ಕೆಲಸವೇ ಅದು, ಸಿಕ್ಕಿದವರ ಜೊತೆ ಗಂಟೆಗಟ್ಟಲೆ ಹರಟುತ್ತಾನೆ ಎಂದರು" ಎಂದೆ.&lt;br /&gt;&lt;br /&gt;"ಹೌದು. ಚೆನ್ನಾಗಿ ಮಾತನಾಡುವವರು ಎಂಥವರನ್ನೂ ಮರುಳು ಮಾಡಬಲ್ಲರು" ಎಂದಳು.&lt;br /&gt;&lt;br /&gt;"ನನ್ನ ಗೆಳೆಯನೊಬ್ಬ ನೋಡಲು ಚಂದ ಇಲ್ಲ. ಆದರೆ ಮಾತನಾಡುವುದರಲ್ಲಿ ಬಲು ಜಾಣ. ಈ communication skills ನಿಂದಾಗಿ ಅವನಿಗೆ ಸುಂದರಿಯಾದ girl friend ಇದ್ದಾಳೆ" ಎಂದು ನಕ್ಕೆ.&lt;br /&gt;&lt;br /&gt;"ಹಾಗಾದರೆ communication skills ಎಂದರೆ ನಿಜವಾಗಿ ಜನರನ್ನು ಮಂಗಮಾಡುವುದು ಎಂದಾಯಿತಲ್ಲವೇ?" ಎಂದಳು.&lt;br /&gt;(ಮಂಗಳೂರು ಕನ್ನಡದಲ್ಲಿ ಮಂಗಮಾಡುವುದು ಎಂದರೆ ಮೂರ್ಖರನ್ನಾಗಿಸುವುದು)&lt;br /&gt;&lt;br /&gt;"ಹೌದಲ್ಲವೇ!!" ಎನ್ನುತ್ತಾ ಇಬ್ಬರೂ ಮನಸಾರೆ ನಕ್ಕೆವು. ಇಂದಿನವರೆಗೂ ಯೋಚಿಸಿದಾಗೆಲ್ಲ ಅವಳು ಹೇಳಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ. ಕೆಲವೊಮ್ಮೆ ತರಬೇತಿ ಕಾರ್ಯಕ್ರಮಗಳೂ ಒಂದರ್ಥದಲ್ಲಿ ನಮ್ಮ ಕೆಲಸ ಸಾಧಿಸಲು ನಯ ವಿನಯಗಳ ಸೋಗು ಹಾಕಲು ಕಲಿಸುವುದು ಎಂದು ಅನ್ನಿಸುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-1025981424625908797?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/1025981424625908797/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=1025981424625908797' title='9 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/1025981424625908797'/><link rel='self' type='application/atom+xml' href='http://www.blogger.com/feeds/2942048231899528037/posts/default/1025981424625908797'/><link rel='alternate' type='text/html' href='http://chaithrika.blogspot.com/2010/05/communication-skills.html' title='Communication skills ಎಂದರೇನು?'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>9</thr:total></entry><entry><id>tag:blogger.com,1999:blog-2942048231899528037.post-7979910636519729756</id><published>2010-03-29T00:31:00.000+05:30</published><updated>2010-03-29T11:32:40.968+05:30</updated><category scheme='http://www.blogger.com/atom/ns#' term='NGO'/><title type='text'>NGO ಗಳ ಹಿಡಿತದಲ್ಲಿ...</title><content type='html'>ಇತ್ತೀಚೆಗೆ ನಮ್ಮ ಆಫೀಸಿಗೆ ಭೇಟಿಕೊಡುತ್ತಿರುವ NGO (Non-governmental Organization)ಗಳ ಸಂಖ್ಯೆ ಹೆಚ್ಚುತ್ತಿದೆ. ಆಫೀಸಿನ ಕಾಫಿ ಯಂತ್ರದ ಬಳಿ ಮೇಜು-ಕುರ್ಚಿ ಹಾಕಿ ಕೂತ ಪ್ರತಿನಿಧಿಗಳು ಅತ್ತ ಹೋದವರನ್ನೆಲ್ಲಾ ಕರೆದು ವಿವರಣೆ ನೀಡುತ್ತಾರೆ. ಕೊನೆಯದಾಗಿ ನವಿರಾಗಿ ಸಹಾಯ, ಕೊಡುಗೆ ಯಾಚಿಸಿ ನಮ್ಮನ್ನು ಇಲ್ಲ ಎನ್ನಲಾಗದ ಸಿ್ಥತಿಗೆ ತಳ್ಳುತ್ತಾರೆ. ಮೊದಲು ನನಗೆ ಇವುಗಳ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಈಗ ಅತಿಯಾದರೆ ಅಮೃತವೂ ವಿಷವೆಂಬಂತೆ NGOದ ಪ್ರತಿನಿಧಿಗಳು ಬರುವರೆಂದರೆ ಹೆದರಿಕೆಯಾಗತೊಡಗಿದೆ. &lt;br /&gt;ಈ NGOಗಳ ಜೊತೆ ನನಗೆ ಎದುರಾದ ಕೆಲ ಪ್ರಸಂಗಗಳನ್ನು ಬರೆಯುತ್ತೇನೆ.&lt;br /&gt;&lt;br /&gt;ದೀಪಾವಳಿ ಸಮಯದಲ್ಲಿ ಬೌದ್ಧಿಕವಾಗಿ ಕಡಿಮೆ ಬೆಳೆದಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಸಂಸ್ಥೆಯಿಂದ ಒಬ್ಬರು ಬಂದಿದ್ದರು. ಅವರು ಆ ಸಂಸ್ಥೆಯ ಆಶ್ರಯದಲ್ಲಿರುವವರು ಮಾಡಿದ ಗ್ರೀಟಿಂಗ್ ಕಾರ್ಡ್, ಬಣ್ಣದ envelop, ರಟ್ಟಿನ ಫೋಟೋ ಫ್ರೇಮ್, ಬಣ್ಣ ಹಚ್ಚಿದ ಹಣತೆ, ಮೇಣದ ಬತ್ತಿ ಹೀಗೆ ಬೇರೆ ಬೇರೆ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದರು. ಹಣ ಜಾಸ್ತಿ ಇದ್ದರೂ ಸಹಾಯದ ರೂಪದಲ್ಲಿ ಹೆಚ್ಚು ಜನ ಕೊಂಡರು. ನನಗೂ ಈ ಸಹಾಯ ಕೋರುವ ವಿಧಾನ ಬಹಳ ಹಿಡಿಸಿತು. ಆದರೆ ಅವರು ಮರುದಿನವೂ ಬಂದರು. ಒಂದು ತಿಂಗಳಲ್ಲಿ ಮತ್ತೆ ಬಂದರು! ನನಗೆ ಪುನಃ ವ್ಯಾಪಾರ ಮಾಡುವ ಮನಸಿರಲಿಲ್ಲ. ಅತ್ತ ಸುಳಿದಾಡಲು ದಾಕ್ಷಿಣ್ಯವಾಗಿ ಚಹಾ ಬಿಟ್ಟು ನನ್ನ ಜಾಗದಲ್ಲೇ ಕುಳಿತಿದ್ದೆ. ಕೊನೆಗೆ ಸಂಜೆ ರೂ. 80 ತೆತ್ತು ಮೇಣದ ಬತ್ತಿಯೊಂದನ್ನು ಕೊಂಡೆ.&lt;br /&gt;&lt;br /&gt;ಇದಾಗಿ ಜನವರಿ ತಿಂಗಳಲ್ಲಿ ವೃದ್ಧರಿಗೆ ಸಹಕರಿಸುವ ಸಂಸ್ಥೆಯವರು ಬಂದರು. ಚಹಾ ಕುಡಿಯಲು ಹೊರಟಾಗ ಹಿಡಿದರು. ಸಧ್ಯಕ್ಕೆ ಬೆಂಗಳೂರಿನಲ್ಲಿ ತಮ್ಮ ಶಾಖೆ ಇಲ್ಲವೆಂದೂ, ಬೇಗನೇ ತೆರೆಯಲಿದೆಯೆಂದೂ ಹೇಳಿ ತಮ್ಮ ಸಂಸ್ಥೆಯ ಕಾರ್ಯಕ್ರಮಗಳನ್ನೂ ಹೇಳಿದರು. ನಾನು ಹೂಂ... ಹೂಂ... ಎನ್ನುತ್ತಾ ಕೇಳುತ್ತಿದ್ದೆ. ಒಬ್ಬ ಅಜ್ಜ ಅಥವಾ ಅಜ್ಜಿಯನ್ನು ದತ್ತು ತೆಗೆದುಕೊಂಡರೆ ವರ್ಷಕ್ಕೆ ರೂ. 1,200, ಬೇರೆ ಬೇರೆ ಚಿಕಿತ್ಸೆಗಳಿಗೆ ರೂ. 4,000, ರೂ 6,000 ಇತ್ಯಾದಿ ಸಹಾಯಕ್ಕೆ ಅವಕಾಶವಿದೆ ಎಂದರು. ಕೊನೆಗೆ "ನಿಮ್ಮ ಕಂಪನಿಯವರಿಗೆ ಈ ರೂ. 4,000 ದ ಕಣ್ಣಿನ ಚಿಕೆತ್ಸೆಯ ಅವಕಾಶ ಮಾತ್ರ ಕೊಡುತ್ತಿದ್ದೇವೆ" ಎಂದರು. ಅರೇ... ಇದೇನು? ನಮಗೆ ಇಷ್ಟಬಂದಷ್ಟು ಸಹಾಯ ಮಾಡುವ ಅವಕಾಶವೇ ಇಲ್ಲವಲ್ಲಾ ಎಂದುಕೊಳ್ಳುತ್ತಾ ಹೋಗಲನುವಾದೆ. "ನಾಳೆ ಚೆಕ್ ತನ್ನಿ. ಮೊಬೈಲ್ ನಂಬರ ಕೊಡಿ. ನಾಳೆ ಚೆಕ್ ತರಲು ನೆನಪಿಸುತ್ತೇವೆ" ಎಂದರು. ನಾಳೆ ಪುನಃ ಅವರ ಮುಖ ನೋಡಬೇಕಾದ ಕಾರಣ ಸರಿಯಾದ ನಂಬರೇ ಕೊಟ್ಟು ಬಂದೆ. ಮರುದಿನ ಬೆಳಗ್ಗೆ ಬಂತು ಫೋನ್. ಚೆಕ್ ತರಲು ನೆನಪಿಸಿದರು. ನಾನು ಆಯಿತೆಂದು ಹೇಳಿದರೂ ಚೆಕ್ ಕೊಂಡು ಹೋಗಲಿಲ್ಲ. ಚಹಾ ಕುಡಿಯಲು ಹೋದಾಗ ಹೇಗೋ ದಾಕ್ಷಿಣ್ಯಬಿಟ್ಟು "sorry ನಾನು ಸಹಕರಿಸಲಾರೆ" ಎಂದೆ. ಮುಂದಿ ತಿಂಗಳು ಪುನಃ ಫೋನ್ ಮಾಡುತ್ತೇವೆ ಎಂದು ಹೇಳಿ ಹೋದರು. &lt;br /&gt;&lt;br /&gt;ಈ ಮಾರ್ಚ್ ತಿಂಗಳು. ಬಾಲ ಕಾರ್ಮಿಕರನ್ನು ರಕ್ಷಿಸಿ ಶಿಕ್ಷಣ ನೀಡಲು ಸಹಕರಿಸುವ, ಬುಡಕಟ್ಟು ಜನಾಂಗದ ಹುಡುಗಿಯರ ಕಲ್ಯಾಣ, woman empowerment, ಜನರ ವಸತಿ ಮತ್ತು ಶ್ರೇಯಾಭಿವೃದ್ಧಿ ಕಾರ್ಯಕ್ರಮಕ್ಕೆ ಶ್ರಮಿಸುವುದೆಂದು ಹೇಳಿಕೊಳ್ಳುವ ಸಂಸ್ಥೆಯವರು ಬಂದರು. ಪುನ: ನನ್ನ ಚಹಾಕ್ಕೆ ಕುತ್ತಾದರು. ಈ ಬಾರಿ ಅವರ ಬಳಿ ಹೋಗಿ ದಾಕ್ಷಿಣ್ಯಕ್ಕೆ ಕಟ್ಟುಬೀಳುವ ಪರಿಸ್ಥತಿ ಬರಬಾರದೆಂದು ಆ ಕಡೆಗೆ ನೋಡದೆ ಹೋಗುತ್ತಿದ್ದೆ. ಒಬ್ಬ ಪ್ರತಿನಿಧಿ ಹಿಂಬಾಲಿಸಿ ಬಂದ. ಪುನಃ ಅವೇ ಮಾತುಗಳು. "... ನಿಮ್ಮ ಕಂಪನಿಯಲ್ಲಿ ಬಾಲಕಾರ್ಮಿಕರ ನಿಧಿಗೆ ಸಹಾಯ ಕೋರುತ್ತಿದ್ದೇವೆ. ಒಂದು ಮಗುವಿಗೆ ರೂ. 2,400 ಕೊಟ್ಟು sponsor ಮಾಡಬೇಕು" ಎಂದು ಕೇಳಲಾರಂಭಿಸಿದ. ನವಿರಾಗಿ ನಿರಾಕರಿಸಿದೆ. emotional blackmail ರೂಪದ್ದೇನೋ ಆರಂಭಿಸಿದ. "ಮಾ್ಯಡಮ್, ಭಾರತದಲ್ಲಿ ಬಾಲ ಕಾರ್ಮಿಕರ ಪರಿಸ್ಥಿತಿ ನಿಮಗೆ ಗೊತ್ತಿಲ್ಲವೇ? ನಿಮ್ಮ ಮನದಲ್ಲಿ ಅವರಿಗೆ ಸಹಕರಿಸುವ ಭಾವನೆ ಇಲ್ಲವೇ? ತಿಂಗಳಿಗೆ ನೂರು-ಇನ್ನೂರು ರೂಪಾಯಿ ನಿಮಗೆ ದೊಡ್ಡದೇ? Why ma'am? Don't you like to help them" ಎಂದು ಮುಂದಿನ ತಿಂಗಳಿಗೆ ಚೆಕ್ ಬರೆದು ಕೊಟ್ಟರೂ ಆದೀತೆಂದು ದಂಬಾಲು ಬಿದ್ದ. ನನಗೆ ನುಣುಚಿಕೊಳ್ಳಲು ಸಾಕು ಸಾಕಾಯಿತು. ಇನ್ನು ಮುಂದೆ NGO ಬರುವ ದಿನ ಚಹಾವನ್ನು ಕನಸಿನಲ್ಲೂ ನೆನೆಸಲಾರೆ ಎಂದುಕೊಂಡೆ.&lt;br /&gt;&lt;br /&gt;ಸಮಸ್ಯೆ NGO ಗಳ ಸಹಾಯ ಯಾಚನೆಯ ವಿಷಯವಲ್ಲ. ಸಮಸ್ಯೆ ಪ್ರತಿನಿಧಿಗಳ ಮಾತುಗಳು, ಅವರು ವಿಧಿಸುವ ಕಟ್ಟಳೆಗಳು.&lt;br /&gt;ಸಹಾಯ ಮಾಡುವ ಮನಸಿದ್ದವರು ಅವರಿಗೆ ಸಾಧ್ಯವಾದಷ್ಟು ಕೊಡುತ್ತಾರೆ. ಅದನ್ನು ಸ್ವೀಕರಿಸಬೇಕೆಂಬುದು ನನ್ನ ಅನಿಸಿಕೆ. ಅದಲ್ಲದೆ ಇಂಥದೇ scheme ಆರಿಸಬೇಕೆಂದು ಹೇರುವುದು ನನಗೆ ಸರಿಕಾಣುವುದಿಲ್ಲ. ಮತ್ತೆ ಫೋನ್ ಮಾಡಿ ಯಾಚಿಸುವುದು ಅಥವಾ ಮಾತಿನಲ್ಲಿ emotional blackmail ಮಾಡುವುದು ಸರಿಯಲ್ಲ. ಎಷ್ಟೋ ಸಾರಿ ನಮಗೆ ಅವರ ಮೇಲೆ ಭರವಸೆಯೇ ಇರುವುದಿಲ್ಲ. ನಾವು ಒಳ್ಳೆ ಮನಸಿಂದ ಕೊಟ್ಟ ಹಣ ಸರಿಯಾಗಿ ಬಳಕೆಯಾಗುವುದೆಂದ ನಂಬಕೆ ಬರುವುದಿಲ್ಲ. ವರ್ಷದಲ್ಲಿ ಆರೇಳು ಸಂಸ್ಥೆಗಳಿಗೆ ಸಹಾಯ ನೀಡಲೂ ಸಾಧ್ಯವಿಲ್ಲ. ಇನ್ನೂ ಅನೇಕ ಬಾರಿ ಕರ್ನಾಟಕದಲ್ಲಿ ಇಲ್ಲದ ಸಂಸ್ಥೆಗೆ ಕೊಡಬೇಕು ಎನಿಸುವುದಿಲ್ಲ. ಇವು personal choice. ಇವಕ್ಕೆ ಗೌರವ ಕೊಡಬೇಕು. ಒತ್ತಾಯಿಸಲು ಇವು ಸಾಮಾನು ಖರೀದಿಸಿದಂತಲ್ಲ. ಕೊಡುವವನು ಸಂತೋಷದಿಂದ ಕೊಟ್ಟರೆ ಚೆನ್ನ. ಕೊಟ್ಟವರ ಮನಸಿಗೆ ತೃಪ್ತಿಯಿರಬೇಕು ಎಂದು ನನ್ನ ಭಾವನೆ. &lt;br /&gt;&lt;br /&gt;ನಾನು ದಕ್ಷಿಣ ಕನ್ನಡದ ಕನ್ಯಾನದಲ್ಲಿ ಬಹಳ ಹಳೆಯ ಕಾಲದಿಂದ ನಡೆಯುತ್ತಿರುವ ಸೇವಾಶ್ರಮವನ್ನು ನೋಡಿದ್ದೇನೆ. ಏನೋ ಒಂದೆರಡು ಬಾರಿ ಅಲ್ಲಿಗೆ ಅಲ್ಪ ಸಹಾಯ ನೀಡಿದ್ದೆ. ಕೆಲದಿನಗಳಲ್ಲಿ ಅವರಿಂದ ಒಂದು ಪತ್ರ ಬಂದಿತ್ತು. ಜೊತೆಗೆ ವಿಭೂತಿ ಮತ್ತು ಕುಂಕುಮ. ಸಹಕರಿಸಿದವರ ಹೆಸರಲ್ಲಿ ಪೂಜೆ ಮಾಡಿಸಿದ್ದರ ಪ್ರಸಾದ ಎಂದಿತ್ತು. ಒಮ್ಮೆ ಆ ದಾರಿಯಲ್ಲಿ ಹೋದಾಗ ಅಲ್ಲಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಅವರು ಬಲು ಪ್ರೀತಿಯಿಂದ ಬರಮಾಡಿಕೊಂಡು ಮಾತಾಡಿಸಿದರು. ಸಹಾಯ ಬಂದ್ದನ್ನು ಹೇಗೆ ಉಪಯೋಗಸುತ್ತಿದ್ದೇವೆಂದು ತೋರಿಸಿದರು. ಆಶ್ರಮಕ್ಕೆ ನಿಶ್ಚಿತ ಆದಾಯ ಬರುವಂತೆ ತೋಟ ಖರೀದಿ ಮಾಡುವ ಯೋಜನೆಯನ್ನು ಹೇಳಿದರು. ಅಲ್ಲಿ ನನ್ನಿಂದ ಏನೂ ನಿರೀಕ್ಷೆ ಮಾಡಲಿ್ಲಲ್ಲ. ಬದಲಾಗಿ ಹಬ್ಬದ ಸಮಯ ಎಂದು ನನಗೆ ಸೀರೆ ಉಡುಗೊರೆ ನೀಡಿ ಕಳಿಸಿದರು. ಅದು ನನ್ನ ಮನಸಿಗೆ ಬಹಳ ತಟ್ಟಿತು. ಯಾವತ್ತಾದರೂ ಸಹಾಯ ನೀಡುವ ಸಂದರ್ಭ ಬಂದರೆ ಇಲ್ಲಿಗೇ ಕೊಡುವೆ ಅನಿಸಿತು. ಆ ನಂತರ ಎರಡು ವರ್ಷಗಳಿಂದ ಅತ್ತ ಹೋಗಿಲ್ಲ. ಆದರೂ ವರ್ಷವೂ ಅವರ ಆಶ್ರಮದ ಉತ್ಸವವೊಂದಕ್ಕೆ ಆಮಂತ್ರಣ ಪತ್ರವನ್ನು ಪ್ರೀತಿಯಿಂದ ಕಳಿಸುತ್ತಾರೆ. &lt;br /&gt;&lt;br /&gt;ಇದೇ ಕಾರಣಕ್ಕೋ ಏನೋ ಈ ಕಾಫಿ ಯಂತ್ರದಬಳಿ ಎರಡು ತಿಂಗಳಿಗೊಮ್ಮೆ ಕಾಣುವ NGO stall ಗಳು, ಅವುಗಳ ಅರಳು ಹುರಿದಂತೆ ಇಂಗ್ಲೀಷ್ ಮಾತಾಡುವ ಪ್ರತಿನಿಧಿಗಳು ನನ್ನನ್ನು ಸೆಳೆಯಲು ವಿಫಲವಾದದ್ದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-7979910636519729756?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/7979910636519729756/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=7979910636519729756' title='5 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/7979910636519729756'/><link rel='self' type='application/atom+xml' href='http://www.blogger.com/feeds/2942048231899528037/posts/default/7979910636519729756'/><link rel='alternate' type='text/html' href='http://chaithrika.blogspot.com/2010/03/ngo.html' title='NGO ಗಳ ಹಿಡಿತದಲ್ಲಿ...'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>5</thr:total></entry><entry><id>tag:blogger.com,1999:blog-2942048231899528037.post-3127349400084080619</id><published>2010-03-15T13:53:00.000+05:30</published><updated>2010-03-23T11:45:11.617+05:30</updated><category scheme='http://www.blogger.com/atom/ns#' term='ಪಾಠ'/><category scheme='http://www.blogger.com/atom/ns#' term='ಅನುಭವ'/><title type='text'>ಸಣ್ಣದೊಂದು ಅನುಭವದ ಪಾಠ</title><content type='html'>ಎಷ್ಟೋ ದಿನಗಳಿಂದ ಉಸಿರುಗಟ್ಟಿಸುವಷ್ಟು ಕೆಲಸದಲ್ಲಿ ಹುದುಗಿ ಹೋಗಿದ್ದರಿಂದ ಅನೇಕ ಬರೆಯಲರ್ಹ ವಿಚಾರಗಳು ತಲೆಯಲ್ಲಿ ಬಂದರೂ ಬರೆಯಲಾಗದೆ ಕೆಲವಂತೂ ಮರೆತೇ ಹೋಗಿವೆ. ಏನಿಂಥಾ ಕೆಲಸ? ಎಂದು ಯೋಚಿಸುತ್ತಿದ್ದೀರಾದರೆ ಕೇಳಿ.&lt;br /&gt;&lt;br /&gt;ನನ್ನ ಯಜಮಾನರಿಗೆ ಕಾಲಿನ ಚಿಕ್ಕ ಶಸ್ತ್ರಚಿಕಿತ್ಸೆಯೊಂದು ಆಗಬೇಕಾಗಿದ್ದು ಹಲವು ವರ್ಷಗಳಿಂದ "TODO" list  ನಲ್ಲಿ ಇತ್ತು. ಹಠಾತ್ತಾಗಿ ಅದನ್ನು ಮಾಡಬೇಕಾದ ಸಂದರ್ಭ ಬಂದು (ಕಾಲ ಕೂಡಿಬಂದುದು ಎಂದು ಹೇಳಬಹುದೇನೋ) ಅದೇ ವಿಚಾರದಲ್ಲಿ ಎರಡು ತಿಂಗಳು ಆಫೀಸು, ಮನೆ, ಆಸ್ಪತ್ರೆ ಎಂದು ಓಡಾಡಬೇಕಾಗಿ ಬಂತು. ಅದರ ನಡುವೆ ಕೆಲ ವಾರಗಳಿಂದ ಪ್ರಾಜೆಕ್ಟ್ ನ ರಿಲೀಸ್ ಎಂದು ದಿನದಲ್ಲಿ ೧೦ ಗಂಟೆ ಆಫೀಸಿನಲ್ಲಿ ಒದ್ದಾಡಿ ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಿರಬೇಕಾದರೆ, ವೈರಸ್ ಗಳು "ನಿನ್ನನ್ನು ಸುಮ್ಮನೆ ಕೂರಲು ಬಿಡಲಾರೆವು" ಎಂದು ಶೀತ, ಕೆಮ್ಮು ತಂದಿಟ್ಟಿವೆ. ಯಜಮಾನರಿಗೆ ನಾಲ್ಕು ಚಕ್ರದ ವಾಹನ ಬಿಡಲು ಡಾಕ್ಟರು ಸಮ್ಮತಿ ನೀಡಿದ್ದೊಂದು ಸಮಾಧಾನ.&lt;br /&gt;&lt;br /&gt;ಈ ಎರಡು ತಿಂಗಳಲ್ಲಿ ನನಗೆ ಹೊಸತಾದ ಬೇರೆ ಬೇರೆ ಅನುಭವಗಳಾಗಿವೆ. ಅವುಗಳಿಂದ ಚಿಕ್ಕ ಚಿಕ್ಕ ಪಾಠಗಳೂ ಸಿಕ್ಕಿವೆ. ಅದರಲ್ಲಿ ಒಂದನ್ನು ಇಲ್ಲಿ ಹೇಳಲಿದ್ದೇನೆ.&lt;br /&gt;&lt;br /&gt;ನಾವು ಪ್ರತಿದಿನ ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಲೆತ್ನಿಸುತ್ತೇವೆ. ಹೆಚ್ಚಿನ ಸಲ ಅದು ನಮ್ಮ ಆಸಕ್ತಿಯಿಂದಾಗಿರುತ್ತದೆ. ನಮಗೆ ಉಪಯೋಗವಿದೆಯೋ ಇಲ್ಲವೋ ಎಂದು ನೋಡಲು ಹೋಗುವುದಿಲ್ಲ. ಕೆಲವು ಬಾರಿ ಹೀಗೆ ಯಾವತ್ತೋ ತಿಳಿದುಕೊಂಡ ವಿಚಾರಗಳು ಇನ್ನು ಯಾವತ್ತೋ ಉಪಯೋಗಕ್ಕೆ ಬರುತ್ತವೆ. ಸ್ಟೀವ್ ಜಾಬ್ಸ್ ಎಂದೋ ಕಲಿತ calligraphy, ಮೊದಲ Macintosh computer ನ ಸುಂದರ typography ಗೆ ಕಾರಣವಾದಂತೆ. (ನನ್ನದು ಇಷ್ಟು ದೊಡ್ಡ ವಿಚಾರವಲ್ಲ!)&lt;br /&gt;&lt;br /&gt;ನಮ್ಮ ಆಸ್ಪತ್ರೆ ಖರ್ಚುಗಳನ್ನು ಇನ್ಶೂರೆನ್ಸ್ ಕಂಪನಿ ನೋಡಿಕೊಳ್ಳುವುದಿತ್ತು. ನಾನು ಆಸ್ಪತ್ರೆಯಲ್ಲಿ ಕುಳಿತು ನನ್ನ ಯಜಮಾನರ ಹೆಲ್ತ್ ಇನ್ಶೂರೆನ್ಸ್ ನ ಅತ್ಯಂತ ಉದಾಸೀನಮಯವಾದ document ಅನ್ನು ಓದುತ್ತಿದ್ದೆ. ಯಾಕೆ ಓದಬೇಕೆಂದೂ ತಿಳಿದಿರಲಿಲ್ಲ. ಮಾಡಲು ಕೆಲಸವಿಲ್ಲದೆ ಅದನ್ನು ಓದುತ್ತಿದ್ದೆ. ಡಿಸ್ಚಾರ್ಜ್ ಮಾಡುವ ದಿನ ನೋಡಿದಾಗ ಬಿಲ್ ನಲ್ಲಿ ಕೆಲವು ಸಾವಿರ ನಮ್ಮ ಕೈಯಿಂದ ಕೊಡಬೇಕೆಂದು(copayment) ಬರೆದಿತ್ತು. ನನಗೆ ಆಶ್ಚರ್ಯವಾಯಿತು. ಆ document ಪ್ರಕಾರ ನಮಗೆ ಕೋ-ಪೇಮೆಂಟು ಬೀಳಬಾರದಿತ್ತು. ಬಿಲ್ ಕೌಂಟರಿನಲ್ಲಿದ್ದವನ ಬಳಿ ಇನ್ಶೂರೆನ್ಸ್ ಕಂಪನಿ ಕಳಿಸಿದ ಮನ್ನಣೆ ಪತ್ರವನ್ನು (approval letter) ತೋರಿಸಲು ಕೇಳಿದೆ. ಅದನ್ನು ಓದಿ, ಆತ ಹಾಕಿರುವ ಲೆಕ್ಕಾಚಾರ ತಪ್ಪಿದೆಯೆಂದು ಮನವರಿಕೆ ಮಾಡಿಸಲು ಸಾಕು ಸಾಕಾಯಿತು. ಕೊನೆಗೆ ಆತ ತನ್ನ ತಪ್ಪನ್ನು ಒಪ್ಪಿ ಕ್ಷಮೆ ಕೇಳುತ್ತಾ ಹೊಸದಾಗಿ ಬಿಲ್ ತಯಾರಿಸಿ ಕೊಟ್ಟ. ನನಗೆ ಆ ಇನ್ಶೂರೆನ್ document ನಲ್ಲಿ ಏನಿದೆಯೆಂದು ತಿಳಿದಿಲ್ಲದಿದ್ದರೆ ಕೆಲವು ಸಾವಿರ ನಷ್ಟ ಮಾಡಿಕೊಳ್ಳಬೇಕಾಗುತ್ತಿತ್ತೇನೋ. ಸುಮ್ಮನೆ ಓದಿದ್ದು ಉಪಯೋಗಕ್ಕೆ ಬಂದಿತ್ತು.&lt;br /&gt;&lt;br /&gt;ಇದು ಇನ್ನೊಂದು ವಿಷಯ. ನಾನು ಕಾರು ನಡೆಸಲು ಕಲಿತು, ಲೈಸನ್ಸ್ ಪಡೆದು ನಾಲ್ಕು ವರ್ಷವಾಗಿದೆಯೇನೋ. ಇಂದಿಗೂ ಸರಿಯಾಗಿ ನಡೆಸಿದ್ದಿಲ್ಲ. ಮೂರು ನಾಲ್ಕು ಕಿಲೋಮೀಟರು ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ನಡೆಸಿ ಸುಮ್ಮನೇ ಬಿಟ್ಟಿದ್ದೆ. ಅಭ್ಯಾಸ ಬಿಟ್ಟು ಹೋದಂತೆಲ್ಲ, ಕಾರು ಬಿಡಲು ಕುಳಿತಾಗ ಭಯ ಆವರಿಸಲಾರಂಭಿಸಿತ್ತು. ಆಸ್ಪತ್ರೆ, ಮನೆ, ಆಫೀಸು ಎಂದು ಓಡಾಡುವಾಗೆಲ್ಲಾ ರಿಕ್ಷಾ, ಟ್ಯಾಕ್ಸಿ ಅಥವಾ ವಜ್ರ (ಬಸ್ಸು)ವನ್ನು ನಂಬಿಕೊಂಡೇ ಬದುಕಬೇಕಾದ್ದಕ್ಕೆ ನನ್ನನ್ನು ನಾನೇ ಹಳಿದುಕೊಂಡಿದ್ದೆ. ಉಪಯೋಗವಿತ್ತೋ, ಇಲ್ಲವೋ ಕಾರೊಂದು ಕಲಿತಿದ್ದರೆ... ಎಂದು ಬಹಳ ಸಲ ಯೋಚಿಸುವಂತಾಗಿತ್ತು. ನಾವು ಏನಾದರೂ ಕಲಿಯುತ್ತಿರುವಾಗ ಸಧ್ಯದ ಉಪಯೋಗವನ್ನು ಮನಸಲ್ಲಿರಿಸದಿರುವುದೇ ಒಳ್ಳೆಯದೇನೋ. ಕಲಿತದ್ದು ಎಂದಾದರೂ ಒಂದುದಿನ ಉಪಯೋಗಕ್ಕೆ ಬರುತ್ತದೆ. ಕಲಿತದ್ದರ ಅಗತ್ಯ ಬಾರದಿದ್ದರೆ ಸುಮ್ಮನಿದ್ದುಬಿಡುವುದು, ಅಗತ್ಯ ಬಂದಾಗ ಕಲಿತಿರದೆ ದುಃಖಿಸುವುದಕ್ಕಿಂತ ಒಳ್ಳೆಯದೆಂದು ನಾನು ಅರಿತುಕೊಂಡೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-3127349400084080619?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/3127349400084080619/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=3127349400084080619' title='6 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/3127349400084080619'/><link rel='self' type='application/atom+xml' href='http://www.blogger.com/feeds/2942048231899528037/posts/default/3127349400084080619'/><link rel='alternate' type='text/html' href='http://chaithrika.blogspot.com/2010/03/blog-post.html' title='ಸಣ್ಣದೊಂದು ಅನುಭವದ ಪಾಠ'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>6</thr:total></entry><entry><id>tag:blogger.com,1999:blog-2942048231899528037.post-253574614154146461</id><published>2010-02-17T16:56:00.000+05:30</published><updated>2010-02-17T16:58:51.947+05:30</updated><title type='text'></title><content type='html'>Water colour painting ನನ್ನ ನೆಚ್ಚಿನ ಹವ್ಯಾಸ. ಆದರೆ ಅದನ್ನು ಮಾಡದೆ ವರ್ಷವೇ ಆಯಿತು.&lt;br /&gt;ಬೆಂಗಳೂರಿಗೆ ಬಂದು ಎರಡು ವರ್ಷವಾಗಲು ಬಂತು. ಕೇವಲ ಒಂದೇ painting ಮಾಡಿದ್ದೇನೆ. ಆದರೆ ಅದು ಹಾಳೆಯ ಗುಣದಿಂದಾಗಿ ಬಣ್ಣ ಹಚ್ಚುವಾಗ ಸಿಪ್ಪೆ ಎದ್ದು ಬಹಳ ದುಃಖವಾಯಿತು. ಬಿಟ್ಟು ಹೋದ ಹವ್ಯಾಸವನ್ನು ಪುನಃ ಮುಂದುವರಿಸುವಾಸೆ. ಈ ವರ್ಷ ಕನಿಷ್ಟ ಮೂರಾದರೂ painting ಮಾಡಬೇಕೆಂದುಕೊಂಡಿದ್ದೇನೆ. ನನಗೊಂದು ಪ್ರಶ್ನೆಯಿದೆ. ಬ್ಲಾಗ್ ನಲ್ಲಿ ಹಾಕಿದರೆ ಉತ್ತರ ಬಂದೀತೆಂದು ಭಾವಿಸಿದ್ದೇನೆ.&lt;br /&gt;ಅದಕ್ಕಿಂತ ಮೊದಲು ಕಳೆದ ವರ್ಷ ಮಾಡಿದ painting ನ ಫೋಟೊ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_KKfkb37kvUA/S3vSszFKVYI/AAAAAAAABOo/9KHVASQ-5bA/s1600-h/DSC+MyPic.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 240px; height: 320px;" src="http://3.bp.blogspot.com/_KKfkb37kvUA/S3vSszFKVYI/AAAAAAAABOo/9KHVASQ-5bA/s400/DSC+MyPic.jpg" border="0" alt=""id="BLOGGER_PHOTO_ID_5439172642047939970" /&gt;&lt;/a&gt;&lt;br /&gt;&lt;br /&gt;&lt;br /&gt;Water colour painting ಮಾಡಲು ಹಾಳೆಗಳು ಬೇಕು. ಬಣ್ಣವನ್ನು wash ಮಾಡಿದರೆ ಹಾಳೆಯ ಸಿಪ್ಪೆ ಏಳಬಾರದು. ಎಂಥ ಹಾಳೆ ಉಪಯೋಗಿಸಬೇಕು? ಮತ್ತು ಬೆಂಗಳೂರಿನಲ್ಲಿ ಯಾವ ಅಂಗಡಿಯಲ್ಲಿ ಅದನ್ನು ಪಡೆಯಬಹುದು? ಗೊತ್ತಿದ್ದರೆ ದಯವಿಟ್ಟು ಹೇಳಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-253574614154146461?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/253574614154146461/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=253574614154146461' title='15 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/253574614154146461'/><link rel='self' type='application/atom+xml' href='http://www.blogger.com/feeds/2942048231899528037/posts/default/253574614154146461'/><link rel='alternate' type='text/html' href='http://chaithrika.blogspot.com/2010/02/water-colour-painting.html' title=''/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_KKfkb37kvUA/S3vSszFKVYI/AAAAAAAABOo/9KHVASQ-5bA/s72-c/DSC+MyPic.jpg' height='72' width='72'/><thr:total>15</thr:total></entry><entry><id>tag:blogger.com,1999:blog-2942048231899528037.post-8118791630980163168</id><published>2010-02-09T10:57:00.000+05:30</published><updated>2010-02-09T10:59:05.702+05:30</updated><category scheme='http://www.blogger.com/atom/ns#' term='password hack'/><title type='text'>ALERT</title><content type='html'>Please do not click on link&lt;br /&gt;see-new-pics. blogspot .com&lt;br /&gt;&lt;br /&gt;You google account password gets hacked!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-8118791630980163168?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/8118791630980163168/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=8118791630980163168' title='1 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/8118791630980163168'/><link rel='self' type='application/atom+xml' href='http://www.blogger.com/feeds/2942048231899528037/posts/default/8118791630980163168'/><link rel='alternate' type='text/html' href='http://chaithrika.blogspot.com/2010/02/alert.html' title='ALERT'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>1</thr:total></entry><entry><id>tag:blogger.com,1999:blog-2942048231899528037.post-9070578214674188102</id><published>2010-02-04T11:08:00.000+05:30</published><updated>2010-02-17T17:08:27.651+05:30</updated><category scheme='http://www.blogger.com/atom/ns#' term='ಹರಟೆ'/><category scheme='http://www.blogger.com/atom/ns#' term='new year resolution'/><title type='text'>ಹುಚ್ಚು ಮನದ ಹಲವು ಆಲೋಚನೆಗಳು</title><content type='html'>3-4 ವರ್ಷಗಳ ಹಿಂದಿನ ಮಾತು. ನಾನು ಹಾಸ್ಟೆಲಲ್ಲಿ, ಪೇಯಿಂಗ್ ಗೆಸ್ಟ್ ಆಗಿ ಕಳೆದ ದಿನಗಳು. ಮದುವೆ, ಪೂಜೆ ಇತರ ಸಮಾರಂಭಗಳಿಗೆ ಒಮ್ಮೊಮ್ಮೆ ಹೋಗಬೇಕಾಗುತ್ತಿತ್ತು. ಅಲ್ಲಿ ಅನೇಕ ಸಂಬಂಧಿಗಳು ಸಿಗುತ್ತಿದ್ದರು. ಅನೇಕ ಹೆಂಗಸರನ್ನು ನೋಡಿ ಮಾತ್ರ ನೆನಪಿರುತ್ತಿತ್ತು. ಅವರು ಏನು, ಎಲ್ಲಿ ಇರುವುದು, ನನಗೆ ಯಾವ ರೀತಿ ಸಂಬಂಧಿಕರು? ಇವೆಲ್ಲ ನೆನಪೇ ಇರುತ್ತಿರಲಿಲ್ಲ. ಅದನ್ನು ತಿಳಿಯುವ ಆಸಕ್ತಿಯೂ ಇರುತ್ತಿರಲಿಲ್ಲ. &lt;br /&gt;ಕೆಲವರಂತೂ ಕಂಡಾಕ್ಷಣ "ನನ್ನ ಗುರುತು ಸಿಕ್ಕಿತಾ?" ಎಂದು ಕೇಳುವುದು; ಹೌದೆಂದರೆ "ಹಾಗಾದರೆ ಯಾರೆಂದು ಹೇಳು" ಎಂದು ಪೀಡಿಸುವುದು ಮತ್ತೆ ನಾನು "ಅದೂ...ಆ..." ಎಂದು ತೊದಲಿದಾಗ "ನಾನು ನಿನ್ನ ಅಜ್ಜಿಯ ಸೋದರ ಮಾವನ....." ಎಂದು ಬಿಡಿಸಲಾರದ ಒಗಟೊಂದನ್ನು ನನ್ನ ಮುಂದಿಡುವುದು ಮಾಡುತ್ತಿದ್ದರು.&lt;br /&gt;ಇನ್ನು ಕೆಲವರು ನಾನು ಹಾಸ್ಟೆಲಲ್ಲಿ ಯಾ ಪೇಯಿಂಗ್ ಗೆಸ್ಟ್ ಆಗಿ ಇರುವುದೆಂದು ತಿಳಿದ ಕೂಡಲೇ "ಬೆಳಗ್ಗೆ ಏಳುವುದು ಎಷ್ಟು ಗಂಟೆಗೆ? ತಿಂಡಿಗೆ ಏನು ಕೊಡುತ್ತಾರೆ? ಮಧ್ಯಾಹ್ನ ಊಟಕ್ಕೇನು ಕೊಡುತ್ತಾರೆ? ಎಷ್ಟು ಹೊತ್ತಿಗೆ ಊಟ? ಸ್ನಾನಕ್ಕೆ ಬಿಸಿನೀರು ಇದೆಯಾ?" ಎಂದೆಲ್ಲ ನಾನು ಗಣನೆಗೇ ತೆಗೆದುಕೊಂಡಿರದ ವಿಷಯಗಳನ್ನು ಕೇಳುತ್ತಾರೆ. ನಾನು ಎಷ್ಟೋ ಬಾರಿ "ನಾನು ಹೇಗಿದ್ದರೆ ಇವರಿಗೇನಪ್ಪಾ" ಎಂದು ಆಶ್ಚರ್ಯಪಟ್ಟಿದ್ದೇನೆ. ಈ ಅಪ್ರಯೋಜಕ ಕಾಡು ಹರಟೆಗಿಂತ ಏನಾದರೂ ಒಳ್ಳೆಯ ವಿಚಾರ ಮಾತಾಡಿದರೆ ಆಗುವುದಿಲ್ಲವೇ ಅಥವಾ ಸುಮ್ಮನಿರುವುದು ಒಳ್ಳೆಯದಲ್ಲವೇ? ಎಂದು ಅನಿಸಿದ್ದಿದೆ. ಇದನ್ನು ಕೆಲವರ ಬಳಿ ಹೇಳಲು ಹೋಗಿ "ಏನೂ ಮಾತನಾಡದೆ ಹೋದರೆ relations ಉಳಿಯುವುದು ಹೇಗೆ? ಇಷ್ಟಕ್ಕೂ ಅವರು ಹಾಗೆ ಕೇಳಿದರೆ ತಪ್ಪೇನಿದೆ?" ಎಂದೂ ನಾನು  ಬೈಸಿಕೊಂಡದ್ದಿದೆ.&lt;br /&gt;&lt;br /&gt;ಏನೇ ಇರಲಿ ನನಗಂತೂ ಈರೀತಿ ಹರಟುವುದಕ್ಕಿಂತ "blank" ಆಗಿ ಒಂದೆಡೆ ಕುಳಿತಿರುವುದು ಇಷ್ಟವಾಗುತ್ತದೆ. "blank" ಆಗಿರುವುದು ಹೇಗೆಂದು ಇನ್ನೊಮ್ಮೆ ಹೇಳುತ್ತೇನೆ. &lt;br /&gt;&lt;br /&gt;ಮದುವೆಯಾದ ನಂತರ ಈ ಪ್ರಶ್ನೆಗಳ ಸ್ವರೂಪ ಬದಲಾಗಿದೆ. ಮಾತ್ರ ಅಷ್ಟೇ ಅಪ್ರಯೋಕವಾಗಿವೆ. "ಅಡುಗೆಗೆ ಏನು ಮಾಡುವುದು?", "ಇಬ್ಬರೂ ಕೆಲಸಕ್ಕೆ ಹೋಗುವಾಗ lunch box ಕೊಂಡೊಯ್ಯುತ್ತೀರಾ?", "ರಾತ್ರಿಗೆ ಅಡುಗೆ ಬೆಳಗ್ಗೆ ಮಾಡಿದುವುದಾ?", "ಎಷ್ಟು ಹೊತ್ತಿನ ಬಸ್ ಪ್ರಯಾಣ?" ಇತ್ಯಾದಿ. ಆದರೆ ಈಗ ನನಗೆ ಇವಕ್ಕೆ ಉತ್ತರಿಸುವುದರಲ್ಲಿ ತಪ್ಪು ಕಾಣುವುದಿಲ್ಲ. ಪ್ರಶ್ನೆಗಳು ಮೊದಲಿನಷ್ಟು irritate ಆಗುವುದಿಲ್ಲ. &lt;br /&gt;&lt;br /&gt;ತೀರ ಇತ್ತೀಚೆಗಷ್ಟೇ ಯೋಚಿಸಿದೆ... ಈ ಬದಲಾವಣೆಗೆ ಕಾರಣ ಏನಿರಬಹುದೆಂದು. ಇನ್ನೂ ಗೊತ್ತಾಗಿಲ್ಲ. ಸಹನೆ ಹೆಚ್ಚಿದೆಯೇ? ಅಲ್ಲಾ ನಾನು ಇವನ್ನು tolerate ಮಾಡಲು ಕಲಿತಿರುವೆನೇ? ಇದಕ್ಕೇ maturity ಎನ್ನುವುದೇ? ಅಥವಾ ನನ್ನಲ್ಲಿ ಮಾತನಾಡಲು ವಿಷಯಗಳು ಮುಗಿದುಹೋಗಿವೆಯೇ? &lt;br /&gt;ನಾನು ಇದನ್ನು ಇಷ್ಟಪಡುತ್ತಿದ್ದೇನೆಯೇ? ಅಯ್ಯೋ... ಹಾಗಾದರೆ ನಾನು ಮುಂದೊಂದು ದಿನ ಇವರಂತೆ ಬೇರೆಯವರ ತಲೆತಿನ್ನಲಿದ್ದೇನೆಯೇ? ನನಗೆ ವಯಸ್ಸಾಗುತ್ತಿರುವುದರ ಸೂಚನೆಯೇ? ಹಾ.. ಹೆದರಿಕೆಯಾಗತೊಡಗಿದೆ. &lt;br /&gt;ವರ್ಷಗಳು ಉರುಳಿದಂತೆ ಜ್ಞಾನ ಹೆಚ್ಚಬೇಕು, ಅನಗತ್ಯ ಮಾತು ಕಡಿಮೆಯಾಗಬೇಕು ಎಂದು ನನ್ನ ಭಾವನೆ. ನನ್ನ ಜ್ಞಾನ ವೃದ್ಧಿಯಾಗುವುದು ನಿಂತಿದೆಯೇ? ತಲೆ ಬಡ್ಡಾಗುತ್ತಿದೆಯೇ? (ಮಂಗಳೂರು ಕಡೆ ಇದರ ಅರ್ಥ, ಮೆದುಳು sharpness ಕಳೆದುಕೊಂಡಿದೆ ಎಂದು) ಹಾಗಿದ್ದರೆ ನಾನು ಏನು ಮಾಡುತ್ತಿದ್ದೇನೆ? ಯೋಚಿಸತೊಡಗಿದ್ದೇನೆ. &lt;br /&gt;ಇದಕ್ಕಾಗಿ ಹೊಸವರ್ಷದಲ್ಲಿ resolution ತೆಗೆದುಕೊಳ್ಳಲು ಆಲೋಚಿಸಿದ್ದೇನೆ. &lt;br /&gt;&lt;br /&gt;ಈ ವರ್ಷದಿಂದ ಮುಂದೆಂದಿಗೂ ಅನಗತ್ಯ ಹರಟೆಯಲ್ಲಿ ತೊಡಗಲಾರೆ. ಅಥವಾ ಹೀಗೆ ಹೇಳಲೇನೋ... ಈ ವರ್ಷದಿಂದ ಮುಂದೆ ನಾನು knowledge ಹೆಚ್ಚಿಸಿಕೊಳ್ಳುವತ್ತ ಗಮನ ಕೊಡುತ್ತೇನೆ. (ಇದರಿಂದ ಅನಗತ್ಯ ಹರಟೆ ತಂತಾನೇ ಮರೆತುಹೋಗುವುದೆಂಬ ಅನಿಸಿಕೆ)... ಏನೋ... resolution ಏನು ಎಂದೂ ಹೊಳೆಯುತ್ತಿಲ್ಲ!!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-9070578214674188102?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/9070578214674188102/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=9070578214674188102' title='5 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/9070578214674188102'/><link rel='self' type='application/atom+xml' href='http://www.blogger.com/feeds/2942048231899528037/posts/default/9070578214674188102'/><link rel='alternate' type='text/html' href='http://chaithrika.blogspot.com/2010/02/blog-post.html' title='ಹುಚ್ಚು ಮನದ ಹಲವು ಆಲೋಚನೆಗಳು'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>5</thr:total></entry><entry><id>tag:blogger.com,1999:blog-2942048231899528037.post-8619045817022497684</id><published>2010-01-25T14:42:00.000+05:30</published><updated>2010-01-25T15:25:47.446+05:30</updated><title type='text'>ಕನ್ನಡ ಚೆನ್ನಾಗಿದೆಯಾ?</title><content type='html'>ಮೈಸೂರಿನ ಬೇಕರಿಯೊಂದರಲ್ಲಿ cashier ಮುಂದೆ ಕಂಡ ಫಲಕ ಇದು. &lt;br /&gt;ಫೋಟೋ ತೆಗೆಯಬೇಕೆನಿಸಿದರೂ cashier ಭಯದಿಂದ ಸುಮ್ಮನಾದೆ.&lt;br /&gt;ನೆನಪಿದ್ದಷ್ಟನ್ನು ಹಾಕಿದ್ದೇನೆ. ಕೊನೆಯದು ಏನೆಂದು ಇನ್ನೂ ಗೊತ್ತಾಗಲಿಲ್ಲ.&lt;br /&gt;&lt;br /&gt;ಟೊಮೆಟೊ ಅಪ್ಪಳ ...... 22=00&lt;br /&gt;ಹುದ್ದಿನ ಮಸಾಲೆ ....... 22=00&lt;br /&gt;ಫೇಣಿ ಅಪ್ಪಳ ........... 22=00&lt;br /&gt;ಅಕ್ಕಿ ಅಪ್ಪಳ ............ 22=00&lt;br /&gt;ಕಾರ ಅಪ್ಪಳ ............ 22=00&lt;br /&gt;ಉರುಳ್ಳಿ ಅಪ್ಪಳ ........ 25=00&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-8619045817022497684?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/8619045817022497684/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=8619045817022497684' title='7 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/8619045817022497684'/><link rel='self' type='application/atom+xml' href='http://www.blogger.com/feeds/2942048231899528037/posts/default/8619045817022497684'/><link rel='alternate' type='text/html' href='http://chaithrika.blogspot.com/2010/01/blog-post.html' title='ಕನ್ನಡ ಚೆನ್ನಾಗಿದೆಯಾ?'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>7</thr:total></entry><entry><id>tag:blogger.com,1999:blog-2942048231899528037.post-9152507666980864298</id><published>2010-01-01T12:00:00.000+05:30</published><updated>2010-01-01T12:01:51.267+05:30</updated><title type='text'>2010ನ ಶುಭಾಶಯಗಳು</title><content type='html'>ಹೊಸ ವರುಷದ ಹಾರ್ದಿಕ ಶುಭಾಶಯಗಳು. 2010 ಎಲ್ಲರಿಗೂ ಉತ್ತಮ ಆರೋಗ್ಯವನ್ನು ನೀಡಲಿ. ಹೊಸ ವರ್ಷದಲ್ಲಿ ಅನೇಕ ಬರಹಗಳನ್ನು ಬರೆಯಲಿಚ್ಛಿಸಿದ್ದೇನೆ. ಅವಕ್ಕೆಲ್ಲ ಅವಕಾಶ ಸಿಗುವುದರೊಂದಿಗೆ ಸಮಯವೂ ಹೊಂದಾಣಿಕೆಯಾಗಲೆಂದು ಆಶಿಸುತ್ತೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-9152507666980864298?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/9152507666980864298/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=9152507666980864298' title='3 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/9152507666980864298'/><link rel='self' type='application/atom+xml' href='http://www.blogger.com/feeds/2942048231899528037/posts/default/9152507666980864298'/><link rel='alternate' type='text/html' href='http://chaithrika.blogspot.com/2009/12/2010.html' title='2010ನ ಶುಭಾಶಯಗಳು'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>3</thr:total></entry><entry><id>tag:blogger.com,1999:blog-2942048231899528037.post-6674647759609234898</id><published>2009-10-28T14:15:00.000+05:30</published><updated>2010-01-14T13:05:37.223+05:30</updated><category scheme='http://www.blogger.com/atom/ns#' term='tour'/><category scheme='http://www.blogger.com/atom/ns#' term='chitradurga'/><title type='text'>ಚಿತ್ರದುರ್ಗ trip</title><content type='html'>ಬಹು ದಿನಗಳಿಂದ ನನ್ನ ಬ್ಲಾಗಿನಲ್ಲಿ ಎನೂ ಬರಹ ಕಾಣಿಸಿಲ್ಲವೆಂದು ಬ್ಲಾಗ್ ನ "The End" ಆಗಿದೆಯೆಂಬ ಸಂದೇಹ ಅನೇಕರಿಗೆ ಕಾಡಿರಬಹುದು. ಬರೆಯುವಂತಹ ವಿಷಯವೇನೂ ನನ್ನಲ್ಲಿ ಇರಲಿಲ್ಲ. ಇಂದು ವಿಷಯವಿದೆ. ಚಿತ್ರದುರ್ಗದ ಬಗ್ಗೆ!&lt;br /&gt;&lt;br /&gt;ಸೆಪ್ಟೆಂಬರ್ 18, 19, 20, 21 ನನಗೆ ಮತ್ತು ನನ್ನ ಕುಟುಂಬದವರೆಲ್ಲರಿಗೂ ರಜೆ ಇರುವ ಕಾರಣ ಎಲ್ಲಾದರೂ ಸುತ್ತಾಡಲು ಹೋಗಬೇಕು ಎಂದು ಒಂದು ತಿಂಗಳು ಮೊದಲೇ ಯೋಚನೆ ಮಾಡಹತ್ತಿದ್ದೆವು. 18 ನೇ ತಾರೀಖಿನವರೆಗೂ finalists ಗಳ ಪಟ್ಟಿಯಿಂದ winner ನ ಆಯ್ಕೆ ಆಗಿರಲಿಲ್ಲ. ಕೊನೆಗೆ ಮಡಿಕೇರಿ, ವಯನಾಡು, ಚಿಕ್ಕಮಗಳೂರು ಗಳನ್ನು ಹಿಂದಿಕ್ಕಿ ಚಿತ್ರದುರ್ಗ winner ಆಗಿ ಆಯ್ಕೆಯಾಯಿತು. ನಾನು, ಕೃಷ್ಣ, ಅತ್ತೆ, ಮಾವ, ಕೃಷ್ಣನ ಅಕ್ಕ, ಭಾವ ಮತ್ತು ಅವರ ಮಗ ನಿಖಿಲ್ ಪಯಣಿಗರು. ಎಂಟು ಜನ ತುಂಬುವ Toyota Qualis ಅನ್ನು 19, ಶನಿವಾರ ಬೆಳಿಗ್ಗೆ 6:30ಕ್ಕೆ ಬರಹೇಳಿದ್ದಾಯಿತು. ಬ್ಯಾಗು ತುಂಬಿಸಿಕೊಳ್ಳದೆ ನಡು ರಾತ್ರಿವರೆಗೆ Qualis ಅಲ್ಲಿ CD Player ಇದೆಯೋ ಇಲ್ಲವೋ ಗೊತ್ತಿರದಿದ್ದರೂ MP3 ಹಾಡುಗಳನ್ನು CD ಗೆ copy ಮಾಡುತ್ತಿದ್ದ ನನ್ನನ್ನು ನೋಡಿ "ಹಾಕಲು ಬಟ್ಟೆ ಇಲ್ಲದಿದ್ದರೂ CD ready" ಎಂದು ಕೃಷ್ಣ ನಕ್ಕುದಾಯಿತು.&lt;br /&gt;&lt;br /&gt;(Day 1)&lt;br /&gt;&lt;br /&gt;4:30 ಕ್ಕೆ ಕಿರುಚಿದ alarm ಅನ್ನು snooze ಎಂದು ಮುಂದೆ ಹಾಕಿ ಹಾಕಿ, 5:30 ಕ್ಕೆ ಎದ್ದುದಾಯಿತು. ರಪ ರಪನೆ ಹೊರಟು 6:45 ಕ್ಕೆ Toyota Qualis ಹತ್ತಿದ್ದಾಯಿತು. ನನ್ನ ಅತ್ತೆ ಮತ್ತು ಅತ್ತಿಗೆ ಸೇರಿ 10 litre ನೀರನ್ನು can ಒಂದರಲ್ಲಿ ತುಂಬಿಕೊಂಡಿದ್ದರು. ಇಷ್ಟು ನೀರು ಏಕಪ್ಪಾ ಎಂದುಕೊಳ್ಳುತ್ತಿದ್ದ ನನ್ನ ಯೋಚನೆ ತಪ್ಪು ಎಂದು ಅರಿವಾಗಲು ಬಹಳ ಹೊತ್ತು ಬೇಕಾಗಲಿಲ್ಲ. &lt;br /&gt;&lt;br /&gt;ಮೈಸೂರಿಂದ ಶ್ರೀರ೦ಗಪಟ್ಟಣ, ಪಾಂಡವಪುರ, ತುರುವೆಕೆರೆ ದಾಟಿ ಚಿಕ್ಕನಾಯಕನ ಹಳ್ಳಿ ತಲುಪಿದಾಗ ಎಲ್ಲರ ಹೊಟ್ಟೆಯೂ ಚುರುಗುಟ್ಟುತ್ತಿತ್ತು. ಈ ದಾರಿಯಲ್ಲಿ ಎಲ್ಲೂ ಸರಿಯಾದ ಹೋಟೆಲ್ ಗಳಿಲ್ಲದಿರಿವುದು ದೊಡ್ಡ ತೊಂದರೆಯೇ ಸರಿ. ಚೆನ್ನಾಗಿರುವ Toilet ಇರುವ ಹೋಟೆಲ್ ಹುಡುಕುತ್ತ ಸಾಗಿದ್ದ ನಮಗೆ ಒಂದೂ ಹೋಟೆಲ್ ಸಿಗದ ಪರಿಸ್ಥಿತಿ ಎದುರಾಯಿತು. ಕೊನೆಗೆ ಚಿಕ್ಕನಾಯಕನ ಹಳ್ಳಿಯಲ್ಲಿ ಚಿಕ್ಕ ಹೋಟೆಲ್ ಕಂಡಾಗ ತಿಂಡಿತಿನ್ನಲು ಇಳಿಯಲೇ ಬೇಕಾಯಿತು.&lt;br /&gt;&lt;br /&gt;ಒಬ್ಬ ಅಡುಗೆಯವನಿದ್ದ ಹೋಟೆಲ್ ನಲ್ಲಿ ಇಡ್ಲಿ ತಿನ್ನುತ್ತಾ ಸಹೃದಯಿ ಮಾಲಕನಲ್ಲಿ ಮಾತಾಡುತ್ತಿದ್ದಾಗ ತಿಳಿಯಿತು ಅವರು ಉಡುಪಿ ಬಳಿಯವರೆಂದು! ನನ್ನನ್ನು ಬಿಟ್ಟು ಉಳಿದ ಆರು ಜನರಿಗೂ ಅಲ್ಲಿಯ ತಿಂಡಿ ಇಷ್ಟವಾಯಿತು. ಹೊರಡಲನುವಾದಾಗ Toilet ಹುಡುಕುತ್ತಿದ್ದ ನಮ್ಮ ಸಮಸ್ಯೆಯನ್ನರಿತ ಅವರು ಪಕ್ಕದಲ್ಲಿದ್ದ ತಮ್ಮ ಮನೆಗೆ ಕರೆದೊಯ್ದರು. ಅವರ ಹೆಂಡತಿಯೂ ಚೆನ್ನಾಗಿ ಮಾತಾಡಿದರಲ್ಲದೆ ತಾವು ಉಡುಪಿ ಬಳಿಯ ಬಾರ್ಕೂರಿನವರು ಎಂದಾಗ ನನಗೆ ಅಚ್ಚರಿಯಾಯಿತು. ಉಡುಪಿ ಬಿಟ್ಟು ಇಲ್ಲೇಕಿರುವರಪ್ಪಾ ಎಂಬ ಸಂದೇಹವೂ ಬರದಿರಲಿಲ್ಲ. ನಂತರ ಕೆಲವೇ ನಿಮಿಷಗಳಲ್ಲಿ ಅವರ ಮುದ್ದಾದ ಪುಟ್ಟ ಮಗನ ಕೈಲಿ ಚಾಕಲೇಟು ತುರುಕಿ, ಟಾಟಾ ಹೇಳಿ ನಮ್ಮ ಪ್ರಯಾಣ ಮುಂದುವರಿಯಿತು. &lt;br /&gt;&lt;br /&gt;ಎಲ್ಲರೂ ರಿಲ್ಯಾಾಾಾಕ್ಸ್ ಆಗಿ Qualis ನಲ್ಲಿ ಕುಳಿತಿರುವಾಗ ನಾನು CD Player ನಲ್ಲಿ ನಾನು ತಂದಿದ್ದ CD ತುರುಕಿದೆ. ಸ್ವಲ್ಪ ಹೊತ್ತಿನಲ್ಲಿ ಹೆಚ್ಚಿನವರು ನಿದ್ದೆಹೋದರು. (ನನ್ನ ಹಾಡುಗಳಿಂದಾಗಿ ಅಲ್ಲ). ನಾನು ಸುತ್ತಲಿನ ದೃಶ್ಯವನ್ನು ನೋಡುವ ಅವಕಾಶ ಕಳೆದುಕೊಳ್ಳಲಿಚ್ಛಿಸದೆ ನಿದ್ದೆ ಮಾಡದೆ ಕುಳಿತಿದ್ದೆ. ಆ ಹಳೆಯ Qualis ನ ಕೊನೆಯ ಸಾಲಿನ seat ನಲ್ಲಿ ಕಿಟಕಿ ತೆರೆಯಲಾಗದಿದ್ದರೂ ಕಷ್ಟಪಟ್ಟು ಹೊರ ನೋಡುವುದರಲ್ಲಿ ಏನೋ ಖುಷಿ ಇತ್ತು. Qualis 11 ಗಂಟೆಯ ಹೊತ್ತಿಗೆ ಬೆಂಗಳೂರು-ಪುಣೆ ಹೆದ್ದಾರಿ ತಲುಪಿತ್ತು. ದೂರದ ಗುಡ್ಡಗಳಲ್ಲಿ ಗಾಳಿ ಯಂತ್ರಗಳು (wind mill) ಕಾಣಲಾರಂಭಿಸಿದುವು. ಮತ್ತೊಂದು ಗಂಟೆಯಲ್ಲಿ ನಾವು ಚಿತ್ರದುರ್ಗ ತಲುಪಿದ್ದೆವು.&lt;br /&gt;&lt;br /&gt;ಸೀದ ಹೋಗಿ ಕೋಟೆಯ ಮುಂದೆ ಇಳಿದ ನಾವು ಗೊತ್ತು ಗುರಿ ಇಲ್ಲದಂತೆ ಅಡ್ಡಾಡತೊಡಗಿದವು. ಕೋಟೆಯ ದ್ವಾರದಲ್ಲಿ ಮುಖ್ಯ ಭಾಗಗಳ map ಇದ್ದುದನ್ನು ನಾವು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಕೋಟೆಯ ಎಡಭಾಗದಲ್ಲಿ ಮುಂದುವರಿದು ನಾವು ಬನಶಂಕರಿ ಗುಡಿ ಹಾಗೂ ಮದ್ದು ಬೀಸುವ ಕಲ್ಲು ನೋಡಿದೆವು. ಅಲ್ಲಿ ಅದನ್ನು ಬಳಸುತ್ತಿದ್ದ ಬಗ್ಗೆ ವಿವರಣೆ ಇದ್ದ ಫಲಕವಿದ್ದರೂ ಆ ಬರಹಕ್ಕೂ ನಮ್ಮ ಕಲ್ಪನೆಗೂ ತಾಳೆಯಾದಂತೆ ಕಾಣಲಿಲ್ಲ. ನಮ್ಮಲ್ಲೇ Computer, Electronics, Mechanical, Civil  ಎಂಜಿನಿಯರುಗಳೊಂದಿಗೆ M.Tec. ರಾಂಕ್ ಪಡೆದವರಿದ್ದರೂ ಅ ಕಲ್ಲುಗಳನ್ನು ಬಳಸುತ್ತಿದ್ದುದು ಹೇಗಿರಬಹುದು ಎಂದು ಎಷ್ಟು ಯೋಚಿಸಿದರೂ ತಿಳಿಯಲಿಲ್ಲ. ನೆತ್ತಿ ಮೇಲೆ ಬಿಸಿಲು ಕಾಯುತ್ತಿತ್ತು. ಮರದ ನೆರಳಲ್ಲಿ ಕುಳಿತಿದ್ದ Guide ಒಬ್ಬ "ಊಟ ಮಾಡ್ಕೊಂಡ್ ಬನ್ನಿ ಸಾರ್, ಕೋಟೆ ತೋರಿಸ್ತೀನಿ" ಅಂದ. ಊಟ ಮಾಡಿ lodge ಹುಡುಕಹೊರಟ ನಾವು ಇಂಟರ್ ನೆಟ್ ನೋಡಿ ಮೊದಲೇ ಪಟ್ಟಿ ಮಾಡಿದ್ದ ಹೋಟೆಲುಗಳನ್ನು ನೋಡುವುದೆಂದು ನಿಶ್ಚಯಿಸಿದೆವು. ಪೇಟೆಯೊಳಗಿನ ಹೋಟೆಲುಗಳು ಸರಿಯಾದ maintenance ಇಲ್ಲದೆ ಕೆಟ್ಟದಾಗಿದ್ದವು. ಇದೇ ನೋಡುತ್ತಿದ್ದರೆ mood ಹಾಳಾದೀತೆಂದು "ಆದದ್ದಾಗಲಿ ಮತ್ತೆ ನೋಡೋಣ" ಎಂದು ಕೋಟೆಯತ್ತ ಹೊರಟೆವು.&lt;br /&gt;&lt;br /&gt;ಮದ್ದು ಬೀಸುವ ಕಲ್ಲು:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_KKfkb37kvUA/S07E4FKQLzI/AAAAAAAABKc/FPFk6v9pAvo/s1600-h/maddu+beesuva+kallu.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/_KKfkb37kvUA/S07E4FKQLzI/AAAAAAAABKc/FPFk6v9pAvo/s400/maddu+beesuva+kallu.JPG" border="0" alt=""id="BLOGGER_PHOTO_ID_5426491068764925746" /&gt;&lt;/a&gt;&lt;br /&gt;&lt;br /&gt;ಕೋಟೆಯ ದ್ವಾರದಲ್ಲಿ ಮುಖ್ಯಪಟ್ಟ ಭಾಗಗಳ ನಕ್ಷೆ ಇದೆ. ಅದನ್ನು ನೋಡಿದರೆ ದಾರಿಯ ಅಲ್ಪ ಕಲ್ಪನೆ ಮಾಡಬಹುದು. ಈ ಕೋಟೆಯನ್ನು Archaeological Survey of India ಸಂರಕ್ಷಿಸುತ್ತಿರುವ ಕಾರಣ ಅಲ್ಲಲ್ಲಿ ಬೋರ್ಡ್ ಗಳು ಹಾಕಲ್ಪಟ್ಟಿದ್ದಲ್ಲದೆ ಸ್ವಚ್ಛತೆಯನ್ನೂ ಕಾಪಾಡಲಾಗಿದೆ. &lt;br /&gt;&lt;br /&gt;ನಕ್ಷೆ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_KKfkb37kvUA/S07D2Ks5pkI/AAAAAAAABKU/AKdMooX3A_w/s1600-h/nakshe.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://2.bp.blogspot.com/_KKfkb37kvUA/S07D2Ks5pkI/AAAAAAAABKU/AKdMooX3A_w/s400/nakshe.jpg" border="0" alt=""id="BLOGGER_PHOTO_ID_5426489936381060674" /&gt;&lt;/a&gt;&lt;br /&gt;&lt;br /&gt;ಹಾಗೇ ಹೊರಟ ನಮಗೆ ಒಬ್ಬ ಸಾಧು ಸ್ವಭಾವದ guide ಸಿಕ್ಕಿದ. ಆತ ಉರು ಹೊಡೆದಂತೆ ಕೋಟೆಯ ಬಗ್ಗೆ ವಿವರಣೆ ನೀಡಲಾರಂಭಿಸಿದ. ಆತ ಹೇಳುತ್ತಿದ್ದ ಕೆಲ ಕತೆಗಳು ನಂಬಲರ್ಹವಾಗಿರದಿದ್ದರೂ ಹೆಚ್ಚಿನ ವಿವರಣೆಗಳು ಚೆನ್ನಾಗಿದ್ದವು. ಆತ ತನಗೆ ಬೇಕಾದ ದಾರಿಯಲ್ಲಿ ನಮ್ಮನ್ನು ಕರೆದೊಯ್ಯತ್ತಾ ವಿವರಿಸುತ್ತಿದ್ದ. ನನಗೇಕೋ ಆತನ ಉಪಸ್ಥಿತಿ ನನ್ನ ಸ್ವಾತಂತ್ರ್ಯವನ್ನು ಕಸಿಯುತ್ತಿದೆ ಎನ್ನಿಸಿತು. ಆದರೆ ನಮ್ಮಲ್ಲಿ ಕೋಟೆ ಯಾ ಚಿತ್ರದುರ್ಗಕ್ಕೆ ಸಂಬಂಧಿಸಿದ ಯಾವುದೇ ಪುಸ್ತಕಗಳಿರಲಿಲ್ಲದ ಕಾರಣ ಅವನು ತೋರಿಸಿದ ದಾರಿಯಲ್ಲಿ ನಡೆಯದೆ ವಿಧಿ ಇರಲಿಲ್ಲ. ಸಂದರ್ಭ ಸಿಕ್ಕಾಗಲೆಲ್ಲ ಮನೆಯವರಿಂದ ಬೇರ್ಪಟ್ಟು ಓಡಿ ನನಗೆ ನೋಡಬೇಕೆನಿಸಿದ ವಿಷಯಗಳನ್ನು ನೋಡಿ photo ತೆಗೆದುಕೊಂಡು ಬಂದೆ. camcorder ನಲ್ಲಿ record ಮಾಡುವ ಕೆಟ್ಟ ಜವಾಬ್ದಾರಿಯನ್ನು ಹೊತ್ತಿದ್ದ ನಾನು ಸ್ವಂತ ಕಣ್ಣಿಗಿಂತ ಹೆಚ್ಚಾಗಿ camera ದ ಮೂಲಕ ನೋಡಬೇಕಿದ್ದ ನನ್ನ ಅವಸ್ಥೆಯನ್ನು ಹಳಿಯುತ್ತಾ ನಡೆದಿದ್ದೆ. &lt;br /&gt;&lt;br /&gt;ಕೋಟೆಯ ಸುತ್ತುಗಳನ್ನು, ವಿವಿಧ ದ್ವಾರಗಳನ್ನು ತೋರಿಸುತ್ತಾ ನಡೆದಿದ್ದ ಆ guide ನ ಹಿಂದೆ ವಿಧಿ ಇಲ್ಲದೆ ಸಾಗಿದ್ದೆ. ಅದೆಲ್ಲಿ ಇದೆಲ್ಲಿ ಎಂಬ ನನ್ನ ಪ್ರಶ್ನೆಗಳು ಆತನ ಉರುಹೊಡೆದು ಒಪ್ಪಿಸುತ್ತಿದ್ದ ಕ್ರಿಯೆಗೆ ಭಂಗ ತಂದಂತೆ ಕಾಣಲಿಲ್ಲ. ನಾನು ಆತನತ್ತ ಕಿವಿ ಕೊಡದೆ ಪ್ರಕೃತಿ ಸೌಂದರ್ಯ ನೋಡುತ್ತಾ ಬೆರಗಾಗಿ ನಡೆದಿದ್ದೆ.  ಬಂಡೆಗಳು ಆನೆ, ಮೊಲ, ಕಪ್ಪೆ ಹೀಗೆ ಬಗೆ ಬಗೆ ಆಕಾರ ತಳೆದು ಆಶ್ಚರ್ಯ ಹುಟ್ಟಿಸುತ್ತಿದ್ದವು. ಬಿಸಿಲು ಓರೆಯಾಗುತ್ತಾ ಬಂದಂತೆ ಬಂಡೆಗಳಲ್ಲಿ ಪ್ರತಿಫಲಿಸಿ ಅವು ವಿವಿಧ ಬಣ್ಣಗಳಲ್ಲಿ ಕಾಣಿಸತೊಡಗಿದವು. ಆ guide ನಮ್ಮನ್ನು ಕರೆದೊಯ್ಯುತ್ತಿದ್ದುದು ಒನಕೆ ಓಬವ್ವನ ಕಿಂಡಿಯ ಬಳಿ. ಆ ಮಾರ್ಗದಲ್ಲಿ ಏನೇನು ಕಾಣಸಿಗುವುದೋ ಅಷ್ಟನ್ನು ಮಾತ್ರ ತೋರಿಸುತ್ತಾ ಸಾಗಿದ್ದ ಆತ.&lt;br /&gt;&lt;br /&gt;ಓಬವ್ವನ ಕಿಂಡಿಯತ್ತ ಬರುವ ಹಾದಿ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_KKfkb37kvUA/S07FWW_LQkI/AAAAAAAABKk/fuuUBZ9b38M/s1600-h/obavvana+kindiya+haadi.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/_KKfkb37kvUA/S07FWW_LQkI/AAAAAAAABKk/fuuUBZ9b38M/s400/obavvana+kindiya+haadi.JPG" border="0" alt=""id="BLOGGER_PHOTO_ID_5426491588946379330" /&gt;&lt;/a&gt;&lt;br /&gt;&lt;br /&gt;ಓಬವ್ವನ ಕಿಂಡಿ ತೋರಿಸಿದ ಆತ ನಮ್ಮನ್ನು ಅಲ್ಲೇ ಬಿಟ್ಟು ತನ್ನ ಕೆಲಸವಾಯಿತು ಎಂದು ದುಡ್ಡು ತೆಗೆದುಕೊಂಡು ಹೋದ. ನಾನು ಸೂರ್ಯ ಮುಳುಗುವುದರೊಳಗೆ ಇನ್ನಷ್ಟು ನೋಡೋಣ ಎಂದು ಓಡಾಡತೊಡಗಿದೆ. ಎಲ್ಲರಿಗೂ ಸುಸ್ತಾಗಿತ್ತು. ಮುಂದೆ ಇಲ್ಲಿಗೆ ಯಾವತ್ತು ಬರುವುದೋ? (ನನ್ನ ಪತಿದೇವರು ತಮ್ಮ ಆವಾಸ ಸ್ಥಾನ ಬಿಟ್ಟು ಕದಲಲು ಇನ್ನೆಂದು ಮನಸು ಮಾಡುವುದೋ?) ಎಂಬ ಭಯದಲ್ಲಿ ಹೆಚ್ಚು ಜಾಗಗಳನ್ನು ನೋಡಲು ಹಂಬಲಿಸಿದ್ದೆ. ನನ್ನ ಅತ್ತಿಗೆಯ ಗಂಡ ನನ್ನೊಡನೆ ಬರುವ ಮನಸು ಮಾಡಿದರು. ನಾವಿಬ್ಬರು ಗೋಪಾಲಸ್ವಾಮಿ ದೇವಾಲಯದತ್ತ ಹೊರಟೆವು. ಉಳಿದವರು ಮಂಗಗಳ ಉಪಟಳ ಸಹಿಸುತ್ತಾ ಅಲ್ಲೇ ಇರಬಯಸಿದರು. &lt;br /&gt;&lt;br /&gt;ಹಾ! ಮಂಗಗಳ ಬಗ್ಗೆ ಹೇಳುವುದನ್ನು ಮರೆತೆ. ಕೋಟೆಯೊಳಗೆ ಹಲವಾರು ಮಂಗಗಳು ತಿಂಡಿಯಂತೆ ಕಾಣುವ ವಸ್ತುಗಳನ್ನು ಕೈಯಿಂದ ಕಸಿಯಲು ಬರುತ್ತವೆ. ಅವು cameraದ ಚೀಲವನ್ನೂ ತಿಂಡಿಯೆಂದು ಭಾವಿಸಲು ಸಾಧ್ಯವಿದೆ. ಒಂಟಿಯಾಗಿ ಅಥವಾ ದಂಡಿನಲ್ಲಿ ಬರುವ ಇವು ಜನರನ್ನು ಬೆದರಿಸಿ ತಿಂಡಿ ಕಸಿಯುತ್ತವೆ. ಕೋಟೆಯೊಳಗೆ ಅಲ್ಲಲ್ಲಿ ಕಬ್ಬಿಣದ ಆಳವುಳ್ಳ ಕಸದ ತೊಟ್ಟಿಗಳಿದ್ದರೂ ಕಸವನ್ನು ಅವುಗಳೊಳಗೆ ಹಾಕುವ ಮೊದಲೇ ಮಂಗ ಕಸಿದೊಯ್ದರೆ ಎನೂ ಮಾಡಲು ಸಾಧ್ಯವಿಲ್ಲ. &lt;br /&gt;&lt;br /&gt;ಗೋಪಾಲಸ್ವಾಮಿ ದೇವಾಲಯದತ್ತ ಹೊರಟ ನಮಗೆ ತಣ್ಣಗಿನ ತೊರೆಯೊಂದು ಎದುರಾಯಿತು. ಅದು ಬರುತ್ತಿದ್ದುದು ಸುಂದರವಾದ ಗೋಪಾಲಸ್ವಾಮಿ ಹೊಂಡದಿಂದ. ಅಲ್ಲಿದ ಮೇಲೆ ಹತ್ತಿದರೆ ಗೋಪಾಲಸ್ವಾಮಿ ದೇವಾಲಯ. ಅದರ ಬಾಗಿಲು ಮುಚ್ಚಿದ್ದರೂ ನನಗೆ ಏನೋ ವಿಚಿತ್ರ ಸಂತೋಷವಾಗುತ್ತಿತ್ತು. ನಾನೇ ಏನೋ explore ಮಾಡಿದೆ ಎಂಬ ಭಾವನೆ. ಅದನ್ನು ದಾಟಿ ಹೋದರೆ ಅರಮನೆಯ ಆವರಣ ನೋಡಬಹುದಿತ್ತು. ಆದರೆ ಆಗಲೇ 6 ಗಂಟೆಯಾಗಿತ್ತು. ಅಲ್ಲಿಂದ ಹಿಂದೆ ಬರುತ್ತಾ ಎಲ್ಲರೂ ಏಕನಾಥೇಶ್ವರಿ ದೇವಾಲಯ ಮತ್ತು ಹಿಡಿಂಬೇಶ್ವರ ದೇವಾಲಯ ನೋಡಿದೆವು. ಅಲ್ಲೇ ದಿಣ್ಣೆಯೊಂದರ ಮೇಲೆ ಕುಳಿತು ಸೂರ್ಯಾಸ್ತಕ್ಕೆ ಕಾಯತೊಡಗಿದೆವು. ಗುಲಾಬಿ ಬಣ್ಣದಲ್ಲಿ ಮೆಲ್ಲಗೆ ಇಳಿಯುತ್ತಿದ್ದ ಸೂರ್ಯನ ಹಿಂದೆ ಕತ್ತಲಾವರಿಸುತ್ತಿತ್ತು. ಬಂಡೆಗಳೊಡನೆ ನಮ್ಮ ಎದುರಿದ್ದ ಉಯ್ಯಾಲೆಯ ಕಲ್ಲಿನ ಚೌಕಟ್ಟು ಕೇಸರಿಯಿಂದ ಕೆಂಪಗಾಗಿ, ಕಂದಾಗಿ, ಕಪ್ಪಾಗಿ ಬದಲಾಗುತ್ತಿತ್ತು. ಆಹ್ಲಾದಕರವಾಗಿ ಬೀಸುತ್ತಿದ್ದ ಗಾಳಿ ದಿನದ ದಣಿವನ್ನು ಮರೆಸುತ್ತಿತ್ತು. &lt;br /&gt;&lt;br /&gt;ಗೋಪಾಲಸ್ವಾಮಿ ಹೊಂಡ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_KKfkb37kvUA/S07FyFTXkwI/AAAAAAAABKs/93FlZ-yS8Zw/s1600-h/gopalaswamy+honda.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/_KKfkb37kvUA/S07FyFTXkwI/AAAAAAAABKs/93FlZ-yS8Zw/s400/gopalaswamy+honda.JPG" border="0" alt=""id="BLOGGER_PHOTO_ID_5426492065235571458" /&gt;&lt;/a&gt;&lt;br /&gt;&lt;br /&gt;ಗಾಳಿ ಗೋಪುರ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_KKfkb37kvUA/S07HdrvxDGI/AAAAAAAABK0/ILdsBYgLKYw/s1600-h/gali+gopura.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/_KKfkb37kvUA/S07HdrvxDGI/AAAAAAAABK0/ILdsBYgLKYw/s400/gali+gopura.JPG" border="0" alt=""id="BLOGGER_PHOTO_ID_5426493913801231458" /&gt;&lt;/a&gt;&lt;br /&gt;&lt;br /&gt;ಸೂರ್ಯಾಸ್ತ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_KKfkb37kvUA/S07HldsU9II/AAAAAAAABK8/l5d5wrZBZF4/s1600-h/Sooryastha.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://2.bp.blogspot.com/_KKfkb37kvUA/S07HldsU9II/AAAAAAAABK8/l5d5wrZBZF4/s400/Sooryastha.JPG" border="0" alt=""id="BLOGGER_PHOTO_ID_5426494047467664514" /&gt;&lt;/a&gt;&lt;br /&gt;&lt;br /&gt;ಸೂರ್ಯಾಸ್ತದ ನಂತರ ನಾವು ಕೋಟೆಯಿಂದ ಹೊರಬಂದೆವು. ಮುಂದಿನ ಬಹುದೊಡ್ಡ ಕಾರ್ಯಕ್ರಮ ರಾತ್ರಿಗೆ ತಂಗಲು lodge ಹುಡುಕುವುದಾಗಿತ್ತು.&lt;br /&gt;&lt;br /&gt;ಪೇಟೆಯೊಳಗಿನ ಹೋಟೆಲುಗಳಲ್ಲಿ ಕೊಳಕಾದ ಹಾಸಿಗೆಗಳು, ಸ್ವಚ್ಛವಿರದ ಬಾತ್ ರೂಮು ನೋಡಿ ಬೇಸತ್ತಿದ್ದ ನಾವು NH4 ನಲ್ಲಿದ್ದ ಹೋಟೆಲುಗಳನ್ನು ನೋಡಲು ಹೊರಟೆವು. ಐಶ್ವರ್ಯ ಫೋರ್ಟ್ ಹೋಟೆಲಿಗೆ ಫೋನ್ ಮಾಡಿದಾಗ ಎಲ್ಲ ರೂಮುಗಳು ಭರ್ತಿವಾಗಿವೆ ಎಂಬ ಉತ್ತರ ಬಂತು. ನಮಗೆ tension ಶುರುವಾಯಿತು. ಅಲ್ಲಿಂದ ವೇದ ಕಂಫರ್ಟ್ ಗೆ ಹೋದೆವು. ಎಲ್ಲರಿಗೂ ಸುಸ್ತಾಗಿದ್ದರಿಂದ ರೂಮು ನೋಡಲು ನಾನು, ಕೃಷ್ಣ ಮತ್ತು ಕೃಷ್ಣನ ಭಾವ ಹೋದೆವು. ಕೊಳೆಯಾದ ಗೋಡೆಗಳು, fresh ಆಗಿರದ ಬಾತ್ ರೂಮು ನೋಡಿ ನಾನು ಬೇಡವೆಂದೆ. ನನ್ನ cleanliness ನ ಹುಚ್ಚಿಗೆ ಎಲ್ಲರಿಗೂ ಕಿರಿಕಿರಿ ಆಗಹತ್ತಿತ್ತೇನೋ.  "ಒಂದು ದಿನಕ್ಕೆ adjust ಮಾಡಲು ಬರುವುದಿಲ್ಲ ನಿನಗೆ" ಎಂದು ಕೃಷ್ಣ ಮುನಿಸಿಕೊಂಡಾಗ ಸಹನೆಯ ಹದ್ದು ಮೀರಲು ಹೊತ್ತು ಹಿಡಿಯಲಿಕ್ಕಿಲ್ಲ ಎನ್ನಿಸಿತು. ಹೋಟೆಲ್ ರವಿ ಮಯೂರ ನೋಡಿದಾಗ ಬಾತ್ ರೂಮು ಸುಮಾರಾಗಿದ್ದರೂ ಇದಕ್ಕಿಂತ ಒಳ್ಳೆಯದು ಇನ್ನು ಸಿಗಲಿಕ್ಕಿಲ್ಲ ಎಂದು ಅದೇ ಆಗಬಹುದಂದೆ. ಮೂರು ರೂಮು ತಗೆದುಕೊಂಡೆವು. ನಮ್ಮ ಹತ್ತು ಲೀಟರ್ ನೀರಿನ can ಯಾವಾಗಲೋ ಖಾಲಿಯಾಗಿ ಮತ್ತೆ ನಾಲ್ಕು ಲೀಟರ್ ನೀರು ಖರೀದಿಸಿಯಾಗಿತ್ತು. &lt;br /&gt;&lt;br /&gt;ಊಟ ಆದ ನಂತರ ನಾವು ನಮ್ಮ ನಮ್ಮ ಕೋಣೆಗಳಿಗೆ ಹೋದೆವು. ನೋಡಬೇಕಾಗಿದ್ದ ಹಾಗೂ ನೋಡಿದ್ದ ಜಾಗಗಳನ್ನು ಮೆಲುಕು ಹಾಕತೊಡಗಿದೆ. ಕೋಟೆಯ ಹೊರಗಿದ್ದ map ನಲ್ಲಿ 25 ಜಾಗಗಳು ಗುರುತಿಸಲ್ಪಟ್ಟಿದ್ದವು. ಅದರಲ್ಲಿ ನಾವು ನೋಡಿದ್ದು ಕೊಳ, ಮದ್ದಿ ಬೀಸುವ ಕಲ್ಲು, ಗಣೇಶ ದೇವಾಲಯ, ಏಕನಾಥೇಶ್ವರಿ ದೇವಾಲಯ, ಹಿಡಿಂಬೇಶ್ವರ ದೇವಾಲಯ, ಮುರಿದು ಹೋಗಿದ್ದ ಟಂಕಸಾಲೆ ಮತ್ತು ಪಾಳೇಗಾರರ ಕಛೇರಿ, ಗೋಪಾಲಸ್ವಾಮಿ ಹೊಂಡ ಮತ್ತು ದೇವಾಲಯ, ದೂರದಿಂದ ಕಾಶಿ ವಿಶ್ವನಾಥ ದೇವಾಲಯ ಮತ್ತು ಆಂಜನೇಯ ದೇವಾಲಯ, ಒನಕೆ ಓಬವ್ವನ ಕಿಂಡಿ ಹೀಗೇ 11 ಜಾಗಗಳು ಮಾತ್ರ. ಕೋಟೆಯ ಅಗಾಧ ವಿಸ್ತೀರ್ಣದ ಕಲ್ಪನೆಯಿಲ್ಲದಿದ್ದುದರಿಂದ ಎರಡು ದಿನದ trip ಸಾಕು ಎಂದು ಹೊರಡುವ ಮೊದಲೇ ನಿರ್ಧರಿಸಿಯಾಗಿತ್ತು. ಉಳಿದ ಜಾಗಗಳನ್ನು ನೋಡಬೇಕೆಂಬ ಉತ್ಸಾಹವಿದ್ದರೂ ಎರಡನೆ ದಿನದ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದರಿಂದ ಏನು ಮಾಡಲೂ ಸಾಧ್ಯವಿರಲಿಲ್ಲ. ಮರುದಿನ ಚಂದ್ರವಳ್ಳಿ, ಮುರುಗ ಮಠ, ವಾಣಿವಿಲಾಸ ಸಾಗರ dam ನೋಡುವುದೆಂದು ಪಟ್ಟಿಮಾಡಿಯಾಗಿತ್ತು. ಮನಸ್ಸನ್ನು ಹೇಗೋ ಸಮಾಧಾನ ಪಡಿಸುತ್ತಾ ನಿದ್ದೆ ಹೋದೆ.  &lt;br /&gt;&lt;br /&gt;(Day 2)&lt;br /&gt;&lt;br /&gt;ಮರುದಿನ ಬೆಳಗ್ಗೆ ಎದ್ದಾಕ್ಷಣ ಕಿರಿಕಿರಿ ಕಾದಿತ್ತು. Driver "ಟೈರ್ ಪಂಕ್ಚರ್" ಎಂಬ ಸುದ್ದಿ ತಂದ. ಅವನು ಅದನ್ನು ಸರಿಪಡಿಸುವಷ್ಟರಲ್ಲಿ ಸಮಯ ಕಳೆದಿತ್ತು. ನಾವು ಲಗುಬಗೆಯಿಂದ ಚಂದ್ರವಳ್ಳಿಯತ್ತ ಹೊರಟೆವು. ಅಲ್ಲಿ ಮನುಷ್ಯ ನಿರ್ಮಿತ ಝರಿ ಮನಸೆಳೆಯಿತು. ಅದು ಸುಂದರವಾದ ಕುಡಿಯುವ ನೀರಿನ ಚಂದ್ರವಳ್ಳಿ ಕೆರೆಯಿಂದ ಹರಿದು ಬರುತ್ತಿದ್ದುದು. ಅದರ ಬಳಿ ಅರ್ಧ ಗಂಟೆ ಸಮಯ ಕಳೆದು, ಬಳಿಯಿದ್ದ ದೇವಸ್ಥಾನ ನೋಡಿ ಮುಂದುವರಿದೆವು. ಅಲ್ಲಿ ನಾವು ನೋಡಹೊರಟದ್ದು ಚಂದ್ರವಳ್ಳಿ ಗುಹೆ ಅಥವಾ ಅಂಕಲಿ ಮಠ. ಅಲ್ಲಿ ಮಾರ್ಗದರ್ಶಿಯೊಬ್ಬ ಕೆಲ ಜನರನ್ನು ಕರೆದುಕೊಂಡು ಗುಹೆಯೊಳಗೆ ಹೋಗಿದ್ದನಾದ್ದರಿಂದ ನಾವು ಅವರು ಹಿಂತಿರುಗುವವರೆಗೆ ಕಾಯಬೇಕಾಯಿತು.&lt;br /&gt;&lt;br /&gt;ಚಂದ್ರವಳ್ಳಿ ಕೆರೆ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_KKfkb37kvUA/S07H7Akrd6I/AAAAAAAABLE/c_vXEW3SuqA/s1600-h/chandravalli+kere.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/_KKfkb37kvUA/S07H7Akrd6I/AAAAAAAABLE/c_vXEW3SuqA/s400/chandravalli+kere.JPG" border="0" alt=""id="BLOGGER_PHOTO_ID_5426494417608079266" /&gt;&lt;/a&gt;&lt;br /&gt;&lt;br /&gt;ಅದು ನೆಲದ ಮಟ್ಟಕ್ಕಿಂತ ಕೆಲವು ಅಡಿ ಕೆಳಗಿದ್ದು ಪೂರ್ಣ ಕತ್ತಲಿನಿಂದ ತುಂಬಿತ್ತು. ಬಾಗಿಲ ಬಳಿ ಬಾವಲಿ ಹಿಕ್ಕೆ ವಾಸನೆಯಾಡುತ್ತಿತ್ತು. ಮೊದಲೇ ಗುಹೆಗಳನ್ನು ನೋಡಿದರೆ ಒಂದು ರೀತಿಯ phobia ವಿದ್ದ ನನಗೆ ಹೆದರಿಕೆಯಾಗಹತ್ತಿದ್ದರೂ MTV Rodies, Colours ನ Khatron ke khiladi ನೋಡಿ ಈ phobia ವನ್ನು ಮೆಟ್ಟಿ ನಿಲ್ಲುವ ಧೈರ್ಯ ಮಾಡತೊಡಗಿದೆ.&lt;br /&gt;&lt;br /&gt;ಮಾರ್ಗದರ್ಶಿ 10-15 ಮಂದಿಯೊಂದಿಗೆ ಗುಹೆಯೊಳಗಿಂದ ಪ್ರತ್ಯಕ್ಷನಾದ. ಕೈಲಿ lantern ಮತ್ತು torch ಹಿಡಿದಿದ್ದ ಆತನಿಗೆ ಹದಿನೈದೋ ಇಪ್ಪತ್ತೋ ರೂಪಾಯಿ ಕೊಟ್ಟು ಜನ ಅವರ ದಾರಿ ಹಿಡಿದರು. ಈಗ ನಮ್ಮ ಸರದಿ ಬಂದಿತ್ತು. ಮಾರ್ಗದರ್ಶಿಯನ್ನು ಉದ್ದೇಶಿಸಿ, "ಒಳಗೇನಿದೆ" ಎಂದು ಪ್ರಶ್ನಿಸಿದೆ. ನನ್ನ ಹೃದಯ ಬಡಿತ ಜೋರಾಗಲಾರಂಭಿಸಿತ್ತು. ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ "ನೀವೇ ನೋಡಿ" ಎಂದ ಆತ. ಹಲವಾರು ಅಡಿಗಳಷ್ಟು ಒಳಗೆ ಸುರಂಗದಂತೆ ಇದೆ, ಕತ್ತಲು, ಗೊಂದಲಕ್ಕೀಡು ಮಾಡಲು ನಾಲ್ಕು ಬಾಗಿಲುಗಳಿವೆ, ಒಬ್ಬೊಬ್ಬರೇ ಹೋದರೆ ದಾರಿ ತಪ್ಪೀತು, ಆದರೆ ನೋಡದೆ ಹೋದರೆ ಜೀವನದಲ್ಲಿ ಏನೋ ಕಳೆದುಕೊಂಡಂತೆ ಎಂದ. &lt;br /&gt;&lt;br /&gt;"ನಾನು ಒಳಗೆ ಕಳೆದು ಹೋದರೆ!" ಭಯ ಆವರಿಸುತ್ತಾ ಧೈರ್ಯವನ್ನು ಕುಗ್ಗಿಸಲಾರಂಭಿಸಿತು. "Oxygen ಸಿಗದೆ ಉಸಿರು ಕಟ್ಟಿದರೆ!". "ಶ್ರವಣ ಬೆಳಗೊಳದ ಬಾಹುಬಲಿಯ ಎತ್ತರಕ್ಕಿಂತ ಮಿಗಿಲಾದ ದೂರವನ್ನು ನೆಲದಡಿಯಲ್ಲಿ ಕ್ರಮಿಸಬೇಕೇ?" phobia... ತನ್ನ ಕೆಟ್ಟ ಹಸ್ತ ಚಾಚಿ ನನ್ನನ್ನು ಎಳೆಯಲಾರಂಭಿಸಿತ್ತು. ಅಮ್ಮನ ನೆನಪಾಯಿತು. ಜೀವನದ ಕಡೆಯ ಕ್ಷಣಗಳು ಇವಾದರೆ ಅಮ್ಮನ ಬಳಿ ಕೊನೆಯ ಮಾತು ಆಡುತ್ತೇನೆ ಎಂದು ಫೋನ್ ಮಾಡಿದೆ. "ಅಮ್ಮಾ ಚಂದ್ರವಳ್ಳಿ ಗುಹೆಯೊಳಗೆ ಹೋಗುತ್ತಿದ್ದೇವೆ. ಬಂದ ಮೇಲೆ ಮಾತಾಡುತ್ತೇನೆ. ಅಪ್ಪ ಇದ್ದಾರಲ್ಲ?" ಎಂದು ಹೇಳಿ ಪೋನ್ ಇಟ್ಟೆ. ಧೈರ್ಯ ಬಂತು. ಗುಹೆಯೊಳಗೆ ಹೊರಟೆ. ಒಂದು ಹೆಜ್ಜೆ, ಎರಡು ಹೆಜ್ಜೆ, ಮೂರು.... "ಅಯ್ಯೋ ಉಸಿರು ಕಟ್ಟುತ್ತಿದೆ. ದಾರಿ ಕಾಣುತ್ತಿಲ್ಲ"... ಕೈ ಕಾಲು ನಡುಗಿ, Rodies, Khatron ke khiladi ಮರೆತು ಹೋಗಿ ಸತ್ತೆನೋ ಕೆಟ್ಟೆನೋ ಎಂದು "ನೀವೆಲ್ಲ ನೋಡಿ ಬನ್ನಿ, ನಾನು ಇಲ್ಲೇ ಕಾಯುತ್ತೇನೆ" ಎಂದು ಹೊರಗೋಡಿದೆ. ಆ ಕತ್ತಲ ಗುಹೆಗಿಂತ ಹೊರಗೆ ಒಂಟಿಯಾಗಿ ಕಾಯುವುದರಲ್ಲಿ ಭಯ ಕಡಿಮೆ ಎನಿಸಿತ್ತು ನನಗೆ!&lt;br /&gt;&lt;br /&gt;ನನ್ನ family ಅರ್ಧ ಗಂಟೆಯಲ್ಲಿ ಗುಹೆಯೊಳಗಿಂದ ಮತ್ತೆ ಪ್ರತ್ಯಕ್ಷವಾಯಿತು. ನಾನು ಪಕ್ಕದೂರಿನಿಂದ D.Ed. ಪರೀಕ್ಷೆ ಬರೆಯಲು ಬಂದಿದ್ದ ಹುಡುಗಿಯರೊಡನೆ ಆಗಷ್ಟೇ ಹರಟಲಾರಂಭಿಸಿದ್ದೆ. ಒಳಗೇನಿದೆಯೆಂದು ತಿಳಿಯಲು ನಾವೆಲ್ಲರೂ ಉತ್ಸುಕರಾಗಿದ್ದೆವು. "ಒಳಗೆ ಮಲಗುವ ಕೋಣೆ, ಸ್ನಾನದ ಕೋಣೆ, ಗುಪ್ತ ಸಮಾಲೋಚನೆ ಕೊಠಡಿ ಇತ್ಯಾದಿಗಳಿವೆ, ಉಸಿರಾಟಕ್ಕೆ ಗಾಳಿಗಾಗಿ ಮೇಲಿನಿಂದ ಬೇರೊಂದು ಸುರಂಗ ಮಾಡಲಾಗಿದೆ" ಎಂದೆಲ್ಲ ಹೇಳಿದಾಗ ನನ್ನ ಕಲ್ಪನೆಗೆ ಮೀರಿದ್ದು ಎಂದು ಸುಮ್ಮನಾದೆ. (ಮುಂದೆ ನಾನು YouTube ನಲ್ಲಿ ಯಾರೋ upload ಮಾಡಿದ್ದ camcorder ನಲ್ಲಿ ಚಿತ್ರೀಕರಿಸಿದ video ನೋಡಿ ಗುಹೆಯ ಕಲ್ಪನೆ ಮಾಡಿದೆನೆನ್ನಿ.) D.Ed. ಹುಡುಗಿಯರು ಭಯ, ಕಾತರಗಳಿಂದ ಗುಹೆಯೊಳಗೆ ಹೋಗಲನುವಾದರು. ನಾವು ಮುರುಗ ಮಠದತ್ತ ನಮ್ಮ ಪ್ರಯಾಣ ಮುಂದುವರಿಸಿದೆವು.&lt;br /&gt;&lt;br /&gt;ಮುರುಗಮಠ ಚಿತ್ರದುರ್ಗ ಪೇಟೆಯಿಂದ ಸ್ವಲ್ಪ ಹೊರಗಿದೆ. ಅಲ್ಲಿ ಇರುವುದು ಮುರುಗರಾಜೇಂದ್ರ ಸಾ್ವಮೀಜಿಯವರ ಜೀವ ಸಮಾಧಿ. ಹೊರಗೆ ವಿಶಾಲವಾದ ಉದ್ಯಾನ ಮತ್ತು ಕೆಲವು ಪ್ರಾಣಿಗಳ ಸಂಗ್ರಹಾಲಯ. ಬಂಡೆಗಳ ಹಿನ್ನೆಲೆಯಲ್ಲಿ ಆ ಉದ್ಯಾನ ಸುಂದರವಾಗಿ ಕಂಡು ಮುಸ್ಸಂಜೆಯ ವಿಹಾರಕ್ಕೆ ಸೂಕ್ತ ಸ್ಥಳ ಎನಿಸಿತು ನನಗೆ. ಜಿಂಕೆ, ಬಾತುಕೋಳಿ, ಎಮು ಇತ್ಯಾದಿಗಳ ಫೋಟೋ ತೆಗೆಯುತ್ತಾ ಅಲ್ಲೇ ಸುತ್ತಾಡತೊಡಗಿದೆ. ಮಠದ ಒಂದು ಪಾರ್ಶ್ವದಲ್ಲಿ renovation ಕೆಲಸ ನಡೆಯುತ್ತಿತ್ತು. ಅಲ್ಲಿ ಕೆಲವು ರಾಜರ ಕಾಲದ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರೂ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಮಠದಲ್ಲಿ ಮಧ್ಯಾಹ್ನ ರಾಗಿಮುದ್ದೆ ಊಟ ಸಿಗುವುದೆಂದು ಗೊತ್ತಾಯಿತು. ನನ್ನ ಅತ್ತೆಗೆ ಅಲ್ಲಿ ಊಟಮಾಡುವ ಮನಸ್ಸಿದ್ದರೂ ಬೇಗನೆ ಮನೆಗೆ ಮರಳಬೇಕಾದ ಅನಿವಾರ್ಯತೆ ಇದ್ದುದರಿಂದ ಆ ಯೋಚನೆಯನ್ನು ಕೈಬಿಡಬೇಕಾಯಿತು.&lt;br /&gt;&lt;br /&gt;ಮಠದತ್ತ ಹೊರಟಾಗಲೇ Qualisನ ಹೊಸದಾಗಿ ಕೂರಿಸಿದ್ದ stepney ವಿಚಿತ್ರ ಶಬ್ದ ಮಾಡಹತ್ತಿತ್ತು. Driver ಅದನ್ನು ತಾತ್ಕಾಲಿಕವಾಗಿ ಸರಿಪಡಿಸಿದ್ದರೂ ಬೇಗನೆ ಮರಳುವುದು ಉತ್ತಮ ಎನ್ನುತ್ತಿದ್ದ. ನಾವು ಅನಿವಾರ್ಯವಾಗಿ ಹೋಟೆಲಿಗೆ ಹಿಂತಿರುಗಬೇಕಾಯಿತು. ಮಧ್ಯಾಹ್ನದ ಊಟ ಮುಗಿಸಿ, ರೂಮ್ ಖಾಲಿ ಮಾಡಿ ಹೊರಟಾಗ ನಾನು ಹೇಳಿದೆ "ಈಗ ವಾಣಿವಿಲಾಸ dam". ನನ್ನ ಅತ್ತಿಗೆ ಹೇಳಿದರು "ಆಲು ರಾಮೇಶ್ವರ!".&lt;br /&gt;&lt;br /&gt;ಸರಿ "ಆಲು ರಾಮೇಶ್ವರ" ನೋಡಿ ಮತ್ತೆ ವಾಣಿವಿಲಾಸ dam ನೋಡಿ ಮೈಸೂರಿಗೆ ಹೋಗುವುದು ಎಂದು ನಿರ್ಧರಿಸಿಯಾಯಿತು. ದಾರಿಹೋಕರೊಬ್ಬರ ಬಳಿ ದಾರಿ ಕೇಳಲು ವಾಹನ ನಿಲ್ಲಿಸಿದೆವು. ಅವರು ನಾವು ಹೋಗಬೇಕಿದ್ದ ಎರಡು ಸ್ಥಳಗಳು ವಿರುದ್ಧ ದಿಕ್ಕಿನಲ್ಲಿವೆ ಎಂದೂ ಅರ್ಧದಿನದಲ್ಲಿ ಎರಡೂ ಜಾಗಗಳನ್ನು ನೋಡಿ ಮೈಸೂರಿಗೆ ಮರಳುವುದು ಅಸಾಧ್ಯವೆಂದೂ ಹೇಳಲಾಗಿ ನಮ್ಮನ್ನು ಪೇಚಿಗೆ ಸಿಲುಕಿಸಿದರು. ಕೊನೆಗೆ ವಾಣಿವಿಲಾಸವನ್ನು ಹಿಂದಿಕ್ಕಿ "ಆಲು ರಾಮೇಶ್ವರ" ಜಯಿಸಿತು. ನಾನು ಬೇಸರದಿಂದಲೇ ಒಪ್ಪಿಕೊಂಡೆ. "ಆಲು ರಾಮೇಶ್ವರ" ಜಯಿಸಲು ಕಾರಣ ಚಿತ್ರದುರ್ಗ ಕೋಟೆ ತೋರಿಸಿದ guide ನ ಉತ್ಪ್ರೇಕ್ಷೆ.&lt;br /&gt;&lt;br /&gt;ಕೋಟೆ ತೋರಿಸಿದ guide ನ ಬಳಿ ನೋಡಲರ್ಹ ಸ್ಥಳಗಳು ಯಾವುವೆಂದು ಕೇಳಿದಾಗ ಆತ "ಒಲಲ್ಕೆರೆ" ರಸ್ತೆಯಲ್ಲಿ "ಆಲು ರಾಮೇಶ್ವರ" ಎಂಬ ಜಾಗವಿದೆಯೆಂದೂ ಅಲ್ಲಿರುವ ದೇವಸ್ಥಾನದ ಕೆರೆಯಲ್ಲಿ ಬೇಕಾದುದನ್ನು ಕೇಳಿಕೊಂಡು ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಸುವುದಾದರೆ ನೀರಿನಿಂದ ಮಂಗಳ ದ್ರವ್ಯಗಳು - ತೆಂಗಿನ ಕಾಯಿ, ಹೂವು ಇತ್ಯಾದಿ - ಮೇಲೆ ಬರುತ್ತವೆ, ಇಲ್ಲವಾದರೆ ಕಸ ಕಡ್ಡಿ, ಹಾವು, ಚೇಳಿನಂತಹ ಅಮಂಗಳಕಾರಿ ವಸ್ತುಗಳು ಮೇಲೇಳುತ್ತವೆಯೆಂದೂ ವಿವರಿಸಿದ್ದ. ಆತನ ವಿವರಣೆಗೆ ನಮ್ಮೆಲ್ಲರ ಕಲ್ಪನೆಗೆ ರಕ್ಕೆ ಪುಕ್ಕ ಬಂದು ಮನಸ್ಸಿನಲ್ಲಿ ಆ ಜಾಗದ ಬಗ್ಗೆ ಬಹು ದೊಡ್ಡ ಚಿತ್ರಣ ತಯಾರಾಗಿತ್ತು. ನನ್ನ ಅತ್ತಿಗೆ ಅಲ್ಲಿ ಕೇಳಿಕೊಳ್ಳಲು ಮನದಲ್ಲೇ ಬೇಡಿಕೆಯನ್ನು ಸಿದ್ಧಮಾಡಿದಂತಿತ್ತು.&lt;br /&gt;&lt;br /&gt;Qualisನಲ್ಲಿ ಮುಂದುವರಿಯುತ್ತಿದ್ದಂತೆ ನಾವು ಹೋಗಬೇಕಿದ್ದ "ಒಲಲ್ಕೆರೆ" ರಸ್ತೆಯಲ್ಲಿನ "ಆಲು ರಾಮೇಶ್ವರ", ಹೊಳಲ್ಕೆರೆ ರಸ್ತೆಯಲ್ಲಿನ ಹಾಲು ರಾಮೇಶ್ವರ ಎಂದು ತಿಳಿಯಿತು. ಚಿತ್ರದುರ್ಗದಿಂದ ಶಿವಗಂಗಾ ದಾಟಿ ಹೊಸದುರ್ಗ ಹೋಗುವ ಮಾರ್ಗದಲ್ಲಿ ಹಾಲು ರಾಮೇಶ್ವರ ಸಿಗುತ್ತದೆ. guide ನ ವಿವರಣೆ ಕೇಳಿ, ಏನೇನೋ ಕಲ್ಪಿಸಿಕೊಂಡು ಹೋದ ನಮಗೆ ಹಾಲು ರಾಮೇಶ್ವರ ನಿರಾಸೆಯನ್ನುಂಟುಮಾಡಿದ್ದಂತೂ ನಿಜ. ಮಧ್ಯಾಹ್ನದ ಬಿಸಿಲಲ್ಲಿ ಹಾಲು ರಾಮೇಶ್ವರ ದೇವಸ್ಥಾನ ಜನ ಜಂಗುಳಿಯಿಂದ ತುಂಬಿತ್ತು. ಇಷ್ಟಾರ್ಥ ಪೂರ್ತಿಯನ್ನು ಬಿಂಬಿಸುವ ಕೆರೆ ಬಲು ಚಿಕ್ಕದಾಗಿದ್ದು ನಮಗೆ ಗುರುತಿಸಲು ಕಷ್ಟವಾಯಿತು. ಅಲ್ಲಿ "ಚೀಟಿ ಮಾಡಿಸಿಕೊಂಡು ಬಂದು ಪೂಜೆ ಮಾಡಿ, ಕೆರೆಯಿಂದ ಪ್ರಸಾದ ಬರುತ್ತದೆ" ಎಂದು ಹೇಳಿದರಷ್ಟೇ ವಿನಹ ಹಾವು, ಚೇಳು ಮೇಲೇರುವ ವಿಷಯವನ್ನು ಯಾರೂ ಎತ್ತಲಿಲ್ಲ. ಆದರೆ Qualis ಸುಸ್ಥಿತಿಯಲ್ಲಿ ಇರದಿದ್ದ ಕಾರಣ ನಮಗೆ ಅಲ್ಲಿ ಜನಜಂಗುಳಿಯಲ್ಲಿ ಕಾಯಲು ಸಮಯ ಇರಲಿಲ್ಲ, ಮನಸ್ಸೂ ಬರಲಿಲ್ಲ. ಹಾಗಾಗಿ ನಾವು ದೇವರಿಗೆ ದೂರದಿಂದಲೇ ನಮಸ್ಕರಿಸಿ ಪ್ರಯಾಣ ಮುಂದುವರಿಸಿದೆವು. "ಆ  guide ನ ವಿವರಣೆ ಕೇಳಿ ಇಲ್ಲಿಗೆ ಬಂದೆವು, ಇಲ್ಲದಿದ್ದರೆ ವಾಣಿ ವಿಲಾಸ ಸಾಗರ ನೋಡಿ ಹೋಗಬಹುದಿತ್ತು, ಪುನಃ ಇತ್ತ ಯಾವತ್ತು ಬರುವುದೋ?" ಎಂದು ನಾನು ಮತ್ತು ನನ್ನ ಅತ್ತಿಗೆ ದುಃಖಿಸಿದೆವು. &lt;br /&gt;&lt;br /&gt;ಮರ ಗಿಡಗಳು ಓಡುತ್ತಿದ್ದವು. ನನ್ನ music CD ಹಾಡುಗಳನ್ನು ಬಿಡುವಿಲ್ಲದೆ play ಮಾಡುತ್ತಿತ್ತು. ಎಲ್ಲ ಒಬ್ಬೊಬ್ಬರಾಗಿ ನಿದ್ದೆ ಹೋಗಹತ್ತಿದ್ದರು. ನಾನು ಮಾತ್ರ ಹೊರಗಿನ ದೃಶ್ಯಗಳನ್ನು ಮನಸ್ಸಿನಲ್ಲಿ ಸವಿ ನೆನಪಾಗಿರಿಸಲು ಎಚ್ಚರದಿಂದಿದ್ದೆ. ಸೂರ್ಯ ಮೆಲ್ಲನೆ ಕಂತುತ್ತಿದ್ದ. ತಣ್ಣನೆ ಗಾಳಿ ಮನಸ್ಸನ್ನು ಶಾಂತಗೊಳಿಸುತ್ತಾ ದೇಹದ ದಣಿವನ್ನು ನೀಗುತ್ತಾ ಉಲ್ಲಾಸದಾಯಕವಾಗಿ ಬೀಸುತ್ತಿತ್ತು. Driver ಮತ್ತು ನನ್ನನ್ನು ಬಿಟ್ಟು ಎಲ್ಲರೂ ನಿದ್ದೆಹೋಗಿದ್ದರು. ಆಕಾಶದಲ್ಲಿ ಕತ್ತಲಿನ ಜೊತೆ ಮೋಡವೂ ಕವಿಯಲಾರಂಭಿಸಿತ್ತು. ಸ್ವಲ್ಪ ಹೊತ್ತಿನಲ್ಲಿ ಮಳೆ ಸುರಿಯಲಾರಂಭಿಸಿತು. Driver ಜಾಗ್ರತೆಯಿಂದ ವಾಹನ ನಡೆಸುತ್ತಿದ್ದಂತೆ ಕಂಡಿತು. ಸುತ್ತಲೂ ಹಬ್ಬಿದ ಕತ್ತಲು. ಕಿಟಕಿ ತೆರೆಯಲಾರದಂತೆ ಮಳೆ. ನನಗೆ ಮಾಡಲೇನೂ ಕೆಲಸವಿರಲಿಲ್ಲ. ಸುಂದರ ಪ್ರಯಾಣವೊಂದು ಕೊನೆಮುಟ್ಟಲಿತ್ತು. ಚಿತ್ರದುರ್ಗದ ಕೋಟೆಯ, ಮಾನವ ನಿರ್ಮಿತವಾದರೂ ಪ್ರಕೃತಿಯೊಂದಿಗೆ ಬೆರೆತು ಹೋದ ಸೌಂದರ್ಯವನ್ನು ನೆನಪಲ್ಲಿ ಮೂಡಿಸುತ್ತಾ ನಾನೂ ನಿದ್ದೆಗೆ ಜಾರಿದೆ.&lt;br /&gt;&lt;br /&gt;--------------------------------------------------------------------------------------&lt;br /&gt;&lt;br /&gt;ಚಿತ್ರದುರ್ಗ ಕೋಟೆ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_KKfkb37kvUA/S07IcWO7pzI/AAAAAAAABLM/2yt6nJ2jCtA/s1600-h/chitradurga+kote.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://1.bp.blogspot.com/_KKfkb37kvUA/S07IcWO7pzI/AAAAAAAABLM/2yt6nJ2jCtA/s400/chitradurga+kote.JPG" border="0" alt=""id="BLOGGER_PHOTO_ID_5426494990358128434" /&gt;&lt;/a&gt;&lt;br /&gt;&lt;br /&gt;ಕೋಟೆಯ ಹೊರಗಿನ ದೃಶ್ಯ:&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_KKfkb37kvUA/S07IqD4zVtI/AAAAAAAABLU/1mIdkHhaTCs/s1600-h/chitradurga+koteya+horage.JPG"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 240px;" src="http://4.bp.blogspot.com/_KKfkb37kvUA/S07IqD4zVtI/AAAAAAAABLU/1mIdkHhaTCs/s400/chitradurga+koteya+horage.JPG" border="0" alt=""id="BLOGGER_PHOTO_ID_5426495225951639250" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-6674647759609234898?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/6674647759609234898/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=6674647759609234898' title='3 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/6674647759609234898'/><link rel='self' type='application/atom+xml' href='http://www.blogger.com/feeds/2942048231899528037/posts/default/6674647759609234898'/><link rel='alternate' type='text/html' href='http://chaithrika.blogspot.com/2009/10/trip.html' title='ಚಿತ್ರದುರ್ಗ trip'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_KKfkb37kvUA/S07E4FKQLzI/AAAAAAAABKc/FPFk6v9pAvo/s72-c/maddu+beesuva+kallu.JPG' height='72' width='72'/><thr:total>3</thr:total></entry><entry><id>tag:blogger.com,1999:blog-2942048231899528037.post-1305197325006536294</id><published>2009-10-15T12:46:00.000+05:30</published><updated>2009-12-30T14:15:22.465+05:30</updated><title type='text'>Customer care ಅನುಭವ</title><content type='html'>ಈಗಷ್ಟೇ Airtel prepaid customer care ಗೆ phone ಮಾಡಿದ್ದೆ. ಕೈ ತಪ್ಪಿ ಭಾಷೆ "ಕನ್ನಡ" ಎಂದು ಆರಿಸಿದೆ. Customer care executive ಎಷ್ಟು ಸ್ಫುಟವಾಗಿ, ಸುಂದರವಾಗಿ ಕನ್ನಡ ಮಾತನಾಡಿದಳೆಂದರೆ ಇಡಲು ಮನಸ್ಸೇ ಬರಲಿಲ್ಲ. ಇನ್ನೂ ಕೇಳುತ್ತಲೇ ಇರಬೇಕೆನ್ನಿಸಿತು. ನಿಜಕ್ಕೂ Wow!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-1305197325006536294?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/1305197325006536294/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=1305197325006536294' title='5 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/1305197325006536294'/><link rel='self' type='application/atom+xml' href='http://www.blogger.com/feeds/2942048231899528037/posts/default/1305197325006536294'/><link rel='alternate' type='text/html' href='http://chaithrika.blogspot.com/2009/10/airtel-prepaid-customer-care-phone.html' title='Customer care ಅನುಭವ'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>5</thr:total></entry><entry><id>tag:blogger.com,1999:blog-2942048231899528037.post-5435271513676685874</id><published>2009-03-17T01:52:00.000+05:30</published><updated>2009-03-17T01:54:01.113+05:30</updated><title type='text'>IT ಎಂದರೆ ಮೂಗು ಮುರಿಯದಿರಿ</title><content type='html'>ಇವತ್ತು ಒಂದು forwarded mail ನೋಡಿದೆ. ಕನ್ನಡದ ಒಂದು ಬರಹ. IT ಯ ಬಗ್ಗೆ ಬರೆಯಲಾಗಿತ್ತು. ಅದರಲ್ಲಿ ಒಂದು ವಾಕ್ಯ ನನ್ನ ಮನಸಿಗೆ ತಾಗಿತು. "ಡಾಲರ್ ಕನಸನ್ನು ಬೆನ್ನತ್ತಿ ಋಣವನ್ನು ಮರೆತಿದ್ದ ಯುವಕ ಯುವತಿಯರಿಗೆ ಆರ್ಥಿಕ ಸಂಕಷ್ಟ ತಕ್ಕ ಪಾಠ ಕಲಿಸಿದೆ" ಎಂದಿತ್ತು.  Recession ಆರಂಭವಾದಾಗಿನಿಂದ ಈ ರೀತಿಯ ಬರಹಗಳನ್ನು ನೋಡುವುದು ಹೊಸತಲ್ಲ. ಆದರೆ ಈ ಬಗ್ಗೆ ಸ್ವಲ್ಪ ಯೋಚಿಸಿದಾಗ ಬಹಳ ದುಃಖವಾಯಿತು. &lt;br /&gt;&lt;br /&gt;ನಮ್ಮ ಓರಗೆಯ ಹುಡುಗನೊಬ್ಬ engineering ಮಾಡಬೇಕೆಂದು ಬಯಸಿದ್ದ. ಅದು ಅವನಿಗೆ ಸಾಧ್ಯವಾಗಿರಲಿಲ್ಲ. ಅವನ ಮನೆಯವರು ಸರಳ ಮಧ್ಯಮ ವರ್ಗದವರು. ಕೊನೆಗೆ ಡಿಗ್ರಿ ಕಲಿತು, post graduation ಮಾಡಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಏರು-ಪೇರುಗಳಾಗಿ ಅವನ ಮನೆಯವರು ಚಿಂತಾಕ್ರಾಂತರಾದ ದಿನಗಳು ಇದ್ದವು. ಕೊನೆಗೆ ಸಹಾಯಕ್ಕೆ ಬಂದದ್ದು IT field. IT ಕೆಲಸ ಸಿಕ್ಕ ನಂತರ ಆತನ ಮನೆಯವರು ನಿರಾಳವಾಗಿ ಉಸಿರಾಡಿದ್ದರು.&lt;br /&gt;&lt;br /&gt;ನಮ್ಮ ಬಹಳ ಆಪ್ತ ಸಂಬಂಧಿ ಕಳೆದ ವರ್ಷ engineering ಮುಗಿಸಿ ಕೆಲಸಕ್ಕೆ ಸೇರಿದ್ದರು. ಅವನ ಇಷ್ಟ ಪ್ರಕಾರ non-IT ಉದ್ಯೋಗಕ್ಕೆ ಸೇರಿಕೊಂಡ. ನಾವೂ ಪ್ರೋತ್ಸಾಹಿಸಿದ್ದೆವು. ಎರಡು ಬಾರಿ ಉದ್ಯೋಗ ಬದಲಿಸಿದರೂ work culture ಸರಿಹೋಗದೆ ಬಿಟ್ಟು ಬಂದ. ಮನೆಯವರು ಚಿಂತೆಯಲ್ಲಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಲಾರಂಭಿಸಿದ್ದಾರೆ. &lt;br /&gt;&lt;br /&gt;ಇಲ್ಲಿ ಕೊಟ್ಟ ಉದಾಹರಣೆಗಳು IT ಯನ್ನು ಹೊಗಳಲಾಗಲೀ, ಇತರ field ಗಳನ್ನು ದೂರಲಿಕ್ಕಾಗಲೀ ಬರೆದುದಲ್ಲ. ಇಲ್ಲಿ ನಾನು ಹೇಳಹೊರಟದ್ದು ಜನರ ಬಗ್ಗೆ... ಜೀವನಕ್ಕಾಗಿ ಉದ್ಯೋಗ ಹಿಡಿಯಹೊರಟ graduateಗಳ ಬಗ್ಗೆ... ಅವರ ಬಗ್ಗೆ ಕಾಳಜಿವಹಿಸುತ್ತಾ, ಚಿಂತೆ ಮಾಡುತ್ತಾ ಇರುವ ಮನೆಯವರ ಬಗ್ಗೆ. ಇಲ್ಲಿರುವ ಎರಡು ಉದಾಹರಣೆಗಳಂತೆ ಅನೇಕವಿರಬಹುದು. ಅಂತೆಯೇ ಅನಿವಾರ್ಯವಾಗಿ IT ಉದ್ಯೋಗಹಿಡಿದವರೂ ಇರಬಹುದು. ಮನೆಯಲ್ಲಿ ಕಷ್ಟ ಪರಿಸ್ಥಿತಿ ಇರುವವರು ಮನೆಯವರ ತೊಂದರೆಗಳನ್ನು ಕಡಿಮೆ ಮಾಡಲು ಒಳ್ಳೆಯ ಪ್ರಯತ್ನದಿಂದ ಈ ಕೆಲಸ ಗಿಟ್ಟಿಸಿಕೊಂಡವರೂ ಇರಬಹುದು. ಇವರೆಲ್ಲರೂ ನಮ್ಮ ನಿಮ್ಮಂತೆಯೇ ಅಲ್ಲವೇ?&lt;br /&gt;&lt;br /&gt;ಇಷ್ಟಕ್ಕೂ IT ಎಂದರೆ ಯಾಕಿಷ್ಟು ಮುನಿಸು? Work pressure ಕೆಲವೊಮ್ಮೆ ಅತಿಯೆನಿಸಿದರೂ ಮಾಡಲೇ ಬೇಕಾದ ಕೆಲಸ ಮಾಡುತ್ತಾ ದುಡಿಯುತ್ತಿರುವವರನ್ನು "ಕೂಲಿಗಳು" ಎಂದೇಕೆ ಗೇಲಿ ಮಾಡಬೇಕು? ಒಂದೆಡೆ ಎಲ್ಲ ಉದ್ಯೋಗಗಳೂ ಸಮಾನ ಎನ್ನುವವರು, ಇನ್ನೊಂದೆಡೆ "ಕೂಲಿ" ಎಂಬ ಪದಕ್ಕೆ ಕೀಳೆಂಬ ಅರ್ಥಬರುವಂತೆ ಈರೀತಿಯ ಹೋಲಿಕೆಗಳನ್ನೇಕೆ ಕೊಡಬೇಕು?&lt;br /&gt;&lt;br /&gt;Recession ನಿಂದಾಗಿ ನಾವೂ confused ಆಗಿದ್ದೇವೆ. IT ದೂರುವ ಬರಹಗಳಿಗೆ ಉತ್ತರಿಸಬೇಕೆನಿಸಿದರೂ ಸೂಕ್ತ ಸಮಯ ದೊರಕುತ್ತಿಲ್ಲ. ಆದರೂ ಇಂದೇಕೋ ಬೇಸರಬಂದು ಬರೆಯುತ್ತಿದ್ದೇನೆ. ರಾತ್ರಿ ೧:೩೦ ಆಗಿದೆ. ನಾಳೆ officeಗೂ ಹೋಗಬೇಕು. ಕೊನೆಯದಾಗಿ ನಾನು ಕೇಳುವುದು ಇಷ್ಟೇ...&lt;br /&gt;&lt;br /&gt;ಅಡಿಕೆ ಬೆಲೆ ಇಳಿದಾಗ ನಾವು, "ಬೆಲೆ ಇದ್ದಾಗ ಚಿನ್ನ, ಬಟ್ಟೆ ಅಂತ ಮೆರೆದರು. ಬೆಲೆ ಇಳಿದಾಗ ನೋಡು... ಚೆನ್ನಾಯಿತು ಅವರಿಗೆ" ಎಂದರೆ ಹೇಗಿರುತ್ತದೆ?&lt;br /&gt;&lt;br /&gt;ಮಳೆ ಬಾರದೆ ಭೂಮಿ ಬಿರಿದು ಬೆಳೆ ಕಾಣದಾಗ "ಭೂಮಿಯನ್ನು ನಂಬಿ ಕೆಟ್ಟರು. ಬುದ್ಧಿ ಬರಬೇಕು ಅವರಿಗೆ" ಎಂದರೆ ಹೇಗಿರುತ್ತದೆ?&lt;br /&gt;&lt;br /&gt;ಸರಕಾರ lecturers ನ ಹೊಸ appointments ರದ್ದುಗೊಳಿಸಿದಾಗ, "ಹೊಲ ಗದ್ದೆ ಬಿಟ್ಟು ಸರಕಾರಿ ಕೆಲಸದ ಆಸೆಗೆ ಬಿದ್ದ. ಹಾಗೇ ಆಗಬೇಕು ಅವನಿಗೆ" ಎಂದರೆ ಹೇಗಿರುತ್ತದೆ?&lt;br /&gt;&lt;br /&gt;ಒಂದು ಪ್ರದೇಶದಲ್ಲಿನ court, ಹೊಸ cases ಆರಂಭಿಸಲಿಕ್ಕಿಲ್ಲ, ಹಳೇ cases ಮುಗಿಸಿ ನಿಲ್ಲಿಸಿಬಿಡುವುದು ಎಂದು ತೀರ್ಮಾನಿಸಿತ್ತು. ಅಂಥ ಸಂದರ್ಭ, "ಸುಳ್ಳು ಹೇಳುವ ವಕೀಲರಿಗೆ ತಕ್ಕ ಶಾಸ್ತಿಯಾಯಿತು. ಒಳ್ಳೆಯದು" ಎಂದರೆ ಹೇಗಿರುತ್ತದೆ?&lt;br /&gt;&lt;br /&gt;ತೀರಾ ಜಾಸ್ತಿ ಎನಿಸಿತೇ? ಸರಿಯಾಗಿ ಯೋಚಿಸಿ ನೋಡಿ.&lt;br /&gt;.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-5435271513676685874?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/5435271513676685874/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=5435271513676685874' title='1 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/5435271513676685874'/><link rel='self' type='application/atom+xml' href='http://www.blogger.com/feeds/2942048231899528037/posts/default/5435271513676685874'/><link rel='alternate' type='text/html' href='http://chaithrika.blogspot.com/2009/03/it.html' title='IT ಎಂದರೆ ಮೂಗು ಮುರಿಯದಿರಿ'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>1</thr:total></entry><entry><id>tag:blogger.com,1999:blog-2942048231899528037.post-6882186092880552544</id><published>2009-02-16T15:19:00.000+05:30</published><updated>2009-02-16T18:44:38.530+05:30</updated><title type='text'>ಸಾಂಸ್ಕೃತಿಕ ದ್ವಂದ್ವ?</title><content type='html'>ಕೆಲವು ತಿಂಗಳುಗಳ ಹಿಂದೆ ಒಂದು ಮುಸ್ಸಂಜೆ Birthday party ಗೆ ಹೋಗಿದ್ದೆ. Birthday ಆಚರಿಸುತ್ತಿರುವ ಮಗು partyಯ ಕೇಂದ್ರ ಬಿಂದು. ಮನೆ ಪೂರ್ತಿ ಬಣ್ಣದ balloons. ಚಿಕ್ಕ ಮಕ್ಕಳೆಲ್ಲ ಸೇರಿ ಗಲಾಟೆ ಎಬ್ಬಿಸುತ್ತಾ ಕೇಕೆ ಹಾಕುತ್ತಿದ್ದುದು ನೋಡಲು ಬಲು ಮುದ ನೀಡುತ್ತಿತ್ತು. ಮಕ್ಕಳೆಲ್ಲ ಕಾತರದಿಂದ ಕಾಯುತ್ತಿದ್ದ cake cutting ಕಾರ್ಯಕ್ರಮ ಇನ್ನೇನು ಪ್ರಾರಂಭವಾಗುವುದರಲ್ಲಿತ್ತು. ಎಲ್ಲರ ಕೈಯಲ್ಲಿ ಬಣ್ಣ ಬಣ್ಣದ ಉಡುಗೊರೆ ಪೆಟ್ಟಿಗೆಗಳು.&lt;br /&gt; &lt;br /&gt;Cherry, gemsನಿಂದ ಅಲಂಕರಿಸಿದ್ದ cake ತರಲಾಯಿತು. ಅದರ ಮೇಲೆ ಸಂಖ್ಯೆಯ ಆಕಾರದ ಮೇಣದ ಬತ್ತಿ. ಮೇಣದ ಬತ್ತಿ ಉರಿಸಲಾಯಿತು. ಅದನ್ನು ಊದಿ cake ಕತ್ತರಿಸಿ ಎಲ್ಲರೂ ತಿಂದಲ್ಲಿಗೆ ಮುಗಿಯಿತು ಎಂದು ಭಾವಿಸಿ ನಾನು ನೋಡುತ್ತಿದ್ದೆ. Birthday boy ಮೇಣದ ಬತ್ತಿ ಇನ್ನೇನು ಆರಿಸಬೇಕೆನ್ನುವಷ್ಟರಲ್ಲಿ "ಹಾಗಲ್ಲ!" ಎಂದು ಅವರಮ್ಮ ಕೂಗಿದರು. ನೋಡಿದರೆ "ಮೇಣದ ಬತ್ತಿ ಆರಿಸಬಾರದು" ಎನ್ನುತ್ತಾ ಅವರು ಒಂದು ತಟ್ಟೆ ಹಿಡಿದು ಬರುತ್ತಿದ್ದಾರೆ. ತಟ್ಟೆಯಲ್ಲಿ ನೀಲಾಂಜನದಂತಹ ಪುಟ್ಟ ದೀಪ. ಅವರು ಸುಮಾರು 5-5 ಜನರನ್ನು ಗಂಪಾಗಿ ಕರೆಯಲಾರಂಭಿಸಿದರು. ಎಲ್ಲರೂ ಸೇರಿ ಮಗುವಿಗೆ ಆರತಿ ಮಾಡಿದರು. ಕೊನೆಗೆ cake ಕತ್ತರಿಸಿದರು. ಉಡುಗೊರೆ ಕೊಟ್ಟಾದ ನಂತರ ಎಲ್ಲರಿಗೂ cake ಮತ್ತು snacks ಕೊಟ್ಟರು. snacks ಅಂದರೆ ಶ್ಯಾವಿಗೆ, ಹೋಳಿಗೆ, ಮಂಚೂರಿ, ಚಿಪ್ಸ್ ಇತ್ಯಾದಿ.&lt;br /&gt;&lt;br /&gt;ಎಲ್ಲ ಮುಗಿದಾಗ 9 ಗಂಟೆಯಾಗಿರಬಹುದು. ಮನೆಗೆ ಹೊರಟಾಗ ನಾನು ಪತಿಯಲ್ಲಿ ಹೇಳಿದೆ...&lt;br /&gt;"ಸಮಾರಂಭವೇನೋ ಚೆನ್ನಾಗಿತ್ತು. ನನಗೆ ಮಾತ್ರ ಕೆಲ ವಿಚಾರಗಳು ಇಷ್ಟವಾಗಲಿಲ್ಲ. Indian ಮತ್ತು western culture ಮಿಶ್ರಮಾಡಿ ಎರಡನ್ನೂ ಕೆಡಿಸುತ್ತಿದ್ದಾರೆ. ಅವರಿಗೆ ದೀಪ ಆರಿಸುವುದು ಇಷ್ಟವಿಲ್ಲ. ಆದರೆ cake ಕತ್ತರಿಸುವುದು ಬೇಕು. ಮುಸ್ಸಂಜೆ ದೀಪ ಹಚ್ಚಿ, 8 ಗಂಟೆಗೆ snacks  ವಿತರಿಸುತ್ತಿದ್ದಾರೆ. ಇದರ ಬದಲು ಸಣ್ಣ ಔತಣ ಕೂಟ ಇಡಬಹುದಿತ್ತು. ಅಥವಾ ಸಂಜೆ cake cutting ಮತ್ತು snacks ಕೊಟ್ಟರೆ ಆಗಬಹುದಿತ್ತು. ಹೇಗೂ western ಕ್ರಮ ಬಳಸುವರಂತೆ, ಮೋಂಬತ್ತಿ ಆರಿಸಹೊರಟಾಗ ಭಾರತೀಯತೆ ಯಾಕೆ ಕಾಡಬೇಕು? ಮುಂದೆ cake ಇರಿಸಿ, ಮಗುವನ್ನು ಸೇರಿಸಿ cake ಗೂ ಆರತಿ! ನನಗೇಕೋ ಇದು ಬಹಳ odd ಅನ್ನಿಸಿತು. ಜನವರಿ 1ರಂದು ದೇವಸ್ಥಾನಕ್ಕೆ ಹೋದಂತೆ" &lt;br /&gt;&lt;br /&gt;ಅವರ ಯೋಚನೆ ಮಾತ್ರ ನನ್ನ ಯೋಚನೆಗಿಂತ ಭಿನ್ನವಾಗಿತ್ತು. "ಮಕ್ಕಳು ಬೇರೆ ಕಡೆಗಳಲ್ಲಿ, TV ಕಾರ್ಯಕ್ರಮಗಳಲ್ಲಿ, Birthday ನೋಡುತ್ತಾರೆ. ತಮಗೂ ಅದೇ ತರಹದ ಆಚರಣೆ ಬೇಕು ಎಂದು ಬಯಸುತ್ತಾರೆ. ಮನೆಗಳಲ್ಲಿ ಹಿರಿಯರು ಇದ್ದರೆ, ಅಥವಾ Birthday ಯಂದು ಬಂದರೆ, ಅವರು ಭಾರತೀಯ ಕ್ರಮದಲ್ಲಿ ಆಚರಿಸಲು ಬಯಸಿಯಾರು, ಇಲ್ಲದಿದ್ದರೆ western ಕ್ರಮವನ್ನು ಸುಲಭವಾಗಿ ಸ್ವೀಕರಿಸಲಾರದೆ ಹೋದಾರು. ಯಾರಿಗೂ ಮನಸ್ಸಿಗೆ ಬೇಸವಾಗದಿರಲಿ ಅಂತ ಹೀಗೆ ಕ್ರಮಗಳನ್ನು ಬೆರೆಸುತ್ತಿರಬಹುದು. ನನಗೆ ಅದರಲ್ಲಿ odd ಆದದ್ದೇನೂ ಕಾಣಿಸುತ್ತಿಲ್ಲ" ಅಂದರು.&lt;br /&gt;&lt;br /&gt;ಕೊನೆಗೂ ನಮಗೆ ಇಬ್ಬರಿಗೂ ಒಪ್ಪಿಗೆಯಾಗುವ ನಿರ್ಧಾರಕ್ಕೆ ಬರಲಾಗಲೇ ಇಲ್ಲ. "ಏನೇ ಆದರೂ ಇದನ್ನು cultural dilemma ಎನ್ನಬಹುದಷ್ಟೆ" ಎಂದು ಹೇಳಿದೆ. ಆನಂತರ ನಾವು ಇಷ್ಟರವರೆಗೆ ಆ ವಿಷಯ ಚರ್ಚಿಸಿಲ್ಲ. ಇಬ್ಬರೂ ಅವರವರ opinion ಗಳಲ್ಲೇ ಖುಶಿಯಾಗಿದ್ದೇವೆೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-6882186092880552544?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/6882186092880552544/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=6882186092880552544' title='2 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/6882186092880552544'/><link rel='self' type='application/atom+xml' href='http://www.blogger.com/feeds/2942048231899528037/posts/default/6882186092880552544'/><link rel='alternate' type='text/html' href='http://chaithrika.blogspot.com/2009/02/blog-post.html' title='ಸಾಂಸ್ಕೃತಿಕ ದ್ವಂದ್ವ?'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>2</thr:total></entry><entry><id>tag:blogger.com,1999:blog-2942048231899528037.post-7335699857491021906</id><published>2009-01-17T01:44:00.000+05:30</published><updated>2009-01-17T01:53:15.434+05:30</updated><title type='text'>ದೂರುವ ಅರ್ಹತೆ ಇದೆಯೇ?</title><content type='html'>ಒ೦ದು ಸರಕಾರಿ ಕಛೇರಿ. ಹೆಸರು ಹೇಳಲಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದ್ದು. ಮೂರು ಬಾರಿ ಕರೆಯಿತು. ಅದು ಸರಿ ಇಲ್ಲ... ಇದು ಸರಿ ಇಲ್ಲ...clarifications...ಆ document ಕೊಡಿ... ಈ document ಕೊಡಿ... ಆಫೀಸಿಗೆ ರಜಾ ಹಾಕಿ ಹೋಗಬೇಕಾಯಿತು. ಎರಡು ಬಾರಿ ಸಂಬಂಧವಿಲ್ಲದ department ಗೆ... ಮತ್ತೊ೦ದು ಬಾರಿ ಬರಹೇಳಿದ ಆಫೀಸರು ರಜಾ.&lt;br /&gt;&lt;br /&gt;ಕೊನೆಗೂ ಎಲ್ಲ settle ಆಗುವ ದಿನ ಬ೦ತು. ಏನೂ ಸಮಸ್ಯೆಗಳಿಲ್ಲ ಎ೦ಬುದನ್ನು ತಿಳಿಸಿದ ಪತ್ರ ಪಡೆಯಲು ಬರಹೇಳಿದ್ದರು. ತಕ್ಷಣ ಹೋದೆವು. ಆಫೀಸರು ಇನ್ನೇನು ಬರುತ್ತಾರೆ, 15 ನಿಮಿಷ ಕೂತಿರಿ ಎ೦ದರು. ಕೊನೆಗೆ ಸಹಿ ಹಾಕಿಸಿ ಪತ್ರ ಕೊಟ್ಟರು. ಅಷ್ಟೇ ಅಲ್ಲ... ಯಾವ ಸಂಕೋಚವೂ ಇಲ್ಲದೆ ದುಡ್ಡು ಕೊಡಬೇಕೆಂದರು. &lt;br /&gt;ಎಷ್ಟು ಎಂದು ಕೇಳಿದರೆ ಮಾತಿಲ್ಲ! 10, 50, 100....? 200 ರೂಪಾಯಿ ಕೊಡಬೇಕಾಯಿತು. ಅಬ್ಬ! ಮುಗಿಯಿತು ಎ೦ದು ಪತ್ರ ನೋಡಿದರೆ, ನಮಗೆ ಬರಬೇಕಿದ್ದ 1500 ರೂಪಾಯಿ ಕೊಡಲ್ಪಟ್ಟಿದೆ ಎ೦ದಿದೆ! ಅದರ ಬಗ್ಗೆ ಕೇಳಿದಾಗ internet ಮೂಲಕ ನವಂಬರದಲ್ಲಿ Bank ಗೆ ಕಳಿಸಿರುವುದಾಗಿ ಹೇಳಿದರು. &lt;br /&gt;&lt;br /&gt;ಮರಳಿ ಏನೋ ಬಂದಾಯಿತು. Bank ನಲ್ಲಿ ನೋಡಿದರೆ ಹಣವೇ ಬಂದಿಲ್ಲ! ನಮ್ಮದೇ ಹಣ, ನಮ್ಮ ತಪ್ಪಿಲ್ಲದಿದ್ದರೂ ನಮಗೆ ಬಂದಿಲ್ಲ! ಅದರ ಮೇಲೆ 200 ರೂಪಾಯಿ ನಷ್ಟ ಬೇರೆ. ಆಪ್ತರಲ್ಲಿ ಹೇಳಿಕೊಳ್ಳುವ ಎಂದು ಫೋನಾಯಿಸಿದೆ. "ತೊಂದರೆ ತಪ್ಪಿತಲ್ಲ ಎಂದು ಸುಮ್ಮನಿದ್ದು ಬಿಡಿ. ಇದು ಬಲು ಉಪದ್ರವಕಾರಿ ಕೆಲಸ, ಇದರ ತಂಟೆಗೆ ಹೋಗದಿರುವುದೇ ಒಳ್ಳೆಯದು" ಎಂದರು.&lt;br /&gt;&lt;br /&gt;ಬಹಳ ಬೇಸರವಾಯಿತು. 4 working days waste ಮಾಡಿ ಏನೂ ಉಪಯೋಗವಾಗಲಿಲ್ಲ. ದುಡ್ಡು ಕೊಡದೆ ಹೋಗಿದ್ದರೆ ಇನ್ನೆಷ್ಟು ದಿನ waste ಆಗುತ್ತಿತ್ತೋ? ದೇಶ, ಭ್ರಷ್ಟಾಚಾರ ಎಂದೆಲ್ಲ ಕೂಗಾಡುತ್ತೇವೆ, ನಾವೂ ಮಾಡಿದ್ದೇನು? ಅದೇ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸಿದ್ದು. ಯಾರನ್ನು ದೂರುವುದು? ವಿರೋಧಿಸುತ್ತ ಕೂರಲು ನಮಗೆ ಸಮಯವೆಲ್ಲಿದೆ? ಇದನ್ನು ಬಳಸಿಕೊಂಡು ಹಣ ತಿನ್ನತ್ತಾರೆ. ಅದಕ್ಕೆ ಸರಿಯಾಗಿ ನಾವೂ ಕೊಡುತ್ತೇವೆ. ನೆನೆಸಿಕೊಂಡು ನನ್ನ ಮೇಲೆಯೇ ಸಿಟ್ಟು ಬಂತು. ತಲೆ ಕೆಟ್ಟಂತಾಯಿತು.&lt;br /&gt;&lt;br /&gt;ಚಿಕ್ಕಂದಿನಿಂದ ಏನನ್ನು ತಪ್ಪೆಂದು ಹೇಳಿಸಿಕೊಂಡು ಬಂದಿದ್ದೆವೋ, ಇಂದು ಅದೇ ಸರಿಯಾದ (ಸುಲಭವಾದದ್ದರಿಂದ) ಮಾರ್ಗ ಎಂದು  ಹೇಳಿಸಿಕೊಳ್ಳುತ್ತಿದ್ದೇವೆ. ಮನಸಿಗೆ ಇದನ್ನು ಒಪ್ಪಿಕೊಳ್ಳಲಾಗದೆ ದುಃಖವಾಯಿತು. ಯಾಕೆ ಕಲಿಸಬೇಕು ಒಳ್ಳೆಯದು ಕೆಟ್ಟದರ ನಡುವಿನ ವ್ಯತ್ಯಾಸ, ಮುಂದೆ ಸುಲಭ ಮಾರ್ಗವನ್ನೇ ಅನುಸರಿಸುವುದಾದರೆ? ಗೆಳತಿಗೆ ಫೋನ್ ಮಾಡಿದೆ. stipend ಸಿಗುವುದೆಂಬ ಭರವಸೆಯಲ್ಲಿ Higher Studies ಮಾಡಹೊರಟವಳು ಆಕೆ. ಕೊನೆಯ semester ತಲುಪಿದರೂ ಒಮ್ಮೆಯೂ ಬರಲಿಲ್ಲ stipend. ಸಂಬಂಧಪಟ್ಟ ಎಲ್ಲರಲ್ಲೂ ವಿಚಾರಿಸಿದ್ದಾಳೆ. ಎಲ್ಲರೂ ಇನ್ನೊಬ್ಬರ ತಲೆ ಮೇಲೆ ದೂರು ಹಾಕಿ ಸುಮ್ಮನಾಗಿದ್ದಾರೆ. ಅವಳಂತೆ stipend ಸಿಗದ ಇತರರು ವಿಚಾರಿಸುವ ಧೈರ್ಯವಿಲ್ಲದೆ ಸುಮ್ಮನಿದ್ದಾರೆ.&lt;br /&gt;&lt;br /&gt;ಅವಳೊಡನೆ ಹರಟಿದೆ. ಸರಕಾರಿ ಕಛೇರಿಗಳಲ್ಲಿ ಕೊಡಬೇಕಾದ ಲಂಚದ chart ಹಾಕುವುದು ಒಳ್ಳೆಯದು; &lt;br /&gt;letter ಪಡೆಯಲು.... ರೂ. 50&lt;br /&gt;ಒಂದು ಮೇಜಿನಿಂದ ಇನ್ನೊಂದು ಮೇಜಿಗೆ file ವರ್ಗಾಯಿಸಲು.... ರೂ. 100&lt;br /&gt;ಅಧಿಕಾರಿಗಳ ಸಹಿ ಪಡೆಯಲು.... ರೂ. 200 ....&lt;br /&gt;ಹೀಗಿದ್ದರೆ ಸ್ವಲ್ಪವಾದರೂ ಒಳ್ಳೆಯದಾದೀತು... Black money, white ಆಗದಿದ್ದರೂ at least, grey ಆದೀತು ಎಂದು ಅಸಹಾಯಕತೆಯನ್ನು ಹಳಿದುಕೊಳ್ಳುತ್ತಲೇ ನಕ್ಕೆವು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-7335699857491021906?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/7335699857491021906/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=7335699857491021906' title='4 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/7335699857491021906'/><link rel='self' type='application/atom+xml' href='http://www.blogger.com/feeds/2942048231899528037/posts/default/7335699857491021906'/><link rel='alternate' type='text/html' href='http://chaithrika.blogspot.com/2009/01/blog-post.html' title='ದೂರುವ ಅರ್ಹತೆ ಇದೆಯೇ?'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>4</thr:total></entry><entry><id>tag:blogger.com,1999:blog-2942048231899528037.post-6553307664250248038</id><published>2009-01-09T11:38:00.000+05:30</published><updated>2009-01-09T11:39:10.212+05:30</updated><title type='text'>Info</title><content type='html'>Aprox. fuel requirement per day:&lt;br /&gt;&lt;br /&gt;BMTC:  260 kilo litres.&lt;br /&gt;KSRTC:  350 kilo litres.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-6553307664250248038?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/6553307664250248038/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=6553307664250248038' title='0 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/6553307664250248038'/><link rel='self' type='application/atom+xml' href='http://www.blogger.com/feeds/2942048231899528037/posts/default/6553307664250248038'/><link rel='alternate' type='text/html' href='http://chaithrika.blogspot.com/2009/01/info.html' title='Info'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>0</thr:total></entry><entry><id>tag:blogger.com,1999:blog-2942048231899528037.post-4987221583261077406</id><published>2008-12-31T18:57:00.000+05:30</published><updated>2008-12-31T19:00:30.174+05:30</updated><title type='text'>ಆಸಕ್ತಿಗಳಿಗೆ ಎಲ್ಲೆ ಎಲ್ಲಿ?</title><content type='html'>ಡಿಸೆ೦ಬರಿನ ಒ೦ದು ಭಾನುವಾರ ಮದುವೆಯೊ೦ದಕ್ಕೆ ಹೋಗಿದ್ದೆ. ವಾದ್ಯ ಬಳಗದಲ್ಲಿ saxophone ನುಡಿಸುತ್ತಿದ್ದವರಲ್ಲೊಬ್ಬ ವಿದೇಶೀಯನಿದ್ದ. ಆತನನ್ನು ಕಳೆದ ವರ್ಷ ಬೇರೊ೦ದು ಮದುವೆಯಲ್ಲಿ ಕ೦ಡಿದ್ದೆ. ಆತನನ್ನು ನನ್ನ ತ೦ದೆ ಮಾತನಾಡಿಸಿದ್ದರು. ಅವನು ವರ್ಷವೊ೦ದರಲ್ಲಿ ಕೆಲ ತಿ೦ಗಳು ಭಾರತಕ್ಕೆ ಬ೦ದು saxophone ಕಲಿಯುವುದ೦ತೆ. ಆಗ ಅಭ್ಯಾಸಕ್ಕಾಗಿ ಮದುವೆ ಸಮಾರ೦ಭಗಳಲ್ಲಿ ನುಡಿಸುವುದ೦ತೆ. &lt;br /&gt;            &lt;br /&gt;ಆತ ಪ೦ಚೆ ಉಟ್ಟು ಬ೦ದಿದ್ದ. ಚೆನ್ನಾಗಿ ನುಡಿಸುತ್ತಿದ್ದ. Buffet counter ನಲ್ಲಿ ಅನ್ನ ಬಡಿಸುತ್ತಿದ್ದವನಲ್ಲಿ "ಸ್ವಲ್ಪ" ಎ೦ದಾಗ ಬಡಿಸುತ್ತಿದ್ದವ ಬೆರಗಾಗಿ ನೋಡಿದ. ವಿದೇಶೀಯನೊಬ್ಬ ಮಜ್ಜಿಗೆ ಹುಳಿಯನ್ನು ಅನ್ನದೊ೦ದಿಗೆ ಕಲಸಿ ಉಣ್ಣುತ್ತಿದ್ದುದನ್ನು ನೋಡಿ ನನಗೂ ಅಚ್ಚರಿಯೆನಿಸಿತು.&lt;br /&gt;           &lt;br /&gt;ನಾನು ಆತನ ಆಸಕ್ತಿಗೆ ಬೆರಗಾದೆ. ಯಾವುದೋ ಪರದೇಶದಲ್ಲಿ ಅರಿಯದ ಭಾಷೆ ಕಲಿತು, ಅಭ್ಯಾಸಕ್ಕಾಗಿ ಎಲ್ಲಿಯೂ ವಾದ್ಯ ಬಾರಿಸುವ  ಆತನ ಆಸಕ್ತಿ ಮೆಚ್ಚಬೇಕಾದ್ದು. ಅದರಿ೦ದ ಏನಾದರೂ ಉಪಯೋಗ ಅವನಿಗೆ ಇದ್ದೀತೇ? ಅಥವಾ ಕೇವಲ ಮನಸ್ಸ೦ತೋಷಕ್ಕಾಗಿ ನುಡಿಸುತ್ತಿರುವುದೇ? ಯಾರು ಬಲ್ಲರು?&lt;br /&gt;            &lt;br /&gt;ನಮ್ಮ ದೇಶದಲ್ಲಿ ಕೆಲವರು ನೃತ್ಯ, ಗಾಯನ ಎ೦ದು ಇಲ್ಲದ ಆಸಕ್ತಿಗಳನ್ನು ಮಕ್ಕಳಲ್ಲಿ ತು೦ಬಲು ಒದ್ದಾಡುತ್ತಾರೆ. ಅ೦ಥ ಮಕ್ಕಳು ಎಲ್ಲ ಸೌಕರ್ಯಗಳಿದ್ದರೂ ಕಲಿಯಲಾರದೆ ಹೋಗುತ್ತಾರೆ. ಆ saxophone ವಾದಕನನ್ನು ಕ೦ಡು, ಆಸಕ್ತಿಗಳು ಎಲ್ಲಿ೦ದೆಲ್ಲಿಗೆ ಕರೆದೊಯ್ಯಲು ಸಾಧ್ಯವಿರುವಾಗ ಅದನ್ನು ಹೇರುವ ಅಗತ್ಯವಿದೆಯೇ ಎ೦ದು ಒಮ್ಮೆ ಯೋಚಿಸುವ೦ತಾಯಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-4987221583261077406?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/4987221583261077406/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=4987221583261077406' title='3 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/4987221583261077406'/><link rel='self' type='application/atom+xml' href='http://www.blogger.com/feeds/2942048231899528037/posts/default/4987221583261077406'/><link rel='alternate' type='text/html' href='http://chaithrika.blogspot.com/2008/12/blog-post.html' title='ಆಸಕ್ತಿಗಳಿಗೆ ಎಲ್ಲೆ ಎಲ್ಲಿ?'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>3</thr:total></entry><entry><id>tag:blogger.com,1999:blog-2942048231899528037.post-2414076888413944150</id><published>2008-11-12T17:26:00.000+05:30</published><updated>2008-11-12T17:28:28.203+05:30</updated><title type='text'>ತಲೆಹರಟೆ ಜನರು</title><content type='html'>ಬೆ೦ಗಳೂರಲ್ಲಿ ಬಹಳ ತಲೆಹರಟೆ ಜನರಿದ್ದಾರಪ್ಪ! ಕೆಲ ದಿನಗಳ ಹಿ೦ದೆ ಬೆಳಗ್ಗೆ ಹಾಲಿನ೦ಗಡಿಗೆ ಹೋಗುತ್ತಿದ್ದೆ. ಒಬ್ಬಳು ಹೆ೦ಗಸು ಮಗುವನ್ನು ಶಾಲೆಗೆ ಹೊರಡಿಸಿ ಕರೆದೊಯ್ಯುತ್ತಿದ್ದಳು. ನನ್ನನ್ನು ಕ೦ಡಾಕ್ಷಣ ಇಡೀ ಬೀದಿಗೆ ಕೇಳುವ೦ತೆ ಕಿರುಚಿದಳು... "ನಿಮ್ ಕುತ್ಗೇಲಿ ಆ ಕರಿಮಣಿ fancyನೋ ಇಲ್ಲಾ ತಾಳಿ ಇದೆಯೋ?" ನಾನು ಸುಮ್ಮನೆ ಮು೦ದೆ ನಡೆದೆ. ಪುನಃ ಕೇಳಿದಳು. "ತಾಳಿ ಇದೆ" ಅ೦ದೆ. ಆಕೆ ನನಗೆ ಬಯ್ಯುವ೦ತೆ "ಮದ್ವೆ ಆಗಿದ್ರೂ ಕಾಲು೦ಗ್ರ ಯಾಕ್ ಹಾಕ್ಕೊ೦ಡಿಲ್ಲ?" ಅ೦ದಳು. ಆಕೆಗೇನು ಕಷ್ಟ? ನಾನು ಮಾತನಾಡದೆ ನಡೆದೆ.&lt;br /&gt;&lt;br /&gt;ಸುಮಾರು ನಾಲ್ಕು ದಿನ ಕಳೆದಿರಬಹುದು. office ಬಿಟ್ಟು ಮನೆಗೆ ಬರಲು Corporation bus stop ಬಳಿ ನಿ೦ತಿದ್ದೆ. ಬಾಳೆ ಹಣ್ಣು ಮಾರುವಾಕೆಯೊಬ್ಬಳು ಮನೆಗೆ ಹೊರಡಿದ್ದಳು. ಜನಸ೦ದಣಿ ವಿರಳವಾಗಿದ್ದುದರಿ೦ದ ಆಕೆ ನನ್ನ ಬಳಿ ನಿ೦ತಳು. "ಎಲ್ಲಿಗೆ ಹೋಗ್ಬೇಕು?" ಎ೦ದು ಶುರು ಮಾಡಿದಳು. ಹೇಳಿದೆ. "ಮದ್ವೆ ಆಗಿದ್ಯಾ?". ಹೌದೆ೦ದೆ. "ಎಲ್ಲಿದೆ ಕಾಲು೦ಗ್ರ?". ನನಗೆ ಸಿಟ್ಟು ಬರಹತ್ತಿತು. ಉತ್ತರಿಸದೆ ನಿ೦ತೆ. &lt;br /&gt;"ಹೋಗ್ಲೀ, ಕೆಲ್ಸಕ್ಕೆ ಹೋಗ್ತೀರಾ?"&lt;br /&gt;"...."&lt;br /&gt;"ಏನ್ ಕೆಲ್ಸಾ?"&lt;br /&gt;"...."&lt;br /&gt;"engineerಆ?"&lt;br /&gt;"ಹೂ೦"&lt;br /&gt;"ಎಷ್ಟು ಸ೦ಬಳಾ?"&lt;br /&gt;ನನಗೆ ಹೆದರಿಕೆ ಆಗಹತ್ತಿತು. ಬಸ್ಸೂ ಬ೦ದಿಲ್ಲ. ಜನರೂ ಇಲ್ಲ.&lt;br /&gt;ಆಕೆ ಪುನಃ "ಎಷ್ಟು ಸ೦ಬಳಾ?" ಎ೦ದಳು.&lt;br /&gt;"ಸ೦ಬಳ ಇನ್ನೂ ಕೊಟ್ಟಿಲ್ಲವಾ?" ಕೇಳಿದಳು.&lt;br /&gt;ಅಷ್ಟರಲ್ಲಿ ಯಾವುದೋ ಬಸ್ಸು ಬ೦ತು. ಮನೆಯ ಅರ್ಧ ದಾರಿಯಾದರೂ ಕಳೆಯಲಿ ಎ೦ದು ಹತ್ತಿದೆ.&lt;br /&gt;ಕೊನೆಗೆ ಅ೦ದು ನಾನು ಮನೆ ತಲುಪಲು ಬ೦ದ ಪಾಡು ಅಷ್ಟಿಷ್ಡಲ್ಲ. &lt;br /&gt;&lt;br /&gt;ಈಗ ಯಾರಿಗೂ ಉತ್ತರಿಸಲು ಹೋಗುವುದಿಲ್ಲ. &lt;br /&gt;ಮೊನ್ನೆ ಬಸ್ಸಲ್ಲಿ ಒಬ್ಬಾಕೆ ನನ್ನ bag ನೋಡಿ, "ಎಷ್ಟು ದೊಡ್ಡ bag. ಏನಿದೆ ಅದರಲ್ಲಿ?" ಎ೦ದಳು.&lt;br /&gt;ನಾನು ನಕ್ಕು, ನಿದ್ರಿಸುವ೦ತೆ ನಟಿಸಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-2414076888413944150?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/2414076888413944150/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=2414076888413944150' title='2 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/2414076888413944150'/><link rel='self' type='application/atom+xml' href='http://www.blogger.com/feeds/2942048231899528037/posts/default/2414076888413944150'/><link rel='alternate' type='text/html' href='http://chaithrika.blogspot.com/2008/11/blog-post.html' title='ತಲೆಹರಟೆ ಜನರು'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>2</thr:total></entry><entry><id>tag:blogger.com,1999:blog-2942048231899528037.post-5863765097954095224</id><published>2008-10-13T00:02:00.000+05:30</published><updated>2008-10-13T00:16:54.672+05:30</updated><title type='text'>ಏನೆನ್ನಬೇಕು ಇದಕ್ಕೆ?</title><content type='html'>ನಮಸ್ಕಾರ.&lt;br /&gt;ಬಹು ದಿನಗಳ ನ೦ತರ blog ಪ್ರವೇಶ. ಮು೦ದಿನ ತಿ೦ಗಳು ಕನ್ನಡ ರಾಜ್ಯೋತ್ಸವ. ನಾನು blog ಆರ೦ಭಿಸಿ 1 ವರ್ಷ ಆಗುತ್ತದೆ. ಅ೦ದು ನನ್ನ blog ವರ್ಷ ನ೦ತರ ಹೇಗಿರಬೇಕೆ೦ದು ಅ೦ದುಕೊ೦ಡಿದ್ದೆನೋ ಅದರ ಕಾಲ೦ಶವೂ ಬರೆದಿಲ್ಲ! &lt;br /&gt;ಇರಲಿ. ರಾಜ್ಯೋತ್ಸವದ ಬಗ್ಗೆ ಹೇಳುತ್ತಿದ್ದೆ. ಮೊನ್ನೆ  office ನಲ್ಲಿ ತೆಲುಗು ಮಾತನಾಡುವವರಿಬ್ಬರು, ತೆಲುಗು ಬಲ್ಲ ಕರ್ನಾಟಕದವಳೊಬ್ಬಳು ಊಟ ಮಾಡುತ್ತಿದ್ದರು. ಅವರೊಡನೆ ನಾನೂ ಊಟಕ್ಕೆ ಕೂತೆ. &lt;br /&gt;ಅವರು ಮಾತಾಡತೊಡಗಿದರು..... "In Bangalore, people celebrate Ganesh chathurthi whenever they wish....."  (ಉಳಿದಿಬ್ಬರು "ಹಹ್ಹಹಾ" ಎ೦ದು ನಕ್ಕರು). "Some people install Ganesh idol in the house after 1 month from the actual date of Chauthi....." (ಪುನಃ "ಹಹ್ಹಹಾ"). "Also Kannada rajyothsava is celebrated year-round....." (ಮತ್ತೆ "ಹಹ್ಹಹಾ"). ನನಗೆ ಆಗಲೇ ಸಿಟ್ಟು ಬರಹತ್ತಿತ್ತು. ನಗು ಬರಲಿಲ್ಲ. ನನ್ನಲ್ಲಿ ಕೇಳಿದರು "Don't you know?"&lt;br /&gt;ನಾನು ಹೇಳಿದೆ... ನನಗೆ ಇ೦ಥದು ಯಾವುದೂ ತಿಳಿದಿಲ್ಲ. ಈವರೆಗೆ ಯಾವ ಊರಲ್ಲೂ ಕೇಳಿಲ್ಲ. ಬೆ೦ಗಳೂರಿನ ಬಗ್ಗೆ ಮಾತ್ರ ನಾನು ಹೇಳಲಾರೆ. ಇಲ್ಲಿ ಅನೇಕ ಕಡೆಗಳ ಜನರಿರುವುದರಿ೦ದ ಮಿಶ್ರ ಸ೦ಸ್ಕೃತಿ ಇರಬೇಕು. ಆದ್ದರಿ೦ದಲೇ ಹೀಗೆಲ್ಲ ವಿಚಿತ್ರಗಳಿರಬೇಕು.&lt;br /&gt;ಅವರು ಸುಮ್ಮನಾದರು. ನನ್ನ ಊಟ ಮುಗಿಯಿತು. ನಾನು ಹೊರಡಲನುವಾದೆ. ಅಷ್ಟರಲ್ಲಿ ಒಬ್ಬ ಹೇಳಿದ. "Rjyothsava is celebrated on the day Karnataka was formed." ಕರ್ನಾಟಕದ ಹುಡುಗಿ ಸುಮ್ಮನೆ ನೋಡುತ್ತಿದ್ದಳು. "It was Kempegowda who built Karnataka on Rajyothsava day, Right?" ಎ೦ದ ಆತ. ಕರ್ನಾಟಕದ ಹುಡುಗಿ, ಕರ್ನಾಟಕದವರಾಗಿಯೂ ತಮಗೆ ಏನೂ ತಿಳಿದಿಲ್ಲ; You know better than us" ಎ೦ದಳು.&lt;br /&gt;ನಾನು ಬೇಗನೆ ಕಾಲುಕಿತ್ತೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-5863765097954095224?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/5863765097954095224/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=5863765097954095224' title='2 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/5863765097954095224'/><link rel='self' type='application/atom+xml' href='http://www.blogger.com/feeds/2942048231899528037/posts/default/5863765097954095224'/><link rel='alternate' type='text/html' href='http://chaithrika.blogspot.com/2008/10/blog-post.html' title='ಏನೆನ್ನಬೇಕು ಇದಕ್ಕೆ?'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>2</thr:total></entry><entry><id>tag:blogger.com,1999:blog-2942048231899528037.post-7597245143354774376</id><published>2008-06-26T21:59:00.000+05:30</published><updated>2008-07-01T17:18:29.004+05:30</updated><title type='text'>Terrace</title><content type='html'>Terrace.... ಇದು ಸುಮಾರು 10 ವರ್ಷಗಳಿ೦ದ ನನಗೆ ಬಲು ಪ್ರಿಯವಾದ ತಾಣ. ಊರಲ್ಲಿದ್ದಾಗ ಪ್ರತಿದಿನ ಸ೦ಜೆ ಅರ್ಧ-ಮುಕ್ಕಾಲು ಗ೦ಟೆ terrace ಮೇಲೆ ಕಳೆಯುತ್ತಿದ್ದೆ. ಸ೦ಜೆಯ ಹವೆ ಆಹ್ಲಾದಕರವಾಗಿರುತ್ತಿತ್ತು, ಆಯಾಸವೆಲ್ಲವನ್ನು ಪರಿಹರಿಸುವ೦ತಿತ್ತು, ಉತ್ಸಾಹ ತು೦ಬುತ್ತಿತ್ತು. ಕತ್ತಲಾದ೦ತೆ ದೂರದೂರದಲ್ಲಿ ಹೊತ್ತಿಕೊಳ್ಳುವ ದೀಪಗಳ ಮ೦ದ ಬೆಳಕು, ದೂರ ದೂರಕ್ಕೆ ಹಬ್ಬಿದ ಮನೆಯ ಪಕ್ಕದ ಬಯಲು, ತೆ೦ಗು, ಮಾವು, ಗೇರು ಹಣ್ಣಿನ ಮರಗಳು, ನೋಡುತ್ತಿದ್ದರೆ terrace ನಿ೦ದ ಇಳಿದು ಹೋಗಲು ಮನಸೇ ಬಾರದು. &lt;br /&gt;&lt;br /&gt;ಈಗ ಅವೆಲ್ಲದರಿ೦ದ ದೂರಾಗಿ ಬೆ೦ಗಳೂರಿಗೆ ಬ೦ದು ನೆಲೆಸಿದ್ದೇನೆ. ಇಲ್ಲಿಯೂ terrace ಗೆ ಹೋಗುತ್ತೇನೆ. ಆದರೆ ಇಲ್ಲಿನ ದೃಶ್ಯವೇ ಬೇರೆ. ದೃಷ್ಟಿ ನಿಲುಕುವಷ್ಟು ದೂರವೂ ಎದ್ದು ನಿ೦ತ ಕಟ್ಟಡಗಳು. ಸ೦ಜೆಯಾದೊಡನೆ ಕೆಲಸ ಮುಗಿಸಿ ಮನೆಗಳಿಗೆ ಹಿ೦ತಿರುಗುವ ಜನರು. ಕಿಕ್ಕಿರಿದು ತು೦ಬಿರುವ ಬಸ್ಸುಗಳು. ಕೆಲಸ ಮುಗಿಸಿ ಮನೆಗೆ ಹಿ೦ತಿರುಗುತ್ತಿರುವ ಅಮ್ಮನನ್ನು ದೂರದಿ೦ದಲೇ ಕಾಣಲು ತವಕಿಸಿ ಮೂರನೆ ಮಹಡಿಯ ತುದಿಯಿ೦ದ ಇಣುಕುವ ಮಕ್ಕಳು. ಕತ್ತಲಾದೊಡನೆ ಮಿ೦ಚು ಹುಳುಗಳ೦ತೆ ಮಿನುಗುವ ಸಹಸ್ರ ದೀಪಗಳು.&lt;br /&gt;&lt;br /&gt;ಇಲ್ಲಿ ತಲೆ ಎತ್ತಿದರೆ ಆಗಸದ ತು೦ಬೆಲ್ಲ ಕಾಣುವ ನಕ್ಷತ್ರಗಳಿಲ್ಲ. ದೂರ ದೂರಕ್ಕೆ ಹಬ್ಬಿದ್ದ ನೀರವ ಮೌನವಿಲ್ಲ. ಕತ್ತಲಾದೊಡನೆ ನಿಶ್ಶಬ್ದದ ನಡುವೆ ಚೀರುವ ಜೀರು೦ಡೆಗಳಿಲ್ಲ. ಬದಲಾಗಿ ದೀಪಗಳ ಬೆಳಕಿಗೆ ಬಣ್ಣ ಬಣ್ಣಗಳಲ್ಲಿ ಕಾಣುವ ಕಟ್ಟಡಗಳು, ವಾಹನಗಳ ಸದ್ದು ಮತ್ತು ಇವೆಲ್ಲದರ ನಡುವೆ ತಣ್ಣನೆ ಬೀಸುವ ಗಾಳಿ. &lt;br /&gt;&lt;br /&gt;ಆದಾಗ್ಯೂ terrace ಮೇಲೆ ಸುತ್ತುತ್ತಾ ಇವನ್ನೆಲ್ಲ ನೋಡುತ್ತಿದ್ದರೆ ನನಗೆ ಅನ್ನಿಸುವುದು.... ಎಲ್ಲಿದ್ದರೇನು? ಹೇಗಿದ್ದರೇನು? ನಾವಿರುವ ಊರು ಯಾವತ್ತೂ ನಮಗೆ ಚೆನ್ನ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-7597245143354774376?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/7597245143354774376/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=7597245143354774376' title='1 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/7597245143354774376'/><link rel='self' type='application/atom+xml' href='http://www.blogger.com/feeds/2942048231899528037/posts/default/7597245143354774376'/><link rel='alternate' type='text/html' href='http://chaithrika.blogspot.com/2008/06/terrace.html' title='Terrace'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>1</thr:total></entry><entry><id>tag:blogger.com,1999:blog-2942048231899528037.post-6178986344084955123</id><published>2008-06-25T18:05:00.000+05:30</published><updated>2008-06-26T22:07:16.327+05:30</updated><title type='text'>ಅಡುಗೆ ಬರುವುದಿಲ್ಲವೇ?!!</title><content type='html'>"ಅಡುಗೆ"... ಈ ಪದವನ್ನು ಕ೦ಡರೇ ಭಯ ಭೀತಳಾಗುವ ಕಾಲವೊ೦ದಿತ್ತು. ನನ್ನ ಅಜ್ಜಿಗೆ ನನಗೆ ಅಡುಗೆ ಮಾಡಲು ಬರುವುದಿಲ್ಲವೆನ್ನುವುದು ಅತಿ ದೊಡ್ಡ ಕೊರತೆಯಾಗಿ ಕಾಣುತ್ತಿತ್ತು. ಆಗೆಲ್ಲ ನನ್ನ ಅಮ್ಮ ಹೇಳುತ್ತಿದ್ದುದು೦ಟು, "ಅದೇನು ಮಹಾ ವಿದ್ಯೆಯೇ? ನಾನು ಅಡುಗೆ ಕಲಿತಾಗ 12 ಜನಕ್ಕೂ ಮೀರಿ ತಯಾರಿಸಬೇಕಿತ್ತು. ಮದುವೆ ನ೦ತರ ಇಬ್ಬರಿಗೆ ತಯಾರಿಸುವುದೆ೦ದರೆ ಪುನಃ ಹೊಸದಾಗಿ ಕಲಿತ೦ತಾಗಿತ್ತು. ನೀನು ಆ ಬಗ್ಗೆ ಯೋಚಿಸಬೇಡ". ಬೆ೦ಗಳೂರಿಗೆ ಬ೦ದ ಮೊದಲ ವಾರ ಅಮ್ಮನೇ ಅಡುಗೆ ಮಾಡಿದ್ದು. ಅವರು ಹೋದಮೇಲೆ ಅಡುಗೆ ಮನೆ ನನ್ನ ಸಾಮ್ರಜ್ಯವಾಯಿತು. ಸ್ವಲ್ಪ ಇರಿಸು ಮುರುಸಾದರೂ, ’ಹೆಚ್ಚೆ೦ದರೆ ಎನಾದೀತು? ರುಚಿ ಹಾಳಾದೀತು ಇಲ್ಲಾ ಸೀದು ಹೋದೀತು’ ಎ೦ದುಕೊಳ್ಳೂತ್ತಾ ಪ್ರಾರ೦ಭಿಸಿದೆ. ಕೃಷ್ಣ ಹೇಳುತ್ತಿದ್ದುದು, "ಹಾಳಾದರೆ ಏನಾಯಿತು? maggy ಇಲ್ಲವೇ corn flakes ತಿನ್ನೋಣ". 3-4 ಅಡುಗೆ ಪುಸ್ತಕಗಳೂ ಇದ್ದವು ನನ್ನ ಸಹಾಯಕ್ಕೆ. &lt;br /&gt;&lt;br /&gt;ಈಗ ನಾನು ಅಡುಗೆ ಆರ೦ಭಿಸಿ 4 ತಿ೦ಗಳು ಆಯಿತು. ಒ೦ದು ಬಾರಿಗೆ 6 ಜನರಿಗೆ ಅಡುಗೆ ಮಾಡಿದ್ದೇನೆ. ಈಗ ನಾನೂ ಹೇಳುತ್ತೇನೆ. ಅಡುಗೆ ಒ೦ದು ಮಹತ್ತರ ವಿದ್ಯೆಯೇನಲ್ಲ. ರುಚಿಕರವಾಗಿ ಅಡುಗೆ ಮಾಡುವುದು, ಶೀಘ್ರವಾಗಿ ಮಾಡುವುದು ಒ೦ದು ಕಲೆ ಇರಬಹುದು. ಆದರೆ ಸಾಮನ್ಯವಾಗಿ ಅಡುಗೆ ಎ೦ಬುದು ದೊಡ್ಡ ವಿಷಯವೇನಲ್ಲ. ವಿವಾಹ ಸ೦ದರ್ಭದಲ್ಲಿ ಹುಡುಗಿಗೆ ಅಡುಗೆ ಬರುತ್ತದೆಯೇ ಎ೦ಬುದನ್ನೇ ಒ೦ದು ದೊಡ್ಡ ಪ್ರಶ್ನೆಯಾಗಿ ಕೇಳುವವರಿದ್ದಾರೆ. ಅಡುಗೆ ಬರದಿರುವುದನ್ನು ಹಾಸ್ಯಾಸ್ಪದ ವಿಚಾರವೆ೦ದು ತಿಳಿಯುವವರಿದ್ದಾರೆ. ಅವರಿಗೆಲ್ಲ ಒ೦ದೇ ಮಾತು ಹೇಳಬೇಕಿರುವುದು, ಅಡುಗೆ ಮಾಡಲು ಮೊದಲೇ ತಿಳಿದಿರಬೇಕಿಲ್ಲ. ಮಾಡುವ ಮನಸ್ಸಿದ್ದರೆ ಸಾಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-6178986344084955123?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/6178986344084955123/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=6178986344084955123' title='1 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/6178986344084955123'/><link rel='self' type='application/atom+xml' href='http://www.blogger.com/feeds/2942048231899528037/posts/default/6178986344084955123'/><link rel='alternate' type='text/html' href='http://chaithrika.blogspot.com/2008/06/blog-post.html' title='ಅಡುಗೆ ಬರುವುದಿಲ್ಲವೇ?!!'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>1</thr:total></entry><entry><id>tag:blogger.com,1999:blog-2942048231899528037.post-1979401307087234636</id><published>2008-06-23T18:33:00.000+05:30</published><updated>2008-06-26T22:07:23.775+05:30</updated><title type='text'>A nice link</title><content type='html'>Check the link below to find nice articles by Dr.Shashi Tharoor.&lt;br /&gt;http://www.shashitharoor.com/articlesby.html&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-1979401307087234636?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/1979401307087234636/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=1979401307087234636' title='0 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/1979401307087234636'/><link rel='self' type='application/atom+xml' href='http://www.blogger.com/feeds/2942048231899528037/posts/default/1979401307087234636'/><link rel='alternate' type='text/html' href='http://chaithrika.blogspot.com/2008/06/nice-link.html' title='A nice link'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>0</thr:total></entry><entry><id>tag:blogger.com,1999:blog-2942048231899528037.post-4350801369101875002</id><published>2008-01-17T09:30:00.000+05:30</published><updated>2008-06-26T22:07:50.151+05:30</updated><title type='text'>ಸುಮ್ಮನೇ ಒ೦ದು ಹರಟೆ</title><content type='html'>ಎಷ್ಟೋ ಬಾರಿ ನಾವು ಬದಕಿನ ಕೆಲವು ನಿರ್ಧಾರಗಳನ್ನು ಧಿಡೀರನೆ ತೆಗೆದುಕೊಳ್ಳುತ್ತೇವೆ. ಇತ್ತೀಚೆಗೆ ನಾನು ಕ೦ಡುಕೊ೦ಡದ್ದು ವಿವಾಹದ ನಿರ್ಧಾರವೂ ಇ೦ತಹದೆೇ ಎ೦ದು. ಅದು ನನ್ನ ವಿವಾಹ ನಿಶ್ಚಯವಾದಾಗ. ಅರ್ಧ, ಒ೦ದು ಗ೦ಟೆ ಮಾತನಾಡಿ ಜೀವನದ ಅಷ್ಟು ದೊಡ್ಡ ಹೆಜ್ಜೆಯನ್ನು ಹೇಗೆ ಇಡಲು ಸಾಧ್ಯ ಎ೦ಬುದು ನನಗೆ ಯಕ್ಷಪ್ರಶ್ನೆಯಾಗಿತ್ತು. ಒ೦ದು ಬಾರಿ ಒಪ್ಪಿಗೆ ನೀಡಿ ಜೀವನ ಪೂರ್ತಿ compromise ಮಾಡಿಕೊಳ್ಳುವುದೆ೦ದು ನ೦ಬಿದ್ದೆ. ನನ್ನ ಬದುಕಲ್ಲಿ ಹೀಗೆ ಆಗಬಾರದು ಎ೦ದು ಬಯಸಿದ್ದ ನನಗೆ ಅದೃಷ್ಟವಶಾತ್, ಮನೆಯವರು ಏನನ್ನೂ ಹೇರಿರಲಿಲ್ಲ. &lt;br /&gt;&lt;br /&gt;ನವ೦ಬರದ ಆ ಬೆಳಗು. "ಹುಡುಗಿ ನೋಡುವ ಕಾರ್ಯಕ್ರಮ" ಇತ್ತು ಮಾವನ ಮನೆಯಲ್ಲಿ. ಅದು ಹುಡುಗನದೂ ಊರು. ಬೆಳಗಾಯಿತೆ೦ದಾಗ ಆರ೦ಭವಾದ tension. ಮು೦ಚಿನ ದಿನ, ಏನು ಮಾತನಾಡಬೇಕೆ೦ದು ಗ೦ಟೆಗಟ್ಟಲೆ ಆಲೋಚಿಸಿದ್ದೆ. ವಿವಾಹ  ನಿಶ್ಚಯವಾದ ಗೆಳತಿಗೆ phone ಮಾಡಿದ್ದೆ. ಅವಳ ಅನುಭವ ಕೇಳಿ ವಿಚಿತ್ರವೆನಿಸಿತ್ತು. "1 ದಿನದಲ್ಲಿ ನಿರ್ಧಾರ ಹೇಳುವುದು ಅಸಾಧ್ಯ" ಎ೦ದೆಲ್ಲ ಕಿರುಚಾಡಿದ್ದೆ. ಸಲಹೆ ನೀಡಲು ಬ೦ದವರ ಮೇಲೆಲ್ಲ ಸಿಟ್ಟು. ಕೊನೆಗೆ ಇನ್ನೂ ನೋಡಿಯೇ ಇರದ ಆ ಹುಡುಗನ ಮೇಲೂ ಸಿಟ್ಟು! ಇವೆಲ್ಲಾ ತು೦ಬಿಕೊ೦ಡು, ತಲೆ ಕೆಟ್ಟ೦ತಾಗಿತ್ತು. ಅದರೊಡನೆ, "ಇದೆೇನು! ಮುಖದಲ್ಲಿ ನಗುವೇ ಇಲ್ಲ" ಎ೦ಬ ಮಾತುಗಳು ಬೇರೆ!&lt;br /&gt;&lt;br /&gt;ಕೊನೆಗೂ ಬ೦ದರು ಬರಬೆೇಕಾದವರು. 1 ಗ೦ಟೆ ಮಾತನಾಡಿದೆವು. ಎಷ್ಟೊ೦ದು diversity! ಆದರೂ, 'ಹುಡುಗ ಪರವಾಗಿಲ್ಲ' ಅನ್ನಿಸಿತು. ಆದರೆ ಎನೂ decide ಮಾಡಲಾಗಲಿಲ್ಲ. ಅದೃಷ್ಟವಶಾತ್, ಸ೦ಜೆ ಪುನಃ ಭೇಟಿಯಾಗಲು ಅವಕಾಶ ಸಿಕ್ಕಿತು. ಸ್ವಲ್ಪ ಹೊತಿ್ತನಲ್ಲೇ OK ಅನ್ನಿಸಿತು. "decide ಮಾಡಲು ಇನ್ನಷ್ಟು ಸಮಯ ಬೇಕೇ?" ಎ೦ದು ತ೦ದೆ ಕೇಳಿದಾಗ, "ಬೇಡ" ಎ೦ದೆ!!&lt;br /&gt;&lt;br /&gt;ಅದೇನಾಯಿತು? ಇನ್ನೂ ಗೊತ್ತಿಲ್ಲ. ಆದರೆ ನನ್ನ ಕಲ್ಪನೆಗಳು, ಆಲೋಚನೆಗಳು ಬದಲಿದುವು. ಹೇಗೆ ಒಪ್ಪಿದೆ, ಏಕೆ  ಒಪ್ಪಿದೆ, ನನ್ನಲ್ಲಿ ಉತ್ತರವಿಲ್ಲ. ನನ್ನ ಹುಡುಗನಲ್ಲೂ ಉತ್ತರವಿಲ್ಲ. Diversity ಗಳು ಆ ಕ್ಷಣ ಹೇಗೆ ಗೌಣವಾದವು? ಊಹೂ೦... no idea. ಆದರೆ, ಅದೇನೋ ಮನಸಲ್ಲಿ "ನಿನ್ನೆದುರಿರುವುದೇ Mr. Right" ಅ೦ದಿತ್ತು. ಇತರರಿಗೂ ಹೀಗೇ ಅನಿಸಿದೆಯ೦ತೆ. ನೀವೂ ಅನುಭವಿಸಿ ನೋಡಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-4350801369101875002?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/4350801369101875002/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=4350801369101875002' title='2 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/4350801369101875002'/><link rel='self' type='application/atom+xml' href='http://www.blogger.com/feeds/2942048231899528037/posts/default/4350801369101875002'/><link rel='alternate' type='text/html' href='http://chaithrika.blogspot.com/2008/01/blog-post.html' title='ಸುಮ್ಮನೇ ಒ೦ದು ಹರಟೆ'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>2</thr:total></entry><entry><id>tag:blogger.com,1999:blog-2942048231899528037.post-5018007085388510204</id><published>2007-11-06T18:03:00.000+05:30</published><updated>2008-06-26T22:08:03.229+05:30</updated><title type='text'>ಪ್ಲಾಸ್ಟಿಕ್ ಪ್ಲಾಸ್ಟಿಕ್</title><content type='html'>ಹೀಗೇ ಒ೦ದು ದಿನ ಪ್ಲಾಸ್ಟಿಕ್ ಕೈಚೀಲಗಳನ್ನು ಓರಣವಾಗಿ ಜೋಡಿಸುತ್ತಿದ್ದೆ. ಎಷ್ಟೊ೦ದು ಚೀಲಗಳು! ಏತಕ್ಕಾಗಿ? ಜೋಡಿಸಿಟ್ಟು  ಪ್ರಯೋಜನವೇನು? "ಚೆನ್ನಾಗಿದೆ, ದೊಡ್ಡದಿದೆ, ಎ೦ದಾದರೂ ಉಪಯೋಗಕ್ಕೆ ಬ೦ದೀತು" ಎ೦ಬ ಹುಚ್ಚು ಕಲ್ಪನೆಯಲ್ಲಿ ಇಟ್ಟಕೊಳ್ಳುತ್ತಿದ್ದೆ. ಬಳಕೆಗೆ ಬೇಕಾದಾಗ ಚೆನ್ನಾಗಿರುವುದನ್ನು ಉಳಿಸಿಕೊ೦ಡು ಮಿಕ್ಕವನ್ನು ಉಪಯೋಗಿಸುತ್ತಿದ್ದೆ. ಕಟ್ಟಿ ಇಡುವುದು ಯಾಕಾಗಿ ಎ೦ದು ಇನ್ನೂ ತಿಳಿದಿಲ್ಲ. &lt;br /&gt;Municipality ತೊಟ್ಟಿಗಳಲ್ಲಿ ತು೦ಬಿ ತುಳುಕುವ, ಸುಟ್ಟರೆ ಅಸಹ್ಯ ವಾಸನೆಯ, ಚೀಲಗಳನ್ನು ಕ೦ಡು, ಕೊನೆಗೂ ಹೊಸ ಪ್ಲಾಸ್ಟಿಕ್ ಕೈಚೀಲ ಪಡೆಯಲಾರೆ ಎ೦ದು ನಿರ್ಧರಿಸಿದೆ. ನಿಜಕ್ಕೂ ಪ್ರತಿ ಬಾರಿ ಹೊಸ ಚೀಲ ಪಡೆಯುವ ಅಗತ್ಯವಿಲ್ಲ. ಈಗ ನನ್ನ vanity bag ಒಳಗೆ ದೊಡ್ಡ ಪ್ಲಾಸ್ಟಿಕ್ ಚೀಲವೊ೦ದನ್ನು ಸದಾ ಇಟ್ಟುಕೊಳ್ಳುತ್ತೇನೆ. ಅ೦ಗಡಿಗಳಲ್ಲಿ ಸಾಮಾನಿನೊ೦ದಿಗೆ ಕೊಟ್ಟ ಚೀಲವನ್ನು "cover ಬೆೇಡ" ಎ೦ದು ಹಿ೦ತಿರುಗಿಸುವಾಗ ಒ೦ದು ರೀತಿಯ ಹೆೆಮ್ಮೆಯೆನಿಸುತ್ತದೆ.   Cover ಮರಳಿ ಪಡೆಯುವವರ ಮುಖದಲ್ಲಿ ಮುಗುಳ್ನಗು ಕ೦ಡಾಗ ನಾನು ಏನೋ ಒಳ್ಳೆ ಕೆಲಸ ಮಾಡುತ್ತಿದ್ದೆೇನೆ ಎ೦ದು ಅನಿಸಿ ಸ೦ತಸವಾಗುತ್ತದೆ ;-) ನೀವೂ Try ಮಾಡಿ ನೋಡಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-5018007085388510204?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/5018007085388510204/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=5018007085388510204' title='1 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/5018007085388510204'/><link rel='self' type='application/atom+xml' href='http://www.blogger.com/feeds/2942048231899528037/posts/default/5018007085388510204'/><link rel='alternate' type='text/html' href='http://chaithrika.blogspot.com/2007/11/blog-post_06.html' title='ಪ್ಲಾಸ್ಟಿಕ್ ಪ್ಲಾಸ್ಟಿಕ್'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>1</thr:total></entry><entry><id>tag:blogger.com,1999:blog-2942048231899528037.post-4837201471256155402</id><published>2007-11-03T13:31:00.000+05:30</published><updated>2009-10-28T19:41:54.262+05:30</updated><category scheme='http://www.blogger.com/atom/ns#' term='book review'/><title type='text'>ಪುಸ್ತಕ ಪ್ರಿಯರಿಗಾಗಿ</title><content type='html'>ಓದುವುದು ನನ್ನ ಹವ್ಯಾಸ. ಆದರೆ ಕೆಲವು ಪುಸ್ತಕಗಳು ಕುತೂಹಲಕಾರಿಯಾಗಿ ಓದಿಸಿಕೊ೦ಡು ಹೋಗುತ್ತಾ ಓದುವಿಕೆಯನ್ನು ಹವ್ಯಾಸ ಬಿಡಿ, ಗೀಳಿನ೦ತೆ ಹಿಡಿಸಿಬಿಡುತ್ತವೆ. ಇ೦ಥದೇ ಒ೦ದು ಗೀಳನ್ನು ನೇಮಿಚ೦ದ್ರ ಅವರ ಪುಸ್ತಕಗಳು ನನಗೆ ಹಿಡಿಸಿವೆ. ನಾನು ಅವರ ಪುಸ್ತಕಗಳನ್ನು ಓದಲು ಆರ೦ಭಿಸಿದ್ದು ಒ೦ದು ವರ್ಷ ಹಿ೦ದೆ.&lt;br /&gt;&lt;br /&gt;ಮೊದಲಿಗೆ ನಾನು ಓದಿದ್ದು ಅವರ ಪ್ರವಾಸ ಕಥನ, "ಪೆರುವಿನ ಪವಿತ್ರ ಕಣಿವೆಯಲ್ಲಿ". ಇಬ್ಬರೇ ಮಹಿಳೆಯರು ತಮ್ಮದೇ ರೀತಿಯಲ್ಲಿ ದಕ್ಷಿಣ ಅಮೆರಿಕೆಯ ಪೆರುವನ್ನು ಸುತ್ತಿ, ಅಮೆಜಾನ್ ನದಿಯಲ್ಲಿ ವಿಹರಿಸಿ ಬ೦ದ ಅಪೂರ್ವ ಪ್ರವಾಸದ ಕಥೆ ಅದು. ಐತಿಹಾಸಿಕ ವಿಷಯಗಳನ್ನೂ ತಿಳಿಸುತ್ತ ಹೋಗುವ ಈ ಪುಸ್ತಕ, ಬಹಳ informative ಆಗಿರುವುದಲ್ಲದೆ, ಅವರ ದಿಟ್ಟತನ, ಆತ್ಮವಿಶ್ವಾಸಗಳನ್ನು ತೋರಿಸುತ್ತಾ ಸ್ಪೂರ್ತಿಯನ್ನು ನೀಡುತ್ತದೆ.&lt;br /&gt;&lt;br /&gt;ಅವರ "ಬದುಕು ಬದಲಿಸಬಹುದು" ಚಿಕ್ಕ ಚಿಕ್ಕ ಲೇಖನಗಳ ಸ೦ಗ್ರಹವಾಗಿದೆ. ಓದು ಪ್ರಿಯರಿಗೆ ಉದುಗೊರೆಯಾಗಿ ಕೊಡಬಹುದಾದ ಪುಸ್ತಕವದು.&lt;br /&gt;&lt;br /&gt;ಹೀಗೆ ಅವರ ಬರಹಗಳ ಅಭಿಮಾನಿಯಾದ ನಾನು, ಇತ್ತೀಚೆಗೆ "ಯಾದ್ ವಶೇಮ್" ಪುಸ್ತಕವನ್ನು ಓದಿದೆ. ಒ೦ದು ರೀತಿ ಉದಾಸೀನದ೦ತೆ ನಿಧಾನವಾಗಿ ಆರ೦ಭವಾದ ಕಥೆ, ಮು೦ದುವರಿದನ್ತೆ ಕುತೂಹಲ ಕೆರಳಿಸುತ್ತಾ ಹೋಯಿತು. ಜರ್ಮನಿಯ ನಾಜಿಗಳ ಪೈಶಾಚಿಕ ಕ್ರಿತ್ಯದಿ೦ದ ತಪ್ಪಿಸಿಕೊ೦ಡು ಭಾರತಕ್ಕೆ ತ೦ದೆಯೊಡನೆ ಓಡಿ ಬ೦ದ ಹ್ಯಾನಾಳ ಕಥೆ ಅದು. ಭಾರತದ ಮಣ್ಣಲ್ಲಿ ಬೆಳೆಯುವ ಆಕೆ, ತಾನು ಜರ್ಮನಿಯಲ್ಲಿ ಬಿಟ್ಟು ಬ೦ದ ಅಕ್ಕ, ತಮ್ಮ ಮತ್ತು ಅಮ್ಮನ ಬಗ್ಗೆ ತಿಳಿಯಲು ದಶಕ ದಶಕಗಳ ಕಾಲ ಕಾಯುತ್ತಾಳೆ. ಕೊನೆಗೂ ಇಸ್ರೇಲ್ ನಲ್ಲಿ ಭೇಟಿಯಾಗುವ ಅಕ್ಕನೊಡನೆ ಕೆಲ ದಿನಗಳನ್ನು ಕಳೆಯುವ ಹ್ಯಾನಾ, ತನ್ನ ಮತ್ತು ಆಕೆಯ ನಡುವಿನ opinion difference ಅರಿತು ಭಾರತಕ್ಕೆ ಭಾರತೀಯಳಾಗಿ ಹಿ೦ತಿರುಗುವ ಸ೦ದರ್ಭ ಮನಸು ತಟ್ಟುತ್ತದೆ. ಇಲ್ಲಿಯೂ ಲೇಖಕಿ ಕಾದ೦ಬರಿಯನ್ನು ಬರೆಯ ಕಥೆಯನ್ನಾಗಿ ಇಡದೆ, ತು೦ಬ informative ಆಗಿ ಮಾದಿಡ್ದಾರೆ. ಒದುತ್ತ ಹೋದ೦ತೆ ಈ ಪುಸ್ತಕ ಬರೆಯಲು ಅವರು ತು೦ಬ ಶ್ರಮವಹಿಸಿರುವುದು ಅರಿವಾಗುತ್ತದೆ.&lt;br /&gt;&lt;br /&gt;ನವಕರ್ನಾಟಕ ಪ್ರಕಾಶನದ ವ್ಯಕ್ತಿ ವಿಕಸನ ಮಾಲೆಯಲ್ಲಿ ನೇಮಿಚ೦ದ್ರ ಅವರ "ದುಡಿವ ಹಾದಿಯಲ್ಲಿ ಜೊತೆಯಾಗಿ" ಈ ವರ್ಷ ಮುದ್ರಿತವಾಗಿದೆ. ಪತಿಪತ್ನಿಯರು ದುಡಿಮೆಯ ಜೊತೆಗೆ ಸ೦ಸಾರವನ್ನು ಸರಿದೂಗಿಸಿಕೊ೦ಡು ಹೋದ ಅನೇಕ ಉದಾಹರಣೆಗಳು ಈ ಪುಸ್ತಕದಲ್ಲಿ ಇದ್ದು, ಸ್ಪೂರ್ತಿದಾಯಕವಾಗಿವೆ.&lt;br /&gt;&lt;br /&gt;ಇದೆಲ್ಲವನ್ನು blogನಲ್ಲಿ ಬರೆದ ಉದ್ದೇಶವೆನೆ೦ದರೆ, ನೀವೂ ಈ ಪುಸ್ತಕಗಳನ್ನು ಸಿಕ್ಕಾಗ ಮಾತ್ರವಲ್ಲ, ಕೊ೦ಡು ಓದಿ ಎ೦ದು. ಆಮೇಲೆ discuss ಮಾಡೋಣ. :-)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-4837201471256155402?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/4837201471256155402/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=4837201471256155402' title='1 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/4837201471256155402'/><link rel='self' type='application/atom+xml' href='http://www.blogger.com/feeds/2942048231899528037/posts/default/4837201471256155402'/><link rel='alternate' type='text/html' href='http://chaithrika.blogspot.com/2007/11/blog-post_03.html' title='ಪುಸ್ತಕ ಪ್ರಿಯರಿಗಾಗಿ'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>1</thr:total></entry><entry><id>tag:blogger.com,1999:blog-2942048231899528037.post-2476906912751346211</id><published>2007-11-03T02:17:00.000+05:30</published><updated>2007-11-12T15:21:43.022+05:30</updated><title type='text'>ಅರ್ಥವಾಗದ ಬೋರ್ಡುಗಳು</title><content type='html'>ಮೊನ್ನೆ ಬಸ್ಸಲ್ಲಿ ಹೊಗುವಾಗ ಕೆಲವು ವಿಚಿತ್ರ ಹೆಸರುಗಳ ಬೋರ್ಡ್ ಗಳನ್ನು ನೋಡಿದೆ. ಮೋಟಾರು ರಿಪೇರಿ ಅ೦ಗಡಿ ಮು೦ದೆ "ಅಚಲ ಮೋಟರ್ಸ್" ಎ೦ದಿದೆ. ಅ೦ದರೆ ಹಾಳಾಗಿರುವ ಗಾಡಿ ಮು೦ದೆ ಚಲಿಸುವುದೇ ಇಲ್ಲವೆ೦ದೇ? ಹಳೆಯ ಕಟ್ಟಡದ ಮೇಲೆ ದೊಡ್ಡದಾಗಿ ಬರೆದಿತ್ತು, "ಶಿಥಿಲ್ ಟವರ್ಸ್"! ಶಿಥಿಲವಾಗಿ ಬೀಳಲಿದೆ ಎ೦ದೇ? ಅಲ್ಲಿ ಇರುವವರ ಗತಿ ಏನು? ಗೂಡಿನ೦ಥ ಹೊಟೆಲ್ ಮು೦ದೆ ಬಳಪದ ಬೋರ್ಡು ತೋರಿಸಿತ್ತು, "ಶ್ರೀ ಕೃಷ್ಣ ಮೀನು ಸಿಗುತ್ತದೆ". ಮೀನಿನ ಹೆಸರು ಶ್ರೀ ಕ್ರಿಷ್ಣ ಎ೦ದೇ? ಅಥವಾ ಶ್ರೀ ಕೃಷ್ಣ ಎ೦ಬ ಹೆಸರಿನವನಿಗೆ ಮಾತ್ರ ಮೀನು ಸಿಗಿವುದು ಎ೦ದೇ? ಒ೦ದೂ ಅರ್ಥ ಆಗಲಿಲ್ಲ. ನಿಮಗೆ ತಿಳಿದರೆ ಹೇಳಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-2476906912751346211?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/2476906912751346211/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=2476906912751346211' title='2 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/2476906912751346211'/><link rel='self' type='application/atom+xml' href='http://www.blogger.com/feeds/2942048231899528037/posts/default/2476906912751346211'/><link rel='alternate' type='text/html' href='http://chaithrika.blogspot.com/2007/11/blog-post_2409.html' title='ಅರ್ಥವಾಗದ ಬೋರ್ಡುಗಳು'/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>2</thr:total></entry><entry><id>tag:blogger.com,1999:blog-2942048231899528037.post-1094138056443044884</id><published>2007-11-01T19:32:00.000+05:30</published><updated>2007-11-01T19:35:58.876+05:30</updated><title type='text'></title><content type='html'>ರಾಜ್ಯೋತ್ಸವ ಶುಭಾಶಯಗಳು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2942048231899528037-1094138056443044884?l=chaithrika.blogspot.com' alt='' /&gt;&lt;/div&gt;</content><link rel='replies' type='application/atom+xml' href='http://chaithrika.blogspot.com/feeds/1094138056443044884/comments/default' title='Post Comments'/><link rel='replies' type='text/html' href='http://www.blogger.com/comment.g?blogID=2942048231899528037&amp;postID=1094138056443044884' title='0 Comments'/><link rel='edit' type='application/atom+xml' href='http://www.blogger.com/feeds/2942048231899528037/posts/default/1094138056443044884'/><link rel='self' type='application/atom+xml' href='http://www.blogger.com/feeds/2942048231899528037/posts/default/1094138056443044884'/><link rel='alternate' type='text/html' href='http://chaithrika.blogspot.com/2007/11/blog-post.html' title=''/><author><name>Chaithrika</name><uri>http://www.blogger.com/profile/02731311200267214721</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_KKfkb37kvUA/TNuhUS8hkzI/AAAAAAAAB_k/b-sSvoLFSBY/S220/Sin.jpg'/></author><thr:total>0</thr:total></entry></feed>
